Sunday, January 9, 2011

ಟ್ರೈಕೋಡರ್ಮದಲ್ಲೊಂದು ಪ್ರಯೋಗ ನಡೆಸಿದ ಕೃಷಿಕ ಅರವಿಂದ್-ಕಡಿಮೆ ವೆಚ್ಚ ಉತ್ತಮ ಇಳುವರಿಗಾಗಿ ಎರೆಗೊಬ್ಬರ

ರಾಜ್ಯದ ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ಸಾಹಿ ಬೆಳೆಗಾರರೋರ್ವರು ತಮ್ಮ ತೋಟದಲ್ಲಿ ಒಂದು ಪ್ರಯೋಗಾಲಯವನ್ನು ಖಾಸಗಿಯಾಗಿ ಸ್ಥಾಪಿಸಿದ್ದು, ಕರ್ನಾಟಕದಲ್ಲೇ ಇದು ಪ್ರಥಮ ಖಾಸಗಿ ಪ್ರಯೋಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೃಷಿ ಪಂಡಿತ ಅರವಿಂದ್ ತಮ್ಮ ಪ್ರಯೋಗಾಲಯದಲ್ಲಿ ಜೈವಿಕ ಶಿಲೀಂಧ್ರನಾಶಕ ಟ್ರೆಕೋಡರ್ಮವನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿದ್ದಾರೆ ಹಾಗೂ ಇತ್ತೀಚೆಗೆ ದ್ರವರೂಪದ ಸಾವಯವ ಗೊಬ್ಬರವನ್ನು ತಯಾರಿಸಿ ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ.

ಸಾಮಾನ್ಯವಾಗಿ ಬೆಳೆಗಳಿಗೆ ಬರುವ ರೋಗಗಳಿಂದ ಇಳುವರಿಯ ಸುಮಾರು ಶೇ.೨೫ರಷ್ಟು ಹಾಯಾಗುತ್ತದೆ. ಇವುಗಳನ್ನು ರಾಸಾಯಕ ಕೀಟನಾಶಕಗಳಿಂದ ಯಂತ್ರಿಸಬಹುದಾದರೂ ಅವುಗಳಿಂದಾಗುವ ದುಷ್ಪರಿಣಾಮ ಅಪಾರ. ಈ ಟ್ಟಿನಲ್ಲಿ ಜೈವಿಕ ಕೀಟನಾಶಕಗಳನ್ನು ಬಳಸಿ ರೋಗಗಳನ್ನು ಹತೋಟಿ ಮಾಡಲು ಸಾಧ್ಯ ಎನ್ನುತ್ತಾರೆ ಅರವಿಂದ್.

ಭೂತನಕಾಡು ಎಸ್ಟೇಟ್‌ನ ಕೃಷಿಪಂಡಿತ್ ಪ್ರಶಸ್ತಿ ವಿಜೇತ ಬಿ.ಸಿ.ಅರವಿಂದ್ ಹೇಳುವಂತೆ, ಟ್ರೆಕೋಡರ್ಮ ಒಂದು ಶಿಲೀಂಧ್ರವಾಗಿದ್ದು ಬೆಳೆಗಳಲ್ಲಿ ಬರುವ ಸೊರಗುರೋಗ, ಕಾಂಡಕೊಳೆಯುವಿಕೆ, ಪೈರು ಕೊಳೆಯುವ ರೋಗ, ಎಲೆಚುಕ್ಕೆ ರೋಗ, ಸಸಿ ಸಾಯುವ ರೋಗ, ಒಣಗುವ ರೋಗಗಳನ್ನು ಬಹಳ ಪರಿಣಾಮಕಾರಿಯಾಗಿ ಯಂತ್ರಿಸುತ್ತದೆ. ೧೯೩೦ರಿಂದಲೂ ವಿಶ್ವಾದ್ಯಂತ ವ್ಯಾಪಕವಾಗಿ ಮಣ್ಣಿನಲ್ಲಿರುವ ರೋಗಾಣುಗಳ ರ್ಮೂಲನೆಗೆ ಬಳಸಲಾಗುತ್ತದೆ ಎನ್ನುತ್ತಾರೆ. ಅರವಿಂದ್ ಹೇಳುವಂತೆ ಮಲೆನಾಡಿನ ಬೆಳೆಗಳಾದ ಕಾಫಿ, ಮೆಣಸು, ಅಡಿಕೆ, ಬಾಳೆ, ಶುಂಠಿಗಳಿಗೆ ಬರುವ ಬೇರುರೋಗ, ಸೊರಗುರೋಗ, ಕೊಳೆರೋಗಗಳ ತಡೆಯುವಿಕೆಗೆ ಟ್ರೈಕೋಡರ್ಮ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ, ಟ್ರೆಕೋ ಡರ್ಮವನ್ನು ಬಳಸುವ ರೀತಿ ಹಾಗೂ ಅದರ ಉಪಯೋಗಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ ಎನ್ನುತ್ತಾರೆ.

ಟ್ರೆಕೋಡರ್ಮ ಶಿಲೀಂಧ್ರವು ಬೇರುಗಳ ಸಮೀಪದಲ್ಲಿ ಬೆಳೆದು, ಬೇರಿನ ಸುತ್ತಲೂ ಅತ್ಯಂತ ಪ್ರಬಲ ಕವಚವನ್ನು ರ್ಮಿಸಿ ಹಾಕಾರಕ ಶಿಲೀಂಧ್ರಗಳಿಂದ ಬೇರನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಬೆಳೆಗಳಿಗೆ ಟ್ರೆಕೋಡರ್ಮವನ್ನು ಸಿಂಪಡಿಸಿದ ಮೇಲೆ ೨೦ ದಿವಸಗಳ ಕಾಲ ರಾಸಾಯಕ ಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಬಳಕೆ ಮಾಡಬಾರದು. ಟ್ರೆಕೋಡರ್ಮದ ಜೀವಿತಾವಧಿ ೬ ತಿಂಗಳು ಮಾತ್ರ. ಬಳಿಕ ಅದರಲ್ಲಿನ ಜೀವಾಣುಗಳು ಸಾಯುತ್ತವೆ. ಅವಧಿ ಮೀರಿದ ಟ್ರೆಕೋಡರ್ಮವನ್ನು ಬಳಸಲೇಬಾರದು. ರೈತರು ಪೇಟೆಯಲ್ಲಿ ಖರೀದಿಸುವಾಗ ತಯಾರಿಸಿದ ದಿನಾಂಕವನ್ನು ತಪ್ಪದೇ ಗಮಸಬೇಕು.

ಬಳಕೆಯ ವಿಧಾನ: ಟ್ರೈಕೋಡರ್ಮವು ಬೆಳೆಗಳಿಗೆ ಬಾಧಿಸುವ ರೋಗಗಳನ್ನು ಬರದಂತೆ ತಡೆಯುತ್ತದೆಯೇ ಹೊರತು ಈಗಾಗಲೇ ಬಂದಿರುವ ರೋಗವನ್ನು ರ್ಮೂಲನೆ ಮಾಡುವುದಿಲ್ಲ. ಪ್ರತಿ ಬೆಳೆಗೆ ೫೦ ಗ್ರಾಂ ಟ್ರೆಕೋಡರ್ಮವನ್ನು ಹಾಕಿ ಅದರ ಮೇಲೆ ದನದ ಗೊಬ್ಬರ ಅಥವಾ ಬೇವಿನಪುಡಿ ಸಾವಯವ ಗೊಬ್ಬರವನ್ನು ಹಾಕಿದರೆ ಜೀವಾಣುಗಳು ಅದರ ಮೇಲೆ ಬೆಳೆಯುತ್ತದೆ. ಬೆಳೆಗಳಿಗೆ ಹಾಕುವಾಗ ತೇವಾಂಶ ಇರಬೇಕು. ಟ್ರೆಕೋಡರ್ಮವು ಕರಿಮೆಣಸಿನ ಬೆಳೆಗೆ ಹಾ ಮಾಡುವ ಸೊರಗುರೋಗಕ್ಕೆ ಬಹಳ ಪರಿಣಾಮಕಾರಕ. ವರ್ಷಕ್ಕೆ ೨ ಬಾರಿ ಅಂದರೆ ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ಟ್ರೆಕೋಡರ್ಮವನ್ನು ಬಳಸಬೇಕು. ಇದರ ಬಳಕೆಯಿಂದ ರೋಗಾಣುಗಳನ್ನು ಸಾಯಿಸಬಲ್ಲ ಪ್ರತಿರೋಗಾಣುಗಳು ಉತ್ಪತಿಯಾಗುತ್ತದೆ. ಅದು ವೃದ್ಧಿ ಹೊಂದಿ ಮಣ್ಣಿನಲ್ಲಿಯೇ ಇದ್ದು, ಬೆಳೆಗೆ ಹಾ ಮಾಡುವ ರೋಗಾಣುವನ್ನು ಸಾಯಿಸಬಲ್ಲದು.

ಇತ್ತೀಚೆಗೆ ಅಗಾಧ ಪ್ರಮಾಣದಲ್ಲಿ ಪೀಡೆನಾಶಕಗಳನ್ನು ಅನಗತ್ಯವಾಗಿ ಬಳಸಿ ಪರಿಸರ ಹಾಳಾಗುವಂತೆ ಮಾಡಲಾಗುತ್ತಿದೆ. ಇದರಿಂದಾಗಿ ಹಲವಾರು ಉಪಯೋಗಕಾರಿ ಜೀವಿಗಳು ನಶಿಸಿ ಹೋಗುತ್ತದೆ. ಆಹಾರದಲ್ಲಿ ರಸಾಯಕ ಕೀಟನಾಶಕಗಳ ಉಳಿಕೆ ಅಂಶವು ಹೆಚ್ಚಾಗುತ್ತಿದೆ. ಆದುದರಿಂದ ಜೈವಿಕ ಪೀಡೆನಾಶಕಗಳನ್ನು ಬಳಸಿ ಪರಿಸರ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯಗಳಲ್ಲೊಂದಾಗಿದೆ. ಈ ದಿಶೆಯಲ್ಲಿ ಪ್ರಯತ್ನಿಸಲಾಗಿ, ಟ್ರೆಕೋಡರ್ಮ ಒಂದು ಪರಿಸರ ಸ್ನೇಹಿ ಜೈವಿಕ ಶಿಲೀಂಧ್ರನಾಶಕವೆಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಗಾಗಿ ಬಿ.ಸಿ.ಅರವಿಂದ್‌ರನ್ನು ೯೪೪೮೩೨೦೪೭೩ರಲ್ಲಿ ಸಂಪರ್ಕಿಸಬಹುದಾಗಿದೆ.
-ಎಸ್.ಎನ್.ಮಂಜುನಾಥ್ ಭಟ್, ಮೂಡಿಗೆರೆ

ಕಡಿಮೆ ವೆಚ್ಚ ಉತ್ತಮ ಇಳುವರಿಗಾಗಿ ಎರೆಗೊಬ್ಬರ

ಅತಿಯಾದ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಉತ್ಪಾದನಾ ವೆಚ್ಚ ಅಧಿಕವಾಗಿ ಮಣ್ಣಿನ ಆರೋಗ್ಯ ಹಾಳಾಗುವುದರ ಜೊತೆಗೆ ಪರಿಸರ ಮಾಲಿನ್ಯ ಮತ್ತು ನಾವು ಸೇವಿಸುವ ಆಹಾರದಲ್ಲಿ ವಿಷ ಬೆರಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಸಾಯಕ ವಸ್ತುಗಳ ಬಳಕೆಯಿಂದ ಬರಡಾಗುತ್ತಿರುವ ಭೂಮಿಗೆ ಚೈತನ್ಯ ತುಂಬಲು ಸಾವಯವ ಕೃಷಿ ಪದ್ಧತಿ ಅನುಸರಣೆ ಅತ್ಯಗತ್ಯವಾಗಿದೆ. ಎರೆಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದರೊಂದಿಗೆ ಗುಣಮಟ್ಟದ ಆಹಾರ ಉತ್ಪಾದನೆ ಮಾಡುವ ಸುಸ್ಥಿರ ಬೇಸಾಯ ಪದ್ದತಿ ಒಂದಾಗಿದೆ.

ಎರೆಹುಳುವಿನ ಮುಖ್ಯ ಕಾರ್ಯವೆಂದರೆ ಭೂಮಿಯನ್ನು ಉಳುಮೆ ಮಾಡುವುದು ಮತ್ತು ಹಿಕ್ಕೆಗಳನ್ನು ಹಾಕುವುದಾಗಿದೆ. ಭೂಮಿಯ ಉಳುಮೆ ಸಾಮಾನ್ಯ ರೀತಿಯಲ್ಲಿ ಎರಡುವರೆ ಅಡಿಯವರೆಗೆ ಮಾಡಬಹುದಾಗಿದೆ. ಆದರೆ ಎರೆಹುಳವು ೯ ಅಡಿಗಿಂತಲೂ ಹೆಚ್ಚು ಉಳುಮೆ ಮಾಡಿ ಬೆಳೆಗೆ ಯಾವುದೇ ತೊಂದರೆ ಇಲ್ಲದಂತೆ ಮಾಡುವುದರ ಜೊತೆಗೆ ಸಾವಯವ ಪದಾರ್ಥಗಳನ್ನು ತಿನ್ನುತ್ತಾ ಸಾಗುವಾಗ ಅಲ್ಪಪ್ರಮಾಣದ ಆದ್ಯತೆ ಮತ್ತು ಯೂರಿಯಾವನ್ನು ಅದರ ಮೂತ್ರದ ಮೂಲಕ ಸೇರಿಸುತ್ತಾ ಹೋಗುವುದರಿಂದ ಬೇರುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ.

ಪ್ರತಿ ಕ್ವಿಂಟಾಲ್ ಎರೆಗೊಬ್ಬರದಲ್ಲಿ ೬೦೦-೮೦೦ಗ್ರಾಂ ಸಾರಜನಕ, ೧೦೦೦-೧೧೦೦ಗ್ರಾಂ ರಂಜಕ ಮತ್ತು ೪೦೦-೫೦೦ಗ್ರಾಂ ಪೊಟಾಷ್ ಹೊಂದಿದ್ದು, ಕೊಟ್ಟಿಗೆ ಗೊಬ್ಬರಕ್ಕಿಂತ ೨ ಪಟ್ಟು ಸಾರಜನಕ, ೫ಪಟ್ಟು ರಂಜಕ ಮತ್ತು ಪೊಟಾಷ್ ಹೊಂದಿರುವುದರ ಜೊತೆಗೆ ಕ್ಯಾಲ್ಸಿಯಂ, ಬೋರಾನ್ ಸತು, ಕಬ್ಬಿಣ ಇತರೆ ಲಘು ಪೋಷಕಾಂಶಗಳನ್ನು ಹೊಂದಿರುತ್ತದೆ.

ಎರೆಗೊಬ್ಬರ ತಯಾರಿಕೆ: ಎರೆಗೊಬ್ಬರ ತಯಾರಿಕಾ ಮಡಿಯನ್ನು niರು niಲ್ಲದ ಎತ್ತರದ ಸ್ಥಳದಲ್ಲಿ ಮಾಡಬೇಕಾಗಿದ್ದು, ೭ರಿಂದ ೧೦ ಮೀಟರ್ ಉದ್ದ ೧ಮೀಟರ್ ಅಗಲ ಮತ್ತು ೦.೩ಮೀ ಆಳದ ಮಡಿಯು ಸೂಕ್ತವಾಗಿದೆ. ಇದರಲ್ಲಿ ಗೆದ್ದಲು, ಇರುವೆಗಳು ಕಂಡುಬರಬಾರದಾಗಿದ್ದು, ಕೆಲವೊಮ್ಮೆ ಕಂಡುಬಂದರೆ ಕ್ಲೋರೋಪೈರಿಫಾಸ್ ೨೦ಇಸಿ ಕೀಟನಾಶಕವನ್ನು, ಪ್ರತಿ ಲೀಟರ್ niರಿಗೆ ೨ ಲೀಟರ್ ಬೆರೆಸಿ ಮಡಿ ಪೂರ್ತಿ ನೆನೆಯುವ ಹಾಗೆ ಸಿಂಪಡಿಸಿ ಎಂಟು ಹತ್ತು ದಿನಗಳ ನಂತರ ಕೃಷಿ ತ್ಯಾಜ್ಯ ವಸ್ತುಗಳಾದ ತೆಂಗಿನ ಸಿಪ್ಪೆ/ರು ಹಿಡಿಯುವ ತ್ಯಾಜ್ಯ, ಸೆಗಣಿ/ತಿಪ್ಪೆಗೊಬ್ಬರ, ಕೃಷಿ ತ್ಯಾಜ್ಯ ವಸ್ತುಗಳು, ಎರೆಮಣ್ಣು/ತೋಟದ ಮಣ್ಣು, ಸೆಗಣಿ/ತಿಪ್ಪೆಗೊಬ್ಬರ, ಕಳೆ/ಹಸಿರೆಲೆ/ಹುಲ್ಲು, ಸೆಗಣಿಗೊಬ್ಬರ, ಎರೆಮಣ್ಣು/ತೋಟದ ಮಣ್ಣು ಹಾಗೂ ಒಣಗಿದ ಹುಲ್ಲುಗಳ ವಿವಿಧ ಪದರಗಳ ಈ ಕ್ರಮವಾಗಿ ಕೃಷಿ ತ್ಯಾಜ್ಯ ವಸ್ತುಗಳನ್ನು ೧೫ರಿಂದ ೨೦ಸೆಂ.ಮೀ, ಎರೆಮಣ್ಣನ್ನು ೧ಸೆಂ.ಮೀ ಹಾಗೂ ಸೆಗಣಿ ಗೊಬ್ಬರವನ್ನು ೫ರಿಂದ ೧೦ಸೆಂ.ಮೀ. ದಪ್ಪ ಹಾಕಬೇಕು.

ನಂತರ ೧೦ರಿಂದ ೧೫ದಿನಗಳವರೆಗೆ ಪ್ರತಿದಿನ ಮಡಿಯಲ್ಲಿ ಸಾಕಷ್ಟು ಹಸಿರು ಇರುವಂತೆ ರು ಹಾಕುವುದರಿಂದ ಮಡಿಯಲ್ಲಿ ತುಂಬಿರುವ ಪದಾರ್ಥಗಳು ಕಳೆಯುವುದು. ಈ ರೀತಿ ಕಳೆಯುವುದು ಖಾತರಿಪಡಿಸಿಕೊಂಡ ನಂತರ ೧,೦೦೦ ಎರೆಹುಳುಗಳನ್ನು ಮಡಿಯಲ್ಲಿ ೧೦ಸೆಂ.ಮೀ ಆಳದಲ್ಲಿ ಬಿಡುವುದರೊಂದಿಗೆ ಕೊನೆಯ ಪದರವಾಗಿ ಹುಲ್ಲನ್ನು ೧೦ಸೆಂ.ಮೀ. ದಪ್ಪ ಹರಡಬೇಕು. ಗೊಬ್ಬರ ತಯಾರು ಆಗುವವರೆಗೆ ಮಡಿಯಲ್ಲಿ ಶೇ.೬೦-೭೦ರಷ್ಟು ತೇವಾಂಶ ಇರುವ ಹಾಗೆ ರು ಹಾಕಿ ಎಚ್ಚರ ವಹಿಸಬೇಕು. ಎರೆಹುಳು ಬಿಟ್ಟು ಸುಮಾರು ೪೫ ದಿನಗಳ ನಂತರ ಮಡಿಯ ಮೇಲ್ಪದರದಲ್ಲಿ ಹಿಕ್ಕೆಗಳನ್ನು ಹಾಕಲು ಪ್ರಾರಂಭವಾಗುವುದು ಹಾಗೂ ೭೫-೯೦ ದಿವಸಗಳ ನಂತರ ಶೇ.೮೦ರಷ್ಟು ಕಚ್ಚಾ ಪದಾರ್ಥ ಹಿಕ್ಕೆಯಾಗಿ ಮಾರ್ಪಾಡು ಆಗುವುದೇ ಎರೆಗೊಬ್ಬರ.

ಈ ರೀತಿ ಸಂಗ್ರವಾದಂತಹ ಎರೆಹುಳು ಗೊಬ್ಬರವನ್ನು ಮಡಿಯಿಂದ ತೆಗೆಯುವ ಮುನ್ನ ಒಂದು ವಾರ niರು ಹಾಕುವುದನ್ನು niಲ್ಲಿಸುವುದರಿಂದ ಮಡಿಯ ಮೇಲ್ಪದರಿನಲ್ಲಿ ತೇವಾಂಶ ಕಡಿಮೆಯಾಗಿ ಎರೆಹುಳುಗಳು ತಳಕ್ಕೆ ಹೋಗುತ್ತವೆ. ಸಂಗ್ರಹಿಸಿದ ಗೊಬ್ಬರವನ್ನು ನೆರಳಿನಲ್ಲಿ ಒಣಗಿಸಿ ಸಾಣೆ ಹಿಡಿದು ಚೀಲಗಳಲ್ಲಿ ತುಂಬಿಸಿಡಬೇಕು.

ಒಂದು ಗುಂಟೆ ವಿಸ್ತೀರ್ಣದ ಮಡಿಗಳಿಂದ ೩ ತಿಂಗಳಲ್ಲಿ ಸುಮಾರು ೩.೫ಟನ್ ಎರೆಹುಳು ಗೊಬ್ಬರವನ್ನು ಉತ್ಪಾದಿಸಬಹುದು. ಅಂದರೆ ೧ವರ್ಷದಲ್ಲಿ ೧ಗುಂಟೆಗೆ ೧೨-೨೦ಟನ್ ಗಳಷ್ಟು ಎರೆಹುಳು ಗೊಬ್ಬರವನ್ನು ಉತ್ಪಾದಿಸಬಹುದಾಗಿದೆ. ಒಂದು ಸಾವಿರ ಹುಳುಗಳು ಪ್ರತಿದಿನಕ್ಕೆ ೫ಕೆ.ಜಿಯಷ್ಟು ಎರೆಗೊಬ್ಬರವನ್ನು ತಯಾರಿಸುತ್ತದೆ. ಎರೆಹುಳು ಕೃಷಿ ಮಾಡುವಾಗ ಮಡಿಯಲ್ಲಿ ಹುಳ, ಗೆದ್ದಲು, ಕೆಂಚಿಗೆ ಇರುವೆ, ಚಪ್ಪಟೆ ಹುಳು, ಇಲಿ, ಶತಪದಿ, ಕಪ್ಪೆ, ಹಂದಿ, ಪಕ್ಷಿಗಳು ಇತ್ಯಾದಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಇವುಗಳನ್ನು ಕಡಿಮೆ ಮಾಡಲು ಬೇವಿನಹಿಂಡಿ, ಬೇವಿನ ಎಲೆ ಪುಡಿ, ಖಜೆ ಬೇರಿನ ಪುಡಿ, ಚಮರಂಗ ಪುಡಿ ಹಾಗೂ ಅರಿಶಿಣ ಪುಡಿಯು ಬಳಕೆ ಮಾಡಬಹುದಾಗಿದೆ. ಎರೆಗೊಬ್ಬರವನ್ನು ಬೆಳೆಗಳಿಗೆ ಸುಮಾರು ೧ಟನ್ ಪ್ರತಿ ಎಕರೆಗೆ ಬಳಸುವುದರೊಂದಿಗೆ ಒಳ್ಳೆಯ ಗುಣಮಟ್ಟದ ಮತ್ತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.
-ಮಂಜುನಾಥ.ಬಿ, ವಾರ್ತಾ ಸಹಾಯಕರು