Tuesday, December 8, 2009

ಒಲವಿನ ಮಾಲೆಗೆ ನನ್ನೆರಡು ಮಲ್ಲಿಗೆ

ರಾಜೀವ ನಾರಾಯಣ ನಾಯಕ

ಇದನ್ನೆಲ್ಲ ಎಲ್ಲಿಂದ ನೆನೆಯಲಿ? ಮನೆ ಮುಂದಿನ ಗುಲ್ ಮೊಹರ್ ವರ್ಷದಿಂದ ಹೃದಯದಲ್ಲಿಟ್ಟು ಕೊಂಡಿದ್ದ ಹೂವನ್ನು ನೀಲಾಕಾಶದತ್ತ ಚಿಮ್ಮಿಸ ತೊಡಗಿದ್ದೆ ಪ್ರಾರಂಭವಿರಬಹುದೇ? ಅಥವಾ ಹಳದಿ ಬಣ್ಣದ ಕೊರಳ ಸುತ್ತ ಕಂದು ಪಟ್ಟಿಯ ಪುಟ್ಟ ಹಕ್ಕಿ ಗುಲ್‌ಮೊಹರ್‌ನಿಂದ ಬಿಟ್ಟ ಬಾಣದಂತೆ ಪಕ್ಕದ ಹೂದೋಟಕ್ಕೆ ಹಾರದಿದ್ದರೆ ಅಲ್ಲಿ ಗುಲಾಬಿ ಗಿಡಗಳಿಗೆಲ್ಲ ನೀರುಣಿಸುತ್ತ ನಿಂತಿರುತ್ತಿದ್ದ ನಿನ್ನನ್ನು ದಿನಾ ಗಮನಿಸುವ ಪ್ರಸಂಗ ಬರುತ್ತಿತ್ತೆ? ಯಾವು ದೋ ಧ್ಯಾನದಲ್ಲಿದ್ದಂತೆ ಕಾಣುತ್ತಿದ್ದ, ಸದಾ ಏನಾ ದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದ ನೀನೂ ಹೆತ್ತವರಿಂದ ನೂರಾರು ಮೈಲಿ ದೂರದಲ್ಲಿದ್ದ ನನ್ನ ಒಬ್ಬಂಟಿತನದ ಮನಕ್ಕೆ ತುಸು ಮುದ ನೀಡುತ್ತಿದ್ದ ಗುಲ್ ಮೊಹರ್ ಮತ್ತು ಬಣ್ಣದ ಹಕ್ಕಿಯ ಜತೆ ಸೇರಿಬಿಟ್ಟೆ ಸ್ವಾತಿ.

ಗುಲ್‌ಮೊಹರೊ ಗುಬ್ಬಚ್ಚಿಯೊ ಆ ಕ್ಷಣವನ್ನು ಮಾತ್ರ ಹೇಗೆ ಮರೆಯಲು ಸಾಧ್ಯ? ಬೆಳಗ್ಗೆ ಸ್ನಾನ ಮುಗಿಸಿ ತಲೆ ಒರೆಸುತ್ತ ಬಾಗಿಲಿಗೆ ಬಂದರೆ ಸೂರ್ಯನ ಎಳೆಯ ಕಿರಣಗಳು ಎಲ್ಲೆಡೆ ಬೀರಿವೆ. ಮುಂಜಾನೆಯ ಮಂಜಿನ್ನೂ ಪೂರ್ತಿ ಕರಗಿಲ್ಲ. ಪಕ್ಕದ ಮನೆಯಿಂದ ನಿತ್ಯದಂತೆ ಮಂತ್ರ ಪಠನ ಕೇಳಿಸುತ್ತಿದೆ. ಆಗಷ್ಟೇ ಮಿಂದು ಬಂದಂತಿದ್ದ ನೀನು ಹೂಗಿಡಗಳಿ ಗೆಲ್ಲ ನೀರೆರೆಯುತ್ತಿದ್ದೆ. ಭುಜದ ತುಂಬ ಹರಡಿ ಕೊಂಡ ದಟ್ಟನೆಯ ಕಪ್ಪು ಕೂದಲು. ಹೊಂಬಣ್ಣದ ಸೂರ್ಯ ಕಿರಣಗಳಲ್ಲಿ ಇಡೀ ದೃಶ್ಯವೇ ಮನೋಹರವಾಗಿದೆ. ಅಪರೂಪಕ್ಕೆ ಈ ಕಡೆ ಹಾದು ಬಂದ ಆ ನೋಟ ನನ್ನೆದೆಯಲ್ಲಿ ಮಿಂಚು ಮೂಡಿ ಸಿತು. ಮುಗುಳುನಗೆ ತುಂಬಿದ ಮೊಗ. ನೀನು ನನ್ನೊಡನೆಯೆ ನಕ್ಕಿದ್ದು? ನಾನು ಕನಸು ಕಾಣುತ್ತಿ ರುವೆನೆ? ಎಂಥ ಮೋಹಕ ನಗು ಅದು! ಆ ಮುಗುಳ್ನಗುವೇ ಇಳಿಯಿತೆ ನನ್ನಲಿ ಬೀಜವಾಗಿ?
ಆ ದಿನವಿಡೀ ಮುಗುಳ್ನಗುವಿನದೇ ಮೆಲುಕು. ವಿಚಿತ್ರ ಖುಷಿಯಲ್ಲಿದ್ದ ನನಗೆ ಅದನ್ನು ನಾನು ಕೆಲಸ ಮಾಡುತ್ತಿದ್ದ ಲ್ಯಾಬ್‌ನಲ್ಲಿ ಇತರರಿಗೆ ತಿಳಿಯದಂತೆ ನಿಯಂತ್ರಿಸಬೇಕಾದರೆ ಬಹಳ ಶ್ರಮ ಪಡಬೇಕಾ ಯಿತು. ಅಂತೂ ಕೊಂಚ ತಡವಾಗಿಯೇ ಏಳುತ್ತಿದ್ದ ನನಗೆ ನಸುಕಿನಲ್ಲಿಯೇ ನೆನಪಾಗತೊಡಗಿತು. ನಾನೂ ಮನೆ ಮುಂದೆ ಪುಟ್ಟ ತೋಟ ಬೆಳೆಸುವ ಬಗ್ಗೆ ಯೋಚಿಸಿದೆ. ಎಲ್ಲಿಂದಲೋ ಕೆತ್ತನೆಯಿದ್ದ ಕುಂಡವನ್ನು ತಂದು ಅದರಲ್ಲಿ ಮಣ್ಣು ತುಂಬಿ ಗುಲಾಬಿ ಕುಡಿಯೊಂದನ್ನು ಊರಿ ಮನೆ ಮುಂದೆ ಇಟ್ಟೆ. ದಿನಾ ನೀರುಣಿಸುತ್ತ ಅದು ಚಿಗುರೊಡೆವ ಪರಿಗೆ ಪುಳಕಗೊಳ್ಳ ತೊಡಗಿದೆ. ಹೀಗೆ ಅದೆಷ್ಟೋ ದಿನಗಳು.

ಅಂದು ಯಾವುದೋ ಹಬ್ಬವಾದ್ದರಿಂದ ನಮಗೆ ರಜೆ ಇತ್ತು. ನೀನು ಸಂಭ್ರಮದಿಂದ ಇದ್ದೆ. ಕಡು ನೀಲಿ ಬಣ್ಣದ ಡ್ರೆಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದೆ. ಹಾಗೆಂದು ನಿನಗೆ ಕೈ ಮಾಡಿದೆ. ಖುಷಿಯಾಗಿ ನಕ್ಕೆ ನೀನು. ನಾನು ಬೆರಳುಗಳನ್ನು ಹೆಣೆದು ಕಿಂಡಿ ಮಾಡಿ ಕಣ್ಣ ಹತ್ತಿರ ಇಟ್ಟು ಫೋಟೊ ತೆಗೆಯುವವನಂತೆ ನಟಿಸಿದೆ. ನೀನು ನಡೆದಾಡುತ್ತಿದ್ದೆಯೋ ನೃತ್ಯವಾ ಡುತ್ತಿದ್ದೆಯೋ ನನಗೆ ತಿಳಿಯದಾಯಿತು. ನಿನ್ನನ್ನು ನೋಡುತ್ತಿರುವುದೇ ನನಗೆ ಹಬ್ಬವಾಯಿತು.

ಹಬ್ಬದ ನಿಮಿತ್ತ ಬಂದ ನಿನ್ನ ಅಕ್ಕನ ಮಗನನ್ನು ತೋರಿಸಿ ಅವನ ಕೈಯಲ್ಲಿ ಏನೋ ಕೊಡುತ್ತ ಅದನ್ನು ನಾನು ದರ್ಗಾದ ಹಿಂದೆ ಹೋಗಿ ಪಡೆಯಬೇಕೆಂದು ನೀನು ಸನ್ನೆ ಮಾಡಿದೆ. ನಾವಿಷ್ಟರಲ್ಲೇ ಸನ್ನೆಗಳ ಮೂಲಕ ಸಂಭಾಷಿಸುವುದನ್ನು ಕಲಿತಿದ್ದೆವು. ಮನೆಯವರ, ಅಕ್ಕಪಕ್ಕದವರ ಕಣ್ತಪ್ಪಿಸಿ ಹೀಗೆ ಮಾಡುವುದರಲ್ಲಿ ನೀನು ತುಂಬಾ ಜಾಣೆ ಸ್ವಾತಿ.

ಹುಡುಗ ನನಗಾಗಿ ದರ್ಗಾದ ಹಿಂದೆ ಕಾದಿದ್ದ. ನನ್ನ ಕೈಯಲ್ಲಿ ಪುಟ್ಟ ಪೊಟ್ಟಣವೊಂದನ್ನು ಇಟ್ಟು ಓಡಿ ಹೋದ. ನೋಡಿದರೆ ಏನೋ ಸಿಹಿ ತಿಂಡಿ, ಜತೆಯಲ್ಲಿ ಒಂದು ಪತ್ರ! ನನಗೊ ರೋಮಾಂಚನ. ನನ್ನ ಜೀವಮಾನದಲ್ಲೇ ಪಡೆದ ಇಂಥ ಪ್ರಥಮ ಪತ್ರ! ಕೈ ಬರಹ ಅಷ್ಟೇನೋ ಚೆನ್ನಾಗಿರಲಿಲ್ಲ. ನಿನ್ನ ಅಂಕುಡೊಂಕು ಅಕ್ಷರಗಳೆ ನನ್ನ ಹೃದಯದ ತಂತಿ ಮೀಟಿ ಸಂUತ ನುಡಿಸತೊಡಗಿದವು. ಓದಿದೆ. ಪುನಃ ಪುನಃ ಓದಿದೆ. ನನ್ನೆದೆಯ ಭಾವನೆಗಳಿಗೂ ಶಬ್ದ ರೂಪು ಕೊಡಲು ಅನುವಾದೆ. ಪ್ರೇಮದ ದಾರಿಗೆ ಎಷ್ಟೊಂದು ಮೆಟ್ಟಿಲುಗಳು!
ಮತ್ತೆ ನಿನ್ನ ಅಕ್ಕನ ಮಗ, ಅವನ ಹೆಸರು ಸಮರ್ಥ ಅಂತೆ, ಭೆಟ್ಟಿಯಾದ. ಈ ಸಲ ಅವನನ್ನು ತುಸು ದೂರ ಕರೆದೊಯ್ದು ಐಸ್‌ಕ್ರೀಮ್ ಕೊಡಿಸಿದೆ. ನಿನ್ನ ಬಗ್ಗೆ ಕೇಳಿದೆ. ಸ್ವಾತಿ ಯಾವಾಗಲೂ ನನ್ನನ್ನೇ ನೆನೆಯುತ್ತಾಳೆಂದು ಹೇಳಿದ. ‘ಎಷ್ಟು ಚೆನ್ನಾಗಿದ್ದಾನಲ್ಲ’ ಎಂದು ನನ್ನನ್ನು ತೋರಿಸಿ ಕೇಳುತ್ತೀಯಂತೆ. ನನ್ನ ರೂಪಿನ ಬಗ್ಗೆ ಕಂಡಾಪಟ್ಟೆ ಕೀಳರಿಮೆ ಇದ್ದ ನನಗೆ ನೀನು ಹೀಗನ್ನುವುದು ಕೇಳಿ ಖುಷಿಯೋ ಸಂಶಯವೋ ತಿಳಿಯದ ಭಾವನೆಗಳು. ಆ ದಿನವಿಡೀ ಕನ್ನಡಿಯೆದುರು ನಾನು ಚೆಲುವನೆಂದು ನಂಬಿಸಿಕೊಳ್ಳಲು ಪ್ರಯತ್ನಿಸಿದ್ದೇ ಪ್ರಯತ್ನಿಸಿದ್ದು!

ನಿನ್ನನ್ನು ಹತ್ತಿರದಿಂದ ಕಾಣಬೇಕು, ನಿನ್ನೊಡನೆ ಮನಬಿಚ್ಚಿ ಮಾತಾಡಬೇಕು ಎಂದು ಎಷ್ಟೋ ದಿನಗಳಿಂದ ಕಾತರಿಸುತ್ತಿದ್ದೆ. ಆ ದಿನವೂ ಬಂತು. ದರ್ಗಾದ ಹಿಂದಿನ ಗುಡ್ಡದ ಮರುಕಲಲ್ಲಿ ಜನ ರ‍್ಯಾರೂ ಅಷ್ಟಾಗಿ ಇರುತ್ತಿರಲಿಲ್ಲ. ನಿನ್ನನ್ನು ಅಲ್ಲಿಗೆ ಬರಲು ಒಪ್ಪಿಸಿದೆ. ನಾನೂ ಲ್ಯಾಬ್‌ನಲ್ಲಿ ಏನೋ ಹೇಳಿ ರಜೆ ಪಡೆದೆ. ಕಾಲುದಾರಿಗುಂಟ ನಡೆಯುತ್ತ ಗುಡ್ಡದ ತುದಿ ತಲುಪಿದೆ. ಇನ್ನೊಂದು ಮರುಕಲಲ್ಲಿ ಸಮುದ್ರದ ಮೊರೆತ. ಮೋಡವಿಲ್ಲದ ನೀಲಾಕಾಶ. ನನಗೆ ಸಂಕೋಚ, ಭಯ, ಉನ್ಮಾದ ಎಲ್ಲ ಕಲಸಿ ಕೊಂಡ ಸ್ಥಿತಿ. ಎದೆ ಜೋರಾಗಿ ಬಡಿದುಕೊಳ್ಳುತ್ತಿದೆ. ಇಡೀ ದೇಹವೇ ಜ್ವರ ಬಂದಂತಾಗಿತ್ತು. ಬಹುಶಃ ನಿನ್ನ ಸ್ಥಿತಿಯೂ ಹೀಗೆ ಆಗಿರಬೇಕು. ನಿನ್ನ ಹಣೆಯ ಮೇಲೆಲ್ಲ ಬೆವರ ಹನಿಗಳ ಸಾಲು. ನಿನ್ನನ್ನು ಅಷ್ಟು ಹತ್ತಿರದಿಂದ ಕಂಡದ್ದು ಅದೇ ಮೊದಲ ಸಲ. ಸುಂದರ ತುಟಿಗಳು. ಹೊಳಪಿನ ಕಣ್ಣುಗಳು. ಮಾತು ಯಾರು ಹೇಗೆ ಪ್ರಾರಂಭಿಸಬೇಕೆಂದು ತಿಳಿಯದಾ ಯಿತು. ನಾನು ಏನೋ ಕೇಳಿದೆ. ನೀನು ಏನೋ ಅಂದೆ. ಪ್ರಯತ್ನಿಸಿ ಪ್ರಯತ್ನಿಸಿ ನಿನ್ನ ಕೋಮಲ ಬೆರಳುಗಳನ್ನು ನನ್ನವುಗಳಲ್ಲಿ ಹೆಣೆದುಕೊಂಡೆ. ಇಳಿ ಬಿಸಿಲ ಕಿರಣಗಳಲ್ಲಿ ನೀನು ಮಂದವಾಗಿ ಉರಿ ಯುವ ದೀಪದಂತೆ ಕಾಣುತ್ತಿದ್ದೆ. ಬಹುಶ ನಿನ್ನನ್ನು ಕಣ್ಣಲ್ಲೇ ಕುಡಿಯುವವನಂತೆ ನೋಡುತ್ತಿದ್ದೆ. ನೀನು ನನ್ನಿಂದ ಬಿಡಿಸಿಕೊಂಡು ‘ಹೊತ್ತಾಯ್ತು’ ಎಂದು ಎದ್ದು ನಿಂತೆ. ‘ಇಲ್ಲ, ಇರು’ ಎಂದರೂ ನೀನು ಓಡಿಯೇ ಬಿಟ್ಟೆ, ನನ್ನಲ್ಲಿ ಬೆಂಕಿಯನ್ನು ಹೊತ್ತಿಸಿ. ತಿರುವಲ್ಲಿ ನಿಂತು ಕೈ ಬೀಸಿ ಮಾಯವಾದೆ. ನಾನೋ ಕಾಲೆಳೆಯುತ್ತ ಇಳಿದು ಬಂದೆ.

ಇಂಥ ಸ್ನೇಹಕ್ಕಾಗಿ ಎಷ್ಟು ವರ್ಷಗಳಿಂದ ಕಾದಿದ್ದೆ! ಹೃದಯದಲ್ಲಿ ಮಡುಗಟ್ಟಿದ ಹರೆಯದ ಭಾವನೆಗಳು ಹರಿವ ದಿಕ್ಕು ಕಾಣದೆ ಏನೋ ಕಾತರ. ಏನೋ ಕಳಚಿಕೊಂಡಂತೆ. ಕಾಲೇಜಿನಲ್ಲಿ ಕೋಗಿಲೆ ಕಂಠದ ಲಾಲಿತ್ಯಳನ್ನು ಮನದಲ್ಲಿ ಆರಾಧಿಸುತ್ತ ಅವಳ ಅಗಲ ಕಣ್ಣುಗಳಲ್ಲಿ ಪ್ರೀತಿಯನ್ನರಸುತ್ತ ಸವೆದ ದಿನಗಳು. ಮನದಾಸೆಯನ್ನು ಮಾತಾಗಿಸಬೇಕೆಂದರೆ ಎದುರು ಬಂದಾಗ ಗಂಟಲ ಪಸೆಯೇ ಆರಿ ಹೋದಂತೆ ಕೈ ಕಾಲುಗಳಲ್ಲಿ ನಡುಕ ಶುರವಾದಂತೆ ಇತ್ಯಾದಿ.ಆದರೆ ಲಾಲಿತ್ಯಳಾಗಲಿ, ಮೋಹಕ ಕೆನ್ನೆಗಳ ಸಿಂಚನಳಾಗಲಿ ಅಥವಾ ಮಾದಕ ನಗುವಿನ ಸುಮನಳಾಗಲಿ ಯಾರೂ ನಿನ್ನಷ್ಟು ಆಳಕ್ಕೆ ನನ್ನೊಳಗೆ ಇಳಿಯಲಿಲ್ಲ ಅನಿಸುತ್ತದೆ. ಸ್ವಾತಿಯಲ್ಲಿ ನನಗೆ ಪ್ರೇಮವೇ? ಅವಳೊಡನೆ ಏನೀ ಅನು ಬಂಧ? ಅಥವಾ ಇವೆಲ್ಲ ಹುಚ್ಚು ಭಾವನೆಗಳೇ? ಛೇ ಇವೆಲ್ಲ ತಾಪತ್ರಯ ಬೇಡ. ಮನೆಯಿಂದ ನೂರಾರು ಮೈಲಿ ದೂರದಲ್ಲಿದ್ದೇನೆ. ಏನಾದರೂ ಹೆಚ್ಚು ಕಮ್ಮಿ ಆದರೆ ಕೇಳುವವರಿಲ್ಲ. ಸ್ವಾತಿಯ ಅಪ್ಪ ಬೇರೆ ಕಠೋರವಾಗಿ ಕಾಣುತ್ತಿದ್ದಾನೆ. ಅವನಿಗೇನಾ ದರೂ ಹೀಗೆ ಎಂದು ಗೊತ್ತಾದರೆ ಕಥೆ ಮುಗಿದಂತೆಯೇ. ಇನ್ನು ಇದೆಲ್ಲ ಸಾಕು. ಆ ಕಡೆ ಮತ್ತೆ ನೋಡಲೇಬಾರದು. ಸ್ವಾತಿಗೂ ಹೇಳಿಬಿಡುತ್ತೇನೆ ಎಂದು ಎಷ್ಟು ಸಲ ನಿರ್ಧಾರ ಕೈಗೊಂಡೆನೋ. ಅದೆಲ್ಲ ನಿನ್ನನ್ನು ಕಂಡ ಗಳಿಗೆಯಲ್ಲಿ ಎಲ್ಲೋ ತೂರಿ ಹೋಗು ತ್ತಿದ್ದವು. ಮತ್ತೆ ಯಥಾಪ್ರಕಾರ ಮನಸ್ಸು ಅತ್ತ ಒಲಿಯುತ್ತಿತ್ತು.

ರಸ್ತೆ ತಿರುವಲ್ಲಿ ಮನೆಯಿಂದ ನನ್ನದೇ ವಯಸ್ಸಿನ ವಿಕಾಸ್ ಆಗಾಗ ನನ್ನಲ್ಲಿಗೆ ಬರು ತ್ತಿದ್ದ. ಮಂಗಳೂರ ಕಡೆಯ ಅವರ ಕುಟುಂಬ ಸಾಕಷ್ಟು ವರ್ಷದಿಂದಲೇ ಅಲ್ಲಿ ತೆಂದು ಕಾಣುತ್ತದೆ. ಸುತ್ತಮುತ್ತಲಿನವರೆಲ್ಲ ಬಹಳ ಪರಿಚಯ. ನಿನ್ನೊಡನೆ ವಿಕಾಸ್ ಒಂದೆರಡು ಬಾರಿ ಮಾತಾಡುತ್ತಿದ್ದುದನ್ನು ಎಂದೋ ನೋಡಿದ್ದೆ. ನನ್ನ ಪರಿಚಯವಾ ದೊಡನೆ ಸಮಯ ಕಳೆಯಲು ಬರುತ್ತಿದ್ದ. ಬಂದಾಗಲೆಲ್ಲ ಗೋಡೆಗೆ ತೂಗು ಹಾಕಿರು ತ್ತಿದ್ದ ಗಿಟಾರ್ ಎತ್ತಿಕೊಂಡು ಸಂUತ ನುಡಿಸುವವನಂತೆ ಫೋಸ್ ಕೊಡುತ್ತ ಆಗಾಗ ನಿಮ್ಮ ಮನೆಯತ್ತ ಕಣ್ಣು ಹಾಯಿಸುತ್ತ ಹೀರೋ ಆಗಲು ಪ್ರಯತ್ನಿಸುತ್ತಿದ್ದುದು ನನಗೆ ಕೋಪವನ್ನು ತರಿಸುತ್ತಿತ್ತು. ಸೌಜನ್ಯಕ್ಕಾಗಿ ಅದನ್ನು ಸಹಿಸಿದ್ದೆ.

ಒಮ್ಮೆ ಈತ ಇದ್ದಾಗ ನೀನು ಕಿಟಕಿಯಲ್ಲಿ ಮಿಂಚಿ ಮಾಯವಾದೆ. ನಿನ್ನನ್ನು ತೋರಿಸುತ್ತ ಆತ ‘ಅವ ಳುಂಟಲ್ಲ, ನನ್ನ ಕಂಡ್ರೆ ಪ್ರಾಣ ಬಿಡ್ತಾಳೆ’ ಎಂದ. ನನಗೆ ಶಾಕ್ ಆಯಿತು. ಸುಧಾರಿಸಿಕೊಳ್ಳುತ್ತಿರು ವಾಗಲೇ ‘ಅವಳಪ್ಪ ಉಂಟಲ್ಲ. ಅದೊಂದು ಮಾರಾಯ ಮಂಡೆಬಿಸಿ. ಅದು ಇಲ್ಲಾಂದ್ರೆ ಇಷ್ಟೊತ್ತಿಗೆ..’ ಎಂದು ಕಣ್ಣು ಪಡಚಿದ. ನಾನು ಬೆವರತೊಡಗಿದ್ದೆ. ಬಾಯಿ ಒಣಗಿಹೋಗಿತ್ತು. ನೀನು ಅವನೊಡನೆ ಮಾತಾಡುತ್ತ ನಿಂತಿದ್ದ ದೃಶ್ಯಗಳು ನೆನಪಾಗಿ ಅಲ್ಲಿ ಹೊಸ ಅರ್ಥಗಳೇ ಕಾಣತೊಡಗಿದವು. ಹಾಗಾದರೆ ನಾನು ಸ್ವಾತಿಯ ಬಗ್ಗೆ ಕನಸಿದ್ದು ಮೂರ್ಖತನವೇ? ಸ್ವಾತಿ ಎಂಥ ಹೆಣ್ಣು? ನನ್ನನ್ನು ಗಾಳಕ್ಕೆ ಸಿಲುಕಿಸಿ ಆಟ ಆಡುತ್ತಿರು ವಳೆ? ಹೃದಯ ಯಾರಿಗೊ ಕೊಟ್ಟು ನನ್ನಲಿ ನಾಟ ಕವೆ? ಥತ್! ಈ ಹುಡುಗಿಯರನ್ನೇ ನಂಬಬಾರದು. ಮತ್ತೆ ನಿನ್ನತ್ತ ನೋಡಿದರೆ ಹೇಳು ಸ್ವಾತಿ!
‘ಯಾಕೆ, ಮೈಯಲ್ಲಿ ಸೌಖ್ಯವಿಲ್ಲವೆ?’ ಎಂದು ವಿಕಾಸ್ ಕೇಳಿದ. ‘ಹಾಗೇನಿಲ್ಲ, ಸ್ವಲ್ಪ ತಲೆನೋವು’ ಎಂದು ನಗಲು ಪ್ರಯತ್ನಿಸಿದೆ. ನಗಲಾಗಲಿಲ್ಲ. ನನ್ನ ನಿರಾಸಕ್ತಿ ನೋಡಿ ಎದ್ದು ಹೋದ. ಆತ ಹೋದರೆ ಸಾಕಾಯಿತು.

ಬಾಗಿಲು ಹಾಕಿ ಹೊರ ಹೋಗುವಾಗ ನೀನು ನಗುತ್ತ ನಿಂತಿರುವುದು ಕಂಡಿತು. ನಿನ್ನ ನಗು ಕೂಡ ಕಪಟವೆನಿಸಿ ಮುಖ ತಿರುಗಿಸಿ ನಡೆದೆ, ಎಲ್ಲಿಗೆಂದು ಗೊತ್ತಿಲ್ಲದೆ.

ಬಸ್‌ಸ್ಟಾಪಿಗೆ ಬಂದಾಗ ಯಾವುದೋ ಬಸ್ಸು ಹೊರಡುವುದರಲ್ಲಿತ್ತು. ಬಸ್ ಹತ್ತಿ ಮಾರುತಿ ಮಂದಿರ ಸ್ಟಾಪ್‌ನಲ್ಲಿಳಿದು ಸಮುದ್ರ ತೀರದತ್ತ ನಡೆಯತೊಡಗಿದೆ. ಮರಳ ಮೇಲೆ ಅಲ್ಲಷ್ಟು ಇಲ್ಲಷ್ಟು ಜನ. ಅಲ್ಲೆಲ್ಲೋ ಕಣ್ಣು ಮುಚ್ಚಿ ಕೂತೆ. ಹೃದಯ ಭಾರವಾಗಿತ್ತು. ಬೀಸುವ ತಂಗಾಳಿ ಕೂಡ ಮನದ ಬಿಸಿಯನ್ನು ತಂಪು ಮಾಡಲಾರದು. ಸೂರ್ಯ ಮುಳುಗಲು ಹೊರಟಿದ್ದ. ಸೂರ್ಯಾಸ್ತದ ಸೊಬ ಗನ್ನು ಸವಿಯಲು ಮನಸ್ಸು ಎಂದಿನಂತಿರಲಿಲ್ಲ. ಯಾಕೋ ಊರ ಕಡೆ ನೆನಪಾಯಿತು. ಅವ್ವ ಕಣ್ಣ ಮುಂದೆ ಬಂದಳು. ಮುಂದಿನ ತಿಂಗಳು ರಜೆ ಪಡೆದು ಊರಿಗೆ ಹೋಗಬೇಕೆಂದುಕೊಂಡೆ. ಸಾವಕಾಶವಾಗಿ ದಡಕ್ಕೆ ಬರುತ್ತಿದ್ದ ತೆರೆಗಳು ಮುಳುಗುವ ಸೂರ್ಯನ ಕೆಂಪನ್ನು ಕಲಸಿಕೊಂಡು ಬರುತ್ತಿದ್ದವು. ನೋಡ ನೋಡುತ್ತಿದ್ದಂತೆ ಸೂರ್ಯ ಸಮುದ್ರದಲ್ಲಿ ಇಳಿದು ಹೋದ, ಇನ್ನೆಂದೂ ಬರ ಲಾರದವನಂತೆ. ನನ್ನ ಕಣ್ಣುಗಳು ಹನಿಗೂಡಿದವು.

ರಾತ್ರಿ ಮರಳಿ ಬಂದಾಗ ಎಲ್ಲರೂ ದೀಪ ಆರಿಸಿ ಮಲಗಿದ್ದರು. ಬಾಗಿಲು ತೆರೆಯುವಾಗ ಊಟ ತರುವ ಹುಡುಗ ರಾತ್ರಿಯೂಟವನ್ನು ಅಲ್ಲೆ ಇಟ್ಟು ಹೋಗಿರುವುದು ಕಂಡಿತು. ಉಣ್ಣುವ ಮನಸ್ಸಾ ಗಲಿಲ್ಲ. ಬಟ್ಟೆ ಕೂಡ ಕಳಚದೆ ಹಾಗೇ ಮಲಗಿ ಕೊಂಡೆ.

ಮರುದಿನ ಮುಂಜಾನೆ ಎಂದಿನಂತಿರಲಿಲ್ಲ. ನಿನ್ನನ್ನು ಕಣ್ಣೆತ್ತಿ ಕೂಡ ನೋಡಬಾರದಂದು ಕೊಂಡಿದ್ದೆನಾದರೂ ಅಪ್ರಯತ್ನಪೂರ್ವಕವಾಗಿ ದೃಷ್ಟಿ ಅತ್ತ ಹರಿಯುತ್ತಿತ್ತು. ನಿನ್ನ ಮುಖ ಬಾಡಿರುವುದನ್ನೂ ಎಂದಿನ ಲವಲವಿಕೆ ಇಲ್ಲದಿರುವುದನ್ನೂ ಗುರುತಿಸಿದ್ದೆ. ನಿನ್ನನ್ನು ಮತ್ತೆ ಮಾತಾಡಿಸಬಾರದಂಬ ನಿರ್ಧಾರ ಮಾತ್ರ ಸಡಿಲಗೊಂಡಿರಲಿಲ್ಲ. ಆದರೆ ಅದೂ ಆಗಲು ಬಹಳ ದಿನ ಹಿಡಿಯಲಿಲ್ಲ.

ಆ ರಾತ್ರಿ ಬಹಳ ಹೊತ್ತಿನವರೆಗೆ ಓದುತ್ತ ಎಚ್ಚರವಿದ್ದೆ. ಕಾಲನಿಯಲ್ಲಿ ಎಲ್ಲರೂ ಮಲಗುವ ಹೊತ್ತು. ರಸ್ತೆಯಲ್ಲಿ ಜನ ಸಂಚಾರ ನಿಂತು ಹೋಗಿದೆ. ತುಸುವೇ ತೆರೆದ ಕಿಟಕಿಯಿಂದ (ಈಚೆಗೆ ಕಿಟಕಿಯನ್ನು ಮುಚ್ಚಿರುತ್ತಿದ್ದೆ) ನಿಮ್ಮ ಮನೆಯತ್ತ ನೋಡಿದೆ. ಹೂ ಗಿಡದ ಪಕ್ಕ ಏನೋ ಚಲಿಸಿದಂತಾಗಲು ದಿಟ್ಟಿಸಿದರೆ ನೀನು ಅಲ್ಲಿದ್ದೆ. ಮನೆಯಲ್ಲಿ ದೀಪ ಆರಿಸಿದ್ದರೂ ಹುಣ್ಣಿಮೆ ಚಂದ್ರನ ಮಂದ ಬೆಳಕಲ್ಲಿ ನಿನ್ನ ಮುಖ ಬಾಡಿರುವುದನ್ನು ಕಂಡೆ. ಒಡಲಲ್ಲಿ ಅವ್ಯಕ್ತ ಸಂಕಟ. ಸದಾ ಉಲ್ಲಾಸವನ್ನು ಸೂಸುತ್ತಿದ್ದ ನಿನ್ನನ್ನು ನೆನಪಿಸಿ ಕೊಂಡು ಕರುಳು ಹಿಂಡಿದಂತಾಯಿತು. ಏನು ಮಾಡು ತ್ತಿರುವೆನೆಂಬುದರ ಅರಿವು ಇಲ್ಲದೆ ಹೊರ ಬಂದು ಕೈ ಬೀಸಿದೆ. ತುಸು ತಡೆದು ನೀನೂ ಮೆಲ್ಲಗೆ ಕೈ ಮಾಡಿದೆ. ನೀನು ಅಳುತ್ತಿರುವಂತೆ ನನಗೆ ಅನಿಸಿತು. ಚಂದ್ರನ ಬೆಳಕಲ್ಲಿ ಎಷ್ಟೊ ಹೊತ್ತು ಹಾಗೆ ನಿಂತಿದ್ದೆವು.

ಮತ್ತೆ ನಿತ್ಯದ ಗುಲ್‌ಮೊಹರು, ಗುಲಾಬಿ ಮತ್ತು ನೀನು. ‘ನೀನ್ಯಾಕೆ ಕೋಪ ಮಾಡಿಕೊಂಡೆ? ಹೀಗೆ ಮಾಡಿದರೆ ನಿನ್ನ ಹತ್ತಿರ ಮಾತಾಡುವುದಿಲ್ಲ’ ಎಂದು ಸಣ್ಣ ಮಕ್ಕಳ ಹಾಗೆ ‘ಟೂಟು’ ಅಂದೆ ನೀನು. ನಾನು ‘ತಪ್ಪಾಯ್ತು. ಇನ್ನು ಹೀಗೆ ಮಾಡುವುದಿಲ್ಲ’ ಎಂದು ಕೈ ಮಾಡಿ ತಿಳಿಸಿದೆ. ಸಮಾಧಾನವಾಗಲಿಲ್ಲ. ಮುನಿಸಿ ಕೊಂಡಂತೆ ನಟಿಸಿದೆ ನೀನು. ನಾನು ಕಿವಿ ಹಿಡಿದು ಒಂದೆರಡು ಊಠ್‌ಬೈಸ್ ಹೊಡೆದೆ. ನಿನ್ನ ಕೋಪ ಕರಗಿ ನಗು ಅರಳಿತು. ಇಂಥ ಹುಚ್ಚಾಟಗಳಿಗೆ ಕೊನೆ ಎಲ್ಲಿ?

ಎಂದಿನಂತೆ ನಿನ್ನ ದರುಶನ ಪಡೆದು ಲ್ಯಾಬ್‌ಗೆ ಬಂದರೆ ಡೆಪ್ಯೂಟಿ ಡೈರೆಕ್ಟರ್ ಡಾ. ರಂದ್ರ ಗುಪ್ತ ಯಾರ ಮೇಲೋ ಕೂಗಾಡುತ್ತಿದ್ದರು. ಈಚೆಗೆ ಸಣ್ಣ ಕಾರಣಕ್ಕೂ ಅವರು ಹೀಗೆ ಮಾಡುತ್ತಿದ್ದರು. ತಿಂಗಳ ಹಿಂದಷ್ಟೇ ನನ್ನ ಮೇಲೂ ಸಿಡಿಮಿಡಿಗೊಂಡಿದ್ದರು. ಸಾರ್ವಜನಿಕ ಪೂರೈಕೆಯ ಮೊದಲು ಕೆಲವು ಆಹಾರ ವಸ್ತುಗಳನ್ನು ನಮ್ಮ ಪ್ರಯೋಗಾಲಯದಲ್ಲಿ ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿ ಅವು ನಿಗದಿತ ಗುಣಮಟ್ಟ ಹೊಂದಿವೆಯೇ ಎಂದು ಪರೀಕ್ಷಿಸಲಾಗುತ್ತಿತ್ತು. ಹಾಗೇ ನಾದರೂ ನಿಗದಿತ ಮಟ್ಟಕ್ಕೆ ಬರದಿದ್ದರೆ ಅದನ್ನು ಮಾರಾಟದಿಂದ ನಿಷೇಧಿಸಲಾಗುತ್ತಿತ್ತು. ಹಾಗೇನಾದರೂ ನಿಗದಿತ ಮಟ್ಟಕ್ಕೆ ಬರದಿದ್ದರೆ ಅದನ್ನು ಮಾರಾಟದಿಂದ ನಿಷೇಧಿಸಲಾಗುತ್ತಿತ್ತು. ಹಾಗಾಗುವ ಮೊದಲೆ ಕೆಲವು ಉತ್ಪಾದಕರು ಡಾ. ಗುಪ್ತರನ್ನು ಸಂಪರ್ಕಿಸಿ ತಮ್ಮ ವಸ್ತುಗಳು ನಿಷೇಧಗೊಳ್ಳದಂತೆ ನೋಡಿಕೊಳ್ಳುತ್ತಾರೆಂದು ಸುದ್ದಿ ಕೂಡ ಇತ್ತು. ತಿಂಗಳ ಹಿಂದೆ ಸ್ಯಾಂಪಲ್ಲೊಂದನ್ನು ಪರೀಕ್ಷಿಸಿ ಸೂಚಿತ ಗುಣಮಟ್ಟ ಇಲ್ಲ ಎಂದು ರಿಪೋರ್ಟ್ ತಯಾರಿಸಿದ್ದೆ. ಆ ದಿನ ಸಂಜೆ ಡಾ. ಗುಪ್ತ ನನ್ನನ್ನು ಕರೆಸಿ ಸುತ್ತು ಬಳಸಿ ಮಾತಾಡುತ್ತ ಅದನ್ನು ತಿದ್ದುವಂತೆ ಹೇಳಿದರು. ‘ನಾನು ಹಾಗೆ ಮಾಡಲಾರೆ ಸರ್’ ಎಂದಿದ್ದೆ.

ಲ್ಯಾಬ್‌ನಲ್ಲಿ ಕೆಲವರು ಡಾ. ಗುಪ್ತರ ವಿರುದ್ಧವಾಗಿ ಹೋಗಬೇಡವೆಂದೂ ಅವರು ತುಂಬಾ ಪ್ರಭಾವಶಾಲಿ ಯೆಂದೂ ಮನಸ್ಸು ಮಾಡಿದರೆ ಕೆಲಸದಿಂದ ಕಿತ್ತು ಹಾಕಬಹುದೆಂದೂ ಹೆದರಿಸಿದ್ದರು. ನನಗೆ ಆಶ್ಚರ್ಯ ವಾಗಿತ್ತು. ನೋವು ಕೂಡ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಕೆಲಸ ಏಕೆ ಕಳಕೊಳ್ಳಬೇಕು? ಇದೆಲ್ಲಿಯ ನ್ಯಾಯ? ಮನಸ್ಸು ಖಿನ್ನವಾಯಿತು. ಆದರೆ ಕೆಲಸ ಉಳಿಸಿಕೊಳ್ಳುವುದಕ್ಕಾಗಿ ಡಾ. ಗುಪ್ತರ ಇಚ್ಛೆಯಂತೆ ಸುಳ್ಳು ರಿಪೋರ್ಟ್‌ಗಳನ್ನು ನೀಡಲೆ? ನಾನು ನಂಬಿದ ಮೌಲ್ಯಗಳನ್ನು ಮಾರಿಬಿಡಲೇ? ಇಲ್ಲ ಅದನ್ನೆಂದೂ ಮಾಡಲಾರೆ. ಅದು ನಾನು ಇಲ್ಲಿವರೆಗೆ ಕಲಿತದ್ದಕ್ಕೆ ಅಪಚಾರ ಎಸಗಿದಂತೆ.

ಲ್ಯಾಬ್‌ಗೆ ಬಂದವನೆ ಸ್ಯಾಂಪಲ್ಲೊಂದರ ವಿಶ್ಲೇಷಣೆ ಗಾಗಿ ರಾಸಾಯನಿಕಗಳನ್ನು ತಯಾರಿಸುತ್ತಿರ ಬೇಕಾದರೆ ಡಾ. ಗುಪ್ತ ನನಗೆ ಬರ ಹೇಳಿದರು. ನಾನು ಅವರ ಕೋಣೆ ಪ್ರವೇಶಿಸಿ ಅವರಿಗೆ ನಮಸ್ಕರಿಸಿ ಅವರು ತೋರಿದ ಕುರ್ಚಿಯಲ್ಲಿ ಕೂತೆ. ಅವರು ಏನನ್ನೋ ಹೇಳಲು ಅಂಜುವಂತಿದ್ದರು.

ಪ್ರಯತ್ನಿಸಿ ಕೊನೆಗೆ ‘ಮಿ. ನಾಯಕ್ ನಿಮಗೆ ಇಲ್ಲಿಂದ ವರ್ಗವಾಗಿದೆ. ಈಗಷ್ಟೇ ಡೈರೆಕ್ಟರ್ ಆಫಿಸಿನಿಂದ ಆರ್ಡರ್ ಬಂತು’ ಎಂದರು. ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ‘ನಿಮ್ಮಂತೆ ಡೈನಮಿಕ್ ಆಗಿ ಕೆಲಸ ಮಾಡುವವರು ನಮ್ಮ ಲ್ಯಾಬ್‌ನಲ್ಲಿ ಇರಬೇಕಿತ್ತು’ ಎಂದೂ ಇನ್ನೂ ಏನೇನೋ ಹೇಳುತ್ತಿದ್ದರು. ನಾನು ಮೌನವಾಗಿ ಹೊರಗೆ ಬಂದೆ. ನನಗೆ ಕಲ್ಕತ್ತಾಗೆ ವರ್ಗವಾಗಿತ್ತು.

ಹೊರಗೆ ಬರುತ್ತಿದ್ದಂತೆ ಎಲ್ಲರೂ ನನ್ನನ್ನು ಮುತ್ತಿಕೊಂಡರು. ಕೈಲಿದ್ದ ಟ್ರಾನ್ಸ್‌ಫರ್ ಆರ್ಡರ್ ನೋಡಿ ಆತ್ಮೀಯರು ಕೆಲವರು ಬೇಜಾರು ಪಟ್ಟರು. ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಿದ್ದರು. ನನಗೆ ಮಾತ್ರ ತಲೆ ತುಂಬ ನೀನು. ಸ್ವಾತಿಗೆ ಏನೆಂದು ಹೇಳಲಿ? ಅವಳಿಗೆ ಹೇಗೆ ಮುಖ ತೋರಿಸಲಿ?

ನೀನು ಪ್ರಯತ್ನಿಸಿ ಸೋತೆ. ನನ್ನನ್ನು ನಗಿಸಬೇಕೆನ್ನುವ ನಿನ್ನ ಪ್ರಯತ್ನಗಳೆಲ್ಲ ಇಂಗಿ ಹೋದವು. ನಾನು ನಗುವ ಸ್ಥಿತಿಯಲ್ಲಿರಲಿಲ್ಲ. ನಿನಗೆ ಇನ್ನೂ ಸುದ್ದಿ ತಿಳಿದಿಲ್ಲ. ನಿನ್ನನ್ನೇ ನೋಡುತ್ತ ಕೂತುಬಿಟ್ಟೆ.

ಸಂಜೆ ಲ್ಯಾಬ್‌ನ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಾವಂತ ಮನೆಗೆ ಬಂದು ಮೊಸಳೆ ಕಣ್ಣೀರು ಸುರಿಸತೊಡಗಿದ. ನಾನು ಅಷ್ಟೆಲ್ಲ ದೂರಕ್ಕೆ ವರ್ಗವಾಗಿ ಹೋಗಬೇಕಾದುದಿಲ್ಲವೆಂದೂ, ತಾನು ಡಾ. ಗುಪ್ತರ ಮನವೊಲಿಸಿ ಟ್ರಾನ್ಸ್‌ಫರ್ ಆರ್ಡರನ್ನು ಹಿಂದೆಗೆದುಕೊಳ್ಳುವಂತೆ ಮಾಡುತ್ತೇ ನೆಂದೂ ಹೇಳಿದ. ಮತ್ತೆ ನಾನು ಡಾ. ಗುಪ್ತರ ಇಚ್ಛೆಯಂತೆ ನಡೆಯಬೇಕೆಂದೂ ಅದರಿಂದ ನನಗೂ ಲಾಭವಿದೆ ಎಂದೂ ಸೇರಿಸಿದ. ನನಗೆ ತಲೆ ಸಿಡಿಯತೊಡಗಿತು. ಇದೆಲ್ಲ ಈತ ಮತ್ತು ಡಾ. ಗುಪ್ತ ಕೂಡಿ ಮಾಡುತ್ತಿರುವ ನಾಟಕ ಅನಿಸಿತು, ಇವರ ಹುನ್ನಾರಕ್ಕೆ ಸಿಕ್ಕಬಾರದು ಎಂದುಕೊಂಡೆ. ಯಾವುದೋ ದುರ್ಬಲ ಗಳಿಗೆಯಲ್ಲಿ ಕೂಡ ಇಂಥದಕ್ಕೆ ಮನಸ್ಸು ಸೋಲದಿರಲು ಅವನನ್ನು ಹೊರಗೆ ಹೋಗುವಂತೆ ಕಠೋರವಾಗಿ ನುಡಿದೆ. ‘ನಾನೀಗಾಗಲೇ ಹೊಸ ಜಾಗಕ್ಕೆ ಹಾಜರಾಗಲು ನಿರ್ಧರಿಸಿದ್ದೇನೆ’ ಎಂದು ಕೂಗಿದೆ. ನನ್ನ ಧ್ವನಿಯಲ್ಲಿಯ ನಿಷ್ಠುರತೆ ನನಗೇ ಆಶ್ಚರ್ಯವುಂಟು ಮಾಡಿತು.

ಅಷ್ಟರಲ್ಲೇ ನೀನು ಹೇಗೋ ಸುದ್ದಿ ಸಂಗ್ರಹಿಸಿದ್ದೆ. ಪೂರ್ತಿ ಭೂಮಿಗೇ ಇಳಿದು ಹೋಗಿದ್ದೆ. ನಗುವಿಲ್ಲ. ನಲಿವಿಲ್ಲ. ಎಷ್ಟೋ ದಿನಗಳಿಂದ ನೇಯುತ್ತಿದ್ದ ಕಸೂತಿ ಮುಂದುವರಿಸುವ ನೆಪದಲ್ಲಿ ಕಿಟಕಿಯಲ್ಲಿ ಕಾಣುವೆ. ಒಡಲಲ್ಲಿ ಎಂಥ ತಳಮಳ! ನಿನ್ನೊಡನೆ ಕಳೆದ ದಿನಗಳು ಕನಸಿನಂತೆ ಕಾಣುತ್ತಿದೆ. ಈ ನವಿರು ಸಂಬಂಧಕ್ಕೆ ಏನರ್ಥ? ನಮ್ಮ ಪ್ರೇಮ ಪರಿಪೂರ್ಣ ಗೊಳ್ಳುವ ಮೊದಲೆ...? ಅಥವಾ ಇದು ಸತ್ವ ಪರೀಕ್ಷೆಯೇ? ಪ್ರೇಮದ ತೀವ್ರತೆ ನಮ್ಮನ್ನು ಪುನಃ ಒಂದುಗೂಡಿಸಬಲ್ಲದೆ? ಉತ್ತರ ಎಲ್ಲಿ ಹುಡುಕಲಿ?

ನಾನು ನಿನ್ನನ್ನು ಭೇಟಿಯಾಗಲು ಮಾಡಿದ ಪ್ರಯತ್ನಗಳೆಲ್ಲ ವಿಫಲಗೊಂಡವು. ನಿಮ್ಮ ತಂದೆ ನಾಲ್ಕು ದಿನಗಳಿಂದ ಮನೆಯಲ್ಲೆ ಇದ್ದರು. ನೀನೂ ಮನೆಯಿಂದಾಚೆಗೆ ಸುಳಿವೇ ಇಲ್ಲ. ಹೊಸ ಜಾಗಕ್ಕೆ ಹಾಜರಾಗುವ ಮೊದಲು ಒಂದು ವಾರದ ಮಟ್ಟಿಗೆ ಊರಿಗೆ ಹೋಗಲು ತೀರ್ಮಾನಿಸಿದ್ದೆ. ನಾಳೆಯೇ ಹೊರಡುವುದು. ಎಲ್ಲಾ ಪ್ಯಾಕ್ ಮಾಡತೊಡಗಿದೆ. ಒಯ್ಯಲು ಬೇಸರವಾಗಿ ಹಲವಾರು ವಸ್ತುಗಳನ್ನು ಲ್ಯಾಬ್‌ನಲ್ಲಿಯ ನನ್ನ ಸಹಾಯಕರಿಗೆ ಕೊಟ್ಟುಬಿಟ್ಟೆ. ತಲೆ ತುಂಬ ಸ್ವಾತಿ, ಸ್ವಾತಿ, ಸ್ವಾತಿ. ರಾತ್ರಿಯಿಡೀ ಚಿತ್ರ ವಿಚಿತ್ರ ಕನಸುಗಳು.
ರಾತ್ರಿ ಸರಿ ನಿದ್ದೆಯಿಲ್ಲದ್ದರಿಂದ ಏಳಲು ತಡವೇ ಆಯಿತು. ಗಡಿಬಿಡಿಯಿಂದ ಸ್ನಾನ ಮುಗಿಸಿ ಬರುವಷ್ಟರಲ್ಲಿ ಗುಬ್ಬಚ್ಚಿ ಕೂಡ ಹೊರಟು ಹೋಗಿತ್ತು. ನೀನು ಗುಲಾಬಿಗೆ ನೀರು ಹಾಕುತ್ತಿದ್ದೆ ಎಂದಿನಂತೆ. ಆದರೆ ನಿನ್ನ ನಗು, ಗೆಲುವನ್ನೆಲ್ಲ ಗುಲಾಬಿ ಹೂಗಳೆ ನುಂಗಿದ್ದವು. ನಿಮ್ಮ ತಂದೆ ಅಲ್ಲೇ ತಿರುಗಾಡಿಕೊಂಡಿದ್ದರು.

ಕೊನೆಗೂ ನಿನ್ನನ್ನು ಭೇಟಿಯಾಗಲೇ ಬೇಕೆಂದು ತೀರ್ಮಾನಿಸಿದೆ. ನನಗೇನು ಮೈಯಲ್ಲಿ ಆವೇಶ ಹೊಕ್ಕಿತ್ತೊ ಏನೋ. ಕುಂಡದಲ್ಲಿಯ ಗುಲಾಬಿ ಗಿಡವನ್ನು ಎರಡೂ ಕೈಗಳಲ್ಲಿ ಹಿಡಿದು ನಡೆದೆ, ನನ್ನ ಹೃದಯ ಹಿಡಿದುಕೊಂಡಂತೆ. ಇಡೀ ಜಗತ್ತೇ ಸ್ತಬ್ಧವಾಗಿದೆ. ನನಗೆ ಬೇರೇನೂ ಕಾಣದು. ಅಲ್ಲಿ ಸ್ವಾತಿ ಮಾತ್ರ ಪ್ರಜ್ವಲಿಸುತ್ತಿದ್ದಾಳೆ. ಭಾರವಾದ ಹೃದಯದಿಂದ ನಿನ್ನ ಹೂದೋಟವನ್ನು ದಾಟಿ ಮನೆ ಮೆಟ್ಟಲೇರಿ ಬಾಗಿಲ ಬಳಿ ನಿಂತೆ. ನನ್ನನ್ನು ನೋಡಿ ನೀನು ಓಡಿ ಬಂದೆ. ನಿನ್ನ ಕೈಗಳಲ್ಲಿ ಇನ್ನೂ ಪೂರ್ತಿ ಗೊಳ್ಳಬೇಕಾಗಿರುವ ಕಸೂತಿ ಕಲೆ. ಗುಲಾಬಿಯನ್ನು ನಿನ್ನ ಎರಡೂ ಕರಗಳಲ್ಲಿಟ್ಟೆ, ಹಗುರ ನನ್ನ ಹೃದಯ ಇಟ್ಟ ಹಾಗೆ. ನಿನ್ನ ಅಗಲ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬಕ್ಕಾಗಿ ಇಣುಕಿದೆ. ಅದೆಲ್ಲ ಒಂದೆರಡೇ ಕ್ಷಣ. ವಿಗ್ರಹ ಗಳಂತೆ ನಿಂತಿದ್ದ ನಿನ್ನ ಅಪ್ಪ ಅಮ್ಮರಿಗೆ ಏನಾಗುತ್ತಿದೆ ಎಂದು ಅರಿವಾಗುವ ಮೊದಲೆ ನಾನು ಮೆಟ್ಟಲಿಳಿಯ ತೊಡಗಿದ್ದೆ, ಖಾಲಿ ದೇಹದೊಂದಿಗೆ.

***
ಅವ್ವನ ಸಂಭ್ರಮ ಹೇಳತೀರದು. ಬೆಳಗಾಗುವಷ್ಟರಲ್ಲಿ ಹಿರಿಯಣ್ಣನಿಗೆ ಯಾವುದೋ ನಂಟಸ್ತಿಕೆ ಬಂದಿರೋದನ್ನೂ, ಎರಡನೆ ಅಕ್ಕ ಅಮಾಸಿಪಾಡ್ಯಕ್ಕೆ ಮೂರನೆ ಬಾಣಂತನಕ್ಕಾಗಿ ಬರಲಿರುವುದನ್ನೂ ಅಪ್ಪನ ಬಗ್ಗೆ ಒಂದಿಷ್ಟು ಹೊಸ ಪುಕಾರುಗಳನ್ನೂ, ಅಮ್ಮನೋರ ದೇವರಿಗೆ ಅಷ್ಟಬಂಧ ಆದದ್ದನ್ನೂ ವರದಿ ಒಪ್ಪಿಸಿ ಹಗುರಾದ ಮೇಲೆ ಹೋಗ್ ಹೋಗ ಮಿಂದಕಾ ಬಾ ಎನ್ನುತ್ತಾ ಹಂಡೆಗೆ ಬೆಂಕಿ ಮಾಡಲು ಹೋದಳು. ನಾನು ಅಟ್ಟದ ಮೇಲಿರುವಾಗ ಪಕ್ಕದ ಮನೆಯ ಗಂಗಕ್ಕನೊಡನೆ ನನಗೆ ಊಟ ಸೇರದೇ ಇದ್ದದ್ದು, ಪೂರ್ತಿ ಸೊರಗಿ ಹೋದದ್ದು ಎಲ್ಲವನ್ನು ಬಣ್ಣಿಸುತ್ತಿದ್ದಳು. ನಾನು ಕೆಲ ವಸ್ತುಗಳನ್ನು ತರದೇ ಇದ್ದದ್ದು ಕಂಡು ‘ಎಲ್ಲ ಕೊಟ್ಟ ಬಂದ್ಯ’ ಎಂದು ಅರ್ಧ ದುಃಖದಿಂದ ಇನ್ನರ್ಧ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ಕೇಳಿ ನನಗೆ ನಗು ಬಂತು. ‘ಹೌದು, ಎಲ್ಲ ಎಲ್ಲವನ್ನೂ ಕೊಟ್ಟು ಬಂದಿದ್ದೇನೆ, ಈ ಹೃದಯವನ್ನೂ ಕೂಡ’ ಎಂದು ಕೂಗಿ ಹೇಳಬೇಕೆನಿಸಿತು. ಎದ್ದು ಹೊರಗೆ ಬಂದೆ.

ಹಿತ್ತಲಲ್ಲಿ ಅಪ್ಪ ಏನೋ ನಡೆಸಿದ್ದ. ಅಡಿಕೆ ಸಸಿ ಗಳಿಗೆ ಯಾವುದೋ ರಾಸಾಯನಿಕ ಸಿಂಪಡಿಸು ತ್ತಿದ್ದ. ಅಪ್ಪನ ಪ್ರಯೋಗಶೀಲತೆಗೆ ಮೆಚ್ಚಬೇಕು. ಏನಾದರೊಂದು ಹೊಸತನ್ನ ಮಾಡುತ್ತ ಕ್ರಿಯಾಶೀಲನಾಗಿರುತ್ತಾನೆ. ಹಿತ್ತಲ ಮುಂದೆ ಹರಿವ ಹಳ್ಳ. ಇನ್ನೂ ಮಂಡಿಸರಿ ನೀರಿತ್ತು. ನೀರಿನಲ್ಲಿ ಹಾದು ಆಚೆ ಬಂದರೆ ಗದ್ದೆ ಬಯಲು. ಗೇಣುದ್ದ ಬಂದ ಕಾರ್ ಬತ್ತದ ಸಸಿಗಳು. ಬೇಲಿಯಾಚೆ ಬೆಳಗಿನ ಚಳಿಗೆ ಮೈಕಾಸಿಕೊಳ್ಳುತ್ತಿದ್ದ ದನಕರುಗಳು. ದಣಪೆ ದಾಟಿ ದಿಬ್ಬದತ್ತ ನಡೆದವನು ಕಟ್ಟಕಡೆ ಬಂದವನೇ ತಿರುಗಿದೆ. ಇಡೀ ಬಯಲು ಹಸಿರೋ ಹಸಿರು. ಅಂಚಲ್ಲಿ ತೂಗಾಡುವ ಅಡಿಕೆ, ತೆಂಗು. ಕೆರೆಯಲ್ಲಿ ಅರಳಿದ ಕಮಲಗಳು. ಹಸಿರು ಗದ್ದೆ ತುಂಬಾ ಬೆಳ್ಳಕ್ಕಿಗಳು, ಬೀರಿದ ಮಲ್ಲಿಗೆ ಹಾಗೆ. ನೋಡುತ್ತಿದ್ದಂತೆ ಮನಸು ತುಂಬಿ ಬಂದಂತಾ ಯಿತು. ಬೆಳ್ಳಕ್ಕಿಗಳ ನಡುವೆ ರೇಖೆಯನ್ನೆಳೆಯುತ್ತ ವಿವಿಧ ಆಕಾರಗಳನ್ನು ಕಲ್ಪಿಸುತ್ತಾ ನಿಂತೆ. ಇನ್ನೂ ಹಾಗೇ ನಿಂತಿದ್ದೇನೆ.

Saturday, October 31, 2009

ಬ್ಲಾಗ್ ತೆರೆಯುವುದು ಹೇಗೆ?

ಕಳೆದ ವಾರ ಬ್ಲಾಗ್‌ಗಳ ಉಪಯೋಗದ ಬಗ್ಗೆ ಕೆಲವು ಮೂಲಭೂತ ವಿಚಾರಗಳನ್ನು ಪರಿಚಯ ಮಾಡಿಕೊಂಡಿದ್ದೆವು. ಈ ವಾರ ಅದೇ ವಿಚಾರವನ್ನು ಮುಂದುವರಿಸಿ ಅಂತರ್ಜಾಲ ತಾಣಗಳಲ್ಲಿ ನಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ನಮ್ಮದೇ ಆದ ಬ್ಲಾಗ್ ರಚಿಸಿಕೊಳ್ಳುವುದು ಎಂದರೆ ಹೆಚ್ಚೂ ಕಡಿಮೆ ನಮ್ಮದೇ ಅಂತರ್ಜಾಲ ತಾಣವೊಂದನ್ನು ರಚಿಸಿಕೊಳ್ಳುವುದು ಎಂದರ್ಥ. ದೊಡ್ಡ ದೊಡ್ಡ ಕಂಪೆನಿ, ಸಂಘಸಂಸ್ಥೆ, ಶಿಕ್ಷಣ ಸಂಸ್ಥೆ ಮುಂತಾದವುಗಳಿಗಾದರೆ ತಮ್ಮದೇ ಆದ ಅಂತ ರ್ಜಾಲ ತಾಣ (ವೆಬ್‌ಸೈಟ್) ರೂಪಿಸುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಆನ್‌ಲೈನ್ ಸ್ಥಳ ಬೇಕಾಗು ತ್ತದೆ. ಹಾಗಾಗಿ, ಆ ಸ್ಥಳವನ್ನು ಮಾರಾಟ ಮಾಡುವ ಇಂಟರ್‌ನೆಟ್ ಸಂಸ್ಥೆಗಳಿಂದ ಅವುಗಳನ್ನು ಅವರು ಕೊಂಡುಕೊಳ್ಳುತ್ತಾರೆ. ನಮಗೆ ನಮ್ಮದೇ ಬ್ಲಾಗ್ ರಚಿಸಿಕೊಳ್ಳುವುದಕ್ಕೆ ಅಷ್ಟೊಂದು ಆನ್‌ಲೈನ್ ಸ್ಥಳಾವ ಕಾಶದ ಅವಶ್ಯಕತೆಯಿಲ್ಲವಾದ್ದರಿಂದ ಕೆಲವು ಇಂಟರ್ ನೆಟ್ ಕಂಪೆನಿಗಳು ಉಚಿತ ಸ್ಥಳಾವಕಾಶ ಕೊಡುತ್ತವೆ. ಅದನ್ನೇ ಉಪಯೋಗಿಸಿಕೊಂಡು ನಮ್ಮದೇ ಆದ ಬ್ಲಾಗ್ ಅನ್ನು ನಾವು ರೂಪಿಸಿಕೊಳ್ಳಬಹುದು. ನಮ್ಮದೇ ಸ್ವಂತ ಅಂತರ್ಜಾಲ ಸ್ಥಳವನ್ನು ಖರೀದಿಸಿ ರೂಪಿಸುವ ವೆಬ್‌ಸೈಟುಗಳಿಗೂ ಹಾಗೂ ವಿವಿಧ ಕಂಪೆನಿಗಳು ಉಚಿತವಾಗಿ ಒದಗಿಸುವ ಸ್ಥಳದಲ್ಲಿ ರೂಪಿಸುವ ಉಚಿತ ಬ್ಲಾಗ್‌ಗಳಿಗೂ ಒಂದು ವ್ಯತ್ಯಾಸವಿದೆ. ಸ್ವಂತ ವೆಬ್‌ಸೈಟ್‌ಗೆ ತಮಗಿಷ್ಟ ಬಂದ, ಆದರೆ ಲಭ್ಯವಿರುವ ವೆಬ್ ವಿಳಾಸವನ್ನು ಕೊಡಬಹುದು (ಉದಾಹರಣೆಗೆ www. infosys.com). ಆದರೆ ಉಚಿತ ಬ್ಲಾಗ್ ಆದರೆ ಅದರ ಅಂತರ್ಜಾಲ ತಾಣದ ವಿಳಾಸದಲ್ಲಿ ಆನ್‌ಲೈನ್ ಸ್ಥಳವನ್ನು ಉಚಿತವಾಗಿ ಕೊಟ್ಟಿರುವ ಕಂಪೆನಿಯ ಹೆಸರೂ ಸೇರಿಕೊಂಡಿರುತ್ತದೆ (ಉದಾಹ ರಣೆಗೆ www.salman.blogspot. com). ಮೊದಲನೇ ಉದಾಹರಣೆಯಲ್ಲಿ ಇನ್ಫೋ ಸಿಸ್ ಕಂಪೆನಿ ನೇರವಾಗಿ ತನ್ನದೇ ಹೆಸರಿನಲ್ಲಿ ವೆಬ್‌ಸೈಟ್ ತೆರೆದಿದ್ದರೆ ಎರಡನೇ ಉದಾಹರಣೆ ಯಲ್ಲಿ ಸಲ್ಮಾನ್ ಎಂಬ ವ್ಯಕ್ತಿ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ಎಂಬ ಕಂಪೆನಿಯ ವೆಬ್ ಸೈಟಿನಲ್ಲಿ ಉಚಿತ ವಾಗಿ ಬ್ಲಾಗ್ ತೆರೆದಿದ್ದಾರೆ ಎಂದರ್ಥ.

ಅಂತರ್ಜಾಲ ಲೋಕದಲ್ಲಿ ನಮ್ಮದೇ ಆದ ಬ್ಲಾಗ್ ಗಳನ್ನು ರೂಪಿಸಿಕೊಳ್ಳುವುದಕ್ಕೆ ಹಲವಾರು ಕಂಪೆನಿಗಳು ಉಚಿತ ಆನ್‌ಲೈನ್ ಸ್ಥಳಾವಕಾಶಗಳನ್ನು ಒದಗಿಸು ತ್ತಿವೆ. ಅವುಗಳಲ್ಲಿ ಸದ್ಯಕ್ಕೆ ಭಾರತದಲ್ಲಿ ಜನಪ್ರಿಯವಾಗಿ ರುವವುಗಳೆಂದರೆ www.blogspot.com ಅಥವ www.blogger.com ಮತ್ತು www.wordpress.com. ಇವುಗಳಲ್ಲಿ ಯಾವುದರಲ್ಲಿ ಬೇಕಾದರೂ ನಾವು ಉಚಿತವಾಗಿ ನಮ್ಮದೇ ಬ್ಲಾಗ್ ರಚಿಸಿಕೊಳ್ಳಬಹುದು.

ಮೊದಲನೆಯದಾಗಿ blogspot.com (www.blogger.com) ಅನ್ನೇ ಪ್ರಾಯೋ ಗಿಕವಾಗಿ ತೆಗೆದುಕೊಂಡು ಅದರಲ್ಲಿ ನಮ್ಮ ಬ್ಲಾಗ್ ರಚಿಸುವುದು ಹೇಗೆಂಬುದನ್ನು ನೋಡೋಣ. ಮೂಲತಃ ಪ್ಯಾರಾ ಲ್ಯಾಬ್ಸ್ ಎಂಬ ಕಂಪೆನಿ ರೂಪಿ ಸಿದ್ದ ಈ ಅಂತರ್ಜಾಲ ಬ್ಲಾಗ್ ಪ್ರಕಟಣಾ ವ್ಯವಸ್ಥೆಯನ್ನು ೨೦೦೩ರಲ್ಲಿ ಗೂಗಲ್ ಸಂಸ್ಥೆ ಕೊಳ್ಳು ವುದರೊಂದಿಗೆ ಅದೂ ಕೂಡ ಗೂಗಲ್ ಅಂತ ರ್ಜಾಲ ಸೇವಾ ಸಾಮ್ರಾಜ್ಯದ ಭಾಗವಾಗಿ ಹೋ ಯಿತು. ಅಲ್ಲಿಂದಾಚೆಗೆ ಗೂಗಲ್ ಸಂಸ್ಥೆಯ ಪ್ರಯೋಗಶೀಲ ಮತ್ತು ನನ ಸೌಕರ್ಯ ಗಳೊಂದಿಗೆ ಇಂದು ಅದು ವಿಶ್ವದ ಅತ್ಯಂತ ಪ್ರಮುಖ ಬ್ಲಾಗ್ ಸೇವೆಗಳಲ್ಲಿ ಒಂದೆಂಬ ಶ್ರೇಯಸ್ಸಿಗೆ ಪಾತ್ರವಾಗಿದೆ.

ಈಗ ನೇರವಾಗಿ ಈ www.blogger. comನಲ್ಲಿ ನಮ್ಮದೇ ಆದ ಬ್ಲಾಗ್ ತೆರೆದುಕೊಳ್ಳು ವುದು ಹೇಗೆಂಬ ವಿಚಾರಕ್ಕೆ ಬರೋಣ. ಇಲ್ಲಿ ಬ್ಲಾಗ್ ತೆರೆಯಬೇಕೆಂದರೆ ಮೊದಲು ಗೂಗಲ್ ಸಂಸ್ಥೆಯ ವೆಬ್‌ಮೇಲ್ ಸೇವೆಯಾದ ಜಿ-ಮೇಲ್‌ನಲ್ಲಿ ನಾವು ಒಂದು ಇ-ಮೇಲ್ ಅಕೌಂಟ್ ಹೊಂದಿರಬೇಕು. (ಇ-ಮೇಲ್ ಹೇಗೆ ತೆರೆಯಬೇಕೆಂಬುದನ್ನು ಈ ಹಿಂದಿನ ಸಂಚಿಕೆಗಳಲ್ಲಿ ವಿವರವಾಗಿ ತಿಳಿಸಲಾಗಿದೆ). ನಿಮ್ಮ ವೆಬ್‌ಬ್ರೌಸರ್ (ಉದಾಹರಣೆಗೆ, ಇಂಟರ್ ನೆಟ್ ಎಕ್ಸ್‌ಪ್ರೋ ಅಥವ ಮೊಜಿಲ್ಲಾ ಫೈರ್‌ಫಾಕ್ಸ್) ಬಳಸಿ ಬ್ಲಾಗರ್ ಡಾಟ್ ಕಾಮ್‌ನ ಮುಖಪುಟಕ್ಕೆ ಬನ್ನಿ. ಅದರ ವೆಬ್‌ಸೈಟ್ ವಿಳಾಸ: www. blogger.com. ಅದರ ಮುಖಪುಟದಲ್ಲೇ ಬಲಭಾಗದಲ್ಲಿ CREAT A BLOG ಎಂಬ ಒಂದು ಬಟನ್ ಇದ್ದು ಅದರ ಮೇಲೆ ಕ್ಲಿಕ್ ಮಾಡಿ. ಈಗ ತೆರೆದುಕೊಳ್ಳುವ ಫಾರ್ಮ್ ರೂಪದ ಪುಟದಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ. ಮೊದಲು ಮತ್ತು ಎರಡನೇ ಕಾಲಂಗಳಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನೂ, ಆ ನಂತರದ ಎರಡು ಕಾಲಂಗಳಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನೂ ಟೈಪ್ ಮಾಡಿ. ಆಮೇಲೆ ಡಿಸ್‌ಪ್ಲೇ ನೇಮ್ ಎಂಬ ಕಾಲಂನಲ್ಲಿ ನಿಮ್ಮ ಹೆಸರನ್ನು ಟೈಪ್ ಮಾಡಿ. ನಂತರ ಬ್ಲಾಗ್‌ಗೆ ಸಂಬಂಧಪಟ್ಟಂತೆ ಭವಿಷ್ಯದಲ್ಲಿ ನಡೆಯುವ ಬೆಳವಣಿಗೆಗಳನ್ನು ಇ-ಮೇಲ್ ಮೂಲಕ ಸ್ವೀಕರಿ ಸಲು ಇಚ್ಛಿಸುತ್ತೀರಾದರೆ ಇ-ಮೇಲ್ ನೋಟಿಫಿ ಕೇಶನ್ಸ್ ಎಂಬ ಆಯ್ಕೆಯ ಮುಂದಿನ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಯ್ದುಕೊಳ್ಳಿ. ನಂತರ ಕೆಳಗಡೆ Word Verification ಎದುರಿಗೆ ಕಾಣುವ ಸಂಕೇತ ರೂಪದ ಇಂಗ್ಲೀಷ್ ಅಕ್ಷರಗಳನ್ನು ಸರಿಯಾಗಿ ಗುರುತಿಸಿ ಅದರಡಿ ಯಲ್ಲಿರುವ ಬಾಕ್ಸ್‌ನಲ್ಲಿ ಟೈಪ್ ಮಾಡಿ. ಆಮೇಲೆ I accept the Terms of Service ಎಂಬ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಯ್ದು ಕೊಳ್ಳಿ. ಎಲ್ಲ ಮುಗಿಸಿದ ಮೇಲೆ ಪುಟದ ಕೊನೆ ಯಲ್ಲಿರುವ Continue ಎಂಬ ಬಟನ್ ಮೇಲೆ ಕ್ಲಿಕ್ಕಿಸಿ. ಅಲ್ಲಿಗೆ ಮೊದಲ ಹಂತದ ಕೆಲಸ ಮುಗಿಯುತ್ತದೆ.

Continue ಎಂಬ ಬಟನ್ ಮೇಲೆ ಕ್ಲಿಕ್ಕಿಸು ತ್ತಿದ್ದಂತೆಯೇ ಎರಡನೇ ಹಂತದ ಕೆಲಸಕ್ಕಾಗಿ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಈ ಪುಟದಲ್ಲಿ ಪ್ರಧಾನವಾಗಿ ಎರಡು ವಿಚಾರಗಳನ್ನು ಭರ್ತಿ ಮಾಡಬೇಕು. ಮೊದಲನೆಯದು Blog title ಎಂಬ ಕಾಲಂನಲ್ಲಿ ನಿಮ್ಮ ಬ್ಲಾಗ್‌ಗೆ ಒಂದು ಶೀರ್ಷಿಕೆಯನ್ನು ಕೊಡಬೇಕು. ಉದಾಹರಣೆಗೆ, ನಿಮ್ಮ ಅಪ್ರಕಟಿತ ಕವನಗಳನ್ನು, ಚಿಂತನಗೆಳನ್ನು, ಬರಹಗಳನ್ನು ಪ್ರಕಟಿಸುವ ಉದ್ದೇಶದಿಂದ ಬ್ಲಾಗ್ ತೆರೆಯುತ್ತಿದ್ದೀರಾದರೆ My Unpublished Thoughts ಎಂದು ಹೆಸರಿಡಬಹುದೇನೋ. ಇದೊಂದು ಉದಾಹರಣೆಯಷ್ಟೆ. ನಿಮಗೆ ಬೇಕಾದ ಶೀರ್ಷಿಕೆಯನ್ನು ಇಟ್ಟುಕೊಳ್ಳಬಹುದು. ಇನ್ನು ಎರಡನೆಯದೆಂದರೆ ವಿಶಾಲವಾಗಿರುವ ಅಂತ ರ್ಜಾಲ ಲೋಕದಲ್ಲಿ ನಿಮ್ಮ ಬ್ಲಾಗ್ ತಲುಪುವುದಕ್ಕೆ ಅವಶ್ಯವಾಗಿ ಬೇಕಿರುವ ಬ್ಲಾಗ್ ವಿಳಾಸವನ್ನು ಭರ್ತಿ ಮಾಡಬೇಕು. ಇದನ್ನು ಇಂಟರ್‌ನೆಟ್ ಪರಿಭಾಷೆ ಯಲ್ಲಿ URL (Uniform Resource Locator) ಎಂದು ಕರೆಯಲಾಗುತ್ತದೆ. ನಿಮ್ಮ ಹೆಸರನ್ನು, ನಿಮ್ಮ ಬ್ಲಾಗ್‌ಗೆ ಕೊಟ್ಟಿರುವ ಶೀರ್ಷಿಕೆ ಯನ್ನು - ಏನನ್ನು ಬೇಕಾದರೂ ಕೊಡಬಹುದು. ಶಬ್ದಗಳ ನಡುವೆ, ಅಕ್ಷರಗಳ ನಡುವೆ ಸ್ಪೇಸ್ ಬಿಡಬಾರದು. ಅಂತೆಯೇ ಎಲ್ಲವೂ ಇಂಗ್ಲೀಷಿನ ಚಿಕ್ಕ ಅಕ್ಷರಗಳಲ್ಲಿ ಇರಬೇಕು. ಉದಾಹರಣೆಗೆ, mythoughts ಎಂಬುದನ್ನೇ URL ಆಗಿ ಬಳಸುತ್ತೀರಾದರೆ ಆಗ ನಿಮ್ಮ ಬ್ಲಾಗ್‌ನ ಸಂಪೂರ್ಣ ವಿಳಾಸ www.mythoughts.blogspot. com ಎಂದಾಗುತ್ತದೆ. ಕೆಲವೊಮ್ಮೆ ನೀವು ಕೊಡುವ ಯು‌ಆರ್‌ಎಲ್ ಅನ್ನು ಈಗಾಗಲೇ ಯಾರಾದರೂ ಬಳಸಿಬಿಟ್ಟಿದ್ದರೆ ಅದು ನಿಮಗೆ ಲಭ್ಯವಾಗುವುದಿಲ್ಲ. ಹಾಗಾಗಿ ಲಭ್ಯವಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅದನ್ನು ಟೈಪ್ ಮಾಡಿ ಕೆಳಗಡೆಯಿರುವ Check Availability ಎಂಬ ಲಿಂಕಿನ ಮೇಲೆ ಕ್ಲಿಕ್ ಮಾಡಿ. ಲಭ್ಯವಿದ್ದರೆ ಮುಂದುವರಿಯಬಹುದು, ಇಲ್ಲದಿದ್ದರೆ ಬೇರೆ ಹೆಸರನ್ನು ಕೊಡಬೇಕಾಗುತ್ತದೆ. ಲಭ್ಯವಿರುವ ಯು‌ಆರ್‌ಎಲ್ ಸಿಕ್ಕ ಮೇಲೆ ಕೆಳಗಡೆಯಿರುವ Continue ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಈಗ ಬ್ಲಾಗ್ ರಚನೆಯ ಮೂರನೇ ಹಂತಕ್ಕೆ ಬರುತ್ತೀರಿ. ಇಲ್ಲಿ ನಿಮ್ಮ ಬ್ಲಾಗ್ ಹೇಗೆ ಕಾಣಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕಾಗಿ ಹಲವು ರೀತಿಯ ಬ್ಲಾಗ್ ವಿನ್ಯಾಸಗಳು ಇರುತ್ತವೆ. ಅವುಗಳಲ್ಲಿ ಯಾವುದು ಇಷ್ಟವೋ ಅದರ ಕೆಳಗಿರುವ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಯ್ದುಕೊಂಡು ನಂತರ ಮತ್ತೆ ಕೆಳಗಡೆಯಿರುವ Continue ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿಗೆ ನಿಮ್ಮ ಬ್ಲಾಗ್ ಸೃಷ್ಟಿಯಾಗುತ್ತದೆ. ಅದನ್ನು ಖಚಿತಪಡಿಸುವ ಪುಟವೊಂದು ತೆರೆದುಕೊಳ್ಳುತ್ತದೆ. ಈ ಪುಟದಲ್ಲಿರುವ Start Blogging ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ನಿಮ್ಮ ಬ್ಲಾಗ್‌ಗೆ ಹೋಗುತ್ತೀರಿ.

ಬ್ಲಾಗ್‌ನಲ್ಲಿ ಬರೆಯುವುದು ಹೇಗೆ, ಬರೆದ ವಿಚಾರಗಳನ್ನು ಪ್ರಕಟಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬ್ಲಾಗುಗಳು -ಒಂದು ಪರಿಚಯ

ಕಳೆದ ಕೆಲವು ವಾರಗಳಿಂದ ಉಚಿತ ಆನ್‌ಲೈನ್ ಸ್ಟೋರೇಜ್ ವ್ಯವಸ್ಥೆಯ ಬಗ್ಗೆ ಮೂಲಭೂತ ಅಂಶ ಗಳನ್ನು ತಿಳಿದುಕೊಂಡಿದ್ದೇವೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಮೂಲಭೂತ ಅಂಶಗಳನ್ನಷ್ಟೇ ವಿವರಿಸಲಾ ಗಿದ್ದು ಉಳಿದಂತೆ ನೀವೇ ಪ್ರಾಕ್ಟೀಸ್ ಮಾಡುತ್ತಾ ಹೋದಂತೆ ಇನ್ನೂ ಹಲವು ವಿಚಾರಗಳನ್ನು ಸ್ವಂತ ವಾಗಿ ತಿಳಿದುಕೊಳ್ಳುತ್ತಾ ಹೋಗಬಹುದು. ಅಲ್ಲದೇ, ಎಡ್ರೈವ್ ಮಾತ್ರವಲ್ಲದೇ ಉಚಿತ ಸ್ಟೋರೇಜ್ ಸ್ಥಳಾವಕಾಶ ಕೊಡುವ ಇನ್ನಿತರ ವೆಬ್‌ಸೈಟುಗಳನ್ನೂ ಗೂಗಲ್ ಹುಡುಕಾಟದ ಮೂಲಕ ಕಂಡುಕೊಳ್ಳ ಬಹುದು. ಹೀಗಾಗಿ, ಸದ್ಯಕ್ಕೆ ಆನ್‌ಲೈನ್ ಸ್ಟೋರೇಜ್ ವಿಚಾರವನ್ನು ಮುಗಿಸಿ ಈ ವಾರದಿಂದ ಇಂಟರ್ ನೆಟ್ ಲೋಕದ ಮತ್ತೊಂದು ಬಹುಮುಖ್ಯ ವಿಚಾರ ವಾಗಿರುವ ಬ್ಲಾಗ್ ಬಗ್ಗೆ ತಿಳಿದುಕೊಳ್ಳೋಣ.

ಈಗಾಗಲೇ ಇಂಟರ್‌ನೆಟ್ ಬಳಸುತ್ತಿ ರುವ ಜನರು ಆಗಾಗ ಬ್ಲಾಗ್ ಬಗ್ಗೆ ಮಾತ ನಾಡುತ್ತಿರುತ್ತಾರೆ. ನನ್ನದೂ ಒಂದು ಬ್ಲಾಗ್ ಇದೆ, ಅದರಲ್ಲಿ ನನ್ನ ಕವಿತೆ ಹಾಕಿದ್ದೇನೆ, ಫೋಟೊ ಹಾಕಿದ್ದೇನೆ, ಒಂದು ಲೇಖನ ಬರೆದಿದ್ದೇನೆ, ಒಂದು ವರದಿ ಪ್ರಕಟಿಸಿದ್ದೇನೆ ಎಂದೆಲ್ಲಾ ಹೇಳುತ್ತಿರುತ್ತಾರೆ. ಆದರೆ, ಅವರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ, ಬ್ಲಾಗ್ ಎಂದರೇನು ಎಂಬಿತ್ಯಾದಿ ವಿಚಾರ ಗಳು ಈಗತಾನೆ ಇಂಟರ್‌ನೆಟ್ ಲೋಕಕ್ಕೆ ಕಾಲಿಡು ತ್ತಿರುವ ಹೊಸಬರಿಗೆ ಅರ್ಥವೇ ಆಗುವುದಿಲ್ಲ. ಇತ್ತೀಚೆಗಂತೂ ಬ್ಲಾಗ್ ಬಳಕೆ ಹಿಂದೆಂದಿಗಿಂತಲೂ ಹೆಚ್ಚಾಗುತ್ತಿರುವುದರಿಂದ ಅದು ಇಂಟರ್‌ನೆಟ್ ಲೋಕದ ಮಹತ್ವಪೂರ್ಣ ಅಭಿವ್ಯಕ್ತಿ ಮಾಧ್ಯಮ ವಾಗಿ ಹೊರಹೊಮ್ಮುತ್ತಿದೆ. ಹೀಗಾಗಿ, ಈ ವಾರ ಬ್ಲಾಗ್‌ನ ಸ್ಥೂಲ ಪರಿಚಯ ಮಾಡಿಕೊಳ್ಳೋಣ.

ನಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಗೊಳಿಸು ವುದಕ್ಕೆ ಹತ್ತು ಹಲವು ರೀತಿಯ ದಾರಿಗಳನ್ನು ಕಂಡು ಕೊಳ್ಳುತ್ತೇವೆ. ಕೆಲವರು ಕಥೆ-ಕವನಗಳನ್ನು ಬರೆಯು ತ್ತಾರೆ. ಕೆಲವರು ಸುಮ್ಮನೇ ತಮಗನ್ನಿಸಿದ್ದನ್ನು ಒಂದು ಬರಹದ ರೂಪಕ್ಕಿಳಿಸುತ್ತಾರೆ. ಇನ್ನು ಕೆಲವರು ತಾವು ಭೇಟಿ ಕೊಟ್ಟ ಅಪರೂಪದ ಪ್ರದೇಶ, ಪ್ರವಾಸಿ ತಾಣ, ಚಾರಿತ್ರಿಕ ಸ್ಥಳಗಳ ಬಗ್ಗೆ ಬರೆಯುತ್ತಾರೆ. ಕೆಲವರು ತಮ್ಮ ಜೀವನದಲ್ಲಿ ಅಪರೂಪಕ್ಕೆ ಭೇಟಿಯಾದ ಮಹತ್ವಪೂರ್ಣ ವ್ಯಕ್ತಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಬರೆಯುತ್ತಾರೆ. ಕೆಲವರಿಗೆ ತಮ್ಮ ಜೀವನದಲ್ಲಿ ಘಟಿ ಸಿದ ಬಹಳ ಮುಖ್ಯವಾದ ತಿರುವು ಘಟನೆಗಳ ಬಗ್ಗೆ ಬರೆದು ದಾಖಲಿಸಿಟ್ಟುಕೊಳುತ್ತಾರೆ. ಕೆಲವರು ತಮ್ಮ ಜೀವನದ ಅತ್ಯಮೂಲ್ಯ ಅನುಭವಗಳನ್ನು ಬರೆದಿಡು ತ್ತಾರೆ. ಚಿತ್ರಕಲಾಕಾರರಾದರೆ ತಮ್ಮ ಭಾವನೆಗಳನ್ನು ಕಾರ್ಟೂನ್ ರೂಪದಲ್ಲೋ, ರೇಖಾಚಿತ್ರಗಳ ರೂಪ ದಲ್ಲೋ ಅಥವಾ ಪೆಯಿಂಟಿಂಗ್ ರೂಪದಲ್ಲೋ ಅಭಿವ್ಯಕ್ತಿಗೊಳಿಸಿ ಇಟ್ಟುಕೊಂಡಿರುತ್ತಾರೆ. ಹೀಗೆ ಹಲವು ರೀತಿಯ ಜನ ಹಲವು ಕಲಾ ಪ್ರಕಾರಗಳನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಕಂಡುಕೊಂಡಿರು ತ್ತಾರೆ. ಅವರಲ್ಲಿ ಬಹುತೇಕರು ತಾವು ಅಭಿವ್ಯಕ್ತಿ ಗೊಳಿಸಿದ ಈ ಕಲಾಕೃತಿಗಳು ಯಾವುದಾದರೂ ಪತ್ರಿಕೆಗಳಲ್ಲೋ, ಮ್ಯಾಗಜಿನ್‌ಗಳಲ್ಲೋ, ಅಥವ ಪುಸ್ತಕ ರೂಪದಲ್ಲೋ ಪ್ರಕಟವಾಗಬೇಕೆಂದು ಹಂಬಲಿಸುಮದೂ ಉಂಟು. ಆ ಮೂಲಕ ತನ ಗಾದ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳು ವುದಕ್ಕೆ ಇಷ್ಟಪಡುತ್ತಾರೆ. ಅವು ಪ್ರಕಟವಾದರೆ ಏನೋ ತನ್ನ ಕಲಾಕೃತಿಯನ್ನು, ಅನುಭವಗಳನ್ನು ಇತರರೊಂದಿಗೆ ಹಂಚಿಕೊಂಡ ತೃಪ್ತ ಭಾವ ಹೊಂದುತ್ತಾರೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಹಲವಾರು ಕಾರಣಗಳಿಗಾಗಿ ಎಲ್ಲರ ಕಲಾಕೃತಿಗಳು, ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲ. ನೀವು ಸೃಷ್ಟಿಸಿದ ಕೃತಿ ಪತ್ರಿಕೆ ಸಂಪಾದಕರಿಗೆ ಇಷ್ಟವಾಗದೇ ಹೋಗಬಹುದು, ಪತ್ರಿಕೆಗಳಲ್ಲಿ ಜಾಗವಿರದಿರಬಹುದು- ಹೀಗೆ ಹಲವು ಕಾರಣಗಳಿಂದಾಗಿ ನಿಮ್ಮ ಕಲಾಕೃತಿ ಪತ್ರಿಕೆಗಳಲ್ಲಿ ಅಥವಾ ಇನ್ನಿತರ ಮಾಧ್ಯಮಗಳಲ್ಲಿ ಅಥವಾ ಪುಸ್ತಕ ರೂಪದಲ್ಲಿ ಪ್ರಕಟವಾಗದೇ ಕೇವಲ ನಿಮ್ಮ ಮನೆ ಮತ್ತು ಸೀಮಿತ ಸ್ನೇಹಿತರ ವಲಯಕ್ಕಷ್ಟೇ ಸೀಮಿತವಾಗಿಬಿಡುತ್ತವೆ. ಅಂಥ ಸಂದರ್ಭದಲ್ಲಿ ಬ್ಲಾಗ್‌ಗಳು ನಿಮ್ಮ ಸಹಾಯಕ್ಕೆ ಬರುತ್ತವೆ.

ಅಲ್ಲದೇ, ಸಣ್ಣಪುಟ್ಟ ಸಂಘ ಸಂಸ್ಥೆಗಳನ್ನು ನಡೆಸು ವವರು ಅಥವಾ ಸಂಘಟನೆಗಳನ್ನು ಕಟ್ಟಿಕೊಂಡು ಸಾಮಾಜಿಕ ಸುಧಾರಣೆಗಾಗಿ ಹೋರಾಟ ಮಾಡುವವರು ತಮ್ಮ ಸಂಘ ಸಂಸ್ಥೆಯ ಧ್ಯೇಯೋ ದ್ದೇಶಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಹತ್ತು ಹಲವು ವಿಧಾನಗಳನ್ನು ಬಳಸುತ್ತಾರೆ. ಅವುಗಳಲ್ಲಿ ಪತ್ರಿಕೆ, ಟೀವಿ, ಪುಸ್ತಕ, ಕರಪತ್ರ-ಮುಂತಾದವು ಗಳೂ ಉಂಟು. ಅದರ ಜೊತೆಗೆ ಇತ್ತೀಚೆಗೆ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಲೋಕ ವಿಸ್ತಾರವಾಗುತ್ತಾ ಹೋದಂತೆ ಈ ಉದ್ದೇಶಗಳಿ ಗಾಗಿ ಬ್ಲಾಗ್‌ಗಳನ್ನೂ ಬಳಸಿಕೊಳ್ಳುವ ಪರಿಪಾಠ ಬೆಳೆಯುತ್ತಿದೆ. ಒಂದೊಂದು ಸಂಘಸಂಸ್ಥೆಯೂ ತನ್ನದೇ ಆದ ಬ್ಲಾಗ್ ರೂಪಿಸಿಕೊಂಡು ಅದರಲ್ಲಿ ತನ್ನ ಧ್ಯೇಯೋದ್ದೇಶಗಳನ್ನು, ತಾನು ನಡೆಸಿರುವ ಸಾಮಾಜಿಕ ಚಟುವಟಿಕೆಗಳ ವರದಿಗಳನ್ನು, ಅಪ ರೂಪದ ಫೋಟೊಗಳನ್ನು, ವಿವಿಧ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವಿಚಾರಗಳಿಗೆ ಸಂಬಂಧಪಟ್ಟ ಲೇಖನಗಳನ್ನು ಪ್ರಕಟಿಸುತ್ತಾರೆ.

ಹಾಗಾದರೆ ಬ್ಲಾಗ್ ಎಂದರೇನು? ಬಹಳ ಸಿಂಪಲ್ಲಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಬ್ಲಾಗ್ ಕೂಡ ಒಂದು ರೀತಿಯಲ್ಲಿ ವೆಬ್‌ಸೈಟ್. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳು, ಮಾಧ್ಯಮ ಸಂಸ್ಥೆಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಸರಕಾರಿ ಇಲಾಖೆಗಳು- ಮುಂತಾದ ಸಂಘಟಿತ ಸಂಸ್ಥೆಗಳು ತಮ್ಮ ಧ್ಯೇಯೋದ್ದೇಶ, ಉತ್ಫನ್ನ, ಸೇವೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ತಮ್ಮದೇ ಆದ ವೆಬ್‌ಸೈಟುಗಳನ್ನು ಹೊಂದಿರುತ್ತಾರೆ. ಅದಕ್ಕಾಗಿ ಬಹಳಷ್ಟು ಆನ್‌ಲೈನ್ ಸ್ಥಳಾವಕಾಶ ಬೇಕಾಗಿರುವುದರಿಂದ ಅದನ್ನು ವರ್ಷಕ್ಕೆ ಇಂತಿಷ್ಟು ಅಂತ ದುಡ್ಡು ಕೊಟ್ಟು ಕೊಂಡುಕೊಂಡಿರುತ್ತಾರೆ. ಆದರೆ, ಬ್ಲಾಗ್ ಗಳಿಗೆ ಅಷ್ಟೊಂದು ಸ್ಥಳಾವಕಾಶದ ಅವಶ್ಯಕತೆಯಿಲ್ಲ ವಾದ್ದರಿಂದ ಹಲವಾರು ಕಂಪೆನಿಗಳು ಉಚಿತವಾಗಿ ಆನ್‌ಲೈನ್ ಸ್ಥಳಾವಕಾಶವನ್ನು ನೀಡುತ್ತಿವೆ. ಯಾರು ಬೇಕಾದರೂ ಅಂಥ ಅವಕಾಶವನ್ನು ಬಳಸಿ ಕೊಂಡು ತಮ್ಮದೇ ಆದ ಬ್ಲಾಗ್ ತೆರೆದು ಕೊಂಡು ಅದರಲ್ಲಿ ತಮ್ಮ ಕಲಾಕೃತಿಗಳನ್ನು, ಸಾಹಿತ್ಯ ಸೃಷ್ಟಿಗಳನ್ನು, ಫೋಟೊಗಳನ್ನು, ಅನುಭವಗಳನ್ನು, ಅಭಿಪ್ರಾಯಗಳನ್ನು, ಬರಹ ಗಳನ್ನು ಪ್ರಕಟಿಸಬಹುದು. ಇದನ್ನು ವೈಯುಕ್ತಿಕ ಆನ್‌ಲೈನ್ ಡೈರಿ ಎಂತಲೂ ಬೇಕಾದರೆ ಕರೆಯಬಹುದು, ನಿಮ್ಮ ವೈಯುಕ್ತಿಕ ವೆಬ್ ಸೈಟ್ ಅಂತ ಬೇಕಾದರೆ ಕರೆಯಬಹುದು. ಪುಸ್ತಕ ರೂಪದಲ್ಲಿರುವ ಪಾರಂಪರಿಕ ಡೈರಿಯಾದರೆ ಅದರಲ್ಲಿ ನಾವು ಬರೆದಿರುವ ವಿಚಾರಗಳು ಕೇವಲ ನಮಗೆ ಅಥವಾ ನಮಗೆ ತೀರಾ ಹತ್ತಿರದ ಸೀಮಿತ ಜನರಿಗೆ ಮಾತ್ರವೇ ಓದುವುದಕ್ಕೆ ಲಭ್ಯವಿರುತ್ತವೆ. ಬ್ಲಾಗ್ ಎಂಬುದು ಓಪನ್ ಆನ್‌ಲೈನ್ ಡೈರಿ. ಅದನ್ನು ವಿಶ್ವದ ಯಾವುದೇ ಮೂಲೆಯಲ್ಲಿರುವ ಯಾವುದೇ ವ್ಯಕ್ತಿ ಬೇಕಾದರೂ ಓದಬಹುದು. ಹೀಗಾಗಿ, ಬ್ಲಾಗ್‌ನಲ್ಲಿ ಎಂಥ ವಿಚಾರಗಳನ್ನು ಬರೆದು ಪ್ರಕಟಿಸಬೇಕು ಎಂಬುದನ್ನು ಬಹು ಎಚ್ಚರಿಕೆಯಿಂದ ನಿರ್ಧರಿಸಬೇಕು. ನಿಮ್ಮ ಜೀವನದ ತೀರಾ ಖಾಸU ಮತ್ತು ಗೌಪ್ಯ ವಿಚಾರಗಳನ್ನು ಬರೆಯುವುದನ್ನು ಆದಷ್ಟು ತಪ್ಪಿಸ ಬೇಕು. ಪರಿಚಿತರಿರಲಿ ಅಥವ ಅಪರಿಚಿತರಿರಲಿ, ಸ್ನೇಹಿತರಿರಲಿ ಅಥವ ಶತ್ರುಗಳಿರಲಿ - ಯಾರು ಬೇಕಾದರೂ ಓದಿಕೊಂಡರೂ ಏನೂ ತೊಂದರೆಯಿಲ್ಲ ಅನ್ನುವಂಥ ವಿಚಾರಗಳನ್ನು ಮಾತ್ರವೇ ಬ್ಲಾಗ್‌ನಲ್ಲಿ ಪ್ರಕಟಿಸುವುದು ಉತ್ತಮ.

ಬ್ಲಾಗ್ ರಚನೆಗಾಗಿ ಉಚಿತ ಆನ್‌ಲೈನ್ ಸ್ಥಳಾವಕಾಶ ಒದಗಿಸುವ ಕಂಪೆನಿಗಳು ಯಾವುದು ಹಾಗೂ ಬ್ಲಾಗ್‌ಗಳನ್ನು ತೆರೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Thursday, October 8, 2009

ಲಾಟರಿ

-ಟಿ. ಎಸ್. ಗೊರವರ

ಗೌಡರ ಮನೆಯ ಪಡಸಾಲೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದ ರಂಗಜ್ಜ ಕನಸುಗಳ ಲೋಕದಲ್ಲಿ ವಿಹರಿಸತೊಡಗಿದ್ದ. ಟಿ.ವಿ.ಯಲ್ಲಿ ಮೂಡಿಬರುತ್ತಿದ್ದ ಜಾಹೀರಾತು ಅವನನ್ನು ವಾಸ್ತವ ಲೋಕದಿಂದ ಕನಸುಗಳ ಜಗತ್ತಿಗೆ ಕೈ ಹಿಡಿದು ಕರೆದುಕೊಂಡು ಹೋಗಿತ್ತು.
ಆ ಜಾಹೀರಾತಿನಲ್ಲಿ ಗುಡಿಸಲ ಮನೆಯ ಬಡವನಿಗೆ ಕೋಟಿ ರೂಪಾಯಿಯ ಬಂಪರ್ ಲಾಟರಿ ಹೊಡೆದು, ಅವ ಮಹಡಿ ಮನೆ ಕಟ್ಟಿಸುತ್ತಾನೆ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾನೆ. ಈ ರಂಜನೀಯ ಜಾಹೀರಾತನ್ನು ಕಣ್ಣ ತುಂಬಾ ತುಂಬಿಕೊಂಡು ರಂಗಜ್ಜ ಮನೆ ಕಡೆ ಮುಖ ಮಾಡುತ್ತಾನೆ.

ರಂಗಜ್ಜ ಗುಡಿಸಲಿಗೆ ಬಂದಾಗ ಆಗಲೇ ರಾತ್ರಿ ಒಂಬತ್ತಾಗಿತ್ತು. ಅಡ್ಡಗೋಡೆಯ ಮೇಲಿಟ್ಟಿದ್ದ ಬುಡ್ಡಿ ಚಿಮಣಿ ಹೊಗೆಯಿಂದ ಅಲುಗಾಡತೊಡಗಿತ್ತು. ಮಗಳು ಹನುಮಿ ಒಲೆ ಊದುತ್ತಿರುವ ಸದ್ದು ಕೇಳಿ, ‘ಕಟ್ಟಿಗೆ ಹಸಿ ಅದಾವನು. ಗುಡಿಸಲ ತುಂಬಾ ಹೊಗಿ ಅಡರಿ ಕುಂದ್ರುಸ್ಯ ಕೊಡಾವಲ್ದು. ಸ್ವಲ್ಪ ಚಿಮಣಿ ಎಣ್ಣಿ ಹಾಕಿ ಒಲಿ ಹಚ್ಚು’ ಅಂದ.

ಹನುಮಿ ಒಲಿಯೊಳಗ ಕಟ್ಟಿಗೆ ತುರುಕುತ್ತಾ, ಹೆಂಚಿನಲ್ಲಿ ಬೇಯಿಸುತ್ತಿದ್ದ ರೊಟ್ಟಿಯನ್ನು ತಿರುವಿ ಹಾಕಿ, ಗುಡಿಸಲ ತುಂಬಾ ದಟ್ಟವಾಗಿ ಕವಿದಿದ್ದ ಹೊಗೆಯಿಂದಾಗ ಕಣ್ಣಲ್ಲಿ ತೆಳ್ಳಗೆ ಆಡುತ್ತಿದ್ದ ನೀರನ್ನು ಸೆರಗಿನ ಚುಂಗಿನಿಂದ ಒರೆಸಿಕೊಳ್ಳುತ್ತಾ, ‘ಚಿಮಣಿ ಎಣ್ಣೆ ಆಗೈತಿ. ಕಟಗಿ ನೋಡಿದರ ಹಸಿ ಆದಾವು. ರೊಟ್ಟಿ ಮಾಡೋದರಾಗ ಜೀವ ಸಣ್ಣ ಆಕ್ಕೆತಿ. ನಾಳೆ ಎಮ್ಮಿ ಮೇಸಿಕೊಂಡು ನೀನು ಬರುವಾಗ ಅಲ್ಲೇ ಗೌಡರ ಹೊಲದಾಗ ಒಂದು ಹೊರಿ ಒಣ ಕಟಗಿ ತಗೊಂಡು ಬಾ...’ ಅಂತ ಹನುಮಿ ಒಂದು ಕೇಳಿದರ ಒಂಬತ್ತು ಹೇಳಿದಳು.

“ಇನ್ನೊಂದು ವರ್ಷವೊಪ್ಪತ್ತು ಹ್ಯಾಂಗರ ಮಾಡು, ಕೊಟ್ಟ ಮನಿಗೆ ಹೋಗಿ ಅಂತ. ದೇವರು ನಮ್ಮ ಪಾಲಿಗೆ ಅದಾನು.”
“ಅಲ್ಲೋ ಎಪ್ಪಾ. ಒಂದು ಹೊತ್ತಿಗೇ ತಿನ್ನಾಕ ಸರಿಯಾಗಿ ಕೂಳಿಲ್ಲ. ಇನ್ನ ಮದುವಿ ಹ್ಯಾಂಗ ಮಾಡುಸ್ತೀ.”

“ಮಗಳ ನೀನೇನು ಹೆದರಬೇಡವ. ನಿನ್ನೆ ಗೌಡರ ಮನಿಗೆ ಹೋಗಿದ್ನಲ ಅಲ್ಲಿ ಟಿ.ವಿ. ನೋಡಿದೆ. ಅದರಾಗ ಲಾಟರಿ ಲಕ್ಷ್ಮಿ ಒಲಿದು ಬಡುವ ಮನುಷ್ಯ ಮಹಡಿ ಕಟ್ಟಿಸಿದ. ನಾನೂ ನಾಳೆ ಲಾಟರಿ ತಗೊಂತಿನಿ. ಆ ಲಾಟರಿ ಲಕ್ಷ್ಮಿ ನನಗೂ ಒಲಿದ ಒಲಿತಾಳ. ಅದರಾಗ ನಿನ್ನ ಮದುವಿ ಮಾಡುತಿನಿ”. ಅಂತ ರಂಗಜ್ಜ ಲಾಟರಿ ಹೊಡೆದವನಂತೆ ಬಹು ಹಿಗ್ಗಿನಿಂದ ನುಡಿದ.

“ಅಪ್ಪ, ನಾವು ದುಡಿದಿದ್ದ ನಮಗೆ ಇಲ್ಲ. ಇನ್ನು ಲಾಟರಿ ಹೊಡೆಯುತ್ತ ಅನ್ನೋದು ಕನಸಿನ ಮಾತು. ಎಮ್ಮೆ ಹೈನ ಸರಿಯಾಗಿ ಮಾಡಿಕೊಂಡು ಹಾಲು, ಮೊಸರು ಮಾರಿ ನಾಲ್ಕು ಕಾಸು ಉಳಿಸೋಣಂತ” ಹೀಗೆ ಹನುಮಿ ತನ್ನ ಎದೆಯಾಗಿನ ತಳಮಳವನ್ನು ರಂಗಜ್ಜನ ಮುಂದೆ ಇಡಿಯಾಗಿ ಸುರುವಿದಳು.

“ನಿನಗೆ ತಿಳಿಯಾಕಿಲ್ಲ. ಮಳ್ಳ ಪಡಿಸೆಂಟು ನೀನು. ಸುಮ್ನೆ ರೊಟ್ಟಿ ತಾ. ಹಸಿ ಮೆಣಸಿನಕಾಯಿ ಹಿಂಡಿ ಇದ್ರ ತಟಗು ಹಚ್ಚು” ಎಂದು ಹನುಮಿಯ ಮಾತಿಗೆ ಕ್ಯಾರೆ ಅನ್ನದೆ ಗಾಳಿಗೆ ತೂರಿದ. ಆಕೆ ಬುಡ್ಡಿ ಚಿಮಣಿಯ ಬತ್ತಿ ಏರಿಸ ರಂಗಜ್ಜನಿಗೆ ರೊಟ್ಟಿ ಹಚ್ಚಿ ಕೊಟ್ಟಳು.

ರಂಗಜ್ಜ ರೊಟ್ಟಿ ತಿಂದು, ಎಮ್ಮೆಗೆ ಮೇವು ಹಾಕಿ ಅಂಗಳದಲ್ಲಿ ಚಾಪೆ ಹಾಸಿ ಮುಗಿಲ ಕಡೆ ಮುಖ ಮಾಡಿ ಮಲಗಿದ. ಆಕಾಶದಲ್ಲಿ ಚುಕ್ಕಿ ಚಂದ್ರಮರ ರಾಸಲೀಲೆ ನಡೆದಿತ್ತು. ತಣ್ಣಗೆ ಗಾಳಿ ಚಾಮರ ಬೀಸತೊಡಗಿತ್ತು. ರಂಗಜ್ಜನ ಕಣ್ಣ ತುಂಬಾ ಕನಸುಗಳ ಮೆರವಣಿಗೆ ನಡೆದಿತ್ತು.

ಗುಡಿಸಲ ಒಳಗೆ ಮಲಗಿದ್ದ ಹನುಮಿ ಪದೆ ಪದೆ ಮಗ್ಗುಲ ಬದಲಿಸತೊಡಗಿದ್ದಳು. ಅದು ಹರೆಯದ ಹೆಣ್ಣೆಂಗಸು. ಅವಳ ವಾರಿಗೆಯ ಗೆಳತಿಯರು ಆಗಲೇ ಮದುವೆಯಾಗಿ ಮಕ್ಕಳನ್ನೂ ಕಂಡಿದ್ದಾರೆ. ಅವರು ಯುಗಾದಿ ಹಬ್ಬಕ್ಕೋ, ಪಂಚಮಿ ಹಬ್ಬಕ್ಕೊ ಊರಿಗೆ ಬಂದಾಗ ಅವರನ್ನು ನೋಡಿದ ಹನುಮಿಯ ಹೊಕ್ಕುಳದಾಳದಲ್ಲಿ ಚಿಟಮುಳ್ಳು ಆಡಿಸಿದಂತಾಗುತ್ತದೆ. ‘ನನ್ನ ಹಣೆಬರಹದಾಗ ಲಗ್ನ ಆಗೋದು ಬರದಿದ್ದಂಗಿಲ್ಲ..’ ಅಂತ ಅದೆಷ್ಟೋ ಸಲ ಪೇಚಾಡಿದ್ದಾಳೆ.

ಈ ಕಡೆ ರಂಗಜ್ಜನಿಗೆ ಕನಸಿನಲ್ಲಿ ಲಾಟರಿ ದೇವತೆ ಒಲಿದು ಹರ್ಷದ ಶಿಖರದ ತುತ್ತ ತುದಿಯಲ್ಲಿ ನಿಂತಿದ್ದಾನೆ. ಗುಡಿಸಲು ಮಾಯವಾಗಿ ಅಲ್ಲಿ ಬಣ್ಣದ ಮನೆ ತಲೆಯೆತ್ತಿ ನಿಂತಿದೆ. ಮಗಳ ಮದುವೆಯಲ್ಲಿ ಹೊಸ ಮಲ್ಲು ದೋತಿ ಉಟ್ಟು ಸಂಭ್ರಮದಿಂದ ಓಡಾಡುತ್ತಿದ್ದಾನೆ. ಇನ್ನೇನು ಮಗಳಿಗೆ ಅಕ್ಕಿ ಕಾಳು ಹಾಕಬೇಕು ಅನ್ನುವಷ್ಟರಲ್ಲಿ ನಿದ್ರಾದೇವತೆ ರಂಗಜ್ಜನೊಂದಿಗೆ ಮುನಿಸಿಕೊಂಡವಳಂತೆ ಓಟ ಕೀಳುತ್ತಾಳೆ.

ಮಂದಹಾಸ ಬೀರುತ್ತಾ ಎದ್ದ ರಂಗಜ್ಜ ಮಗಳಿಗೆ ಎಮ್ಮೆ ಹಾಲು ಹಿಂಡಲು ಅವಸರಿಸಿದ. ಆಕೆ ಚಮತು ಮಾಡಿ ಎಲ್ಡು ಸಿಲವಾರ ತಂಬಿಗೆ ತುಂಬಾ ಹಾಲು ಕರೆದಳು. ಹಾಲು ತೆಗೆದುಕೊಂಡು ನಿತ್ಯವೂ ಕೊಡುವ ಮನೆಗಳಿಗೆ ಹಾಲು ಹಾಕಿ,“ಈ ವಾರ ಮುಂಗಾಡನ ರೊಕ್ಕ ಕೊಡ್ರೀ. ಮನಾಗ ಮುಕ್ಕು ಜ್ವಾಳದ ಕಾಳಿಲ್ಲ. ಸಂತಿ ಮಾಡಬೇಕು. ಕಿರಾಣಿ ಅಂಗಡಿ ಬಾಕಿ ಹರೀಬೇಕು” ಅಂತ ಬುರುಡಿ ಬಿಟ್ಟ. ಅವರು ಹಾಲು ತೆಗೆದುಕೊಂಡು ರಂಗಜ್ಜನ ಆಣತಿಯಂತೆ ದುಡ್ಡು ಕೊಟ್ಟರು.

ರಂಗಜ್ಜ ಖುಷಿಯಿಂದ ಊರಗಲ ಮುಖ ಮಾಡಿಕೊಂಡು ಮನೆಗೆ ಬಂದ. ಹನುಮಿ ಯಾರದೊ ಹೊಲದಲ್ಲಿ ಕಳೆ ತೆಗೆಯಲು ಹೋಗಲು ಬುತ್ತಿ ಕಟ್ಟತೊಡಗಿದ್ದಳು. “ನೀನು ಹೊಲಕ್ಕ ಹೋಗು. ನಾನು ಪಟ್ಟಣಕ್ಕೆ ಹೋಗಿ ಲಾಟರಿ ತಗೊಂಡು ಬರ‍್ತೀನಿ. ಇಳಿ ಹೊತ್ತಿನ್ಯಾಗ ಒಂದೆರಡು ತಾಸು ಎಮ್ಮಿ ಮೇಸ್ತಿನಂತ. ಅಲ್ಲೇ ಬರುವಾಗ ತಲಿಮ್ಯಾಗ ಒಂದು ಹೊರಿ ಹಸೆ ಮೇವು ಹೊತುಗೊಂಡು ಬಾ” ಅಂದ.

‘ಅಪ್ಪ ನಿನಗ ತಿಳಿಯಾಕಿಲ್ಲ. ಆ ಲಾಟರಿ ಗಿಟರಿ ನಂಬಬ್ಯಾಡ. ಅವು ಮೋಸದಾಟ. ಕುಡಗೋಲು ಕುಂಬಳಕಾಯಿ ಎರಡು ನಿನ್ನ ಕೈಯಾಗ ಅದಾವು. ಹ್ಯಾಂಗ ಮಾಡ್ತಿಯೋ ಏನೋ. ನಿನ್ನ ಚಿತ್ತಕ್ಕ ಬಿಟ್ಟಿದ್ದು’ ಎಂದು ಆಕಿ ಹೊಲದ ಕಡೆ ಹೆಜ್ಜೆ ಬೆಳೆಸಿದಳು.

ಅವಳ ಮಾತಿಗೆ ಕ್ಯಾರೆ ಅನ್ನದ ರಂಗಜ್ಜ ಪಟ್ಟಣಕ್ಕೆ ಹೋಗಲು ಚಹಾದ ಅಂಗಡಿ ಮುಂದ ನಿಂತಿದ್ದ ಕೆಂಪು ಬಸ್ಸು ಹತ್ತಿದ. ಇಂವ ಪಟ್ಟಣಕ್ಕೆ ಹೋಗುವುದು ಕೆಲವರಿಗೆ ಅಚ್ಚರಿಯೆನಿಸಿತು. ಮನಬಿಚ್ಚಿ ಕೇಳಿಯೂ ಬಿಟ್ಟರು. ಸಂತೆ ಮಾಡಲು ಎಂದು ಹೇಳಿ ಗುಟ್ಟನ್ನು ಬಿಟ್ಟು ಕೊಡಲಿಲ್ಲ.

ರಂಗಜ್ಜ ಪಟ್ಟಣಕ್ಕೆ ಬಂದಾಗ ಬಿಸಿಲಿನ ಜಳ ರಣರಣ ಹೊಡೆಯತೊಡಗಿತ್ತು. ಪಟ್ಟಣದ ಬಜಾರು ಟಾರು ರಸ್ತೆಯ ತುಂಬಾ ಜನವೋ ಜನ. ಇವರೆಲ್ಲರೂ ಲಾಟರಿಕೊಳ್ಳಲು ಬಂದಿರಬೇಕೆಂದು ಊಹಿಸಿದ. ಲಾಟರಿ ಟಿಕೇಟು ಆಗಿ ಬಿಟ್ಟಾವು ಎಂಬ ಭಯದಿಂದ ಲಾಟರಿ ಅಂಗಡಿ ಹುಡುಕಲು ಸನ್ನದ್ಧಗೊಂಡ.

ಲಾಟರಿ ಮಾರುವ ಟ್ಯಾಕ್ಸಿ ಗಾಡಿಯೊಂದು ಮೈಕಿನಲ್ಲಿ ಅನೌನ್ಸು ಮಾಡುತ್ತ ರಂಗಜ್ಜನ ಕಡೆಗೇ ಬಂತು. ‘ಬಂಪರ್ ಲಾಟರಿ. ಇಂದೇ ಡ್ರಾ. ಹತ್ತು ರೂಪಾಯಿ ಟಿಕೇಟಿಗೆ ಒಂದು ಲಕ್ಷ. ಐವತ್ತು ರೂಪಾಯಿಗೆ ಒಂದು ಕೋಟಿ ರೂಪಾಯಿ ಡ್ರಾ ಇದೆ. ಅದೃಷ್ಟದ ಲಕ್ಷ್ಮೀ ನಿಮಗೆ ಒಲಿಯಲಿದ್ದಾಳೆ. ಖರೀದಿಸಿ. ಮರೆಯದೆ ಟಿಕೇಟಿನ ಜೊತೆಗೆ ಶ್ಯಾಂಪೂ ಪಡೆಯಿರಿ.’ ಎಂದು ಆ ಮೈಕು ಪಟ್ಟಣದ ಕಿವಿಯಲ್ಲಿ ಕೂಗತೊಡಗಿತ್ತು.

ರಂಗಜ್ಜ ಉತ್ತೇಜನಗೊಂಡ. ಲಾಟರಿ ಹೊಡೆದವನಂತೆ ಖುಷಿಗೊಂಡ. ಒಳ ಜೇಬಿನಿಂದ ಅರವತ್ತು ರೂಪಾಯಿ ತೆಗೆದು ಹತ್ತು ಮತ್ತು ಐವತ್ತು ರೂಪಾಯಿಯ ತಲಾ ಒಂದೊಂದು ಟಿಕೇಟು, ಎರಡು ಶ್ಯಾಂಪೂ ಪಾಕೇಟ್ ಪಡೆದುಕೊಂಡು ಹಿಗ್ಗಿನಿಂದ ಊರ ಕಡೆ ನಡೆದ.

ರಾತ್ರಿ ಗುಡಿಸಲದಲ್ಲಿ ಹನುಮಿ ಸೆಟಗೊಂಡು, ಆ ಎಲ್ಲ ಸಿಟ್ಟನ್ನು ಅರೆಯುತ್ತಿದ್ದ ಹಿಂಡಿಯ ಮೇಲೆ ತೀರಿಸಿಕೊಳ್ಳತೊಡಗಿದ್ದಳು. ‘ಹನುಮವ್ವ ನೋಡಿಲ್ಲಿ. ಟಿಕೇಟಿನ ಸಂಗಡ ಶ್ಯಾಂಪೂ ಕೊಟ್ಟಾರ. ಇವು ಮಲ್ಲಗಿ ಹೂವಿನಂಗ ಘಮ ಘಮ ಅಂತಾವಂತೆ. ಇನ್ನ ಲಾಟರಿಯಂತೂ ನನಗ ಹೊಡೆದ ಹೊಡೆಯುತ್ತಾ...’ಅಂತ ರಂಗಜ್ಜ ಅವಳ ಕೋಪವನ್ನು ಆರಿಸಲು ನೋಡಿದ.

ಹನುಮಿ ಖುಷಿಯಾಗಿ ಚೆಂಡು ಹೂವಿನಂತೆ ಮುಖ ಅರಳಿಸಿದಳು. ಅವಳು ಟಿ.ವಿ.ಯಲ್ಲಿ ಶ್ಯಾಂಪೂ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದ ಉದ್ದ ಕೇಶರಾಶಿಯ ಚೆಲುವೆಯರನ್ನು ಕಂಡು ಮತ್ಸರ ಪಟ್ಟಿದ್ದಳು. ಸಕ್ಕರಿ, ಚಾಪುಡಿ ತರಲು ಶೆಟ್ಟರ ಕಿರಾಣಿ ಅಂಗಡಿಗೆ ಹೋದಾಗ ಅಲ್ಲಿ ಇಳಿಬಿಟ್ಟಿದ್ದ ಶ್ಯಾಂಪೂ ಚೀಟುಗಳನ್ನು ನೋಡಿದ್ದಳು. ಆದರೆ ತರಲು ಅದ್ಯಾಕೋ ಹಿಂಜರಿಕೆ ಅನಿಸಿ ಶ್ಯಾಂಪೂ ತರುವುದಕ್ಕೆ ಎಳ್ಳುನೀರು ಬಿಟ್ಟಿದ್ದಳು. ಈಗ ತಾನು ಶ್ಯಾಂಪೂ ಹಚ್ಚಿಕೊಳ್ಳುವ ಭಾಗ್ಯವನ್ನು ಈ ಲಾಟರಿ ಕರುಣಿಸುತ್ತಿರುವುದನ್ನು ಸ್ವಾಗತಿಸಿದಳು. ಶ್ಯಾಂಪೂವಿನ ಘಮಕ್ಕೆ ಮನಸೋತ ಅವಳ ಮನಸಿನ ಹೊಲದ ತುಂಬಾ ಕನಸಿನ ಸಸಿಗಳು ಮೊಳಯತೊಡಗಿದ್ದವು.

ಇವತ್ತು ಎಂದಿಗಿಂತ ಬೇಗನೆ ಎದ್ದು ಕಸ ಮುಸುರೆ ಮಾಡಿದ ಹನುಮಿ ಜಳಕ ಮಾಡಲು ಒಲೆಯ ಮೇಲೆ ಗಡಗಿಯಲ್ಲಿ ನೀರು ಕಾಯಿಸಲು ಇಟ್ಟಳು. ಅವಳಿಗೆ ಶ್ಯಾಂಪೂ ಹಚ್ಚಿಕೊಳ್ಳುವ, ಅದರ ಘಮ ಸವಿಯುವ ಕುತೂಹಲ ಒಳಗೊಳಗೆ ಹೆಡೆಯಾಡತೊಡಗಿತ್ತು.
ನಿನ್ನೆ ಕೊಂಡಿರುವ ಲಾಟರಿ ಕತೆ ಏನಾಗಿದೆ ಅನ್ನುವುದನ್ನು ಮನಗಾಣಲು ರಂಗಜ್ಜ ಪತ್ರಿಕೆ ನೋಡಲು ಚಹಾದಂಗಡಿ ಕಡೆ ಹೋಗಲು ಮುಂದಾದ. ಹನುಮಿ ತಲೆಗೆ ನೀರು ಹನಿಸಿಕೊಂಡು ಅಂಗೈಯಲ್ಲಿ ಶ್ಯಾಂಪೂ ಹಾಕಿಕೊಂಡು ಕೂದಲಿಗೆ ಸವರಿದಾಗ ಏಳುವ ನೊರೆಯಾದ ಬುರುಗು ಅವಳನ್ನು ಆಹ್ಲಾದಗೊಳಿಸಿತ್ತು. ಅದ್ಯಾಕೊ ಎದುರು ಮನೆಯ ದನ ಕಾಯುವ ಸುಬ್ಬ ನೆನಪಾದ. ಅವಳು ಮೈ ತುಂಬಾ ಮಾದಕತೆ ತುಂಬಿಕೊಂಡು ಮಧುರ ಯಾತನೆಯಿಂದ ನರಳತೊಡಗಿದಳು. ಮೊದಲ ಮಳೆಗೆ ಸಿಕ್ಕ ಮಣ್ಣಿನ ಹೆಂಟೆಯಂತೆ ಅರಳತೊಡಗಿದಳು. ‘ಆ’ ಭಾಗ್ಯ ತನಗೆ ಅದ್ಯಾವಗ ಒಲಿಯುವುದೊ ಎಂದು ಮನಸಲ್ಲಿ ಮಂಡಿಗೆ ತಿನ್ನುತ್ತಾ ವಿರಹ ವೇದನೆಯಿಂದ ಬಳಲತೊಡಗಿದಳು.

ರಂಗಜ್ಜ, ಪಂಚಾಯಿತಿ ಸಿಪಾಯಿ ಸಂಗನಿಗೆ ಲಾಟರಿಕೊಟ್ಟು ಪತ್ರಿಕೆಯಲ್ಲಿ ತನ್ನ ನಂಬರು ಹತ್ತಿರುವುದನ್ನು ಖಾತ್ರಿ ಮಾಡಿಕೊಳ್ಳಲು ನೋಡಿದ. ಚಹಾದಂಗಡಿಯಲ್ಲಿ ನೆರೆದಿದ್ದ ಜನರೆಲ್ಲರೂ ಕುತೂಹಲದಿಂದ ಅದನ್ನೆ ದಿಟ್ಟಿಸತೊಡಗಿದ್ದರು. ಸಂಗ ಹುಡುಕಿ ನೋಡಿದ. ಆ ನಂಬರ್ ಎಲ್ಲೂ ಕಾಣುತ್ತಿಲ್ಲ. ರಂಗಜ್ಜ ಪೇಚು ಮಾರಿ ಹಾಕಿಕೊಂಡು ಗುಡಿಸಲು ಕಡೆ ಹೆಜ್ಜೆ ಕಿತ್ತ.

ರಂಗಜ್ಜ ಹಾಲು ಮಾರಿದ ಹಣವನ್ನು ನೀರಿನಂತೆ ಲಾಟರಿಗೆ ಖರ್ಚು ಮಾಡತೊಡಗಿದ. ಲಾಟರಿ ಲಕ್ಷ್ಮೀ ಇನ್ನೂ ಇವನಿಗೆ ಒಲಿದಿಲ್ಲ. ರಂಗಜ್ಜ ಮಾತ್ರ ನಿತ್ಯವೂ ಪ್ಯಾಟೆಗೆ ಹೋಗಿ ಲಾಟರಿ ತರುವುದನ್ನು ವ್ರತದಂತೆ ಪಾಲಿಸತೊಡಗಿದ. ಹನುಮಿ ತಪ್ಪದೆ ದಿನವೂ ಶ್ಯಾಂಪೂ ಹಚ್ಚಿಕೊಂಡು ಜಳಕ ಮಾಡುತ್ತಾಳೆ. ತಲೆಗೆ ಹನಿಸಿಕೊಂಡಾಗ ಬೀಳುತ್ತಿದ್ದ ನೀರಲ್ಲಿ ಸಣ್ಣಗೆ ಜಿನುಗುತ್ತಿದ್ದ ಅವಳ ಕಣ್ಣೀರು ಯಾರಿಗೂ ಕಾಣದೆ ಹೋದವು.

Sunday, September 6, 2009

ಉಡುಪಿ: ಆಡು ಸಾಕಣೆಗೊಂದು ಮಾದರಿ: ‘ನಡೂರು ಆಡು ಸಾಕಾಣಿಕಾ ಕೇಂದ್ರ’

ಚಿತ್ರ-ವರದಿ: ಬಿ.ಬಿ.ಶೆಟ್ಟಿಗಾರ್‌, ಉಡುಪಿನಾಡಿನ ಮಾಂಸಾಹಾರ ಪ್ರಿಯರ ಬೇಡಿಕೆಗಳನ್ನು ಪೂರೈಸಲು ಇಂದು ಗ್ರಾಮ ಗ್ರಾಮಗಳ ಲ್ಲೊಂದರಂತೆ ‘ಕೋಳಿ ಫಾರ್ಮ್’ಗಳು ಕಂಡು ಬಂದರೂ ಬಹುಬೇಡಿಕೆಯಲ್ಲಿರುವ ಅಡಿನ ಮಾಂಸಗಳಿಗಾಗಿ ಉತ್ತಮ ಗುಣಮಟ್ಟದ ಆರೋಗ್ಯಕರ ಆಡುಗಳು ಲಭಿಸುವುದು ದುರ್ಲಭ. ಇವುಗಳನ್ನು ಸಾಂಪ್ರದಾಯಿಕವಾಗಿ ನೊಂದಾಯಿಸಿಕೊಳ್ಳದ ಮೂಲಗಳಿಂದಲೇ ಪಡೆಯ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಆಡು ಸಾಕಾಣಿಕ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಮೂಡಿಸುವಲ್ಲಿ ‘ನಡೂರು ಆಡು ಸಾಕಾಣಿಕಾ ಕೇಂದ್ರ’ (ನಡೂರು ಗೋಟ್ ಫಾರ್ಮ್) ಕಳೆದ ಐದು ವರ್ಷಗಳಿಂದ ಸದ್ದಿಲ್ಲದೇ ಶ್ರಮಿಸುತ್ತಿದೆ.ಉಡುಪಿಯಿಂದ ಉತ್ತರಕ್ಕೆ 29 ಕಿ.ಮೀ. ದೂರದಲ್ಲಿ ಹಾಗೂ ಬ್ರಹ್ಮಾವರದಿಂದ 12 ಕಿ.ಮೀ. ದೂರದಲ್ಲಿ ಬಾರಕೂರು-ಕೂರಾಡಿ ರಸ್ತೆಯಲ್ಲಿರುವ ಅತ್ಯಂತ ಗ್ರಾಮೀಣ ಪ್ರದೇಶವಾದ ನಡೂರಿನ 65 ಎಕರೆ ವಿಶಾಲ ಪ್ರದೇಶದಲ್ಲಿ ಈ ಆಡು ಸಾಕಾಣಿಕಾ ಕೇಂದ್ರವಿದೆ. ಸುಮಾರು ಒಂದು ಲಕ್ಷ ಚದರ ಅಡಿ ವಿಶಾಲ ಸ್ಥಳಾವಕಾಶವಿರುವ ನಾಲ್ಕು ಬೃಹತ್ ಕೊಟ್ಟಿಗೆಗಳಲ್ಲಿ ಧಾರಾಳವಾಗಿ ಬರುವ ಶುದ್ಧ ಗಾಳಿ-ಬೆಳಕಿನ ಪರಿಸರದಲ್ಲಿ ಸದ್ಯಕ್ಕೆ ೨,೫೦೦ಕ್ಕೂ ಅಧಿಕ ಆಡುಗಳನ್ನು ವೈಜ್ಞಾನಿಕ ರೀತಿಯಲ್ಲಿ ಇಲ್ಲಿ ಬೆಳೆಸಲಾಗುತ್ತಿದೆ.೨೦೦೨ರ ಸುಮಾರಿಗೆ ಆಡುಗಳನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಬೆಳೆಸುವ ಕನಸುಗಳೊಂದಿಗೆ ಮುಂಬಯಿಯಿಂದ ನಡೂರಿಗೆ ಬಂದ ಜಯಕರ ಕೈರನ್ನ (೬೯) ಇಂದು ಕನಸುಗಳೆಲ್ಲಾ ನನಸಾದ ತೃಪ್ತಿಯನ್ನು ಹೊಂದಿದ್ದಾರೆ. ೧೯೫೮ರಿಂದ ಮುಂಬಯಿಯಲ್ಲಿದ್ದ ಮೂಲತ: ಕಾಪುವಿನವರಾದ ಜಯಕರ ಕೈರನ್ನ, ೨೦೦೪ರಲ್ಲಿ ಮುಂಬಯಿ ತೊರೆದು ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ತೊಡಗಿಸಿಕೊಂಡರು. ೧೨೦ ಆಡುಗಳೊಂದಿಗೆ ಆರಂಭಗೊಂಡ ಈ ಫಾರ್ಮ್ ಇಂದು ಕೋಟ್ಯಾಂತರ ರೂ.ವಹಿವಾಟಿನ ಕೇಂದ್ರವಾಗಿ ಬೆಳೆದು ನಿಂತಿದೆ. ಇಂದು ಅವರ ಇಬ್ಬರು ಮಕ್ಕಳಾದ ಸ್ಟಿಫನ್ ಕೈರನ್ನ ಹಾಗೂ ಸಿಡ್ನಿ ಕೈರನ್ನ ಉದ್ದಮಿಯಲ್ಲಿ ಅವರಿಗೆ ಸಹಕರಿಸುತ್ತಿದ್ದಾರೆ.ನಡೂರು ಫಾರ್ಮ್‌ನಲ್ಲಿ ಆಡುಗಳನ್ನು ಕ್ರಾಂತಿಕಾರಿ ಮಾದರಿಯಲ್ಲಿ ಕೊಟ್ಟಿಗೆಯಲ್ಲಿ ಮೇಯಿಸಿ ಇವುಗಳನ್ನು ಸಾಕಲಾಗುತ್ತಿದೆ. ಇಂದು ಆಡು ಸಾಕಾಣಿಕೆಯನ್ನು ಒಂದು ಉದ್ದಿಮೆಯಾಗಿ ಪರಿಗಣಿಸಲಾಗುತಿದ್ದು, ಈ ಮಾದರಿಯ ಸಾಕಾಣಿಕೆಗೆ ಅನೇಕ ಪಶುಪಾಲಕರ ಪ್ರೋತ್ಸಾ ಹವೂ ದೊರೆತಿದೆ ಎಂದವರು ಹೇಳುತ್ತಾರೆ.ನಡೂರು ಫಾರ್ಮ್‌ನಲ್ಲಿ ಇಂದು ದೇಶ-ವಿದೇಶಗಳ ೨೦ಕ್ಕೂ ಅಧಿಕ ತಳಿಗಳಿವೆ. ಅವುಗಳನ್ನು ವಂಶಾಭಿವೃದ್ಧಿಗೆ ಹಾಗೂ ಮಾಂಸಕ್ಕಾಗಿ ಉಪಯೋಗಿಸಲಾಗುತ್ತಿದೆ. ಇಲ್ಲಿನ ಆಡುಗಳಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಾತ್ರವಲ್ಲದೇ, ಜರ್ಮನಿ ಹಾಗೂ ಕೊಲ್ಲಿ ರಾಷ್ಟ್ರಗಳಿಂದಲೂ ಬೇಡಿಕೆಗಳು ಬರುತ್ತಿವೆ. ಮುಂದಿನ ಬಕ್ರೀದ್ ಹಬ್ಬಕ್ಕಾಗಿ ೫೦೦ ಆಡುಗಳನ್ನು ಪೂರೈಸಲು ಈಗಾಗಲೇ ಬೇಡಿಕೆ ಬಂದಿದೆ ಎಂದು ಜಯಕರ ಕೈರನ್ನ ಹೇಳುತ್ತಾರೆ.ಕರ್ನಾಟಕದ ಜನರಿಗಾಗಿ ಇಲ್ಲೇ ಆಡುಗಳನ್ನು ಬೆಳೆಸುವುದು ಈ ಕೇಂದ್ರದ ವೈಶಿಷ್ಯವಾಗಿದೆ. ರಾಜ್ಯದ ಎಲ್ಲಾ ೨೯ ಜಿಲ್ಲೆಗಳಲ್ಲೂ ಸಣ್ಣ ಪ್ರಮಾಣದ ಆಡು ಸಾಕಾಣಿಕಾ ಕೇಂದ್ರಗಳನ್ನು ಸ್ಥಾಪಿಸಲು ಸಹಕರಿಸುವುದು ಈ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಸ್ಟಿಫನ್ ಮತ್ತು ಸಿಡ್ನಿ ಕೈರನ್ನ ಹೇಳುತ್ತಾರೆ.ಈ ಕೇಂದ್ರದಲ್ಲಿ ಆಡುಗಳನ್ನು ಕ್ರಮಬದ್ಧವಾಗಿ ಹಾಗೂ ಶುಚಿಕರ ವಾತಾವರಣದಲ್ಲಿ ಸಾಕಲಾಗುತ್ತದೆ. ನಿಯತಕಾಲಿಕ ಆರೋಗ್ಯ ತಪಾಸಣೆ ಹಾಗೂ ಮುಂಜಾಗ್ರತಾ ಲಸಿಕೆಗಳಿಂದ ಆಡುಗಳನ್ನು ಆರೋಗ್ಯಕರ ಹಾಗೂ ರೋಗರಹಿತ ಸ್ಥಿತಿಯಲ್ಲಿ ಕಾಪಾಡಲಾಗುತ್ತದೆ. ಆಡುಗಳಿಗೆ ಬೇಕಾಗುವ ಮೇವನ್ನು ಕೇಂದ್ರದಲ್ಲೇ ಬೆಳೆದು ಒದಗಿಸಲಾಗುತ್ತದೆ. ಆಡುಗಳಿಗೆ ಪ್ರೋಟೀನುಯುಕ್ತ ಹಾಗೂ ಪೌಷ್ಠಿಕಾಂಶಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತದೆ ಎಂದು ಜಯಕರ ಕೈರನ್ನ ವಿವರಿಸುತ್ತಾರೆ.ಆಡುಗಳಲ್ಲಿ ಗಂಡು ಆಡು -ಹೋತ-ಗಳಿಗೆ ಬೇಡಿಕೆ ಹೆಚ್ಚು. ಇಲ್ಲಿನ ಹೋತಗಳಲ್ಲಿ ಕೆಲವು ೮೦ರಿಂದ ೧೦೫ ಕೆ.ಜಿಯವರೆಗೂ ತೂಗುತ್ತಿವೆ ಎಂದು ಕೈರನ್ನ ಹೆಮ್ಮೆಯಿಂದ ಹೇಳುತ್ತಾರೆ. ಹೆಣ್ಣು ಆಡೊಂದಕ್ಕೆ ಕನಿಷ್ಠ ನಾಲ್ಕು ಸಾವಿರ ರೂ. ದರವಿದ್ದರೆ, ಗಂಡು ಆಡಿನ ಕನಿಷ್ಠ ಬೆಲೆ ಹತ್ತು ಸಾವಿರ ರೂ. ಎಂದು ತಿಳಿಸಿದರು.ಆಡು ಸಾಕಾಣಿಕೆಯಲ್ಲಿ ಆಸಕ್ತಿ ಇರುವ ದೊಡ್ಡ, ಸಣ್ಣ ಹಾಗೂ ಅತೀಸಣ್ಣ ರೈತರಿಗೆ ಉತ್ತಮ ಗುಣಮಟ್ಟದ ಆಡುಗಳನ್ನು ಕೊಳ್ಳಲು ನಡೂರು ಆಡು ಸಾಕಾಣಿಕಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಯಕರ ಹೇಳುತ್ತಾರೆ. ಆಡು ಸಾಕಾಣಿಕೆಗೆ ಬೇಕಾದ ಸಲಹೆ-ತರಬೇತಿಯನ್ನು ಸ್ವಾನುಭವದಿಂದ ನಾವು ನೀಡುತ್ತೇವೆ ಎಂದರು. ಆಡು ಸಾಕಾಣಿಕೆಯ ಇತರ ಉತ್ಪನ್ನಗಳಾದ ಮಾಂಸ, ಹಾಲು, ಗೊಬ್ಬರ ಹಾಗೂ ಚೀಸ್ ಇವುಗಳ ಸಂಸ್ಕರಣೆಗೆ ಸಂಬಂಧಿತ ಘಟಕಗಳ ಸ್ಥಾಪನೆಗೆ ಸಹ ಅವಕಾಶಗಳಿವೆ ಎಂದವರು ವಿವರಿಸುತ್ತಾರೆ. ಆಡಿನ ಹಾಲು ಅತ್ಯುತ್ತಮ ಪೌಷ್ಠಿಕ ಆಹಾರ. ಇದು ಗಾಂಧೀಜಿಯವರ ಆಹಾರ ಕೂಡಾ ಆಗಿತ್ತು. ಸದ್ಯಕ್ಕೆ ಆರೋಗ್ಯಕರವಾದ ಆಡಿನ ಹಾಲನ್ನು ಈ ಫಾರ್ಮಿನಲ್ಲಿ ಬಳಸುತ್ತಿಲ್ಲ. ಅದನ್ನು ಸಂಪೂರ್ಣವಾಗಿ ಮರಿಗಳಿಗೆ ಕುಡಿಯಲು ಬಿಡಲಾಗುತ್ತಿದೆ. ಮುಂದೆ ಆಡಿನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಸ್ಥಾಪಿಸಿ ಜನರಿಗೆ ಅವುಗಳನ್ನು ಪರಿಚಯಿಸುವ ಯೋಜನೆಯೂ ಇದೆ ಎಂದು ಸ್ಟಿಫನ್ ಮತ್ತು ಸಿಡ್ನಿ ಹೇಳುತ್ತಾರೆ. ಈ ಫಾರ್ಮ್‌ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ -www.nadurgoatfarm.com- ಹಾಗೂ ಈಮೈಲ್- nadurgoatfarm@gmail.com- ಅನ್ನು ಸಂಪರ್ಕಿಸಬಹುದು.

Tuesday, July 28, 2009

ನಾಡಿಗೆ ಮಾದರಿಯಾದ ಪುತ್ತೂರು!

ವಾರ್ತಾಭಾರತಿ ಪತ್ರಿಕೆಯ ಸಂಪಾದಕೀಯದಿಂದ...

ಕರಾವಳಿಯ ಅತ್ಯಂತ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಪುತ್ತೂರಿನಿಂದ ಕನ್ನಡ ನಾಡಿಗೆ ನೆಮ್ಮದಿ, ಶಾಂತಿಯ ಸಂದೇಶವೊಂದು ಹೊರಟಿದೆ. ಪ್ರತಿಕಾರ, ಆಕ್ರೋಶಕ್ಕಿಂತ ದೊಡ್ಡದು ಸಹನೆ ಮತ್ತು ಕ್ಷಮೆ ಎನ್ನುವುದನ್ನು ಅಲ್ಲಿನವರು ನಾಡಿಗೆ ತೋರಿಸಿಕೊಟ್ಟಿದ್ದಾರೆ. ಮಂಗಳವಾರ ಮುಂಜಾನೆ ಪುತ್ತೂರಿನ ಎರಡು ಮಸೀದಿಗಳಿಗೆ ದುಷ್ಕರ್ಮಿಗಳು ಕೊಳೆತ ಮಾಂಸವನ್ನು ಎಸೆದು ಹೋಗಿದ್ದರು. ಇನ್ನೇನು ಪ್ರತಿಭಟನೆ, ಆಕ್ರೋಶ, ರಸ್ತೆ ತಡೆಯ ಮೂಲಕ ಗಲಭೆ ಸ್ಫೋಟಿಸಬೇಕು. ಆದರೆ ಅಂತಹದೇನೂ ಸಂಭವಿಸಲಿಲ್ಲ. ಪ್ರಾರ್ಥನಾ ಮಂದಿರದೊಳಗೆ ಮಾಂಸವನ್ನು ಎಸೆದ ಕೊಳೆತ ಮನಸ್ಸಿನ ಕುರಿತಂತೆ ಅನುಕಂಪವನ್ನು ವ್ಯಕ್ತಪಡಿಸಿದ ಪುತ್ತೂರಿನ ಜನತೆ ಮಸೀದಿಯನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿತು. ಬಳಿಕ, ದುಷ್ಕೃತ್ಯವನ್ನು ಎಸೆದ ದುಷ್ಕರ್ಮಿಗಳ ಮನಸ್ಸು ಶುಚಿಯಾಗಲಿ ಎಂದು ಧಾರ್ಮಿಕ ಗುರುಗಳು ಪ್ರಾರ್ಥನೆಯನ್ನು ಸಲ್ಲಿಸಿದರು. ದುಷ್ಕರ್ಮಿಗಳಿಗೆ ಇದಕ್ಕಿಂತ ಹೀನಾಯ ಮುಖಭಂಗ, ಅವಮಾನ ಇನ್ನೇನಿದೆ? ಮಂಗಳವಾರ ಮುಂಜಾನೆ ಗಲಭೆ, ದೊಂಬಿ ನಡೆಯುತ್ತದೆ ಎಂದು ಕಾಯುತ್ತಿದ್ದವರಿಗೆ, ಅಂಗಡಿ, ಮನೆಗಳನ್ನು ದೋಚಲು ಭರ್ಜರಿ ಸಿದ್ಧತೆಯಲ್ಲಿದ್ದವರಿಗೆ ದೊಡ್ಡ ನಿರಾಸೆ. ಮೂರು ದಿನಗಳ ಹಿಂದೆ ಮಂಗಳೂರಿನ ಮಸೀದಿಗೂ ದುಷ್ಕರ್ಮಿಗಳು ಹಂದಿಯನ್ನು ಎಸೆದಿದ್ದರು. ಅಲ್ಲಿಯ ಧರ್ಮಗುರುಗಳು ಮತ್ತು ಮುಖಂಡರೂ ಕೂಡ ಅನುಸರಿಸಿದ್ದುದು ಇದೇ ತಂತ್ರವನ್ನು. ಪರಿಣಾಮವಾಗಿ ದುಷ್ಕರ್ಮಿಗಳು ನಿರೀಕ್ಷಿಸಿದ ಯಾವ ಗಲಭೆಯೂ ಸಂಭವಿಸಲಿಲ್ಲ. ಮಂಗಳೂರನ್ನು ದೋಚಲು ಕಾದು ಕುಳಿತಿದ್ದ ಕ್ರಿಮಿನಲ್ ‘ಸಂಸ್ಕೃತಿ ರಕ್ಷಕ’ರಿಗೆ ಅಂದೂ ದೊಡ್ಡ ನಿರಾಸೆ. ಮಂಗಳೂರಿನಲ್ಲಿ ಘಟನೆ ನಡೆದ ಮುಂಜಾನೆ ಪಾಂಡೇಶ್ವರದ ಸಮೀಪ ಶಿವನ ವಿಗ್ರಹಕ್ಕೆ ಯಾರೋ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನ ಜನರೂ ಅಷ್ಟೇ ಸಹನೆಯನ್ನು ಕಾಯ್ದುಕೊಂಡಿದ್ದರು. ಬಳಿಕ, ವಿಗ್ರಹಕ್ಕೆ ಕಲ್ಲೆಸೆದಿರುವ ಕೆಲಸ, ಮಾನಸಿಕ ಅಸ್ವಸ್ಥನೊಬ್ಬನದು ಎನ್ನುವುದು ಬೆಳಕಿಗೆ ಬಂತು.(ಇನ್ನೊಂದು ಧರ್ಮವನ್ನು ಅವಮಾನಿಸುವ, ಮಸೀದಿ, ಮಂದಿರಗಳನ್ನು ಅಪವಿತ್ರಗೊಳಿಸುವವರು ಮಾನಸಿಕ ಅಸ್ವಸ್ಥರೇ ಆಗಿರುತ್ತಾರೆ. ಜೊತೆಗೆ ಕ್ರಿಮಿನಲ್‌ಗಳೂ ಆಗಿರುತ್ತಾರೆ.) ಘಟನೆಯನ್ನು ಮುಂದಿಟ್ಟು ಒಂದು ಗುಂಪು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸಿತ್ತಾದರೂ, ಶಿವನ ನಿಜವಾದ ಭಕ್ತರು ಅದಕ್ಕೆ ಆಸ್ಪದ ಕೊಡಲಿಲ್ಲ. ಪೊಲೀಸರೂ ಈ ಸಂದರ್ಭದಲ್ಲಿ ಜನರ ಮನವೊಲಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದರು.

ಮಸೀದಿಗೆ ಹಂದಿ ಮಾಂಸ ಎಸೆಯುವ ಅಥವಾ ಮಂದಿರದಲ್ಲಿ ದನದ ಮಾಂಸ ಎಸೆಯುವವನ ಗುರಿ ಮಸೀದಿ, ಮಂದಿರವನ್ನು ಅಪವಿತ್ರಗೊಳಿಸುವುದಾಗಿರುವುದಿಲ್ಲ. ಮಸೀದಿ, ಮಂದಿರದ ಮೂಲಕ ಸಮಾಜದ ಶಾಂತಿಯನ್ನು ಕೆಡಿಸುವುದು ಆತನ ಉದ್ದೇಶವಾಗಿರುತ್ತದೆ. ಆತನಿಗೆ ಕಲುಷಿತಗೊಳ್ಳಬೇಕಾದುದು ಸಮಾಜದ ಶಾಂತಿ. ಮಂದಿರ, ಮಸೀದಿಗಳಿರುವುದು ಆರೋಗ್ಯಕರ ಸಮಾಜಗಳನ್ನು ನಿರ್ಮಾಣ ಮಾಡುವುದಕ್ಕಾಗಿ. ಜನಸಾಮಾನ್ಯರ ನೆಮ್ಮದಿ ಮಸೀದಿ, ಮಂದಿರಗಳ ಗುರಿ. ಹೀಗಿರುವಾಗ, ದುಷ್ಕರ್ಮಿಗಳು ಮಂದಿರ, ಮಸೀದಿಗಳಿಗೆ ಕೆಡುಕನ್ನು ಎಸಗಿದಾಗ, ಅದಕ್ಕೆ ಅಷ್ಟೇ ತೀವ್ರ ಪ್ರತಿಕ್ರಿಯೆಯನ್ನು ವ್ಯಕ್ತಿ ಪಡಿಸಿ, ಧಾರ್ಮಿಕ ಮನುಷ್ಯರೂ ದುಷ್ಕರ್ಮಿಗಳ ಮಟ್ಟಕ್ಕಿಳಿಯುವುದು ಮಂದಿರ, ಮಸೀದಿಗಳಿಗೆ ಎಸಗುವ ಅಗೌರವವಾಗುತ್ತದೆ. ಮಾನಸಿಕವಾಗಿ ಅನಾರೋಗ್ಯಕ್ಕೀಡಾದ ವ್ಯಕ್ತಿಗಳು ಮಸೀದಿ, ಮಂದಿರಗಳಿಗೆ ಹಂದಿ, ದನದ ಮಾಂಸವನ್ನು ಎಸೆದಾಕ್ಷಣ ಅವು ಅಪವಿತ್ರಗೊಳ್ಳುತ್ತವೆ ಎನ್ನುವ ನಂಬಿಕೆಯೇ ಬಾಲಿಶವಾದುದು. ಅಪವಿತ್ರ ಮನಸ್ಸುಗಳನ್ನು, ಅಪವಿತ್ರ ಕೃತ್ಯಗಳನ್ನು ತನ್ನ ಬಾಹುಗಳೆಡೆಗೆ ತೆಗೆದುಕೊಂಡು ಅಂತಹ ವ್ಯಕ್ತಿಗಳನ್ನು ಶುಚೀಕರಿಸುವ ಕೆಲಸ ಮಸೀದಿ, ಮಂದಿರಗಳದು. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡ ಪರಿಣಾಮವಾಗಿ ಪುತ್ತೂರಿನ ಸಾರ್ವಜನಿಕರು ದುಷ್ಕರ್ಮಿಗಳನ್ನು, ಕ್ಷಮಿಸಿ, ಅವರು ಮಾನಸಿಕವಾಗಿ ಆರೋಗ್ಯವಂತರಾಗಲಿ ಎಂದು ಪ್ರಾರ್ಥಿಸಿದರು. ಅಷ್ಟೇ ಅಲ್ಲ, ಕನ್ನಡ ನಾಡಿಗೆ ಪುತ್ತೂರು ಮಾದರಿಯಾಯಿತು. ಚಿಂತಕರು, ಪ್ರಗತಿಪರರ ನೆಲೆಡಾದ ಮೈಸೂರಿಗೆ ಸಾಧ್ಯವಾಗದೇ ಇದ್ದುದು ಪುತ್ತೂರಿಗೆ ಸಾಧ್ಯವಾಯಿತು.

ಒಬ್ಬ ಮುಸಲ್ಮಾನ ಹಿಂದೂ ದೇವಾಲಯಕ್ಕೆ ಮಾಲಿನ್ಯವನ್ನು ಎಸೆಯಲು ಮುಂದಾದರೆ ಆತ ಆ ಮೂಲಕ ಮಲಿನಗೊಳಿಸುವುದು ತನ್ನದೇ ಧರ್ಮದ ಆದರ್ಶ, ಸಿದ್ಧಾಂತಗಳನ್ನು. ಹಾಗೆಯೇ ಒಬ್ಬ ಹಿಂದೂ ಎಂದು ಕರೆಸಿಕೊಂಡಾತ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ ಮಸೀದಿ, ಚರ್ಚುಗಳನ್ನು ಮಲಿನಗೊಳಿಸಲು ಮುಂದಾದರೆ ಆತ ಆ ಮೂಲಕ ಅಪವಿತ್ರಗೊಳಿಸುವುದು ತನ್ನದೇ ಧರ್ಮದ ಆದರ್ಶಗಳನ್ನು. ಇದನ್ನು ಅರಿತ ಯಾವ ಧರ್ಮೀಯರೂ ಇನ್ನೊಂದು ಧರ್ಮದ ಮಸೀದಿ, ಮಂದಿರಗಳನ್ನು ಅಪವಿತ್ರಗೊಳಿಸಲು ಮುಂದಾಗಿ ತಾವೇ ಸಣ್ಣವರಾಗಲು ಸಿದ್ಧರಾಗಲಾರರು. ಮೈಸೂರಿನಲ್ಲಿ ಇಂತಹ ಕೃತ್ಯಕ್ಕೆ ಇಳಿದು ಮುತಾಲಿಕರಂತಹ ನಾಯಕರು ತನ್ನ ಮಟ್ಟ ಯಾವುದು, ತಾನು ಯಾವ ಧರ್ಮವನ್ನು ಪ್ರತಿನಿಧಿಸುತ್ತೆದ್ದೇನೆ ಎನ್ನುವುದನ್ನು ಸಾಬೀತು ಪಡಿಸಿದರು. ಮಸೀದಿಗೆ ಹಂದಿಯ ತಲೆಯನ್ನು ಎಸೆದು ಆ ಮೂಲಕ ಸಮಾಜಕ್ಕೆ ಬೆಂಕಿ ಹಚ್ಚಲು ಹೊರಡುವ ಮುತಾಲಿಕ್ ಯಾವ ಕಾರಣಕ್ಕೂ ಹಿಂದೂ ಧರ್ಮವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ. ಆತನದು ಭಯೋತ್ಪಾದಕ ಧರ್ಮ. ಸಮಾಜ ವಿರೋಧಿ ಧರ್ಮ. ಆತ ಇರಬೇಕಾದುದು ಸಮಾಜದೊಳಗಲ್ಲ. ಜೈಲಿನೊಳಗೆ. ಹಾಗೆಯೇ ಮುಸ್ಲಿಮರು ಆತನ ಮೇಲೆ ಸೇಡು ತೀರಿಸಬೇಕಾಗಿಲ್ಲ. ಆತನ ಮಾನಸಿಕ ಆರೋಗ್ಯಕ್ಕಾಗಿ, ಮಲಿನಗೊಂಡ ಆತನ ಹೃದಯ ಶುಚಿಯಾಗುವುದಕ್ಕಾಗಿ ಪ್ರಾರ್ಥಿಸಿದರೆ ಸಾಕು.

ಇದೇ ಸಂದರ್ಭದಲ್ಲಿ ಜನರ ಶಾಂತಿ, ಸಂಯಮವನ್ನು ಕಂಡು ಪೊಲೀಸರು ತಮ್ಮ ಕರ್ತವ್ಯದಿಂದ ವಿಮುಖರಾಗಬಾರದು. ಹಂದಿ ಮಾಂಸ ಎಸೆದು ತಮ್ಮ ಕಾರ್ಯವನ್ನು ಸಾಧಿಸಲು ಸಾಧ್ಯವಾಗದ ಆಕ್ರೋಶದಲ್ಲಿ ದುಷ್ಕರ್ಮಿಗಳು, ಇನ್ನೊಂದು ಧರ್ಮವನ್ನು ಪ್ರಚೋದಿಸಲು ಇನ್ನಷ್ಟು ಅಪಾಯಕಾರಿ ಕೃತ್ಯಗಳಿಗೆ ಕೈಹಾಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಮಸೀದಿಗಳಿಗೆ ಮಾಂಸ ಎಸೆದು ಸಮಾಜದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಮುಂದಾದ ದುಷ್ಕರ್ಮಿಗಳನ್ನು ತಕ್ಷಣ ಪತ್ತೆ ಹಚ್ಚಬೇಕಾಗಿದೆ. ಕೇವಲ ಮಾಂಸ ಎಸೆದವನನ್ನಷ್ಟೇ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳದೆ, ಆತನಿಗೆ ಆ ಕೃತ್ಯಕ್ಕೆ ಪ್ರೇರಣೆ ನೀಡಿದವರನ್ನೂ ಕಂಡು ಹಿಡಿಯಬೇಕಾಗಿದೆ. ದುಷ್ಕರ್ಮಿಗಳ ಬೇರನ್ನು ಬುಡ ಸಮೇತ ಕಿತ್ತು ಹಾಕಬೇಕಾಗಿದೆ.

Friday, July 24, 2009

ಪಂಜರ ಮೀರುವ ಹೆಣ್ಣುಮಗಳ ಕಥೆ

-ಜ್ಯೋತಿ ಗುರುಪ್ರಸಾದ್‌

ಅವಳ ಹೆಸರು ಪೂರೋ.. ಪಂಜಾಬಿನ ತುಂಬಿದ ಕುಟುಂಬದ ಹೆಣ್ಣು ಮಗಳು. ಅವಳ ಕುಟುಂಬ ಭಾರತ-ಪಾಕಿಸ್ತಾನ ಎಂಬ ಗೆರೆಗಳ ಗಡಿಯ ವಿಭಜನೆ ಆಗುವ ಮೊದಲು ಭಾರತದ ನೆಲಕ್ಕೆ ಸೇರಿದ ಪಾಕಿಸ್ತಾನದಲ್ಲಿಯೇ ಇರುತ್ತದೆ. ಹಿಂದೂಸ್ಥಾನ-ಪಾಕಿಸ್ಥಾನ ಎಂಬ ವಿಭಾಗವಿಲ್ಲದೆ ಹಿಂದೂ-ಮುಸ್ಲಿಂ ಜನಾಂಗ ಭಾರತದಲ್ಲಿ ಜೀವಿಸುತ್ತಿದ್ದ ಸುಮಾರು ೧೯೪೬ರ ಸಂದರ್ಭ. ಪೂರೋ ಎಂಬ ಉತ್ಸಾಹದ ಬುಗ್ಗೆಯ ತರುಣಿಗೆ ಒಡ ಹುಟ್ಟಿದ ಪ್ರೀತಿಯ ಅಣ್ಣ, ಇಬ್ಬರು ತಂಗಿಯರು, ಪುಟ್ಟ ತಮ್ಮ ಜೊತೆಗೆ ಅಕ್ಕರೆಯ ಅಪ್ಪ ಅಮ್ಮ ಇರುತ್ತಾರೆ. ತಂದೆಗೆ ಸ್ವಲ್ಪ ಜಮೀನಿರುತ್ತದೆ. ಅಣ್ಣ ಹಳ್ಳಿ ಯಿಂದ ದೂರದೂರಿಗೆ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಬರಲು ಹೋಗುತ್ತಾನೆ. ಈ ನಡುವೆ ಮನೆಯಲ್ಲಿ ಪೂರೋಳನ್ನು ಕಂಡರೆ ಎಷ್ಟು ಆದರವಿರುತ್ತದೆಂದರೆ ಅಣ್ಣ ಕೇಳಿದರೆ ತಮ್ಮ ಜೇಬಿನಿಂದ ಹೆಚ್ಚು ಹಣ ತೆಗೆದು ಕೊಡದ ತಂದೆ ಪೂರೋಳಿಗೆ ಮಾತ್ರ ಯಾವ ಶಿಫಾರಸೂ ಇಲ್ಲದೆ ಕೊಟ್ಟು ಬಿಡುತ್ತಾರೆ! ಅದನ್ನು ಅವಳು ತನ್ನ ಮುದ್ದಿನ ಅಣ್ಣನಿಗಾಗಿ ಕೊಡುತ್ತಾಳೆ! ಹೀಗಿರುತ್ತದೆ ಮನೆಯಲ್ಲಿ ಅಣ್ಣ-ತಂಗಿಯರ ಬಾಂಧವ್ಯ ಹಾಗೂ ಮನೆಗೂ ಪೂರೋಗೂ ಇರುವ ನಂಟು. ಸದಾ ನಗು, ತಮಾಷೆ, ಹಬ್ಬದ ಸಂಭ್ರಮ. ಅವಳೇ ಮನೆಯ ದೊಡ್ಡ ಮಗಳು. ಒಬ್ಬ ಒಳ್ಳೆಯ ಮನೆತನದ ಜಮೀನುದಾರ ಕುಟುಂಬದ ಹುಡುಗನೊಡನೆ ಪೂರೋ ಮದುವೆ ನಿಶ್ಚಯವಾಗುತ್ತದೆ. ಹೆಣ್ಣು ಮಗಳಿಗೆ ಮದುವೆ ನಿಶ್ಚಯವಾಗುವುದೆಂದರೆ ಅದೂ ಆ ಕಾಲದಲ್ಲಿ ತುಂಬಾ ದೊಡ್ಡ ವಿಷಯವಲ್ಲವೇ?! ಆ ಹುಡುಗ ಎಷ್ಟು ಸೂಕ್ಷ್ಮ-ಒಳ್ಳೆಯವನೆಂದರೆ ವಾಲ್ಮೀಕಿ, ಕಾಳಿದಾಸ, ಮಿರ್ಜಾಗಾಲಿಬ್ ಎಲ್ಲರನ್ನೂ ಓದಿಕೊಂಡು ಅವರು ಮೂವರೂ ಅವರ ಒಳಿತಿನ ಚಿಂತನೆಯ ಕಾರಣದಿಂದ ಬೇರೆ ಬೇರೆ ಅಲ್ಲವೇ ಅಲ್ಲ- ಒಂದೇ ಎನ್ನುತ್ತಿರು ತ್ತಾನೆ. ಜಮೀನುದಾರನಾದರೂ ಮನುಷ್ಯ ಪರ ದನಿಯವನು. ಅವನ ಹೆಸರು ರಾಮಚಂದ್. ಅವನಿಗೊಬ್ಬಳು ಮುದ್ದು ತಂಗಿ. ಹೆಸರು ಲಾಜೋ. ಲಾಜೋಳನ್ನು ಪೂರೋಳ ಅಣ್ಣನಿಗೆ ಮದುವೆ ಮಾಡಿದರೆ ‘ಕೊಟ್ಟು-ತಂದು’ ಮಾಡುವ ಮದುವೆಯಿಂದ ಕುಟುಂಬ ಸುಖೀ ಯಾಗಿರುತ್ತದೆ ಎಂಬ ಭಾವನೆಯಿಂದ ಹಾಗೆಯೇ ನಿಶ್ಚಯವಾಗುತ್ತದೆ. ಪೂರೋ ಮತ್ತು ರಾಮಚಂದ್ ಒಬ್ಬರಿಗೊಬ್ಬರಿಗೆ ಇಷ್ಟವಾಗಿ ಮದುವೆಯ ಕನಸು ಕಾಣತೊಡಗು ತ್ತಾರೆ. ಈ ಕನಸು-ಈ ಸಂಭ್ರಮದ ನಡುವೆ ಒಬ್ಬ ವ್ಯಕ್ತಿಯ ಪ್ರವೇಶವಾಗುತ್ತದೆ. ಆತನ ಹೆಸರು ರಶೀದ್. ಪೂರೋಳನ್ನು ಆಗಾಗ ದಾರಿಯಲ್ಲಿ ಗಮನಿಸುತ್ತಿದ್ದ ರಶೀದ್‌ಗೆ ಅವಳ ಮುಗ್ಧ ಚೆಲುವು ಇಷ್ಟವಾಗಿ ಬಿಡುತ್ತದೆ. ಜೊತೆಗೆ ಪೂರೋ ಕುಟುಂಬ ಮೂಲದವರಿಂದ ಅವನ ಕುಟುಂಬಕ್ಕೆ ಅನ್ಯಾಯವಾಗಿರುತ್ತದೆ ಎಂಬ ಅಂಶ ಗೊತ್ತಿರುವ ರಶೀದ್ ಸೇಡು ತೀರಿಸಿ ಕೊಳ್ಳಲು ಇದೇ ಸಮಯವೆಂಬಂತೆ ಪುರೋ ಳನ್ನು ಒಂದು ದಿನ ತನ್ನ ಕುದುರೆಯ ಮೇಲೆ ಬಲವಂತವಾಗಿ ಎತ್ತಿ ಕೂರಿಸಿಕೊಂಡು ದೂರದ ತನ್ನೂರಿಗೆ ಹೊತ್ತೊಯ್ದು ಬಿಡುತ್ತಾನೆ. ಮನೆಯಲ್ಲಿ ಬಂಧಿಯಾಗಿಸಿಬಿಡುತ್ತಾನೆ. ಯಾಕೆ? ಏನು? ಎಂದು ಗೊತ್ತಿಲ್ಲದೆ ತಬ್ಬಿಬ್ಬಾಗುವ ಪೂರೋ ಎಂಬ ಮುಗ್ಧ ಹೆಣ್ಣು ಅನ್ನ-ನೀರು ಬಿಟ್ಟು ಕೊರಗ ಲಾರಂಭಿಸುತ್ತಾಳೆ. ರಶೀದ್ ಅವಳ ಮೇಲೆ ಬೇರೆ ಯಾವ ಬಲಾತ್ಕಾರ ಮಾಡದಿದ್ದರೂ ತನ್ನ ತುಂಬು ಕುಟುಂಬದಿಂದ ಥಟ್ಟನೆ ಕೊಂಡಿ ಕಳಚಿಕೊಂಡಂ ತಾದ ಪೂರೋ ದಿಕ್ಕೆಟ್ಟ ಅನಾಥ ಪ್ರಜ್ಞೆಯಿಂದ ವಿಲಿ ವಿಲಿ ಒದ್ದಾಡಿಬಿಡುತ್ತಾಳೆ. ಆದರೆ ಈಚೆ ಮದುವೆ ನಿಶ್ಚಯವಾದ ಹುಡುಗಿ ಪೂರೋ ಕಾಣೆಯಾಗಿ ಬಿಟ್ಟಳು ಎಂಬ ವಿಷಯವೇ ಪೂರೋ ತಂದೆ-ತಾಯಿಗೆ ದೊಡ್ಡ ಸಮಸ್ಯೆಯಾಗಿ ನುಂಗಲಾರದ ತುತ್ತಾಗಿ ಬಿಡುತ್ತದೆ. ರಾತ್ರಿ ಕಾಣೆಯಾಗಿ, ಯಾರೋ ಹೊತ್ತೊಯ್ದ ಪೂರೋ ತಮ್ಮ ಪಾಲಿಗೆ ಸತ್ತಳು, ಅವಳಿನ್ನು ಮದುವೆ ಯಾಗಲು ಯೋಗ್ಯಳಲ್ಲ, ತಮಗೆ ಅವಳಿಂದ ಇನ್ನೂ ಬರೀ ಕೆಟ್ಟ ಹೆಸರು ಎಂದಷ್ಟೇ ಸೀಮಿತ ವಾಗಿ ಯೋಚಿಸುತ್ತಾರೆಯೇ ವಿನಃ ಮಗಳು ಏನಾದಳೋ? ಜೋಪಾನವಾಗಿ ಬಂದು ಮನೆ ಸೇರಲಿ ದೇವರೇ.. ಎಂದು ವಿಹ್ವಲರಾಗಿ ಒಮ್ಮೆಯೂ ಆಲೋಚಿಸುವುದಿಲ್ಲ. ಎಲ್ಲಿ ಹೋಯಿತು ಈಗ ಮಗಳ ಮೇಲಿನ ಆ ಮೊದಲಿದ್ದ ಮಮಕಾರ?

ಒಂದು ರಾತ್ರಿ ಅವಳು ಇನ್ಯಾರೋ ಹೊತ್ತುಕೊಂಡು ಹೋದ ಎಂಬ ತಪ್ಪಿಗೆ, ತನ್ನದಲ್ಲದ ತಪ್ಪಿಗೆ ಮನೆಯಿಂದ ದೂರವಾದ ತಕ್ಷಣ ಸಂಬಂಧ ಕೆಡದೇ ಹೋಯಿತೇ?! ಅಯ್ಯೋ ಹೆಣ್ಣು ಜೀವದ ಪಾಡೇ ಎಂದು ಮರುಗುವಂತಾಗುತ್ತದೆ. ಅತ್ತ ಕಡೆ ರಶೀದ್‌ಗೆ ಪುರೋಳ ಸಂಕಟವನ್ನು ನೋಡಲಾಗದೆ, ಅವಳ ಸತ್ಯಾಗ್ರಹವನ್ನು ಎದುರಿಸಲಾಗದೆ ಕೆಲವು ದಿನಗಳ ನಂತರ ಪುರೋಳನ್ನು ಅವರ ಮನೆಗೇ ತಂದು ಬಿಟ್ಟು ತಾನು ಹೊರಗೆ ಏನಾಗುವುದೋ ಎಂದು ಗಮನಿಸಲು ನಿಲ್ಲುತ್ತಾನೆ. ಆಗುವುದೇನು? ಸೋತು-ಸೊರಗಿ ಮನೆ ಸೇರಲು ಬಂದು ರಾತ್ರಿ ಬಾಗಿಲು ತಟ್ಟಿದ ಆ ದುಃಖಿತೆಯನ್ನು ಅವಳ ತಂದೆ-ತಾಯಿ ಮುಲಾಜಿಲ್ಲದೆ ಅವಳು ತಮ್ಮ ಪಾಲಿಗೆ ಸತ್ತಳೆಂದು, ಅದೇ ತಮ್ಮ ಧರ್ಮವೆಂದು ಅವಳನ್ನು ಹೊರಗೆ ದೂಡಿ ಬಾಗಿಲು ಹಾಕಿಕೊಳ್ಳುತ್ತಾರೆ. ಹೊರಗೆ ಕಾಯುತ್ತಿದ್ದ ರಶೀದ್ ಮತ್ತೆ ಅವಳನ್ನೂ ತನ್ನ ಮನೆಗೇ ಕರೆದುಕೊಂಡು ಹೋಗಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿ ಅವಳೂ ಆ ಮನೆಯ ರೀತಿ-ರಿವಾಜು ಕಷ್ಟ ಸುಖಗಳಿಗೆ ಹೊಂದಿಕೊಂಡು ದುಃಖವನ್ನು ಮರೆಯುತ್ತ ಇರಲು ಕಲಿಯುತ್ತಾಳೆ. ಈ ಮಧ್ಯೆ ಅವಳ ಅಣ್ಣನ ಮದುವೆ ನಿಶ್ಚಯದಂತೆ ಅವನಿಚ್ಚೆಯಿಲ್ಲದೆಯೇ, ತಂಗಿಗಾಗಿ ಪರಿತಪಿಸುತ್ತಿರುವಾಗಲೇ ನಡೆದು ಹೋಗುತ್ತದೆ. ಪುರೋವನ್ನು ಮನೆಯಿಂದ ಹೊರಗೆ ಹಾಕುವಾಗ ಅವನು ಮನೆಯಲ್ಲಿರುವುದಿಲ್ಲ. ಈ ಸುದ್ದಿಯನ್ನು ದೊಡ್ಡವರು ಅವನಿಗೆ ತಿಳಿಸುವುದೂ ಇಲ್ಲ. ರಶೀದ್ ಪುರೋವನ್ನು ಹೊತ್ತೊಯ್ದದ್ದು ಎಂದು ತಿಳಿದಾಗ ಪುರೋ ಅಣ್ಣ ಅವನ ಗದ್ದೆಗೆ ಬೆಂಕಿಯಿಟ್ಟು ಬಿಡುತ್ತಾನೆ. ನೊಂದುಕೊಂಡ ರಶೀದ್ ತನ್ನಿಂದಲೇ ಇದೆಲ್ಲಾ ಆಗಿದ್ದು ಎಂದು ಕಣ್ಣೀರು ಸುರಿಸುತ್ತಾ ಸುಮ್ಮನಾಗಿ ಬಿಡುತ್ತಾನೆ. ಪುರೋ ಸಹವಾಸದಲ್ಲಿ ಅವನಿಗೆ ದಿನೇ ದಿನೇ ಪ್ರೀತಿಯ ಸಾಕ್ಷಾತ್ಕಾರವಾಗುತ್ತಿರುತ್ತದೆ. ೧೯೪೭ರ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ವಿಭಜನೆಯ ಕಾನೂನು ಬಂದು ಪಾಕಿಸ್ಥಾನದ ಹಿಂದೂಗಳೆಲ್ಲಾ ಹಿಂದೂಸ್ಥಾನಕ್ಕೆ ಹೋಗಬೇಕೆಂಬ ಸಂದರ್ಭದಲ್ಲಿ ಗಲಭೆ ಶುರುವಾಗಿ ಅತ್ಯಾಚಾರಗಳು ಶುರುವಾಗುತ್ತದೆ. ವಲಸೆ ಹೋಗುವ ಸಂದರ್ಭದಲ್ಲಿ ರಾಮಚಂದ್ ತಂಗಿ ಲಾಜೋಳನ್ನು ಒಬ್ಬ ಮುಸ್ಲಿಂ ಬಲಾತ್ಕಾರದಿಂದ ಹೊತ್ತೊಯ್ಯುತ್ತಾನೆ. ಆದರೆ ಪುರೋ ಮತ್ತು ರಶೀದ್ ಲಾಜೋಳನ್ನು ಶತ ಪ್ರಯತ್ನಮಾಡಿ ಉಪಾಯದಿಂದ ತಮ್ಮ ಮನೆಗೆ ರಕ್ಷಿಸಿ ಕರೆದುಕೊಂಡು ಬರುತ್ತಾರೆ. ಅವಳನ್ನು ತಂಗಿಯಂತೆ ಭಾವಿಸಿದ ರಶೀದ್ ಅವಳನ್ನು ಅವಳ ಮನೆ ಮುಟ್ಟಿಸುವುದಕ್ಕೆ ಹೋರಾಡುತ್ತಾ ವಲಸೆ ಕ್ಯಾಂಪ್‌ನಲ್ಲಿದ್ದ ಅವಳಣ್ಣ ರಾಮ್‌ಚಂದ್‌ನನ್ನು ಹುಡುಕಿ ತರುತ್ತಾನೆ. ರಾಮ್‌ಚಂದ್ ಕೂಡ ತಂಗಿಗಾಗಿ ಹಂಬಲಿಸಿ ಕಣ್ಣೀರಾಗುತ್ತಾನೆ. ಜೊತೆಯಲ್ಲಿ ಪುರೋ ಅಣ್ಣ ಕೂಡ ಇರುತ್ತಾನೆ. ಪುರೋ ಮತ್ತು ರಶೀದ್ ಲಾಜೋಳನ್ನು ರಾಮ್‌ಚಂದ್‌ಗೆ ಒಪ್ಪಿಸುವಾಗ ಪುರೋ ತನ್ನ ಅಣ್ಣನಿಗೆ “ಲಾಜೋಳನ್ನು ಯಾವ ಕಾರಣಕ್ಕೂ ಶಿಕ್ಷಿಸಬೇಡ. ಚೆನ್ನಾಗಿ ನೋಡಿಕೋ. ಅವಳು ನಿರಪರಾಧಿ” ಎನ್ನುತ್ತಾಳೆ. ಅವಳಣ್ಣ ಖಂಡಿತ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಕಣ್ಣೀರು ತುಂಬಿಕೊಂಡು “ನೀನೂ ಹಿಂದೂಸ್ಥಾನಕ್ಕೆ ಬಂದು ಬಿಡು. ರಾಮ್‌ಚಂದ್ ನಿನ್ನನ್ನು ಮದುವೆಯಾಗಲು ಕಾಯುತ್ತಿದ್ದಾನೆ ಅವನು ತುಂಬಾ ಒಳ್ಳೆಯವನು” ಎಂದು ಅಂಗಲಾಚುತ್ತಾನೆ. ಆದರೆ ಪುರೋ ರಶೀದ್‌ನ ಜೊತೆಗೆ ಹೋಗಿ ಹೇಳುವ ಮಾತು - “ಇನ್ನಿದೇ ನನ್ನ ಮನೆ, ನನ್ನ ಮನೆಯಿಂದ ನಾನು ದೂರಾಗುವುದಿಲ್ಲ. ಯಾವ ಹೆಣ್ಣು ತನ್ನ ಮನೆಯನ್ನು ಸುರಕ್ಷಿತವಾಗಿ ಸೇರುತ್ತಾಳೋ ಅವಳಲ್ಲೆಲ್ಲಾ ನನ್ನ ಆತ್ಮವಿರುತ್ತದೆ. ಲಾಜೋಳಲ್ಲಿ ನನ್ನ ಆತ್ಮವಿದೆ” ಎನ್ನುತ್ತಾ ರಶೀದ್ ಜೊತೆಗೆ ನಡೆಯುತ್ತಾಳೆ.

ಈ ಮನ ಮಿಡಿಯುವ ಕಥೆ ನನ್ನ ಪ್ರೀತಿಯ ಪಂಜಾಬೀ ಲೇಖಕಿ ಅಮೃತಾ ಪ್ರೀತಮ್ ಕಾದಂಬರಿ ‘ಪಿಂಜರ್’ ಎಂಬ ಪುಸ್ತಕದ್ದು. (ಪಿಂಜರ್ ಎಂದರೆ ಪಂಜರ. ಪಂಜರ ಮೀರುವ ಹೆಣ್ಣುಮಗಳ ಕಥೆಯಿದು.) ಇದು ಸುಂದರ ಹಿಂದಿ ಚಿತ್ರವಾಗಿ ಕೂಡ ರೂಪುಗೊಂಡು ನಿಜವಾದ ಪ್ರೀತಿಯ ಸಂಬಂಧಗಳು ಹೇಗಿರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ನನ್ನ ಕಣ್ಣು ಹನಿಗೂಡಿತು. ಯಾರು ಹಿಂದು? ಯಾರು ಮುಸ್ಲಿಂ? ಹೃದಯವಿರುವ ಹಾದಿಯಲ್ಲಿ ನಡೆಯುವುದಷ್ಟೇ ಧರ್ಮ. ಅಲ್ಲವೇ ಎಂದು ಆತ್ಮ ಪ್ರಶ್ನಿಸುತ್ತದೆ.

ಒಂದು ಕೊಳಲಿನ ಕಥೆ

-ಸರ್ಜಾಶಂಕರ ಹರಳಿಮಠ
ಮಾತಿಗೆ ನಿಲುಕದ ಭಾವನೆಗಳು ಕೊಳಲ ದನಿಯಲ್ಲಿ ಜೀವ ಪಡೆದು ಬರುವಾಗ.. ಶುಭ್ರ ನೀಲಾಕಾಶದಲ್ಲಿ ಎತ್ತ ನೋಡಿದರೂ ಹಕ್ಕಿ-ಪಕ್ಷಿಗಳ ಸುಳಿವಿಲ್ಲ. ತಮ್ಮ ಹೊಟ್ಟೆಪಾಡಿಗಾಗಿ ಈಗಾಗಲೇ ಗೂಡು ಬಿಟ್ಟಿರಬೇಕಾಗಿದ್ದ ಪಕ್ಷಿ ಸಂಕುಲ ಹೊರ ಬಂದಿಲ್ಲ. ಹಸಿರು ಹೊದಿಕೆಯನ್ನು ಹೊದ್ದ ಗಿಡ ಮರಬಳ್ಳಿಗಳು ತುಟಿಬಿಚ್ಚದೆ ಮೌನವಾಗಿ ಕಂಡೂ ಕಾಣದಂತೆ ನಿಟ್ಟುಸಿರುಬಿಡುತ್ತಿವೆ. ಈ ಮುಂಜಾನೆ ಜೋಗಿಗುಡ್ಡದ ನೆತ್ತಿಯಲ್ಲಿ ನಿಂತು ತನ್ನ ಕಿರಣಗಳ ದಂತ ಪಂಕ್ತಿಯನ್ನು ಹೊರಚೆಲ್ಲಿ ನಗುಮೊಗದಿಂದ ಶುಭೋದಯ ಹೇಳುವ ರವಿಯೇಕೆ ಕಂಬನಿ ತುಂಬಿದ ಮೋಡಗಳ ಹಿಂದೆ ಮುಖಮುಚ್ಚಿ ಮರೆಯಾಗುತ್ತಿದ್ದಾನೆ.

ಯಾವುದದು ದನಿ? ಆ ಕೊಳಲದನಿ?

ಯಾವುದೋ ಅವ್ಯಕ್ತ ನೋವಿಗೆ ಅಭಿವ್ಯಕ್ತಿ ಕೊಡುವ ಕೊಳಲ ಸ್ವರ? ಇಡೀ ಹರಳಿಮಠವನ್ನು ದುಗುಡದ ಅಂಚಿನಲ್ಲಿ ಮುಳುಗಿಸುವ, ಹೃದಯ ವನ್ನು ತಟ್ಟಿ ತಟ್ಟಿ ಆರ್ದ್ರಗೊಳಿಸಿ ಕರಗಿ ನೀರಾ ಗಿಸುವ ದನಿ? ಕ್ಷಣಕಾಲ ಕೊಳಲ ನಿನಾದದ ಮನ ಕಲಕುವ ಲಯಕ್ಕೆ ಮಾರುಹೋದ ವೆಂಕಟೇಶನಿಗೆ ಕೊಳಲಿನೊಂದಿಗೆ ಬೆಸೆದುಕೊಂಡ ಕುಂಬಾರ ಸುಬ್ಬಣ್ಣ ನೆನಪಾಗಿ ಯಾಕೆ ಹೀಗೆ ಬೆಳಬೆಳಗೆ ಕೊಳಲು ಬಾರಿಸುತ್ತಿದ್ದಾನೆ ಎಂದು ತಲೆಕೆರೆದು ಕೊಂಡ. ತಲೆಕೆರೆದುಕೊಂಡಾಗ ವೆಂಕಟೇಶನಿಗೆ ಸಿಕ್ಕ ಕಾರಣ ಆತನ ಮದುವೆಯ ಹಗರಣ.

ಕುಂಬಾರ ಸುಬ್ಬಣ್ಣ ನಮ್ಮೂರಿನ ಹಿರಿತಲೆ. ಒಣ ಗಿದ ನುಗ್ಗೇಕಾಯಿಯಂತಹ ದೇಹ, ಆಳಕ್ಕಿಳಿದ ಕಣ್ಣು, ಕುರುಚಲು ಗಡ್ಡ, ಕಾಲೆಂಬ ಎರಡು ಕಡ್ಡಿಗಳೊಂದಿಗೆ ಊರುಗೋಲಾಗಿ ಒಂದು ಕೋಲು, ಸ್ವಲ್ಪವೇ ಬಾಗಿದ ಬೆನ್ನು. ಯಾವಾಗಲೂ ಎಲೆಯಡಿಕೆ ಜಗಿಯುವ ಬೊಚ್ಚುಬಾಯಿ. ಇವು ಸುಬ್ಬಣ್ಣನ ಚಹರೆಗಳು. ತೋಳಿರದ ಕಪ್ಪು ಬನಿಯನ್ ಅಥವಾ ಅಂಗಿಯೊಂದಿಗೆ ಮಂಡಿಯ ತನಕ ಮಾತ್ರ ಪಂಚೆಯುಟ್ಟ ಒಂದೇ ಲಯದಲ್ಲಿ ಹೆಜ್ಜೆ ಹಾಕುವ ವ್ಯಕ್ತಿ. ಹರಳಿಮಠ, ಸಸಿತೋಟ, ನೀರುಳ್ಳಿ, ಗೆರಸ, ದೇವರಕೊಪ್ಪ, ಕಂಕಳೆ ಸುತ್ತಮುತ್ತ ಅಷ್ಟೇಕೆ ತೀರ್ಥಹಳ್ಳಿಯಲ್ಲಿ ಕಂಡರೂ ಕೂಡ ಅದು ಸುಬ್ಬಣ್ಣನೇ ಎಂದು ಸುಲಭವಾಗಿ ಗುರುತಿಸುವಷ್ಟು ಸುಬ್ಬಣ್ಣನದು ವಿಶಿಷ್ಟ ವ್ಯಕ್ತಿತ್ವ. ಸುಬ್ಬಣ್ಣನಿಗೆ ವಯಸ್ಸೆಷ್ಟು ಎಂದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಎಪ್ಪತ್ತೈದು ವರ್ಷ ವಯಸ್ಸಿನ ಯುವಕ ಹಿರಿಯಣ್ಣ ಭಟ್ಟರೇ ಸುಬ್ಬ ನನಗಿಂತ ಹಿರಿಯವ ಎಂದು ಸುಬ್ಬಣ್ಣನ ಮಾತು ಬಂದಾಗ ಹೇಳುವುದುಂಟು.

ಇಂತಹ ಕುಂಬಾರ ಸುಬ್ಬಣ್ಣನಿಗೆ ಮದುವೆಯಾ ಗುವ ಬಯಕೆ ಉಂಟಾಗಿದೆಯೆಂದು ಊರ ತುಂಬಾ ಸುದ್ದಿ ಹರಡಿ ಹಳೆತಲೆಗಳ ಬೊಚ್ಚು ಬಾಯಲ್ಲೂ ನಗೆಯುಕ್ಕಿ ಹೈಕಳುಗಳೆಲ್ಲ ರೋಮಾಂಚಿತರಾಗಿ ಸುಬ್ಬಣ್ಣನ ರಸಿಕತನದ ತೆವಲಿಗೆ ತಮ್ಮದೇ ಉಪ್ಪು ಖಾರ ಸೇರಿಸಿ ಮನ ರಂಜನೆ ಪಡೆಯಹತ್ತಿದ್ದು ಸ್ವಲ್ಪ ಸ್ವಾರಸ್ಯವೇ..!

ಸುಬ್ಬಣ್ಣನಿಗೆ ಮದುವೆಯ ಬಯಕೆಯಾಗಿದೆ ಎಂದರೆ ಅವರಿಗೆ ಮದುವೆಯಾಗಿಲ್ಲವೇ, ಮಕ್ಕಳಿ ಲ್ಲವೇ ಎಂಬ ಪ್ರಶ್ನೆ ಸಹಜ. ಸುಬ್ಬಣ್ಣನಿಗೆ ಒಂದಲ್ಲ ಎರಡು ಮದುವೆಯಾಗಿತ್ತು. ಮೊದಲ ಹೆಂಡತಿ ಎರಡು ಮೂರು ಮಕ್ಕಳಾಗಿ ಸುಬ್ಬಣ್ಣನಿಗೂ ಅವರಿಗೂ ಸರಿ ಬರದೇ ಅವರೆಲ್ಲಾ ಗಡಿಕಲ್ಲಿನ ಮಕ್ಕಿ ಮನೆಯಲ್ಲಿದ್ದಾರೆಂಬ ಸುದ್ದಿ ಊರವರಿಗೆ ಗೊತ್ತಿತ್ತೇ ವಿನಃ ಅವರ ಪರಿಚಯ ಯಾರಿಗೂ ಇರಲಿಲ್ಲ. ಸುಬ್ಬಣ್ಣನ ಎರಡನೆ ಹೆಂಡತಿ ರುಕ್ಕಕ್ಕ ಮಾತ್ರ ಸುಬ್ಬಣ್ಣನಷ್ಟೇ ಖ್ಯಾತಿ ಪಡೆದ ಹೆಂಗಸಾಗಿದ್ದಳು.

ರುಕ್ಕು ಮತ್ತು ಸುಬ್ಬಣ್ಣನ ಪ್ರೀತಿ ಆರಂಭವಾದದ್ದು ಸಾವ್ಕಾರ್ರ ಮನೆಯ ಅಡಿಕೆ ಗೊನೆ ಹೊರುವಾಗ. ಸಾವ್ಕಾರ್ರ ಮನೆಯ ಮೇಲಿನ ಬಾಲ್ತೋಟ, ಕೆಳಗಿನ ಬಾಲ್ತೋಟಗಳಿಗೆ ಗಾಡಿ ಹೋಗುವುದಿಲ್ಲವಾದ್ದ ರಿಂದ ಅಲ್ಲಿ ಕಿತ್ತ ಅಡಿಕೆಗೊನೆಗಳನ್ನು ತಲೆ ಹೊರೆ ಯಲ್ಲಿಯೇ ಒಬ್ಬರಿಂದ ಒಬ್ಬರಿಗೆ ಬದಲಾಯಿಸಿ ಕೊಳ್ಳುತ್ತಾ ಮನೆಗೆ ತರಬೇಕು.

ಗೊನೆ ತುಂಬಿದ ಬುಟ್ಟಿಯನ್ನು ಬದಲಾಯಿಸಿ ಕೊಳ್ಳುವಾಗ ಸುಬ್ಬಣ್ಣನಿಗೂ ರುಕ್ಕುವಿಗೂ ನಡುವೆ ಕೇವಲ ಕೂದಲೆಳೆಯ ಅಂತರ. ಒಬ್ಬರ ಉಸಿರು ಇನ್ನೊಬ್ಬರ ಉಸಿರಿನೊಂದಿಗೆ ಬೆರೆಯುವಷ್ಟು ಸನಿಹ. ರುಕ್ಕುವಿನ ಮಿನುಗುವ ಕಣ್ಣುಗಳು, ಅಡಿಕೆಯ ಹಿಂಗಾರದಂತೆ ನಳನಳಿಸುವ ಮುಖ, ಕೇದಿಗೆಯ ಹೂ ಮುಡಿದ ಕೇಶರಾಶಿ ಸುಬ್ಬನನ್ನು ಸಮ್ಮೋಹನಗೊಳಿಸಿದ್ದರೆ, ಸುಬ್ಬಣ್ಣನ ಪ್ರೀತಿ ತುಂಬಿದ ಕಣ್ಣುಗಳು, ತುಂಟತನ ತೋರುವ ಆಕರ್ಷಕ ಮೀಸೆ, ಲವಲವಿಕೆಯ ಮಾತುಗಳು ಸುಬ್ಬಣ್ಣನನ್ನು ಒಂದು ನಿಮಿಷವೂ ಬಿಟ್ಟಿರಲಾರದಂತೆ ರುಕ್ಕುವನ್ನು ಕಟ್ಟಿಹಾಕಿ ಬಿಟ್ಟವು.

ಅಡಿಕೆ ಗೊನೆ ತುಂಬಿದ ಬುಟ್ಟಿ ಬದಲಾ ಯಿಸಿಕೊಳ್ಳುವಾಗ ಆರಂಭವಾದ ಸುಬ್ಬಣ್ಣನ ಪ್ರೇಮ ಪ್ರಕರಣ ಕಲಾನಾಥೇಶ್ವರ ದೇವಸ್ಥಾನದಲ್ಲಿ ಮದುವೆ ಯಾಗುವುದರೊಂದಿಗೆ ಸಮಾಜದ ಅಂUಕಾರ ಪಡೆಯಿತು.

ಮದುವೆಯಾಗುತ್ತಿದ್ದಂತೆಯೇ ಕೈಯಲ್ಲೊಂದಿಷ್ಟು ಕಾಸು ಮಾಡೋಣವೆಂದು ತನ್ನ ಕುಲಕಸುಬು ಕುಂಬಾರಿಕೆಯನ್ನು ಸುಬ್ಬಣ್ಣ ಆರಂಭಿಸಿದರೂ ಅದು ನಷ್ಟದ ಬಾಬಾಗತೊಡಗಿದಂತೆ ಪುನಃ ಸಾವ್ಕಾರ್ರ ಮನೆಯ ಕೆಲಸಕ್ಕೇ ಸೇರಿಕೊಂಡನು.

ರುಕ್ಕು-ಸುಬ್ಬಣ್ಣನ ಜೋಡಿಯನ್ನು ಊರಿನಲ್ಲಿ ನೋಡುವುದೇ ಒಂದು ಸೊಗಸೆನಿಸುತ್ತಿತ್ತು. ಕಟ್ಟಿಗೆಗೇ ಹೋಗಲಿ, ಸೊಪ್ಪಿಗೇ ಹೋಗಲಿ, ಅಥವಾ ಸೋಮವಾರ ಸಂತೆಗೇ ಹೋಗಲಿ, ರುಕ್ಕು ಮತ್ತು ಸುಬ್ಬಣ್ಣ ಒಟ್ಟಿಗೆ ಹೋಗಬೇಕು. ಕಟ್ಟಿಗೆ ತರುವಾಗ ಸುಬ್ಬಣ್ಣ ಸ್ವಲ್ಪ ಜೋರಾಗಿ ಹೆಜ್ಜೆ ಹಾಕಿ ಮುಂದೆ ಸಾಗುತ್ತಿದ್ದರೆ ಹ್ವಾಯ್.. ನಿಂತ್ಕಾಣಿ ಮಾರಾಯ್ರೆ.. ಎಂದು ರುಕ್ಕು ಹುಸಿಕೋಪ ತೋರುವಳು. ಆಗ ಸುಬ್ಬಣ್ಣ ಬೇಗ ಬರುಕಾತಿಲ್ಲೆ.. ಏನ್..ಒಳ್ಳೆ ಬಸ್ರಿ ಹೆಂಗ್ಸಿನಂಗೆ ಕಾಲಾಕ್ತಿ.. ಎಂದು ಪ್ರೀತಿಯಿಂದ ಗದರಿ ರುಕ್ಕು ಮತ್ತೆ ತನ್ನೊಡನೆ ಜೊತೆಗೂಡಿದ ನಂತರವೇ ಮುಂದೆ ಸಾಗುತ್ತಿದ್ದ.

ಸುಬ್ಬಣ್ಣ ರುಕ್ಕುವಿಗೆ ಬಸ್ರಿ ಹೆಂಗ್ಸಿನಂಗೆ ಎನ್ನುತ್ತಿ ದ್ದಂತೆ ರುಕ್ಕುವಿಗೆ ಹೊಟ್ಟೆ ಕಿವುಚಿದಂತಾಗುತ್ತಿತ್ತು. ಈ ಜೋಡಿ ಮದುವೆಯಾಗಿ ಹತ್ತಾರು ವರ್ಷವಾದರೂ ಇವರಿಗೆ ಮಕ್ಕಳ ಭಾಗ್ಯವಿರಲಿಲ್ಲ. ಪಂಡಿತರ ಔಸುತಿ, ಸ್ಥಳಕ್ಕೆ ಕೊಟ್ಟ ಹರಕೆ, ಕೊನೆಗೆ ತೀರ್ಥಹಳ್ಳಿ ಡಾಕುಟರ ಬಳಿಗೆ ಹೋಗಿ ಬಂದರೂ ಪ್ರಯೋ ಜನವಾಗಿರಲಿಲ್ಲ. ಬಸ್ರಿ ಹೆಂಗ್ಸಿನಂಗೆ ಅಂತ ಸುಬ್ಬಣ್ಣ ಹೇಳಿದರೂ ಕೂಡ ಅದನ್ನು ತಮಾಷೆಗೆ ಮಾತ್ರ ಹೇಳುತ್ತಿದ್ದನೇ ವಿನಃ ಅದರಲ್ಲಿ ವ್ಯಂಗ್ಯವಿರಲಿಲ್ಲ.

ತನ್ನ ಮಾತು ರುಕ್ಕುವಿಗೂ ಬೇಸರ ತರಿಸಿದೆ ಎಂದು ಗೊತ್ತಾದ ಕೂಡಲೇ ರುಕ್ಕು, ತಮಾಷೆಗೆ ಕೆಂಡೇ ಕಣೆ. ಅಲ್ಲೇ, ಎಷ್ಟೆಷ್ಟೋ ಜನ ಮಕ್ಕಳು- ಮರಿ ಇದ್ದೂ, ವಯಸ್ಸಾದರೂ ದಾರಿ ಮೇಲಿಲ್ಲ. ಮಕ್ಕಳಿಲ್ಲ ಅದ್ಕಂಡ್ ನೀನ್ಯಾಕೆ ಏಚ್ನೆ ಮಾಡ್ತಿ. ತಿಮ್ಮಿ, ಸೋಮಿ, ಟಾಮಿ, ಬುಡ್ಡ, ಬೋಳಿ, ಮಳ್ಳ ಎಲ್ಲಾ ನಮ್ ಮಕ್ಕಳಲ್ವ...? ಎಂದು ಸಮಾಧಾನ ಹೇಳು ತ್ತಿದ್ದ. ಮಕ್ಕಳಿಲ್ಲದ ರುಕ್ಕು-ಸುಬ್ಬಣ್ಣರಿಗೆ ಅವರು ಸಾಕಿದ್ದ ಮೂಕ ಪ್ರಾಣಿಗಳೇ ಮಕ್ಕಳಾಗಿದ್ದವು. ನಾಯಿ ಟಾಮಿ, ಎಮ್ಮೆ ತಿಮ್ಮಿ, ಹಸು ಸೋಮಿ, ಬೆಕ್ಕು ಮಳ್ಳ, ಹುಂಜ ಬುಡ್ಡ, ಹ್ಯಾಟಿ ಬೋಳಿ ಸುಬ್ಬಣ್ಣನ ಸಾಕು ಮಕ್ಕಳು. ಎಮ್ಮೆ, ಹಸು, ನಾಯಿ, ಬೆಕ್ಕುಗಳಿಗೆ ಹೆಸರಿಟ್ಟು ಕರೆಯುವುದು ಸಾಮಾನ್ಯವಾದರೂ ಕೋಳಿಗಳಿಗೂ ಸುಬ್ಬಣ್ಣ ಹೆಸರಿಟ್ಟು ಕರೆಯುವುದು ಎಲ್ಲರಿಗೂ ಮೋಜಿನದಾಗಿತ್ತು.

ಸುಬ್ಬಣ್ಣನಿಗೆ ಈಗ ಉಳಿದಿರುವುದು ಈ ಮಕ್ಕಳು ಮಾತ್ರ. ರುಕ್ಕು ಕೇವಲ ನೆನಪು. ತನ್ನ ಪ್ರಿಯತಮ, ಸಾಕು ಮಕ್ಕಳೊಂದಿಗೆ ಶಾಂತವಾಗಿ ಹರಿಯುವ ತುಂಗೆಯಂತೆ ಯಾರಿಗೂ ತೊಂದರೆ ಕೊಡದೆ ಜೀವನ ಸಾಗಿಸುತ್ತಿದ್ದ ರುಕ್ಕುವಿನ ಅಂತ್ಯ ಹಾಗಾಗ ಬಾರದಾಗಿತ್ತು.

ಸುಬ್ಬಣ್ಣನಿಗೆ ಆ ತಿಂಗಳು ಇನ್ನೂ ಗೌರ‍್ನ್‌ಮೆಂಟ್ ನಿಂದ ಐವತ್ತು ರೂಪಾಯಿ ಬಂದಿರಲಿಲ್ಲ. ಮನೆಯಲ್ಲಿ ಅಕ್ಕಿ ಕಾಳು ಇರಲಿಲ್ಲ. ಕಷ್ಟ ಎಂದಾಗ ಕಾರಣ ಕೇಳದೆ ಕಾಸು ಕೊಡುತ್ತಿದ್ದ ಅಹ್ಮದಣ್ಣನ ಬಳಿ ಒಂದತ್ತು ರೂಪಾಯಿ ತರೋಣ ಎಂದು ಸುಬ್ಬಣ್ಣ ಅವರ ಮನೆಗೆ ತೆರಳಿದ್ದ. ಸುಬ್ಬಣ್ಣ ಅಹ್ಮದಣ್ಣನ ಮನೆ ಬಾಗಿಲು ತಟ್ಟುವುದಕ್ಕೂ ರುಕ್ಕುವಿನ ಬೊಬ್ಬೆ ಕೇಳುವುದಕ್ಕೂ ಸರಿಹೋಯಿತು. ಬೊಬ್ಬೆಗೆ ಬೆಚ್ಚಿದ ಸುಬ್ಬಣ್ಣ ಒಂದೇ ಉಸಿರಿಗೆ ಮನೆಗೆ ತೆರಳಿದ. ಸುಬ್ಬಣ್ಣ ಬಂದಾಗ ರುಕ್ಕುವಿನ ಬೊಬ್ಬೆ ನಿಂತಿತ್ತು. ಸುಬ್ಬಣ್ಣನಿಗೆ ಕೇಳಿದ ಬೊಬ್ಬೆ ರುಕ್ಕು ಚಡಪಡಿಸಿ ನರನರಳಿ ಕೂಗಿದ ಕೊನೆಯ ಬೊಬ್ಬೆಯಾಗಿರ ಬೇಕು. ರುಕ್ಕುವಿನ ಮೈಮೇಲೆ ಅಳಿದುಳಿದ ಸೀರೆ ತುಂಡುಗಳಿಂದ ಹೊಗೆ ಎದ್ದೇಳುತ್ತಿತ್ತು.

ಒಲೆಯ ಮೇಲೆ ಹಾಲನ್ನಿಟ್ಟು ಒಲೆಗೆ ಬೆನ್ನು ಹಾಕಿ ಎಲೆಯಡಿಕೆ ಹಾಕಲು ಅಣಿಯಾಗುತ್ತಿದ್ದ ರುಕ್ಕುವಿಗೆ ತನ್ನ ಸೆರಗು ಒಲೆಯ ಬಳಿ ಬಿದ್ದದ್ದು ತಿಳಿಯಲಿಲ್ಲ. ಬೆಂಕಿ ತನ್ನ ನಾಲಿಗೆ ಚಾಚಿತು. ಅದು ಅರಿವಿಗೆ ಬಂದ ತಕ್ಷಣ ಸೀರೆ ಜಾರಿಸಲು ನೋಡಿದ ರುಕ್ಕು ಸೀರೆಯನ್ನು ಬಿಗಿಯಾಗಿ ಗಂಟು ಹಾಕಿ ಉಟ್ಟು ಕೊಂಡಿದ್ದರಿಂದ ಕಳಚಲಾಗಲಿಲ್ಲ. ಈ ಸುದ್ದಿ ಮಿಂಚಿನ ವೇಗದಲ್ಲಿ ಸಾವ್ಕಾರ್ರ ಮನೆಗೆ ತಿಳಿದು ಸಾವ್ಕಾರ್ರು ಜೀಪಿನಲ್ಲಿ ಬಂದು ಆಸ್ಪತ್ರೆ ಸೇರಿಸಿದರು. ಆದರೆ ರುಕ್ಕುವಿನ ಭೂಮಿಯ ಮೇಲಿನ ಪಯಣ ಮುಗಿದಿತ್ತು.

ಸುಬ್ಬಣ್ಣನ ರೋದನ ಮುಗಿಲು ಮುಟ್ಟಿತು. ಕೊಟ್ಟಿಗೆಗೆ ಹೋಗಿ ತಿಮ್ಮಿ-ಸೋಮಿಯರನ್ನು ನೇವ ರಿಸಿ, ಅವುಗಳ ಬೆನ್ನ ಮೇಲೆ ತಲೆಯಿಟ್ಟು ಅತ್ತ. ಮಳ್ಳ ಟಾಮಿಯರನ್ನು ತಬ್ಬಿಕೊಂಡು ನಿಟ್ಟುಸಿರಿಟ್ಟ. ಬುಡ್ಡ ಬೋಳಿಯರನ್ನು ಅವುಚಿಕೊಂಡು ಆಲಾಪಿಸಿದ. ಅತ್ತೂ ಅತ್ತೂ ಪ್ರಜ್ಞೆ ತಪ್ಪಿದಂತಾಗಿ ಕೊಟ್ಟಿಗೆಯಲ್ಲಿ ಬಿದ್ದ.

ಎಚ್ಚರವಾದಾಗ ಮತ್ತೆ ರೋದಿಸಿದ. ಮಡಿದ ಮಡದಿಯ ಶೋಕದಲ್ಲಿ ಸುಬ್ಬಣ್ಣ ಊಟ-ತಿಂಡಿ ಗಳನ್ನೇ ಮರೆತ. ರುಕ್ಕು ಗತಿಸಿ ವಾರವಾದರೂ ಸುಬ್ಬಣ್ಣ ಹೊಟ್ಟೆಗೆ ಏನೂ ತೆಗೆದುಕೊಳ್ಳದಿದ್ದುದನ್ನು ನೋಡಿ ಊರವರು ದಿಗಿಲು ಗೊಂಡರು. ಸುಬ್ಬಣ್ಣ ನಿಗೆ ಹರಳಿಮಠದ ಪ್ರತಿ ಮನೆಯಿಂದಲೂ ಊಟ -ತಿಂಡಿಗಳು ಬರತೊಡಗಿದವು. ಸುಬ್ಬಣ್ಣ ಕಂಡೂ ಕಾಣದಂತೆ ನಿರ್ಲಿಪ್ತನಾದ. ತಿಮ್ಮಿ, ಸೋಮಿಯರಿಗೆ ಮುರಾ ತರಲು ಸಾವ್ಕಾರ್ರ ಮನೆಯ ತೋಟಕ್ಕೆ ಹೋಗುತ್ತಿದ್ದ ಸುಬ್ಬಣ್ಣನನ್ನು ನಯವಾಗಿ ಸಮಾಧಾನ ಗೊಳಿಸಿದ ಗಾಯಿತ್ರಮ್ಮ ಆತನಿಗೆ ಎರಡು ಇಡ್ಲಿ ತಿನ್ನಿಸುವುದರಲ್ಲಿ ಯಶಸ್ವಿಯಾದರು.

ಎರಡು ಇಡ್ಲಿಗಳನ್ನು ತಿಂದ ಸುಬ್ಬಣ್ಣ ಉಳಿದ ಮೂರ‍್ನಾಲ್ಕು ಇಡ್ಲಿಗಳನ್ನು ತೆಗೆದುಕೊಂಡು ಶ್ಮಶಾನಕ್ಕೆ ಹೋಗಿ ರುಕ್ಕು ಭಸ್ಮಗೊಂಡ ಜಾಗದಲ್ಲಿ ಇಟ್ಟು ಅತ್ತು ಬಂದ.

ರುಕ್ಕುವಿನ ಸಾವು ಸುಬ್ಬಣ್ಣನ ಜೀವನಗತಿಯನ್ನೇ ಮಂಕಾಗಿ ಸಿತು. ರುಕ್ಕುವನ್ನು ಮರೆಯಲು ಯತ್ನಿಸಿದಂತೆಲ್ಲಾ ಆಕೆಯ ನೆನಪು ಸುಬ್ಬಣ್ಣನಿಗೆ ಮತ್ತೆ ಮತ್ತೆ ಮರುಕಳಿಸಿ ಬರುತ್ತಿತ್ತು.

ಒಂದು ಮಧ್ಯಾಹ್ನ ಸುಬ್ಬಣ್ಣ ದಣಿದು ಮನೆಗೆ ಬಂದು ನೋಡುತ್ತಾನೆ... ತಿಮ್ಮಿ ಆಂಯ್ಗರೆಯುತ್ತಿದೆ, ಬುಡ್ಡ ಬೋಳಿ ಯರು ಪಿಳಿ ಪಿಳಿ ಕಣ್ಣು ಬಿಡುತ್ತಾ ಅನಾಥರಂತೆ ಕುಳಿತಿವೆ. ಸೋಮಿಯ ಕಣ್ಣಲ್ಲಿ ನೀರು, ಟಾಮಿ ತನ್ನ ಯಜ ಮಾನನ ಹಿಂದೆ ತಿರುಗಾಡಿ ಸುಸ್ತಾಗಿ ಮಂಡಿ ಯೂರಿ ಕುಳಿತಿದೆ. ರುಕ್ಕು ಕಣ್ಮರೆಯಾದ ನಂತರ ಸುಬ್ಬಣ್ಣ ತನ್ನ ಊಟ ತಿಂಡಿಯ ಬಗ್ಗೆಯೇ ಗಮನ ಕೊಟ್ಟಿರಲಿಲ್ಲ. ತನ್ನ ಮಕ್ಕಳಂತೆ ಸಾಕಿದ ಈ ಪ್ರಾಣಿಗಳ ಕಡೆ ನಾನು ನೋಡದಾದೆ ನಲ್ಲ ಎಂದು ಸುಬ್ಬಣ್ಣ ಈಗ ವ್ಯಥೆಪಟ್ಟ. ಹಿಂದೆ ಕೊಟ್ಟಿಗೆಗೆ ಬಂದು ನೋಡಿದರೆ ಅಲ್ಲಿ ಹುಲ್ಲಿನ ಒಂದು ಎಸಳೂ ಇರಲಿಲ್ಲ. ಸಪ್ಪಿನ ಹಗ್ಗ ಮತ್ತು ಕತ್ತಿಗೆ ಕಡಿ ಮಾಡಿನ ಗಳಕ್ಕೆ ಹಿಡಿದ ವರಲೆ ತನ್ನ ನಾಲಿಗೆ ಚಾಚಿತ್ತು. ಕತ್ತಿಗೆ ಮತ್ತು ಹಗ್ಗಕ್ಕೆ ಹಿಡಿದ ವರಲೆಯನ್ನೂ, ಜೇಡರ ಬಲೆಯನ್ನೂ ಕೊಡವಿದ ಸುಬ್ಬಣ್ಣ ಅಣ್ಣೇಚಾರರ ಗದ್ದೆಗೆ ಹೋಗಿ ಅಂಚಿನ ಲ್ಲಿದ್ದ ಹುಲ್ಲು ಕತ್ತರಿಸಿ ತಂದು ತಿಮ್ಮಿ ಸೋಮಿಯರ ಮೈದಡವಿ ಹುಲ್ಲು ನೀಡಿದ. ಬುಡ್ಡ ಬೋಳಿಯರನ್ನು ಕರೆದು ಕಾಳು ಹಾಕಿದ. ಬೆಳಗ್ಗೆಯೇ ಬೇಯಿ ಸಿಟ್ಟ ಗಂಜಿಯನ್ನು ಮೂರು ತಟ್ಟೆಗೆ ಬಗ್ಗಿಸಿಕೊಂಡು ತನ್ನೊಂದಿಗೆ ಟಾಮಿ, ಮಳ್ಳರನ್ನು ಕರೆದು ಊಟಕ್ಕೆ ಕುಳಿತುಕೊಂಡ. ಊಟ ಮಾಡುತ್ತಿದ್ದ ಸುಬ್ಬಣ್ಣ ತನ್ನ ಈ ಮಕ್ಕಳನ್ನೆಲ್ಲ ಸರಿಯಾಗಿ ನೋಡಿಕೊಳ್ಳಲು ಒಂದು ಸಮಕಟ್ಟು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದ.

ರುಕ್ಕುವಿರಬೇಕಾದರೂ ಅಷ್ಟೆ, ಸುಬ್ಬಣ್ಣ ದಿನದ ಬಹುಭಾಗ ಹೊರಗೆ ಕಳೆಯುತ್ತಿದ್ದನು. ಸುಬ್ಬಣ್ಣನಿಗೆ ಕೆಲವು ಕಾಯಿಲೆಗಳಿಗೆ ಔಸುತಿ ಕೊಡುವುದು ಗೊತ್ತಿತ್ತು. ಇದಕ್ಕಿಂತ ಹೆಚ್ಚಾಗಿ ಉಳುಕಿಸಿಕೊಂಡವರಿಗೆ ಸುಬ್ಬಣ್ಣ ಎಣ್ಣೆ ಹಚ್ಚಿ ತಿಕ್ಕಿದನೆಂದರೆ ನೋವು ನಾಪತ್ತೆಯಾಗಿ ಬಿಡುತ್ತಿತ್ತು. ಹರಳಿಮಠ ಸುತ್ತ, ಮುತ್ತ ಸುಮಾರು ಹಾರೋಗೊಳಿಗೆ, ಕಡಿದಾಳು ಇತ್ತ ಗೆರಸ, ಹಲಸಿನಹಳ್ಳಿಯವರೆಗೆ ಮೈ, ಕೈ ಸೊಂಟ ಉಳುಕಿಸಿಕೊಂಡವ ರೆಲ್ಲಾ ಸುಬ್ಬಣ್ಣನಿಗೆ ಆಹ್ವಾನ ನೀಡುತ್ತಿದ್ದರು. ತೋಟ ಗದ್ದೆಯ ಕೆಲಸ ಮಾಡುತ್ತ್ತಾ ಕುತ್ತಿಗೆ, ರಟ್ಟೆ ಉಳುಕಿಸಿಕೊಂಡವರು, ರಾತ್ರಿ ನಿಶೆ ಜಾಸ್ತಿಯಾಗಿ ಜಾರಿ ಬಿದ್ದು ಮೈಕೈ ಉಳುಕಿಸಿಕೊಂಡವರು, ಕೊನೆಗೆ ದೀಪಾವಳಿ ದಿನ ಬೂರಿ ಹಾಯಲು ಹೋಗಿ ತೆಂಗಿನ ಮರದಿಂದ ಉರುಳಿಬಿದ್ದು ಉಳುಕಿಸಿಕೊಂಡವರೆಲ್ಲಾ ಗುಪ್ತವಾಗಿ ಸುಬ್ಬಣ್ಣನಿಗೆ ಕರೆ ಕಳಿಸುತ್ತಿದ್ದರು. ಅಲ್ಲಿಗೆಲ್ಲ ನಡೆದೇ ಹೋಗುತ್ತಿದ್ದ ಸುಬ್ಬಣ್ಣ ಬರುವಾಗ ಕಡಿಮೆಯೆಂದರೂ ರೇಡಿಯೋದಲ್ಲಿ ಕನ್ನಡ ವಾರ್ತೆ ಬರುತ್ತಿತ್ತು.

ತನ್ನ ಮೂಕ ಮಕ್ಕಳೊಂದಿಗೆ ಸುಬ್ಬಣ್ಣನಿಗೆ ಆಪ್ತವಾದ ಇನ್ನೊಬ್ಬ ಗೆಳೆಯ ರೇಡಿಯೋ. ರೇಡಿಯೋಗೂ ಸುಬ್ಬಣ್ಣನಿಗೂ ಗೆಳೆತನ ಆರಂಭವಾದದ್ದು ಕೊಳಲಿನ ಮಧ್ಯಸ್ಥಿಕೆಯಿಂದ. ಕೊಳಲು ಬಾರಿಸುವುದೆಂದರೆ ಸುಬ್ಬಣ್ಣನಿಗೆ ಎಲ್ಲಿ ಲ್ಲದ ಖುಷಿ. ಸುಬ್ಬಣ್ಣನ ಕೊಳಲ ನಿನಾದಕ್ಕೆ ಮಾರು ಹೋಗದವರಿಲ್ಲ. ಪ್ರತಿವರ್ಷ ದಸರಾಕ್ಕೂ ಮೈ ಕೈಗೆಲ್ಲಾ ಕಪ್ಪು ಮಸಿ ಬಳಿದುಕೊಂಡು ಕಿವಿಗೆ ವಾಸ್ತೇವಯ್ಯನ ಮನೆಯ ಚಕ್ಕುಲಿ ಸಿಕ್ಕಿಸಿಕೊಂಡು ಮನೆ ಮನೆಗೆ ತೆರಳಿ ಕೊಳಲು ಬಾರಿಸುವುದು ಸುಬ್ಬಣ್ಣನಿಗೆ ಖುಷಿ ಕೊಡುವ ಹವ್ಯಾಸ. ಸುಬ್ಬಣ್ಣನ ಮೈಕೈಗೆ ರುಕ್ಕುವೇ ತೆಂಗಿನ ಗರಿಯಿಂದ ಕರಿಮಾಡಿ ಎಣ್ಣೆಯಲ್ಲಿ ಬೆರೆಸಿ ಮಸಿ ಹಚ್ಚುತ್ತಿದ್ದಳು. ಹೀಗೆ ಕೊಳಲು ಬಾರಿಸುತ್ತಿದ್ದ ಸುಬ್ಬಣ್ಣ ರೇಡಿಯೋದಲ್ಲಿ ಬರುತ್ತಿದ್ದ ಕೊಳಲು ವಾದನಕ್ಕೆ ಮೈ ಸೋತು ತಾನು ಒಂದು ರೇಡಿಯೋ ಖರೀದಿಸಿ ದಿನಂಪ್ರತಿ ಕೊಳಲು ವಾದನ ಆಲಿಸುತ್ತಿದ್ದ. ಸುಬ್ಬಣ್ಣನಿಗೆ ಕಿವಿ ಸ್ವಲ್ಪ ದೂರ. ಅದಕ್ಕಾಗಿ ಸುಬ್ಬಣ್ಣನ ರೇಡಿಯೋ ಊರವರಿಗೆ ಸದಾ ಕೇಳುತ್ತಲೇ ಇರಬೇಕು. ಒಮ್ಮೊಮ್ಮೆ ರೇಡಿಯೋ ಜೋರಾಗಿ ಹಾಡುತ್ತಿದ್ದರೂ ಸುಬ್ಬಣ್ಣನಿಗೆ ಅದು ಕೇಳದೇ ತಾನು ರೇಡಿಯೋವನ್ನು ಬಂದ್ ಮಾಡಿದ್ದೇ ನೆಂದು ತಿಳಿದು ಮಲಗಿ ಬಿಡುತ್ತಿದ್ದ. ಮಧ್ಯರಾತ್ರಿಯವರೆಗೂ ರೇಡಿಯೋ ದನಿಯಿಂದ ನಿದ್ದಗೆಟ್ಟ ಅಕ್ಕಪಕ್ಕದ ಮನೆಯ ಶೇರೆ ಗಾರ್ ನಾಗರಾಜ, ಅಹ್ಮದಣ್ಣನ ಮನೆಯವರೆಲ್ಲಾ ಮರುದಿನ ಗದರಿದಾಗಲೇ ಮುಂದಿನ ನಾಲ್ಕಾರು ದಿನ ಸುಬ್ಬಣ್ಣ ಎಚ್ಚರ ವಹಿಸುತ್ತಿದ್ದ.

ಇತ್ತೀಚೆಗಂತೂ ಸುಬ್ಬಣ್ಣನ ಕಿವಿ ತುಂಬಾ ದುರ್ಬಲವಾಗಿತ್ತು. ರೇಡಿಯೋ ಸರಿಯಾಗಿ ಮಾತನಾಡುತ್ತಿದ್ದರೂ, ಅದರಿಂದ ಕೇಳಿಸಿಕೊಳ್ಳಲಾಗದ ಸುಬ್ಬಣ್ಣ ರೇಡಿಯೋ ಕೆಟ್ಟಿದೆ ಎಂದು ಅದರ ತಲೆಯ ಮೇಲೆ ಹೊಡೆದೂ ಹೊಡೆದೂ ರೇಡಿಯೋ ನಿಜವಾಗಿಯೂ ಕೆಟ್ಟುಹೋಗಿ ಬಿಡುತ್ತಿತ್ತು. ಮತ್ತೆ ರೀಪೇರಿ ಮಾಡಿ ತಂದ ಮೇಲೆ ಎರಡು ಮೂರು ದಿನಕ್ಕೆ ಸುಬ್ಬಣ್ಣ ಶೆಲ್ ಬದಲಾಯಿಸಬೇಕಿತ್ತು.

ಟಾಮಿ ಮಳ್ಳರೊಂದಿಗೆ ಊಟ ಮುಗಿಸಿದ ಸುಬ್ಬಣ್ಣ ಒಂದು ನಿರ್ಧಾರಕ್ಕೆ ಬಂದಿದ್ದ. ಊಟ ಮಾಡಿ ಎದ್ದವನೇ ಪುಟ್ಟಪ್ಪನ ಮನೆಗೆ ಹೋದ. ಹೆಂಡತಿ ಮಲ್ಲಿಕಾಳೊಂದಿಗೆ ಮಾತನಾಡುತ್ತಾ ಎಲೆಯಡಿಕೆ ಜಗಿಯುತ್ತಿದ್ದ ಪುಟ್ಟಪ್ಪನ ಬಳಿ, ‘ಪುಟ್ಟಪ್ಪ ನಾ ಮದುವೆಯಾಗಬೇಕಲ್ಲ..!’ ಎಂದುಸುರಿದ. ಸುಬ್ಬಣ್ಣ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡ ಪುಟ್ಟಪ್ಪ ‘ಅದಕ್ಕೇನ ಆಗಬೌದು’ ಎಂದು ನಕ್ಕ. ತಾನು ಹೇಳುವುದನ್ನು ಪುಟ್ಟಪ್ಪ ಲಘವಾಗಿ ತೆಗೆದುಕೊಂಡಿದ್ದಾನೆ ಎಂದು ಅರಿವಾದ ಸುಬ್ಬಣ್ಣ ಗಂಭೀರವಾಗಿ ಇನ್ನೊಮ್ಮೆ ತನ್ನ ಇಂಗಿತವನ್ನು ವ್ಯಕ್ತಪಡಿಸಿದ. ಈ ಬಾರಿ ಪುಟ್ಟಪ್ಪನಿಗೆ ಸಿಟ್ಟು, ನಗು ಒಮ್ಮೆಗೆ ಬಂತು. ‘ಏನಾ.. ಈ ವಯಸ್ಸಲ್ಲಿ ನಿನಗೆ ಮದುವೆ, ಹುಚ್ ಗಿಚ್ ಏನಾದರೂ ಹಿಡಿದಿದಿಯ’ ಎಂದು ಗದರಿದ. ಅಲ್ಲಿಂದ ಸುಬ್ಬಣ್ಣ, ಕೃಷ್ಣಪ್ಪನ ಮನೆಗೂ ಪ್ರಭಾಕರ, ಹಸನ್ ಸಾಹೇಬರ ಮನೆಗೂ ಹೋಗಿ ಬಂದು ಅವರಿಂದೆಲ್ಲ ಬೈಸಿಕೊಂಡು ಬಂದ. ಇವರೆಲ್ಲ ತನಗೆ ಏಕೆ ಬೈಯುತ್ತಿದ್ದಾರೆ ಎಂದು ಕಸಿವಿಸಿಗೊಂಡ. ತನಗೇನಾಗಿದೆ ಎಂದು ಸುಬ್ಬಣ್ಣ ನೋಡಿಕೊಳ್ಳಲು ಯೋಚಿಸಿದರೆ ಇದ್ದ ಒಂದೇ ಒಡೆದ ಕನ್ನಡಿಯನ್ನು ಹೋದ ವರ್ಷವೇ ಮಳ್ಳ ಪುಡಿ ಪುಡಿ ಮಾಡಿತ್ತು.

ಪುಟ್ಟಪ್ಪ, ಕೃಷ್ಣ, ಪ್ರಭಾಕರ, ಹಸನ್ ಸಾಹೇಬರು ಸುಬ್ಬಣ್ಣನ ಎದುರಿಗೆ ಬೈದು ಕಳಿಸಿದರೂ ಸುಬ್ಬಣ್ಣ ಒಬ್ಬನೇ ಮನೆಯಲ್ಲಿರುವುದು, ದನಕರುಗಳೆಲ್ಲ ಅನಾಥವಾಗಿರುವುದು ಅವರನ್ನೆಲ್ಲ ಯೋಚಿಸುವಂತೆ ಮಾಡಿದ್ದವು. ಸುಬ್ಬಣ್ಣನಂತೆ ನೊಂದಿರುವ ಯಾವುದಾದರೂ ಒಂಟಿ ಹೆಣ್ಣಿಗಾಗಿ ಅವರು ಶೋಧನೆಗೆ ತೊಡಗಿದರು. ಇವರೆಲ್ಲ ಸುಬ್ಬಣ್ಣನಿಗೆ ಹೆಣ್ಣು ನೋಡುತ್ತಿರುವ ಸುದ್ದಿ ಇಡೀ ಊರಿಗೆ ಹರಡಿ ತಮಗೆ ತಿಳಿದಂತೆ ಮಾತನಾಡ ಹತ್ತಿದರು. ಕೆಲವರ ವ್ಯಂಗ್ಯದ ಮಾತುಗಳು ಸುಬ್ಬಣ್ಣನ ಕಿವಿಗೂ ಬಿದ್ದು ಆತ ಒಳಗೊಳಗೆ ಬಹಳವಾಗಿ ನೊಂದುಕೊಂಡ. ಮತ್ತೆ ಮರುಕ್ಷಣವೇ ಜನರ ಮಾತು ತನ್ನ ಮಕ್ಕಳಿಗೆ ಹೊಟ್ಟೆ ತುಂಬಿಸುವುದಿಲ್ಲ ಎಂದು ಸಮಾಧಾನ ಮಾಡಿಕೊಂಡ.
ಸುಬ್ಬಣ್ಣನಿಗೊಂದು ಹೆಣ್ಣು ನೋಡುವುದರಲ್ಲಿ ಸುಬ್ಬಣ್ಣನ ಹಿತೈಷಿಗಳು ಕೊನೆಗೂ ಸಫಲರಾದರು. ಹದಿನಾಲ್ಕನೆ ಮೈಲಿಕಲ್ಲಿ ನಲ್ಲಿ ಸುಬ್ಬಣ್ಣನಂತೆ ಒಂಟಿಯಾಗಿದ್ದ ವಿಧವೆ ಮಿಣುಕು ಸುಬ್ಬಣ್ಣ ನನ್ನು ನೋಡಲು ಒಪ್ಪಿದಳು. ಪುಟ್ಟಪ್ಪ ಮತ್ತು ಸ್ನೇಹಿತರಿಗೆ ಮಾತು ಕೊಟ್ಟಂತೆ ತೀರ್ಥಹಳ್ಳಿ ಸಂತೆಯ ದಿನ ಮಿಣುಕು ಊರಿಗೆ ಬಂದಿಳಿದಳು.

ಮೊದಲೇ ತಿಳಿಸಿದಂತೆ ಪುಟ್ಟಪ್ಪನ ಮನೆಗೆ ಹೋದ ಮಿಣುಕು ಅಲ್ಲಿಂದ ಕೃಷ್ಣಪ್ಪ, ಪ್ರಭಾಕರ, ಹಸನ್ ಸಾಹೇಬರನ್ನು ಕರೆದುಕೊಂಡು ಸುಬ್ಬಣ್ಣನ ಮನೆಗೆ ಬಂದಳು. ಹಿಂದಿನ ಸಂತೆಗಳಲ್ಲಿ ಸುಬ್ಬಣ್ಣನನ್ನು ಮಿಣುಕು ಮೊದಲೇ ನೋಡಿದ್ದಳು. ಸುಬ್ಬಣ್ಣನೂ ಮಿಣುಕುವನ್ನು ನೋಡಿದ್ದರೂ ಮಾತನಾಡಿಸಿರ ಲಿಲ್ಲ. ಪುಟ್ಟಪ್ಪ, ಪ್ರಭಾಕರ, ಮಿಣುಕುವಿಗೆ ಸುಬ್ಬಣ್ಣನ ಮನೆಯ ಪರಿಸ್ಥಿತಿಯನ್ನು ವಿವರಿಸಿ ಸುಬ್ಬಣ್ಣನ ಗುಣ ಗಳನ್ನು ಹೊಗಳಿ ಸುಬ್ಬಣ್ಣನನ್ನು ಚೆನ್ನಾಗಿ ನೋಡಿ ಕೊಳ್ಳಬೇಕೆಂದು ಒಪ್ಪಿಸಿದರು. ಅದಕ್ಕೆಲ್ಲ ‘ಹ್ಹು...ಹ್ಹು...’ ಎಂದು ತನ್ನ ಸಮ್ಮತಿ ಸೂಚಿಸಿದಳು ಮಿಣುಕು. ಪುಟ್ಟಪ್ಪ ಮತ್ತು ಸ್ನೇಹಿತರು ತಮ್ಮ ಕೆಲಸ ಆಯಿತೆಂದು ಕೊಂಡು ನಿರ್ಗಮಿಸಿದರು. ಪುಟ್ಟಪ್ಪ ಮತ್ತು ಸ್ನೇಹಿತರು ಹೋದೊಡನೆ ಸುಬ್ಬಣ್ಣನ ಬಳಿ ಬಂದು ವೈಯಾರದಿಂದ ಅದೂ ಇದೂ ಮಾತನಾಡುತ್ತಾ ಮಿಣುಕು ಕೇಳಿದಳು ‘ಇಲ್ಲಿ ತನಕ ಎಷ್ಟು ಕಾಸು ಕೂಡಿಸಿದ್ದಿ? ಸುಬ್ಬಣ್ಣನಿಗೆ ಒಂದು ಕ್ಷಣ ಕಸಿವಿಸಿಯಾ ದರೂ ‘ನಾವು ಬಾಳುದೆ ಕಷ್ಟಾಗಿದೆ, ಇನ್ನೆಲ್ಲಿ ಕಾಸು ಕೂಡಿ ಸೋದು’ ಎಂದು ನಗೆ ಬೀರಿದ. ಸುಬ್ಬಣ್ಣನ ಉತ್ತರದಿಂದ ನಿರುತ್ಸಾಹ ಗೊಂಡ ಮಿಣುಕು ಪುಟ್ಟಪ್ಪ ಮತ್ತು ಮಿತ್ರರಿಗೂ ಹೇಳದೆ ತೀರ್ಥಹಳ್ಳಿ ಬಸ್ಸಿಡಿದು ಹೋಗಿಬಿಟ್ಟಳು.

ಮಿಣುಕುವನ್ನು ನೆನೆದು ಜುಗುಪ್ಸೆಗೊಂಡು ಸುಬ್ಬಣ್ಣನಿಗೆ ರುಕ್ಕುವಿನ ನೆನಪು ಮತ್ತೆ ಕಾಡಿತು. ಅದರೊಂದಿಗೆ ತನ್ನ ನಿರ್ಲಕ್ಷ ದಿಂದ ಸೋತು ಸಣ್ಣಗಾಗಿರುವ ತಿಮ್ಮಿ, ಟಾಮಿ, ಸೋಮಿ, ಮಳ್ಳ, ಬುಡ್ಡ, ಬೋಳಿಯರನ್ನು ನೋಡಿ ಸುಬ್ಬಣ್ಣನ ವೇದನೆ ಇನ್ನೂ ತೀವ್ರವಾಯಿತು. ದುಃಖವನ್ನು ಮರೆಯಲು ಕೊಳಲಿಡಿದು ಜೋಗಿಗುಡ್ಡಕ್ಕೆ ತೆರಳಿದ. ಮುಂಜಾನೆಯಿಂದ ಸಂಜೆಯವರೆಗೂ ತ್ರಾಣವಿದ್ದಾಗಲೆಲ್ಲ ಕೊಳಲೂದಿ ಸುಸ್ತಾದರೂ ಮನಸ್ಸು ಶಾಂತವಾದಂತಾಗಿ ಏಳುತ್ತಾ, ಬೀಳುತ್ತಾ ಮನೆಗೆ ಮರಳಿದ. ಜೋರಾಗಿ ಹಸಿವಾಗುತ್ತಿದ್ದರೂ ಗಂಜಿ ಬೇಯಿಸಲು ಸುಬ್ಬಣ್ಣನಲ್ಲಿ ಶಕ್ತಿ ಇರಲಿಲ್ಲ. ಕೊಟ್ಟಿಗೆಯಲ್ಲಿ ತಿಮ್ಮಿ ಸೋಮಿಯರು ಅತ್ತಂತೆ ಆಂಯ್ಗರೆಯುತ್ತಿದ್ದವು. ಬುಡ್ಡ ಬೋಳಿಯರು ಧ್ಯಾನಸ್ಥವಾಗಿದ್ದವು. ಮಳ್ಳ-ಟಾಮಿ ಸುಬ್ಬಣ್ಣನ ಪಕ್ಕ ಕುಳಿತು ಆಕಳಿಸುತ್ತಿದ್ದವು. ತನ್ನಂತೆ ಹಸಿದ ಮಕ್ಕಳನ್ನು ಕಂಡು ಸುಬ್ಬಣ್ಣನ ಕರುಳು ಕತ್ತರಿಸಿದಂತಾ ಯಿತು. ಇವಕ್ಕೆಲ್ಲಾ ಹೊಟ್ಟೆಗೆ ಹಾಕಲಾಗದವನು ಸತ್ತು ಹೋಗ ಬಾರದೆ ಎಂದು ಎಣಿಸಿದ. ಸಾವಿನೊಂದಿಗೆ ಬಂದ ರುಕ್ಕುವಿನ ನೆನಪು ಸುಬ್ಬಣ್ಣನನ್ನು ಇನ್ನಷ್ಟು ಕಲಕಿತು. ರುಕ್ಕುವಿಗೆ ಸಾವು ಕೊಟ್ಟ ದೇವರು ನನಗೆ ಅನ್ಯಾಯ ಮಾಡಿದ ಎಂದು ದೇವರನ್ನು ಬೈದ. ಯಾರಿಗೂ ಬೈದರೂ ಏನೂ ಆಗದಿದ್ದಕ್ಕೆ ಮತ್ತಷ್ಟು ವ್ಯಗ್ರನಾದ. ಕೋಪ ದುಃಖಗಳಿಂದ ಕುದಿಯತೊಡಗಿದ ಸುಬ್ಬಣ್ಣನ ಮನದಲ್ಲಿ ಒಂದು ಭಯಾನಕ ಯೋಜನೆ ಸಿದ್ಧಗೊಳ್ಳತೊಡಗಿತು.

ಕುಳಿತಲ್ಲಿಯೇ ತನ್ನ ಯೋಜನೆಗೆ ಬೇಕಾದ ವಸ್ತುವನ್ನು ಎಲ್ಲಿದೆ ಎಂದು ಸುಬ್ಬಣ್ಣ ಅವಲೋಕಿಸತೊಡಗಿದ. ಕಡಿಮಾಡಿನಲ್ಲಿ ಅದು ಗೋಚರಿಸುತ್ತಿದ್ದಂತೆಯೇ ನಿಟ್ಟುಸಿರಿಟ್ಟು ಟಾಮಿ, ಮಳ್ಳರನ್ನು ಹೊರಗೆ ಅಟ್ಟಿ ಬಾಗಿಲು ಹಾಕಿ ಬಂದ. ಸುಬ್ಬಣ್ಣನ ಮನಸ್ಸಿನಲ್ಲಿ ಯೋಜನೆ ಕಾಯ ರೂಪಕ್ಕಿಳಿಯತೊಡಗಿತು. ಮೂಲೆಯಲ್ಲಿದ್ದ ಖಾಲಿ ಅಕ್ಕಿಡಬ್ಬವನ್ನು ಈಚೆಗೆಳೆದುಕೊಂಡು ಅದರ ಮೇಲೆ ಹತ್ತಿ ಕಡಿಮಾಡಿನಲ್ಲಿ ಬೆಂಗ್ಟೆಗೆ ಸಿಕ್ಕಿಸಿದ್ದ ಸಪ್ಪಿನ ಹಗ್ಗವನ್ನು ಅದೇ ಮಾಡಿನಲ್ಲಿ ಸ್ವಲ್ಪ ಎತ್ತರಕ್ಕೆ ಕಟ್ಟಿದ. ಇನ್ನೊಂದು ಕೊನೆಯನ್ನು ಉರುಳಾಗಿಸಿದ. ಕೊಟ್ಟಿಗೆಗೆ ಹೋಗಿ ತಿಮ್ಮಿ ಸೋಮಿಯರನ್ನು ನೇವರಿಸಿ ಬಂದ. ಹಿತ್ತಲ ಬಾಗಿಲಿನಿಂದಲೇ ಮುಂದುಗಡೆ ಹೋಗಿ ಟಾಮಿ ಮಳ್ಳರನ್ನು ಅವುಚಿಕೊಂಡು, ಬುಡ್ಡ ಬೋಳಿಯರನ್ನು ಎತ್ತಿಕೊಂಡು ಕೆಳಗೆ ಬಿಟ್ಟು ಪುನಃ ಹಿಂಬಾಗಿಲಿನಿಂದ ಒಳಸೇರಿದ.

ಅಕ್ಕಿ ಡಬ್ಬವನ್ನು ಹತ್ತಿ, ಸಪ್ಪಿನ ಹಗ್ಗದ ಮುಂದೆಬಂದು ಕೊನೆಯದಾಗಿಯೆಂಬಂತೆ ರುಕ್ಕುವನ್ನು ನೆನಸಿಕೊಂಡ. ರುಕ್ಕುವನ್ನು ನೆನಸುವುದಕ್ಕೂ ಯಾರೋ ದಬದಬನೆ ಬಾಗಿಲು ಬಡಿಯುವು ದಕ್ಕೂ ಸರಿಹೋಯಿತು. ನಿಧಾನಕ್ಕೆ ಬಡಿದರೆ ಸುಬ್ಬಣ್ಣನಿಗೆ ಕೇಳುವುದಿಲ್ಲ ಎಂದು ಹೊರಗಿದ್ದ ವ್ಯಕ್ತಿ ತಿಳಿದಿದ್ದಂತೆ ಕಾಣುತ್ತದೆ. ‘ಈ ಜನ ಸಾಯಲಿಕ್ಕೂ ಬಿಡುವುದಿಲ್ಲ’ ಎಂದು ಬೈದುಕೊಂಡ ಸುಬ್ಬಣ್ಣ ಹಗ್ಗವನ್ನು ಬಿಚ್ಚಿ ಯಥಾ ಸ್ಥಾನದಲ್ಲಿಟ್ಟು ಒಂದು ಬಾಗಿಲು ತೆರೆದ.

ಅಹ್ಮದಣ್ಣನ ಪುಟ್ಟ ಮಗಳು ಝೀನತ್ ತಟ್ಟೆಯಲ್ಲಿ ಊಟ ಹಿಡಿದು ನಿಂತಿದ್ದಳು. ಯಾಕೆ ಪಾಪು ಎಂದ ಸುಬ್ಬಣ್ಣ ಕ್ಷೀಣ ಸ್ವರದಲ್ಲಿ
‘ಊಟಕ್ಕೆ’ ಎಂದು ನಕ್ಕ ಝೀನತ್ ತಟ್ಟೆಯಿಟ್ಟು ಹಿಂದಿರುಗಿ ದಳು.

ಸುಬ್ಬಣ್ಣನ ಕೋಪ-ತಾಪ ದುಃಖಗಳೆಲ್ಲ ನಿಧಾನವಾಗಿ ಕರಗತೊಡಗಿದವು.

ಸುಬ್ಬಣ್ಣನ ಕಣ್ಣಲ್ಲಿ ಸ್ವಲ್ಪ ಹೊಳಪು ಮಿಂಚತೊಡಗಿತು.

Thursday, July 23, 2009

ಬಾಬ್ರಿ ಮಸೀದಿ ಕಹಿನೆನಪು: ಅಂದಿನ India Today ಛಾಯಾಚಿತ್ರಗ್ರಾಹಕ ಪ್ರಶಾಂತ ಪಂಜಿಯಾರ್‌ರ ಒಂದು ಅನುಭವ

ಪ್ರಶಾಂತ ಪಂಜಿಯಾರ್
(ಛಾಯಾಚಿತ್ರಗ್ರಾಹಕ)
ಕನ್ನಡಕ್ಕೆ: ಗೋಪಾಲ ಬಿ. ಶೆಟ್ಟಿ

೧೯೯೨, ಡಿಸೆಂಬರ್ ೫; ಎಲ್.ಕೆ.ಅಡ್ವಾಣಿ ಯವರ ಲಕ್ನೋ ರ‍್ಯಾಲಿಯ ಛಾಯಾಚಿತ್ರಣ ವನ್ನು ತೆಗೆಯುವ ಹೊಣೆ ನನಗೆ ವಹಿಸಿ ಕೊಡಲಾಗಿತ್ತು. ಉತ್ತರ ಪ್ರದೇಶದ ಬಿಜೆಪಿಯ ಎಲ್ಲ ಮುಖಂಡರು ಆ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಕಾರಣಕ್ಕಾಗಿ India Today ಅಡ್ವಾಣಿಯವರನ್ನು ಹಿಂಬಾಲಿಸಲು ನನಗೆ ಸೂಚನೆ ನೀಡಿತ್ತು. ಎಲ್ಲ ಭಾಷಣಗಳು ಮುಗಿದ ಮೇಲೆ ಆ ದಿನ ರಾತ್ರಿ ಎಲ್ಲ ಪತ್ರಕರ್ತರು ಹೊರಟು ಹೋದರು. ನನಗೇಕೋ ಅಲ್ಲಿಯೇ ನಿಲ್ಲಬೇಕೆನಿಸಿತು. ನಾನು ಅಡ್ವಾಣಿ ಯವರನ್ನು ಹಿಂಬಾಲಿಸಿದೆ. ಅವರು ಕಲ್ಯಾಣ್ ಸಿಂಗ್ ಅವರ ಮನೆಗೆ ಹೋದರು. ಅಲ್ಲಿ ನನ್ನ ಹೊರತು ಬೇರೆ ಯಾರೂ ಛಾಯಾಚಿತ್ರ ಗ್ರಾಹಕರು ಇದ್ದಿಲ್ಲ. ಅವರು ನನ್ನನ್ನು ಒಳಗೆ ಹೋಗಲು ಅನುಮತಿ ಕೊಟ್ಟರು. ಪ್ರಮುಖ ಬಿಜೆಪಿ ಮುಖಂಡರಾದ ಅಟಲ್‌ಬಿಹಾರಿ ವಾಜಪೇಯಿ, ಮುರಳೀ ಮನೋಹರ ಜೋಶಿ ಮುಂತಾದವರು ಒಂದು ಕೊಠಡಿಯಲ್ಲಿ ಬಿರುಸಿನ ಮಾತುಕತೆ ನಡೆಸುತ್ತಿದ್ದರು.

ಸುಮಾರು ಮಧ್ಯರಾತ್ರಿ ಹೊತ್ತು ಮನೆ ಯಿಂದ ಹೊರಗೆ ಬಂದಾಗ “ನೀವು ನಾಳೆ ಎಷ್ಟು ಹೊತ್ತಿಗೆ ಅಯೋಧ್ಯೆಗೆ ಹೊರಡುತ್ತಿದ್ದೀರಿ?” ಎಂದು ಕೇಳಿದೆ. ‘ಈಗ ತಾನೆ ಹೊರ ಡಲಿದ್ದೇನೆ’, ಇದು ಅವರ ಉತ್ತರ. ಕೂಡಲೇ ವಾಜಪೇಯಿ ಹೊರಗೆ ಬಂದರು. ಅವರಿಗೆ ದೆಹಲಿಗೆ ಹೋಗಬೇಕಾಗಿತ್ತು. ಏನೋ ಅವರೆಲ್ಲ ನಿರೀಕ್ಷಿಸಿದಂತೆ ನಡೆದಿಲ್ಲ ವೆನ್ನುವ ಅನುಮಾನ. ನಾನು ನನ್ನ ಸಹೋದ್ಯೋಗಿ ವರದಿಗಾರನನ್ನು ಕೂಡಿ ಕೊಂಡು ಹೊರಗೆ ಬಂದೆ.

ಅಡ್ವಾಣಿಯವರನ್ನು ನಾವು ಅಯೋಧ್ಯೆಯಲ್ಲಿ ಮಹಂತ ಪರಮಹಂಸರ ಆಶ್ರಮದಲ್ಲಿ ಬಜರಂಗದಳದ ವಿನಯ ಕಟಿಯಾರ್, ವಿಶ್ವ ಹಿಂದೂ ಪರಿಷತ್ತಿನ ಅಶೋಕ್ ಸಿಂಘಾಲ್, ಸಂಘ ಪರಿವಾರದ ಹೆಚ್.ವಿ. ಶೇಷಾದ್ರಿಯವರೊಡನೆ ಕುಳಿತಿರುವುದನ್ನು ನೋಡಿದೆವು. ಕರಸೇವಕರು ಬಾಬ್ರಿ ಮಸೀದಿಯನ್ನು ಖಂಡಿತ ವಾಗಿಯೂ ಉರುಳಿಸುವ ನಿರ್ಧಾರಕ್ಕೆ ಬಂದಂತೆ ನಮಗೆ ಕಂಡು ಬಂತು.

ಅಡ್ವಾಣಿಯವರು ಆಶ್ರಮದಿಂದ ಹೊರಗೆ ಬಂದಾಗ ನಾನು ಅವರನ್ನು ಹಿಂಬಾಲಿಸಿದೆ. ಬಿಜೆಪಿ ಮತ್ತು ಇತರ ವಿ‌ಎಚ್‌ಪಿ ಪ್ರಮುಖ ರೊಡನೆ ಅವರು ಮೊದಲೇ ಸಿದ್ಧಗೊಳಿಸಿದ ವೇದಿಕೆಯ ಹತ್ತಿರ ಬಂದರು; ವಾದಗ್ರಸ್ಥವಾದ ಮಂದಿರ ಆ ವೇದಿಕೆಯ ಎದುರುಗಡೆ ಇತ್ತು. ಅಲ್ಲಿ ಸಾಂಕೇತಿಕವಾಗಿ ಪೂಜೆ ನಡೆಸುವ ಸಲುವಾಗಿ ಆ ಸ್ಥಳವನ್ನು ಅವರು ವಿಕ್ಷಿಸುತ್ತಿದ್ದರು. ಪೂರ್ವಾಹ್ನ ೧೧.೩೦ರ ಹೊತ್ತಿಗೆ “ಜೈ ಶ್ರೀರಾಮ್” ಮಂತ್ರ ಪಠಣ ಪ್ರಾರಂಭವಾಗ ಬೇಕಿತ್ತು. ಸುಮಾರು ೨೦೦ ಮೀಟರ್ ದೂರದ ರಾಮಕಥಾ ಕುಂಜದ ಕಟ್ಟಡದ ಟೆರೇಸ್‌ನ ಮೇಲೆ ಒಂದು ದೊಡ್ಡ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಅಡ್ವಾಣಿ ವೇದಿಕೆಯ ಕಡೆಗೆ ಹೊರಟು ನಿಂತರು, ನಾನು ಅವರನ್ನು ಹಿಂಬಾಲಿಸಿದೆ. ಟೆರೇಸ್‌ನ ಒಂದು ಮೂಲೆ ಯಲ್ಲಿ ಬಾಬ್ರಿ ಮಸೀದಿಯ ಗುಮ್ಮಟಗಳನ್ನು ನಾನು ನೋಡಿದೆ. ಅದರ ಹೊರತು ಬೇರೇನೂ ನನ್ನ ಕಣ್ಣಿಗೆ ಬೀಳಲಿಲ್ಲ.

ಸಂಘ ಪರಿವಾರದ ಎಲ್ಲ ಮುಖಂಡರು- ಉಮಾಭಾರತಿ ಸಾಧ್ವಿ ಋತಾಂಬರ ವಿಜಯ ರಾಜೆ ಸಿಂಧಿಯಾ, ಎಮ್.ಎಮ್.ಜೋಶಿ, ಶೇಷಾದ್ರಿ, ಅಡ್ವಾಣಿ, ಪ್ರಮೋದ್ ಮಹಾಜನ್ ವೇದಿಕೆಯ ಮೇಲೆ ಆಸೀನರಾಗಿರುವುದನ್ನು ನಾನು ನೋಡಿದೆ. ನಾನು ವಿಶ್ವಹಿಂದೂ ಪರಿ ಷತ್ತಿನ ಛಾಯಾ ಚಿತ್ರಗ್ರಾಹಕನೆಂದು ಅವರು ಊಹಿಸಿದ್ದರು. ಹಾಗಾಗಿ ನನಗೆ ಒಳಗೆ ಇರಲು ಅನುಮತಿ ಸಿಕ್ಕಿತು. ಉಳಿದ ಹೆಚ್ಚಿನ ಛಾಯಾ ಚಿತ್ರಗ್ರಾಹಕರು ಪೂಜೆ ನಡೆಯುವ ಶಿಬಿರದ ಹತ್ತಿರವೇ ಇದ್ದರು.

ಬಾಬ್ರಿ ಮಸೀದಿ ಧ್ವಂಸ ಮಾಡುವ ಮುಹೂರ್ತ ಸಮೀಪಿಸುತ್ತಿತ್ತು. ಇತ್ತ ವೇದಿಕೆಯಲ್ಲಿ ಕುಳಿತಿದ್ದ ಅಡ್ವಾಣಿ ಮತ್ತು ಶೇಷಾದ್ರಿ ಕಂಗಾಲಾದಂತೆ ಕಂಡು ಬಂದರು. ಪೂಜೆ ಪ್ರಾರಂಭವಾಯಿತು. ಅಂತೆಯೇ ಭಾಷಣಗಳು. ಸುಮಾರು ಬೆಳಗ್ಗೆ ೧೧.೩೦ಕ್ಕೆ ಸರಿ ಯಾಗಿ ಜನರು ಗುಂಬಜದ ಮೇಲೆ ಹತ್ತಲಾರಂಭಿಸಿದರು. ಫೊಟೋ ಗ್ರಾಫರ‍್ಸ್ ಕ್ಲಿಕ್ ಮಾಡಲು ಅಣಿಯಾದರು. ಕರ ಸೇವಕರು ಅವರ ಮೇಲೆ ಏರಿ ಬಂದರು. ಎಲ್ಲ ಛಾಯಾಗ್ರಾಹಕರನ್ನು ಒಂದು ಕೊಠಡಿಯೊಳಗೆ ಕೂಡಿ ಹಾಕಿ ಬೀಗ ಹಾಕಲಾಯಿತು. ಪ್ರತಿಭಟಿಸಿದವರನ್ನು ಥಳಿಸಲಾಯಿತು. “ಹೊರಗೆ ಬರಲು ಮುಂದಾದರೆ ನಿಮ್ಮ ಕಾಲುಗಳನ್ನು ಮುರಿ ದೇವು” ಎಂದು ಎಚ್ಚರಿಕೆ ಕೊಡಲಾಯಿತು.

ಗುಂಬಜದ ಸ್ಪಷ್ಟ ಕ್ಷಣೆಯನ್ನು ನನ್ನ ಹೊರತಾಗಿ ಬೇರೆ ಯಾವ ಛಾಯಾಗ್ರಾಹಕನಿಗೂ ಮಾಡಲು ಸಾಧ್ಯವಾಗಲಿಲ್ಲ. ಕಬ್ಬಿಣದ ಸಲಾಕೆಗಳಿಂದ ಜನರು ಗುಂಬಜಗಳನ್ನು ಒಡೆ ಯುತ್ತಿದ್ದರು. ಇತ್ತ ವೇದಿಕೆಯಲ್ಲಿ ಆಸೀನರಾದವರು ಗಹಗಹಿಸಿ ನಗುತ್ತಿದ್ದರು. ಹಠಾತ್ತನೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಬಜದ ತುತ್ತ ತುದಿಗೆ ಏರಿ ಬಂದರು. ಇದು ದಾಳಿಯ ಪರಮಾವಧಿಯೆಂದು ನಾನು ಊಹಿಸಿದೆ. ನಾನು ಅಡ್ವಾಣಿ ಮತ್ತು ಶೇಷಾದ್ರಿಯ ಮುಖವನ್ನು ನೋಡಿದೆ. ಅವರ ಮುಖ ಗೊಂದಲಕ್ಕೀಡಾದವರಂತೆ ಕಂಡುಬಂತು. ಸ್ವಲ್ಪ ಹೊತ್ತಿನ ಅನಂತರ ಅವರು ಬೆರಗು ಕಣ್ಣುಗಳಿಂದ ಬಾಯಿ ತೆರೆದು ಗುಂಬಜದ ಕಡೆಗೇ ನೋಡುತ್ತಿದ್ದರು. ಅವರೊಟ್ಟಿಗಿದ್ದ ಇತರ ಮುಖಂಡರು ಖುಶಿಯಲ್ಲಿದ್ದಂತೆ ಕಂಡು ಬಂತು. ಇದೀಗ ಅಡ್ವಾಣಿಯವರು ವಿಹೆಚ್‌ಪಿ ಧುರೀಣರ ಕಡೆಗೆ ಮುಖಮಾಡಿ “ಸಾಕು ಇನ್ನು ಅವರನ್ನು ಕೆಳಗೆ ಬರಲು ಹೇಳಿ” ಎಂದು ಸನ್ನೆ ಮಾಡುವಂತೆ ಕಂಡು ಬಂತು. ಆದರೆ ಇತರರಿಗೆ ಇಷ್ಟರಲ್ಲಿಯೇ ತೃಪ್ತಿಯಾಗಲಿಲ್ಲ; ಅವರಿಗೆ ಇನ್ನೂ “ಹೆಚ್ಚು”ಮಾಡಬೇಕಾಗಿತ್ತು.

ಪ್ರಾಯಶಃ ಕರಸೇವಕರು ಬಿಜೆಪಿ ಮುಖಂಡರ ಮಾತನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ವೆನ್ನುವ ಸುದ್ದಿ ಅವರಿಗೆ ಮೊದಲೇ ಮುಟ್ಟಿರಬಹುದು; ಈ ಕಾರಣಕ್ಕಾಗಿ ವಾಜಪೇಯಿ ದೆಹಲಿಗೆ ಹೊರಟು ಹೋದರು. ಆದರೆ ಅಡ್ವಾಣಿ ಅಯೋಧ್ಯೆಗೆ ಕೂಡಲೇ ಹೊರಟರು; ಕಲ್ಯಾಣಸಿಂಗ್ ಲಕ್ನೋದಲ್ಲಿಯೇ ಉಳಿದುಕೊಂಡರು. ಪ್ರಾಯಶಃ ಅಡ್ವಾಣಿಯವರಿಗೆ ರಾಮ ಜನ್ಮಭೂಮಿ ಆಂದೋಲನದವರು “ಮಸೀದಿಯನ್ನು ಉರುಳಿಸುವುದಿಲ್ಲ. ಆದರೆ ಗಲಭೆಯನ್ನು ಉಂಟುಮಾಡುತ್ತೇವೆ”ಎಂದು ಭರವಸೆ ಕೊಟ್ಟಿರಲೂಬಹುದು. ಆದರೆ ಅಡ್ವಾಣಿಯವರು ಈ ಆಪಾದನೆಯಿಂದ ದೋಷ ಮುಕ್ತರಾಗಲು ಸಾಧ್ಯವಾಗಲಾರದು.

ಈ ಮಧ್ಯೆ ಇತರರು ಬಹಳಷ್ಟು ಸಂತೋಷದಿಂದ ಗಹಗಹಿಸಿ ನಗುತ್ತಿದ್ದರು.

ಮೊದಲನೆಯ ಗುಂಬಜವು ಬಿರುಕುಬಿಟ್ಟಾಗ ಉಮಾಭಾರತಿ, ಸಾಧ್ವಿ ಋತಾಂಬರ ಮತ್ತು ಸಿಂಧಿಯಾ ಕೇಕೇ ಹಾಕುತ್ತ ನಗುತ್ತಿದ್ದರು. “ಇನ್ನೊಂದು ಹೊಡೆತ ಬಲವಾಗಿ; ಬಾಬ್ರಿ ಮಸೀದಿ ಒಡೆದು ಹಾಕಿ” ಎಂದು ಕರಸೇವಕರಿಗೆ ಅವರು ಹುರಿದುಂಬಿಸುತ್ತಿದ್ದರು.

ಹೆಚ್ಚಿನ ಫೊಟೋಗ್ರಾಫರ‍್ಸ್‌ಗೆ ಕರಸೇವಕರಿಂದ ಏಟು ಬಿದ್ದ ವಾರ್ತೆ ಇದೀಗ ಮತ್ತೆ ನನಗೆ ಮುಟ್ಟಿತು. ಗುಂಬಜಗಳು ಉರುಳಿ ಬೀಳುವ ದೃಶ್ಯವನ್ನು ಫೊಟೋ ತೆಗೆದವನು ನಾನೊಬ್ಬ ಮಾತ್ರ ಎಂದು ನನಗೆ ಮನವರಿಕೆಯಾಯಿತು; ಇನ್ನು ನಾನು ಜಾಗರೂಕ ನಾಗಿ ಇರಬೇಕೆಂದು ನಿರ್ಧರಿಸಿದೆ. ಸುಮಾರು ಮಧ್ಯಾಹ್ನದ ಹೊತ್ತಿಗೆ ಗುಂಬಜಗಳು ಪೂರ್ಣಾಹುತಿಗೆ ಒಳಗಾದವು. ಮಸೀದಿಗಳ ಒಳಗಿನಿಂದ ಜನರು ದೊಡ್ಡ ಕಂಬಗಳನ್ನು ಹೊರಗೆ ಕೊಂಡೊಯ್ಯುತ್ತಿರುವುದನ್ನು ನಾನು ನೋಡಿದೆ. ಈ ಮಧ್ಯೆ ‘ಏನೆಲ್ಲ ನಡೆಯಿತು ನೋಡಿ ಬಾ’ ಎಂದು ಅಡ್ವಾಣಿ ಪ್ರಮೋದ್ ಮಹಾಜನ್‌ಗೆ ಹೇಳುವುದನ್ನು ನಾನು ಗುಟ್ಟಾಗಿ ಆಲಿಸಿದೆ. ಅಡ್ವಾಣಿಯವರು ವೇದಿಕೆ ಬಿಟ್ಟು ಕದಲಲಿಲ್ಲ. ಆದರೆ ಇತರ ಮುಖಂಡರು ಅತ್ತಿಂದಿತ್ತ ಸುತ್ತಾಡುತ್ತಿದ್ದರು. ಮಹಾಜನ್ ಮತ್ತೆ ತಿರುಗಿ ಬಂದರು. ಏನು ಮಾಡಲೂ ಸಾಧ್ಯವಿಲ್ಲ; ಹಿಂದಿನಿಂದ ಹಗ್ಗವನ್ನು ಕಟ್ಟಿಯಾಗಿದೆ; ಅವರು ಗುಂಬಜಗಳನ್ನು ಉರು ಳಿಸುತ್ತಾರೆ’ ನಾನು ಗುಟ್ಟಾಗಿ ಈ ಮಾತನ್ನು ಆಲಿಸಿದೆ.

ಮಧ್ಯಾಹ್ನದ ಹೊತ್ತು ತಡೆಯಲಾರದ ಸೆಕೆ. ನಾನು ಆಹಾರ ನೀರಿಲ್ಲದೆ ಇಡೀ ದಿನ ಅಲ್ಲಿಯೇ ಇದ್ದೆ. ನಾನು ಕುರ್ಚಿಯಲ್ಲಿ ತಲೆತಗ್ಗಿಸಿ ಕುಳಿತೆ. ಒಬ್ಬ ಸ್ವಾಮಿ ನನ್ನ ಹತ್ತಿರ ಬಂದು “ತಲೆ ತಗ್ಗಿಸಿ ಏಕೆ ಕುಳಿತಿದ್ದಿಯಾ? ನಿನಗೇನು ಖುಶಿಯಾಗಲಿಲ್ಲವೆ. (ಧ್ವಂಸವಾದದ್ದು)?” ಕೇಳಿದ. ಸುಮಾರು ಸಂಜೆ ೪.೩೦ಕ್ಕೆ ಎರಡು ಗುಂಬಜಗಳು ಉರುಳಿಬಿದ್ದವು. ಈ ದೃಶ್ಯವನ್ನು ನಾನು ಫೊಟೋ ತೆಗೆದೆ.

ಏಟು ತಿಂದ ಕೆಲವು ಛಾಯಾಗ್ರಾಹಕರು ತಪ್ಪಿಸಿಕೊಂಡು ವೇದಿಕೆಯ ಹತ್ತಿರಕ್ಕೆ ಬಂದರು. ನಾನು ಒಬ್ಬನಿಂದ ಒಂದು ದೊಡ್ಡದಾದ ಲೆನ್ಸ್ ತೆಗೆದುಕೊಂಡೆ. ಅವನ ಕ್ಯಾಮೆರಾ ಒಡೆದು ಹೋಗಿತ್ತು. ಆತ ತುಂಬ ಹತಾಶನಾಗಿದ್ದ. ದೊಡ್ಡದಾದ ಈ ಲೆನ್ಸ್‌ನಿಂದ ಎರಡನೆಯ ಗುಂಬಜ ಬೀಳುವ ದೃಶ್ಯವನ್ನು ನಾನು ಸೆರೆಹಿಡಿದೆ. ಅದು ವಾಲುತ್ತ ನಿಧಾನವಾಗಿ ನೆಲಕ್ಕೆ ಅಪ್ಪಳಿಸಿತು. ಧೂಳಿನ ಪದರು ಸುತ್ತ ಪಸರಿಸಿತು. ಆ ಗುಂಬಜ ವಾಲುತ್ತ ಕೆಳಗೆ ಅಪ್ಪಳಿಸುವ ದೃಶ್ಯ ಅಚ್ಚಳಿಯದೆ ಮನಸ್ಸಿನಲ್ಲಿ ಉಳಿಯುವಂತಹದು. ವೇದಿಕೆಯ ಮೇಲೆ ಎಲ್ಲಿಲ್ಲದ ಹರ್ಷೋಲ್ಲಾಸ. ಈ ಕಡೆ ನಗರದ ಬಾನಂಗಳದಲ್ಲಿ ಮುಸುಕಾದ ಹೊಗೆ! ಒಬ್ಬ ಆಚಾರ್ಯ ಧ್ವನಿವರ್ಧಕದಲ್ಲಿ ಹೇಳಿದ, “ಈ ಮುಸ್ಲಿಮರನ್ನು ನೋಡಿ; ಅವರು ತಮ್ಮ ಮನೆಗಳಿಗೆ ತಾವೇ ಬೆಂಕಿ ಹಚ್ಚಿ ವೈರತ್ವವನ್ನು ಹರಡಲು ಹೊರಟಿದ್ದಾರೆ ”. ಕರಸೇವಕರು ರೊಚ್ಚಿಗೆದ್ದರು. ಇದು ಕೋಮು ಹತ್ಯೆಗೆ ನಾಂದಿ ಹಾಡಿತು. ಇಡೀ ಆಕಾಶ ಹೊಗೆ ಮತ್ತು ಬೆಂಕಿ ಜ್ವಾಲೆಯಿಂದ ಆವರಿಸಿಕೊಂಡಿತು.

ಒಬ್ಬ ಹದಿಹರೆಯದ ಮಹಿಳಾ ಪೊಲೀಸ್ ಅಧಿಕಾರಿ ಮೂಕವಿಸ್ಮಿತಳಾಗಿ ರಾಮಕಥಾ ಕುಂಜಕ್ಕೆ ಬಂದಳು. ಇಡೀ ನಗರವೇ ಹತೋಟಿಯನ್ನು ಕಳೆದುಕೊಂಡಿದೆ. ಆಕೆ ಇಬ್ಬರು ಛಾಯಾ ಚಿತ್ರಗ್ರಾಹಕರ ಕಥೆಯನ್ನು ಹೇಳಿದರು: “ಅವರ ಹೆಸರು ನಿತಿನ್‌ರಾಯ್ ಮತ್ತು ಪ್ಯಾಬ್ಲೋ ಬಾರ‍್ತೊಲೋಮಿಯೊ. ಅವರನ್ನು ಕರಸೇವಕರು ಶಿಕ್ಷಿಸುವುದರಲ್ಲಿದ್ದರು. ಹಾಗೆ ಮಾಡಿದರೆ ನಿಮ್ಮನ್ನು ದಸ್ತಗಿರಿ ಮಾಡುವುದಾಗಿ ಹೇಳಿ ಅವರನ್ನು ರಕ್ಷಿಸಿದೆ”.

ನಾನು ವೇದಿಕೆಯ ಮೇಲಿನಿಂದ ಕೆಳಗೆ ಇಳಿದು ಬಂದಾಗ ನಾನು ನೋಡಿದ್ದು ಕೇವಲ ಮರದ ದಿಮ್ಮಿಗಳು, ರಸ್ತೆತಡೆ, ಬೆಂಕಿ, ಜನರು ಲಾಠಿ ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದು ಝಳಪಿಸುತ್ತಿದ್ದರು. ಸುಮಾರು ಸಂಜೆ ೭.೩೦ರ ಹೊತ್ತಿಗೆ ಎಲ್ಲ ಪತ್ರಕರ್ತರು ಅಯೋಧ್ಯೆಯಿಂದ ಕಾಲು ಕಿತ್ತರು. ನಾನು ಕೂಡ ಒಂದು ಕಾರಿನಲ್ಲಿ ಹೋಗುವ ಅವಕಾಶ ಸಿಕ್ಕಿ ಫೈಝಾಬಾದ್ ಕಡೆಗೆ ಮುಖಮಾಡಿದೆ. ಅಲ್ಲಿ ನಾವು ಪತ್ರಕರ್ತರು ಉಳಿದು ಕೊಳ್ಳುವ ತಾಣವಾಗಿತ್ತು.

ಉಳಿದ ದೃಶ್ಯಾವಳಿಗಳ ಫೊಟೋ ತೆಗೆಯಲು ಮತ್ತೆ ಮರುದಿನ ಅಯೋಧ್ಯೆಗೆ ಹೋದೆ. ಬೆಟ್ಟದ ಸಾಲಿನಲ್ಲಿ ನಿಂತಿದ್ದ ಆ ಮಸೀದಿಯ ಸ್ಥಳದಲ್ಲಿ ಕಂದುಬಣ್ಣದ ಡೇರೆಗಳು ಕಾಣಿಸಿ ಕೊಂಡವು. ಕರಸೇವಕರು ತತ್ಕಾಲಿಕ ಮಂದಿರವನ್ನು ಕಟ್ಟಲು ಪ್ರಾರಂಭಿಸಿದರು.

ಬಾಬ್ರಿ ಮಸೀದಿ ಗುಂಬಜ ನೆಲಕ್ಕುರುಳಿ ಹದಿನೇಳು ವರ್ಷ ಸಂದು ಹೋದವು. ಆದರೆ ಗುಂಬಜ ಕೆಳಗೆ ಉರುಳಿದ ದೃಶ್ಯ ಕೊನೆಯ ಕಹಿ ನೆನಪಲ್ಲ. ಆದರೆ ಆಚಾರ್ಯರೊಬ್ಬರು ಹೇಳಿದ ಮಾತು ಮುಖ್ಯ “ಮುಸ್ಲಿಮರ ಮನೆಗಳು ಹೊತ್ತಿ ಉರಿಯುತ್ತವೆ. ಅದಕ್ಕೆ ಅವರೇ ಕಾರಣ”. ಬಾಬ್ರಿ ಮಸೀದಿ ಧ್ವಂಸದ್ವೇಷ ರಾಜಕಾರಣದ ಒಂದು ಅಂಗವಾಗಿರಬಹುದು. ಆದರೆ ಅಡ್ವಾಣಿಯವರಿಗೆ ಆಚಾರ್ಯನ ಧ್ವನಿವರ್ಧಕದ ಹತ್ತಿರ ಬಂದು ಆ ಅನಾಹುತ ವನ್ನು ತಡೆಯಬಹುದಿತ್ತು. ಕೇವಲ ಅಡ್ವಾಣಿಯವರು ಮಾಡುವ ಒಂದು ವಿನಂತಿ ಕೆಲವು ಜೀವಗಳನ್ನಾದರೂ ಉಳಿಸಬಹುದಿತ್ತು. ಹಾಗೆ ಮಾಡದಿರುವುದು ಧೈರ್ಯದ ಕೊರತೆಯ ನ್ನು ಮಾತ್ರ ಸೂಚಿಸುತ್ತದೆ.

(ಕೃಪೆ: ತೆಹಲ್ಕಾ )

Sunday, July 19, 2009

ಹಂದಿ, ಹಿಂಸೆ ಮತ್ತು ತಮಸ್
-ಮಲ್ನಾಡ್ ಮೆಹಬೂಬ್, ಸಕಲೇಶಪುರ
ತಮಸ್...
ಭೀಷ್ಮ ಸಾಹನಿ ರಚಿಸಿದ ಪ್ರಖ್ಯಾತ ಕಾದಂಬರಿ ‘ತಮಸ್’ ಜಗತ್ತಿಗೆ ಕೊಟ್ಟಿರುವ ಸಂದೇಶಗಳಲ್ಲಿ ಅದರಲ್ಲೂ, ಮುಸ್ಲಿಂ ಸಮಾಜಕ್ಕೆ ತಿಳಿಸಿರುವುದು ‘ಹಂದಿಯ ದೇಹ ನಿಮ್ಮ ಮಸೀದಿಗೆ ಯಾರಾದರೂ ಹಾಕಿದರೆ ಇದು ಕೋಮು ಹಿಂಸೆಗೆ ಬಳಸಲಾಗಿರುವ ತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಿ’ ಎಂದು ವಿವರಿಸಿದೆ.

ಹಂದಿಯ ಮೂಲಕ ನಡೆಯುವ ಕೋಮುಗಲಭೆಗಳ ಅಂತರಂಗವನ್ನು ಬಹಿರಂಗಗೊಳಿಸಿ, ಇಂದಿಗೂ ‘ತಮಸ್’ ಮನೆ ಮಾತಾಗಿದೆ.
೧೯೭೩ರಲ್ಲಿ ಮಹಾರಾಷ್ಟ್ರದ ಭೀವಂಡಿಯ ಹಿಂಸಾಚಾರ ನೋಡಿ ನೋಂದು ಭೀಷ್ಮ ಸಾಹನಿಯವರು, ೧೯೭೪ರಲ್ಲಿ ನಡೆದ ಪಂಜಾಬ್ ಪ್ರಾಂತ್ಯದ ಹಿಂಸಾಚಾರದ ವಾಸ್ತವಗಳನ್ನು ಅಕ್ಷರಗಳ ಮೂಲಕ ತೆರೆದಿಟ್ಟ ‘ದುರಂತ ಕಾವ್ಯ’ವಾಗಿದೆ ತಮಸ್.

ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಪ್ರಚೋದಿಸಿದಾಗ ಅಮಾಯಕ, ಮುಗ್ಧಗನ ಅನುಭವಿಸುವ ಸಂಕಷ್ಟಗಳ ಈ ಕಥೆ... ನೆಮ್ಮದಿ ಮತ್ತು ಶಾಂತಿಯಿಂದ ಇದ್ದ ಜನರನ್ನು, ಒಬ್ಬರು-ಮತ್ತೊಬ್ಬರ ಕತ್ತು, ಕತ್ತರಿಸುವಂತೆ ಮೂಡಿದ್ದು ಹೇಗೆ ಎಂಬುದನ್ನು ಈ ಕಥೆ ಹೇಳುತ್ತದೆ.

ಇದು ಕಲ್ಪನೆಯಲ್ಲ-ವಾಸ್ತವ, ರಾಷ್ಟ್ರ ಇದರ ಮೂಲಕ ಹಾದು ಹೋಗಿದೆ. ತಮ್ಮ ತಪ್ಪು ಏನೇನೂ ಇಲ್ಲದಿದ್ದರು ಬಹಳಷ್ಟು ಮಂದಿ ಈ ದುರಂತಕ್ಕೆ ಸಿಲುಕಿ, ಮತಾಂಧರ ಕೈಗೆ ಸಿಕ್ಕಿ ನಾಶ ಹೊಂದುತ್ತಾರೆ. ದೇವರಿಗೆ ಅಂಜುವ ನೆರೆ-ಹೊರೆಯವರಿಂದ ಬಹಳಷ್ಟು ಮಂದಿ ಬದುಕಿ ಉಳಿಯುತ್ತಾರೆ.

ಈ ಕಥೆಯಲ್ಲಿ ‘ಹಂದಿ’ ಕೊಂದು ಪ್ರಾರ್ಥನಾ ಸ್ಥಳಕ್ಕೆ ಹಾಕಿದವನೂ ಪಾಪಪ್ರಜ್ಞೆಯಿಂದ ಪೀಡಿತನಾಗಿ ಸತ್ತು ಹೋಗುತ್ತಾನೆ. ಈತನ ಕೈಗೆ ೫ ರೂಪಾಯಿ ನೋಟು ಇಟ್ಟು ಗಲಭೆಗೆ ಕಾರಣನಾದವನು ‘ಶಾಂತಿ’ ಮಂತ್ರ ಹೇಳುತ್ತ ಗಣ್ಯವ್ಯಕ್ತಿಗಳೊಂದಿಗೆ ಸೇರಿಕೊಳ್ಳುತ್ತಾನೆ. ಹೀಗೆ ‘ತಮಸ್’ ಅಂದರೆ ‘ಕಗ್ಗತ್ತಲು’ ಕಾದಂಬರಿ ಮುಕ್ತಾಯವಾಗುತ್ತದೆ.

ಮೈಸೂರು ‘ಹಂದಿ’ಗಲಭೆ...

ಸ್ವಾತಂತ್ರ ಪೂರ್ವ ಹಾಗೂ ನಂತರವೂ ಈ ‘ಹಂದಿಯ ಹಿಂಸೆ’ ಮುಸ್ಲಿಮ್‌ರ ಸುತ್ತ ಸುತ್ತುತ್ತಲೇ ಇದೆ. ಇತ್ತೀಚೆಗೆ ನಡೆದ ಮೈಸೂರು ಗಲಭೆಯಲ್ಲಿ ೩ ಅಮಾಯಕರ ಸಾವು, ಅಸ್ತಿ-ಪಾಸ್ತಿ ನಷ್ಟ ಸಮಾಜದ ಮೂರ್ಖತನಕ್ಕೆ ಸಾಕ್ಷಿಯಾಗಿದೆ.

ಇಸ್ಲಾಂ ಏನೂ ಹೇಳುತ್ತೆ...

ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರವರ ಅನುಮತಿ ಪಡೆದು ಅನ್ಯ ಧರ್ಮದ ವ್ಯಕ್ತಿಯೊಬ್ಬ, ರಾತ್ರಿ ಮಸೀದಿಯಲ್ಲಿ ತಂಗುತ್ತಾನೆ. ಬೆಳಗ್ಗೆ ಆತ ಮಸೀದಿಯಲ್ಲಿ ಹೇಸಿಗೆ ಮಾಡಿ ಹೋಗಿರುತ್ತಾನೆ. ಇದನ್ನು ಕಂಡ ಪ್ರವಾದಿಗಳು ತಮ್ಮ ಕೈಗಳಿಂದ ಹೇಸಿಗೆಯನ್ನು ಸ್ವಚ್ಚ ಮಾಡುತ್ತಾರೆ. ಇಂಥಹ ಸಂದರ್ಭದಲ್ಲಿ ‘ಹೀಗೆ ಮಾಡಬೇಕು’ ಎಂದು ಇದು ಪ್ರವಾದಿಯವರು ಸೂಚಿಸಿರುವ ಧರ್ಮ ಬದ್ಧ ಪರಿಹಾರವೆಂದು ಧರ್ಮಕ್ಕೆ ಸಂಬಂಧಿಸಿದ ‘ಗ್ರಂಥಗಳು’ ಹೇಳುತ್ತವೆ.

ಧರ್ಮ ಪಾಲಕರು ಮಾಡುತ್ತಿರುವುದು...

ಕೋಮು ಹಿಂಸಾಚಾರ ನಡೆಸಲು ಹಿಂದಿನಿಂದಲೂ ಬಳಸುತ್ತಿರುವ ಹಳಸಲು, ಸವಕಲು ತಂತ್ರಗಳಲ್ಲಿ ಒಂದು ‘ಹಂದಿ ದೇಹವನ್ನು ಮುಸ್ಲಿಂ ಪ್ರಾರ್ಥನ ಸ್ಥಳಗಳಲ್ಲಿ ಹಾಕುವುದು’ ಇದನ್ನು ಕಂಡ ಮುಸ್ಲಿಂರು ರೊಚ್ಚಿಗೆದ್ದು ಬೀದಿಗಿಳಿಯುವುದು, ಕೋಮುವಾದಿಗಳ ಯೋಜನೆಯನ್ನು ಸಫಲಗೊಳಿಸುವುದು, ಪ್ರಾಣ, ಆಸ್ತಿ-ಪಾಸ್ತಿ ಹಾಗೂ ನೆಮ್ಮದಿ ಕಳೆದುಕೊಳ್ಳುತ್ತಿರುವುದು.

ಅರ್ಥವಾಗದದ್ದು...

ಸಮಾಜದ ಶಾಂತಿಯನ್ನು ಕದಡುವ ಉದ್ದೇಶದಿಂದಲೇ ಮುಸ್ಲಿಂಮರನ್ನು ಪ್ರಚೋದಿಸಿ, ಕೋಮುಗಲಭೆ ಸೃಷ್ಟಿಸಿ, ಶಾಂತಿ ಪ್ರಿಯರ ಪ್ರಾಣ, ಆಸ್ತಿ-ಪಾಸ್ತಿ ನಷ್ಟ ಮಾಡಲು ಕಾರ್ಯತಂತ್ರ ರೂಪಿಸಿ ‘ಪ್ರಾರ್ಥನ ಸ್ಥಳಗಳಲ್ಲಿ ಹಂದಿ ದೇಹದ ಮಾಂಸ ಹಾಕಲಾಗುತ್ತದೆ ಎಂಬ ಈ ಸತ್ಯ ಇಡೀ ಸಮಾಜಕ್ಕೆ ತಿಳಿದಿದ್ದರು, ಇಂಥಹ ಸಂದರ್ಭದಲ್ಲಿ ಕಿಡಿಗೇಡಿಗಳ ಕಾರ್ಯತಂತ್ರಕ್ಕೆ ತಕ್ಕಂತೆ, ಮುಸ್ಲಿಂ ಜನಾಂಗದ ಕೆಲವರು ವರ್ತಿಸುವುದು ಏಕೆ? ಎಂಬುದು ಅರ್ಥವಾಗುವುದಿಲ್ಲ.

ಗಮನಿಸಬೇಕಾದ ಅಂಶ...

ಏಕ ದೇವನನ್ನು ನಂಬುವ, ಮಹಮ್ಮದ್ ಪೈಗಂಬರ್‌ರವರ ಜೀವನ ಕ್ರಮವನ್ನು ತಮ್ಮ ಜೀವನದ ದಿನಿತ್ಯದ ಬದುಕಿನಲಲಿ ಅಳವಡಿಸಿಕೊಂಡು ಬದುಕಿ, ಮುಕ್ತಿಕಾಣಲು ಬಯಸುವ ಮುಸ್ಲಿಂಮರು ‘ಮಸೀದಿಗೆ ಮಲಿನ ಪ್ರಾಣಿಯ ದೇಹದ ಮಾಂಸ ಹಾಕಿದಾಗ’ ಪ್ರವಾದಿಯ ನಡೆ-ನುಡಿಯನ್ನು ಏಕೆ? ಪಾಲಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದ್ದು, ಇದು ತರ್ಕಕ್ಕೆ ಸಿಗದಂತಾಗಿದೆ.

ಪ್ರಮುಖ ಅಂಶ...

ಇಂಥಹ ಅನೇಕ ಘಟನೆಗಳು ‘ಈ ಹಿಂದೆ ನಡೆದಿದ್ದು’ ಇದರಿಂದಾಗಿ ಆಗಿರುವ ಪರಿಣಾಮದ ಬಗ್ಗೆ ತಿಳಿದಿದ್ದರು, ಪದೇ ಪದೇ ಮೂರ್ಖತನಕ್ಕೆ, ಮೋಸಕ್ಕೆ, ಕುತಂತ್ರಕ್ಕೆ ಒಳಗಾಗುವುದು ಏಕೆ? ಎಂಬುದು ಅರ್ಥವಾಗದ ಪ್ರಮುಖ ಅಂಶವಾಗಿದೆ.

ಅರ್ಥಮಾಡಿಕೊಳ್ಳಬೇಕಾಗಿರುವುದು...

ಇಲ್ಲಿ ಓಟಿಗಾಗಿ ದೇವರು ಧರ್ಮವನ್ನು ಬೀದಿಗೆ ತಂದು ಬೆತ್ತಲೆಗೊಳಿಸುವ ‘ಖಾದಿ’ದಾರಿಗಳಿದ್ದಾರೆ. ‘ಖಾಕಿ’ಯೊಳಗೆ ಬಚ್ಚಿಟ್ಟುಕೊಂಡಿರುವ ಕೋಮುವಾದಿಗಳಿದ್ದಾರೆ. ಒಂದು ಕೋಮಿನ ಕರಿ ಕೋಟು ಧರಿಸಿರುವ ಕಾನೂನು ಪಾಲಕರಿದ್ದಾರೆ. ಕೋಮುವಾದಿಗಳನ್ನು ಹಾಗೂ ವ್ಯವಸ್ಥೆಯನ್ನು ಪ್ರತಿನಿಧಿಸುವ ಆಡಳಿತ ರಾಜ್ಯದಲ್ಲಿ ಜಾರಿಯಲ್ಲಿದೆ. ಇವರ ಮುಂದೆ ಪ್ರಾಮಾಣಿಕವಾಗಿ ನಮ್ಮ ತಲೆ ಕಡಿದು ಅವರ ‘ಪಾದದ ಮೇಲಿಟ್ಟರು, ಇದು ಎಳೇನೂರು ಚಿಪ್ಪು’ ಎಂದು ವಾದಿಸುವವರ ಮುಂದೆ ಜಾಗೃತರಾಗಿ ಬದುಕುವುದನ್ನು ಹಾಗೂ ಒಂದು ಪ್ರಾಣಿಯ ದೇಹದಿಂದ ಯಾವುದೇ ಧರ್ಮವು ಅಧರ್ಮವಾಗುವುದಿಲ್ಲ. ಧರ್ಮದ ಹೆಸರಿನಲ್ಲಿ ಜನರು ಸಮಾಜದಲ್ಲಿ ನೀಚ ಕೆಲಸ ಮಾಡಿದರೆ ಆಗಮಾತ್ರ ಧರ್ಮ ಮಲಿನವಾಗುತ್ತದೆ’ ಅರ್ಥಮಾಡಿಕೊಳ್ಳಬೇಕು.

ಏನೂ ಮಾಡಬೇಕು?

ಮಲೀನ ಪ್ರಾಣಿಯ ದೇಹದ ಮಾಂಸವನ್ನು ಮಸೀದಿಗೆ ಹಾಕಿದಾಗ ಪೊಲೀಸರಿಗೆ ವಿಷಯ ತಿಳಿಸಬೇಕು. ಶ್ವಾನದಳ ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸುವವರೆಗೆ ಯಾರು ಹತ್ತಿರಕ್ಕೆ ಹೋಗದಂತೆ ಈ ಬಗ್ಗೆ ಎಚ್ಚರಿಕೆ ವಹಿಸುವುದು. ಪೊಲೀಸರ ಮಾರ್ಗದರ್ಶನದಂತೆ ನಡೆದುಕೊಂಡು ಮಸೀದಿ ಸ್ವಚ್ಚಗೊಳಿಸುವುದು, ಮಾಧ್ಯಮದವರಿಗೆ ವಿಷಯ ತಿಳಿಸುವುದು ಮುಖ್ಯವಾಗಿದೆ. ಇಂಥಹ ವಿಷಯಗಳಿಂದ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ‘ತಮ್ಮ ಮಾನಸಿಕ ಹಾಗೂ ಧಾರ್ಮಿಕ ವಿಚಾರಧಾರೆಗಳ ಮೂಲಕ ಗಟ್ಟಿತನದ’ ಹೇಳಿಕೆ ನೀಡುವುದು. ಪೊಲೀಸರ ಆಶ್ರಯದಲ್ಲಿ ಸೌಹಾರ್ದ ಸಭೆಯನ್ನು ವಿಶಾಲವಾದ ಸಭಾಂಗಣದಲ್ಲಿ ನಡೆಸುವುದು, ಘಟನೆಯ ಬಗ್ಗೆ ಊರಿನ ಎಲ್ಲ ವರ್ಗದ ಜನರು ಸೇರಿ ಖಂಡಿಸುವುದು, ಪ್ರಾಮಾಣಿಕವಾದ ಚರ್ಚೆ ನಡೆಸುವುದು. ಜಾತ್ಯತೀತ ಶಕ್ತಿಗಳ ಧ್ವನಿಯನ್ನು ಗಟ್ಟಿಗೊಳಿಸುವುದಕ್ಕೆ ಒತ್ತು ನೀಡಬೇಕಾಗಿದೆ.

ಬದುಕಲು ಸಮಾಜದಲ್ಲಿ ‘ಶಾಂತಿ ಸೌಹಾರ್ದತೆ’ ಎಷ್ಟು ಮುಖ್ಯವಾಗಿದೆ ಎಂಬುದನ್ನು ಸಮಾಜಕ್ಕೆ ತಿಳಿಸುವುದು, ಕಿಡಿಗೇಡಿಗಳು ಯಾವುದೇ ಧರ್ಮದವರಾಗಲಿ, ಅವರ ಕುತಂತ್ರಕ್ಕೆ ಬಲಿಯಾಗದಂತಹ ವಾತಾವರಣ ನಿರ್ಮಿಸುವುದು ಮುಖ್ಯವಾಗಿದೆ. ಈ ಬಗ್ಗೆ ಧಾರ್ಮಿಕ ಮುಖಂಡರ ಚರ್ಚೆ, ಸಂವಾದ ನಡೆಸಿ ಯುವಕರಿಗೆ ಅರಿವು ಮೂಡಿಸಲು ಯತ್ನಿಸಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ಹಾದಿಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿಂಸೆಗೆ ಯಾರು ಬಲಿಯಾಗದಂತೆ ಎಚ್ಚರವಹಿಸಬೇಕು.

ಪರಿಹಾರ

ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು ತಮ್ಮ ‘ಹನಿ ಹನಿ ಕಣ್ಣೀರನ್ನು, ದುಃಖವನ್ನು, ಆಕ್ರೋಶವನ್ನು ತಮ್ಮೊಡಲೊಳಗೆ ಶೇಖರಿಸಿ ಸಾಗರದ ಸುನಾಮಿ ಅಲೆಯಾಗಿಸಿಕೊಳ್ಳಬೇಕು’, ‘ಹೆದರಿಕೆಯ ಎದೆ ಬಡಿತದ ಸದ್ದನ್ನು ಅದುಮಿ ಕೂಡಿಟ್ಟು ಗಂಡೆದೆಯ ಗುಡುಗಾಗಿಸಿ’ ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್ ಮೇಲೆ ಪ್ರಯೋಗಿಸಬೇಕು. ಈ ವ್ಯವಸ್ಥೆಯನ್ನು ಬದಲಾಯಿಸಿ ಪ್ರಾಮಾಣಿಕ ವ್ಯಕ್ತಿಗಳಿಂದ ಕೂಡಿದ ‘ಜನತಂತ್ರ’ ವ್ಯವಸ್ಥೆ ಆಡಳಿತಕ್ಕೆ ಬರುವಂತೆ ಮಾಡಿದಾಗ ಮಾತ್ರ ‘ನ್ಯಾಯ ಪಡೆಯಲು ಸಾಧ್ಯ’. ಬೀದಿಯಲ್ಲಿ ಕೂಗಾಡುವುದರಿಂದ ‘ಏನೂ ಸಾಧಿಸಲು ಸಾಧ್ಯವಿಲ್ಲ’ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಸಮಾಜವನ್ನು ಹಂದಿಯ ಸುತ್ತ ಗಿರಕಿ ಹೊಡೆಯಲು ಬಿಡದೆ ಪರಿಹಾರದ ಪರಿವರ್ತನೆಯತ್ತ ಸಾಗಬೇಕಾಗಿದೆ.