Sunday, November 14, 2010

ಸಾವಯವದಲ್ಲಿ ಬಂಪರ್ ಶುಂಠಿ (prajavani-november-4-2010)

ಡಾ. ವಿನಯ್.ಬಿ. ರಾಘವೇಂದ್ರ



ಶುಂಠಿ ಬೆಳೆಯುವ ರೈತರು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಹೇರಳವಾಗಿ ಬಳಸುತ್ತಾರೆ. ಕುಶಾಲನಗರ ತಾಲ್ಲೂಕಿನ ರೈತರೊಬ್ಬರು ಸಾವಯವ ಬೇಸಾಯ ಪದ್ಧತಿಯಲ್ಲಿ ಅರ್ಧ ಎಕರೆಯಲ್ಲಿ ಸುಮಾರು 220 ಚೀಲ ಶುಂಠಿ ಬೆಳೆದಿದ್ದಾರೆ. ಈ ಶುಂಠಿಗೆ ಹೆಚ್ಚು ಬೆಲೆ ಸಿಕ್ಕಿದೆ!


ಇತ್ತೀಚೆಗೆ ಕುಶಾಲನಗರದಿಂದ ಕೊಣನೂರು ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಶಿರಂಗಾಲ ಗ್ರಾಮದ ಬಳಿ ಶುಂಠಿಯ ಪರಿಮಳ ಮೂಗಿಗೆ ಬಂತು. ವಾಹನ ನಿಲ್ಲಿಸಿ ನೋಡಿದರೆ ಸ್ವಲ್ಪ ದೂರದಲ್ಲಿ ಕೆಲವರು ಗುಂಪಾಗಿ ನಿಂತು ಮಾತುಕತೆಯಲ್ಲಿ ತೊಡಗಿದ್ದರು. ಹತ್ತಿರ ಹೋದೆ. ಆಗ ತಾನೆ ಕೊಯ್ಲು ಮಾಡಿದ ಶುಂಠಿಯನ್ನು ಆಳುಗಳು ಚೀಲಗಳಿಗೆ ತುಂಬುತ್ತಿದ್ದರು. ಇನ್ನು ಕೆಲವರು (ಅವರು ದಲ್ಲಾಳಿಗಳು) ಪೈಪೋಟಿಯಲ್ಲಿ ಶುಂಠಿಯ ಬೆಲೆ ನಿಗದಿ ಮಾಡಲು ಮುಂದಾಗಿದ್ದರು.

ಶುಂಠಿ ಹೊಲದಲ್ಲಿ ಸಂತೋಷದ ಭಾವದಲ್ಲಿದ್ದ ರೈತರ ಹೆಸರು ಸಂಜೀವ್‌ಕುಮಾರ್.ವೃತ್ತಿಯಲ್ಲಿ ಅವರು ಶಿಕ್ಷಕರು. ಕಳೆದ ಐದು ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ ಬೇಸಾಯವನ್ನೂ ಮಾಡುತ್ತ ಬಂದಿದ್ದಾರೆ. ಬೇಸಾಯ ಅವರ ಮನೆತನದ ವೃತ್ತಿ. ಸಂಜೀವ್ ಅನೇಕ ವರ್ಷಗಳಿಂದ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಬೇಸಾಯ ಮಾಡುತ್ತಿದ್ದರು. ಒಮ್ಮೆ ಶುಂಠಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬ ಮಾಹಿತಿಯನ್ನು ಪತ್ರಿಕೆಗಳಲ್ಲಿ ಓದಿದ್ದರಂತೆ.

ನಂತರ ಅವರಿಗೆ ತಾವೂ ಶುಂಠಿ ಬೆಳೆಯಬಾರದೇಕೆ ಅನ್ನಿಸಿತಂತೆ. ಶುಂಠಿ ಬೆಳೆಯುವ ನಿರ್ಧಾರ ಮಾಡಿದರು. ಶುಂಠಿಯಲ್ಲಿ ವೈದ್ಯಕೀಯ ಗುಣಗಳು ಹೆಚ್ಚಾಗಿರುವುದರಿಂದ ರಾಸಾಯನಿಕ ಗೊಬ್ಬರ,ಕೀಟನಾಶಕ ಹಾಕಿ ಬೆಳೆಯುವ ಬದಲು ಸಾವಯವದಲ್ಲಿ ಬೆಳೆಯಲು ನಿರ್ಧರಿಸಿದರು.
ಮೊದಲ ಹಂತದಲ್ಲಿ ಅರ್ಧ ಎಕರೆಯಲ್ಲಿ ಶುಂಠಿ ಬೆಳೆಯಲು ನಿರ್ಧರಿಸಿದರು. ಭೂಮಿಯನ್ನು ಹದಮಾಡಿ ಹೇರಳವಾಗಿ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಹಾಕಿದರು. ಪ್ರಾಯೋಗಿಕವಾಗಿ 40ರಿಂದ 50 ಸೆಂ.ಮೀ ಅಂತರದಲ್ಲಿ ಸಾಲುಗಳನ್ನು ಮಾಡಿ ಮೊಳಕೆಯೊಡೆದ ಶುಂಠಿಯನ್ನು ಮೇಲ್ಮುಖವಾಗಿ ತಗ್ಗು ಸಾಲುಗಳಲ್ಲಿ 15-20 ಸೆಂ.ಮೀ ಅಂತರದಲ್ಲಿ ನಾಟಿ ಮಾಡಿದರು. ಸಾಲುಗಳ ಮೇಲೆ 10 ಸೆಂ.ಮೀ ಎತ್ತರದ ದಿಂಡುಗಳನ್ನು ಮಾಡಿ ಅದರ ಮೇಲೆ ಒಣಹುಲ್ಲು ಮುಚ್ಚಿದರು.


ಹೀಗೆ ಮಾಡುವುದರಿಂದ ಶುಂಠಿಯಲ್ಲಿ ಕಳೆ ಬಂದಾಗ ಕುಂಟೆ ಅಥವಾ ನೇಗಿಲ ಸಹಾಯದಿಂದ ನಿಯಂತ್ರಿಸಬಹುದು. ಆಳುಗಳಿಗೆ ತಗುಲುವ ಖರ್ಚು ಉಳಿಸಬಹುದು ಎನ್ನುತ್ತಾರೆ ಸಂಜೀವ್‌ಕುಮಾರ್.

ನಲವತ್ತೈದು ದಿನಗಳಲ್ಲಿ ಶುಂಠಿ ಬೀಜ ಮೊಳಕೆಯೊಡೆದು ಗಿಡವಾಗುತ್ತದೆ. ಆನಂತರ 15 ದಿನಗಳಿಗೊಮ್ಮೆ ಮೂರು ಸಲ ಸಮುದ್ರ ಕಳೆಯಲ್ಲಿ ತಯಾರಿಸಿದ ‘ಜಿಂಜರ್ ಗೋಲ್ಡ್’ ಎಂಬ ಸಸ್ಯವರ್ಧಕ ಟಾನಿಕ್ಕನ್ನು ಸಿಂಪಡಿಸಿದರು. ಇದರಲ್ಲಿ ಹೇರಳವಾಗಿ ನೈಸರ್ಗಿಕ ಪೊಟ್ಯಾಷ್ ಇರುವುದರಿಂದ ರಾಸಾಯನಿಕ ಪೊಟ್ಯಾಷ್ ಬಳಸಲಿಲ್ಲ. ನೈಸರ್ಗಿಕ ಪೊಟ್ಯಾಷ್‌ನಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಹೆಚ್ಚು ಕವಲುಗಳು ಒಡೆಯಲು ಸಹಾಯವಾಯಿತು. ಕೊಳೆ ರೋಗ ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಸುಣ್ಣ ಮತ್ತು ಮೈಲು ತುತ್ತದ ದ್ರಾವಣ ಸಿಂಪಡಿಸಿದರು.

ಈ ಕ್ರಮಗಳನ್ನು ಅನುಸರಿಸಿದ್ದರಿಂದ ಗಿಡಗಳು ಹೆಚ್ಚು ಕವಲೊಡೆದು ಬೆಳೆದವು.ಇದರಿಂದ ಇಳುವರಿ ಹೆಚ್ಚಾಯಿತು. ಅರ್ಧಎಕರೆ ಪ್ರದೇಶಕ್ಕೆ ಅವರು ಎಂಟು ಚೀಲ (ಚೀಲಕ್ಕೆ 60 ಕೇಜಿ) ಬಿತ್ತನೆ ಬೀಜ ಬಳಸಿದ್ದರು. ಕೊಯ್ಲು ಮಾಡಿದಾಗ 220 ಚೀಲ ಶುಂಠಿ ಇಳುವರಿ ಬಂತು. ಸಾವಯವದಲ್ಲಿ ಬೆಳೆದ ಶುಂಠಿಯ ಪರಿಮಳಕ್ಕೆ ದಲ್ಲಾಳಿಗಳು ಮಾರುಹೋದರು. ಮಾರುಕಟ್ಟೆಯಲ್ಲಿ 60 ಕೇಜಿಯ ಒಂದು ಚೀಲಕ್ಕೆ 950 ರೂ ಬೆಲೆ ಇದ್ದರೆ ಸಂಜೀವ್ ಬೆಳೆದ ಶುಂಠಿಯನ್ನು 1100 ರೂ.ಗಳಿಗೆ ಖರೀದಿಸಿದರು. ಶುಂಠಿಯಿಂದ ಬಂದ ಆದಾಯ ಸಂಜೀವ್ ಅವರಲ್ಲಿ ಮಂದಹಾಸ ಮೂಡಿಸಿತು.
ಇನ್ನು ಮುಂದೆಯೂ ಸಾವಯವ ಪದ್ಧತಿ ಅನುಸರಿಸಿ ಶುಂಠಿ ಮತ್ತಿತರ ಬೆಳೆಗಳನ್ನು ಬೆಳೆಯುತ್ತೇನೆ ಎನ್ನುವ ಸಂಜೀವ್ ಈ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು ಎನ್ನುತ್ತಾರೆ. ಆಸಕ್ತ ರೈತರು ಸಂಜೀವ್‌ಕುಮಾರ್ ಅವರನ್ನು ಸಂಪರ್ಕಿಸಬಹುದು ಅವರ ಮೊಬೈಲ್ ನಂಬರ್-98867 21387

Monday, October 11, 2010

ಅಯೋಧ್ಯೆ: ಕಾನೂನಿನ ಮೇಲೆ ಧರ್ಮದ ಸವಾರಿ

ಸಿದ್ಧಾರ್ಥ ವರದರಾಜನ್
(ಕೃಪೆ: ದಿ ಹಿಂದೂ)

ಹೊಸದಿಲ್ಲಿ, ಆ. ೨: ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ‘ಹಿಂದೂಗಳ ಶ್ರದ್ಧೆ ಹಾಗೂ ನಂಬಿಕೆ’ಯನ್ನೇ ಆಧಾರವಾಗಿಟ್ಟುಕೊಂಡು, ದುರ್ಬಲ ಸಾಕ್ಷಗಳನ್ನು ಉಲ್ಲೇಖಿಸಿ ತೀರ್ಪು ನೀಡಿದೆ. ಈ ತೀರ್ಪು ಇದೀಗ ಭಾರತದಲ್ಲಿ ಹೊಸ ನ್ಯಾಯಾಂಗ ಇತಿಹಾಸವನ್ನು ಸೃಷ್ಟಿಸಿದೆ.

ನ್ಯಾಯಾಲಯದ ವಿವೇಚನಾ ರಹಿತ ಈ ತೀರ್ಪಿನಿಂದಾಗಿ ಇಂತಹುದೇ ರೀತಿಯ ರಾಜಕೀಯ ಚಳವಳಿ ಹುಟ್ಟು ಹಾಕಲು ನೇರವಾಗಿ ಎಡೆ ಮಾಡಿಕೊಟ್ಟಿದೆ. ಕಾನೂನು ಮತ್ತು ಭಾರತ ಸಂವಿಧಾನವನ್ನು ಉಲ್ಲಂಘಿಸಲು ರಾಜಕೀಯ ಚಳವಳಿಗಳು ನೇರವಾಗಿ “ನಂಬಿಕೆ” ಮತ್ತು “ಶ್ರದ್ಧೆ”ಯನ್ನು ಆಧಾರವನ್ನಾ ಗಿಟ್ಟುಕೊಳ್ಳಲು ಅನುಕೂಲ ಮಾಡಿಕೊಟ್ಟಿರುವುದು ವಿಪರ್ಯಾಸವಾಗಿದೆ.

೫೦೦ ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಧ್ವಂಸಗೊಳಿಸಿ, ೧೯೯೨ರಲ್ಲಿ ಇಂತಹುದೇ ಉಲ್ಲಂಘನೆ ನಡೆದಿದೆ. ಅಕ್ರಮ ಪ್ರವೇಶ, ಧ್ವಂಸದ ಅಪರಾಧಗಳಿಗೆ ಭಾರತದ ರಾಜಕೀಯ ಮತ್ತು ನ್ಯಾಯಾಂಗ ವ್ಯವಸ್ಥೆಯು ಅಂದು ಮೂಕ ಸಾಕ್ಷಿಯಾಯಿತು. ಕಾನೂನನ್ನು ಕೈಗೆತ್ತಿಕೊಂಡವರ “ಶ್ರದ್ಧೆ” ಮತ್ತು “ನಂಬಿಕೆ”ಯನ್ನು ಕಾನೂನು ಬದ್ಧಗೊಳಿಸುವ ಮೂಲಕ ೧೮ ವರ್ಷಗಳ ಬಳಿಕ ದೇಶವು ಮತ್ತೊಂದು ಪಾಪ ಮಾಡಿದೆ.

ಬಾಬರಿ ಮಸೀದಿ-ರಾಮ ಜನ್ಮ ಭೂಮಿ ಭೂ ವಿವಾದ ಪ್ರಕರಣದ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದಾರೆ. ಆದರೆ ನ್ಯಾಯಮೂರ್ತಿ ಎಸ್. ಯು. ಖಾನ್, ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಧರ್ಮರ ಶರ್ಮಾ ಮೂವರೂ ಒಂದು ಪ್ರಮುಖ ಅಂಶವನ್ನು ಗುರುತಿಸಿದ್ದಾರೆ.

“ಹಿಂದೂಗಳ ಶ್ರದ್ಧೆ ಮತ್ತು ನಂಬಿಕೆಯ”ಯ ಪ್ರಕಾರ ಬಾಬರಿ ಮಸೀದಿಯ ಕೇಂದ್ರ ಗೋಪುರದಲ್ಲಿ ೧೯೪೯ರಲ್ಲಿ ರಾಮಲಲ್ಲಾನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿರುವ ಸ್ಥಳವು ಶ್ರೀ ರಾಮನ ಜನ್ಮ ಭೂಮಿ ಎಂಬುದಾಗಿ ನಂಬಲಾಗುತ್ತದೆ ಎಂದು ವಿವಾದಿತ ಭೂಮಿಯ ಹಿಂದೂ ದಾವೆದಾರರು ಪ್ರತಿಪಾದಿಸು ತ್ತಿರುವುದಾಗಿ ಮೂವರು ನ್ಯಾಯಾಧೀಶರೂ ಗುರುತಿಸಿದ್ದಾರೆ.

ಬಾಬರಿ ಮಸೀದಿಯ ಕೇಂದ್ರ ಗೋಪುರದ ಪ್ರದೇಶವು ರಾಮ ಜನ್ಮ ತಳೆದ ಭೂಮಿಯೆಂದು ಪ್ರತಿಯೊಬ್ಬ ಹಿಂದೂವೂ ನಂಬು ತ್ತಾನೆ ಎನ್ನಲಾಗಿದೆ. ಆದರೆ ನ್ಯಾಯಾಲಯವು ಕಾನೂನು ಕಾರಣ ಗಳು ಮತ್ತು ಸತ್ಯಾಂಶಗಳನ್ನು ಆಧಾರವಾಗಿಟ್ಟುಕೊಳ್ಳು ವುದಕ್ಕೆ ಹೆಚ್ಚು ಆದ್ಯತೆ ನೀಡುವುದನ್ನು ಹೊರತಾಗಿಸಿ, ಧರ್ಮ ಶಾಸ್ತ್ರಕ್ಕೆ ಹೇಗೆ ಹೆಚ್ಚಿನ ಆದ್ಯತೆ ನೀಡಿತು ಎಂಬ ಪ್ರಶ್ನೆಯೊಂದು ಉದ್ಭವಿಸಿದೆ.ತುಳಸಿದಾಸ್, ಅಯೋಧ್ಯೆಯಲ್ಲಿ ೧೬ನೆ ಶತಮಾನದಲ್ಲಿ ರಾಮಚರಿತ ಮಾನಸ ಗ್ರಂಥವನ್ನು ರಚಿಸಿದ್ದಾರೆ. ಆದರೆ ಇದೀಗ ಐದು ಶತಮಾನಗಳ ಬಳಿಕ ನ್ಯಾಯಾಲಯವು ಸ್ಪಷ್ಟವಾಗಿ ಗುರುತಿಸಿರುವ ಪ್ರದೇಶವು ರಾಮ ಜನ್ಮ ಭೂಮಿ ಎಂದು ತುಳಸಿದಾಸ್ ತನ್ನ ಗ್ರಂಥದಲ್ಲಿ ಎಲ್ಲೂ ತಿಳಿಸಿಲ್ಲ.

“ಜನ್ಮ ಸ್ಥಾನ”ಕ್ಕೆ “ಮುಕ್ತಿ” ನೀಡುವುದಕ್ಕಾಗಿ ಬಿಜೆಪಿ ಮತ್ತು ವಿ‌ಎಚ್‌ಪಿ ೧೯೮೦ರ ದಶಕದಲ್ಲಿ ರಾಜಕೀಯ ಹೋರಾಟ ಆರಂಭಿಸಿದ ಬಳಿಕ ಇದೀಗ ನ್ಯಾಯಾಲಯವು “ಶ್ರದ್ಧೆ ಮತ್ತು ನಂಬಿಕೆ”ಯ ಮಾತುಗಳನ್ನಾಡುತ್ತಿದೆ.

ಭಾರತದಲ್ಲಿ ಎಲ್ಲ ವಿಷಯಗಳಲ್ಲೂ ನಂಬಿಕೆಗೆ ಪ್ರಧಾನ ಸ್ಥಾನವಿದೆ. ಆದರೆ ಕಾನೂನು ನಿರ್ವಹಣೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು ನಂಬಿಕೆ ಮುಖ್ಯ ಆಧಾರವಾಗದು. ಮಾತ್ರವಲ್ಲದೆ ಚರಿತ್ರೆಯ ತಪ್ಪುಗಳೂ ಇಂದಿನ ನ್ಯಾಯ ನಿರ್ಧಾರಕ್ಕೆ ಆಧಾರವಾಗುವುದಿಲ್ಲ.

ಬಾಬರಿ ಮಸೀದಿ ಪ್ರದೇಶದಲ್ಲಿ ಹಿಂದೂ ಮಂದಿರವಿತ್ತೇ ಎಂಬ ಕುರಿತಾದ ಪ್ರಶ್ನೆಗೆ ಸಂಬಂಧಿಸಿ ೧೯೯೩ರಲ್ಲಿ ನರಸಿಂಹ ರಾವ್ ಸರಕಾರವು ಸುಪ್ರೀಂ ಕೋರ್ಟ್‌ಗೆ ಮಾಡಿದ್ದ ಮನವಿಗೆ ಉತ್ತರಿಸಲು ಸರ್ವೋಚ್ಚ ನ್ಯಾಯಾಲಯವು ಹಿಂದೇಟು ಹಾಕಿತ್ತು. ಈ ಸಂಬಂಧ ಉತ್ತರಿಸುವುದರಿಂದ ಸುಪ್ರೀಂ ಕೋರ್ಚ್ ಬುದ್ಧಿವಂತಿಕೆಯಿಂದ ನುಣುಚಿಕೊಂಡಿತ್ತು. ಆದರೂ ಹೈಕೋರ್ಟ್ ಮಾತ್ರ ಭೂ ಒಡೆತನಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧವಿರದ ಪ್ರಶ್ನೆಗಳನ್ನು ಕಲೆ ಹಾಕಿ ತೀರ್ಪು ನೀಡಿದೆ.

“ಹಿಂದೂ ಮಂದಿರವಿತ್ತೆನ್ನಲಾದ ಪ್ರದೇಶದಲ್ಲಿ ಅದನ್ನು ನಾಶಪಡಿಸಿ ಪ್ರಸ್ತುತ ಕಟ್ಟಡ ನಿರ್ಮಿಸಲಾಗಿದೆಯೇ?” ಎಂಬುದು ನ್ಯಾಯಾಲಯ ಹುಟ್ಟು ಹಾಕಿರುವ ಪ್ರಶ್ನೆಗಳಲ್ಲೊಂದಾಗಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ತಾಣದಲ್ಲಿ ಉತ್ಖನನ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ೨೦೦೩ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿ‌ಎ ಸರಕಾರ ಅಧಿಕಾರದಲ್ಲಿದ್ದಾಗ ನಡೆಸಲಾಯಿತು. ಹೀಗಾಗಿ ಅಲ್ಲಿ “ಹಿಂದೂ ಧಾರ್ಮಿಕ ಕಟ್ಟಡ”ವಿದ್ದ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯು ವರದಿ ನೀಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅದನ್ನು ಹೊರತಾಗಿಸಿಯೂ ಆ ವರದಿಯ ಬಗ್ಗೆ ಹಲವಾರು ಇತಿಹಾಸಕಾರರು ಮತ್ತು ಪುರಾತತ್ವ ಶಾಸ್ತ್ರಜರಿಗೆ ಭಿನ್ನಾಭಿಪ್ರಾಯವಿದೆ.

ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಯನ್ನು ಹೊಂದಿರುವ ಭಾರತದ ಭೂ ವ್ಯಾಪ್ತಿಯಲ್ಲಿ ಹಲವಾರು ಐತಿಹಾಸಿಕ ಕಟ್ಟಡಗಳನ್ನು ನಿರ್ಮಿಸುವ ಮೊದಲು ಅದಕ್ಕೂ ಮೊದಲು ಅಲ್ಲಿದ್ದ ಕಟ್ಟಡಗಳನ್ನು ನಾಶ ಪಡಿಸಿಯೇ ನಿರ್ಮಿಸಲಾಗಿದೆ.

ಬಹುತೇಕ ಬೌದ್ಧ ವಿಹಾರಗಳಲ್ಲಿ ಹಿಂದೂ ಮಂದಿರಗಳನ್ನು ನಿರ್ಮಿಸಲಾಗಿದೆ. ಮಂದಿರಗಳನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಗಳನ್ನು ಒಡೆದು ಮಂದಿರಗಳನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ೧೬ನೆ ಶತಮಾನದಲ್ಲಿ ಮಂದಿರವನ್ನು ಒಡೆದು ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದ್ದರೂ, ಅದಕ್ಕೆ ೨೧ನೆ ಶತಮಾನದಲ್ಲಿ ಯಾವ ಕಾನೂನು ಸಮರ್ಥನೆ ಇರಲು ಸಾಧ್ಯ? ಆಸ್ತಿ ವಿವಾದವನ್ನು ಇತ್ಯರ್ಥಗೊಳಿಸಲು ಇಂತಹ ಧ್ವಂಸಗಳೇ ಆಧಾರವಾದರೆ, ಇದು ಎಲ್ಲಿಗೆ ಹೋಗಿ ನಿಲ್ಲಬಹುದು? ವಾರಣಾಸಿಯಲ್ಲಿನ ಗ್ಯಾನ್‌ವಪಿ ಮಸೀದಿಯಲ್ಲಿ ಹಿಂದೂ ಮಂದಿರದ ಅವಶೇಷಗಳಿವೆ. ಮೂಲತ: ಅದೊಂದು ವಿಶ್ವನಾಥ ಮಂದಿರವೆಂದು ವಾದಿಸಲಾಗುತ್ತಿದೆ.

ತಮಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿರುವ ಭೂಮಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಬಹುತೇಕ “ಹಿಂದೂ”ಗಳ “ನಂಬಿಕೆ”ಯಾಗಿದೆ. ಬಾಬರಿ ಮಸೀದಿಯ ಧ್ವಂಸಕ್ಕೆ ಸಂಬಂಧಿಸಿ ಸೃಷ್ಟಿಸಲಾದ ಚಳವಳಿಯು ಭಾರತದಲ್ಲಿ ಸುಲಭವಾಗಿ ಅಧಿಕಾರಕ್ಕೆ ಬರಲು ಮತ್ತು ತೀವ್ರಗತಿಯಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಲು ರಾಜಕೀಯ ಪಕ್ಷಗಳಿಗೆ ಹಿಂದೆಂದೂ ಕಂಡರಿಯದ ಮಾರ್ಗವಾಗಿತ್ತು.

ಬಾಬರಿ ಮಸೀದಿಯ ಅಡಿಯಲ್ಲಿ ಮಂದಿರವಿತ್ತೆಂಬ ಭಾರತೀಯ ಪುರಾತತ್ವ ಇಲಾಖೆಯ ದೋಷಪೂರಿತ ವರದಿಯನ್ನು ಊಹೆಯ ಆಧಾರದಲ್ಲಿ ನಿರ್ಮಿಸಲಾಗಿದೆಯೇ ಹೊರತು, ಯಾವುದೇ ವೈಜ್ಞಾನಿಕ ಆಧಾರದಲ್ಲಿ ಅಲ್ಲ. ಭಾರ ತೀಯ ಪುರಾತತ್ವ ಇಲಾಖೆಯಾಗಲೀ ಅಥವಾ ಇತರ ಯಾವುದೇ ತಜ್ಞರಾಗಲೀ ಈ ಕುರಿತಾದ ವೈಜ್ಞಾನಿಕ ವಿವರಣೆ ಗಳನ್ನು ನೀಡಿಲ್ಲ. ಮಂದಿರವನ್ನು ಧ್ವಂಸಗೊಳಿಸಿದ ಬಳಿಕ ಮಸೀದಿ ಯನ್ನು ನಿರ್ಮಿಸಲಾಗಿದೆ ಎಂದು ಮೂವರು ನ್ಯಾಯಾಧೀಶರ ಪೈಕಿ ಇಬ್ಬರು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.

೧೯ನೆ ಶತಮಾನಕ್ಕೆ ಮುನ್ನ ಆ ಸ್ಥಳದ ಬಗ್ಗೆ ಯಾವುದೇ ಮಾಹಿತಿಯಿಲ್ಲವಾದರೂ, ಆನಂತರ ಈ ವಿವಾದಿತ ತಾಣದಲ್ಲಿ ಹಿಂದೂ ಮತ್ತು ಮುಸ್ಲಿಮರು ಆರಾಧಿಸುತ್ತಿದ್ದ ಬಗ್ಗೆ ನಮಗೆ ತಿಳಿದಿದೆ.

ಮುಸ್ಲಿಮರು ಬಾಬರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರೆ, ಹಿಂದೂಗಳು ರಾಮ ಚಬೂತ್ರದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಅವೆರಡೂ ಮಸೀದಿ ಆವರಣದಲ್ಲಿದ್ದವು.

ಈ ಸಂಪ್ರದಾಯವು ೧೯೪೯ರಲ್ಲಿ ರಾಜಕೀಯ ದುರುದ್ದೇಶ ಪೂರಿತ ವ್ಯಕ್ತಿಗಳು ಮಸೀದಿಯೊಳಗೆ ನುಗ್ಗಿ ರಾಮಲಲ್ಲಾನ ಪ್ರತಿಮೆಯನ್ನು ಪ್ರತಿಷ್ಠಾಪಿಸುವವರೆಗೂ ಸಹಜವಾಗಿ ನಡೆದುಕೊಂಡು ಬಂದಿತ್ತು. ೧೯೪೯ರ ಬಳಿಕ ೧೯೮೬ರಲ್ಲಿ ಹಿಂದೂಗಳಿಗೆ ದರ್ಶನಕ್ಕೆ ಅವಕಾಶ ನೀಡುವವರೆಗೂ ಎರಡೂ ಸಮುದಾಯಗಳಿಗೂ ಅಲ್ಲಿ ಪ್ರವೇಶಿಸುವ ಅವಕಾಶವಿರಲಿಲ್ಲ.

ವಿವಾದಿತ ಭೂಮಿಯನ್ನು ಮೂರು ಪಾಲುಗಳನ್ನಾಗಿ ಮಾಡುವ ಮೂಲಕ ಈ ಬಿಕ್ಕಟ್ಟಿನಲ್ಲಿ ರಾಜಕಾರಣಿಗಳು ಮೂಗು ತೂರಿಸುವ ಮೊದಲು ಇದ್ಧಂತಹ ಧಾರ್ಮಿಕ ಯಥಾಸ್ಥಿತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೈಕೋರ್ಟ್ ಪುಟ್ಟ ಹೆಜ್ಜೆಯೊಂದನ್ನು ಇರಿಸಿದೆ.

ಈ ಕುರಿತಾದ ತರ್ಕ ಅಪಾಯಕಾರಿಯಾಗಿದೆ. ಆದರೆ ಸುಪ್ರೀಂ ಕೋರ್ಟ್ ಈ ತಪ್ಪನ್ನು ಸರಿ ಪಡಿಸದಿದ್ದಲ್ಲಿ, ತೀರ್ಪಿನ ಪರಿಣಾಮವು ದೇಶದ ಕಾನೂನು, ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ತೀವ್ರ ಅಪಾಯವನ್ನು ತಂದೊಡ್ಡಲಿದೆ.

ಅಯೋಧ್ಯೆ ತೀರ್ಪಿನಿಂದ ಇತಿಹಾಸಕ್ಕೆ ಅಪಚಾರ

ರೋಮಿಲಾ ಥಾಪರ್
ಖ್ಯಾತ ಇತಿಹಾಸ ತಜ್ಞೆ.

ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು ನಿಜಕ್ಕೂ ಒಂದು ರಾಜಕೀಯ ದೃಷ್ಟಿಕೋನದ ತೀರ್ಪು ಎಂದೇ ಹೇಳಬಹುದು. ಈ ತೀರ್ಪಿನಲ್ಲಿ ಹೇಳಿದ್ದೆಲ್ಲವನ್ನೂ ಸ್ವತಃ ಸರಕಾರವೇ ಹಲವು ವರ್ಷಗಳ ಹಿಂದೆಯೇ ಕೈಗೊಳ್ಳಬಹುದಾಗಿತ್ತು. ವಿವಾದಿತ ನಿವೇಶನವನ್ನು ಸ್ವಾಧೀನಪಡಿಸಿಕೊಂಡು, ಧ್ವಂಸಗೊಂಡಿರುವ ಮಸೀದಿಯ ಜಾಗದಲ್ಲಿ ನೂತನ ದೇಗುಲವನ್ನು ನಿರ್ಮಿಸುವ ಬಗ್ಗೆಯೇ ನ್ಯಾಯಾಲಯ ಗಮನಹರಿಸಿದಂತಿದೆ. ಧಾರ್ಮಿಕ ಗುರುತುಗಳನ್ನು ಐತಿಹಾಸಿಕ ಸಾಕ್ಷಾಧಾರಗಳೆಂದು ಹೇಳಿಕೊಂಡು ನಡೆಸಲಾಗುತ್ತಿರುವ ಆಧುನಿಕ ರಾಜಕೀಯವೇ ಈ ಎಲ್ಲ ಸಮಸ್ಯೆಗಳಿಗೆ ಮೂಲ.

ನಿರ್ದಿಷ್ಟ ಸ್ಥಳವೊಂದರಲ್ಲಿ ದೈವಿಕ ಅಂಶದ ಅಥವಾ ಅರೆ ದೈವಿಕ ಅಂಶದ ವ್ಯಕ್ತಿಯೊಬ್ಬ ಜನಿಸಿದ್ದನೆಂದೂ, ಆತನ ಜನನದ ನೆನಪಿಗಾಗಿ, ಆ ಜಾಗದಲ್ಲಿ ನೂತನ ದೇಗುಲವೊಂದನ್ನು ನಿರ್ಮಿಸಲಾಯಿತೆಂದೂ ನ್ಯಾಯಾಲಯ ಘೋಷಿಸಿದೆ. ಹಿಂದೂಗಳ ಶ್ರದ್ಧೆ ಹಾಗೂ ನಂಬಿಕೆಗೆ ಸಂಬಂಧಿಸಿದ ವಿಷಯ ಇದಾಗಿದೆಯೆಂಬ ಮನವಿಗೆ ನ್ಯಾಯಾಲಯದ ಪ್ರತಿಕ್ರಿಯೆ ಇದಾಗಿದೆ. ಆದರೆ ಈ ವಾದವನ್ನು ಬೆಂಬಲಿಸುವಂತಹ ಸಾಕ್ಷಾಧಾರ ಗಳಿಲ್ಲದೆ ನೀಡಿರುವ ಈ ತೀರ್ಪನ್ನು ಕಾನೂನು ನ್ಯಾಯಾಲಯದಿಂದ ನಿರೀ ಕ್ಷಿಸಲು ಸಾಧ್ಯವಿಲ್ಲ. ಶ್ರೀರಾಮನನ್ನು ಹಿಂದೂಗಳು ಭಕ್ತಿಭಾವದಿಂದ ಆರಾಧಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಆತನ ಜನ್ಮಸ್ಥಳದ ಕುರಿತ ಹಕ್ಕುಸ್ಥಾಪನೆಯ ವಾದವನ್ನು ಬೆಂಬಲಿಸುವ ತೀರ್ಮಾನವನ್ನು ನ್ಯಾಯಾಂಗ ಕೈಗೊಳ್ಳಲು ಸಾಧ್ಯವೇ?.

ವಿವಾದಿತ ಸ್ಥಳದಲ್ಲಿ ೧೨ನೆ ಶತಮಾನದಲ್ಲಿ ದೇವಾಲಯವೊಂದಿತ್ತು. ಆದನ್ನು ನಾಶಪಡಿಸಿ, ಅಲ್ಲಿ ಮಸೀದಿಯೊಂದನ್ನು ನಿರ್ಮಿಸಲಾಗಿತ್ತು ಎಂದು ನ್ಯಾಯಾಲಯದ ತೀರ್ಪು ಹೇಳುತ್ತದೆ. ಹಾಗಾಗಿ ಆ ನಿವೇಶನದಲ್ಲಿ ನೂತನ ದೇಗುಲವನ್ನು ನಿರ್ಮಿಸುವುದು ನ್ಯಾಯಬದ್ಧವೆಂದು ತೀರ್ಪು ಪ್ರತಿಪಾದಿಸಿದೆ. ವಿವಾದಿತ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ನಡೆಸಿದ ಉತ್ಖನನ ಹಾಗೂ ಅದರ ವರದಿಗಳನ್ನು ನ್ಯಾಯಾಲಯ ಸಂಪೂರ್ಣವಾಗಿ ಒಪ್ಪಿಕೊಂಡಿದೆ. ಆದರೆ ಈ ವರದಿಗಳ ಬಗ್ಗೆ ಇತರ ಪುರಾತತ್ವ ಶಾಸ್ತ್ರಜ್ಞರು ಹಾಗೂ ಇತಿಹಾಸಕಾರರು ಪ್ರಬಲವಾದ ಆಕ್ಷೇಪಗಳನ್ನೆತ್ತಿದ್ದರು. ಆದರೆ ಇದೊಂದು ವೃತ್ತಿಪರ ಪರಿಣತಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ, ಯಾವುದೇ ಒಂದು ಅಭಿಪ್ರಾಯದ ಬಗ್ಗೆ ಭಿನ್ನಾಭಿಪ್ರಾಯಗಳಿರುವುದು ಸಹಜ.

ತೀರ್ಪು ನೀಡಿದ ಒಬ್ಬ ನ್ಯಾಯಾಧೀಶರಂತೂ ತಾನು ಇತಿಹಾಸಕಾರ ನಾಗಿರದಿರುವುದರಿಂದ ಐತಿಹಾಸಿಕ ಅಂಶಗಳನ್ನು ಪರಾಮರ್ಶಿಸಿಲ್ಲವೆಂದು ಹೇಳಿದ್ದಾರೆ. ಮಾತ್ರವಲ್ಲದೆ, ಈ ಪ್ರಕರಣದ ಬಗ್ಗೆ ತೀರ್ಪು ನೀಡಲು ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರದ ನೆರವು ಖಂಡಿತವಾಗಿಯೂ ಅಗತ್ಯವಿಲ್ಲವೆಂದು ಸಾರಿದ್ದಾರೆ.

ನಮ್ಮ ಪರಂಪರೆಯ ಒಂದು ಭಾಗವಾಗಿದ್ದ ೫೦೦ ವರ್ಷಗಳಷ್ಟು ಹಿಂದಿನ ಮಸೀದಿಯೊಂದನ್ನು, ರಾಜಕೀಯ ನಾಯಕತ್ವವೊಂದರ ಕುಮ್ಮಕ್ಕಿನ ಮೇರೆಗೆ ಜನರ ಗುಂಪೊಂದು ನಾಶಪಡಿಸಿತ್ತು. ಆದರೆ ಅಲಹಾಬಾದ್ ನ್ಯಾಯಾಲಯದ ತೀರ್ಪಿನ ಸಾರಾಂಶದಲ್ಲಿ ಈ ಬರ್ಬರ ವಿನಾಶಕಾರಿ ಘಟನೆಯ ಬಗ್ಗೆ ಪ್ರಸ್ತಾಪವೇ ಇಲ್ಲ. ನಮ್ಮ ಪರಂಪರೆಯ ಮೇಲೆ ನಡೆದ ಈ ಅಪರಾಧವನ್ನು ಖಂಡಿಸಲೇಬೇಕಾಗಿದೆ. ಮಸೀದಿಯ ಅವಶೇಷಗಳ ಪ್ರದೇಶದಲ್ಲಿ, ನೂತನ ದೇವಾಲಯವು ನಿರ್ಮಾಣವಾಗಲಿದೆ.

ಹೀಗಿರುವಾಗ ಆ ಪ್ರದೇಶದಲ್ಲಿ ಪುರಾತನ ಕಾಲದಲ್ಲಿ ಇತ್ತೆನ್ನಲಾದ ದೇವಾಲಯದ ನಾಶವನ್ನು ಖಂಡಿಸಲು ಹಾಗೂ ಅಲ್ಲೀಗ ನೂತನ ದೇವಾಲಯವನ್ನು ನಿರ್ಮಿಸುವುದನ್ನು ಹೇಗೆ ಸಮರ್ಥಿಸಲು ಸಾಧ್ಯ?. ಬಹುಶಃ ಮಸೀದಿ ಧ್ವಂಸದ ಘಟನೆಯನ್ನು ಅನುಕೂಲತೆ ಗಾಗಿ, ಪ್ರಕರಣದ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಯೆಂದೇ ಹೇಳಬಹುದು.

ದೇವಾಂಶ ಸಂಭೂತ ಅಥವಾ ಅರೆದೈವಿಕ ಅಂಶದ ವ್ಯಕ್ತಿಯೊಬ್ಬನ ಜನ್ಮಸ್ಥಳವೆಂದು ಘೋಷಿಸುವ ಮೂಲಕ ಯಾವುದೇ ಒಂದು ಗುಂಪು ಆ ನಿವೇಶನದ ಮೇಲೆ ಹಕ್ಕುಸ್ಥಾಪನೆಯ ವಾದ ಮಂಡಿಸಬಹುದೆಂಬುದನ್ನು ಈ ತೀರ್ಪು ಇತರ ನ್ಯಾಯಾಲಯಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ಇದಕ್ಕೆ ಪೂರಕವಾದಂತಹ ನಿವೇಶನಗಳು ಇರುವಲ್ಲೆಲ್ಲಾ ಹಲವಾರು ಜನ್ಮಸ್ಥಾನಗಳು ತಲೆಯೆತ್ತಲಿವೆ ಮತ್ತು ಅದಕ್ಕೆ ಬೇಕಾದ ವಿವಾದಗಳನ್ನು ಕೂಡಾ ಸೃಷ್ಟಿಯಾಗುತ್ತವೆ. ಐತಿಹಾಸಿಕ ಸ್ಮಾರಕಗಳ ನಾಶವನ್ನು ಖಂಡಿಸಲಾಗದಿದ್ದರೆ, ಇನ್ನಿತರ ಕಟ್ಟಡಗಳನ್ನು ನಾಶಗೊಳಿಸದಂತೆ ಜನರನ್ನು ತಡೆಯುವುದರಲ್ಲಿ ಯಾವ ಅರ್ಥವಿದೆ?. ಆರಾಧನಾ ಸ್ಥಳಗಳ ಸ್ಥಾನಮಾನವನ್ನು ಬದಲಿಸುವ ವಿರುದ್ಧ ೧೯೯೩ರಲ್ಲಿ ಅಂUಕರಿಸಲಾದ ಶಾಸನವು ನಿಷ್ಕ್ರಿಯವಾಗಿರುವುದು ನಮ್ಮ ಕಣ್ಮೆದುರೇ ಗೋಚರಿಸುತ್ತಿದೆ.

ಇತಿಹಾಸದಲ್ಲಿ ಏನೆಲ್ಲ ನಡೆಯಿತೋ. ಅವೆಲ್ಲ ಆಗಿ ಹೋದ ಸಂಗತಿಗಳು. ಅದನ್ನು ಮತ್ತೆ ಬದಲಾಯಿಸಲು ಸಾಧ್ಯವಿಲ್ಲ. ಆದರೆ ವಿಶ್ವಸನೀಯ ಸಾಕ್ಷಗಳ ಆಧಾರದಲ್ಲಿ ಅವುಗಳ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಹೊಂದಿರಬೇಕು. ಪ್ರಸಕ್ತ ರಾಜಕೀಯವನ್ನು ಸಮರ್ಥಿಸುವುದಕ್ಕಾಗಿ ಇತಿಹಾಸವನ್ನು ಬದಲಾಯಿಸಲು ನಮಗಾಗದು. ಈ ತೀರ್ಪು ಇತಿಹಾಸದ ಮೇಲಿನ ಗೌರವವನ್ನು ತೊಡೆದುಹಾಕಿದೆ ಹಾಗೂ ಇತಿಹಾಸದ ಜಾಗದಲ್ಲಿ ಧಾರ್ಮಿಕ ನಂಬುಗೆಯು ಆಕ್ರಮಿಸಬೇಕೆಂದು ಅದು ಬಯಸುತ್ತಿದೆ. ಈ ದೇಶದ ಕಾನೂನು ಕೇವಲ ನಂಬಿಕೆ ಹಾಗೂ ಶ್ರದ್ಧೆಯನ್ನು ಮಾತ್ರವಲ್ಲ, ಸಾಕ್ಷಗಳನ್ನು ಕೂಡಾ ಆಧರಿಸಿದೆಯೆಂಬ ಬಗ್ಗೆ ವಿಶ್ವಾಸ ಮೂಡಿದಾಗ ಮಾತ್ರ ನೈಜ ಮರುಸಂಧಾನ ಸಾಧ್ಯ.

ಈ ತೀರ್ಪು ನ್ಯಾಯವೇ?

೬ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದ ಬಗ್ಗೆ ಕೊನೆಗೂ ಒಂದು ತೀರ್ಪು ಹೊರ ಬಿದ್ದಿದೆ. ಆದರೆ ಈ ತೀರ್ಪು ನಿಜಕ್ಕೂ ನ್ಯಾಯವನ್ನು ನೀಡಿದೆಯೇ? ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದಿ ದೆಯೇ? ಮೇಲ್ನೋಟಕ್ಕೆ ನೋಡಿದರೆ ಪ್ರಮುಖ ವಾದಿ-ಪ್ರತಿವಾದಿಗಳಾಗಿದ್ದ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ಹಿಂದೂತ್ವವಾದಿ ಸಂಘಟನೆಗಳ ಪ್ರತಿನಿಧಿಗಳಿಗೆ ವಿವಾದಿತ ಜಾಗವನ್ನು ಮೂರು ಭಾಗ ಮಾಡಿ ಹಂಚಲಾಗಿದೆ. ಇದರಿಂದಾಗಿ ಎಲ್ಲರಿಗೂ ನ್ಯಾಯ ಒದಗಿಸ ಲಾಗಿದೆ ಎಂಬ ಸಮಾಧಾನವನ್ನು ಕೆಲವರು ತೋರುತ್ತಾರೆ. ನ್ಯಾಯವೋ? ಅನ್ಯಾಯ ವೋ ಒಟ್ಟಿನಲ್ಲಿ ಇಡೀ ದೇಶಕ್ಕೆ ಬೆಂಕಿ ಹಚ್ಚಿದ ವಿವಾದವೊಂದು ಹೇಗೋ ಬಗೆಹರಿಯಿತಲ್ಲ ಎಂಬ ನಿಟ್ಟುಸಿರನ್ನು ಬಿಡುತ್ತಾರೆ. ಇನ್ನು ಮುಂದಾ ದರೂ ಶಾಂತಿ ಉಳಿದರೆ ಸಾಕು ಎಂಬ ಹತಾಶ, ಅಸಹಾಯಕತೆಯಿಂದ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಈ ತೀರ್ಪು ನಿಜಕ್ಕೂ ನ್ಯಾಯಾಧಾರಿತವಾದ ಶಾಂತಿ ಯನ್ನು ಎತ್ತಿ ಹಿಡಿದಿದೆಯೇ ಎಂಬುದನ್ನು ಗಮನಿಸಲೇಬೇಕಾಗಿದೆ.

ಈ ವಿವಾದದಲ್ಲಿ ಇದ್ದ ಪ್ರಮುಖ ವಾದ ಅಂಶಗಳ ಬಗ್ಗೆ ಯಾವ ಬಗೆಯ ನಿಲುವನ್ನು ನ್ಯಾಯಾಲಯ ತೆಗೆದು ಕೊಂಡಿದೆ? ಮೊದಲನೆಯದಾಗಿ ಇದು ರಾಮಜನ್ಮಭೂಮಿ ಎಂಬ ಪ್ರಮುಖವಾದ ವಿವಾದ ಒಂದು ಪುರಾಣದ ವಿಷಯವನ್ನು ಇತಿಹಾಸಿಕ ವಿಷಯವಾಗಿ ಪರಿಗಣಿಸಿದೆ. ದಾವೆ ಯನ್ನು ಪರಿಗಣಿಸಿದ್ದೆ ನ್ಯಾಯಕ್ಕೆ ಮಾಡಿದ ಅಪಚಾರ. ೧೯೮೯ರಲ್ಲಿ ಹಿಂದುತ್ವವಾದಿ ಸಂಘಟನೆಗಳು ಅಲಹಾಬಾದ್ ಹೈಕೋರ್ಟ್‌ನ ಮುಂದೆ ಹಾಕಿದ ದಾವೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರ ನನ್ನೆ ದಾವೆದಾರನನ್ನಾಗಿ ಮಾಡಿದ್ದವು. ಮತ್ತು ಆ ದೇವನು ಬಾಲ ರಾಮನಾಗಿರುವುದರಿಂದ ಅವನ ಗಾರ್ಡಿಯನ್‌ನಂತಾಗಿ ತಾವು ವಾದ ಮಾಡಿದ್ದೇವೆಂದು ಕೋರ್ಟ್ ಮುಂದೆ ಅಂUಕರಿಸಿದ್ದವು. ಇಂತಹ ಹಾಸ್ಯಾಸ್ಪದ ದಾವೆಯನ್ನು ಕೋರ್ಟ್ ಪರಿಗಣಿಸಿ ದ್ದಲ್ಲದೆ ಆ ಜಾಗವನ್ನು ರಾಮಜನ್ಮ ಭೂಮಿಯೆಂದು ಹಿಂದುಗಳು ಭಾವಿಸು ತ್ತಾದ್ದರಿಂದ ಮತ್ತೆ ಒಂದು ದೈವ ಸ್ವರೂಪವು ಯಾವುದೇ ಆಕಾರದಲ್ಲಾದರೂ ಇರಬಹುದಾದ್ದರಿಂದ ಅದು ರಾಮಜನ್ಮ ಭೂಮಿಯೇ ಎಂದು ಪರಿಗಣಿಸಿದೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇದಕ್ಕೆ ದಾವೆದಾರರ ಶ್ರದ್ಧೆಯೊಂದು ಪುರಾವೆಯೇ ಹೊರತು ಕಕ್ಷಿದಾರರು ಬೇರೆ ಯಾವುದೇ ಸಾಕ್ಷಿ ಪುರಾವೆಗಳನ್ನು ಒದಗಿಸಿಲ್ಲ. ಪುರಾಣ ಮತ್ತು ನಂಬಿಕೆ ವಿಷಯವೊಂದಕ್ಕೆ ಭೌತಿಕ ಸಾಕ್ಷಿ ಪುರಾವೆಗಳನ್ನು ಒದಗಿಸಲು ಬರುವುದಿಲ್ಲ. ಭಾರತದ ನ್ಯಾಯ ಸನ್ನಿಧಿಯಲ್ಲಿ ಸಾಕ್ಷಿ ಪುರಾವೆ ಇಲ್ಲದೆ ನ್ಯಾಯದಾನ ಸಾಧ್ಯವೇ ಇಲ್ಲ. ಆದರೂ ಇಲ್ಲಿ ಬಾಲ ರಾಮನೆಂಬ ನಂಬಿಕೆಯ ವಿಷಯವನ್ನು ಭೌತಿಕ ಅಸ್ತಿತ್ವವುಳ್ಳ ಕಕ್ಷಿದಾರ ರನ್ನಾಗಿ ನ್ಯಾಯಾಲಯ ಪರಿಗಣಿಸಿರುವುದು ಮಾತ್ರವಲ್ಲದೇ ನಂಬಿಕೆ ವಿಷಯವನ್ನೇ ಪ್ರಮುಖವಾಗಿ ಪರಿಗಣಿಸಿ ವಿವಾದಿತ ಸ್ಥಳವನ್ನು ರಾಮಜನ್ಮ ಭೂಮಿಯೆಂದು ಘೋಷಿಸಿದೆ. ಇದು ಸತ್ಯಕ್ಕೆ, ನ್ಯಾಯಕ್ಕೆ, ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ ವಾಗಿದೆ. ಅಷ್ಟು ಮಾತ್ರವಲ್ಲ, ಬರಲಿರುವ ದಿನಗಳಲ್ಲಿ ಈ ನ್ಯಾಯಾದೇಶ ಅಪಾಯಗಳ ಹುತ್ತವನ್ನೇ ಹುಟ್ಟಿಸಿ ಹಾಕಲಿದೆ. ಏಕೆಂದರೆ ಒಂದು ಸ್ಥಳವು ಮಸೀದಿಯೋ ಮಂದಿರವೋ ಎಂಬುದು ಪುರಾವೆಗಳಿಲ್ಲದ ಬಹುಸಂಖ್ಯಾತರ ನಂಬಿಕೆಯೊಂದರ ಮೇಲೆ ತೀರ್ಮಾನವಾಗಿ ಬಿಟ್ಟರೆ ಅದು ದೇಶಾದ್ಯಂತ ಇಂತಹುದೇ ಹಲವಾರು ವಿವಾದಗಳನ್ನು ಹುಟ್ಟು ಹಾಕುವುದಕ್ಕೆ ಕಾರಣವಾಗುವು ದಿಲ್ಲವೇ? ಈಗಾಗಲೇ ಸಂಘಪರಿವಾರ ದವರೇ ದೇಶಾದ್ಯಂತ ೨೦೦೦ಕ್ಕೂ ಹೆಚ್ಚಿನ ಜಾಗಗಳಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ ಎಂದು ಸಾಕ್ಷಿ ಪುರಾವೆಗಳಿಲ್ಲದೆ ಗಲಭೆಗಳನ್ನು ಹುಟ್ಟ್ಟು ಹಾಕಿದ್ದಾರೆ. ಅಲ್ಲಿಯೂ ಕೂಡ ಸಂಘ ಪರಿವಾರದವರು ಶ್ರದ್ಧೆಯ ವಿಷಯವನ್ನೇ ಮುಂದು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬಂದಿರುವ ಆದೇಶ ಮುಂದೆ ಎಂತಹ ಸಂಕ್ಷೋಭೆಗಳನ್ನು ಹುಟ್ಟು ಹಾಕಬಹುದು? ಎರಡನೆಯದಾಗಿ ನ್ಯಾಯಾಲಯದ ಮುಂದಿದ್ದ ಮತ್ತೊಂದು ಪ್ರಶ್ನೆ ೧೫೨೮ರಲ್ಲಿ ಅಲ್ಲಿ ಬಾಬರಿ ಮಸೀದಿಯನ್ನು ಕಟ್ಟಿದಾಗ ಮಂದಿರವಿತ್ತೇ? ಮತ್ತು ಇದ್ದ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಲಾಯಿತೇ? ಎಂಬ ಪ್ರಶ್ನೆಗಳು. ಇದರ ಬಗ್ಗೆ ಮೂರು ನ್ಯಾಯಾಧೀಶರು ಬೇರೆ ಬೇರೆ ಅಭಿಪ್ರಾಯ ಗಳನ್ನು ಹೊಂದಿದ್ದಾರೆ. ಇಬ್ಬರು ನ್ಯಾಯಾ ಧೀಶರು ಬಾಬರಿ ಮಸೀದಿ ಕಟ್ಟುವ ಮುನ್ನ ಅಲ್ಲಿ ಮಂದಿರವೊಂದು ಇತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬ ನ್ಯಾಯಾಧೀಶರು ಅಲ್ಲಿ ಮಂದಿರ ತರಹದ ಧಾರ್ಮಿಕ ಸ್ಥಳವೊಂದು ಇದ್ದಿರಬಹುದಾ ದರೂ ಅದನ್ನು ಕೆಡವಿ ಬಾಬರಿ ಮಸೀದಿ ಯನ್ನು ಕಟ್ಟಲಾಗಿದೆಯೆಂದು ಹೇಳಲಾಗುವು ದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇದ್ದರೂ ಸಾರಾಂಶ ಬಾಬರಿ ಮಸೀದಿ ಇದ್ದ ಜಾಗದಲ್ಲಿ ಮಂದಿರವೊಂದು ಇತ್ತೆಂದು ಅಭಿಪ್ರಾಯಕ್ಕೆ ಬರಲು ಅರ್ಕಿಯಾಲಜಿಕಲ್ ಸರ್ವೇ ಅಫ್ ಇಂಡಿಯಾ ನಡೆಸಿದ ಉತ್ಖನನದ ಪುರಾವೆಗಳನ್ನು ಆಧರಿಸಿದ್ದಾರೆ. ಆದರೆ ಆ ವರದಿ ಖಡಾಖಂಡಿತವಾಗಿ ಉತ್ಖನನದಲ್ಲಿ ಸಿಕ್ಕ ಅವಶೇಷಗಳು ಮಂದಿರವೇ ಎಂದೇನೂ ಹೇಳುವುದಿಲ್ಲ. ಆದರೂ ನ್ಯಾಯಾಲಯ ಅದು ಮಂದಿರವೇ ಎಂಬ ತೀರ್ಮಾನಕ್ಕೆ ಹೇಗೇ ಬಂದಿತೆಂಬುದನ್ನು ಎಂಟುವರೆ ಸಾವಿರ ಪುಟಗಳ ಆದೇಶದಲ್ಲಿ ಹುಡುಕ ಬೇಕಾಗಿದೆ. ಅದೇನೇ ಇರಲಿ ೪೦೦ ವರ್ಷಕ್ಕೂ ಹಿಂದೆ ನಡೆದು ಹೋದ ಅಥವಾ ನಡೆಯದೇ ಇರಬಹುದಾದ ಸಂಗತಿಯೊಂದನ್ನು ವರ್ತಮಾನದ ವಿವಾದವನ್ನು ಬಗೆಹರಿಸಲು ಸೂಕ್ತ ಮಾನದಂಡವಾಗಿ ಇಟ್ಟುಕೊಂಡಿರು ವುದನ್ನೆ ಪ್ರಾಯಶಃ ಪ್ರಪಂಚದ ಯಾವುದೇ ಪ್ರಜಾಪ್ರಭುತ್ವವು ಮಾಡಿ ರುವುದಿಲ್ಲ. ಇಂತಹ ಐತಿಹಾಸಿಕ ಸಂಗತಿಗಳನ್ನು ನಿರ್ಧರಿಸಲು ಇತಿಹಾಸ ಪರಿಣಿತರೇ ಬೇಕೆ ವಿನಃ ಅದರ ಬಗ್ಗೆ ಯಾವುದೇ ತರಬೇತಿ ಪಡೆಯದ ನ್ಯಾಯಾಧೀಶರಲ್ಲ. ಹೀಗಾಗಿ ಯಾವುದೇ ಸಾಕ್ಷಿ ಪುರಾವೆಯಿಲ್ಲದೆ ಅದು ಮಂದಿರವೆಂಬ ತೀರ್ಮಾನಕ್ಕೆ ಬಂದಿ ದ್ದಾರೆ. ಅಲ್ಲಿ ಕಟ್ಟಿದ್ದ ಮಸೀದಿಯು ಇಸ್ಲಾಮಿಕ್ ಶಾಸ್ತ್ರಗಳ ಅನುಸಾರವಾಗಿ ಇರುವ ಮಸೀದಿಯಾಗಲು ಸಾಧ್ಯವಿಲ್ಲ ಎಂಬ ತೀರ್ಮಾನವನ್ನು ನ್ಯಾಯಾಲಯ ನೀಡಿ ಬಿಟ್ಟಿದೆ.

ಇದರಲ್ಲಿ ಗಮನಿಸಬೇಕಾದ ಮುಖ್ಯಾಂಶವೇನೆಂದರೆ ಮಂದಿರ ಕೆಡವಿ ಮಸೀದಿಯನ್ನು ಕಟ್ಟಿದರು ಎಂಬ ಐತಿಹ್ಯ ಅಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ ಭಾರತದ ಇತಿಹಾಸವನ್ನು ಉತ್ಖನನ ಮಾಡುತ್ತಾ ಹೋದರೆ ಮಸೀದಿಗಳ ಅವಶೇಷಗಳು ಸಿಗುತ್ತವೆ. ಬೌದ್ಧ ವಿಹಾರಗಳ ಅವಶೇಷಗಳು ದೊರೆಯುತ್ತವೆ. ಇನ್ನೂ ಆಳಕ್ಕೆ ತೋಡಿದರೆ ಈ ದೇಶದ ಮೂಲ ನಿವಾಸಿಗಳ ದೇವಸ್ಥಾನಗಳನ್ನೆಲ್ಲಾ ಆರ್ಯರು ನಾಶ ಮಾಡಿದ ಅವಶೇಷಗಳು ಸಿಗುತ್ತವೆ. ಆದುದರಿಂದಲೇ ವರ್ತಮಾನದ ವಿವಾದಗಳನ್ನು ಬಗೆಹರಿಸಲು ಆಧುನಿಕ ಪ್ರಜಾಪ್ರಭುತ್ವಗಳು ಇತಿಹಾಸದ ಅವಘಡ ಗಳನ್ನು ಯಾವ ಕಾರಣಕ್ಕೂ ಪುರಾವೆಯಾಗಿ ಪರಿಗಣಿಸಬಾರದು. ಆದರೆ ಈ ವಿವಾದದಲ್ಲಿ ಇತಿಹಾಸವಿರದ ಪುರಾಣವೇ ಪುರಾವೆ ಯಾಗಿಬಿಟ್ಟಿದೆ.

ಮೂರನೆಯದಾಗಿ ಮಂದಿರದ ಗೊಮ್ಮಟವಿದ್ದ ಜಾಗದಲ್ಲೇ ರಾಮಜನ್ಮವಾಗಿದೆ ಎಂದು ದಾವೆದಾರರು ಭಾವಿಸುವುದರಿಂದ ಈ ಜಾಗವನ್ನು ಮೂರು ಪಾಲು ಮಾಡಿ ಹಂಚುವಾಗ ಗೋಮ್ಮಟವಿದ್ದ ಕೆಳ ಭಾಗವನ್ನು ಅವರಿಗೆ ಬಿಟ್ಟು ಕೊಡಬೇಕೆಂದು ಆದೇಶಿಸಲಾಗಿದೆ. ಇಲ್ಲಿ ಮೂರು ಪಾಲು ಹಂಚಿಕೆಯಾಗುವ ಮುನ್ನ ಸುನ್ನಿ ವಕ್ಫ್ ಬೋರ್ಡ್ ಆಗಲಿ, ನಿರ್ಮೋಹಿ ಅಖಾಡವಾಗಲಿ ತಾವೇ ನಿಜವಾದ ವಾರಸುದಾರರೆಂದು ಸಾಬೀತು ಮಾಡಲು ವಿಫಲರಾಗಿದ್ದಾರೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಆದರೂ ನಿರ್ಮೋಹಿ ಅಖಾಡಕ್ಕೆ ಹಿಂದುತ್ವ ಸಂಘಟನೆಗಳಿಗೆ ಮೂರನೆ ಎರಡು ಭಾಗದಷ್ಟು ಸ್ಥಳ ದಾನ ಮಾಡಿದ್ದಾರೆ. ಮತ್ತು ಅನ್ಯಾಯವೆಂದು ಕಾಣದಂತೆ ಮಾಡಲು ರಾಜಿ ನ್ಯಾಯ ಮಾಡಿ ಮೂರನೆ ಒಂದು ಭಾಗದಷ್ಟು ಮುಸ್ಲಿಮ್ ಸಂಘಟನೆಗೆ ನೀಡಲಾಗಿದೆ. ಈ ಆದೇಶದ ಹಿಂದೆ ಕೆಲಸ ಮಾಡಿರುವುದು ಯಾವುದೇ ಬಗೆಯ ನ್ಯಾಯಿಕ ಮಾನದಂಡವಲ್ಲ. ಬದಲಿಗೆ ಸಂಘಪರಿವಾರವು ರಾಷ್ಟ್ರದ್ಯಾಂತ ಧಾರ್ಮಿಕ ದಳ್ಳುರಿ ಹಚ್ಚಿ ಪರೋಕ್ಷವಾಗಿ ತಂದ ಒತ್ತಡವೇ ಇಲ್ಲಿ ಒಂದು ಮಾನದಂಡವಾಗಿ ಕೆಲಸ ಮಾಡಿದೆ.

ಅದುದರಿಂದಲೇ ಸಂಘಪರಿವಾರದ ಶಕ್ತಿಗಳು ಈ ಆದೇಶದ ಬಗ್ಗೆ ಸಂಭ್ರಮ ಪಡುತ್ತಿವೆ. ಉಳಿದಂತೆ ಮುಸ್ಲಿಮರ ಹಕ್ಕು ಪರಿಗಣಿಸದೆ ನ್ಯಾಯಾಲಯ ಔದರ್ಯದಿಂದ ನೀಡಿದ ಮೂರನೆ ಒಂದು ಭಾಗದಷ್ಟು ಜಾಗವನ್ನು ನೀಡಿರುವುದನ್ನೇ ನ್ಯಾಯದಾನವೆಂದು ಮತ್ತೆ ಕೆಲವರು ಭಾವಿಸುತ್ತಿದ್ದಾರೆ.

ಈ ಆದೇಶ ಏನೇ ಬಂದಿದ್ದರೂ ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗುವ ಅವಕಾಶವಿರುವುದರಿಂದಲೇ ಈಗಲೇ ಹತಾಶರಾಗುವ ಅಗತ್ಯವಿಲ್ಲ. ಶಾಂತಿಯನ್ನು, ಸಂಯಮವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ ಎಂಬುದು ಸರಿಯಾದುದೆ. ಆದರೆ ನ್ಯಾಯಾಲಯವು ಸತ್ಯಕ್ಕೆ ಮತ್ತು ನ್ಯಾಯಕ್ಕೆ ಮಾಡಿರುವ ಅಪಚಾರವನ್ನು ಅನ್ಯಾಯ ಎಂದು ಹೇಳಲು ನಿಜವಾದ ನಾಗರಿಕರ‍್ಯಾರು ಹಿಂಜರಿಯಬಾರದು.

೧೯೪೭ಕ್ಕೂ ಹಿಂದೆ ಈ ದೇಶದಲ್ಲಿ ಧರ್ಮಗಳ ನಡುವೆ, ಶ್ರದ್ಧೆಗಳ ನಡುವೆ ಸಾಕಷ್ಟು ಕಲಹಗಳು ನಡೆದು ಹೋಗಿವೆ. ೪೭ರ ಆಗಸ್ಟ್ ೧೫ರ ನಂತರ ಈ ದೇಶದ ನಾಗರಿಕರಿಂದಲೂ ಸಾಮಾನತೆ ಮತ್ತು ಭ್ರಾತೃತ್ವದಿಂದ ಬಾಳಲು ಸಂಕಲ್ಪ ತೊಟ್ಟಿದ್ದೇವೆ. ಆದುದರಿಂದ ಇತಿಹಾಸಗಳ ಸಂಗತಿಗಳನ್ನು ಇತಿಹಾಸಕ್ಕೆ ಬಿಟ್ಟು ಹೊಸದಾಗಿ ಬದುಕು ಕಟ್ಟುವ ಭವಿಷ್ಯ ಮುಖಿ ರಾಜಕೀಯ ಮತ್ತು ನ್ಯಾಯಸಂಹಿತೆ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ೧೯೯೧ರಲ್ಲಿ ಸಂಸತ್ತಿನಲ್ಲಿ mZಛಿ ಟ್ಛ ಡಿಟ್ಟoeಜಿm (omಛ್ಚಿಜಿZ mಟqಜಿoಜಿಟ್ಞo) Zಠಿ೧೯೯೧ ಎಂಬ ಕಾಯಿದೆ ಜಾರಿಗೆ ಬಂದಿದೆ. ಇದರ ಪ್ರಕಾರ ಈ ದೇಶದಲ್ಲಿ ಯಾವುದೇ ಶ್ರದ್ಧಾ ಕೇಂದ್ರಗಳ ಬಗ್ಗೆ ವಿವಾದವಿದ್ದರೂ ಅದನ್ನು ಆ ಶ್ರದ್ಧಾ ಕೇಂದ್ರಗಳನ್ನು ೧೯೪೭ರ ಆಗಸ್ಟ್ ೧೫ರಂದು ಯಾವ ಸ್ಥಿತಿಯಲ್ಲಿತ್ತೋ, ಯಾವ ಧಾರ್ಮಿಕ ಸ್ವರೂಪದಲ್ಲಿತ್ತೋ ಅದೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರಬೇಕೆಂದು ನಿರ್ದೇಶಿಸಲಾಗಿದೆ. ದುರದೃಷ್ಟವಶಾತ್ ಬಾಬರಿ ಮಸೀದಿ ವಿವಾದವೊಂದನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ಈ ಕಾಯಿದೆಯ ಹಿಂದಿನ ತರ್ಕ ಅಂದರೆ ೪೭ರ ಹಿಂದಿನ ಇತಿಹಾಸವನ್ನು ಇತಿಹಾಸಕ್ಕೆ ಬಿಟ್ಟು ಭ್ರಾತೃತ್ವ ಮತ್ತು ಸಮಾನತೆಯನ್ನು ಕಾಪಾಡಿಕೊಂಡು ಬರಲು ಆಯಾ ಸ್ಥಳಗಳ ಯಥಾಸ್ಥಿತಿಯನ್ನು ಕಾಪಾಡಿಕೊಂಡ ಬರಬೇಕು ಎಂಬ ತರ್ಕ ಅತ್ಯಂತ ನ್ಯಾಯೋಚಿತವಾದುದು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತದ್ದು. ಬಾಬರಿ ಮಸೀದಿ ವಿವಾದವು ನ್ಯಾಯೋಚಿತವಾಗಿ ಬಗೆಹರಿಯಲು ಇದೇ ಸರಿಯಾದ ಭೂಮಿಕೆಯನ್ನು ಒದಗಿಸುತ್ತದೆ. ಆಗಿಲ್ಲದೆ ಅಲಹಾಬಾದ್ ಕೋರ್ಟ್ ನೀಡಿರುವ ಆದೇಶದ ಹಿಂದಿನ ತರ್ಕವನ್ನು ಬಳಸಿದರೆ ಇಡೀ ದೇಶದಲ್ಲೇ ಧಾರ್ಮಿಕ ಕಲಹಗಳನ್ನು ಉತ್ತೇಜಿಸಿದಂತಾಗುತ್ತದೆ.

ಆದುದರಿಂದ ಸುಪ್ರಿಂ ಕೋರ್ಟ್ ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಆಶಿಸೋಣ. ಯಾಕೆಂದರೆ ಶಾಂತಿ ಅತ್ಯಂತ ಮುಖ್ಯವಾದುದು. ಆದರೆ ಅದು ಅನ್ಯಾಯದ ನೆಲೆಗಟ್ಟಿನಿಂದ ಸೇರಿದ ಶಾಂತಿಯಾದರೆ ಅದರ ಬಾಳು ಅತ್ಯಂತ ಅಲ್ಪಾವಧಿಯಾಗಿರುತ್ತದೆ. ನ್ಯಾಯದ ನೆಲೆಗಟ್ಟಿನಿಂದ ಆರಳುವ ಶಾಂತಿಯೇ ಶಾಶ್ವತವಾದದು ಮತ್ತು ಸೌಹಾರ್ದಯುತವಾದುದು.
ಹುಸಿ ಶಾಂತಿಯನ್ನು ಬೆಳೆಸಲು ನಿಜವಾದ ಶಾಂತಿಯ ಪರವಾಗಿ ನಾಗರಿಕರೆಲ್ಲರೂ ಶಾಂತಿ ಮತ್ತು ಸಂಯಮದಿಂದ ಪ್ರಯತ್ನಿಸಬೇಕಾದ ಸವಾಲು ನಮ್ಮೆದುರಲ್ಲಿದೆ.

-ಶಿವಸುಂದರ್

ಉತ್ತಮ ಆದಾಯ ತರುವ ಶುಂಠಿ ಬೆಳೆ

ಸಂಯುಕ್ತ ಕರ್ನಾಟಕ, ಮಾಚ್, ೧೦, ೨೦೧೦

ಶುಂಠಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ. ಈ ವರ್ಷ ಇಳುವರಿ ಪ್ರಮಾಣ ಕಡಿಮೆ ಇದ್ದ ಕಾರಣ, ಪ್ರತಿ ಕ್ವಿಂಟಾಲ್‌ಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ದರ ಇದೆ. ವರ್ತಕರು ಮಾರುಕಟ್ಟೆ ಬೆಲೆ ಆಧರಿಸಿ ಗದ್ದೆಗೆ ಬಂದು ಖರೀದಿ ಮಾಡುತ್ತಿರುವುದರಿಂದ ಉತ್ತಮ ಆದಾಯ ಪಡೆಯುತ್ತಿರುವ ಪ್ರಸನ್ನ ಹೆಗಡೆ ಶುಂಠಿ ಜೊತೆ ತರಕಾರಿಯನ್ನು ಬೆಳೆಸುತ್ತಿದ್ದಾರೆ.

ಶಿರಸಿಯಿಂದ ಬನವಾಸಿಗೆ ಹೋಗುತ್ತಿರುವಾಗ ನವಣಗೇರಿ ಕ್ರಾಸ್‌ನಿಂದ ಎಂಟು ಕಿಲೋಮೀಟರ್ ಅಂತರದಲ್ಲಿರುವ ಬೆಂಗಳಿಯಲ್ಲಿ ವಾಹನ ನಿಲ್ಲಿಸಿ ಗದ್ದೆ ಕಡೆ ಕಣ್ಣು ಹಾಯಿಸಿದಾಗ, ಶುಂಠಿ ಬೆಳೆದ ಗದ್ದೆಯೊಂದು ಗಮನ ಸೆಳೆಯಿತು. ಹತ್ತಿರ ಹೋಗಿ ಕೆಲಸದಲ್ಲಿ ನಿರತರಾದ ಕೃಷಿಕ ಪ್ರಸನ್ನ ಹೆಗಡೆ ಅವರನ್ನು ಮಾತನಾಡಿಸಿದಾಗ, “ನೋಡಿ, ಕೇವಲ ಹತ್ತು ಗಂಟೆ ಜಮೀನಿನಲ್ಲಿ ಈ ವರ್ಷ ಕನಿಷ ಮೂವತ್ತು ಕ್ವಿಂಟಾಲ್ ಶುಂಠಿ ಬೆಳೆಯುತ್ತೇನೆ” ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾ ತಮ್ಮ ಗದ್ದೆಯತ್ತ ಬೊಟ್ಟು ಮಾಡಿ ತೋರಿಸಿದರು.

ಕೆಲವೊಂದು ಹಳ್ಳಿಗಳಲ್ಲಿರುವಂತೆ ಪರಸ್ಪರ ಕೊಡುಕೊಳ್ಳುವ (ತಮ್ಮ ಹತ್ತಿರ ಇರುವ ಧವಸಧಾನ್ಯ, ಕಾಳುಕಟ್ಟಿ, ಬೀಜ ಮುಂತಾದವುಗಳನ್ನು ಬೇರೆಯವರಿಗೆ ಕೊಡುವುದು. ಅವರಿಂದ ತಮಗೆ ಬೇಕಾದ ಬೀಜ, ಗೊಬ್ಬರ, ಧಾನ್ಯಗಳನ್ನು ತೆಗೆದುಕೊಂಡು ಬರುವುದು) ವಿನಿಮಯ ಪದ್ಧತಿ ಬೆಂಗಳಿಯಲ್ಲಿಯೂ ಕಾಣಬರುತ್ತದೆ. ಹೀಗೆ ವಿನಿಮಯ ಪದ್ಧತಿಯಿಂದ ತಂದ ಕೇರಳ ಮೂಲದ ಶುಂಠಿಯನ್ನು ಎರಡರಿಂದ ಎರಡುವರೆ ಅಡಿಗೊಂದರಂತೆ ಮಡಿ ಮಾಡಿ, ಹತ್ತು ಗುಂಟೆ ಜಮೀನಿನಲ್ಲಿ ಮೂರುವರೆ ಕ್ವಿಂಟಾಲ್ ಶುಂಠಿ ಬಿತ್ತನೆ ಮಾಡಿದ್ದಾರೆ. ಉತ್ತಮ ಫಸಲು ಬರಲು ಹತ್ತು ಟ್ರಾಕ್ಟರ್ ಕಪ್ಪು ಮಣ್ಣಿನ ಜೊತೆ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಹರಡಿದ್ದಾರೆ.

ತಮ್ಮ ಗದ್ದೆಯಲ್ಲಿರುವ ಕೊಳವೆ ಬಾವಿಯಿಂದ ಪಿವಿಸಿ ಪೈಪಿನ ಮುಖಾಂತರ ಹತ್ತು ಮಿಲಿಮೀಟರ್ ವ್ಯಾಸದ (ಸುತ್ತಳತೆ) ಲ್ಯಾಟ್ರಲ್ ವೈರ್ ಬಳಸಿ ಹತ್ತು ಅಡಿಗೊಂದರಂತೆ ಮೈಕ್ರೊಜೆಟ್‌ಗಳನ್ನು ಅಳವಡಿಸಿ ಬೆಳೆಗೆ ನೀರುಣಿಸುವ ವ್ಯವಸ್ಥೆ ಮಾಡಿದ್ದಾರೆ.

ಬಿತ್ತನೆಯಿಂದ ಹಿಡಿದು ಬೆಳೆ ಕೊಯ್ಲು ಆಗುವವರೆಗೆ ಕನಿಷ್ಠ ನಲವತ್ತು ಆಳುಗಳ ಅವಶ್ಯಕತೆ ಇದೆ. ಇತ್ತೀಚೆಗೆ ಕೂಲಿ ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲವಾದ್ದರಿಂದ ತಮ್ಮ ಮನೆಯಲ್ಲಿರುವ ಕೂಲಿ ಕೆಲಸದವನ ಸಹಾಯದಿಂದ ತಾವೇ ಗದ್ದೆ ಕೆಲಸ ನಿರ್ವಹಿಸುತ್ತಿದ್ದಾರೆ.
ಶುಂಠಿ ಬೀಜ ನೆಟ್ಟು ಗಿಡ ಬೆಳೆಯಲು ಎರಡು ತಿಂಗಳು ಬೇಕು. ಆ ಸಮಯದಲ್ಲಿ ಮೆಣಸಿನಕಾಯಿ ಗಿಡ, ಬಳ್ಳಿ ಬೀನ್ಸ್, ಹೀರೇಕಾಯಿ ಬಳ್ಳಿ, ಅರಿಶಿಣವನ್ನು ಬೆಳೆಯುತ್ತಾರೆ. ತರಕಾರಿಯನ್ನು ಮನೆಗೆ ಬಳಸುವುದರ ಜೊತೆಗೆ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಬಿಸಿ ಊಟಕ್ಕೆ ಉಚಿತವಾಗಿ ಕೊಡುತ್ತಾರೆ ಪ್ರಸನ್ನ. ಈ ವರ್ಷ ಮೆಣಸಿನಕಾಯಿಯ ಇಳುವರಿ ಒಂದರಿಂದ ಎರಡು ಕ್ವಿಂಟಾಲ್‌ನಷ್ಟು ಬರಬಹುದೆಂಬ ನಿರೀಕ್ಷೆ ಹೊಂದಿದ್ದಾರೆ.

ಶುಂಠಿ ಬೆಳೆಯನ್ನು ಕಾಡುವ ಬೂಸ್ಟ್ ರೋಗಕ್ಕೆ ವರ್ಷಕ್ಕೆ ೨೦ರಿಂದ ೨೫ರ ಸಲ ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡುತ್ತಾರೆ. ಇದು ಅಪಾಯಕಾರಿ ಅಲ್ಲವೇ ಎಂದಾಗ, ಶುಂಠಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದರಿಂದ ಗಿಡಕ್ಕೆ ಬೂಸ್ಟ್ ರೋಗ ಕಾಣಿಸಿಕೊಂಡ ನಂತರ ಕೀಟನಾಶಕ ಸಿಂಪರಣೆ ಮಾಡುತ್ತೆನೆ ಎನ್ನುತ್ತಾರೆ.

ಬಿತ್ತನೆ ಮಾಡಿದ ೬ರಿಂದ ೮ ತಿಂಗಳಿಗೆ ಶುಂಠಿ ಫಸಲು ಬರುತ್ತದೆ. ಉತ್ತಮ ಬೆಲೆ ಬರುವವರೆಗೂ ಶುಂಠಿಯನ್ನು ಭೂಮಿಯಲ್ಲಿ ಬಿಡುವುದರಿಂದ ಯಾವುದೇ ತೊಂದರೆ ಇಲ್ಲ. ಫಸಲು ಬಂದ ಒಂದು ವರ್ಷದ ಒಳಗೆ ಕೊಯ್ಲು ಮಾಡಿ ನಂತರ ಅದೇ ಭೂಮಿಯಲ್ಲಿ ಶುಂಠಿಯ ಬದಲಾಗಿ ಭತ್ತ ಬೆಳೆದರೆ ಹೆಚ್ಚು ಇಳುವರಿ ಪಡೆಯಬಹುದು. ಪ್ರತಿ ವರ್ಷ ಶುಂಠಿಯನ್ನೇ ಬೆಳೆದರೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ ಎಂಬುದು ಪ್ರಸನ್ನ ಅವರ ಅನುಭವದ ಮಾತು.

ಇತ್ತೀಚೆಗೆ ಮಾರುಕಟ್ಟೆ ಬೇಡಿಕೆ ಆಧರಿಸಿ ವರ್ತಕರು ಗದ್ದೆಗೆ ಬಂದು ಶುಂಠಿಯನ್ನು ಖರೀದಿ ಮಾಡುತ್ತಿದ್ದಾರೆ. ಈ ವರ್ಷ ಒಟ್ಟಾರೆ ಇಳುವರಿ ಪ್ರಮಾಣ ಕಡಿಮೆ ಇದ್ದ ಕಾರಣ ಪ್ರತಿ ಕ್ವಿಂಟಾಲ್‌ಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ದರ ಇದೆ. ಅಲ್ಲದೆ ಶುಂಠಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ ಎನ್ನುತ್ತಾರೆ ಪ್ರಸನ್ನ ಹೆಗಡೆ. (೯೮೮೬೫೩೭೫೭೦)

ತನ್ನು ಹಸಿ

ಪ್ರಸನ್ನ ತಮ್ಮ ಇನ್ನೊಂದು ಗದ್ದೆಯಲ್ಲಿ ಶುಂಠಿ ಬೆಳೆದಿದ್ದಾರೆ. ಗದ್ದೆಯಿಂದ ಅನತಿ ದೂರದಲ್ಲಿರುವ ಸಣ್ಣ ಕಾಲುವೆಯಲ್ಲಿ ಮಳೆಗಾಲದಲ್ಲಿ ನೀರು ಹರಿಯುತ್ತಿದ್ದು, ತಮ್ಮ ಗದ್ದೆಯಲ್ಲಿರುವ ಶುಂಠಿ ಬೆಳೆಗೆ ಬೇಕಾಗುವ ನೀರಿಗೋಸ್ಕರ ಸಣ್ಣ ಝರಿಯೊಂದನ್ನು ನಿರ್ಮಿಸಿ ಗದ್ದೆ ತುಂಬ ಹರಿಯುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಭೂಮಿ ಸ್ವಲ್ಪ ಕೆಳಭಾಗದಲ್ಲಿರುವುದರಿಂದ ಸಾಕಷ್ಟು ನೀರು ಹರಿದುಬರುತ್ತದೆ. ಶುಂಠಿ ನಾಟಿ ಮಾಡಿ ಮೊಳಕೆ ಬಂದ ನಂತರ ಎಷ್ಟು ನೀರು ಹರಿದರೂ ಶುಂಠಿ ಬೆಳೆಗೆ ಏನೂ ಆಗುವುದಿಲ್ಲ. ಭೂಮಿ ಸಾಕಷ್ಟು ಪ್ರಮಾಣದಲ್ಲಿ ನೀರು ಹೀರಿಕೊಂಡಿರುವುದರಿಂದ ಹಾಗೂ ಮಣ್ಣಿನ ಗುಣವು ನೀರು ಹೀರಿಕೊಳ್ಳುವುದಕ್ಕೆ ಸಹಕಾರಿಯಾಗಿರುವುದರಿಂದ ಬೆಳೆಯ ಕಾಂಡ ಹಾಗೂ ಬೇರಿನ ಭಾಗದಲ್ಲಿ ಯಾವಾಗಲೂ (ತೇವ) ಹಸಿಯಾಗಿರುತ್ತದೆ. ಇದಕ್ಕೆ ತನ್ನು ಹಸಿ ಎನ್ನುತ್ತಾರೆ. ಬೇಸಿಗೆ ಕಾಲದಲ್ಲಿ ಈ ಕಾಲುವೆಯಲ್ಲಿ ನೀರು ಇರುವುದಿಲ್ಲ. ಆಗ ಈ ತನ್ನು ಹಸಿಯೇ ಬೆಳೆಗೆ ಆಧಾರ. ಬೆಳೆಯ ಇಳುವರಿಯೂ ಉತ್ತಮವಾಗಿ ಬರುತ್ತದೆ.

ಚಿತ್ರ ಲೇಖನ:
ಸುರೇಶ ನಿ. ಧಾರವಾಡಕರ್
ಕೃಷಿ ಮಾಧ್ಯಮ ಕೇಂದ್ರದ ವಿದ್ಯಾರ್ಥಿ, ಮಾದರಿ
೫-೬೪, ರಾ.ಶಾ.ವಿ.ಕೇ. ವಸಾಹತು, ಶಕ್ತಿನಗರ್-೫೮೪೧೭೦, ರಾಯಚೂರು ಜಿಲ್ಲೆ, ಮೊ.೯೯೦೦೭೭೬೧೩೫

ಭಾರತವು ನಿಜವಾಗಿಯೂ ಬಲಾಢ್ಯ ಶಕ್ತಿಯಾಗಿ ರೂಪುಗೊಳ್ಳುತ್ತಿದೆಯೇ

ಅರುಂಧತಿ ರಾಯ್

ಭಾರತದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ಯ ಶೇ.೨೫ರಷ್ಟು ಸಂಪತ್ತು ಬರೀ ೧೦೦ ಮಂದಿ ಕೋಟ್ಯಾಧಿಪತಿಗಳ ಹಿಡಿತದಲ್ಲಿದೆ. ಭಾರತದ ೮೩ ಕೋಟಿ ಜನರ, ಸರಾಸರಿ ದೈನಂದಿನ ಜೀವನವೆಚ್ಚ ಈಗಲೂ ಕಡಿಮೆ. ಇಂತಹ ಅಸಮಾನತೆಯಿರುವ ಭಾರತದಲ್ಲಿ ಬಂಡವಾಳಶಾಹಿವಾದವು ಹೇಗೆ ದಿನಗಳೆದಂತೆ ಬಲಿಷ್ಠವಾಗುತ್ತಿದೆ ಮತ್ತು ಜನಸಾಮಾನ್ಯರ ಆಶೋತ್ತರಗಳನ್ನು ಹೊಸಕಿಹಾಕುತ್ತದೆ ಎಂಬುದನ್ನು ಅರುಂಧತಿ ರಾಯ್ ವಿವರಿಸಿದ್ದಾರೆ.

ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ಅವರ ಲೇಖನದ ಭಾವಾನುವಾದ ಇಲ್ಲಿ.

ಭಾರತದ ೬೪ನೆ ಸ್ವಾತಂತ್ರ ದಿನಾಚರಣೆಯಂದು ಪ್ರಧಾನಿ ಮನಮೋಹನ್‌ಸಿಂಗ್, ಕೆಂಪುಕೋಟೆಯ ಮೇಲೆ, ಗುಂಡು ನಿರೋಧಕ ಆವರಣದೊಳಗೆ ನಿಂತು,ಯಾವುದೇ ಭಾವೋದ್ವೇಗವಿಲ್ಲದೆ, ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೊಸತೇನೂ ಇರಲಿಲ್ಲ. ಆದರೆ ಅವರ ಭಾಷಣವನ್ನು ಕೇಳಿದರೆ, ಭಾರತವು ಜಗತ್ತಿನಲ್ಲೇ ಎರಡನೆ ಅತ್ಯಧಿಕ ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿರುವ ರಾಷ್ಟ್ರವಾದ ಹೊರತಾಗಿಯೂ, ಅದು ಆಫ್ರಿಕದ ೨೬ ಕಡುಬಡತನದ ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತಲೂ ಅಧಿಕ ಬಡವರನ್ನು ಹೊಂದಿದೆಯೆಂದು ಯಾರಾದರೂ ಭಾವಿಸಿಯಾರೇ ?.

ಮನಮೋಹನ್‌ಸಿಂಗ್ ಪ್ರಧಾನಿಯಾಗಿ ತನ್ನ ೭ ವರ್ಷಗಳ ಸೇವೆಯುದ್ದಕ್ಕೂ ಸೋನಿಯಾಗಾಂಧಿಯ ವಿನಮ್ರಪೂರ್ವಕ ಹಾಗೂ ಮೃದು ವ್ಯಕ್ತಿತ್ವದ ಸಹಾಯಕನಂತೆ ವರ್ತಿಸಿದ್ದಾರೆ. ಪಶ್ಚಿಮಬಂಗಾಳದ ಮಾಜಿ ಹಣಕಾಸು ಸಚಿವ ಅಶೋಕ್ ಮಿತ್ರಾ ತನ್ನ ಆತ್ಮಕಥೆಯಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಅಧಿಕಾರದ ರಾಜಕೀಯದಲ್ಲಿ ಹೇಗೆ ಮೇಲೆ ಬಂದರೆಂಬುದನ್ನು ವಿವರವಾಗಿ ಬರೆದಿದ್ದಾರೆ. ೧೯೯೧ರಲ್ಲಿ ಭಾರತದ ವಿದೇಶಿ ವಿನಿಮಯವು ಅಪಾಯಕಾರಿ ಮಟ್ಟದಲ್ಲಿ ಕುಸಿದಿದ್ದಾಗ, ಆಗಿನ ನರಸಿಂಹರಾವ್ ಸರಕಾರವು ತುರ್ತು ಸಾಲಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐ‌ಎಂಎಫ್)ಯನ್ನು ಸಂಪರ್ಕಿಸಿತ್ತು. ಆಗ ಐ‌ಎಂಎಫ್ ಎರಡು ಶರತ್ತುಗಳನ್ನು ಒಡ್ಡಿತ್ತು. ಅವುಗಳಲ್ಲಿ ಒಂದನೆಯದು ಸಂರಚನಾತ್ಮಕ ಹೊಂದಾಣಿಕೆ ಹಾಗೂ ಆರ್ಥಿಕ ಸುಧಾರಣೆ. ಎರಡನೆಯದು ತಾನು ಹೆಸರಿಸಿದ ವ್ಯಕ್ತಿಯನ್ನು ಕೇಂದ್ರ ಹಣಕಾಸು ಸಚಿವನಾಗಿ ನೇಮಕಗೊಳಿಸುವುದು. ಆ ವ್ಯಕ್ತಿಯೇ ಮನಮೋಹನ್‌ಸಿಂಗ್.

ಅರ್ಥಸಚಿವನಾಗಿ, ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿದ ಹಲವು ವರ್ಷಗಳಿಂದ ಮನಮೋಹನ್‌ಸಿಂಗ್ ತನ್ನ ಸಂಪುಟದಲ್ಲಿ ಮತ್ತು ಅಧಿಕಾರವರ್ಗದಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳ ರಕ್ಷಣೆಗೆ ಬದ್ಧರಾಗಿರುವ ವ್ಯಕ್ತಿಗಳನ್ನೇ ನುಗ್ಗಿಸುತ್ತಾ ಬಂದರು. ಜಲ,ವಿದ್ಯುತ್, ಖನಿಜಗಳು, ಕೃಷಿ, ಭೂಮಿ,ದೂರಸಂಪರ್ಕ, ಶಿಕ್ಷಣ, ಆರೋಗ್ಯ ಈ ಎಲ್ಲ ಕ್ಷೇತ್ರಗಳಲ್ಲಿ ಕಾರ್ಪೊರೇಟ್‌ರಂಗದ ಹಿತಾಸಕ್ತಿಯನ್ನು ಯಾರು ಸಂರಕ್ಷಿಸುತ್ತಾರೋ ಅವರೆಲ್ಲರನ್ನೂ ಪ್ರಧಾನಿ ಪೋಷಿಸಿದರು.

ಸೋನಿಯಾಗಾಂಧಿ ಹಾಗೂ ಅವರ ಪುತ್ರ ಈ ಎಲ್ಲದರಲ್ಲೂ ಪ್ರಮುಖ ಪಾತ್ರವನ್ನು ವಹಿಸಿದರು. ಸಹಾನುಭೂತಿ ಹಾಗೂ ವರ್ಚಸ್ಸಿನ್ನೇ ಬಂಡವಾಳವಾಗಿಟ್ಟುಕೊಂಡು, ಚುನಾವಣೆಗಳಲ್ಲಿ ಜಯಗಳಿಸುವುದೇ ಇವರಿಬ್ಬರ ವೃತ್ತಿಯಾಗಿದೆ. ಪ್ರಗತಿಪರವೆಂಬಂತೆ ತೋರುವ, ಆದರೆ ನಿಜವಾಗಿಯೂ ತಂತ್ರಗಾರಿಕೆಯ ನಿರ್ಧಾರಗಳನ್ನು ಕೈಗೊಳ್ಳಲು ಅವರಿಗೆ ಅವಕಾಶವಿದೆ. ಸರಕಾರದ ನಿರ್ಧಾರಗಳ ವಿರುದ್ಧ ಭುಗಿಲೇಳುವ ಜನಾಕ್ರೋಶವನ್ನು ತಣಿಸಿ, ಸರಕಾರದ ರಥವು ಸುಗಮವಾಗಿ ನಡೆಯುವಂತೆ ಮಾಡುವುದೇ ಇವರ ತಂತ್ರಗಾರಿಕೆಯಾಗಿದೆ. ಒರಿಸ್ಸಾದ ನ್ಯಾಮಗಿರಿ ಪ್ರದೇಶದಲ್ಲಿ ಬಾಕ್ಸೆಟ್ ಗಣಿಗಾರಿಕೆಗೆ ಅನುಮತಿ ರದ್ದುಗೊಂಡ ಪ್ರಯುಕ್ತ ರಾಹುಲ್‌ಗಾಂಧಿಯ ನೇತೃತ್ವದ ಆಯೋಜಿಸಲಾದ ರ‍್ಯಾಲಿ ಈ ತಂತ್ರಗಾರಿಕೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ರ‍್ಯಾಲಿಯಲ್ಲಿ ರಾಹುಲ್‌ಗಾಂಧಿ ತಾನು ಬುಡಕಟ್ಟು ಜನರ ಸೈನಿಕನೆಂದು ಘೋಷಿಸಿಕೊಂಡಿದ್ದರು. ತನ್ನ ಪಕ್ಷದ ಆರ್ಥಿಕ ನೀತಿಗಳೇ, ಬುಡಕಟ್ಟು ಜನರ ಸಾಮೂಹಿಕ ಸ್ಥಳಾಂತರಕ್ಕೆ ಮುಖ್ಯ ಕಾರಣವೆಂಬುದನ್ನು ಅವರು ತನ್ನ ಭಾಷಣದಲ್ಲಿ ಪ್ರಸ್ತಾಪಿಸಲಿಲ್ಲ. ಮಾತ್ರವಲ್ಲದೆ ನ್ಯಾಮಗಿರಿಯ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಬಾಕ್ಸೆಟ್ ಗಣಿಗಾರಿಕೆಯ ಬಗ್ಗೆ ಈ ‘ಬುಡಕಟ್ಟು ಯೋಧ’ ಚಕಾರ ಎತ್ತಲಿಲ್ಲ.

ಇನ್ನೂ ಕೇಂದ್ರ ಸಂಪುಟದ ಹಿರಿಯ ಸದಸ್ಯರಾದ ಪಿ.ಚಿದಂಬರಂ ಪ್ರತಿಪಕ್ಷೀಯರಲ್ಲೂ ಎಷ್ಟು ಜನಪ್ರಿಯರಾಗಿದ್ದಾರೆಂದರೆ, ಒಂದು ವೇಳೆ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ, ಅವರು ಮಾತ್ರ ಗೃಹ ಸಚಿವರಾಗಿಯೇ ಮುಂದುವರಿಯಬಹುದಾಗಿದೆ. ಅವರಿಗೆ ನಿಯೋಜಿಸಲಾದ ಕಾರ್ಯವೊಂದನ್ನು ಪೂರ್ಣಗೊಳಿಸಲು ಅವರಿಗೆ ತನ್ನ ಅಧಿಕಾರಾವಧಿಯಲ್ಲಿ ಇನ್ನೂ ಕೆಲವು ವರ್ಷಗಳು ಬೇಕಾಗಬಹುದು. ಅಕ್ಟೋಬರ್ ೨೦೦೭ರಲ್ಲಿ ಹಾರ್ವರ್ಡ್ ವಿ.ವಿ.ಯಲ್ಲಿ ಅವರು “ಬಡತನದಲ್ಲಿರುವ ಶ್ರೀಮಂತ ರಾಷ್ಟ್ರಗಳು: ಅಭಿವೃದ್ಧಿಯ ಸವಾಲುಗಳು” ಎಂಬ ವಿಷಯದ ಬಗ್ಗೆ ಉಪನ್ಯಾಸದಲ್ಲಿ ಆ ಕಾರ್ಯದ ರೂಪುರೇಷೆಗಳನ್ನು ಬಿಚ್ಚಿಟ್ಟಿದ್ದರು. ಅದರ ಸಾರಾಂಶ ಹೀಗಿದೆ.

“ ಭಾರತವು ಕಬ್ಬಿಣದ ಆದಿರು, ಮ್ಯಾಂಗನೀಸ್,ಮೈಕಾ, ಬಾಕ್ಸೆಟ್, ಟೈಟಾನಿಯಂ ಆದಿರು, ಕ್ರೊಮೈಟ್, ವಜ್ರಗಳು,ನೈಸರ್ಗಿಕ ಅನಿಲ, ಪೆಟ್ರೋಲಿಯಂ ಹಾಗೂ ಸೀಮೆಸುಣ್ಣ ಸೇರಿದಂತೆ ಜಗತ್ತಿನಲ್ಲೇ ನಾಲ್ಕನೆ ಅತ್ಯಧಿಕ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ದೇಶವಾಗಿದೆ. ನಾವು ಈ ಸಂಪನ್ಮೂಲಗಳನ್ನು ತ್ವರಿತವಾಗಿ ಹಾಗೂ ದಕ್ಷತೆಯಿಂದ ಗಣಿಗಾರಿಕೆ ನಡೆಸಬೇಕಾಗಿದೆ. ಅದಕ್ಕೆ ಭಾರೀ ಬಂಡವಾಳದ ಅಗತ್ಯವಿದೆ. ಮಾರುಕಟ್ಟೆಯ ಶಕ್ತಿಗಳು ಕಾರ್ಯನಿರ್ವಹಿಸುವಂತಹ ದಕ್ಷ ಸಂಘಟನೆಗಳು ಹಾಗೂ ನೀತಿಯ ಅಗತ್ಯವಿದೆ. ಇಂದಿನ ಗಣಿಗಾರಿಕಾ ವಲಯದಲ್ಲಿ ಅಂತಹ ಯಾವುದೇ ಅಂಶಗಳು ಕಾಣುತ್ತಿಲ್ಲ. ಆ ಕುರಿತ ಕಾನೂನುಗಳು ತೀರಾ ಹಳೆಯದಾಗಿವೆ. ಗಣಿಗಾರಿಕೆಯಲ್ಲಿ ಬೃಹತ್ ಪ್ರಮಾಣದಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ನಮ್ಮ ಪ್ರಯತ್ನಗಳು ವಿಫಲವಾಗಿವೆ. ಏತನ್ಮಧ್ಯೆ ಗಣಿಗಾರಿಕೆ ವಲಯವು ರಾಜ್ಯ ಸರಕಾರಗಳ ಕಪಿಮುಷ್ಟಿಯಲ್ಲಿ ಬಂಧಿತವಾಗಿದೆ. ಅರಣ್ಯ , ಪರಿಸರ ಅಥವಾ ಬುಡಕಟ್ಟು ಜನರ ಹಿತಾಸಕ್ತಿಗಳನ್ನು ಪ್ರತಿಪಾದಿಸುವ ಗುಂಪುಗಳು, ಪ್ರಸಕ್ತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ವಿರೋಧಿಸುತ್ತಿವೆ. ಗಣಿಗಾರಿಕೆಯು ರಾಜ್ಯದ ಏಕಸ್ವಾಮ್ಯವೆಂದು ಭಾವಿಸುವ ರಾಜ್ಯ ಸರಕಾರಗಳಿವೆ ಮತ್ತವು ಖಾಸಗಿ ವಲಯದ ಪ್ರವೇಶವನ್ನು ತಾತ್ವಿಕವಾಗಿ ವಿರೋಧಿಸುತ್ತಿವೆ. ಇದಕ್ಕಾಗಿ ಅವು ಕಾರ್ಮಿಕ ಸಂಘಟನೆಗಳ ಬೆಂಬಲವನ್ನು ಪಡೆಯುತ್ತಿವೆ. ಇವೆಲ್ಲದರ ಪರಿಣಾಮವಾಗಿ ಗಣಿಗಾರಿಕೆಯಲ್ಲಿ ನೈಜ ಹೂಡಿಕೆ ತೀರಾ ಕಡಿಮೆ”.

ಮಾರುಕಟ್ಟೆ ಶಕ್ತಿಗಳಿಗೆ, ಗಣಿ ಸಂಪನ್ಮೂಲಗಳನ್ನು ದಕ್ಷವಾಗಿ ಹಾಗೂ ತ್ವರಿತವಾಗಿ ಬಳಸಿಕೊಳ್ಳಲು ಅವಕಾಶ ನೀಡುವ ಕ್ರಮವನ್ನು ಒಂದು ಕಾಲದಲ್ಲಿ ವಸಾಹತುಶಾಹಿ ಶಕ್ತಿಗಳು ತಮ್ಮ ವಸಾಹತುಗಳಲ್ಲಿ ಅನುಸರಿಸಿದ್ದವು. ಸ್ಪೇನ್ ಹಾಗೂ ಉತ್ತರ ಅಮೆರಿಕಗಳು ದಕ್ಷಿಣ ಅಮೆರಿಕದಲ್ಲಿ,ಯುರೋಪಿಯನ್ ರಾಷ್ಟ್ರಗಳು ಆಫ್ರಿಕದಲ್ಲಿ ಮಾಡಿದ್ದು ಕೂಡಾ ಇದೇ.

ಬುಡಕಟ್ಟು ಜನತೆಯ ಹಕ್ಕುಗಳ ದಮನಕ್ಕೆ ಸಂವಿಧಾನವನ್ನೇ ಉಲ್ಲಂಘಿಸುತ್ತಿರುವ ಸರಕಾರ

ಗಣಿಗಾರಿಕೆಗಾಗಿ ಏರ್ಪಟ್ಟ ತಿಳುವಳಿಕಾ ಒಪ್ಪಂದಗಳನ್ನು ಮರುಪರಿಶೀಲಿಸಬೇಕೆಂದು ಸರಕಾರಿ ವರದಿಯೊಂದು ಆಗ್ರಹಿಸಿತ್ತು. ಆದರೆ ಈ ವರದಿಗೆ ಸರಕಾರದಿಂದ ದೊರೆತ ಪ್ರತಿಕ್ರಿಯೆಯಾದರೊ ನಿರಾಶಾದಾಯಕವಾಗಿತ್ತು. ಎಪ್ರಿಲ್ ೨೪,೨೦೧೦ರಲ್ಲಿ ಔಪಚಾರಿಕ ಸಮಾರಂಭವೊಂದರಲ್ಲಿ ಪ್ರಧಾನಿಯು ಈ ವರದಿಯನ್ನು ಬಿಡುಗಡೆಗೊಳಿಸಿದರು. ಆದರೆ ಅದು ಕೆಲವೇ ದಿನಗಳಲ್ಲಿ ಮೂಲೆಗುಂಪಾಯಿತು.

೨೦೦೯ರಲ್ಲಿ ಮನಮೋಹನ್‌ಸಿಂಗ್ ಸಂಸತ್‌ನಲ್ಲಿ ಮಾತನಾಡುತ್ತಾ “ಎಡಪಂಥೀಯ ತೀವ್ರವಾದವು, ದೇಶದಲ್ಲಿ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಬೆಳೆಯುತ್ತಿದೆ. ಇದು ಹೂಡಿಕೆಯ ವಾತಾವರಣದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಭಾರತದಲ್ಲಿ ಸದ್ಯದ ಸನ್ನಿವೇಶದಲ್ಲಿ ನಡೆಯುತ್ತಿರುವ ವಿವಿಧ ಹೋರಾಟಗಳ ಬಗ್ಗೆ ಗಮನಹರಿಸಿದಲ್ಲಿ, ಜನತೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಆಗ್ರಹಿಸುತ್ತಿದ್ದಾರೆಯೇ ಹೊರತು ಬೇರ‍್ಯಾವುದಕ್ಕೂ ಅಲ್ಲವೆಂಬುದು ಮನದಟ್ಟಾಗುತ್ತದೆ. ಆದರೆ ಭಾರತ ಸರಕಾರವು ಮಾತ್ರ ಭಾರತದ ಸಂವಿಧಾನಕ್ಕೆ ಬದ್ಧವಾಗಿ ನಡೆಯುವ ಕಾಳಜಿಯನ್ನು ವಹಿಸಿಲ್ಲ. ಅದು ಸಂವಿಧಾನವನ್ನು ಜನತೆಯ ರಕ್ಷಣೆಗಾಗಿ ಬಳಸುತ್ತಿಲ್ಲ. ಅದಕ್ಕೆ ಬದಲಾಗಿ ಹೆಚ್ಚುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುತ್ತಿರುವ ಜನರನ್ನು ಹತ್ತಿಕ್ಕಲು ಸಂವಿಧಾನವನ್ನೇ ಆಸ್ತ್ರವಾಗಿ ಸರಕಾರ ಬಳಸಿಕೊಳ್ಳುತ್ತಿದೆ.

ಖ್ಯಾತ ಪತ್ರಕರ್ತ ಬಿ.ಜಿ. ವUಸ್,ಔಟ್‌ಲುಕ್ ಪತ್ರಿಕೆಯ ಮೇ ೩ರ ಸಂಚಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಸರಕಾರ ಮತ್ತು ಬೃಹತ್ ಕಾರ್ಪೊರೇಟ್ ಸಂಸ್ಥೆಗಳನ್ನು ಬೆಂಬಲಿಸುತ್ತಾ “ಪ್ರಜಾತಾಂತ್ರಿಕ ಭಾರತದಲ್ಲಿ ಮಾವೊವಾದಿಗಳು ಶೀಘ್ರವೇ ಮರೆಯಾಗಲಿದ್ದಾರೆ ಮತ್ತು ಸಂವಿಧಾನವು ವಿಜಯಶಾಲಿಯಾಗಲಿದೆ. ಆದರೆ ಇದಕ್ಕೆ ಸ್ವಲ್ಪ ಸಮಯ ತಗಲಬಹುದು ಹಾಗೂ ನೋವನ್ನು ಅನುಭವಿಸಬೇಕಾಗಬಹುದು” ಎಂದು ಹೇಳಿದ್ದರು.

ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮಾವೊವಾದಿ ನಾಯಕ ಆಝಾದ್, ತನ್ನ ಸಾವಿಗೆ ಕೆಲವೇ ತಿಂಗಳುಗಳ ಮುನ್ನ ಈ ಲೇಖನಕ್ಕೆ ಬರೆದ ಉತ್ತರ ಹೀಗಿತ್ತು. ಅದನ್ನು ಔಟ್‌ಲುಕ್ ಪತ್ರಿಕೆಯು ಜುಲೈ ೧೧,೨೦೧೦ರ ಸಂಚಿಕೆಯಲ್ಲಿ ಪ್ರಕಟಿಸಿತ್ತು.

“ಶ್ರೀಮಾನ್ ವUಸ್‌ರವರೇ ಭಾರತದ ಯಾವ ಭಾಗದಲ್ಲಿ ಸಂವಿಧಾನವು ಮೇಲುಗೈ ಸಾಧಿಸಿದೆ?. ದಾಂತೆವಾಡ, ಬಿಜಾಪುರ್,ಕಂಕೇರ್, ನಾರಾಯಣ್‌ಪುರ್, ರಾಜಾನಂದ್‌ಗಾಂವ್‌ಗಳಲ್ಲಿಯೇ?, ಜಾರ್ಖಂಡ್, ಒರಿಸ್ಸಾದಲ್ಲೇ?. ಮಣಿಪುರದಲ್ಲೇ?. ೨೫ ವರ್ಷಗಳ ಹಿಂದೆ ಸಾವಿರಾರು ಸಿಖ್ಖರ ಮಾರಣಹೋಮ ನಡೆದಾಗ ನಿಮ್ಮ ಸಂವಿಧಾನವು ಎಲ್ಲಿ ಅಡಗಿತ್ತು?. ಸಾವಿರಾರು ಮುಸ್ಲಿಮರ ಹತ್ಯಾಕಾಂಡವಾದಾಗ ಅದು ಎಲ್ಲಿತ್ತು ?. ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಮತ್ತು ಸರಕಾರಿ ಪ್ರಾಯೋಜಿತ ಸಲ್ವಾ ಜುಡುಂ ಗ್ಯಾಂಗ್‌ಗಳು ಸಾವಿರಾರು ಜನರನ್ನು ಕೊಂದುಹಾಕುವಾಗ, ಅಮಾಯಕರನ್ನು ಖಾಕಿ ಸಮವಸ್ತ್ರದ ಗೂಂಡಾಗಳು ಅಪಹರಿಸುವಾಗ ಸಂವಿಧಾನ ಎಲ್ಲಿಗೆ ಹೋಗಿತ್ತು ?” ಎಂದು ಆಜಾದ್ ಸವಾಲು ಹಾಕಿದ್ದರು.

ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಬುಡಕಟ್ಟು ಜನರು ಅತ್ಯಧಿಕ ಸಂಖ್ಯೆಯಲ್ಲಿರುವ ಪ್ರಾಂತ್ಯಗಳು, ಭಾರತ ಸರಕಾರಕ್ಕೆ ಮಾತ್ರವಲ್ಲ, ಪ್ರತಿರೋಧ ಚಳವಳಿಗೂ ಸಹ ದೊಡ್ಡ ಸವಾಲಾಗಿ ಪರಿಣಮಿಸಿವೆ.

ಈಗ ಸರಕಾರವು ಭಾವಿಸಿರುವಂತಹ ಪ್ರಗತಿ, ಅಭಿವೃದ್ಧಿ ಮತ್ತು ನಾಗರಿಕತೆಯೆಂಬ ಪದಗಳ ನಿಜವಾದ ಅರ್ಥವೇನೆಂಬುದನ್ನು ಈ ಪ್ರದೇಶಗಳು ಪ್ರಶ್ನಿಸತೊಡಗಿವೆ. ಈ ಬುಡಕಟ್ಟು ಜನರು ಛತ್ತೀಸ್‌ಗಡ ಮುಕ್ತಿ ಮೋರ್ಚಾ, ಕೊಯೆಲ್ ಕರೊ ಹಾಗೂ ಗಂಧಮಾರ್ಧನ ಚಳವಳಿಗಳ ಮೂಲಕ ಹಲವಾರು ವರ್ಷಗಳತನಕ ಶಾಂತಿಯುತವಾಗಿ ತಮ್ಮ ನ್ಯಾಯಬದ್ಧ ಹಕ್ಕುಗಳನ್ನು ಕೇಳುತ್ತಲೇ ಬಂದಿದ್ದಾರೆ. ನರ್ಮದಾ ಕಣಿವೆಯಲ್ಲಿ ನರ್ಮದಾ ನದಿಗೆ ಕಟ್ಟಲಾಗುವ ಅಣೆಕಟ್ಟನ್ನು ಪ್ರತಿಭಟಿಸಿ ನಡೆಸಲಾದ ನರ್ಮದಾ ಬಚಾವೊ ಆಂದೋಲನದಲ್ಲೂ ಸಂತ್ರಸ್ತ ಬಡ ಬುಡಕಟ್ಟು ಜನರು ನ್ಯಾಯಕ್ಕಾಗಿ ಹಲವು ವರ್ಷಗಳ ಹೋರಾಟ ನಡೆಸಿದ್ದರು. ಆದರೆ ಅವೆಲ್ಲವೂ ನೀರಲ್ಲಿ ಹೋಮವಿರಿಸಿದ ಹಾಗೆ ನಿಷ್ಪಲವಾಯಿತು.

ಈ ಅನ್ಯಾಯಗಳ ವಿರುದ್ಧ ಹೋರಾಡಿದವರಿಗೆ ಭಾರತದಲ್ಲಿ ತುರ್ತು ಪರಿಸ್ಥಿತಿಯೆಂಬ ಭಾವನೆ ಮೂಡಿದೆ. ಕಾಶ್ಮೀರ, ಮಣಿಪುರ, ನಾಗಲ್ಯಾಂಡ್ ಹಾಗೂ ಅಸ್ಸಾಂಗಳ ಜನತೆಯಂತೆ,ತಮ್ಮ ನಾಗರಿಕ ಹಕ್ಕುಗಳನ್ನು ಕೂಡಾ ಕಿತ್ತುಕೊಂಡಿರುವುದು ಬಂಡೆದ್ದ ಬುಡಕಟ್ಟು ಜನರ ಅನುಭವಕ್ಕೆ ಬಂದಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯು‌ಎಪಿ‌ಎ)ಹಾಗೂ ಛತ್ತೀಸ್‌ಗಡ ವಿಶೇಷ ಸಾರ್ವಜನಿಕ ಭದ್ರತಾ ಕಾಯ್ದೆ (ಸಿ‌ಎಸ್‌ಪಿಸಿ‌ಎ)ಯು ಮಾತು ಹಾಗೂ ಕೃತಿಗಳ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುತ್ತದೆ.

ಮಾವೊವಾದಿಗಳನ್ನು ಸದೆಬಡಿಯುವ ನೆಪದಲ್ಲಿ ಬಡವರ ವಿರುದ್ಧ ಸಮರ

ಕಳೆದ ಕೆಲವು ತಿಂಗಳುಗಳಿಂದ, ಸರಕಾರವು ಮಾವೊವಾದಿಗಳ ಪ್ರಾಬಲ್ಯವಿರುವ ಪ್ರದೇಶಗಳ ದಟ್ಟಾರಣ್ಯಗಳಲ್ಲಿ ಸಾವಿರಾರು ಸಶಸ್ತ್ರ ಅರೆಸೈನಿಕ ಪಡೆಗಳನ್ನು ಜಮಾಯಿಸುತ್ತದೆ. ಇದಕ್ಕೆ ಪ್ರತ್ಯುತ್ತರವಾಗಿ ಮಾವೊವಾದಿಗಳು, ಭದ್ರತಾಪಡೆಗಳ ಮೇಲೆ ಆಕ್ರಮಣಕಾರಿ ದಾಳಿಗಳನ್ನು ನಡೆಸುತ್ತಿದ್ದಾರೆ. ಆ ಸಂದರ್ಭಗಳಲ್ಲಿ ಭುಗಿಲೇಳುತ್ತಿರುವ ಘರ್ಷಣೆಗಳಲ್ಲಿ ೨೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಸಾವಿUಡಾಗಿದ್ದಾರೆ. ಅವರ ಶವಗಳನ್ನು ಅರಣ್ಯದಿಂದ ಹೊರತಂದು, ರಾಷ್ಟ್ರಧ್ವಜದಲ್ಲಿ ಸುತ್ತಿ ಗೌರವಗಳನ್ನು ಸಲ್ಲಿಸುತ್ತದೆ.ಮಾವೊವಾದಿಗಳ ಬರ್ಬರ ಹತ್ಯಾಕಾಂಡಗಳನ್ನು ನಡೆಸಲು ಸರಕಾರಕ್ಕೆ ಇದೊಂದು ಉತ್ತಮ ನೆಪವಾಗಿ ಬಿಡುತ್ತದೆ. ದಟ್ಟಾರಣ್ಯಗಳಲ್ಲಿ ನಡೆದ ಕಾಳಗಳಲ್ಲಿ ಸತ್ತ ಮಾವೊವಾದಿ ಗಳ ವಿಛಿದ್ರಗೊಂಡ, ಶಿರಚ್ಛೇದನಗೊಂಡ ಶವಗಳನ್ನು ಮಣ್ಣುಪಾಲು ಮಾಡಿದಾಗ, ಅವರ ಕುಟುಂಬಗಳಾಗಲಿ, ಬಂಧುಗಳಾಗಲಿ ಇರುವುದಿಲ್ಲ.

ಎಪ್ರಿಲ್ ೬, ೨೦೧೦ರಲ್ಲಿ ಜನತಾ ವಿಮೋಚನಾ ಗೆರಿಲ್ಲಾ ಸೇನೆ(ಪಿ‌ಎಲ್‌ಜಿ‌ಎ) ಯು ದಾಂತೆವಾಡದಲ್ಲಿ ನಡೆಸಿದ ಅತ್ಯಂತ ಭೀಕರ ದಾಳಿಯೊಂದರಲ್ಲಿ ೭೬ ಸಿ‌ಆರ್‌ಪಿ‌ಎಫ್ ಸಿಬ್ಬಂದಿಗಳನ್ನು ಬರ್ಬರವಾಗಿ ಹತ್ಯೆಗೈಯಿತು. ಬಳಿಕ ಪಿ‌ಎಲ್‌ಜಿ‌ಎ, ತಾನು ನಡೆಸಿದ ಬರ್ಬರ ಹತ್ಯಾಕಾಂಡದ ಬಗ್ಗೆ ಬಹಿರಂಗ ಹೇಳಿಕೆ ನೀಡಿತು.

ಟಿವಿ ಚಾನೆಲ್‌ಗಳು ಈ ಹತ್ಯಾಕಾಂಡದ ಸುದ್ದಿಗಳನ್ನು ರಸವತ್ತಾಗಿ ಪ್ರಸಾರ ಮಾಡಿತು. ಆದರೆ ದುರಂತವೆಂದರೆ ಮಾವೊವಾದಿಗಳ ಪರ ಸಹಾನುಭೂತಿ ಹೊಂದಿದವರಿಗೂ ಕೂಡಾ ಈ ಹತ್ಯಾಕಾಂಡದ ಬೆಂಬಲಿಗರೆಂಬ ಹಣೆಪಟ್ಟಿಯನ್ನು ಸರಕಾರವು ಕಟ್ಟಿರುವುದು.

ಆದರೆ ಅಮಾಯಕ ಗ್ರಾಮಸ್ಥರೇ ತುಂಬಿರುವ ಹಳ್ಳಿಗಳಲ್ಲಿ ಸಿ‌ಆರ್‌ಪಿ‌ಎಫ್‌ನ ಒಂದು ತುಕಡಿಯು ೨೧ ಎಕೆ೪೭ ರೈಫಲ್‌ಗಳು, ೩೮ ಐ‌ಎನ್‌ಎಸ್‌ಎ‌ಎಸ್ ರೈಫಲ್‌ಗಳು, ಏಳು ಎಸ್‌ಎಲ್‌ಆರ್‌ಗಳು, ಆರು ಲಘುಮೆಶಿನ್‌ಗನ್‌ಗಳು, ಒಂದು ಸ್ಟೆನ್‌ಗನ್ ಮತ್ತಿತರ ಮಾರಕ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಗಸ್ತು ತಿರುಗುವ ಅಗತ್ಯವಾದರೂ ಏನಿದೆ ?. ಈ ಪ್ರಶ್ನೆಯನ್ನೇ ಕೇಳಿದರೆ, ಅದೊಂದು ದೇಶದ್ರೋಹದ ಕೃತ್ಯವಾಗಿಬಿಡುತ್ತದೆ.

ಈ ಘಟನೆ ನಡೆದ ಕೆಲವೇ ದಿನಗಳ ಬಳಿಕ, ದಿಲ್ಲಿಯ ವಾಹನ ಪಾರ್ಕಿಂಗ್ ಸ್ಥಳವೊಂದರಲ್ಲಿ ಹರಟೆ ಹೊಡೆಯುತ್ತಿದ್ದ ಅರೆಸೈನಿಕ ಪಡೆಗಳ ಕಮಾಂಡೊಗಳ ಸಂಭಾಷಣೆಯನ್ನು ಅಲಿಸುವ ಅವಕಾಶ ನನಗೆ ಒದಗಿತ್ತು. ಅರೆಸೈನಿಕ ಪಡೆಯಲ್ಲಿ ಒಬ್ಬ ಉದ್ಯೋಗ ದೊರೆಯಬೇಕಾದರೆ, ಎಷ್ಟು ಲಕ್ಷ ಸುರಿಯಬೇಕಾಗುತ್ತದೆ ಯೆಂಬ ಬಗ್ಗೆ ಅವರು ಚರ್ಚಿಸುತ್ತಿದ್ದರು. ಉದ್ಯೋಗ ಪಡೆಯಲು ಅವರ ಕುಟುಂಬಗಳು ಸಾಲ ಮಾಡಿಯಾದರೂ ಲಂಚ ಕೊಡುತ್ತಿದ್ದವು. ಆದರೆ ಓರ್ವ ಜವಾನಿಗೆ ದೊರೆಯುವ ಕನಿಷ್ಠ ವೇತನದಲ್ಲಿ ಆ ಸಾಲವನ್ನು ಮರುಪಾವತಿಸು ವುದು ಅಸಾಧ್ಯವೇ ಸರಿ. ಆಗ ಆತ ಹುಡುಕುವ ಇನ್ನೊಂದು ದಾರಿಯೆಂದರೆ, ಉದ್ಯಮಿಗಳಿಗೆ, ಸಂಸ್ಥೆಗಳಿಗೆ ಸುರಕ್ಷತೆಯನ್ನು ಖಾತರಿಪಡಿಸುವ ರ‍್ಯಾಕೆಟ್‌ಗಳನ್ನು ನಡೆಸುತ್ತಾನೆ, ಲಂಚ ಕೇಳುತ್ತಾನೆ. ದಾಂತೆವಾಡದಂತಹ ಹಳ್ಳಿಗಳಲ್ಲಿ ಅರೆಸೈನಿಕ ಯೋಧರು ಗ್ರಾಮಸ್ಥರನ್ನು ದೋಚಲು, ನಗ,ನಗದು ಕದಿಯಲೂ ಹೇಸುವುದಿಲ್ಲ.

ಆದರೆ ಅಂತಹ ಯೋಧರು, ಅಕಾಲಿಕವಾಗಿ ಮರಣವನ್ನಪ್ಪಿದಾಗ ಅವರ ಕುಟುಂಬಗಳು ದಾರಿಗೆ ಬೀಳುತ್ತವೆ.

ಆದರೆ ಮಾವೊವಾದಿಗಳ ವಿರುದ್ಧ ಸಮರ ನಡೆಯುತ್ತಿರುವ ಪ್ರದೇಶಗಳಲ್ಲಿ ಸಿ‌ಆರ್‌ಪಿ‌ಎಫ್ ಸಿಬ್ಬಂದಿಗಳು ಗಸ್ತುತಿರುಗಲು ನಿರಾಕರಿಸಿದ ಘಟನೆಗಳು ಹೆಚ್ಚೆಚ್ಚು ವರದಿಯಾಗತೊಡಗಿವೆ. ಅವರ ತಮ್ಮ ಪಾಳಿ ಪುಸ್ತಕದಲ್ಲಿ ಸಹಿಹಾಕುತ್ತಾರೆಯೇ ಹೊರತು, ಗಸ್ತು ತಿರುಗುವ ಕರ್ತವ್ಯದಿಂದ ಉಪಾಯವಾಗಿ ನುಣುಚಿಕೊಳ್ಳತೊಡಗಿದ್ದಾರೆ. ಬಹುಶಃ ಅವರಿಗೆ ತಾವು ಶ್ರೀಮಂತರ ಪರವಾಗಿ ನಡೆಯುತ್ತಿರುವ ಯುದ್ಧದಲ್ಲಿ ಬಲಿಪಶುಗಳು ಎಂಬ ಭಾವನೆ ಅವರಿಗುಂಟಾಗತೊಡಗಿದೆ.

ಮೇ ೧೭, ೨೦೧೦ರಲ್ಲಿ ದಾಂತೆವಾಡದಲ್ಲಿ ಮಾವೊವಾದಿಗಳು ಬಸ್ಸೊಂದನ್ನು ಸ್ಫೋಟಿಸಿ, ಸುಮಾರು ೪೪ ಮಂದಿಯನ್ನು ಹತ್ಯೆಗೈದರು. ಅವರಲ್ಲಿ ೧೬ ಮಂದಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿದ್ದಾರೆ. ವಾಸ್ತವವಾಗಿ ಅವರು ಸರಕಾರಿ ಕೃಪಾಪೋಷಿತ ಉಗ್ರಗಾಮಿ ಸೇನೆಯಾದ ಸಲ್ವಾಜುಡುಂನ ಸದಸ್ಯರಾಗಿದ್ದರು. ಉಳಿದವರೆಲ್ಲರೂ ಅಮಾಯಕ ಗ್ರಾಮಸ್ಥರಾಗಿದ್ದರು. ಆದರೆ ಮಾವೊವಾದಿಗಳು ನಾಗರಿಕರ ಹತ್ಯಾಕಾಂಡಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದರು.

ದಾಂತೆವಾಡದಲ್ಲಿ ಮಾವೊವಾದಿಗಳು ನಡೆಸಿದ ನಾಗರಿಕರ ಹತ್ಯಾಕಾಂಡದ ಬಗ್ಗೆ ದೇಶಾದ್ಯಂತ ಮಾಧ್ಯಮಗಳು, ಸುದ್ದಿವಿಶ್ಲೇಷಕರಿಂದ ಖಂಡನೆಗಳ ಸುರಿಮಳೆಯೇ ಹರಿದು ಬಂದಿತು. ಆದರೆ ಇದೇ ಸಮಯದಲ್ಲಿ ಟಾಟಾ, ಜಿಂದಾಲ್ ಮತ್ತು ಪೊಸ್ಕೊ ಮತ್ತಿತರ ಬೃಹತ್ ಕಂಪೆನಿಗಳಿಗಾಗಿ ತಮ್ಮ ಜಮೀನುಗಳನ್ನು ಸರಕಾರವು ಸ್ವಾಧೀನಪಡಿಸಿಕೊಳ್ಳುತ್ತಿರುವುದರ ವಿರುದ್ಧ ಒರಿಸ್ಸಾದ ಕಳಿಂಗನಗರ್ ಹಾಗೂ ಜಾರ್ಖಂಡ್‌ನ ಬಾಳಿತುತಾ ಮತ್ತು ಪೊರ್ಕೊಗಳಲ್ಲಿ, ಪತಿಭಟನೆ ನಡೆಸುತ್ತಿದ್ದ ಸಾವಿರಾರು ಜನರ ಮೇಲೆ ಗುಂಡಿನ ಸುರಿಮಳೆಗರೆದಾಗ ಅದು ದೊಡ್ಡ ಸುದ್ದಿಯಾಗಲೇ ಇಲ್ಲ. ಇಂದಿಗೂ ಕೂಡಾ ಆ ಪ್ರದೇಶಗಳಲ್ಲಿ ಪೊಲೀಸ್ ದಿಗ್ಬಂಧನ ಮುಂದುವರಿದಿದೆ. ಪೊಲೀಸ್ ಗೋಲಿಬಾರ್‌ನಲ್ಲಿ ಗಾಯಗೊಂಡ ಆದಿವಾಸಿಗಳನ್ನು ಆಸ್ಪತ್ರೆಗೆ ಸಾಗಿಸಲೂ ಪೊಲೀಸರು ತಡೆಯೊಡ್ಡಿದ್ದರು.

ಮಾವೊವಾದಿಗಳ ವಿರುದ್ಧ ಸರಕಾರವು ನಡೆಸುತ್ತಿರುವ ‘ಆಪರೇಶನ್ ಗ್ರೀನ್ ಹಂಟ್’ನಿಂದ ಒಂದು ಪ್ರಯೋಜನವಂತೂ ಆಗಿದೆ. ಇದರಿಂದಾಗಿ ಶ್ರೀಸಾಮಾನ್ಯರಿಗೂ ಸಹ ವಾಸ್ತವವಾಗಿ ಈ ಎಲ್ಲ ಕಾರ್ಯಾಚರಣೆಗಳು ಯಾರ ಹಿತವನ್ನು ಕಾಪಾಡಲು ನಡೆಯುತ್ತಿದೆಯೆಂಬುದು ಸ್ಪಷ್ಟವಾಗಿ ಅರಿವಾಗತೊಡಗಿದೆ. ಹಳ್ಳಿಯ ಸಣ್ಣಪುಟ್ಟ ಮಕ್ಕಳಿಗೂ ಸಹ ಪೊಲೀಸರು ದೊಡ್ಡದೊಡ್ಡ ಕಂಪೆನಿಗಳಿಗಾಗಿ ದುಡಿಯುತ್ತಿದ್ದಾರೆ. ಆಪರೇಶನ್ ಗ್ರೀನ್ ಹಂಟ್ ಮಾವೊವಾದಿಗಳ ವಿರುದ್ಧ ನಡೆಸುತ್ತಿರುವ ಸಮರವಲ್ಲ. ಬದಲಿಗೆ ಅದು ಬಡವರ ವಿರುದ್ಧ ಹೂಡಿರುವ ಯುದ್ದವಾಗಿದೆ ಎಂಬ ಸತ್ಯವು ಮನದಟ್ಟಾಗಿದೆ.

ಮಾವೊವಾದವು ನಗರಪ್ರದೇಶದಲ್ಲಿ ದುಡಿಯುವ ವರ್ಗಗಳಿಗೆ, ದಲಿತ ಚಳವಳಿಗೆ, ಅರಣ್ಯ ಪ್ರದೇಶಗಳಿಂದ ಹೊರಗಿರುವ ರೈತರು ಮತ್ತು ಕೃಷಿ ಕಾರ್ಮಿಕರ ಬವಣೆಗಳಿಗೆ ಅಪ್ರಸ್ತುತವಾಗಿ ಬಿಟ್ಟಿದೆಯೆಂಬ ಆರೋಪ ಕೇಳಿಬರುತ್ತಿದೆ. ಪ್ರಾಯಶಃ ಇದು ನಿಜ. ಆರಣ್ಯಗಳ ಹೊದಿಕೆಯಿಲ್ಲದ ಪ್ರದೇಶಗಳಲ್ಲಿ ಮಾವೊವಾದಿಗಳ ಮಿಲಿಟರೀಕರಣಗೊಂಡ ರಾಜಕೀಯವನ್ನು ನಡೆಸುವುದು ಅಸಾಧ್ಯವಾಗಿದೆ.

ಆದಾಗ್ಯೂ, ಕಮ್ಯೂನಿಸ್ಟ್ ಪಕ್ಷಗಳು ರಾಜಕೀಯದ ಮುಖ್ಯವಾಹಿನಿಯಲ್ಲಿ ಬದುಕುಳಿಯುವುದಕ್ಕಾಗಿ ತಮ್ಮ ವಿಚಾರಧಾರೆಗಳ ಜೊತೆ ರಾಜಿಮಾಡಿಕೊಂಡಿವೆ. ಹೀಗಾಗಿ ಅವುಗಳಿಗೂ ಇತರ ರಾಜಕೀಯ ಪಕ್ಷಗಳ ಮಧ್ಯೆ ಯಾವುದೇ ವ್ಯತ್ಯಾಸವುಳಿದಿಲ್ಲ. ಕಮ್ಯೂನಿಸ್ಟ್ ಪಕ್ಷಗಳು ತಮ್ಮ ಸಾಂಪ್ರದಾಯಿಕ ಭದ್ರಕೋಟೆಗಳಾದ ಕೇರಳ ಮತ್ತು ಪ.ಬಂಗಾಳಗಳನ್ನು ಹೊರತುಪಡಿಸಿ, ಉಳಿದೆಲ್ಲೆಡೆ ಅವು ನೆಲೆಗಳನ್ನು ಕಳೆದುಕೊಳ್ಳಲಾರಂಭಿಸಿವೆ. ಅವುಗಳ ಕಾರ್ಮಿಕ ಸಂಘಟನೆಗಳು ಕೂಡಾ ನೆಲಕಚ್ಟತೊಡಗಿವೆ. ಹೊಸ ಆರ್ಥಿಕ ನೀತಿಗಳ ಪರಿಣಾಮವಾಗಿ ಕಾರ್ಮಿಕರ ಹಕ್ಕುಗಳು ಕಸಿಯಲ್ಪಡುತ್ತಿರುವುದನ್ನು ತಡೆಗಟ್ಟಲು ಸಹ ಅವುಗಳಿಗೆ ಸಾಧ್ಯವಾಗಲಿಲ್ಲ. ಆದಿವಾಸಿ ಹಾಗೂ ದಲಿತ ಸಮುದಾಯಗಳಿಂದ ಅವು ಬಹುತೇಕ ದೂರವಾಗಿಬಿಟ್ಟಿವೆ.ಎಡರಂಗದ ೩೦ ವರ್ಷಗಳ ಆಡಳಿತವು ಪ.ಬಂಗಾಳವನ್ನು ಶೋಚನೀಯ ಸ್ಥಿತಿಗೆ ತಳ್ಳಿದೆ. ನಂದಿಗ್ರಾಮ ಹಾಗೂ ಸಿಂಗೂರ್‌ಗಳಲ್ಲಿ ಮತ್ತು ಇದೀಗ ಜಂಗಲ್‌ಮಹಲ್ ಪ್ರದೇಶದಲ್ಲಿ ಆದಿವಾಸಿಗಳ ಮೇಲೆ ಎಡಪಕ್ಷಗಳು ನಡೆಸಿದ ದೌರ್ಜನ್ಯಗಳಿಂದಾಗಿ ಅವು ಕೆಲವೇ ವರ್ಷಗಳಲ್ಲಿ ಅಧಿಕಾರ ಕಳೆದುಕೊಂಡಲ್ಲಿ ಅಚ್ಚರಿಯೇನೂ ಇಲ್ಲ.

ಆದರೆ ಮಾವೊವಾದಿಗಳು, ವಿಭಿನ್ನ ರಾಜಕೀಯ ದೃಷ್ಟಿಕೋನವನ್ನು ಹೊಂದಿದ್ದಾರೆ. ಭೂರಹಿತರಿಗೆ ಭೂಮಿಯ ವಿತರಣೆಗಾಗಿ ಹಿಂಸೆಯನ್ನು ಕೈಗೆತ್ತಿಕೊಳ್ಳುವುದರಲ್ಲಿ ತಪ್ಪಿಲ್ಲವೆಂಬುದು ಅವರ ವಾದವಾಗಿದೆ. ಆದರೆ ತಮ್ಮ ಧ್ಯೇಯದಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದರೆ ಅವರು ಶ್ರೀಸಾಮಾನ್ಯರ ಬೆಂಬಲದೊಂದಿಗೆ, ತಮ್ಮ ಧ್ಯೇಯಸಾಧನೆಗಾಗಿ ನಡೆಸುತ್ತಿರುವ ಸಶಸ್ತ್ರ ಹೋರಾಟವು ಸಾವಿರಾರು ಜೀವಗಳನ್ನು ತೆಗೆದುಕೊಂಡಿರುವುದೇನೂ ನಿಜ. ಈ ಹೋರಾಟವು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರುಬಿಟ್ಟಿರುವ ಅನ್ಯಾಯಗಳ ಬಗ್ಗೆ ಹೊಸ ಬೆಳಕನ್ನು ಚೆಲ್ಲಿದೆ.

ಇಂದಿಗೂ ಸಹ ಪ್ರಧಾನಿಯು ಬುಡಕಟ್ಟು ಪ್ರದೇಶಗಳ ಅಸಮಾನ ಬೆಳವಣಿಗೆ ಹಾಗೂ ಶೋಷಣೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಸರಕಾರ ಕೂಡಾ ಅರಣ್ಯ ಇಲಾಖೆಯ ನಿಯಂತ್ರಣದಲ್ಲಿರುವ ಜಂಟಿ ಅರಣ್ಯ ನಿರ್ವಹಣೆ ನಿಧಿಯನ್ನು ಗ್ರಾಮಪಂಚಾಯತ್‌ಗಳಿಗೆ ವರ್ಗಾಯಿಸುವ ಯೋಜನೆಯನ್ನು ಹೊಂದಿದೆ. ಯೋಜನಾ ಆಯೋಗ ಕೂಡಾ ಬುಡಕಟ್ಟು ಜನರ ಅಭಿವೃದ್ಧಿಗಾಗಿ ೧೪ ಸಾವಿರ ಕೋಟಿ ರೂ. ನೀಡುವುದಾಗಿ ಪ್ರಕಟಿಸಿದೆ. ಈ ಹಣವನ್ನು ಮಧ್ಯವರ್ತಿಗಳ ಜೇಬಿಗೆ ಸೇರದೆ, ಆದಿವಾಸಿ ಸಮುದಾಯದ ಅಭಿವೃದ್ಧಿಗೆ ಬಳಕೆಯಾದರೆ, ಆಗ ಖಂಡಿತವಾಗಿಯೂ ಮಾವೊವಾದಿ ಚಳವಳಿಗೆ ಒಂದು ಬಗೆಯ ಬೆಲೆ ದೊರೆಯಿತೆಂದು ಅರ್ಥ. ಅರಣ್ಯ ಪ್ರದೇಶಗಳ ಹೊರಗೆ ರಾಜಕೀಯ ಮಟ್ಟದಲ್ಲಿ ಮಾವೊವಾದಿಗಳ ಉಪಸ್ಥಿತಿ ಕಂಡುಬರದಿದ್ದರೂ,ಅವರ ಪರವಾಗಿ ಸಹಾನುಭೂತಿ ಹೊಂದಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಮಾವೊವಾದಿಗಳ ವಿರುದ್ಧ ಕೇಳಿಬರುತ್ತಿರುವ ಇನ್ನೊಂದು ಆರೋಪವೆಂದರೆ, ಅವರ ನಾಯಕರು ತಮ್ಮ ಸ್ವಾರ್ಥಸಾಧನೆಗಾಗಿ ಜನರನ್ನು ಬಡವರನ್ನಾಗಿ ಹಾಗೂ ಅನಕ್ಷರಸ್ಥರನ್ನಾಗಿಯೇ ಇರಿಸಲು ಆಸಕ್ತರಾಗಿದ್ದಾರೆಂಬುದು. ದಂಡಕಾರಣ್ಯ ಪ್ರದೇಶವು ಕಳೆದ ೩೦ ವರ್ಷಗಳಿಂದ ಮಾವೊವಾದಿಗಳ ಭದ್ರಕೋಟೆಯಾಗಿದ್ದರೂ, ಅಲ್ಲಿ ಅದು ಯಾಕೆ ಶಾಲೆಗಳನ್ನು ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಿಲ್ಲ?. ಯಾಕೆ ಅವರು ಚೆಕ್‌ಡ್ಯಾಂಗಳನ್ನು ಮತ್ತು ಸುಧಾರಿ ಕೃಷಿ ಪದ್ಧತಿಯನ್ನು ಜಾರಿಗೊಳಿಸಿಲ್ಲ?. ಅಲ್ಲಿ ಈಗಲೂ ಯಾಕೆ ಜನರು ಪೌಷ್ಟಿಕ ಆಹಾರದ ಕೊರತೆ ಹಾಗೂ ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದಾರೆಂದು ಟೀಕಿಸುವವರು ಹಲವರಿದ್ದಾರೆ.

ಆದರೆ ನಿಷೇಧಿತ ಸಂಘಟನೆಯೊಂದರ ಸದಸ್ಯರನ್ನು, ಅವರು ವೈದ್ಯರಾಗಿರಲಿ ಅಥವಾ ಶಿಕ್ಷಕರಾಗಿರಲಿ, ಕಂಡಲ್ಲಿ ಗುಂಡಿಕ್ಕಿ ಕೊಲ್ಲಲಾಗುತ್ತಿದೆಯೆಂಬ ವಾಸ್ತವಾಂಶವನ್ನು ಅವರು ಯಾಕೆ ಕಡೆಗಣಿಸುತ್ತಿದ್ದಾರೆ?.

ಒರಿಸ್ಸಾ, ಚತ್ತೀಸ್‌ಗಢ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮಾವೊವಾದಿಗಳಿಂದ ಬಾಧಿತವಾಗಿರುವ ೨೦೦ ಜಿಲ್ಲೆಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ (ಎನ್‌ಆರ್‌ಇಜಿ‌ಎ)ಯ ಕಾರ್ಯನಿರ್ವಹಣೆಯ ಬಗ್ಗೆ ಇತ್ತೀಚೆಗೆ ಪ್ರಕಟವಾದ ವಿಶ್ಲೇಷಣಾತ್ಮಕ ವರದಿಯು ಹೀಗೆ ವಿವರಿಸಲಾಗಿದೆ.

ಮಾವೊವಾದಿಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ತಡೆಗಟ್ಟುತ್ತಿದ್ದಾರೆಂಬ ಆರೋಪಕ್ಕೆ ಯಾವುದೇ ಹುರುಳಿಲ್ಲವೆಂಬುದು ಕ್ಷೇತ್ರ ಸಮೀಕ್ಷೆಯು ಬಹಿರಂಗಪಡಿಸಿದೆ. ವಾಸ್ತವಾಗಿ ಇತರ ಕೆಲವು ಪ್ರದೇಶಗಳಿಗಿಂತ ಬಸ್ತಾರ್‌ನಲ್ಲಿ (ಮಾವೊವಾದಿಗಳ ಭದ್ರಕೋಟೆ) ಎನ್‌ಆರ್‌ಇಜಿ‌ಎ ಅತ್ಯುತ್ತಮವಾಗಿ ಅನುಷ್ಠಾನಗೊಂಡಿದೆ.ಇವೆಲ್ಲದಕ್ಕೂ ಮಿಗಿಲಾಗಿ ಹಲವಾರು ವರ್ಷಗಳ ಹಿಂದೆ ಕನಿಷ್ಠ ದಿನಗೂಲಿ ಕುರಿತಾಗಿ ಈ ಪ್ರದೇಶಗಳಲ್ಲಿ ನಡೆದಿರುವ ಹೋರಾಟಗಳ ನೇತೃತ್ವವನ್ನು ಮಾವೊವಾದಿಗಳು ವಹಿಸಿದ್ದಾರೆಂಬುದು ನೆನಪಿಡತಕ್ಕ ಅಂಶವಾಗಿದೆ.ಇದರ ಪರಿಣಾಮವಾಗಿ ಈಗ ಮಾವೊವಾದಿಗಳು ಪ್ರಬಲವಾಗಿರುವ ಪ್ರದೇಶಗಳಲ್ಲಿ ತೆಂಡು ಎಲೆ ಕಾರ್ಮಿಕರ ದಿನಗೂಲಿಯಲ್ಲಿ ಎರಡು ಪಟ್ಟು ಏರಿಕೆಯಾಗಿದೆ.

ಮಾವೊವಾದಿಗಳೆಂದರೆ ಕೈಬೆರಳೆಣಿಕೆಯ ಸಂಖ್ಯೆಯಷ್ಟಿರುವ ಹೊರಗಿನವರಿಂದ ನಿಯಂತ್ರಿಸಲ್ಪಡುವ ದುಷ್ಟಕೂಟವಾಗಿದೆಯೆಂದು ಆಪಾದಿಸುವವರಿದ್ದಾರೆ. ಮಾವೊವಾದದ ಕಟುಟೀಕಾಕಾರರಾಗಿರುವ ವಿಶ್ವವಿದ್ಯಾನಿಲಯದ ಉಪನ್ಯಾಸಕರೊಬ್ಬರು, ಮಾವೊವಾದಿಗಳನ್ನು, ಬಡ ಆದಿವಾಸಿಗಳನ್ನು ನೆತ್ತರುಕುಡಿಯುತ್ತಿರುವ ಪರಾವಲಂಭಿಗಳೆಂದು ಜರೆದಿದ್ದರು. ತನ್ನ ವಾದವನ್ನು ಸಮರ್ಥಿಸಲು ಆತ ಮಾವೊವಾದಿಗಳಿಂದ ಬಾಧಿತವಾದ ದಂಡಕಾರಣ್ಯ ಪ್ರದೇಶಕ್ಕೂ, ದಕ್ಷಿಣದಲ್ಲಿರುವ ಕೇರಳ ರಾಜ್ಯವು ಸಾಧಿಸಿರುವ ಪ್ರಗತಿಯನ್ನು ಪರಸ್ಪರ ಹೋಲಿಸಿದ್ದರು. ಆದಿವಾಸಿಯೇತರ ಮಾವೊವಾದಿ ನಾಯಕರು ಅರಣ್ಯದಲ್ಲಿ ಅವಿತುಕೊಂಡಿರುವ ಹೇಡಿಗಳೆಂದು ಅವರು ನಿಂದಿಸಿದ್ದರು.ಆದಿವಾಸಿ ಮಾವೊವಾದಿ ಗೆರಿಲ್ಲಾಗಳು ಹಾಗೂ ಗ್ರಾಮಾಂತರ ಮಾವೊವಾದಿ ಸಶಸ್ತ್ರ ಪಡೆಯು, ಗಾಂಧಿವಾದಿ ನಾಯಕರ ಮುಂದೆ ಶರಣಾಗತರಾಗಬೇಕೆಂದು ಅವರು ಕರೆ ನೀಡಿದ್ದರು.

ಮಾವೊವಾದಿ ಚಳವಳಿಯಲ್ಲಿ ಸಕ್ರಿಯವಾಗಿರುವ ಆದಿವಾಸಿಯೇತರ ನಾಯಕರೆಲ್ಲರನ್ನೂ ಯುದ್ಧಾಪರಾಧಗಳಿಗಾಗಿ ವಿಚಾರಣೆಗೊಳಪಡಿಸಬೇಕೆಂದು ಅವರು ಆಗ್ರಹಿಸಿದ್ದರು.

ಆದರೆ ಈ ವಿಚಾರವಾದಿಗೆ ಶರಣಾಗತಿಯ ವಿಷಯದಲ್ಲಿ ಆದಿವಾಸಿಯೇತರ ಗಾಂಧಿವಾದಿಗಳು ಬೇಕಾಗುತ್ತಾರೆ. ಆದರೆ ಆದಿವಾಸಿಯೇತರ ಮಾವೊವಾದಿಗಳು ಯಾಕೆ ಬೇಡವಾಗುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ.

ಹಸಿವಿನಲ್ಲೇ ಬಳಲುತ್ತ್ತಿರುವವರಿಂದ ನಿರಶನ ಸತ್ಯಾಗ್ರಹ ನಿರೀಕ್ಷಿಸಲಾದೀತೇ?

ಒರಿಸ್ಸಾದಲ್ಲಿ ವಿವಿಧ ರೀತಿಯ ನಿಶಸ್ತ್ರ ಪ್ರತಿರೋಧ ಚಳವಳಿಯನ್ನು ನಡೆಸುತ್ತಿರುವ ಸಂಘಟನೆಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳಿರುವುದು ನಿಜ. ಆದರೂ ಕೂಡಾ ಅವು, ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಯೋಜನೆಗಳನ್ನು ಮುಂದುವರಿಸುವುದಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿವೆ. ಕಳಿಂಗ ನಗರದಲ್ಲಿ ಟಾಟಾ, ಜಮ್ಶೆದ್‌ಪುರದಲ್ಲಿ ಪೊಸ್ಕೊ, ನಿಯಮ್‌ಗಿರಿಯಲ್ಲಿ ವೇದಾಂತ ಸಂಸ್ಥೆಗಳ ಆಟಾಟೋಪಕ್ಕೆ ಕಡಿವಾಣ ಹಕ್ಕುವಲ್ಲಿ ಈ ಸಂಘಟನೆಗಳು ಯಶಸ್ವಿಯಾಗಿವೆ. ಈ ಸಂಘಟನೆಗಳು ಸಕ್ರಿಯವಾಗಿರುವ ಒರಿಸ್ಸಾ ರಾಜ್ಯವನ್ನು ಮಾವೊವಾದಿಗಳು ಒಂದು ಪಡಸಾಲೆಯಂತೆ ಬಳಸಿಕೊಳ್ಳುತ್ತವೆಯೇ ಹೊರತು, ದೊಡ್ಡ ಪ್ರಮಾಣದ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ಭದ್ರತಾ ಪಡೆಗಳು, ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ವಿರುದ್ಧ ನಿಶಸ್ತ್ರ ಚಳವಳಿಯಲ್ಲಿ ತೊಡಗಿರುವ ಜನತೆಯನ್ನು ದಮನಿಸುವ ಕಾರ್ಯಾಚರಣೆಯನ್ನು ಮುಂದು ವರಿಸಿದಲ್ಲಿ ಮಾವೊವಾದಿಗಳು ಅಖಾಡಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.

೨೦೦೬ರಲ್ಲಿ ಕಂಧಮಲ್ ಜಿಲ್ಲೆಯಲ್ಲಿ ದಲಿತರು ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಆದಿವಾಸಿ ಸಮುದಾಯಗಳ ನಡುವೆ ಉದ್ವಿಗ್ನತೆಯು ತಾರಕಕ್ಕೇರಿದ ಸಂದರ್ಭದಲ್ಲಿ, ಮಾವೊವಾದಿಗಳು ವಿಶ್ವಹಿಂದೂ ಪರಿಷತ್ ನಾಯಕ ಲಕ್ಷ್ಮಣಾನಂದ ಸರಸ್ವತಿಯವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಲಕ್ಷ್ಮಣಾನಂದ ಸರಸ್ವತಿ ಆದಿವಾಸಿಗಳನ್ನು ಹಿಂದೂಧರ್ಮಕ್ಕೆ ಮರಳಿ ಕರೆತರುವ ಉದ್ದೇಶದಿಂದ ಕಂಧಮಲ್ ಜಿಲ್ಲೆಯ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯಾ ಚರಿಸುತ್ತಿದ್ದರು. ಲಕ್ಷ್ಮಣಾನಂದ ಸರಸ್ವತಿಯ ಹತ್ಯೆಯ ಬಳಿಕ ತೀರಾ ಇತ್ತೀಚೆಗೆ ಹಿಂದೂಧರ್ಮಕ್ಕೆ ಮತಾಂತರಗೊಂಡ ಕಂಧಾ ಬುಡಕಟ್ಟು ಜನರಿಗೆ ಹಿಂಸಾಚಾರಕ್ಕಿಳಿಯುವಂತೆ ಕುಮ್ಮಕ್ಕು ನೀಡಲಾಯಿತು. ಈ ಕ್ರೈಸ್ತ ವಿರೋಧಿ ಹಿಂಸಾಚಾರದಲ್ಲಿ ಸುಮಾರು ೪೦೦ ಗ್ರಾಮಗಳು ಸ್ಮಶಾನಗಳಾದವು. ಹಲವು ವಾರಗಳವರೆಗೆ ನಡೆದ ಗಲಭೆಗಳಲ್ಲಿ ೫೪ ಮಂದಿ ಪನ್ನಾ ಬುಡಕಟ್ಟಿನ ದಲಿತ ಕ್ರೈಸ್ತರನ್ನು ಬರ್ಬರವಾಗಿ ಹತ್ಯೆಗೈಯಲಾಯಿತು. ೨೦೦ಕ್ಕೂ ಅಧಿಕ ಚರ್ಚ್‌ಗಳನ್ನು ಸುಟ್ಟು ಹಾಕಲಾಯಿತು, ಸಾವಿರಾರು ದಲಿತ ಕ್ರೈಸ್ತರು ಪ್ರಾಣಭಯದಿಂದ ಮನೆಮಾರು ತೊರೆದು, ಕಾಡಿನಲ್ಲಿ ಆವಿತುಕೊಂಡರು. ಈಗಲೂ ಸ್ವಗ್ರಾಮಕ್ಕೆ ಮರಳುವ ಧೈರ್ಯವಿರದೆ, ನಿರಾಶ್ರಿತ ಶಿಬಿರಗಳಲ್ಲಿ ಉಳಿದುಕೊಂಡವರು ಹಲವರಿದ್ದಾರೆ.

ಆದರೆ ಇದೀಗ ಅಷ್ಟೆ ಅಪಾಯಕಾರಿಯಾದ ಪರಿಸ್ಥಿತಿಯು ಒರಿಸ್ಸಾದ ನಾರಾಯಣಪಟ್ನ ಹಾಗೂ ಕೊರಾಪುಟ್ ಜಿಲ್ಲೆಗಳಲ್ಲಿ ತಲೆಯೆತ್ತಿದೆ. ಈ ಪ್ರದೇಶಗಳಲ್ಲಿ ಚಾಸಿ ಮುಲ್ಯ ಆದಿವಾಸಿ ಸಂಘವು, ಸ್ಥಳೀಯ ಲೇವಾದೇವಿಗಾರರು ಹಾಗೂ ಮದ್ಯದ ದೊರೆಗಳು ಬುಡಕಟ್ಟು ಜನರಿಂದ ಕಸಿದುಕೊಂಡ ಭೂಮಿಯನ್ನು ಮರಳಿ ಪಡೆಯಲು ಪ್ರಬಲವಾದ ಚಳವಳಿಯನ್ನು ನಡೆಸುತ್ತಿದೆ. ಆದರೆ ಪೊಲೀಸರು ಈಗಾಗಲೇ ಚಾಸಿ ಮುಲ್ಯ ಆದಿವಾಸಿ ಸಂಘವನ್ನು, ಮಾವೊವಾದಿಗಳ ಒಂದು ವೇದಿಕೆಯೆಂದು ಹಣೆಪಟ್ಟಿ ಕಟ್ಟಿದ್ದಾರೆ. ಈ ಪ್ರದೇಶಗಳಲ್ಲಿ ಈಗ ಪೊಲೀಸ್‌ರಾಜ್ ಸ್ಥಾಪನೆಯಾಗಿದೆ. ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ನಡೆಸಿದ್ದ ನೂರಾರು ಆದಿವಾಸಿಗಳು ಕೊರಾಪುಟ್ ಜೈಲಿನಲ್ಲಿ ಕೊಳೆಯುತ್ತಿದ್ದರೆ, ಸಾವಿರಾರು ಜನರು ತಮ್ಮ ಮನೆಗಳಿಗೆ ಹೋಗಲು ಹೆದರಿಕೊಂಡು, ಕಾಡುಗಳಲ್ಲಿ ದಿನಗಳೆಯುತ್ತಿದ್ದಾರೆ.

ಇಂತಹ ಸನ್ನಿವೇಶಗಳಲ್ಲಿ ಜೀವಿಸುತ್ತಿರುವ ಜನರಿಗೆ ಶಾಂತಿಮಂತ್ರವನ್ನು ಜಪಿಸುವ ಕೈಬೆರಳೆಣಿಕೆಯಷ್ಟು ಮಂದಿಯಿಂದ ಬೋಧನೆಗಳನ್ನು ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಆಗ ಅವರಿಗೆ ಬಂಧೂಕುಗಳನ್ನು ಹಿಡಿದು, ತಮ್ಮ ಆಶೋತ್ತರಗಳನ್ನು ಬೆಂಬಲಿಸುವ ಜನರು ಹೆಚ್ಚು ಅಪ್ಯಾಯವಾಗುತ್ತಾರೆ. ಗಾಂಧಿವಾದಿ ಸತ್ಯಾಗ್ರಹವು ಒಂದು ಬಗೆಯ ರಾಜಕೀಯ ನಾಟಕರಂಗವಾಗಿದೆ. ಈ ಸತ್ಯಾಗ್ರಹವು ಪರಿಣಾಮಕಾರಿಯಾಗಬೇಕಾದರೆ, ಆ ಬಗ್ಗೆ ಸಾವಕಾಶವಾಗಿ ವಿಚಾರವಿಮರ್ಶೆ ಮಾಡುವಂತಹ ಸಹಾನುಭೂತಿಯುಳ್ಳ ಪ್ರೇಕ್ಷಕರ ಅಗತ್ಯ ವಿರುತ್ತದೆ. ಆದರೆ ದಟ್ಟಾರಣ್ಯದ ನಡುವೆ ಜೀವಭಯದಿಂದ ಅಡಗಿರುವ ಆದಿವಾಸಿ ಗಳಿಂದ ಇಂತಹ ತಾಳ್ಮೆಯ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅರಣ್ಯದ ನಡುವೆ ಇರುವ ಗ್ರಾಮದಲ್ಲಿ ೮೦೦ಕ್ಕೂ ಅಧಿಕ ಪೊಲೀಸರು ಗುಂಪುಗುಂಪಾಗಿ ಗುಡಿಸಲುಗಳನ್ನು ಸುಟ್ಟುಹಾಕಿ, ಮನಬಂದಂತೆ ಜನರಿಗೆ ಗುಂಡಿಕ್ಕುತ್ತಿದ್ದರೆ, ಉಪವಾಸ ಸತ್ಯಾಗ್ರಹ ಮಾಡಿ ಏನು ಪ್ರಯೋಜನ?. ಅಷ್ಟಕ್ಕೂ ಪ್ರತಿ ದಿನವೂ ಅರೆಹೊಟ್ಟೆಯಲ್ಲೇ ಇರುವ ಜನರನ್ನು ನಿರಶನ ಸತ್ಯಾಗ್ರಹ ಮಾಡಿ ಎಂದು ಕೇಳುವುದು ಯಾವ ನ್ಯಾಯ?.

ಸರಕಾರವು ತನ್ನನ್ನು ವಿರೋಧಿಸುವ ಪ್ರತಿಯೊಬ್ಬರಿಗೂ ಮಾವೊವಾದಿಗಳೆಂಬ ಹಣೆಪಟ್ಟಿ ಕಟ್ಟುತ್ತಿದೆ. ಹೀಗಾಗಿ ಮಾವೊವಾದಿಗಳು ದೇಶದ ವಿದ್ಯಮಾನಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಮಾವೊವಾದಿಗಳಿಗೆ ಹಫ್ತಾ ದೊರೆಯುವ ತನಕ ಅವರು ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದುವರಿಸಲು ಆಸ್ಪದ ನೀಡುತ್ತಾರೆಂಬ ಭಾವನೆ ಗಣಿಗಾರಿಕೆ ಕಂಪೆನಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅನೇಕ ಜನರಲ್ಲಿದೆ. ಗಣಿಗಾರಿಕೆಯ ವಿರುದ್ಧ ತಾವು ನಡೆಸುತ್ತಿರುವ ಹೋರಾಟವು ಮಾವೊವಾದಿಗಳ ಸಶಸ್ತ್ರ ಚಳವಳಿಗಿಂತ ಹೆಚ್ಚು ಉತ್ತಮವೆಂಬ ಭಾವನೆಯನ್ನು ವ್ಯಕ್ತಪಡಿಸುವ ಹಲವು ಬುದ್ಧಿಜೀವಿ ನಾಯಕರಿದ್ದಾರೆ. ಮಾತ್ರವಲ್ಲ ಪರಿಸರ ಧಾರಣಾಶೀಲ ಗಣಿಗಾರಿಕೆಗೆ ಬೆಂಬಲವನ್ನು ಅವರು ನೀಡುತ್ತಾರೆ. ಅಧಿಕ ಮೊತ್ತದ ರಾಜಧನ, ಸಂತ್ರಸ್ತರಿಗೆ ಉತ್ತಮ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆಯನ್ನು ಅವರು ನೀಡುತ್ತಾರೆ.

ನಮ್ಮ ಹಾಲಿ ಗಣಿಗಾರಿಕಾ ಸಚಿವರೂ ಕೂಡಾ ಇಂಥವರ ಸಾಲಿಗೆ ಸೇರುತ್ತಾರೆ. ಸಂಸತ್‌ನಲ್ಲಿ ಅವರು ಇತ್ತೀಚೆಗೆ ಮಾತನಾಡುತ್ತಾ, ಗಣಿಗಾರಿಕೆಯಿಂದ ದೊರೆಯುವ ಲಾಭದ ಶೇ.೨೫ರಷ್ಟು ಪಾಲು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ದೊರಕಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೆ ಸತ್ಯದ ತಲೆಯ ಮೇಲೆ ಹೊಡೆಯುವಂತೆ ಹೇಳುವ ಇಂತಹ ಭರವಸೆಗಳನ್ನು ನಂಬುವಂತಹ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.

ಈಗ ದೇಶದ ಗಣಿಗಾರಿಕಾ ವಲಯಗಳಲ್ಲಿ ನಡೆಯುತ್ತಿರುವ ಬಾಕ್ಸೆಟ್ ಆದಿರಿನ ಗಣಿಗಾರಿಕೆಯಿಂದ ಗಣಿಗಾರಿಕಾ ಕಂಪೆನಿಗಳಿಗೆ ನೂರಾರು ಕೋಟಿ ಡಾಲರ್ ಆದಾಯ ದೊರೆಯುತ್ತದೆ. ಆದರೆ ಪರಿಸರಕ್ಕೆ ಸಹನೀಯವಾದ ರೀತಿಯಲ್ಲಿ ಬಾಕ್ಸೆಟ್‌ನ ಗಣಿಗಾರಿಕೆಯನ್ನು ಮಾಡಿ, ಅದನ್ನು ಆಲ್ಯುಮಿನಿಯಂ ಆಗಿ ಸಂಸ್ಕರಿಸುವಂತಹ ಯಾವ ವಿಧಾನವೂ ಪ್ರಸ್ತುತ ಭಾರತದಲ್ಲಿ ಆಚರಣೆಯಲ್ಲಿಲ್ಲ. ಇದೊಂದು ಅತ್ಯಂತ ವಿಷಕಾರಿಯಾದ ಪ್ರಕ್ರಿಯೆಯಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಂತೂ ಬಾಕ್ಸೆಟ್ ಸಂಸ್ಕರಿಸಿ, ಆಲ್ಯುಮಿನಿಯಂ ಉತ್ಪಾದಿಸುವ ಪ್ರಕ್ರಿಯೆಯನ್ನು ತಮ್ಮ ದೇಶದಲ್ಲಿ ನಡೆಸಲು ಸುತರಾಂ ಒಪ್ಪಿಗೆ ನೀಡುವುದಿಲ್ಲ. ಒಂದು ಟನ್ ಆಲ್ಯುಮಿನಿಯಂ ಉತ್ಪಾದಿಸಬೇಕಾದರೆ, ನಿಮಗೆ ಆರು ಟನ್ ಬಾಕ್ಸೆಟ್, ಸಾವಿರಾರು ಟನ್ ಜಲ ಹಾಗೂ ಬೃಹತ್ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ. ಹೀಗಾಗಿ ನೀರನ್ನು ಸಂಗ್ರಹಿಸಲು ಮತ್ತು ವಿದ್ಯುತ್ ಉತ್ಪಾದಿಸಲು ದೊಡ್ಡ ಅಣೆಕಟ್ಟು ಗಳು ಬೇಕಾಗುತ್ತವೆ. ಇಷ್ಟಕ್ಕೂ ಉತ್ಪಾದನೆಯಾದ ಅಲ್ಯುಮಿನಿಯಂ ಎಲ್ಲಿಗೆ ಹೋಗುತ್ತದೆಯೆಂಬ ಪ್ರಶ್ನೆಯೇಳುತ್ತದೆ?. ಶಸ್ತ್ರಾಸ್ತ್ರಗಳನ್ನು ತಯಾರಿಕಾ ಉದ್ಯಮದಲ್ಲಿ ಅಲ್ಯುಮಿನಿಯಂ ಪ್ರಧಾನವಾಗಿ ಬಳಕೆಯಾಗುತ್ತಿರುವ ಲೋಹವಾಗಿದೆ. ಅದು ಕೂಡಾ ವಿದೇಶಗಳ ಶಸ್ತ್ರಾಸ್ತ್ರ ಉದ್ಯಮಗಳಿಗಾಗಿ ಈ ಲೋಹವನ್ನು ರಫ್ತ ಮಾಡಲಾಗುತ್ತಿದೆ.

ಭಾರತದಲ್ಲಿ ಇಷ್ಟೆಲ್ಲಾ ಹಿಂಸಾಚಾರ ಹಾಗೂ ದುರಾಸೆಗಳ ಮಧ್ಯೆ, ಆಶಾವಾದದ ಹೊಂಗಿರಣ ಕೂಡಾ ಕಾಣಿಸುತ್ತಿದೆ. ಕೊಳ್ಳುಬಾಕತನ ಸಂಸ್ಕೃತಿಗೆ ಅಡಿಯಾಳಾಗದ ದೊಡ್ಡ ಜನಸಮೂಹ ಈಗಲೂ ಕೂಡಾ ನಮ್ಮ ದೇಶದಲ್ಲಿ ಕಾಣಸಿಗುತ್ತದೆ. ಗಾಂಧೀಜಿ ಪ್ರತಿಪಾದಿಸಿದ ಧಾರಣಾಶೀಲತೆ ಹಾಗೂ ಸ್ವಾವಲಂಬನೆ ತತ್ವಗಳಿಗಾಗಿ ಹೋರಾಟ ನಡೆಸಿದ ಉದಾತ್ತ ಪರಂಪರೆಯ ಜನರು ನಮ್ಮ ನಡುವೆ ಕಾಣಸಿಗುತ್ತಾರೆ. ಹಾಗೆಯೇ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಿದ್ಧಾಂತಕ್ಕೆ ಬದ್ಧವಾಗಿರುವ ಸಮಾಜವಾದಿಗಳು ನಮ್ಮೆದುರಿಗಿದ್ದಾರೆ. ಮಾತ್ರವಲ್ಲದೆ ಈ ಎರಡೂ ವಿಚಾರಧಾರೆಗಳಿಗೆ ಗಂಭೀರ ರೀತಿಯಲ್ಲಿ ಸವಾಲೊಡ್ಡುವ ಅಂಬೇಡ್ಕರ್ ಚಿಂತನೆಯೂ ಭದ್ರ ನೆಲೆಯನ್ನು ಕಂಡುಕೊಂಡಿದೆ. ಈಗ ನಾವು ಅತ್ಯಂತ ಅಭೂತಪೂರ್ವವಾದ ಒಕ್ಕೂಟವನ್ನು ಸಾಧಿಸಿರುವ ಅನುಭವಸ್ಥ, ತಿಳುವಳಿಕೆ ಮತ್ತು ದೂರದೃಷ್ಟಿಯನ್ನು ಹೊಂದಿದ ಪ್ರತಿರೋಧ ಚಳವಳಿಗಳನ್ನು ಕಾಣುತ್ತಿದ್ದೇವೆ.

ಇವೆಲ್ಲದಕ್ಕೂ ಮಿಗಿಲಾಗಿ ಭಾರತದಲ್ಲಿ ಹೆಚ್ಚುಕಮ್ಮಿ ೧೦ ಕೋಟಿಗೂ ಅಧಿಕ ಆದಿವಾಸಿಗಳಿದ್ದಾರೆ. ಧಾರಣಾಶೀಲ ಬದುಕಿನ ರಹಸ್ಯಗಳನ್ನು ಈಗಲೂ ತಿಳಿದಿರುವ ಜನಸಮುದಾಯದಲ್ಲಿ ಅವರು ಕೂಡಾ ಸೇರಿದ್ದಾರೆ. ಒಂದು ವೇಳೆ ಈ ಜನಸಮೂಹವು ಕಣ್ಮರೆಯಾದಲ್ಲಿ ಈ ಮಹತ್ವದ ರಹಸ್ಯಗಳನ್ನು ಅವರು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ. ಆಪರೇಷನ್ ಗ್ರೀನ್ ಹಂಟ್‌ನಂತಹ ಸಮರಗಳು ಈ ಆದಿವಾಸಿಗಳನ್ನು ನಿರ್ಮೂಲನೆ ಮಾಡುತ್ತಿವೆ. ಹೀಗಾಗಿ ಈ ಸಮರದತ ಪ್ರತಿಪಾದಕರು ವಿನಾಶದ ಬೀಜಗಳನ್ನು ಬಿತ್ತುತ್ತಾರೆ. ಮಧ್ಯಭಾರತದಲ್ಲಿ ನಡೆಯುತ್ತಿರುವ ಈ ಸಮರವು ಇಡೀ ಮನುಕುಲಕ್ಕೆ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಈ ಕಾರಣದಿಂದಲಾದರೂ ಯುದ್ಧವನ್ನು ವಿರೋಧಿಸುತ್ತಿರುವ ಎಲ್ಲ ರಾಜಕೀಯ ಸಂಘಟನೆಗಳ ನಡುವೆ ನೈಜ ಹಾಗೂ ತ್ವರಿತ ಮಾತುಕತೆಗಳು ನಡೆಯಬೇಕಾದ ಅಗತ್ಯವಿದೆ.

ಯಾವಾಗ ಬಂಡವಾಳಶಾಹಿವಾದವು, ತನ್ನ ನಡುನೆ ಬಂಡವಾಳಶಾಹಿ ಯೇತರ ಸಮಾಜಗಳನ್ನು ತಾಳಿಕೊಳ್ಳಲು ಸಾಧ್ಯವಾಗುವುದೋ, ಯಾವಾಗ ಬಂಡವಾಳಶಾಹಿ ವಾದಕ್ಕೆ, ತನಗೆ ನಿರಂತರವಾಗಿ ಕಚ್ಚಾವಸ್ತುಗಳು ಪೂರೈಕೆಯಾಗುತ್ತವೆಯೆಂಬ ಭ್ರಮೆಯು ಅಳಿಸಿಹೋಗುವುದೋ, ಆಗ ಹೊಸ ಬದಲಾವಣೆ ಖಂಡಿತವಾಗಿಯೂ ಕಾಣಸಿಗುವುದು.

ಜಗತ್ತಿಗೆ ಯಾವುದಾದರೂ ಆಶಾವಾದವೆಂಬುದಿದ್ದರೆ, ಅದು ನಗರಗಳ ದೊಡ್ಡ ಕಟ್ಟಡಗಳಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡು, ಹವಾಮಾನ ಬದಲಾವಣೆಯ ಕುರಿತು ಸಮಾವೇಶಗಳನ್ನು ನಡೆಸುವ ಮಂದಿಯಿಂದ ದೊರೆಯಲು ಸಾಧ್ಯವಿಲ್ಲ. ಅದು ತಮ್ಮ ಅರಣ್ಯಗಳನ್ನು, ಪರ್ವತಗಳನ್ನು ಹಾಗೂ ನದಿಗಳನ್ನು ರಕ್ಷಿಸಲು ಹೋರಾಡುತ್ತಿರುವ ಜನರಿಂದ ಮಾತ್ರ ಸಾಧ್ಯ. ಏಕೆಂದರೆ ಈ ಅರಣ್ಯಗಳು, ಪರ್ವತಗಳು ಹಾಗೂ ನದಿಗಳನ್ನು ತಮ್ಮನ್ನು ರಕ್ಷಿಸುತ್ತವೆ ಎಂಬ ನಂಬಿಕೆಯಿಂದಲೇ ಅವರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡುತ್ತಿದ್ದಾರೆ.

ಪ್ರಸಕ್ತ ಜಗತ್ತಿನ ಬಗ್ಗೆ ವಿಭಿನ್ನ ಕಲ್ಪನೆಯನ್ನು ಹೊಂದಿದವರನ್ನು ನಿರ್ಮೂಲಗೊಳಿಸುವುದನ್ನು ನಿಲ್ಲಿಸುವುದೇ ಈಗಿನ ಪ್ರಪಂಚಕ್ಕೆ ಹೊಸ ವರ್ಚಸ್ಸನ್ನು ನೀಡುವ ನಿಟ್ಟಿನಲ್ಲಿ ಕೈಗೊಳ್ಳುವ ಪ್ರಥಮ ಹೆಜ್ಜೆಯಾಗಿದೆ. ನಮ್ಮ ಪರಂಪರೆಯ ಪಾಲಕರಾಗಿರುವ, ಆದರೆ ನಿಜವಾಗಿ ನಮ್ಮ ಭವಿಷ್ಯದ ಮಾರ್ಗದರ್ಶಕರಾಗಿರುವ ಈ ಜನರ ಉಳಿವಿಗಾಗಿ ಕೆಲವೊಂದು ಭೌತಿಕ ಅವಕಾಶಗಳನ್ನು ಒದಗಿಸುವುದು ತುರ್ತು ಅಗತ್ಯವಾಗಿದೆ. ಹೀಗೆ ಮಾಡಲು ನಾವು ನಮ್ಮನ್ನು ಆಳುವವರಿಗೆ ಕೆಲವೊಂದು ಪ್ರಶ್ನೆಯನ್ನು ಕೇಳಬೇಕಾಗಿದೆ. ನೀವು ನದಿಯಲ್ಲಿ ನೀರನ್ನು, ಕಾಡಲ್ಲಿ ಮರಗಳನ್ನು, ಪರ್ವತಗಳಲ್ಲಿ ಆದಿರನ್ನು ಉಳಿಸಬಲ್ಲಿರಾ?. ಅದು ಅವರಿಗೆ ಸಾಧ್ಯವಿಲ್ಲದಿದ್ದರೆ, ಈ ಸಮರಗಳಲ್ಲಿ ಸಂತ್ರಸ್ತರಾದವರಿಗೆ ನೈತಿಕತೆಯ ಬೋಧನೆ ಮಾಡುವುದನ್ನು ಕೂಡಾ ಅವರು ನಿಲ್ಲಿಸಬೇಕು.

ಹಸಿವಿನ ಮಕ್ಕಳ ಭಾರತ

ಗೆತಿನ್ ಚೇಂಬರ್‌ಲೀನ್
ಕೃಪೆ: ಗಾರ್ಡಿಯನ್

ಮಿರ್ಗಿತಾಂಡ್, ಜಾರ್ಖಂಡ್ ರಾಜ್ಯದ ಒಂದು ಪುಟ್ಟ ಗ್ರಾಮ. ಅಲ್ಲಿನ ಗುಡಿಸಲೊಂದರಲ್ಲಿ ಒಲೆಯ ಮುಂದೆ ನಿಂತುಕೊಂಡಿರುವ ಬಾಲಕ ಸುಖ್‌ಲಾಲ್ ಹೆಂಬ್ರೊಮ್, ತನ್ನ ಬರಿಹೊಟ್ಟೆಯ ಮೇಲೆ ಬಾಳೆ ಎಲೆಯೊಂದನ್ನು ಹಿಡಿದುಕೊಂಡು, ಪಿಳಿಪಿಳಿ ಕಣ್ಣುಗಳಿಂದ, ತನ್ನ ಎದುರು ಕುಳಿತಿರುವ ವೃದ್ಧನೊಬ್ಬನನ್ನೇ ದಿಟ್ಟಿಸುತ್ತಿದ್ದಾನೆ. ಒಮ್ಮಿಂದೊಮ್ಮೆಗೇ ವೃದ್ಧ ಠಾಕೂರ್ ದಾಸ್, ಬೆಂಕಿಯಿಂದ ಧಗಧಗಿಸುತ್ತಿದ್ದ ಒಲೆಯಿಂದ ಕಾದ ಕಬ್ಬಿಣದ ಸರಳನ್ನು ತೆಗೆದು ಹುಡುಗನ ಹೊಟ್ಟೆಗೆ ಬರೆಯಿಡುತ್ತಾನೆ.

ಆಗ ನೋವನ್ನು ಸಹಿಸಲಾಗದೆ ಬಾಲಕ ಜೋರಾಗಿ ಬೊಬ್ಬಿಡುತ್ತಾನೆ. ಹೊಟ್ಟೆಯ ಚರ್ಮದ ಮೇಲೆ ದೊಡ್ಡ ಗುಳ್ಳೆಯೇಳುತ್ತದೆ. ಈ ಕಾದ ಸಲಾಖೆಯಿಂದ ಮತ್ತೆ ಮತ್ತೆ ಬಾಲಕನ ಹೊಟ್ಟೆಗೆ ಬರೆಯೆಳೆಯಲಾಗುತ್ತದೆ. ಬಾಲಕನ ರೋದನ ಹೆಚ್ಚಾದಂತೆ,ಅಲ್ಲಿದ್ದವರಿಗೆ ಸಂತಸವಾಗುತ್ತದೆ. ಏಕೆಂದರೆ, ಮಿರ್ಗಿತಾಂಡ್ ಗ್ರಾಮದ ಜನತೆಗೆ, ತಮ್ಮ ಮಕ್ಕಳನ್ನು ಬಾಧಿಸುತ್ತಿರುವ ಹೊಟ್ಟೆನೋವನ್ನು ಗುಣಪಡಿಸಲು, ಕಾದಕಬ್ಬಿಣದಿಂದ ಬರೆಯೇಳುವುದಷ್ಟೇ ತಮಗಿರುವ ಏಕಮಾತ್ರ ದಾರಿ ಎಂದು ಭಾವಿಸಿದ್ದಾರೆ.

ತನ್ನ ಮಗುವಿನ ಮೇಲೆ ಈ ಅಮಾನುಷ ಆಚರಣೆಯನ್ನು ನಡೆಸಿದ್ದಕ್ಕಾಗಿ ದಾಸ್‌ಗೆ ಕಿಂಚಿತ್ತೂ ಬೇಸರವಿಲ್ಲ. ಅಷ್ಟಕ್ಕೂ,ಇಡೀ ಗ್ರಾಮದಲ್ಲಿ ಹೊಟ್ಟೆಯಲ್ಲಿ ಬರೆಯಿಲ್ಲದ ಒಬ್ಬನೇ ಒಬ್ಬ ವ್ಯಕ್ತಿ ಕಾಣಸಿಗುವುದು ತೀರಾ ಕಷ್ಟ. ಹೀಗೆ ಹೊಟ್ಟೆಗೆ ಬರೆಯೆಳೆಯಲ್ಪಟ್ಟ ಕೆಲವು ಮಕ್ಕಳು ಸತ್ತಿದ್ದರೂ ಸಹ, ಈ ಕ್ರೂರ ಆಚರಣೆಯು ಈಗಲೂ ಮುಂದುವರಿದಿದೆ. ಏಕೆಂದರೆ ತಮ್ಮ ಮಕ್ಕಳಿಗೆ ಸಮರ್ಪಕ ಪೌಷ್ಟಿಕ ಆಹಾರವನ್ನು ಒದಗಿಸಲು ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುವ ಆರ್ಥಿಕ ಚೈತನ್ಯ ಹೆತ್ತವರಿಗಿಲ್ಲದಿರುವುದರಿಂದಲೇ,ಅವರು ಹೊಟ್ಟೆಗೆ ಬರೆಯೆಳೆಯುವಂತಹ ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆಂಬುದರಲ್ಲಿ ಸಂಶಯವಿಲ್ಲ.

ಕೃಷಿಕ್ಷೇತ್ರದಲ್ಲಿ ಹೂಡಿಕೆಯ ವೈಫಲ್ಯ ಹಾಗೂ ಸಣ್ಣ ಪ್ರಮಾಣದ ಕೃಷಿಗೆ ಸರಕಾರಿ ಬೆಂಬಲದ ಕೊರತೆಯು, ಭಾರತದ ಸುಮಾರು ಅರ್ಧಾಂಶದಷ್ಟು ಮಕ್ಕಳನ್ನು ಪೌಷ್ಟಿಕ ಆಹಾರದ ಅಭಾವದಿಂದ ನರಳುವಂತೆ ಮಾಡಿದೆ. ಜೊತೆಗೆ ದೇಶದ ಸುಮಾರು ೧೦೦ ಕೋಟಿ ಜನಸಂಖ್ಯೆಯ ಐದನೆ ಒಂದಂಶದಷ್ಟು ಜನರನ್ನು ಹಸಿವಿನ ಕೂಪಕ್ಕೆ ತಳ್ಳಿದೆ.

ಜಾಗತಿಕ ಮಕ್ಕಳ ಸೇವಾಸಂಸ್ಥೆ ‘ಆಕ್ಷನ್ ಏಯ್ಡ್’ ಶತಮಾನದ ಅಭಿವೃದ್ಧಿ ಗುರಿಗಳ ಕುರಿತು ನ್ಯೂಯಾರ್ಕ್‌ನಲ್ಲಿ ಮುಂದಿನ ವಾರ ನಡೆಸಲಿರುವ ಶೃಂಗಸಭೆಗೆ ಪೂರ್ವಭಾವಿಯಾಗಿ ಬಿಡುಗಡೆಗೊಳಿಸಿರುವ ವರದಿಯು, ವಿಶ್ವದ ಕಡುಬಡತನದ ರಾಷ್ಟ್ರಗಳ ಜನತೆಯ ಹಸಿವನ್ನು ನೀಗಿಸಬೇಕಾದರೆ ವರ್ಷಕ್ಕೆ ೨೯೦ ಶತಕೋಟಿ ಡಾಲರ್‌ಗಳ ವೆಚ್ಚ ತಗಲುತ್ತದೆ ಎಂದು ಹೇಳಿದೆ. ಇದು ೨೦೧೫ರೊಳಗೆ ಜಾಗತಿಕ ಮಟ್ಟದಲ್ಲಿ ಹಸಿವಿನ ಸಮಸ್ಯೆಯನ್ನು ನೀಗಿಸುವ ಗುರಿಯನ್ನು ಸಾಧಿಸಲು ವಿಶ್ವಸಂಸ್ಥೆಯು ನಿಗದಿಪಡಿಸಿದ ಅಂದಾಜು ಮೊತ್ತಕ್ಕಿಂತ ಹತ್ತು ಪಟ್ಟು ಅಧಿಕವಾಗಿದೆ.

ಆಫ್ರಿಕ ಖಂಡದ ಸಹರಾ ಭೂಭಾಗದ ರಾಷ್ಟ್ರಗಳಿಗಿಂತಲೂ ಅಧಿಕ ಪ್ರಮಾಣದ ಪೌಷ್ಟಿಕ ಆಹಾರದ ಕೊರತೆಯನ್ನು ಭಾರತವು ಎದುರಿಸುತ್ತಿದೆ. ಭಾರತದಲ್ಲಿ ಐದು ವರ್ಷಗಳಿಗಿಂತ ಕೆಳಗಿನ ಶೇ.೪೩.೫ರಷ್ಟು ಮಕ್ಕಳು ದೇಹತೂಕದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಆಫ್ರಿಕದ ದೇಶಗಳಾದ ಸೂಡಾನ್ ಮತ್ತು ಝಿಂಬಾಬ್ವೆಗಿಂತಲೂ ಕೆಳಗಿನ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತವು ಕಂಡಂತಹ ವಿನಾಶಕಾರಿ ಮುಂಗಾರು ಮಳೆ , ಆದರ ಬೆನ್ನಿಗೆ ಬಂದ ಬರಗಾಲ ಹಾಗೂ ಬೆಳೆ ವೈಫಲ್ಯಗಳು, ಹಸಿವಿನ ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆಯೆಂದು ‘ಆಕ್ಷನ್ ಏಯ್ಡ್’ ವರದಿ ಹೇಳಿದೆ.

ಸುಮಾರು ೧.೯೦ ಲಕ್ಷ ಜನರಿಗೆ ಉಣಿಸಬಹುದಾಗಿದ್ದ ೬೭ ಸಾವಿರ ಟನ್ ಆಹಾರಧಾನ್ಯಗಳು ಸರಕಾರಿ ಗೋದಾ ಮುಗಳಲ್ಲಿ ಕೊಳೆತು ಹೋಗಲು ಆಸ್ಪದ ನೀಡಿದ್ದಕ್ಕಾಗಿ, ಸುಪ್ರೀಂಕೋರ್ಟ್ ಕಳೆದ ತಿಂಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮಾತ್ರವಲ್ಲದೆ ಕಳಪೆ ರೀತಿಯ ದಾಸ್ತಾನಿನಿಂದಾಗಿ ಕೊಳೆತು ಹೋಗುವ ಅಪಾಯದಲ್ಲಿದ್ದ ೧೭.೮ ಟನ್ ಆಹಾರಧಾನ್ಯಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆಯೂ ಅದು ಆದೇಶಿಸಿತು.

ಆದರೆ ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ, ಸರಕಾರದ ನೀತಿಯನ್ನು ರೂಪಿಸುವ ವಿಷಯಗಳಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ನಡೆಸುತ್ತಿದೆಯೆಂದು ಪ್ರಧಾನಿ ಮನಮೋಹನ್‌ಸಿಂಗ್ ತಗಾದೆ ತೆಗೆದರು. ಬಡತನ ರೇಖೆಗಿಂತ ಕೆಳಗಿರುವ ದೇಶದ ಅಂದಾಜು ೩೭ ಶೇಕಡ ಜನಸಂಖ್ಯೆಗೆ ಆಹಾರವನ್ನು ಉಚಿತವಾಗಿ ವಿತರಿಸುವುದರಿಂದ ರೈತರ ಉತ್ಪನ್ನಗಳಿಗೆ ಯಾವುದೇ ಉತ್ತೇಜಕಗಳನ್ನು ನೀಡಲು ಅಸಾಧ್ಯವಾಗುವುದೆಂದು ಎಚ್ಚರಿಕೆ ನೀಡಿದರು. ಆದರೆ ಸುಪ್ರೀಂಕೋರ್ಟ್‌ನ ನಿಲುವು ಅಚಲವಾಗಿತ್ತು. ತಾನು ನೀಡಿರುವುದು ಆದೇಶವೇ ಹೊರತು, ಸಲಹೆಯಲ್ಲವೆಂದು ಸ್ಪಷ್ಟವಾಗಿ ಸರಕಾರಕ್ಕೆ ತಿಳಿಸಿತು.

‘ಆಕ್ಷನ್ ಏಯ್ಡ್’ ಪ್ರಕಾರ, ೧೯೯೦ರಲ್ಲಿದ್ದಷ್ಟೇ ಮಟ್ಟದಲ್ಲಿ ಜಾಗತಿಕ ಹಸಿವಿನ ಪ್ರಮಾಣವು ೨೦೦೯ರಲ್ಲಿಯೂ ಇತ್ತು. ಹಸಿವಿನ ವಿರುದ್ಧ ಹೋರಾಡಲು ಅಭಿವೃದ್ಧಿ ಹೊಂದಿದ ದೇಶಗಳು ೧೪ ಶತಕೋಟಿ ಡಾಲರ್‌ಗಳನ್ನು ದೇಣಿಗೆಯಾಗಿ ನೀಡುವಂತೆ ಈ ಸೇವಾಸಂಸ್ಥೆಯು ಆಗ್ರಹಿಸಿತ್ತು.

“ಮುಂದಿನ ಐದು ವರ್ಷಗಳಲ್ಲಿ ಸಾಧಿಸಬೇಕಾದ ಅತಿ ಮುಖ್ಯ ಅಭಿವೃದ್ಧಿ ಗುರಿಗಳ ಬಗ್ಗೆ ಚರ್ಚಿಸಲು ಮುಂದಿನ ವಾರ ಶೃಂಗಸಭೆ ನಡೆಯಲಿರುವ ಈ ಸಂದರ್ಭದಲ್ಲಿ ವಿಶ್ವದಾದ್ಯಂತ ೧೦೦ ಕೋಟಿ ಜನರು ಹೊಟ್ಟೆ ತುಂಬದೆ ನಿದ್ರಿಸುವಂತಹ ಪರಿಸ್ಥಿತಿಯಿದೆಯೆಂದು ಸೇವಾಸಂಸ್ಥೆಯ ನೀತಿ ರಚನಾ ವಿಭಾಗದ ವರಿಷ್ಠ ಮೆರೆಡಿತ್ ಅಲೆಕ್ಸಾಂಡರ್ ತಿಳಿಸಿದ್ದಾರೆ. ವಿಶ್ವದ ಆರನೆ ಒಂದರಷ್ಟು ಜನಸಂಖ್ಯೆಗೆ ಹೊಟ್ಟೆ ತುಂಬಾ ತಿನ್ನುವಷ್ಟು ಆಹಾರ ದೊರೆಯುತ್ತಿಲ್ಲ. ಆದರೆ ನಾವು ಭೂಗ್ರಹದಲ್ಲಿರುವ ಪ್ರತಿಯೊಬ್ಬ ಪುರುಷ, ಮಹಿಳೆ ಹಾಗೂ ಮಗುವಿಗೆ ಸಾಕಾಗುವಷ್ಟು ಆಹಾರವನ್ನು ಬೆಳೆಸುತ್ತಿದ್ದೇವೆ. ಆದರೆ ಹಸಿವಿನ ಸಮಸ್ಯೆಗೆ ಆಹಾರದ ಕೊರತೆ ಮುಖ್ಯ ಕಾರಣವಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ” ಎಂದವರು ಹೇಳಿದ್ದಾರೆ.

೨೦೦೯ರಲ್ಲಿ ವಿಶ್ವದಾದ್ಯಂತ ೯೨.೫೦ ಕೋಟಿ ಜನರು ಹಸಿವಿನಿಂದ ಬಾಧಿತರಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ೯.೮೦ ಕೋಟಿಯಷ್ಟು ಕಡಿಮೆಯಾಗಿದೆಯೆಂದು ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆಯು ಪ್ರಕಟಿಸಿದೆ. ಆದರೆ ಎರಡು ವರ್ಷಗಳಿಂದ ಕಂಡುಬಂದಿರುವ ಪೂರಕ ಹವಾಮಾನ ಪರಿಸ್ಥಿತಿ ಹಾಗೂ ಅದೃಷ್ಟ ಕಾರಣವೇ ಹೊರತು ಜಾಗತಿಕ ನಾಯಕರು ಕೈಗೊಂಡ ಕ್ರಮಗಳಿಂದಾಗಿ ಅಲ್ಲವೆಂದು ‘ಓಕ್ಸ್‌ಫಾಮ್’ ಎಚ್ಚರಿಕೆ ನೀಡಿದೆ.

ಮಿರ್ಗಿತಾಂಡ್ ಗ್ರಾಮವು ಜಾರ್ಖಂಡ್ ರಾಜಧಾನಿ ರಾಂಚಿಯಿಂದ ೧೯೫ ಕಿ.ಮೀ. ದೂರದ ಪೂರ್ವದಲ್ಲಿದೆ. ಒಂದರ್ಥದಲ್ಲಿ ಈ ಗ್ರಾಮವು ಭಾರತ ದೇಶದಲ್ಲಿದ್ದೂ ಇಲ್ಲದಂತಿದೆ. ಮಿರ್ಗಿತಾಂಡ್ ಹಾಗೂ ಆಸುಪಾಸಿನ ಹಳ್ಳಿಗಳಲ್ಲಿ ಪ್ರಬಲವಾಗಿರುವ ಮಾವೊವಾದಿಗಳು, ಭದ್ರತಾಪಡೆಗಳನ್ನು ಈ ಪ್ರದೇಶದೊಳಗೆ ಕಾಲಿಡಲೂ ಅವಕಾಶ ನೀಡುತ್ತಿಲ್ಲ.

ಈ ಗ್ರಾಮದಲ್ಲಿ ಪ್ರತಿಯೊಂದು ಮಗುವಿನ ಹೊಟ್ಟೆಯ ಮೇಲಿರುವ ಬರೆಯ ಗುರುತುಗಳನ್ನು ನೋಡಿದಾಗ ಹೊರಗಿನವರ‍್ಯಾರಾದರೂ ದಂಗಾಗುತ್ತಾರೆ. ಆದರೆ ಬಡತನದಲ್ಲೇ ಬೇಯುತ್ತಿರುವ ಇಲ್ಲಿನ ಜನತೆಗೆ ಇದು ಸಹಜವಾಗಿಬಿಟ್ಟಿದೆ. ಹಳ್ಳಿಗೆ ಭೇಟಿ ನೀಡಿದ ಪತ್ರಕರ್ತರು ಈ ಬಗ್ಗೆ ವಿಚಾರಿಸಿದಾಗ, ಗ್ರಾಮಸ್ಥರು ಮಕ್ಕಳಿಗೆ ಬರೆಯ ಗುರುತುಗಳನ್ನು ತೋರಿಸುವಂತೆ ಹೇಳಿದರು. ಐದು ವರ್ಷದ ಬಾಲಕ ಮೋಲಿಲಾಲ್ ಕಿಸ್ಕು, ಶರ್ಟ್ ಎತ್ತಿ ದೊಡ್ಡದಾಗಿ ಉಬ್ಬಿರುವ ತನ್ನ ಉದರವನ್ನು ತೋರಿಸಿದಾಗ, ಅದರ ಮೇಲೆ ವೃತ್ತಾಕಾರದಲ್ಲಿ ಬರೆ ಎಳೆದ ಗುರುತುಗಳಿದ್ದವು. ಅಂದ ಹಾಗೆ ಈ ಗ್ರಾಮದಲ್ಲಿ ಹೊಟ್ಟೆಯಲ್ಲಿ ಬರೆಯ ಗುರುತುಗಳಿರದ ಮಕ್ಕಳ್ಯಾರೂ ಇಲ್ಲವೆಂಬುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ಅಂಚೆಕಚೇರಿಯಲ್ಲಿ ದುಡಿಯುತ್ತಿರುವ ೪೪ರ ಹರೆಯದ ಮನೋರಂಜನ್ ಮೆಹ್ತಾ, ಇವೆಲ್ಲವನ್ನೂ ಮರದ ದಿಮ್ಮಿಯೊಂದರ ಮೇಲೆ ಕುಳಿತು ನೋಡುತ್ತಿದ್ದ. ಆತನು ಕೂಡಾ ಈ ಮೂಢನಂಬಿಕೆಯಿಂದ ಹೊರತಾಗಿಲ್ಲ.ವಿದ್ಯಾವಂತನಾಗಿದ್ದರೂ ಸಹ, ತಾನು ಮಗ ಹೇಮಂತ್‌ನನ್ನು ಈ ಆಚರಣೆಗೆ ಒಳಪಡಿಸಿದ್ದಾಗಿ ಆತ ಹೇಳುತ್ತಾನೆ.

“ನನ್ನ ಮಗನ ಹೊಟ್ಟೆ ದೊಡ್ಡದಾಗಿ ಉಬ್ಬಿತ್ತು. ನಾವು ಹಲವಾರು ವೈದ್ಯರ ಬಳಿ ಹೋದೆವು. ಅವರಿಗೆ ಗುಣಪಡಿಸಲು ಸಾಧ್ಯವಾಗಲಿಲ್ಲ” ಎಂದಾತ ಹೇಳುತ್ತಾನೆ. “ಈ ಗ್ರಾಮದಲ್ಲಿ, ಮಗುವಿನ ಹೊಟ್ಟೆಯು ಮಡಕೆಯಾಕಾರದಲ್ಲಿ ಉಬ್ಬಿದರೆ, ನಾವು ಮಗುವಿನ ಹೊಟ್ಟೆಯ ಮೇಲೆ ಬಾಳೆ‌ಎಲೆಯ ತುಂಡನ್ನು ಇರಿಸುತ್ತೇವೆ. ನಂತರ ನಾವು ಎಲೆಯ ಮೇಲೆ ಸುಡುತ್ತಿರುವ ಕಲ್ಲಿದ್ದಲು ಅಥವಾ ಕಾದ ಕಬ್ಬಿಣವನ್ನು ಇಡುತ್ತೇವೆ. ಒಂದು ವೇಳೆ ಮಗುವು ನೋವಿನಿಂದ ಅರಚುತ್ತಿದ್ದರೆ, ಹೊಟ್ಟೆಯಲ್ಲಿರುವ ಹುಳುಗಳು ಸಾಯುತ್ತವೆಯೆಂದು ಅರ್ಥ.

ಆದರೆ ಮೆಹ್ತಾನ ಪುತ್ರ ಹೇಮಂತ್‌ನ ಹೊಟ್ಟೆಗೆ ಎಳೆದ ಬರೆಯೇ ಅವನಿಗೆ ಮೃತ್ಯುವಾಗಿ ಪರಿಣಮಿಸಿತು. ಬರೆಯಿಂದಾದ ಗಾಯಕ್ಕೆ ರೋಗಾಣುಗಳ ಸೋಂಕು ತಗಲಿತು ಮತ್ತು ಆತ ೨೧ ಡಿಸೆಂಬರ್ ೨೦೦೭ರಲ್ಲಿ ಕೊನೆಯುಸಿರೆಳೆದ. ಆಗ ಅವನಿಗೆ ಕೇವಲ ೭ ವರ್ಷ ವಯಸ್ಸು.

ಉಳಿವಿಗಾಗಿ ಹೋರಾಟ

ಭಾರತವು ಆರ್ಥಿಕ ರಂಗದಲ್ಲಿ ಪ್ರಗತಿಯೆಡೆಗೆ ದಾಪುಗಾಲಿನ ಹೆಜ್ಜೆಯನ್ನಿಡುತ್ತಿದೆ. ವಿಪರ್ಯಾಸವೆಂದರೆ, ಈ ದೇಶವು ಇಂದಿಗೂ ಬಡತನ ಹಾಗೂ ಹಸಿವುನಿಂದ ನರಳುತ್ತಲೇ ಇದೆ.

ಭಾರತದ ಕೇವಲ ೮ ರಾಜ್ಯಗಳಲ್ಲಿ ೪೧ ಕೋಟಿ ಜನರು,ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ. ಇದು ಆಫ್ರಿಕ ಖಂಡದ ಸಹರಾ ಭೂಖಂಡದಲ್ಲಿ ೨೬ ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಅಧಿಕ.

ಕಳೆದ ವರ್ಷದ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು“ಆತಂಕಕಾರಿ ಪರಿಸ್ಥಿತಿ”ಯನ್ನು ಎದುರಿಸುತ್ತಿರುವ ೮೫ ರಾಷ್ಟ್ರಗಳ ಪಟ್ಟಿಯಲ್ಲಿ ೬೫ನೆ ಸ್ಥಾನದಲ್ಲಿದ್ದು, ಉ.ಕೊರಿಯಾಗಿಂತಲೂ ಕೆಳಗಿದೆ.

ಜೊತೆಗೆ ಭಾರತಾದ್ಯಂತ ಲಕ್ಷಾಂತರ ಮಂದಿ ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ದಿಲ್ಲಿಯ ಕೊಳೆಗೇರಿಗಳಲ್ಲಿ ಆರು ವರ್ಷಕ್ಕಿಂತ ಕೆಳಗಿನ ಪ್ರಾಯದ ಶೇ.೬೬ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಾಧಿತರಾಗಿದ್ದಾರೆಂದು, ಮೇಯಲ್ಲಿ ಬಿಡುಗಡೆಗೊಂಡ ಅಧ್ಯಯನ ವರದಿಯೊಂದು ತಿಳಿಸಿದೆ. ಸಮಾಜದ ಅತ್ಯಂತ ದುರ್ಬಲ ವರ್ಗಗಳಿಗೆ,ದೊರೆಯಬೇಕಾಗಿದ್ದ ಸರಕಾರಿ ಕಾರ್ಯಕ್ರಮಗಳು ತಲುಪದಿರುವುದು, ಹಸಿವಿನ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ.

ಜಾರ್ಖಂಡ್ ರಾಜ್ಯದ ೨೦ ಹಳ್ಳಿಗಳಲ್ಲಿ ನಡೆಸಿದ ಸಮೀಕ್ಷೆಯೊಂದು ಹಸಿವಿನಿಂದಾಗಿ ಅಲ್ಲಿ ೧೩ ಮಂದಿ ಸಾವನ್ನಪ್ಪಿರುವುದನ್ನ್ನು ಹಾಗೂ ೧ ಸಾವಿರ ಕುಟುಂಬಗಳು, ಹಸಿವಿಗೆ ಸಂಬಂಧಿಸಿ ರೋಗಲಕ್ಷಣಗಳಿಂದ ನರಳುತ್ತಿರುವುದನ್ನು ಬೆಳಕಿಗೆ ತಂದಿತ್ತು. ಜಾರ್ಖಂಡ್ ರಾಜ್ಯದಲ್ಲಿ ಪ್ರತಿ ವರ್ಷವೂ ಸುಮಾರು ೫೦ ಸಾವಿರ ಮಕ್ಕಳು ಮೊದಲ ಹುಟ್ಟುಹಬ್ಬವನ್ನು ಆಚರಿಸುವ ಮುನ್ನವೇ ಸಾವನ್ನಪ್ಪುತ್ತವೆ. ಭಾರತದಲ್ಲಿ ಅತ್ಯಂತ ಕಳಪೆ ವೇತನವನ್ನು ಪಡೆಯುತ್ತಿರುವವರಲ್ಲಿ ಜಾರ್ಖಂಡ್‌ನ ಸರಕಾರಿ ವೈದ್ಯರೂ ಸೇರಿದ್ದಾರೆ. ರಾಜಧಾನಿ ಹೊಸದಿಲ್ಲಿಯ ಸರಕಾರಿ ವೈದ್ಯರ ಸಂಪಾದನೆಯ ಅರ್ಧಾಂಶದಷ್ಟು ವೇತನ ಮಾತ್ರವೇ ಜಾರ್ಖಂಡ್‌ನ ವೈದ್ಯರಿಗೆ ದೊರೆಯುತ್ತಿದೆ. ಐದು ವರ್ಷಗಳ ರಾಜ್ಯ ಸರಕಾರವು ನೇಮಿಸಿದ ೨೪೬೮ ವೈದ್ಯರ ಪೈಕಿ ೨೨೦೦ ಮಂದಿ,ಯಾಕೆ ಉದ್ಯೋಗವನ್ನು ತೊರೆದಿದ್ದಾರೆಂಬ ಪ್ರಶ್ನೆಗೆ ಉತ್ತರ ಇಲ್ಲಿ ಅಡಗಿದೆ. ಜಾರ್ಖಂಡ್‌ಗೆ ೮೦೦ಕ್ಕೂ ಅಧಿಕ ಆರೋಗ್ಯ ಕೇಂದ್ರಗಳ ಅಗತ್ಯವಿದೆಯಾದರೂ,ಅಲ್ಲಿ ಈಗ ಇರುವುದು ಕೇವಲ ೩೩೦.

ಇನ್ನು ಮಧ್ಯ ಭಾರತದ ರಾಜ್ಯವಾದ ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅಲ್ಲಿ ಕಳೆದ ಐದು ವರ್ಷಗಳಲ್ಲಿ ಐದಕ್ಕಿಂತಲೂ ಕೆಳಗಿನ ವಯಸ್ಸಿನ ೫ ಲಕ್ಷ ಮಕ್ಕಳು ಸಾವನ್ನಪ್ಪಿದ್ದಾರೆ ಹಾಗೂ ಶೇ.೬೦ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ರಾಜ್ಯದ ಶೇ. ೩೭ರಷ್ಟು ಜನತೆ ಗ್ರಾಮೀಣ ಪ್ರದೇಶಗಳಲ್ಲಿ ಮಾಸಿಕವಾಗಿ ೩೨೭ ರೂ. ಹಾಗೂ ನಗರ ಪ್ರದೇಶಗಳಲ್ಲಿ ೫೭೦ ರೂ.ಗೂ ಕಡಿಮೆ ವರಮಾನದಲ್ಲಿ ಬದುಕುತ್ತಿದ್ದಾರೆ.

ಬಡವರೇ ಅಧಿಕಸಂಖ್ಯೆಯಲ್ಲಿರುವ ಮಧ್ಯಪ್ರದೇಶದ ಸರಕಾರಿ ಗೋದಾಮುಗಳಲ್ಲಿ ೧ ಲಕ್ಷ ಟನ್ ಗೋಧಿ ಕೊಳೆತುಬಿದ್ದಿರುವುದನ್ನು ತೋರಿಸುವ ದೃಶ್ಯಗಳನ್ನು ಮೇ ತಿಂಗಳಲ್ಲಿ ರಾಷ್ಟ್ರೀಯ ಟಿವಿ ವಾಹಿನಿಗಳು ಪ್ರಸಾರ ಮಾಡಿದಾಗ, ಕೋಲಾಹಲವುಂಟಾಗಿತ್ತು.

ಉತ್ತರಪ್ರದೇಶದಲ್ಲಿ ಗಾನೆ ಎಂಬ ಪಟ್ಟಣದಲ್ಲಿ ಮಕ್ಕಳು ಹಸಿವಿನ ಬೇಗೆಯನ್ನು ತಾಳಲಾರದೆ ಮಣ್ಣನ್ನು ತಿನ್ನುತ್ತಿರುವುದು ಕೂಡಾ ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ ಅದು ಮಾಧ್ಯಮಗಳಲ್ಲಿ ಬರತೊಡಗುತ್ತಿದ್ದಂತೆಯೇ, ಎಚ್ಚೆತ್ತ ಅಧಿಕಾರಿಗಳು ಒಂದಿಷ್ಟು ಆಹಾರವನ್ನು ರವಾನಿಸಿ ಕೈತೊಳೆದುಕೊಂಡರು ಹಾಗೂ ಗ್ರಾಮಸ್ಥರಿಗೆ ತೆಪ್ಪಗಿರುವಂತೆ ತಿಳಿಸಿದರು. ಹಸಿವನ್ನು ಮುಚ್ಚಿಡುವುದೆಂದರೆ ಹೀಗಲ್ಲವೇ?.

ಒಂದು ತುಂಡು ಗೋಡೆ

ನನ್ನ ಕೈಯಾರೆ ಮನೆ ಸುಟ್ಟು
ಬೂದಿ ಹೊತ್ತು ಹೊರಟಿರುವೆ,
ಸುಡಬಯಸುವಿರಾದರೆ ನಿಮ್ಮ ಮನೆ
ನನ್ನ ಜತೆಯಲ್ಲಿ ಬರಬಹುದು-
-ಸಂತ ಕಬೀರ
ಒಂದು
ಬಸ್ ಸ್ಟಾಂಡ್ ಬಳಿಯಲ್ಲಿ ಮೂರು, ಮಸೀದಿ ಗುಡ್ಡೆಯಲ್ಲಿ ಎರಡು-ಹೀಗೆ ಐದು ಮಿಲಿಟರಿ ಹೊಟೇಲುಗಳಿಗೆ ಅಕ್ಕಿ ರೊಟ್ಟಿ ತಟ್ಟಿ ಕೊಟ್ಟು ಜೀವನ ಸಾಗಿಸುವ ‘ರೊಟ್ಟಿ ಪಾತುಮ್ಮ’ಳ ಕನಸಿನಲ್ಲಿ ಕಾಣಿಸಿಕೊಂಡ ದೇವರಾಜ ಅರಸು ಅವರು, “ಏನು ಪಾತುಮ್ಮ ನಿನ್ನ ವಿಚಾರ? ನಿನಗೆ ದರ್ಕಾಸ್ತು ಜಾಗ ಕೊಟ್ಟು ವರ್ಷ ಎಂಟು ದಾಟಿದರೂ ನೀನು ಮನೆ ಕಟ್ಟಿಸಿಕೊಳ್ಳುವ ಯೋಚನೆಯಲ್ಲಿಯೇ ಇದ್ದ ಹಾಗಿಲ್ಲವಲ್ಲಾ? ನಿನ್ನ ಜತೆಯಲ್ಲೇ ಹಕ್ಕು ಪತ್ರ ಪಡೆದುಕೊಂಡಿದ್ದ, ಕಮಲಕ್ಕ, ಹಾಲು ಮಾರುವ ಕರ್ಮಿನ ಬಾಯಿ, ಮೀನಿನಂಗಡಿಯ ಪೊಡಿಯಬ್ಬ- ಎಲ್ಲರೂ ಮನೆ ಕಟ್ಟಿಸಿಕೊಂಡು ವರ್ಷವೆಷ್ಟಾಯಿತು ಹೇಳು? ನೀನು ಇನ್ನು ಕೂಡಾ ಇದೇ ರೀತಿ ಉದಾಸೀನ ಮಾಡಿದರೆ, ಆ ಜಾಗವನ್ನು ಬೇರೆಯವರ ಹೆಸರಿನಲ್ಲಿ ಬರೆದುಬಿಟ್ಟೇನು ಹಾಂ!” ಎಂದು ವಾರ್ನಿಂಗ್ ಕೊಟ್ಟು ಬಿಟ್ಟಾಗ ಅವಳಿಗೆ ಎಚ್ಚರವಾಗಿ, ದಿಗ್ಗನೆ ಎದ್ದು ಕುಳಿತಳು.

ಮುತ್ತುಪ್ಪಾಡಿ ಮಸೀದಿಗುಡ್ಡೆಯ ಬಲಭಾಗದ ಇಳಿಜಾರಿನಲ್ಲಿ ಐದುಸೆಂಟ್ಸ್ ಮನೆ ನಿವೇಶನದ ಹಕ್ಕು ಪತ್ರವನ್ನು, ಎಂಟು ವರ್ಷಗಳಷ್ಟು ಹಿಂದೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದಿದ್ದ ಭವ್ಯ ಸಮಾರಂಭವೊಂದರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಅಮೃತ ಹಸ್ತದಿಂದಲೇ ಸ್ವೀಕರಿಸಿದ್ದ ರೊಟ್ಟಿ ಪಾತುಮ್ಮಳನ್ನು ಮನೆ ಕಟ್ಟಿಸಿ ಕೊಳ್ಳುವಂತೆ ಒತ್ತಾಯಿಸುತ್ತಿರುವವರು ಹಲವಾರು ಮಂದಿ. ವಿಲೇಜ್ ಅಕೌಂಟೆಂಟ್ ಸೀತಾರಾಮ ಬೈಪಡಿತ್ತಾಯರಂತೂ ಒಮ್ಮೆ ಖಡಕ್ ಆಗಿಯೇ ಹೇಳಿಬಿಟ್ಟಿದ್ದರು, “ನೀನು ಡೀನೋಟೀಸು ಕೈಯಲ್ಲಿ ಉಂಟು ಅಂತ ಸುಮ್ಮನೆ ಕೂತುಬಿಟ್ರೆ, ನಾಳೆಯ ದಿನ ಮಾಂಕುವೋ, ಮಮ್ಮುಟ್ಟಿಯೋ ರಾತ್ರೋ ರಾತ್ರಿ ನಿನ್ನ ಜಾಗದಲ್ಲಿ ನಾಲ್ಕು ಕೋಲು ಊರಿ, ಆರು ಸೋಗೆ ಏರಿಸಿ, ಮೂರು ಕಲ್ಲು ಜೋಡಿಸಿ, ಒಂದು ಒಲೆ ಉರಿಸಿಬಿಟ್ರೆ ನಿನ್ನ ಡೀನೋಟೀಸನ್ನು ಅದೇ ಬೆಂಕಿಗೆ ಬಿಸಾಡಬೇಕಾಗಿ ಬರಬಹುದು. ಇನ್ನಾದ್ರೂ ನೀನು ಮನೆ ಕಟ್ಟಿಸುವ ಕೆಲಸ ಸುರು ಮಾಡದಿದ್ದರೆ ನಾನು ಡೀಸೀಗೆ ರಿಪೋರ್ಟು ಬರೆದು ಬಿಡುತ್ತೇನೆ. ಆ ಬಳಿಕ ನಿನ್ನ ಜಾಗ ಹೋಯಿತು ಅಂತ ಈ ಸೀತಾರಾಮನನ್ನು ದೂರುವುದು ಬೇಡ, ಗೊತ್ತಾಯ್ತಲ್ಲಾ?”

ಹಿಂದಾಗಲೀ ಮುಂದಾಗಲೀ ಯಾರದೇ ಬಲವಿಲ್ಲದ ನಲುವತ್ತರ ಆಸುಪಾಸಿನ ವಿಧವೆ ಪಾತುಮ್ಮ, ತನ್ನ ಬಲುದೂರದ ಸಂಬಂಧಿ ಕಾಸಿಂ ಬ್ಯಾರಿಯ ಮನೆ ಹಿಂಭಾಗದ ಅರೆವಾಸಿ ಮಾಡನ್ನು ಇಳಿಸಿ ನಿರ್ಮಿಸಲಾದ ಅಕ್ಕಿ ರೊಟ್ಟಿ ಸುಡುವ ಫ್ಯಾಕ್ಟರಿಗೆ ತಿಂಗಳೊಂದರ ಹದಿನೈದು ರೂಪಾಯಿ ಬಾಡಿಗೆ ನೀಡುತ್ತಿದ್ದಳು. ಕಳೆದ ಆರು ತಿಂಗಳಿನಿಂದ ಬಾಲ ಕಾರ್ಮಿಕನಾಗಿ ಸೇರಿಕೊಂಡ ಕಾಸಿಂ ಬ್ಯಾರಿಯ ತಂಗಿ ಸಾರಮ್ಮಳ ಮಗ ಸಮದ್‌ನಿಗೆ ವಾರವೊಂದಕ್ಕೆ ಏಳು ರೂಪಾಯಿ ಸಂಬಳ ಕೊಡುತ್ತಿದ್ದಳು. ದಿನವೊಂದರ ಐದು ಅಥವಾ ಆರು ಸೇರು ಅಕ್ಕಿಯನ್ನು ರುಬ್ಬಿ, ಮರದ ಮಣೆಯ ಮೇಲೆ ಹಾಸಿದ ತೆಳುಬಟ್ಟೆಯ ಮೇಲಿಟ್ಟು ತಟ್ಟಿ ನಿಗಿನಿಗಿ ಸುಡುವ ಕೆಂಡದ ನಡುವಿರಿಸಿ ಸುಟ್ಟು ಹೊಟೇಲುಗಳಿಗೆ ಸಂಜೆಯ ಹೊತ್ತಲ್ಲಿ ತಲುಪಿಸಿಬಿಟ್ಟರೆ ಸಿಗುವ ಸಂಪಾದನೆಯಲ್ಲಿ ಹೊಟ್ಟೆ ಬಟ್ಟೆಗೇನೂ ತೊಂದರೆಯಿಲ್ಲ. ಊರೊಳಗೆ ಮದುವೆ, ಮುಂಜಿ, ಬೀಗರ ಔತಣ ಹೀಗೆ ಏನಾದರೊಂದು ನಡೆಯುವುದಿದ್ದರೆ ಇವಳಿಗೆ ಕರೆ ಬರುತ್ತದೆ. ಈಕೆಯ ಕೈಯಲ್ಲಿ ತಟ್ಟಿಸಿಕೊಂಡು ಕೆಂಡದ ನಡುವೆ ಬೆಂದು ಉಬ್ಬುವ ರೊಟ್ಟಿಗಳು ಹೂವಿನ ಎಸಳಿನಂತೆ ಮೃದು ಮತ್ತು ಬೆಲ್ಲದ ತುಂಡಿನಂತೆ ರುಚಿ. ಆದ್ದರಿಂದಲೇ ಜನರು ಅವಳನ್ನು ಗುರುತಿಸುವುದು ‘ರೊಟ್ಟಿ ಪಾತುಮ್ಮ’ ಎಂದು; ಪದ್ಮಶ್ರೀ ಪಾತುಮ್ಮ ತರಹ.

ಹೀಗೆ ಹಲವರು ಅನುಕಂಪದಿಂದ ಕೆಲವರು ಅಸೂಯೆಯಿಂದ ಆಗಿಂದಾಗ್ಗೆ ಎಚ್ಚರಿಸುತ್ತಾ ಬರುತ್ತಿದ್ದರೂ ತಲೆ ಕೆಡಿಸಿಕೊಳ್ಳದಿದ್ದ ರೊಟ್ಟಿ ಪಾತುಮ್ಮ, ಸ್ವತಃ ದೇವರಾಜ ಅರಸು ಅವರೇ ಕನಸಿನಲ್ಲಿ ಕಾಣಿಸಿಕೊಂಡು ವಾರ್ನಿಂಗ್ ಕೊಟ್ಟ ಬಳಿಕ ಮೈ ಕೊಡವಿಕೊಂಡು ಎದ್ದಳು.
ಎದ್ದವಳೇ ‘ವಲು’ ಮಾಡಿಕೊಂಡು ಬಂದು ಮುಂಜಾನೆಯ ನಮಾಜು ಮಾಡಿದಳು. ಬಳಿಕ ಗೋಡೆಯಲ್ಲಿ ಕೊರೆದು ನಿರ್ಮಿಸಲಾಗಿದ್ದ ‘ಪೊಟರೆ ಕಪಾಟಿ’ನಿಂದ ಕುರಾನು ಗ್ರಂಥವನ್ನು ಹೊರತೆಗೆದು, ತಲೆದಿಂಬಿನ ಒಳಗೆ ಅಡಗಿಸಿಟ್ಟಿದ್ದ ಹತ್ತು ರೂಪಾಯಿಗಳ ಎರಡು ನೋಟುಗಳನ್ನು ಹೊರಗೆಳೆದು, ಕುರಾನು ಗ್ರಂಥದ ‘ಯಾಸೀನ್’ಸೂರಾ ಆರಂಭವಾಗುವ ಪುಟಗಳ ನಡುವೆ ನೋಟುಗಳನ್ನಿಟ್ಟು, ಗ್ರಂಥವನ್ನು ಮಡಚಿ ತೊಡೆಯ ಮೇಲಿರಿಸಿಕೊಂಡು ಇಡಿಯ ‘ಯಾಸೀನ್’ ಸೂರಾವನ್ನು ಕಂಠಪಾಠ ಪಠಿಸಿದಳು. ಆ ಬಳಿಕ ‘ದುವಾ’ ಮಾಡಿ ಗ್ರಂಥವನ್ನು ಬಿಡಿಸದೆಯೇ ಹಾಗೇ ಎತ್ತಿಕೊಂಡು ‘ಪೊಟರೆ ಕಪಾಟಿ’ನೊಳಗಿಟ್ಟು ತನ್ನ ಕೆಲಸ ಆರಂಭಿಸಿದಳು.

ಸಂಜೆ ಹೊಟೇಲುಗಳಿಗೆ ರೊಟ್ಟಿಗಳನ್ನು ವಿತರಿಸಿ ಮರಳುವ ದಾರಿಯಲ್ಲಿ ಏಳು ರೂಪಾಯಿ ತೆತ್ತು ಉಪ್ಪಿನಕಾಯಿ ಹಾಕಲು ಬಳಸುವಂತಹ ಪಿಂಗಾಣಿಯ ಭರಣಿಯೊಂದನ್ನು ಖರೀದಿಸಿ ತಂದಳು.

ರಾತ್ರಿಯ ಹೊತ್ತು ಪಕ್ಕದ ಮನೆಯವರೆಲ್ಲರೂ ನಿದ್ರೆ ಹೋಗಿದ್ದಾರೆಂಬುದನ್ನು ಖಾತರಿಸಿಕೊಂಡ ಬಳಿಕ, ತನ್ನ ಚಾಪೆಯ ಅಡಿಯಲ್ಲಿ ಬರುವಂತೆ ನೆಲದೊಳಗೆ ಎರಡು ಗೇಣು ಆಳ ಹಾಗೂ ಒಂದೂವರೆ ಗೇಣಿನಷ್ಟು ಅಗಲದ ಒಂದು ಗುಣಿ ತೋಡಿದಳು. ಉಪ್ಪಿನಕಾಯಿ ಭರಣಿಯನ್ನು ಗುಣಿಯೊಳಗಿರಿಸಿ ಮಟ್ಟ ನೋಡಿ ಸಮಾಧಾನ ಪಟ್ಟುಕೊಂಡ ಬಳಿಕ ಕೈ ತೊಳೆದುಕೊಂಡು, ಕುರಾನು ಗ್ರಂಥದೊಳಗಿರಿಸಿದ್ದ ಎರಡೂ ನೋಟುಗಳನ್ನು ಹೊರತೆಗೆದಳು.

ಎರಡೂ ನೋಟುಗಳನ್ನು ಕಣ್ಣಿಗೊತ್ತಿಕೊಂಡು ‘ದಯಾಮಯನಾದ ಅಲ್ಲಾಹುವೇ, ಈ ಇಪ್ಪತ್ತು ರೂಪಾಯಿಗಳು ಎರಡು ಸಾವಿರವಾಗುವಂತೆ ನನಗೆ ಪ್ರತಿವಾರವೂ ದುಡ್ಡು ಉಳಿಸಲು ಸಾಧ್ಯವಾಗುವಂತೆ ಮಾಡು’ ಎಂದು ಪ್ರಾರ್ಥಿಸಿ, ನೋಟುಗಳನ್ನು ಭರಣಿಯೊಳಕ್ಕೆ ಇಳಿಬಿಟ್ಟಳು. ಭರಣಿಯ ಮುಚ್ಚಳವನ್ನು ಮುಚ್ಚಿ, ಮುಂಜಾನೆಯೇ ಹುಡುಕಾಡಿ ತೆಗೆದು ಇರಿಸಿಕೊಂಡಿದ್ದ ತಗಡಿನ ಚೌಕವೊಂದನ್ನು ಕುಣಿಗೆ ಅಡ್ಡವಾಗಿಟ್ಟು ಚಾಪೆ ಬಿಡಿಸಿದಳು. ಆ ರಾತ್ರಿಯ ಕನಸಿನಲ್ಲಿ ಜಿನಸು ಅಂಗಡಿಯ ಅಣ್ಣುಗೌಡ ಕಟ್ಟಿಸಿದಂತಹದೇ ಆದ ಚಂದದ ಒಂದು ಮನೆ ಅವಳ ನಿವೇಶನದಲ್ಲಿ ಕಾಣಿಸಿಕೊಂಡಿತು.

ಆ ಬಳಿಕದ ಪ್ರತಿಯೊಂದು ಸೋಮವಾರವೂ ತನ್ನ ವಾರದ ಸಂಪಾದನೆಯಲ್ಲಿ ಹತ್ತೋ, ಹನ್ನೆರಡೋ ಉಳಿಸುತ್ತಾ ಉಪ್ಪಿನಕಾಯಿ ಭರಣಿ ತುಂಬತೊಡಗಿದ ರೊಟ್ಟಿ ಪಾತುಮ್ಮ, ‘ನೂರು ಸಾವಿರ ವರ್ಷವಾದರೂ ಸರಿಯೇ, ಅಲ್ಲಾಹುವಿನ ದಯೆಯಿಂದ ಸ್ವಂತಕ್ಕೊಂದು ಮನೆ ಕಟ್ಟಿಸಿಕೊಂಡೇ ಬಿಡುವುದು ’ ಎಂದು ಪ್ರಮಾಣ ಮಾಡಿದ ಬಳಿಕ, ಅಕ್ಕಿ ರೊಟ್ಟಿಯ ವ್ಯಾಸವನ್ನು ಒಂದು ಬೆರಳಿನಷ್ಟೂ, ದಪ್ಪವನ್ನು ಒಂದು ಉಗುರಿನಷ್ಟು ಕಿರಿದುಗೊಳಿಸಿದ್ದಲ್ಲದೆ, ದಿನಕ್ಕೆ ಎರಡು ಕಾಸು ಹೆಚ್ಚು ದುಡಿಯುತ್ತಾ, ಒಂದು ಮುಷ್ಟಿಯಷ್ಟು ಅನ್ನ ಕಡಿಮೆ ಉಣತೊಡಗಿದಳು.

ಈ ಎಲ್ಲ ಬದಲಾವಣೆಗಳ ಪರಿಣಾಮವಾಗಿ ಮುಂದಿನ ರಮಝಾನ್ ಹಬ್ಬದ ವೇಳೆಗೆ ಉಪ್ಪಿನಕಾಯಿ ಭರಣಿಯೊಳಗೆ ಅವಿತು ಕೂತ ನೋಟುಗಳ ಮೊತ್ತವು ಮುನ್ನೂರ ಐವತ್ತು ರೂಪಾಯಿಗಳ ಗಡಿ ದಾಟಿ ಬಿಟ್ಟು ರೊಟ್ಟಿ ಪಾತುಮ್ಮಳ ಎದೆ ನಡುಗಿಸಿಬಿಟ್ಟವು.

ಒಂದು ಮತ್ತು ಎರಡು ರೂಪಾಯಿಗಳ ಸಂಖ್ಯೆಯೇ ಐದು ಅಥವಾ ಹತ್ತು ರೂಪಾಯಿ ನೋಟುಗಳ ಸಂಖ್ಯೆಗಿಂತ ಹತ್ತಾರುಪಟ್ಟು ಹೆಚ್ಚು ಇದ್ದುದರಿಂದಾಗಿ ಭರಣಿಯ ಅರೆವಾಸಿಗಿಂತಲೂ ಹೆಚ್ಚು ಭಾಗ ಸಂಪದ್ಭರಿತವಾಗಿ ಬಿಟ್ಟಿತ್ತು. ಸಕಾಲಿಕವಾಗಿ ಹೊಳೆದ ಪ್ರಥಮ ಚಿಕಿತ್ಸೆ ಎಂಬಂತೆ, ಮೂರು ಬೇರೆ ಬೇರೆ ಅಂಗಡಿಗಳಲ್ಲಿ ಹಂಚಿ ಬದಲಾಯಿಸಿಕೊಂಡು ಪಡೆದ ನೂರು ರೂಪಾಯಿಯ ಮೂರು, ಐವತ್ತು ರೂಪಾಯಿಯ ಒಂದು ನೋಟನ್ನು ಇತರೆ ಚಿಲ್ಲರೆ ನೋಟುಗಳ ಜತೆಯಲ್ಲಿಟ್ಟು ಉರುಟಾಗಿ ಮಡಚಿ ನೂಲಿನಿಂದ ಗಂಟು ಹಾಕಿ ಭರಣಿಯೊಳಗೆ ಹಾಕಿದಾಗ, ವರುಷವೊಂದರ ಸಮಗ್ರ ಸಂಪಾದನೆಯೆಲ್ಲವೂ ಭರಣಿಯ ತಳಕ್ಕೆ ಅಂಟಿಕೊಂಡು ಸುಲಭ ಗೋಚರವಾಗದೆ ಹೋದಾಗ, ಬರಬಾರದಿದ್ದ ಭಯಾನಕ ಯೋಚನೆಗಳೆಲ್ಲವೂ ಸಾಲುಗಟ್ಟಿ ಬಂದು ಬಿಟ್ಟವು.

ಯಾರಾದರೊಬ್ಬರು ತಾನಿಲ್ಲದಾಗ ಮನೆ ನುಗ್ಗಿ ಭರಣಿಯನ್ನು ಕದ್ದೊಯ್ಯುವುದರಲ್ಲಿ ಯಾವುದೇ ಅನುಮಾನ ಉಳಿಯದಾದಾಗ, ಹೊಸ್ತಿಲು ದಾಟುವಾಗಲೆಲ್ಲ ಕಾಲುಗಳು ನಡುಗಲಾರಂಭಿಸಿದ್ದುವು. ಈ ಎಲ್ಲಕ್ಕಿಂತಲೂ ಮುಖ್ಯವಾಗಿ, ಹಗಲು ಹೊತ್ತಿನಲ್ಲಿ ಸಹಾಯಕ್ಕೆಂದು ಬರುತ್ತಿರುವ ಹುಡುಗ ಸಮದ್‌ನ ವರ್ತನೆಗಳಲ್ಲಿ ಅನುಮಾನಕ್ಕೆ ಕಾರಣವಾಗುವ ಎಲ್ಲ ಅಂಶಗಳೂ ಒಂದೊಂದಾಗಿಯೇ ಪ್ರಕಟವಾಗತೊಡಗಿದವು.

ಇಂತಹಾ ಬಿಕ್ಕಟ್ಟಿನ ಸಮಯದಲ್ಲಿ ರೊಟ್ಟಿ ಪಾತುಮ್ಮಳಿಗೆ ಹೊಳೆದ ಅದ್ಭುತ ಉಪಾಯವೇನೆಂದರೆ- ಈಗಾಗಲೇ ಉಳಿಸಲಾಗಿರುವ ಒಟ್ಟು ಸಂಪತ್ತನ್ನು ಬಂಗಾರದ ಆಭರಣವನ್ನಾಗಿ ರೂಪಾಂತರಿಸಿ ತನ್ನ ದೇಹಕ್ಕೆ ಅಂಟಿಸಿಕೊಂಡು ಬಿಡುವುದೆಂದು.

ಎರಡು

ಥೇಟ್ ಬಿ. ಸರೋಜಾದೇವಿಯ ತರಹವೇ ನಗು ಚೆಲ್ಲುತ್ತಿರುವ ‘ಪರಿಮಳ ಅಗರಬತ್ತಿ’ಯವರ ‘ಧನಲಕ್ಷ್ಮಿ’ಗೆ ಊದುಕಡ್ಡಿ ಹಚ್ಚಿ ಕೈಮುಗಿದು. ಎರಡೂ ಕೈಗಳಿಂದ ತಿಜೋರಿಯ ತಲೆ ಸವರಿ ಕಣ್ಣಿಗೊತ್ತಿಕೊಂಡು. ಕಣ್ಣು ತೆರೆದ ಶ್ರೀನಿವಾಸ ಆಚಾರ್ಯರ ಕಣ್ಣಿಗೆ ಮೊದಲು ಬಿದ್ದವಳು ರೊಟ್ಟಿ ಪಾತುಮ್ಮ.

ರೊಟ್ಟಿಪಾತುಮ್ಮ ಆಚಾರ್ಯರಿಗೆ ತೀರಾ ಅಪರಿಚಿತಳೇನೂ ಅಲ್ಲ. ಅವಳ ಎರಡೂ ಕಿವಿಗಳನ್ನು ಅಲಂಕರಿಸಿರುವ ಐದೂ ಅಲಿಖತ್‌ಗಳನ್ನು ಸುಮಾರು ಇಪ್ಪತ್ತು ವರ್ಷಗಳಷ್ಟು ಹಿಂದೆ ತಯಾರಿಸಿಕೊಟ್ಟಿದ್ದು ತಾನೆಂಬುದು ಅವರಿಗಿನ್ನೂ ನೆನಪಿದೆ. ಮರದ ಮಿಲ್ಲಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವಳ ಗಂಡ, ಮರದ ದಿಮ್ಮಿಗಳ ನಡುವೆಯೇ ಸಿಕ್ಕಿ ಹಾಕಿಕೊಂಡು ಸತ್ತು ಹೋದ ಸಂದರ್ಭದಲ್ಲಿ, ಇದೇ ಅಲಿಖತ್‌ಗಳನ್ನು ಗಿರವಿ ಇಟ್ಟು ಐವತ್ತು ರೂಪಾಯಿ ಸಾಲ ಪಡೆದುಕೊಂಡು ವಾಯಿದೆಗೆ ಮುನ್ನವೇ ಸಾಲ ತೀರಿಸಿ ಅಡವು ಬಿಡಿಸಿಕೊಂಡ ಆಕೆಯನ್ನು ಸುಲಭವಾಗಿ ಮರೆಯುವುದಾದರೂ ಹೇಗೆ?

ಮಹಾರಾಜರಾಗಿದ್ದಿರಲಿ ಅಥವಾ ಬಿಕಾರಿಯೇ ಆಗಿದ್ದಿರಲಿ ‘ಮುತ್ತುಪ್ಪಾಡಿ ಆಚಾರ್ರಕಟ್ಟೆ’ಯಲ್ಲಿ ಎಲ್ಲರಿಗೂ ಒಂದೇ ಮಣೆ. ಅಂಗಡಿಗೆ ಯಾರೇ ಬರಲಿ, ಯಾವ ಕೆಲಸವೇ ಇರಲಿ, ಜಗಲಿಯ ಬದಿಯಲ್ಲಿ ಗೋಡೆಗೊರಗಿಸಿ ಇಟ್ಟಿರುವ ಮರದ ಬೆಂಚಿನ ಮೇಲೆ ಕುಳಿತ ಬಳಿಕವೇ ಮಾತು. ಮುಸ್ಸಂಜೆಯ ಹೊತ್ತಲ್ಲಿ ದೀಪ ಉರಿಸಿದ ಬಳಿಕ ಅಂಗಡಿಗೆ ಬಂದ ಮೊದಲ ಗಿರಾಕಿ ರೊಟ್ಟಿ ಪಾತುಮ್ಮ. ‘ಕುಳಿತುಕೋ’ ಎಂದು ಬೆಂಚಿನತ್ತ ಬೆರಳು ತೋರಿಸಿದ ಆಚಾರ್ರು ಮಂಡದ ಮೇಲೆ ಆಸೀನರಾದರು. ಅವಳು ನಿಂತೇ ಇದ್ದಳು. ಆಚಾರ್ರು ತನ್ನ ಕೆಲಸದಲ್ಲಿ ಮುಳುಗಿಬಿಟ್ಟರು.

‘ಆಚಾರ್ರ ಕಟ್ಟೆ’ ಬರಿಯ ಮುತ್ತುಪ್ಪಾಡಿಯಲ್ಲಿ ಮಾತ್ರವಲ್ಲ; ಆಸುಪಾಸಿನ ಐವತ್ತು ಅರುವತ್ತು ಮೈಲು ಪಾಸಲೆಯಲ್ಲೂ ಫೇಮಸ್ಸು. ಬಂಗಾರದ ವ್ಯವಹಾರದಲ್ಲಿ ನಿಯತ್ತು ಅಂತ ಏನಾದರೂ ಉಂಟು ಅಂಥಾದರೆ ಅದಿರುವುದು ‘ಆಚಾರ್ರ ಕಟ್ಟೆ’ಯಲ್ಲಿ. ಲಾಭವಿಲ್ಲದೆ ಆಚಾರ್ರು ವ್ಯಾಪಾರ ಮಾಡುವುದಿಲ್ಲ ನಿಜ; ಮಜೂರಿ ಒಂದು ಎಂಟಾಣೆ ಜಾಸ್ತಿಯೇ ಹೇಳಿಯಾರು; ಆದರೆ ತೂಕದಲ್ಲಿ ಗುಲಗಂಜಿಯಷ್ಟೂ ಮೋಸವಿಲ್ಲ. ಚರ್ಚೆ, ಕಿರಿಕಿರಿ ಅವರಿಗಾಗುವುದಿಲ್ಲ. ಗಿರಾಕಿಗಳು ಅನಗತ್ಯ ಮಾತು ಆಡಿದರೆ ಸಾಕು, ‘ನಿಮಗೆ ನಮ್ಮ ಕಟ್ಟೆಯ ಮಾಲು ಆಗಲಿಕ್ಕಿಲ್ಲ. ಬೇರೆ ಕಟ್ಟೆ ನೋಡಿ’ ಎಂದು ಖಡಕ್ ಆಗಿಯೇ ಹೇಳಿಯಾರು. ಊರೊಳಗೆ ಮದುವೆ ಮಾತುಕತೆ ನಡುವೆ ಆಚಾರ್ರ ಕಟ್ಟೆ’ಯ ಪ್ರಸ್ತಾಪ ನುಸುಳಿ ಬರಲೇಬೇಕು. ಅಲ್ಲಿ ಒಡವೆ ಮಾಡಿಸುವ ಮಾತು ವಧುವಿನ ಅಪ್ಪನ ಬಾಯಿಯಿಂದ ಹೊರಬಿದ್ದರೆ ಸಾಕು; ಹುಡುಗಿಯ ಜಾತಕ ಕೂಡಿ ಬರುತ್ತದೆ.

ರೊಟ್ಟಿ ಪಾತುಮ್ಮ ಮೆತ್ತಗೆ ಕೆಮ್ಮಿದಳು. ಆಚಾರ್ರು ತಲೆಯೆತ್ತದೇ ಹೇಳಿದರು, “ಕುಳಿತುಕೋ.”

ಬೆಂಚಿನ ಅಂಚಿನಲ್ಲಿ ಅಳುಕುತ್ತಲೇ ಕುಂಡಿಯೂರಿದ ಅವಳು ತನ್ನ ಸೊಂಟದ ಚೀಲದಿಂದ ಹೊರತೆಗೆದ ನೋಟುಗಳ ಮಡಿಕೆಯನ್ನು, ಆಚಾರ್ರ ಎದುರಿದ್ದ ಗಾಜಿನ ಕಪಾಟಿನ ಮೇಲಿರಿಸಿ, ‘ಈ ದುಡ್ಡಿಗೆ ಏನಾದ್ರೂ ಒಂದು ಸಾಮಾನು ಕೊಡಿ’ ಎಂದಳು.

‘ಸಾಮಾನು!’ ಆಚಾರ್ರ ಹುಬ್ಬು ಮೇಲೇರಿತು. ಅವರ ನಲವತ್ತು ವರ್ಷಗಳ ಸರ್ವಿಸ್‌ನಲ್ಲಿ, ಕಟ್ಟೆಗೆ ಬಂದ ಯಾವಾತನೂ ಇಷ್ಟೊಂದು ಸದರವಾಗಿ ಮಾತನಾಡಿ ದೊಡ್ಡಸ್ತಿಕೆ ಪ್ರದರ್ಶಿಸಿದ್ದಿಲ್ಲ. ಆದರೆ ಈ ರೊಟ್ಟಿ ಮಾರುವ ಹೆಂಗಸು!

ಆಚಾರ್ರು ರೊಟ್ಟಿ ಪಾತುಮ್ಮಳನ್ನು ಅಳೆಯುವಂತೆ ದಿಟ್ಟಿಸಿದರು. ಕಪ್ಪು ಬುರ್ಕಾದೊಳಗಿನಿಂದ ಕಾಣಿಸುತ್ತಿದ್ದದ್ದು, ಕೆಂಡದ ನಡುವೆ ಸುಟ್ಟು ಕರಕಲಾಗಿದ್ದ ಕಪ್ಪು ಬೆರಳುಗಳು ಮತ್ತೆ ಅಷ್ಟೇ ಕಪ್ಪಾಗಿ ಕಾಣುವ ಕೋಲು ಮುಖ- ಎಲೆ- ಅಡಿಕೆ ಜಗಿದು ಕೆಂಪಾದ ಹಲ್ಲುಗಳು, ಯಾವುದೇ ಬಗೆಯ ಕಪಟ ಕಾಣದ ಕಣ್ಣುಗಳು. ಅಯ್ಯೋ ಪಾಪವೇ ಅನ್ನಿಸಿತು.

ಅವಳು ಎದುರು ಇರಿಸಿದ್ದ ನೋಟುಗಳನ್ನು ಎತ್ತಿಕೊಂಡು ಎಣಿಸಿದರು. ನಾಲ್ಕುನೂರ ಹತ್ತು ರೂಪಾಯಿಗಳಿದ್ದವು. ಎಡ ಭಾಗದ ಕಪಾಟಿನಿಂದ ಕಾಲಿಗೆ ತೊಡಬಹುದಾದ ಬೆಳ್ಳಿಯ “ಪೈಜಣಿಗೆ”ಯೊಂದನ್ನು ಹೊರತೆಗೆದು, ಅತ್ತಿತ್ತ ತಿರುಗಿಸಿ ಪರೀಕ್ಷಿಸಿದ ಬಳಿಕ ಅಸಮಾಧಾನಗೊಂಡವರಂತೆ ಮುಖ ಮುದುಡಿಸಿ, ಅದನ್ನು ಹಾಗೆಯೇ ಸ್ವಸ್ಥಾನ ಸೇರಿಸಿ, ‘ಮಕ್ಕಳಿಗೆ ಆಗುವ ಉಂಗುರವಾದರೆ ಬಂಗಾರದ್ದೇ ಸಿಕ್ಕೀತು’ ಎಂದವರೇ ಎಚ್ಚೆತ್ತುಕೊಂಡವರಂತೆ, ರೊಟ್ಟಿ ಪಾತುಮ್ಮಳತ್ತ ತಿರುಗಿ, ‘ಇದು ಯಾರಿಗೆ?’ ಎಂದು ಪ್ರಶ್ನಿಸಿದರು.

“ನನಗೇ” ಉತ್ತರ ಸಿದ್ಧವಿತ್ತು; “ನನಗೆ ಉಂಗುರ ಬೇಡ, ನನ್ನ ಕೈಯಲ್ಲಿ ಅದು ಕಪ್ಪಾಗುತ್ತದೆ. ಬೇರೆ ಏನಾದರೂ ಕೊಡಿ” ಎಂದಳು.
“ಒಂದು ಹತ್ತಿಪ್ಪತ್ತು ರೂಪಾಯಿ ಹೆಚ್ಚಾದರೂ ಆಗಬಹುದಲ್ಲವೇ”ಎಂದು ತನಗೆ ತಾನೇ ಪ್ರಶ್ನಿಸಿಕೊಂಡು ಅವಳ ಉತ್ತರಕ್ಕೆ ಕಾಯದೆ, ತನ್ನ ಬಲಭಾಗದಲ್ಲಿದ್ದ ತಿಜೋರಿಯ ಬಾಗಿಲು ತೆರೆದ ಆಚಾರ್ರು, ಎರಡೆಳೆಯ ಬೆಳ್ಳಿಯ ಸೊಂಟಪಟ್ಟಿಯೊಂದನ್ನು ಹೊರತೆಗೆದು ತೋರಿಸುತ್ತಾ. “ಇದು ಆಗಬಹುದಾ?” ಎಂದು ಪ್ರಶ್ನಿಸಿದರು.

ರೊಟ್ಟಿ ಪಾತುಮ್ಮಳ ಕಣ್ಣುಗಳು ಅರಳಿದವು. ಸೊಂಟ ಪಟ್ಟಿಯಾದರೆ ಅನುಕೂಲವೇ. ಸೊಂಟಕ್ಕೆ ಬಿಗಿದುಕೊಂಡು ಮೇಲ್ಗಡೆ ಸೀರೆಯಿಂದ ಕವರ್ ಮಾಡಿಕೊಂಡರೆ ಯಾರಿಗೂ ಗೊತ್ತಾಗುವುದಿಲ್ಲ. ಅಥವಾ ಕಂಡೀತು ಅಂತಲೇ ಇಟ್ಟುಕೊಳ್ಳುವ, ಕದ್ದದ್ದು ಅಲ್ವಲ್ಲಾ? ಈ ವರ್ಷ ಇದನ್ನೇ ಕೊಂಡು ಇಟ್ಟುಕೊಳ್ಳುವುದು; ಮುಂದಿನ ವರ್ಷ ಇನ್ನೇನಾದರೂ ಅಥವಾ ಆಗ ಇದನ್ನು ಇಲ್ಲಿಯೇ ವಾಪಾಸು ಕೊಟ್ಟು, ಒಟ್ಟೂ ಹಣದಿಂದ ಬಂಗಾರದ ಸರವನ್ನೇ ಕೊಂಡರಾಯಿತು, ಎಂದು ಲೆಕ್ಕಾಚಾರ ಮಾಡಿದ ಬಳಿಕ ಅನುಮಾನದಿಂದಲೇ ಪ್ರಶ್ನಿಸಿದಳು.

“ಒಂದು ವರ್ಷದ ನಂತರ ಇದನ್ನು ನಿಮಗೇ ಕೊಟ್ಟರೆ ನಾನು ಈಗ ಕೊಟ್ಟ ಹಣ ಎಲ್ಲ ವಾಪಾಸು ಸಿಗ್ತದಾ?”

‘ಅದು ಹೇಗೆ ಸಿಗುವುದು? ಇದು ಬೆಳ್ಳಿಯದಾಗಿರುವುದರಿಂದ ಪುನಃ ಮಾರಿದರೆ ಅರ್ಧಕರ್ಧ ಕಡಿಮೆ ಸಿಗುತ್ತದೆ.’ ಆಚಾರ್ರು ಸಹಜ ಸ್ವರದಲ್ಲೇ ಉತ್ತರಿಸಿದ್ದರು.

ಇದ್ದಕ್ಕಿದ್ದಂತೆ ತನ್ನ ರೂಪ ಬದಲಾಯಿಸಿಕೊಂಡ ಬೆಳ್ಳಿಯ ಸೊಂಟಪಟ್ಟಿ, ರೊಟ್ಟಿ ಪಾತುಮ್ಮಳನ್ನು ನುಂಗಲು ಸಿದ್ಧವಾಗಿ ನಿಂತ ಹೆಬ್ಬಾವಿನಂತೆ ಕಾಣಿಸಿತು.

“ಹಾಗಾದರೆ ಇದು ಬೇಡ. ವಾಪಾಸು ಮಾಡುವಾಗ ಹೆಚ್ಚು ನಷ್ಟವಾಗದಂತಹ ಬೇರೇನಾದರೂ ಸಾಮಾನು ಕೊಡಿ” ಎಂದಳು.

“ಯಾಕೆ? ಮುಂದಿನ ವರ್ಷ ಮಾರಲಿಕ್ಕಾ? ಆಚಾರ್ರ ಪ್ರಶ್ನೆಯಲ್ಲಿ ತೆಳ್ಳನೆಯ ವ್ಯಂಗ್ಯ ಬೆರೆತಿತ್ತು. ರೊಟ್ಟಿ ಪಾತುಮ್ಮಳ ಮುಖ ಬಾಡಿಹೋಯಿತು. ಆಚಾರ್ರಿಗೆ ನುಂಗಲೂ ಆಗದ ಉಗುಳಲೂ ಆಗದ ಸಂಕಟ. ದೀಪ ಉರಿಸಿದ ಬಳಿಕ ಬಂದಿರುವ ಮೊದಲ ಗಿರಾಕಿ . ರೂಪಾಯಿ ನೋಟುಗಳನ್ನು ಎಣಿಸಿ ಆಗಿದೆ; ಲಕ್ಷ್ಮಿಯನ್ನು ಮರಳಿಸಬಾರದು.

“ನೋಡು ಇವಳೇ. ಯಾವುದನ್ನು ನೀನು ಖರೀದಿಸಿದರೂ, ಅದನ್ನು ನಾಳೆಯ ದಿನವೇ ಮಾರುವುದಾದರೂ ನೀನು ಖರೀದಿಸಿದ ರೇಟು ಸಿಗುವುದಿಲ್ಲ. ಮಜೂರಿ, ತ್ಯಾಮಾನ ಅಂತ ನಷ್ಟ ಆಗಿಯೇ ತೀರುತ್ತದೆ. ಕೊಟ್ಟಿರುವ ದುಡ್ಡೆಲ್ಲ ವಾಪಾಸು ಬೇಕೂಂತ ಆದ್ರೆ ಈ ಹಣವನ್ನು ಒಂದು ಕರಡಿಗೆಯೊಳಗೆ ಹಾಕಿಟ್ಟು ಇಂತಹ ತಿಜೋರಿಯಲ್ಲಿಡಬೇಕಾದೀತು ಅಷ್ಟೇ...” ಎನ್ನುತ್ತಾ ತನ್ನ ಬಲಗಡೆಯಲ್ಲಿದ್ದ ತಿಜೋರಿಯತ್ತ ಬೊಟ್ಟು ಮಾಡಿ ನಕ್ಕರು ಆಚಾರ್ರು.

ರೊಟ್ಟಿ ಪಾತುಮ್ಮಳ ಕಣ್ಣುಗಳು ಒಮ್ಮೆಲೆ ಅರಳಿದವು. ತನ್ನ ಸಮಸ್ಯೆಗಳನ್ನೆಲ್ಲಾ ಪರಿಹರಿಸಬಲ್ಲ ತಿಜೋರಿಯತ್ತ ಆಸೆಯ ನೋಟ ಹರಿಸುತ್ತಾ ಹೇಳಿದಳು. “ನೀವು ಹಾಗೆಯೇ ಮಾಡಿರಿ. ಆ ಹಣವನ್ನು ಅದರೊಳಗೆ ಇಟ್ಟುಕೊಳ್ಳಿರಿ. ನನಗೇನೂ ಸಾಮಾನು ಈಗ ಬೇಡ. ಬೇಕಾದಾಗ ಬಂದು ಕೇಳುತ್ತೇನೆ. ಆಗ ಹಣವನ್ನೇ ವಾಪಾಸು ಕೊಟ್ಟರೆ ಸಾಕು” ಎಂದುಬಿಟ್ಟಳು.

“ಓಹೋ ಇದಾ ಸಂಗತಿ?!” ಆಚಾರ್ರು ನಿಟ್ಟುಸಿರು ಬಿಟ್ಟರು. ಎಲ್ಲವನ್ನೂ ಗ್ರಹಿಸಿಕೊಂಡವರಂತೆ ತಲೆಯಾಡಿಸಿದರು. ಊರೊಳಗಿನ ಯಾರಾದರೊಬ್ಬರು ಕೆಲವೊಮ್ಮೆ ಹೀಗೆ ದುಡ್ಡು ತಂದುಕೊಟ್ಟು ತಿಜೋರಿಯಲ್ಲಿ ಭದ್ರವಾಗಿಡಲು ಹೇಳುತ್ತಿರುವುದು ಹೊಸತೇನೂ ಅಲ್ಲ.

ಆದರೆ, ದೇವರಾಜ ಅರಸರು ಹಕ್ಕುಪತ್ರ ನೀಡಲಾಗಾಯ್ತು ಸಮದ್‌ನ ಅನುಮಾನಾಸ್ಪದ ನಡವಳಿಕೆಯವರೆಗಿನ ಎಲ್ಲ ಕತೆಯನ್ನು ರೊಟ್ಟಿಪಾತುಮ್ಮ ವಿವರಿಸಿದ ಬಳಿಕ ಆಚಾರ್ರು ಕೈಯ್ಯಾಡಿಸಿಬಿಟ್ಟರು.

“ಅದೆಲ್ಲ ಆಗಲಿಕ್ಕಿಲ್ಲ ಇವಳೇ. ಹಾಗೆಲ್ಲ ಬೇರೆಯವರ ಹಣವನ್ನು ವರ್ಷಗಟ್ಟಲೆ ಇಟ್ಟುಕೊಳ್ಳುವುದಕ್ಕೆ ಈಗೆಲ್ಲ ಅವಕಾಶವಿಲ್ಲ. ಅದಕ್ಕೆಲ್ಲ ಬೇರೆಯೇ ಲೈಸನ್ಸ್ ಬೇಕು ಅಂತ ಕಾನೂನು ಬಂದಿದೆ. ಈಗ ಇಂಥದಕ್ಕೆಲ್ಲ ಬ್ಯಾಂಕು ಉಂಟಲ್ಲ ಅಲ್ಲಿ ಹೋಗಿ ನಿನ್ನ ಹೆಸರಿನಲ್ಲಿ ಪಾಸುಪುಸ್ತಕ ತೆಗೆದುಕೊಳ್ಳು. ನಿನ್ನ ಹಣಕ್ಕವರು ಬಡ್ಡಿ ಕೂಡಾ ಕೊಡುತ್ತಾರೆ” ಎಂದರು.

ರೊಟ್ಟಿ ಪಾತುಮ್ಮ ಅದಷ್ಟರಲ್ಲೇ ತೀರ್ಮಾನ ತೆಗೆದುಕೊಂಡು ಆಗಿತ್ತು. ತನ್ನ ನಿರ್ಧಾರವನ್ನು ಆಚಾರ್ರಿಗೆ ಖಡಕ್ ಆಗಿಯೇ ಹೇಳಿಬಿಟ್ಟಳು. ತನಗೆ ತನ್ನ ಜಾತಿ ಬಾಂಧವರಿಗಿಂತಲೂ ಆಚಾರ್ರಕಟ್ಟೆಯ ತಿಜೋರಿಯ ಬಗ್ಗೆಯೇ ಹೆಚ್ಚು ವಿಶ್ವಾಸ ಎಂಬುದನ್ನು ಮತ್ತೆ ಮತ್ತೆ ಹೇಳುತ್ತಾ, ವಿಧವೆಯೂ ಆಗಿರುವ ತನಗೆ ತಂದೆಯ ಸ್ಥಾನದಲ್ಲಿ ನಿಂತು ಸಹಾಯ ಮಾಡಬೇಕಾಗಿರುವುದು ಆಚಾರ್ರ ಕರ್ತವ್ಯ ಎಂಬಿತ್ಯಾದಿ ಅರ್ಥ ಬರುವ ಎಲ್ಲ ಮಾತುಗಳನ್ನೂ ಚಟಪಟನೆ ಉದುರಿಸಿ, ಆಚಾರ್ರ ಬಾಯಿ ಕಟ್ಟಿ ಬಿಟ್ಟಳು.

“ಆಯಿತು ಇವಳೇ. ನನ್ನಿಂದಾಗಿ ನಿನಗೆ ಸಹಾಯವಾಗುವುದು ಅಂತ ಆದ್ರೆ ನಿನ್ನ ಈ ಹಣವನ್ನು ಇಟ್ಟುಕೊಳ್ಳುವುದಕ್ಕೆ ನನ್ನ ಅಡ್ಡಿ ಇಲ್ಲ.” ಎಂದು ನೋಟುಗಳನ್ನು ಮತ್ತೊಮ್ಮೆ ಎಣಿಸಿ ತಿಜೋರಿಯ ಒಳಗಿಟ್ಟು ತನ್ನ ಸ್ವಂತ ಖಾತೆ ಪುಸ್ತಕದಲ್ಲಿ ಬರೆದುಕೊಂಡರು.

ಹೀಗೆ ತನ್ನ ಚಿಂತೆಗಳ ಕಂತೆಯನ್ನು ‘ಆಚಾರ್ರ ಕಟ್ಟೆ’ಯ ತಿಜೋರಿಯೊಳಗೆ ಹುದುಗಿಸಿಟ್ಟು ಸಮಾಧಾನದಿಂದ ಮರಳಿದ ರೊಟ್ಟಿಪಾತುಮ್ಮ ಮುಂದಿನ ಸೋಮವಾರ ಸಂಜೆ ಹೊತ್ತಲ್ಲಿ ಪುನಃ ಹತ್ತು ರೂಪಾಯಿಯ ನೋಟೊಂದನ್ನು ತಂದು ‘ಇದನ್ನೂ ಅದರ ಜತೆಗಿಡಿ’ ಎಂದಾಗ ಆಚಾರ್ರ ಹುಬ್ಬು ಮೇಲೆ ಹೋದರೂ, ‘ಇದು ಒಳ್ಳೆಯ ಪಿಕಲಾಟ’ವೆಂಬುದನ್ನು ತನಗೆ ತಾನೇ ಹೇಳಿಕೊಂಡು ಸುಮ್ಮನಾದರು.

ಆನಂತರದ್ದು ಎಲ್ಲ ಮಾಮೂಲು. ಪ್ರತಿ ಸೋಮವಾರ ಸಂಜೆಯೂ ರೊಟ್ಟಿ ಪಾತುಮ್ಮ ಆಚಾರ್ರಕಟ್ಟೆಯ ಜಗಲಿಯೇರಿ ಬಂದು ಮೃದುವಾಗಿ ಕೆಮ್ಮುತ್ತಾಳೆ. ಆಚಾರ್ರು ಇದ್ದರೆ ಆಚಾರ್ರು, ಇಲ್ಲದೇ ಹೋದರೆ ಹಿರಿಮಗ ಕೇಶವ, ಅವನೂ ಬಿಜಿಯಾಗಿದ್ದರೆ ಕಿರಿಮಗ ಚಂದ್ರಣ್ಣ, ಎದ್ದು ಬಂದು ಅವಳು ನೀಡುವ ಹತ್ತೋ, ಹದಿನೈದೋ ರೂಪಾಯಿಗಳನ್ನು ತೆಗೆದುಕೊಂಡು, ಖಾಸಗಿ ಖಾತೆಪುಸ್ತಕದಲ್ಲಿ ದಾಖಲಿಸಿಡುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿತು.

ಕೆಲವೊಂದು ಸಾರಿ, ಅಂಗಡಿಯಲ್ಲಿ ಬೇರೆ ಯಾರೂ ಗಿರಾಕಿಗಳಿಲ್ಲದಿದ್ದರೆ ಆಚಾರ್ರು ಪ್ರಶ್ನಿಸುವುದುಂಟು, ‘ಹೌದಾ ಹೆಂಗಸೇ. ಕಳೆದ ಎರಡು ಎರಡೂವರೆ ವರ್ಷದ ಲಾಗಾಯ್ತು ಹಣ ತಂದು ಕೊಡ್ತಾ ಇದ್ದೀಯಲ್ಲಾ? ಒಮ್ಮೆಯಾದರೂ ಒಟ್ಟು ಹಣ ಎಷ್ಟಾಗಿದೆ ಅಂತ ಕೇಳಲೇ ಇಲ್ವಲ್ಲಾ? ಈವತ್ತು ಮಾತ್ರ ನಾನು ನಿನಗೆ ಪೂರ್ತಿ ಲೆಖ್ಖ ಒಪ್ಪಿಸುವವನೇ.ನಾಳೆ ಈ ಮುದುಕ ಗೋವಿಂದ ಆಗಿಬಿಟ್ರೆ ನಿನ್ನ ದುಡ್ಡು ಕೂಡಾ ಗೋವಿಂದಾ ಆಗಬಾರದಲ್ವಾ?’

ರೊಟ್ಟಿ ಪಾತುಮ್ಮಳ ನಾಲಗೆಯ ತುದಿಯಿಂದಲೇ ಉತ್ತರ ಜಿಗಿದು ಬಿಡುತ್ತಿತ್ತು, “ನಾನು, ನನ್ನದು ಅಂತ ಒಂದು ಮನೆ ಕಟ್ಟಿಸಿಕೊಳ್ಳುವ ತನಕ ನಿಮ್ಮ ಆಯುಷ್ಯದ ಸುದ್ದಿಗೆ ಯಾವ ದೇವರೂ ಬರುವುದಿಲ್ಲ. ಅದಕ್ಕೇ ಅಲ್ವಾ? ನಾನು ದುಡ್ಡನ್ನು ಇಲ್ಲಿಗೆ ತರುವ ಮೊದಲು ಕುರಾನು ಪುಸ್ತಕದ ಒಳಗೆ ಇರಿಸಿ ‘ದುವಾ’ ಮಾಡಿಯೇ ತರುವುದು?”

ಮುಂದೆ ‘ಆಚಾರ್ರ ಕಟ್ಟೆ’ ತನ್ನ ರೂಪವನ್ನು ಬದಲಾಯಿಸಿಕೊಂಡು ‘ಶ್ರೀನಿವಾಸ ಆಂಡ್ ಸನ್ಸ್’ ಆದ ಬಳಿಕವೂ ರೊಟ್ಟಿ ಪಾತುಮ್ಮಳ ಸೋಮವಾರದ ದಿನಚರಿ ಬದಲಾಗಲಿಲ್ಲ.

ಹಿರಿಮಗ ಕೇಶವಾಚಾರ್ಯ ತಂದೆಯಂತೆಯೇ ಕುಶಲ ಕೆಲಸಗಾರ. ಕರಿಮಣಿ ಬಳೆ ಡಿಸೈನ್‌ನಲ್ಲಿ ಈಗಾಗಲೇ ಹೆಸರು ಮಾಡಿದವನು. ಆದರೆ ಕಿರಿಯಾತ ಚಂದ್ರಣ್ಣನ ಬೆರಳುಗಳಿಗಿಂತಲೂ ನಾಲಿಗೆಯೇ ಹೆಚ್ಚು ಚುರುಕು. ಆದ್ದರಿಂದಲೇ ಪಿ.ಯು.ಸಿ. ಪರೀಕ್ಷೆ ಬರೆದು ಬಂದ ಸಂಜೆಯೇ ಅಂಗಡಿಯಲ್ಲಿ ಕುಳಿತುಕೊಳ್ಳಲಾರಂಭಿಸಿದವನು ತನ್ನ ನಾಲಗೆ ಮತ್ತು ನಗುವಿನಿಂದಾಗಿ ವರ್ಷದೊಳಗೆ ಊರವರಿಗೆಲ್ಲ ಚಂದ್ರಣ್ಣ ಆಗಿಬಿಟ್ಟಿದ್ದ.

ಮುಂದಿನ ಅಂಗಡಿ ಪೂಜೆಯ ಹೊತ್ತಿಗೆ ಅಂಗಡಿಯ ಶೇಪು ಬದಲಾಯಿಸಿದ ಚಂದ್ರಣ್ಣ, ಅಂಗಡಿಯ ನೆತ್ತಿಗೆ “ಶ್ರೀನಿವಾಸ ಆಂಡ್ ಸನ್ಸ್ ಜ್ಯುವೆಲ್ಲರ‍್ಸ್” ಎಂಬ ಬೋರ್ಡು ತೂಗಹಾಕಿದ್ದ. ಅಪ್ಪನ ಕಾಲದಲ್ಲಿ ಐವತ್ತು ಮೈಲು ಹೆಸರು ಮಾಡಿದ್ದ ‘ಆಚಾರ್ರಕಟ್ಟೆ’ ಇದೀಗ ಕೊಯಂಬತ್ತೂರು ತನಕ ಸುದ್ದಿ ಮಾಡತೊಡಗಿತ್ತು. ಪರಿಣಾಮವೆಂಬಂತೆ ಅಣ್ಣ ಕೇಶವನಿಗೆ ಕೊಯಂಬತ್ತೂರಿನ ಪ್ರಸಿದ್ಧ ಗೋಲ್ಡ್‌ಸ್ಮಿತ್ ಫ್ಯಾಮಿಲಿಯಿಂದಲೇ ಹೆಣ್ಣು ಬಂತು. ಒಟ್ಟಿನಲ್ಲಿ ಆಚಾರ್ರ ಕಟ್ಟೆಯಲ್ಲೀಗ ಶ್ರೀನಿವಾಸ ಆಚಾರ್ರಿಗೆ ಕೆಲಸವಿಲ್ಲ. ದಿನಕ್ಕೊಂದೆರಡು ತಾಸು ಶುಭ್ರ ಬಟ್ಟೆ ಧರಿಸಿ ಅಂಗಡಿಯ ಮಂಡದ ಮೇಲೆ ಕುಳಿತು ‘ಜ್ಯುವೆಲ್ಲರ್ ಶಾಪ್’ಗೆ ಶೋಭೆ ತಂದರೆ ಸಾಕು.

ಶ್ರೀನಿವಾಸಾಚಾರ್ರು ವಿಧವೆಯೊಬ್ಬಳಿಗೆ ಸಹಾಯ ಮಾಡುವ ದೃಷ್ಟಿಯಿಂದ ರೊಟ್ಟಿ ಪಾತುಮ್ಮಳ ಅನಧಿಕೃತ ಬ್ಯಾಂಕ್ ಆಗಲು ಸಮ್ಮತಿಸಿದ್ದರೆ, ನೂರಕ್ಕೆ ನೂರರಷ್ಟು ವ್ಯಾಪಾರಿ ಚಂದ್ರಣ್ಣ ‘ಬಡ್ಡಿಯಿಲ್ಲದೆ ಬರುವ ಪ್ರತಿಯೊಂದು ರೂಪಾಯಿಯೂ ಅತ್ಯಂತ ಬೆಲೆಯುಳ್ಳದ್ದು’ ಎಂಬ ವ್ಯವಹಾರೀ ಸೂತ್ರಕ್ಕೆ ಅಂಟಿಕೊಂಡು, ಅವಳನ್ನು ಓರ್ವ ಗೌರವಾನ್ವಿತ ಗಿರಾಕಿಯಂತೆಯೇ ಸ್ವಾಗತಿಸುತ್ತಿದ್ದ. ಅವಳು ಹಣ ನೀಡಲು ಬಂದಾಗಲೆಲ್ಲ, “ಏನು ಈವತ್ತು ತಡವಾಯಿತಲ್ಲ” ಎಂದೋ ಅಥವಾ “ನಿಮಗೆ ದುಡ್ಡು ಯಾವಾಗ ಬೇಕಾದರೂ ಹೇಳಿ ಬಿಡಿ. ಲೆಖ್ಖ ಮಾಡಿಕೊಟ್ಟು ಬಿಡ್ತೇನೆ. ಯಾವುದೇ ಚಿಂತೆ ಬೇಡ. ಒಂದು ದಿನ ಮೊದಲೇ ತಿಳಿಸಿದರೆ ಹೆಚ್ಚು ಅನುಕೂಲ” ಎಂದೇನಾದರೂ ಮಾತು ಆಡಿಯೇ ಬೀಳ್ಕೊಡುತ್ತಿದ್ದ. ಅಂತೆಯೇ ಆಕೆ ನೀಡುತ್ತಿರುವ ರೂಪಾಯಿಗಳನ್ನು ಲೆಖ್ಖ ಮಾಡಿ ಅವಳ ಹೆಸರಿನ ಮುಂದೆ ಖಾತೆ ಬರೆಯುತ್ತಿದ್ದ.

ರೊಟ್ಟಿ ಪಾತುಮ್ಮಳೂ ಅಷ್ಟೇ; ಪ್ರತಿ ಸೋಮವಾರ ಸಂಜೆ, ಹಿಂದಿನ ವಾರದ ಗಳಿಕೆಯಲ್ಲಿ ಉಳಿಸಲು ಸಾಧ್ಯವಾದ ರೂಪಾಯಿಗಳನ್ನು ತಂದು ಆಚಾರ್ರ ಕಟ್ಟೆಯಲ್ಲಿ ಕೊಟ್ಟು ನಿಶ್ಚಿಂತೆಯಿಂದ ಮರಳುತ್ತಿದ್ದಳಲ್ಲದೆ ಒಂದು ಸಲವಾದರೂ, ತನ್ನ ಉಳಿತಾಯದ ಮೊತ್ತ ಎಷ್ಟಾಗಿರಬಹುದೆಂದು ಕುತೂಹಲ ಕೂಡಾ ವ್ಯಕ್ತಪಡಿಸಿದವಳಲ್ಲ.

ಮೂರು

ಶ್ರೀರಾಮಚಂದ್ರನ ಮೇಲೆ ಆಣೆ ಹಾಕಿ ಹೇಳಬಹುದು; ಚಂದ್ರಣ್ಣ ಹಟ ಹಿಡಿದು ಕರಸೇವೆಗೆಂದು ಅಯೋಧ್ಯೆಗೆ ಹೋದವನಲ್ಲ. ರಾಮದಾಸ ಕಿಣಿಯವರು ಪ್ರಸ್ತಾಪಿಸಿದ್ದಾಗ, “ನನಗೆ ಅಂಥದಕ್ಕೆಲ್ಲ ಪುರುಸೊತ್ತು ಇಲ್ಲ ಮಾರಾಯ್ರೆ” ಎಂದು ನಯವಾಗಿಯೇ ನಿರಾಕರಿಸಿದ್ದನು. ಅಪ್ಪ ಶ್ರೀನಿವಾಸ ಆಚಾರ್ರಂತೂ ಖಂಡ ತುಂಡವಾಗಿಯೇ ಹೇಳಿಬಿಟ್ಟಿದ್ದರು, “ನೋಡು ಚಂದ್ರು. ಇದೆಲ್ಲ ನಮ್ಮಂಥ ವ್ಯಾಪಾರಸ್ಥರಿಗೆ ಹೇಳಿಸಿದ್ದಲ್ಲ. ನಮಗೆ ನಮ್ಮ ವ್ಯಾಪಾರದಲ್ಲಿ ಅವರು, ಇವರು ಅಂತ ವ್ಯತ್ಯಾಸ ಇರುವುದಿಲ್ಲ. ಇರಬಾರದು. ನಿಜ ಹೇಳಬೇಕೂಂತ ಆದ್ರೆ ನಮ್ಮ ಅಂಗಡಿಗೆ ನಾಲ್ಕು ಆಣೆ ಹೆಚ್ಚು ಫಾಯಿದೆ ಆಗುವುದು ಅವರ ಮನೆಯ ಹೆಂಗಸರಿಂದಲೇ. ನೀನು ಕೂಡಾ ಇಂಥದ್ದರಲ್ಲಿ ಇದ್ದಿ ಅಂತ ಅವರಿಗೆ ಗೊತ್ತಾಗಿ ಬಿಟ್ರೆ ನಷ್ಟ ಯಾರಿಗೆ ಹೇಳು?”

ಆದರೆ ದೈವೇಚ್ಛೆ ಬೇರೆಯೇ ಇದ್ದಿತ್ತು. ಮುತ್ತುಪ್ಪಾಡಿಯಿಂದ ಆಯ್ಕೆಯಾಗಿದ್ದ ಮೂರು ಮಂದಿಯ ತಂಡ ಹೊರಡಲು ಇನ್ನೇನು ನಾಲ್ಕು ದಿನ ಇದೆ ಎಂದಾದಾಗ, ತಂಡದ ಸದಸ್ಯರಲ್ಲೊಬ್ಬ ಕೈಕೊಟ್ಟುಬಿಟ್ಟ. ಬಿ.ಕಾಂ. ಸೆಕೆಂಡ್ ಕ್ಲಾಸ್ ಪಾಸಾಗಿಯೂ ಎರಡು- ಎರಡೂವರೆ ವರ್ಷದಿಂದ, ಭಗವತೀ ಕಲ್ಯಾಣ ಮಂಟಪದ ಮೆನೇಜರ್ ಅಂತ ಮುನ್ನೂರ ಐವತ್ತು ರೂಪಾಯಿಗಳಲ್ಲಿ ಮೆನೇಜ್ ಮಾಡಿಕೊಳ್ಳುತ್ತಿದ್ದ ಅನ್ ಅಂಪ್ಲಾಯಿಡ್ ಗ್ರಾಜುವೆಟ್ ಆರ್. ಸದಾಶಿವನಿಗೆ ಸಾಕ್ಷಾತ್ ಭಗವತಿಯೇ ಅನುಗ್ರಹಿಸಿದಂತೆ ಮಸ್ಕತ್‌ನಿಂದ ಹದಿನೆಂಟು ಸಾವಿರ ಸಂಬಳದ ಕರೆ ಬಂದಾಗ ನಿರಾಕರಿಸುವುದಾದರೂ ಹೇಗೆ? ಮಸ್ಕತ್‌ನ ‘ಅಲ್ ಮುಸ್ತಫಾ ಹೈಟೆಕ್ ನರ‍್ಸಿಂಗ್ ಹೋಂ’ನ ಜ್ಯೂನಿಯರ್ ಅಕೌಂಟೆಂಟ್ ಆಗಿ ನೇಮಕಗೊಂಡ ಬಗೆಗಿನ ಅಫಿಶಿಯಲ್ ಡಾಕ್ಯುಮೆಂಟಿನ ನೆರಳಚ್ಚು ಪ್ರತಿ ಹಾಗೂ ಒರಿಜಿನಲ್ ಸಾ ಸಹಿತ, ಕಾಸರಗೋಡಿನಿಂದ ಮುತ್ತುಪ್ಪಾಡಿವರೆಗೆ ಟ್ಯಾಕ್ಸಿ ಮಾಡಿಕೊಂಡೇ ಬಂದಿದ್ದ ‘ಮುಬಾರಕ್ ಟೂರ್ ಆಂಡ್ ಟ್ರಾವೆಲ್ಸ್’ನ ಕಾಸಿಂ ಬಾವಾ, ತಾನು ಸದಾಶಿವನಿಂದ ಪಡೆದಿದ್ದ ಮುಂಗಡ ನಲುವತ್ತೆರಡು ಸಾವಿರ ರೂಪಾಯಿಗಳಿಗೆ ನ್ಯಾಯವೊದಗಿಸಿದ್ದಲ್ಲದೆ, ಇನ್ನೂ ಆರು ದಿನಗಳ ಒಳಗೆ ಆರು ಸಾವಿರ ರೂಪಾಯಿಗಳ ಕಮೀಷನ್ ಹಣ ತೆತ್ತು, ಬೊಂಬಾಯಿ ತಲುಪಿ ‘ಮೆಡಿಕಲ್’ ಮುಗಿಸಿಕೊಂಡು ಮತ್ತೆರಡು ದಿನಗಳೊಳಗೇ ವಿಮಾನ ಏರಬೇಕು; ತಪ್ಪಿದಲ್ಲಿ ಕೊಟ್ಟಿರುವ ಮುಂಗಡಕ್ಕೆ ಕಾಸಿಂ ಜವಾಬ್ದಾರನಲ್ಲ ಎಂದು ಎಚ್ಚರಿಕೆ ನೀಡಿಯೇ ಹೋಗಿದ್ದ.

ರಾಮದಾಸ ಕಿಣಿಯವರ ತಲೆ ಹನ್ನೆರಡಾಣೆಯಾಗಿತ್ತು. ನುಂಗಲೂ ಅಲ್ಲ,ಉಗುಳಲೂ ಅಲ್ಲ. ಮೂರು ಮಂದಿಯ ಲಿಸ್ಟ್ ಕಳಿಸಿ ಆಗಿದೆ. ಯಾರ‍್ಯಾರು ಹೇಗ್ಹೇಗೆ ಅಂತ ಡಿಟ್ಟೇಲ್ಡ್ ರಿಪೋರ್ಟ್ ರವಾನಿಸಿ ಆಗಿದೆ. ಈಗ ಲಾಸ್ಟ್ ಮಿನಿಟ್‌ನಲ್ಲಿ ಮುತ್ತುಪ್ಪಾಡಿಯಿಂದ ಮೂರಿಲ್ಲ, ಬರೀ ಎರಡು ಅಂತ ಯಾವ ಮುಖದಲ್ಲಿ ಹೇಳುವುದು? ತನ್ನ ಆರ‍್ಗನೈಸಿಂಗ್ ಕೆಪೇಸಿಟಿಗೇ ಇದೊಂದು ಬ್ಲಾಕ್‌ಸ್ಪಾಟು. ಏನು ಮಾಡುವುದು?

ಚಂದ್ರಣ್ಣನಿಗೆ ಮತ್ತೊಮ್ಮೆ ಬುಲಾವು ಬಂತು. ಭಗವತೀ ಕಲ್ಯಾಣ ಮಂಟಪದ ಆಫಿಸು ಕೋಣೆಯಲ್ಲಿ-ಮೆನೇಜರನ ಅನುಪಸ್ಥಿತಿಯಲ್ಲಿ-ರಾತ್ರಿ ಒಂದೂವರೆ ತನಕವೂ ಚಂದ್ರಣ್ಣನಿಗೆ ತಿಳಿಯ ಹೇಳಲಾಯಿತು. ಇಂತಹ ಗಂಡಾಂತರದ ಸಂದರ್ಭಗಳಲ್ಲಿ ಊರಿನ ಘನತೆ- ಗೌರವಗಳನ್ನು ಕಾಪಾಡುವುದು ಚಂದ್ರಣ್ಣನಂತಹ ಬಿಸಿ ರಕ್ತದ ಹುಡುಗರ ಪರಮ ಕರ್ತವ್ಯ ಎಂಬುದನ್ನು ಮನದಟ್ಟು ಮಾಡಲಾಯಿತು. ಸ್ವತಃ ತನ್ನ ಆರನೇ ಮಗ ಪಿ.ಯು.ಸಿ. ಸೆಕೆಂಡ್ ಇಯರ್‌ನ ಕ್ರುಶಿಯಲ್ ಸ್ಟೇಜ್‌ನಲ್ಲಿ ಇದ್ದಿಲ್ಲವಾಗಿರುತ್ತಿದ್ದಲ್ಲಿ ತಾನು ಯಾರಿಗೂ ದಮ್ಮಯ್ಯ ಹಾಕುತ್ತಿರಲಿಲ್ಲ ಎಂಬುದನ್ನು ಪದೇ ಪದೇ ಒತ್ತಿ ಹೇಳಿದ ರಾಮದಾಸ ಕಿಣಿಯವರು, ಶ್ರೀನಿವಾಸ ಆಚಾರ್ರಲ್ಲಿ ಮಾತನಾಡಿ ಒಪ್ಪಿಗೆ ಪಡೆಯುವ ಹೊಣೆಯನ್ನು ದೇವಸ್ಥಾನದ ಅರ್ಚಕ ಸುಬ್ರಾಯ ತಂತ್ರಿಯವರಿಗೆ ಒಪ್ಪಿಸಿದ ಬಳಿಕ ಚಂದ್ರಣ್ಣನಿಗೆ ಹೇಳುವುದೇನೂ ಉಳಿದಿರಲಿಲ್ಲ.

ಚಂದ್ರಣ್ಣ ಹೊರಡುವ ದಿನ ಅಪ್ಪ ಏನನ್ನೂ ಹೇಳಲಿಲ್ಲ. ಸಂಜೆ ಹೊರಡುವ ಮುನ್ನ ಚಂದ್ರಣ್ಣನನ್ನು ಗುಟ್ಟಾಗಿ ಕರೆದು ಮಾತನಾಡಿಸಿದ್ದ ಅತ್ತಿಗೆ, ಒಂದು ಸಾವಿರ ರೂಪಾಯಿ ಎಣಿಸಿ ಕೊಟ್ಟು, ‘ಹೇಗೋ ನೀವೆಲ್ಲ ಮೊದಲು ಕಾಶಿಗೆ ಹೋಗುತ್ತೀರಂತೆ. ಅಲ್ಲಿ ಬೆನಾರಸ್ ಸಾರಿಗಳು ತುಂಬಾ ಚೀಪಲ್ಲಿ ಸಿಗುತ್ತದೆ, ಎರಡು ಅಥವಾ ಮೂರು ಸೀರೆ ತಂದು ಬಿಡು ಆಯ್ತಾ?’ ಎಂದು ಬೀಳ್ಕೊಟ್ಟರು.

ಮುತ್ತುಪ್ಪಾಡಿಯ ತಂಡ ಮಂಗಳೂರು ರೈಲು ನಿಲ್ದಾಣ ತಲುಪಿದಾಗ ಅಲ್ಲಿ ಶಿವಮೊಗ್ಗದಿಂದ ಬಂದಿದ್ದ ಏಳು ಜನರ ತಂಡ ಜತೆಯಾಯಿತು. ಇವರೆಲ್ಲರನ್ನೂ ರೈಲು ಹತ್ತಿಸಿದ ರಾಮದಾಸ ಕಿಣಿಯವರು ಧನ್ಯಭಾವದಿಂದ ಊರಿಗೆ ಮರಳಿ ತನ್ನ ಅಂಗಡಿಯೆದುರು ‘ಕ್ರಿಸ್‌ಮಸ್ ಇಳಿತದ ಮಾರಾಟ’ ಎಂಬ ಬೋರ್ಡ್ ಪ್ರದರ್ಶಿಸಿ, ಜವುಳಿ ವ್ಯಾಪಾರದಲ್ಲಿ ಮುಳುಗಿಬಿಟ್ಟರು.

ಬಳಸು ದಾರಿಯಿಂದ ರೈಲು ಬದಲಿಸುತ್ತಾ ಕಾಶಿ ತಲುಪುವಾಗ ಆರು ದಿನಗಳು ಸತ್ತವು. ಮುಂದಿನ ಆರು ದಿನ ಹೆಡ್‌ಕ್ವಾರ್ಟರ್‌ನ ಆದೇಶ ನಿರೀಕ್ಷಣೆಯಲ್ಲೇ ಕಳೆದು ಹೋಯಿತು. ಬಿರ್ಲಾ ಮಂದಿರದ ರಸ್ತೆಯಲ್ಲೇ ಇದ್ದ ಶಂಭುನಾಥ ಪಂಡಾರವರ ಎರಡಂತಸ್ತಿನ ಭವ್ಯ ‘ಕೋಠಿ’ಯಲ್ಲಿ, ಇವರಿಗಿಂತಲೂ ಮೊದಲು ಬಂದು ಸೇರಿದ್ದ ಪೂನಾದ ತಂಡದ ಸದಸ್ಯರ ಜತೆ ಅರ್ಧ ಹಿಂದಿ ಅರ್ಧ ಕನ್ನಡಲ್ಲಿ ಪೌರುಷದ ಮಾತು ಬದಲಿಸಿಕೊಳ್ಳುತ್ತಾ ಮೇಲಿನ ಆದೇಶಕ್ಕಾಗಿ ಕಾಯುವುದೇ ಕೆಲಸವಾಯಿತು.

ಅಲ್ಲಿಂದ ಫೈಜಾಬಾದಿಗೆ ಬಹಳ ದೂರವೇನೂ ಇಲ್ಲ. ಇವರ ಸಾಗಾಟಕ್ಕೆಂದು ‘ಕೋಠಿ’ಯ ಹಿಂದುಗಡೆ ಚಳಿಗೆ ಮುದುಡಿ ನಿಂತಿದ್ದ ಎರಡು ಮೆಟಡಾರ್ ವಾಹನಗಳಿಗೆ ಕೇವಲ ಮೂರು ತಾಸಿನ ಹಾದಿ. ಆದರೆ ಇವರಿಗೆ ಹೊಸ್ತಿಲು ದಾಟಿ ಅಂಗಳಕ್ಕಿಳಿಯಲೂ ಅನುಮತಿಯಿಲ್ಲ. ಟೀವಿ ನೋಡುತ್ತಾ ಪುಳಕಗೊಳ್ಳುವುದಷ್ಟೇ ಇವರ ದಿನಚರಿ. ಡಿಸೆಂಬರ್ ತಿಂಗಳ ಚಳಿ ಬೇರೆ.

ಕೊನೆಗೊಮ್ಮೆ ಆದೇಶ ಬಂತು. ‘ಎಲ್ಲರಿಗೂ ಅಭಿನಂದನೆಗಳು. ನಿಮ್ಮ ಕೆಲಸ ಪೂರೈಸಿದೆ. ನೀವು ನಾಳೆಯೇ ದೆಹಲಿಗೆ ಹೊರಡುವುದು.’

ಚಂದ್ರಣ್ಣನಿಗೆ ಕೋಪದಿಂದ ಅಳುವೇ ಬಂದುಬಿಟ್ಟಿತ್ತು. ರಾಮದಾಸ ಕಿಣಿಯವರು ಎದುರಿಗೇನಾದರೂ ಇದ್ದಿದ್ದರೆ ದೊಡ್ಡ ರಾದ್ದಾಂತವೇ ಆಗಿಬಿಡುತ್ತಿತ್ತು. ವೆಂಕು ಪಣಂಬೂರಿಗೆ ಹೋಗಿ ಬಂದ ಕತೆಯಂತಾಯಿತಲ್ಲಾ ಎಂದು ಪರಿತಪಿಸಿದ ಚಂದ್ರಣ್ಣನಿಗೆ, ಅತ್ತಿಗೆಗಾಗಿ ಒಂದು ಸೀರೆ ಕೊಳ್ಳಲೂ ಅವಕಾಶವಾಗಲಿಲ್ಲ.

ದೆಹಲಿಗೆ ತಲುಪಿದ ಬಳಿಕ ತಿಲಕ್‌ನಗರದಲ್ಲಿ ಶ್ರೀ ರಾಜಿಂದರ್‌ಸಿಂಗ್ ಹೆಸರಲ್ಲಿದ್ದ ಡಿ.ಡಿ.ಎ. ಫ್ಲಾಟ್‌ನಲ್ಲಿ ಎರಡು ದಿನ-ರಾತ್ರಿ ಚಳಿಗೆ ನಡುಗುವ ಶಿಕ್ಷೆ. ನಾಳೆ ಬೆಳಗ್ಗೆ ಮಂಗಳೂರಿಗೆ ಹೊರಡುವುದು ಎಂದು ನಿಶ್ಚಯವಾದಾಗ ರಾತ್ರಿಯ ಹೊತ್ತಲ್ಲಿ ಒಂದು ಸಂಗತಿ ನಡೆಯಿತು.

ಚಂದ್ರಣ್ಣನ ಅಸಹನೆಯನ್ನು ಕಳೆದ ಎರಡೂ ದಿನಗಳಿಂದ ಗಮನಿಸಿದ್ದ, ಪೂನಾದ ತಂಡದ ಸದಸ್ಯರಲ್ಲೊಬ್ಬ, ರಾತ್ರಿಯ ಊಟದ ಬಳಿಕ ಚಂದ್ರಣ್ಣನನ್ನು ಮನೆಯ ಟೇರೇಸಿಗೆ ಕರೆದುಕೊಂಡು ಹೋದ. ದೇಹವೆಲ್ಲ ಮರಗಟ್ಟುವಂತಹ ಚಳಿಯಲ್ಲಿ ಹೊಸಬನ ಬೆನ್ನು ಹಿಡಿದು ಮೇಲೇರಿದ ಚಂದ್ರಣ್ಣನಿಗೆ ನೂರೆಂಟು ಪ್ರಶ್ನೆಗಳು.

ಟೇರೇಸಿನಲ್ಲಿ ನಸುಗತ್ತಲು. ತನ್ನ ಬಗಲಚೀಲದಿಂದ ಸುಮಾರು ಅರ್ಧ ಕಿಲೋದಷ್ಟು ತೂಗಬಲ್ಲ ಮಣ್ಣಿನ ಹೆಂಟೆಯೊಂದನ್ನು ಹೊರತೆಗೆದು ಚಂದ್ರಣ್ಣನ ಕೈಗಿತ್ತು, “ನೀವು ಬೇಸರಪಡಬಾರದು. ಯಾರ‍್ಯಾರಿಂದ ಯಾವ್ಯಾವ ಕೆಲಸಗಳನ್ನು ನಿರೀಕ್ಷಿಸಲಾಗಿತ್ತೋ ಅವರೆಲ್ಲರೂ ಅವರವರ ಕೆಲಸಗಳನ್ನು ಸಂಪೂರ್ಣವಾಗಿ ನೆರವೇರಿಸಿದ್ದಾರೆ. ನಿಮ್ಮಿಂದ ನಿರೀಕ್ಷಿಸಲಾಗಿದ್ದ ಕೆಲಸವನ್ನು ನೀವು ಕೂಡಾ ಯಶಸ್ವಿಯಾಗಿ ಪೂರೈಸಿದ್ದೀರಿ. ಈ ಕಲ್ಲಿನ ತುಂಡು ನಿಮಗೆ. ಇದು ನಮ್ಮ ವಿಜಯದ ಸಂಕೇತವೆಂದು ತಿಳಿಯಿರಿ” ಎಂದು ಹೇಳಿ ಭುಜತಟ್ಟಿದ; ಚಂದ್ರಣ್ಣನಿಗೆ ರೋಮಾಂಚನವಾಯಿತು. ಮೆಟ್ಟಲಿಳಿಯುವಾಗ ಪೂನಾದ ಗೆಳೆಯ ಪಿಸುದನಿಯಲ್ಲಿ ಎಚ್ಚರಿಸಿದ್ದ, “ಕೆಲವು ದಿವಸಗಳ ಕಾಲ ಇದು ಗುಟ್ಟಾಗಿರಲಿ; ಯಾರಿಗೂ ಹೇಳುವುದು ಬೇಡ.”

ರೈಲಿನ ಎರಡನೆ ದಿನದ ಪ್ರಯಾಣದವರೆಗೂ ಗಂಟಲೊಳಗೇ ಅವಿತಿಟ್ಟುಕೊಂಡಿದ್ದ ಗುಟ್ಟನ್ನು ಚಂದ್ರಣ್ಣ ಉಳಿದಿಬ್ಬರಿಗೆ ತಿಳಿಸಿಬಿಟ್ಟ. ತಾನು ಅದನ್ನು ‘ಸೂಟ್‌ಕೇಸ್’ನಲ್ಲಿ ಭದ್ರವಾಗಿರಿಸಿರುವುದಾಗಿಯೂ, ಊರಿಗೆ ತಲುಪಿದ ಬಳಿಕ ಮೂರು ತುಂಡು ಮಾಡಿ ಉಳಿದಿಬ್ಬರಿಗೂ ಖಂಡಿತಾ ಹಂಚುವುದಾಗಿಯೂ ಭಾಷೆಯಿತ್ತ.

ಮಂಗಳೂರು ರೈಲು ನಿಲ್ದಾಣಕ್ಕೆ ತಲುಪುವಾಗ ರಾಮದಾಸ ಕಿಣಿಯವರ ಕಾರು ತಯಾರಾಗಿ ನಿಂತಿತ್ತು. ಅಂದೇ ರಾತ್ರಿ ಭಗವತೀ ಕಲ್ಯಾಣ ಮಂಟಪದಲ್ಲಿ ಆರಿಸಿದ ಗಣ್ಯನಾಗರಿಕರ ಉಪಸ್ಥಿತಿಯಲ್ಲಿ ಮೂವರನ್ನು ಹಾರ ಹಾಕಿ ಸನ್ಮಾನಿಸಲಾಯಿತು.

ಅಪ್ಪ ಹೆಚ್ಚು ವಿಚಾರಣೆ ಮಾಡಲಿಲ್ಲ. ಆದರೆ ಅತ್ತಿಗೆ ಮಾತ್ರ ಅಸಹನೆಯಿಂದ ಹಂಗಿಸಿದ್ದಳು. “ಆಯಿತಪ್ಪ, ನಿಮಗೆಲ್ಲ ಅಲ್ಲಿಗೆ ಹೋಗಲು ಬಿಡಲಿಲ್ಲ ಸರಿ. ಆದರೆ ಕಾಶಿಯಲ್ಲಿ ಒಂದು ವಾರ ನೀವೇನು ಭಜನೆ ಮಾಡಿದ್ದಾ? ಒಂದು ಸೀರೆ ಕೊಳ್ಳುವಷ್ಟು ಪುರುಸೊತ್ತು ಸಿಗಲಿಲ್ವ ನಿನಗೆ?”

ಚಂದ್ರಣ್ಣ ಪೆಚ್ಚು ಪೆಚ್ಚಾಗಿ ನಕ್ಕ.

ನಾಲ್ಕು

ಮಾತು ಕೊಟ್ಟಿದ್ದಂತೆ ಚಂದ್ರಣ್ಣ ವಾರವೊಂದರ ಬಳಿಕ, ತನ್ನ ಸೂಟ್‌ಕೇಸ್‌ನೊಳಗೆ ಬಚ್ಚಿಟ್ಟಿದ್ದ ಗೋಡೆಯ ತುಂಡನ್ನು ನಾಲ್ಕು ತುಂಡುಗಳನ್ನಾಗಿ ಮಾಡಿ, ತನ್ನ ಜತೆ ಬಂದಿದ್ದ ಇಬ್ಬರಿಗೂ ಒಂದೊಂದು ತುಂಡು ಕೊಟ್ಟ. ಒಂದು ತುಂಡನ್ನು ರಾಮದಾಸ ಕಿಣಿಯವರಿಗೆ ಕೊಟ್ಟು ಅದು ಸಿಕ್ಕ ಬಗೆಯನ್ನೂ ವಿವರಿಸಿದ.

ರಾಮದಾಸ ಕಿಣಿಯವರು ಅನುಮಾನಿಸುತ್ತಾ, “ಇದು ಸ್ವಲ್ಪ ಡೇಂಜರ್ರೇ. ಸ್ವಲ್ಪ ದಿನ ಈ ತುಂಡಿನ ಬಗ್ಗೆ ಯಾರಿಗೂ ಹೇಳಬೇಡ. ನನಗೆ ಕೊಟ್ಟಿದ್ದನ್ನೂ ಹೇಳಬೇಡ. ಪೇಪರ್‌ಗಳಲ್ಲಿ ಏನೇನೆಲ್ಲ ನ್ಯೂಸ್ ಬರ‍್ತಾ ಉಂಟು. ಈ ತುಂಡನ್ನು ಮೆಟೀರಿಯಲ್ ಎವಿಡೆನ್ಸ್ ಅಂತ ಟ್ರೀಟ್ ಮಾಡಿದರೆ ನಾವು ಹೋದ ಹಾಗೆಯೇ. ಏನಂತಿ?” ಎಂದು ಪ್ರಶ್ನಿಸಿದಾಗ ಚಂದ್ರಣ್ಣ ಅವರತ್ತ ಅಸಹ್ಯದ ನೋಟ ಚೆಲ್ಲಿ, ‘ಇಷ್ಟೆಲ್ಲ ಹೆದರಿಕೆ ಪಡುವವರು ನಮ್ಮನ್ನು ಕಳಿಸಿದ್ದು ಯಾಕೆ?’ ಎಂದು ನೇರವಾಗಿಯೇ ಪ್ರಶ್ನಿಸಿಬಿಟ್ಟ. ಮುಖ ಮುದುಡಿಸಿಕೊಂಡ ಕಿಣಿಯವರು, “ಹಾಗಲ್ಲ ಚಂದ್ರು? ತಲೆ ಗಟ್ಟಿ ಉಂಟು ಅಂತ ಬಂಡೆಕಲ್ಲಿಗೆ ಹೊಡೆದುಕೊಳ್ಳುವುದಾ?” ಎಂದು ಗಾದೆ ಉದುರಿಸಿ ಮಾತು ತೇಲಿಸಿಬಿಟ್ಟರು.

“ನನಗೇನೂ ಹೆದರಿಕೆ ಇಲ್ಲ. ನಾನು ಯಾಕೆ ಹೆದರಬೇಕು? ನಾನು ಅಲ್ಲಿ ತನಕ ಹೋಗಲೇ ಇಲ್ವಲ್ಲಾ?” ಚಂದ್ರಣ್ಣ ಪ್ರಶ್ನಿಸಿದಾಗ ಕಿಣಿಯವರು ಹೌಹಾರಿದ್ದರು, “ಓಹ್ ಮಾರಾಯಾ? ಹಾಗೆಲ್ಲ ನೀವು ಅಲ್ಲಿತನಕ ತಲುಪಲೇ ಇಲ್ಲ ಅಂತ ಹೇಳಬೇಡ ಮಾರಾಯ; ನಮ್ಮ ಊರಿನಿಂದಲೂ ಹೋಗಿ ಬಂದಿದ್ದಾರೆ ಅಂತ ಇಂಪ್ರೆಷನ್ ಕ್ರಿಯೇಟ್ ಮಾಡಿ ಆಗಿದೆ. ಈಗ ಇಲ್ಲ, ಇಲ್ಲ, ನಮ್ಮ ಹುಡುಗರಿಗೂ ಅದಕ್ಕೂ ಯಾವ ಕನೆಕ್ಷನೂ ಇಲ್ಲ ಅಂತ ಹೇಳಿ ಬಿಟ್ರೆ ನಮ್ಮ ಪ್ರೆಸ್ಟೀಜ್ ಏನಾದೀತು? ಒಂದು ವೇಳೆ ಅಂಥಾ ಸಂದರ್ಭ ಬಂದು; ಆ ರೀತಿ ಸ್ಟೇಟ್‌ಮೆಂಟ್ ಕೊಡದೆ ಬೇರೆ ದಾರಿಯೇ ಇಲ್ಲ ಅಂತ ಆಗಿಬಿಟ್ರೆ, ಆಗ ಬೇಕಾದ್ರೆ ನಿಜ ಹೇಳಿದ್ರೆ ಆಯ್ತಪ್ಪ. ಏನಂತಿ?ಎಂದು ಪ್ರಶ್ನಿಸಿದಾಗ ಚಂದ್ರಣ್ಣ ಪೆಚ್ಚು ನಗುಚೆಲ್ಲಿ, “ನನಗೊಂದೂ ಗೊತ್ತಾಗುವುದಿಲ್ಲ” ಎಂದು ಹೇಳಿ ಮರಳಿದ್ದ.

ತನ್ನ ಹಾಗೆಯೇ ತಂಡದಲ್ಲಿದ್ದ ಇನ್ನಿಬ್ಬರು ಕೂಡಾ, ಗೋಡೆಯ ತುಂಡನ್ನು ಸಂಭ್ರಮದಿಂದಲೇ ಪಡೆದುಕೊಂಡದ್ದು ಹೌದಾದರೂ, ‘ಹೇಳುವುದಾ-ಹೇಳದಿರುವುದಾ? ತೋರಿಸುವುದಾ? ಅಡಗಿಸಿಡುವುದಾ?’ ಎಂಬುದನ್ನು ನಿರ್ಧರಿಸಲಾಗದೆ ಒದ್ದಾಡುತ್ತಿರುವುದು ಚಂದ್ರಣ್ಣನ ಗಮನಕ್ಕೆ ಬಂದಿತ್ತು. “ಯಾರಿಗೂ ಹೇಳದೆ, ಯಾರಿಗೂ ತೋರಿಸದೆ ಕಳ್ಳ ಬಸಿರಿನಂತೆ ಅಡಗಿಸಿಡುವುದರಲ್ಲಿ ಯಾವ ಮಜವೂ ಇಲ್ಲ ಚಂದ್ರು.” ಎಂದು ಒಬ್ಬಾತ ಪರಿತಪಿಸಿದ್ದರೆ, ಮತ್ತೊಬ್ಬನಂತೂ ಬೇಸರದಿಂದ, ‘ಅಷ್ಟೆಲ್ಲ ದೂರ ಹೋಗಿ, ಆ ಚಳಿಗೆ ಸಂಕಟಪಟ್ಟದ್ದು ಯಾವ ಕರ್ಮಕ್ಕೆ ಅಂತ ನನಗಿನ್ನೂ ಅರ್ಥವಾಗಲಿಲ್ಲ. ಕೆಲವರ ಹತ್ರ ಹೋಗಿದ್ದೇನೆ ಅಂತಲೂ, ಇನ್ನೂ ಕೆಲವರ ಹತ್ರ ಇಲ್ಲ ಮಾರಾಯ್ರೆ, ಅರ್ಧದಲ್ಲೇ ಬಂದೆವು ಅಂತ ಹೇಳುವುದರಲ್ಲೇ ಮಂಡೆ ಬೆಚ್ಚ ಆಗುತ್ತದೆ’ ಎಂದು ಸಿಡುಕಿದ್ದ.

ಚಂದ್ರಣ್ಣನನ್ನು ಮೆಚ್ಚಿ ಅಭಿನಂದಿಸಲು ಬರುವವರ ಜತೆ ಕೆಲವೊಮ್ಮೆ ಚಂದ್ರಣ್ಣನೇ ಹೇಳುವುದುಂಟು. ‘ಇಲ್ಲ ಮಾರಾಯ್ರೇ, ನೀವು ನಂಬಿದಷ್ಟು ಧೈರ್ಯ ನನಗುಂಟಾ? ಏನೋ ಒಂದು ಆಗಿ ಹೋಯ್ತು. ಆ ಬಗ್ಗೆ ನಾವಿನ್ನು ಹೆಚ್ಚು ಮಾತನಾಡದಿರುವುದೇ ಕ್ಷೇಮ’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದಾಗ ಕೇಳುವವರಿಗೆಲ್ಲ ಚಂದ್ರಣ್ಣನ ಸೌಜನ್ಯದ ಬಗ್ಗೆ ಅಭಿಮಾನ ಉಕ್ಕುತ್ತಿತ್ತು. “ನಮ್ಮ ಹತ್ತಿರ ನಿನ್ನ ನಾಟಕ ಬೇಡ ಚಂದ್ರಣ್ಣ. ನೀನು ಅಲ್ಲಿ ಹೋಗಿ ಏನು ಮಾಡಿದ್ದಿ, ಅಲ್ಲಿಂದ ಏನು ತಂದಿದ್ದಿ, ಎಲ್ಲ ಜಾತಕ ನಮಗೆ ತಲುಪಿದೆ; ಹ್ಹ...ಹ್ಹಾ...” ಎಂದು ನಕ್ಕಾಗ ಚಂದ್ರಣ್ಣನೂ ಅವರೆಲ್ಲರ ಅಭಿನಂದನೆಗಳನ್ನು ಸ್ವೀಕರಿಸುವವನಂತೆ ವಿನಯ ನಟಿಸುತ್ತಿದ್ದ.

ದಿನಗಳುರುಳಿದಂತೆ ಚಂದ್ರಣ್ಣನ ಉತ್ಸಾಹವೂ ಇಳಿಯತೊಡಗಿತ್ತು. ವ್ಯವಹಾರದ ಗಡಿಬಿಡಿಯ ನಡುವೆ ಪೇಪರುಗಳ ಮೇಲೆ ಕಣ್ಣಾಡಿಸಿದಾಗ, ಪ್ರಧಾನ ಮಂತ್ರಿಗಳ- ವಿರೋಧ ಪಕ್ಷ ನಾಯಕರುಗಳ ಹೇಳಿಕೆಗಳನ್ನು ಓದುವಾಗ, ಒಂದಿಷ್ಟು ಉದ್ವೇಗ ಮೂಡುತ್ತಿದ್ದರೂ, ಮರುಕ್ಷಣದಲ್ಲೇ ಮರೆತು ಹೋಗುತ್ತಿತ್ತು. ಈ ನಡುವೆ ರೊಟ್ಟಿಪಾತುಮ್ಮ ತನ್ನ ಅಭ್ಯಾಸ ಬಲದಿಂದೆಂಬಂತೆ ಪ್ರತಿಯೊಂದು ಸೋಮವಾರ ಸಂಜೆ ಹದಿನಾಲ್ಕೋ, ಇಪ್ಪತ್ತಾರೋ ರೂಪಾಯಿಗಳನ್ನು ತಂದುಕೊಟ್ಟು ನಿಶ್ಚಿಂತೆಯಿಂದ ಮರಳುತ್ತಿರುವುದನ್ನು ಗಮನಿಸುವಾಗ ‘ಈ ಮುದುಕಿಗೆ ತಾನು ಕರಸೇವೆಗೆ ಹೋಗಿ ಬಂದದ್ದು ಇನ್ನೂ ಗೊತ್ತಿರಲಿಕ್ಕಿಲ್ಲವೇ?’ ಎಂಬ ಅನುಮಾನ ಹುಟ್ಟುತ್ತಿತ್ತು. “ಪಾಪದ ಹೆಂಗಸು; ದುಡ್ಡು ಮರಳಿ ಕೊಡುವ ಸಂದರ್ಭದಲ್ಲಿ ಒಂದು ನೂರೋ, ಇನ್ನೂರೋ ಜಾಸ್ತಿ ಕೊಡಬೇಕು”, ಎಂದು ಯೋಚಿಸಿ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ.

ಒಂದು ಸೋಮವಾರ ಸಂಜೆ ಚಂದ್ರಣ್ಣ ಅಂಗಡಿಗೆ ಬಂದಿದ್ದ ಹಿರಿಯರೊಬ್ಬರಿಗೆ ತನ್ನ ಯಾತ್ರೆಯ ಕತೆ ವಿವರಿಸುತ್ತಾ ಡ್ರಾವರಿನೊಳಗೆ ಕಾಗದದಲ್ಲಿ ಸುತ್ತಿ ಇರಿಸಿದ್ದ ಗೋಡೆಯ ತುಂಡನ್ನು ಹೊರತೆಗೆದು, ಇನ್ನೇನು ಪ್ರದರ್ಶಿಸಬೇಕು ಎಂದು ಯೋಚಿಸುತ್ತಿರುವಷ್ಟರಲ್ಲಿ, ಮೆಟ್ಟಲೇರಿ ಬಂದ ರೊಟ್ಟಿಪಾತುಮ್ಮಳನ್ನು ಗಮನಿಸಿ ಹಾವು ತುಳಿದವನಂತೆ ಬೆಚ್ಚಿ ಬಿದ್ದಿದ್ದ! ಆಕೆಯ ಆಗಮನ ಸೋಮವಾರದಂದು ಅನಿರೀಕ್ಷಿತವೇನೂ ಅಲ್ಲ. ಆದರೆ ಆಕೆಯ ಮುಖದಲ್ಲಿ ಎಂದಿನ ನಗು ಕಾಣಿಸದಾದಾಗ ಚಂದ್ರಣ್ಣ ಗಲಿಬಿಲಿಗೊಂಡಿದ್ದ.

ಸಾಮಾನ್ಯವಾಗಿ ಆಕೆ ಅಂಗಡಿಯ ಮೆಟ್ಟಲ ಬಳಿಗೆ ತಲುಪಿದವಳೇ ಮೃದುವಾದ ಸ್ವರವೆಬ್ಬಿಸಿ ಕೆಮ್ಮಿ ಗಮನ ಸೆಳೆಯುವವಳು. ಆದರೆ ಇಂದು ಮಾತ್ರ ಅಂಗಡಿಯ ಮಂಡದ ಬಳಿಗೇ ತಲುಪಿದ್ದಾಳೆ; ಅಂದ ಮೇಲೆ ತಾನು ಆಡಿದ್ದ ಮಾತೆಲ್ಲ ಅವಳಿಗೂ ಕೇಳಿಸಿದ್ದಿರಬಹುದು. ತನ್ನ ಬಳಿ ‘ಗೋಡೆಯ ತುಂಡು’ ಇರುವುದೂ ಅವಳಿಗೆ ಗೊತ್ತಾಗಿದ್ದಿರಬಹುದು. ಅನುಮಾನದಿಂದಲೇ ಅವಳ ಕಣ್ಣುಗಳನ್ನೆದುರಿಸಿದ.

“ಈ ವಾರ ದುಡ್ಡು ಉಳಿಸಲಾಗಲಿಲ್ಲ. ರೊಟ್ಟಿ ಮಾಡುವ ಮಣೆ ತುಂಡಾಗಿ ಹೋಗಿದೆ. ಅದನ್ನು ರಿಪೇರಿ ಮಾಡಿಸಬೇಕು. ಹಾಗಾಗಿ ನೀವು ನನ್ನನ್ನು ಕಾಯುವುದು ಬೇಡ ಅಂತ ಹೇಳಿ ಹೋಗಲು ಬಂದೆ. ಮುಂದಿನ ಸೋಮವಾರ ಬರುತ್ತೇನೆ” ಎಂದು ಸೋತ ಸ್ವರದಲ್ಲಿ ಹೇಳಿದ ರೊಟ್ಟಿ ಪಾತುಮ್ಮ ಹೊರಟು ಹೋದಾಗ ಚಂದ್ರಣ್ಣ ಅವಕ್ಕಾಗಿದ್ದ. ತನ್ನ ಅನುಮಾನದ ಬಗ್ಗೆ ತಾನೇ ನಾಚಿಕೊಂಡ.
ತನ್ನ ಸಾಹಸದ ಕತೆಯ ಅಂತಿಮ ಹಂತವನ್ನು ಕಣ್ಣಾರೆ ಕಾಣಲು ಕಾತರಿಸಿ ಕುಳಿತಿದ್ದ ಹಿರಿಯರತ್ತ ತಿರುಗಿದ ಚಂದ್ರಣ್ಣ, ಡ್ರಾವರ್ ಹುಡುಕಿದಂತೆ ನಟಿಸಿ, “ಓಹ್! ನಾನು ಮರೆತೇ ಬಿಟ್ಟಿದ್ದೆ. ಈಗ ಆ ತುಂಡು ಮನೆಯಲ್ಲಿದೆ. ಕಳೆದ ವಾರ ಒಬ್ಬರಿಗೆ ತೋರಿಸಲೆಂದು ಕೊಂಡು ಹೋದದ್ದನ್ನು ವಾಪಾಸು ತಂದೇ ಇಲ್ಲ. ನಿಮಗೆ ಇನ್ನೊಮ್ಮೆ ತೋರಿಸುತ್ತೇನೆ” ಎಂದು ಹೇಳಿದವನು ಬಂದವರನ್ನು ಸಾಗ ಹಾಕಿದ.

ಅವರು ಹೊರಟು ಹೋಗುವುದನ್ನೇ ಕಾಯುತ್ತಿದ್ದವನಂತೆ, ಪಕ್ಕದಲ್ಲಿ ಕೂತಿದ್ದ ಕೇಶವಾಚಾರ್ಯ ‘ಪಕಪಕ’ನೆ ಸ್ವರವೆಬ್ಬಿಸಿ ನಕ್ಕ. ಅಣ್ಣನ ನಗುವಿನ ಕಾರಣ ಚಂದ್ರಣ್ಣನಿಗೂ ಅರ್ಥವಾಗಿ ಅವನಿಗೂ ನಗು ಉಕ್ಕಿತು. ಗೋಡೆಯ ತುಂಡನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗದಂತಹ ಒಂದು ಘಟನೆ ನಡೆದದ್ದು ಅವರಿಬ್ಬರ ನಗುವಿಗೆ ಕಾರಣವಾಗಿತ್ತು.

ರಾಮದಾಸ ಕಿಣಿಯವರಿಗೆ ಗೋಡೆಯ ತುಂಡೊಂದನ್ನು ಉಡುಗೊರೆಯಾಗಿ ಕೊಟ್ಟ ದಿನ-ಅಂದು ಭಾನುವಾರದ ರಜ-ಮಧ್ಯಾಹ್ನ ಚಂದ್ರಣ್ಣ ತನ್ನ ಪಾಲಿನ ಗೋಡೆಯ ತುಂಡನ್ನು ಎಲ್ಲಿಡುವುದೆಂಬುದನ್ನು ನಿಖರವಾಗಿ ನಿರ್ಧರಿಸಲಾಗದೆ ದೇವರ ಕೋಣೆಯಲ್ಲಿದ್ದ ಊದುಗಡ್ಡಿ ಸ್ಟೂಲ್‌ನ ಮೇಲೆ ಇಟ್ಟುಬಿಟ್ಟಿದ್ದೇ ಅನಾಹುತಕ್ಕೆ ಹೇತುವಾಗಿತ್ತು.

ಸಂಜೆಯ ಹೊತ್ತಿಗೆ ದೇವರ ಕೋಣೆಗೆ ಹೋಗಿದ್ದ ಅತ್ತೆ- ತಂದೆಯ ಅಕ್ಕ- ದೇವರಿಗೆ ಊದುಗಡ್ಡಿ ಹಚ್ಚುವಾಗ ಸ್ಟೂಲಿನ ಮೇಲಿದ್ದ ಕಲ್ಲನ್ನು ಕಂಡು ಕುತೂಹಲದಿಂದ ಅದನ್ನೆತ್ತಿ ಕೊಂಡೇ ಹೊರಗೆ ಬಂದವರು, ಬಾಗಿಲ ಬಳಿಯೇ ಎದುರಾದ ಕೇಶವಾಚಾರ್ಯನಿಗೆ ಅದನ್ನು ತೋರಿಸುತ್ತಾ “ಇದೆಂಥದ್ದೋ ಕಲ್ಲು? ಅಥವಾ ಇದು ಲೋಬಾನದ ಗಟ್ಟಿಯೋ?” ಎಂದು ಪ್ರಶ್ನಿಸಿದ್ದರು.

“ಇದು ನಮ್ಮ ಚಂದ್ರಣ್ಣನಿಗೆ ಡೆಲ್ಲಿಯಲ್ಲಿ ಸಿಕ್ಕ ಮೆಡಲು” ಎಂದು ನಕ್ಕ ಕೇಶವಾಚಾರ್ಯ ಹೊರಗೆ ಚಾವಡಿಯಲ್ಲಿ ಟೇಪ್‌ರೆಕಾರ್ಡ್ ಆಲಿಸುತ್ತಿದ್ದ ಚಂದ್ರಣ್ಣನನ್ನು ಕೂಗಿ ಕರೆದು, “ನೋಡು ಚಂದ್ರು, ನಿನ್ನ ಅತ್ತೆಗೆ ನಿನ್ನ ಕಲ್ಲಿನ ಮಹಾತ್ಮೆ ವಿವರಿಸಬೇಕಂತೆ” ಎಂದ.

ಆದಷ್ಟೂ ಹೊತ್ತು ಕಲ್ಲಿನ ತುಂಡನ್ನು ಅತ್ತಿತ್ತ ತಿರುಗಿಸಿ ಪರೀಕ್ಷಿಸುತ್ತಿದ್ದ ಅತ್ತೆ, ಚಂದ್ರಣ್ಣ ಹತ್ತಿರ ಬಂದ ಕೂಡಲೇ, “ಎಂಥಾ ಕಲ್ಲು ಇದು?” “ದೇವರ ಕೋಣೆಯಲ್ಲಿ ಯಾಕೆ ಇಟ್ಟದ್ದು?” ಎಂದು ಪ್ರಶ್ನಿಸಿದ್ದರು.

ಒಂದು ಕ್ಷಣ ಗಲಿಬಿಲಿಗೊಂಡರೂ, ಕೂಡಲೇ ಸಾವರಿಸಿಕೊಂಡು, ಅದೇನೂ ಅಂತಹಾ ವಿಶೇಷ ಸಂಗತಿಯಲ್ಲ ಎನ್ನುವ ಸ್ವರದಲ್ಲಿ, “ಓ...ಅದಾ? ಅದು ನಾನವತ್ತು ಹೋಗಿ ಬಂದೆ ನೋಡು. ಅಲ್ಲಿಂದ ತಂದದ್ದು. ಗೋಡೆ ಒಡೆದದ್ದರ ನೆನಪಿಗೆ ಇರಲಿ ಅಂತ” ಎಂದು ಉತ್ತರಿಸಿದ.

ಅತ್ತೆಯವರ ಮುಖ ಹೇಲು ತುಳಿದವರಂತೆ ಕಿವಿಚಿಕೊಂಡಿತು. “ಅಯ್ಯೋ ರಾಮ, ರಾಮಾ..,ಅವರ ಮಸೀದಿಯ ಕಲ್ಲಿನ ತುಂಡನ್ನು ದೇವರ ಕೋಣೆಯಲ್ಲಿ ಯಾರಾದರೂ ಇಡುತ್ತಾರಾ? ನಿನಗೆ ತಲೆ ಸರಿ ಉಂಟಾ ಇಲ್ವಾ?” ಎಂದು ಕೀರಲು ಧ್ವನಿಯಲ್ಲಿ ಆಕ್ಷೇಪಿಸುತ್ತಾ ಗೋಡೆಯ ತುಂಡನ್ನು ಚಂದ್ರಣ್ಣನ ಕೈಗೆ ಹಾಕಿ “ಈ ಅನಿಷ್ಟದ ಕಲ್ಲನ್ನು ಎಲ್ಲಾದ್ರೂ ದೂರ ಬಾವಿಗೆ ಬಿಸಾಡಿ ಸ್ನಾನ ಮಾಡ್ಕೊಂಡು ಒಳಗೆ ಬಾ” ಎಂದು ಆದೇಶವಿತ್ತರು.

ಚಂದ್ರಣ್ಣನ ಮುಖ ಇಂಗು ತಿಂದ ಮಂಗನ ಹಾಗಾಯಿತು. ಸಾಹಸಯಾತ್ರೆಯ ಉತ್ಸಾಹವೆಲ್ಲವು ನೀರಾಗಿ ಬಿಟ್ಟಿತ್ತು. ಆದರೂ ಅತ್ತೆಯವರನ್ನು ಸಮಾಧಾನ ಪಡಿಸುವ ಆಸೆಯಿಂದ, ‘ಹಾಗಲ್ಲ ಅತ್ತೆ, ಇದು ನಿಜವಾಗಿಯೂ ನಮ್ಮ ಹಳೆಯ ದೇವಸ್ಥಾನದ ತುಂಡು’ ಎಂದುಬಿಟ್ಟ.

ಅತ್ತೆ ಮುಖ ಇದ್ದಕ್ಕಿದ್ದಂತೆ ಬಿಳುಚಿಕೊಂಡಿತು. ಆಕಾಶವೇ ಮೈಮೇಲೆ ಬಿದ್ದವರಂತೆ ಹಣೆಗೆ ಬಡಿದುಕೊಳ್ಳುತ್ತಾ, “ಅಯ್ಯಯ್ಯೋ! ಈ ಚಂದ್ರು ಎಂಥದ್ದು ಹೇಳ್ತಾ ಇರುವುದು?! ಹಾಗಾದರೆ ಅಷ್ಟೆಲ್ಲ ಸಂಭ್ರಮದಿಂದ ನೀವೆಲ್ಲ ಹೊರಟು ಹೋಗಿ ಕೊನೆಗೆ ಒಡೆದು ಹಾಕಿದ್ದು ನಮ್ಮದೇ ದೇವಸ್ಥಾನವನ್ನು ?” ಅತ್ತೆಯವರು ಎದುರಿಟ್ಟ ಹೊಸಬಗೆಯ ಪ್ರಶ್ನೆಯಿಂದ ಗಾಬರಿಗೊಂಡ ಚಂದ್ರಣ್ಣ, ಸಹಾಯಕ್ಕಾಗಿ ಅಣ್ಣನತ್ತ ಕಣ್ಣು ಹಾಯಿಸಿದರೆ, ಕೇಶವಾಚಾರ್ಯ ಬಾಯಿಗಡ್ಡ ಕೈ ಹಿಡಿದುಕೊಂಡು ನಗುತ್ತಿದ್ದ.

ಐದು

‘ಅಹ್ಮದ್ ಬಾವಾ ಬೆಹರಿನ್‌ನಿಂದ ಬಂದಿದ್ದಾನಂತೆ, ಗೊತ್ತುಂಟಾ?’ ಬಳೆಯೊಂದಕ್ಕೆ ಅರದಿಂದ ತಿಕ್ಕಿ ಪಾಲೀಶು ಮಾಡುತ್ತಿದ್ದ ಕೇಶವಚಾರ್ಯ ತನ್ನ ತಮ್ಮನ ಪ್ರಶ್ನೆಯಿಂದ ಅಚ್ಚರಿಗೊಂಡು, ‘ಹೌದಾ! ಯಾವಾಗ ಬಂದದ್ದಂತೆ?’ ಎಂದು ಮರುಪ್ರಶ್ನೆ ಹಾಕಿದ.
‘ನನಗವನು ಮಾತಾಡಲು ಸಿಗಲಿಲ್ಲ. ಕಳೆದ ವಾರ ಬಸ್‌ಸ್ಟಾಂಡ್ ಹತ್ರ ರಿಕ್ಷಾ ಹತ್ತುವುದನ್ನು ನೋಡಿದೆ’ ಎಂದ ಚಂದ್ರಣ್ಣ.

‘ಹೌದಾ! ಒಂದು ವಾರದ ಹಿಂದೆಯಾ!’ ಎಂದು ಉದ್ಗರಿಸಿದ ಕೇಶವಾಚಾರ್ಯ ಬಳಿಕ ಅನುಮಾನಿಸುವವನಂತೆ, ‘ಹಾಗಾದರೆ ಅಂಗಡಿಗೆ ಯಾಕೆ ಬರಲಿಲ್ಲ?’ ಎಂದು ಪ್ರಶ್ನಿಸಿದ.

‘ನಾನೂ ಅದನ್ನೇ ಕೇಳಬೇಕೆಂದಿದ್ದೆ. ಈ ಹಿಂದೆಯೆಲ್ಲ ವರ್ಷ ವರ್ಷ ಊರಿಗೆ ಬರುತ್ತಿದ್ದವನು, ಬಂದಾಗಲೆಲ್ಲ ಮರುದಿನವೇ ಅಂಗಡಿಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದನಲ್ಲಾ? ಈ ಸಲ ಯಾಕೆ ತಪ್ಪಿಸಿದಾ?’ ಎಂದ ಚಂದ್ರಣ್ಣ, ಬೇರೇನೋ ಮಾತು ಜೋಡಿಸಬೇಕೆಂದು ಬಾಯಿ ತೆರೆದವನು ಸುಮ್ಮನಾದ.

‘ಏನೋ ಅರ್ಜೆಂಟ್ ಕೆಲಸವಿದ್ದಿರಬಹುದು. ಅದಕ್ಕೇ ಬರಲಾಗಿದ್ದಿರಲಿಕ್ಕಿಲ್ಲ. ಕೇಶವಾಚಾರ್ಯ ತನಗೆ ತಾನೇ ಸಮಾಧಾನ ಮಾಡಿಕೊಳ್ಳುವವನಂತೆ ಹೇಳಿದ.’

ಚಂದ್ರಣ್ಣ ಮೌನ ಮುರಿಯಲಿಲ್ಲ.

ಕೇಶವಾಚಾರ್ಯನೇ ಮಾತು ಮುಂದುವರಿಸಿದ, ‘ಪುನಃ ಬೆಹರೀನ್‌ಗೆ ಹೋಗುವ ಮೊದಲು ಬರಲಿಕ್ಕೆ ಸಾಕು.’

‘ನನಗೇನೋ ಅವನು ಬಂದು ನಿನ್ನನ್ನು ಕಾಣುತ್ತಾನೆಂಬ ನಂಬಿಕೆಯಿಲ್ಲ. ಬರುವವನಾಗಿರುತ್ತಿದ್ದರೆ ಇದಕ್ಕೆ ಮೊದಲೇ ಬರುತ್ತಿದ್ದ.’ ಚಂದ್ರಣ್ಣ ಎಲ್ಲ ತಿಳಿದವನಂತೆ ಗಂಭಿರವಾಗಿ ಹೇಳಿದ್ದ.

‘ಯಾಕೆ ಹಾಗಂತೀಯಾ? ಕಳೆದ ಸುಮಾರು ಮೂವತ್ತು ವರ್ಷಗಳಿಂದ ನನಗವನು ಗೊತ್ತುಂಟು. ಒಟ್ಟಿಗೆ ಆಡಿ ಬೆಳೆದವರು ನಾವು. ನಾನು ಕಟ್ಟಿಕೊಂಡಿರುವ ಈ ವಾಚು ಕೂಡಾ ಅವನೇ ತಂದುಕೊಟ್ಟಿದ್ದು. ನಾನೇನು ಅವನಿಗೆ ದುಡ್ಡು ಕೊಟ್ಟಿದ್ದೇನಾ? ಏನೋ ಕೆಲಸ ಇದ್ದಿರಬಹುದು. ಹಾಗಾಗಿ ಬರಲಿಕ್ಕೆ ಪುರುಸೊತ್ತು ಸಿಕ್ಕಿದ್ದಿರಲಿಕ್ಕಿಲ್ಲ.’ ಕೇಶವಾಚಾರ್ಯ ಚಂದ್ರಣ್ಣನ ಮುಖದತ್ತ ಕಣ್ಣುನೆಟ್ಟು ಹೇಳಿದ.
‘ನನಗೇಕೋ ಅನುಮಾನವೇ’ ಚಂದ್ರಣ್ಣ ಚುಟುಕಾಗಿ ಹೇಳಿದ.

‘ಅನುಮಾನ ಏಕೆ?! ನೀನೊಬ್ಬ ಕರಸೇವೆಗೆ ಹೋಗಿಬಂದ ಅಂತ ಅವ್ನು ನನ್ನ ಸ್ನೇಹ ಬಿಟ್ಟುಬಿಡ್ತಾನಾ? ಅವನು ಅಂಥವನಲ್ಲ. ನಿನUಗ ಪ್ರತಿಯೊಂದರಲ್ಲೂ ಅನುಮಾನ ಸುರುವಾಗಿದೆ. ಅಂಗಡಿಗೆ ಅವರ ಪೈಕಿ ಯಾರಾದರೂ ಬಂದರೆ ಅಗತ್ಯಕ್ಕಿಂತ ಹೆಚ್ಚೇ ಉಪಚಾರ ಮಾಡ್ತೀಯ. ಮಜೂರಿ ಹೇಳುವಾಗ ಒಂದೆರಡು ರೂಪಾಯಿ ಕಡಿಮೆಯೇ ಹೇಳ್ತೀಯ. ಯಾಕೆ? ಏನಾಗಿದೆ ನಿನ್ಗೆ?! ಏನೋ ಮಹಾ ಅಪರಾಧ ಮಾಡಿದವರ ಹಾಗೆ ಒದ್ದಾಡ್ತಿದ್ದೀಯಲ್ಲಾ? ಇಷ್ಟೆಲ್ಲ ಯೋಚನೆ ಮಾಡುವವನು ಅವತ್ತು ಹೋದದ್ದು ಯಾಕೆ? ಈಗ ಹೋಗಿ ಬಂದು ಆಗಿದೆ. ಈಗ ಆ ಬಗ್ಗೆ ಮಂಡೆ ಬಿಸಿ ಮಾಡುವುದು ಯಾಕೆ? ಒಂದು ವೇಳೆ ನೀನು ಹೇಳಿದ್ದೇ ನಿಜವಾಗಿ, ಅವನು ನಮ್ಮ ಅಂಗಡಿ ಕಡೆಗೆ ತಲೆ ಹಾಕಲಿಲ್ಲ ಅಂತಲೇ ಇಟ್ಕೋ; ಏನಾಯ್ತು ಅದರಿಂದ? ಏನು ನಷ್ಟವಾಗ್ತದೆ? ಇಷ್ಟೆಲ್ಲ ಅನುಮಾನಿಸುವ ನೀನು ಈ ಕಲ್ಲಿನ ತುಂಡನ್ನು ಇಟ್ಟುಕೊಂಡು ಬಂದ ಬಂದವರಲ್ಲೆಲ್ಲ ಜಂಭ ಕೊಚ್ಚುವುದು ಯಾಕೆ? ಅತ್ತೆಯವರು ಹೇಳಿದ ಹಾಗೆ ಅದನ್ನು ಎತ್ತಿಕೊಂಡು ಹೋಗಿ ಯಾವುದಾದರೂ ಒಂದು ಬಾವಿಗೆ ಬಿಸಾಡಿ ಬರಬಾರದಾ?’ ಕೇಶವಾಚಾರ್ಯ ಪ್ರಶ್ನೆಗಳ ಗೊಂಚಲನ್ನೇ ಚಂದ್ರಣ್ಣನತ್ತ ಎಸೆದಿದ್ದ.

ಚಂದ್ರಣ್ಣ ಉತ್ತರಿಸಲೂ ಪ್ರಯತ್ನಿಸಲಿಲ್ಲ.

ಸ್ವಲಹೊತ್ತು ಇಬ್ಬರೂ ಮೌನವಾಗಿ ತಮ್ಮ ಕೆಲಸ ಮುಂದುವರಿಸಿದರು.

‘ಈವತ್ತು ಮಧ್ಯಾಹ್ನ ನೀನು ಊಟಕ್ಕೆ ಹೋಗಿದ್ದಾಗ ರೊಟ್ಟಿ ಪಾತುಮ್ಮ ಬಂದಿದ್ದಳು.’ ಚಂದ್ರಣ್ಣ ಹೊಸ ವಿಷಯ ಪ್ರಸ್ತಾಪಿಸಿದ್ದ!’
‘ಈವತ್ತು ಬಂದಿದ್ಳಾ?!’ ಈವತ್ತು ಸೋಮವಾರ ಅಲ್ವಲ್ಲಾ? ಎಷ್ಟು ಕೊಟ್ಟಳು ಈವತ್ತು?’ ಕೇಶವಾಚಾರ್ಯ ಕುತೂಹಲ ವ್ಯಕ್ತಪಡಿಸಿದ.
‘ಹಣ ಕೊಡಲು ಬಂದದ್ದಲ್ಲ ಅವಳು; ಹಣ ವಾಪಾಸು ಕೇಳಲು ಬಂದದ್ದು. ನಾಳದು ಶುಕ್ರವಾರದ ಮೊದಲು ಹಣ ಬೇಕಂತೆ. ಶುಕ್ರವಾರ ಮನೆ ಕೆಲಸ ಆರಂಭಿಸ್ತಾಳಂತೆ.’ ಚಂದ್ರಣ್ಣ ಉತ್ತರಿಸಿದ.

‘ಹೌದಾ!’ ಎಂದು ಉದ್ಗರಿಸಿದ ಕೇಶವಾಚಾರ್ಯ, ‘ಒಳ್ಳೆಯದೇ ಆಯ್ತು ಬಿಡು. ನಮಗೂ ಒಂದು ರಗಳೆ ತಪ್ಪಿದ ಹಾಗಾಯಿತು.’ ಎಂದು ಹೇಳಿದ.

‘ಅವಳು ನಿಜವಾಗಿಯೂ ಶುಕ್ರವಾರದಂದು ಮನೆ ಕೆಲಸ ಸುರು ಮಾಡ್ತಾಳಾ?’ ಚಂದ್ರಣ್ಣ ಅನುಮಾನಿಸುತ್ತಲೇ ಪ್ರಶ್ನಿಸಿದ್ದ.

‘ಸುರುವಾಯಿತಲ್ಲ ನಿನ್ನದು?’ ಕೇಶವಾಚಾರ್ಯ ಅಸಹನೆಯಿಂದ ಪ್ರಶ್ನಿಸಿ, ‘ಅವಳು ಮನೆ ಕಟ್ತಾಳೋ ಬಾವಿಗೆ ಬಿಸಾಡ್ತಾಳೋ; ಅದರಿಂದ ನಿನಗೇನು ನಷ್ಟ? ಅವಳ ಹಣ ಅವಳಿಗೆ ಬೇಕಾಗಿದೆ. ಇಷ್ಟು ದಿವಸ ನಮ್ಮ ಮೇಲೆ ನಂಬಿಕೆ ಇಟ್ಟು ಕೊಟ್ಟಿದ್ದಾಳೆ. ಈಗ ವಾಪಾಸು ಬೇಕು ಅಂತ ಕೇಳ್ತಿದ್ದಾಳೆ. ಲೆಖ್ಖ ಮಾಡಿ ಕೊಟ್ಟರಾಯಿತು. ಎಷ್ಟಾಯಿತು ಅಂತ ಟೋಟಲ್ ನೋಡಿದ್ಯಾ?’ ಎಂದು ಚಂದ್ರಣ್ಣನ ಮುಖ ದಿಟ್ಟಿಸಿದ್ದ.

‘ಹೌದು. ನಾಲ್ಕು ಸಾವಿರದ ಇನ್ನೂರ ಎಂಭತ್ತೆರಡು ರೂಪಾಯಿ ಆಗಿದೆ. ನಾಳೆ ಸಂಜೆಗೆ ಬರಲಿಕ್ಕೆ ಹೇಳಿದ್ದೇನೆ. ನಾಳೆ ಬೆಳಗ್ಗೆ ಬ್ಯಾಂಕ್‌ನಿಂದ ಕ್ಯಾಷ್ ತರಬೇಕಾದೀತು’ ಚಂದ್ರಣ್ಣ ಉತ್ತರಿಸಿದ.

‘ಸರಿ, ಹಾಗೇ ಮಾಡು. ಹಣ ಕೊಡುವಾಗ ಒಂದು ಇನ್ನೂರು ರೂಪಾಯಿ ನಮ್ಮ ಪಾಲಿನದ್ದು ಅಂತ ಸೇರಿಸಿ ಕೊಡು. ಆಗಲಿಕ್ಕಿಲ್ವಾ?’ ಕೇಶವಾಚಾರ್ಯ ಪ್ರಶ್ನಿಸಿದಾಗ ಚಂದ್ರಣ್ಣ, ‘ನಾನೂ ಹಾಗೇ ಯೋಚನೆ ಮಾಡಿದ್ದೇನೆ. ಬಡ್ಡಿ ಹಣ ಅಂತ ಲೆಖ್ಖ ಮಾಡಿದ್ರೂ ಐನೂರು ಆರುನೂರು ರೂಪಾಯಿ ಆಗಬಹುದು’ಎಂದು ಹೇಳಿದ.

ಕೇಶವಾಚಾರ್ಯ ತನ್ನ ಕೆಲಸದಲ್ಲಿ ಮುಳುಗಿದ.

ಸ್ವಲ್ಪ ಹೊತ್ತು ಬಿಟ್ಟು ಚಂದ್ರಣ್ಣ ಪುನಃ ಪ್ರಶ್ನಿಸಿದ, ‘ನಾಳೆ ಅವಳು ದುಡ್ಡುಕೊಂಡು ಹೋಗಲು ಬಂದಾಗ, ಅವಳಿಗೆ ನಾನು ಕರಸೇವೆಗೆ ಹೋಗಿ ಬಂದದ್ದು ಗೊತ್ತುಂಟಾ ಅಂತ ವಿಚಾರಿಸಿದರೆ ಹೇಗೆ?’

‘ಅವಳು, ಹೌದು ಗೊತ್ತುಂಟು, ಎಂದರೆ ಏನು ಮಾಡ್ತಿ?’ ಚಾಟಿಯಿಂದ ಹೊಡೆದಂತೆ ಕೇಶವಾಚಾರ್ಯ ಪ್ರಶ್ನಿಸಿದ್ದ.

ರೊಟ್ಟಿ ಪಾತುಮ್ಮ ಹಣ ಮರಳಿ ಬಯಸಿದ್ದ ಸಂಗತಿಯನ್ನು ರಾತ್ರಿ ಊಟದ ನಡುವೆ ಚಂದ್ರಣ್ಣ ತಂದೆಗೆ ತಿಳಿಸಿದಾಗ ಅವರು, ‘ಅಯ್ಯೋ ಪಾಪ. ಇಷ್ಟು ವರ್ಷ ನಮ್ಮ ಅಂಗಡಿ ಮೇಲೆ ನಂಬಿಕೆ ಇಟ್ಟು ಹಣ ಉಳಿಸಿದಳಲ್ಲ! ಒಂದು ದಿನವಾದರೂ ಒಟ್ಟು ಹಣ ಎಷ್ಟಾಗಿದೆಯೆಂಬುದನ್ನೂ ವಿಚಾರಿಸಲಿಲ್ಲ’ ಎಂದು ರೊಟ್ಟಿ ಪಾತುಮ್ಮಳನ್ನು ಮೆಚ್ಚಿಕೊಂಡು, ಬಳಿಕ ಏನನ್ನೋ ನಿರ್ಧರಿಸಿದವರಂತೆ, ‘ಚಂದ್ರು, ಒಂದು ಕೆಲಸ ಮಾಡು. ನಾಳೆ ಅವಳ ಲೆಕ್ಖಾಚಾರ ಸೆಟಲ್ ಮಾಡಿದ ಬಳಿಕ ನಮ್ಮ ಲೆಖ್ಖದ್ದು ಅಂತ ಒಂದು ಐನೂರು ರೂಪಾಯಿ ಬೇರೆಯೇ ಕೊಟ್ಟುಬಿಡು. ಅಂದ ಹಾಗೆ ಬಡ್ಡಿ ಹಣ, ಹಾಗೆ-ಹೀಗೆ ಅಂತ ಹೇಳಲು ಹೋಗಬೇಡ. ಆ ಜಾತಿ ಮಂದಿ ಬಡ್ಡಿ ಹಣ ತೆಗೆದುಕೊಳ್ಳಬಾರದಂತೆ. ಮನೆ ಕಟ್ಟಿಸುವವಳಿಗೆ ನಮ್ಮದೂ ಒಂದು ಸಹಾಯ ಅಂತ ಇರಲಿ’ ಎಂದರು.

‘ತಾನೂ ಹಾಗೆಯೇ ಮಾಡಲು ನಿರ್ಧರಿಸಿದ್ದೆ’ ಎಂಬ ಮಾತು ತುಟಿಯವರೆಗೆ ಬಂದರೂ ಚಂದ್ರಣ್ಣ ಮೌನವಾಗಿ ತಲೆಯಾಡಿಸಿದ. ತಾನು ಕರಸೇವೆಗೆ ಹೋಗಿ ಬಂದದ್ದನ್ನು ತಿಳಿದು, ಬೇಸರವಾಗಿ ಆಕೆ ದುಡ್ಡು ಮರಳಿ ಕೇಳಿರಬಹುದೇ? ಎಂಬ ಪ್ರಶ್ನೆಯನ್ನು ತಂದೆಯವರಲ್ಲಿ ಕೇಳುವುದೇ ಬೇಡವೇ ಎಂಬುದನ್ನು ನಿರ್ಧರಿಸಲಾಗದೆ ಚಡಪಡಿಸುತ್ತಾ ಅಣ್ಣ ಕೇಶವಾಚಾರ್ಯನತ್ತ ಕಣ್ಣು ಹಾಯಿಸಿದಾಗ, ಆತ ‘ಸುಮ್ಮನಿರು’ ಎಂದು ಕಣ್ಣಲ್ಲೇ ಸೂಚನೆ ದಾಟಿಸಿದ್ದ.

ಮರುದಿನ ಮುಂಜಾನೆಯೇ ಬಂಟ್ವಾಳದ ಪಾರ್ಟಿಯೊಂದು ಏಳೆಂಟು ಸಾವಿರದ ಕ್ಯಾಷ್ ವ್ಯವಹಾರ ಮಾಡಿ ಹೋದುದರಿಂದಾಗಿ ಬ್ಯಾಂಕಿನಿಂದ ಹಣ ಡ್ರಾ ಮಾಡಿ ತರುವ ಅಗತ್ಯ ಬೀಳಲಿಲ್ಲ.

ಮಧ್ಯಾಹ್ನದ ಊಟದ ಬಳಿಕ ಚಂದ್ರಣ್ಣ ಖಾತೆ ಪುಸ್ತಕ ಹೊರತೆಗೆದು ರೊಟ್ಟಿ ಪಾತುಮ್ಮಳ ಒಟ್ಟು ಉಳಿತಾಯವನ್ನು ಮತ್ತೊಮ್ಮೆ ಟೋಟಲ್ ಮಾಡಿದ. ನಿನ್ನೆ ಮಾಡಿದ ಟೋಟಲ್‌ಗಿಂತ ಹದಿನೇಳು ರೂಪಾಯಿ ಕಡಿಮೆ ಟೋಟಲ್ ಬಂತು. ಮತ್ತೊಮ್ಮೆ ‘ಟೋಟಲ್’ ಮಾಡತೊಡಗಿದ; ಅರ್ಧ ‘ಟೋಟಲ್’ ಮಾಡುವಷ್ಟರಲ್ಲಿ ಬೇಸರವಾಗಿ ಖಾತೆ ಪುಸ್ತಕ ಮಡಚಿಟ್ಟ. ನಿನ್ನೆ ಕೂಡುವಾಗ ಬಂದ ಮೊತ್ತವನ್ನೇ ‘ಫೈನಲ್ ಟೋಟಲ್’ ಅಂತ ಕಾಗದದ ಚೂರೊಂದರಲ್ಲಿ ಬರೆದು ತಿಜೋರಿಯಿಂದ ಹಣ ತೆಗೆದು ಎಣಿಸಿ ರಬ್ಬರ್ ಬ್ಯಾಂಡ್ ಹಾಕಿಟ್ಟ. ಬೇರೆಯೇ ಆಗಿ ಐನೂರು ರೂಪಾಯಿಗಳನ್ನು ಎಣಿಸಿ ಮತ್ತೊಂದು ರಬ್ಬರ್ ಬ್ಯಾಂಡ್ ಹಾಕಿದ. ರೂಪಾಯಿ ನೋಟುಗಳ ಎರಡೂ ಕಂತೆಗಳನ್ನು ಲಕೋಟೆಯೊಂದರೊಳಗೆ ಸೇರಿಸಿ ಇನ್ನೊಂದು ರಬ್ಬರ್ ಬ್ಯಾಂಡ್ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಕುಳಿತ.

ಯಾವುದೇ ಕೆಲಸದಲ್ಲಿ ಆಸಕ್ತಿಯಿಲ್ಲದವನಂತೆ ರಸ್ತೆ ನೋಡುತ್ತಾ ಕುಳಿತ ಚಂದ್ರಣ್ಣನತ್ತ ಅನುಕಂಪದ ನೋಟ ಬೀರಿದ ಕೇಶವಾಚಾರ್ಯ, ‘ಸಂಜೆ ತಂದೆಯವರು ಬರ‍್ತಾರಂತೆ. ಆ ಹೆಂಗಸು ಬಂದಾಗ ಅವರಿದ್ದು, ಅವರ ಕೈಯಿಂದಲೇ ದುಡ್ಡು ಕೊಟ್ಟರೆ ಒಳ್ಳೆಯದಲ್ವಾ?’ ಎಂದು ಪ್ರಶ್ನಿಸಿದ.

ಚಂದ್ರಣ್ಣ ಹೌದು ಎಂಬಂತೆ ತಲೆಯಾಡಿಸಿದ. ಅಣ್ಣನತ್ತ ತಿರುಗಿಯೂ ನೋಡಲಿಲ್ಲ.

ಅರ್ಧ ತಾಸು ಕಳೆಯಿತು. ತಮ್ಮನತ್ತ ಕಡೆಗಣ್ಣ ನೋಟ ಇಟ್ಟುಕೊಂಡೇ ತನ್ನ ಕೆಲಸ ಮುಂದುವರಿಸಿದ್ದ ಕೇಶವಾಚಾರ್ಯ, ಡ್ರಾವರಿನ ಒಳಗೆ ಇರಿಸಿದ್ದ ಗೋಡೆಯ ತುಂಡನ್ನು ಹೊರತೆಗೆದು ಪ್ಯಾಂಟಿನ ಜೇಬಿನೊಳಗೆ ಸೇರಿಸಿಕೊಂಡು ಚಂದ್ರಣ್ಣ ಎದ್ದು ನಿಂತಾಗ ಗಾಬರಿಗೊಂಡು, ‘ಯಾಕೆ?!’ ಎಲ್ಲಿ ಹೊರಟೆ?’ ಎಂದು ಪ್ರಶ್ನಿಸಿದ.

‘ಆ ಮುದುಕಿಯ ಹಣ ಮತ್ತು ತಂದೆಯವರು ಕೊಡಲು ಹೇಳಿದ್ದ ಪ್ರತ್ಯೇಕ ಐನೂರು ರೂಪಾಯಿ- ಎರಡನ್ನೂ ಬೇರೆ ಬೇರೆ ಕಟ್ಟಿ ಕವರ್‌ನಲ್ಲಿ ಹಾಕಿಟ್ಟಿದ್ದೇನೆ. ಒಂದು ವೇಳೆ ನಾನಿಲ್ಲದಾಗ ಅವಳು ಬಂದ್ರೆ ಕೊಟ್ಟುಬಿಡು. ಒಂದು ವೇಳೆ ತಂದೆಯವರೇ ಅಂಗಡಿಗೆ ಬಂದ್ರೆ ಒಳ್ಳೆಯದೇ ಆಯ್ತಲ್ವಾ?’ ಎನ್ನುತ್ತಾ ಹೊರಟ.

‘ನೀನೀಗ ಎಲ್ಲಿಗೆ ಹೋಗ್ತಾ ಇದ್ದೀಯಾ?’ ಕೇಶವಾಚಾರ್ಯನ ಪ್ರಶ್ನೆಯಲ್ಲಿ ಬರಿಯ ವಿಚಾರಣೆಯಿದ್ದಿರಲಿಲ್ಲ; ಹೋಗಬೇಡ ಎಂಬ ಸೂಚನೆಯಿತ್ತು.

ಹೇಳುವುದೇ, ಹೇಳದಿರುವುದೇ ಎಂಬುದನ್ನು ನಿರ್ಧರಿಸುವವನಂತೆ ಅರೆಕ್ಷಣ ತಡೆದು, ‘ಒಮ್ಮೆ ರಾಮದಾಸ ಕಿಣಿಯವರನ್ನು ಕಂಡು ಅವರ ಲೆಖ್ಖಾಚಾರವನ್ನೂ ಚುಕ್ತಾ ಮಾಡಬೇಕಿತ್ತು.’ ಎಂದಷ್ಟೇ ಹೇಳಿದ ಚಂದ್ರಣ್ಣ, ಅಣ್ಣ ಮತ್ತೊಂದು ಪ್ರಶ್ನೆಯನ್ನು ಎಸೆಯುವ ಮುನ್ನವೇ ಮೆಟ್ಟಲಿಳಿದು, ಸೈಕಲೇರಿದ್ದ.

‘ಕಲ್ಪನಾ ಸಾರಿ ಸೆಂಟರ್’ನ ಹೊರಗೆ ಸೈಕಲ್ ನಿಲ್ಲಿಸಿದ ಚಂದ್ರಣ್ಣ ಮೆಟ್ಟಲೇರುತ್ತಿರುವಂತೆಯೇ ಸ್ವಾಗತಿಸಿದ ಸೇಲ್ಸ್‌ಮನ್ ಗೋಪಾಲಣ್ಣ. ‘ಊಟಕ್ಕೆಂದು ಮನೆಗೆ ಹೋದವರು ಇನ್ನೂ ಬಂದಿಲ್ಲ. ಹೋಗುವಾಗ್ಲೇ ಸ್ವಲ್ಪ ಜ್ವರ ಬರ‍್ತಾ ಉಂಟು ಹೇಳ್ತಾ ಇದ್ರು, ಇನ್ನು ಈವತ್ತು ಬರುವುದಿಲ್ವೋ ಏನೋ.’ ಎಂದು ಅನುಮಾನ ವ್ಯಕ್ತಪಡಿಸಿದ.

ಚಂದ್ರಣ್ಣ ಸೈಕಲೇರಿ ರಾಮದಾಸ ಕಣಿಯವರ ಮನೆಯ ದಾರಿಯಲ್ಲಿ ತುಳಿದ.
ಗುಡ್ಡೆ ಶಾಲೆಯ ತಿರುವಿನಲ್ಲಿದ್ದ ಸರಕಾರಿ ಬಾವಿ ಬಳಿ ತಲುಪಿದಾಗ ಒಮ್ಮಿಂದೊಮ್ಮೆಗೆ ಬಾಲ್ಯ ನೆನಪಾಯಿತು.

ಬಾವಿಯ ಪಕ್ಕದ ಗುಡ್ಡದ ಮೇಲಿರುವ ಶಾಲೆಯ ಆಟದ ಬಯಲಲ್ಲಿ ಕ್ರಿಕೆಟ್ ಆಡುತ್ತಿರುವಾಗಲೆಲ್ಲ ಚೆಂಡು ಪುಟಿಯುತ್ತಾ ಬಂದು ಬಾವಿಗೆ ಬಿದ್ದರೆ ಅರ್ಧ ತಾಸು ಆಟಕ್ಕೆ ವಿರಾಮ. ಪಕ್ಕದಲ್ಲೇ ಇರುವ ಅದ್ರಾಮ ಬ್ಯಾರಿಯ ಮನೆಯಿಂದ ಹಗ್ಗ-ಬಕೇಟು ತಂದು ಕೊಡುತ್ತಾನೆಂಬ ಏಕೈಕ ಕಾರಣದಿಂದಾಗಿ ಅದ್ರಾಮ ಬ್ಯಾರಿ ಮೊದಲ ಬಾರಿಗೆ ಔಟಾಗುವ ಆಟಗಾರನಾದರೂ ಕ್ಯಾಪ್‌ಟನ್‌ಶಿಪ್ ಗಿಟ್ಟಿಸಿಕೊಳ್ಳುವುದನ್ನು ನೆನಪಿಸಿಕೊಂಡಾಗ ನಗು ಬಂತು. ಆದರೆ ಅದೇ ಅದ್ರಾಮ ಬ್ಯಾರಿ, ಅಪ್ಪ ಹೊಡೆದ ಎಂಬ ಸಿಟ್ಟಿನಿಂದಲೇ ಬಾವಿಗೆ ಹಾರಿ ಸತ್ತು ಹೋದಾಗ ಚಂದ್ರಣ್ಣ ಎಂಟನೇ ಕ್ಲಾಸಿನ ವಿದ್ಯಾರ್ಥಿ. ಕೆಲವು ದಿವಸ ಸಂಜೆಯ ಬಳಿಕ ಸರಕಾರಿ ಬಾವಿಯ ಬಳಿಗೆ ಗೆಳಯರಾರೂ ಹೋಗುತ್ತಿರಲಿಲ್ಲ. ಅದ್ರಾಮ ಬ್ಯಾರಿಯ ಜಾತಿಯವರು ಆತ್ಮಹತ್ಯೆ ಮಾಡಿಕೊಂಡರೂ ಪ್ರೇತವಾಗುವುದಿಲ್ಲ ಎಂಬುದು ಗೊತ್ತಿದ್ದರೂ, ಬಾವಿ ಬಳಿ ಸುಳಿದಾಡಲು ಅಳುಕು. ಈಗ ಅದ್ರಾಮ ಬ್ಯಾರಿ ಬದುಕಿದ್ದರೆ ತನ್ನಷ್ಟೇ ದೊಡ್ಡವನಾಗಿರುತ್ತಿದ್ದ. ತಾನು ಕರಸೇವೆಗೆ ಹೋದ ಬಗ್ಗೆ ಅವನು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದ? ಸ್ನೇಹ ಬಿಡುತ್ತಿದ್ದನೆ?

ಚಂದ್ರಣ್ಣ ಸೈಕಲು ನಿಲ್ಲಿಸಿ ಸ್ಟಾಂಡು ಹಾಕಿದ. ಅಕ್ಟೋಬರದ ದಸರಾ ರಜವಿದ್ದುದರಿಂದ ಶಾಲೆ ಮೌನವಾಗಿ ಮುಚ್ಚಿಕೊಂಡು ಕೂತಿತ್ತು. ಬಾವಿ ಬಳಿ ಬಂದ ಚಂದ್ರಣ್ಣ ಇಣಕಿ ನೋಡಿ. ಹತ್ತಾಳು ಆಳದಲ್ಲಿ ನೀರು ಕಪ್ಪಗೆ ಕಾಣಿಸಿತು. ಚಿಕ್ಕವನಿದ್ದಾಗ ಬಾವಿಗೆ ಕಲ್ಲು ಬಿಸಾಡಿ ಅದು ‘ಗುಳುಂ’ ಎಂದು ಸದ್ದು ಮಾಡುವುದನ್ನು ಆಲಿಸುವುದರಲ್ಲೇ ಒಂದು ಬಗೆಯ ಮಜ. ಚಂದ್ರಣ್ಣ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಪುಟ್ಟ ಕಲ್ಲೊಂದನ್ನು ಆರಿಸಿ ಬಾವಿಗೆ ಎಸೆದ. ಸದ್ದು ಸ್ಪಷ್ಟವಾಗಿ ಕೇಳಿಸದಾಗ ನಿರಾಸೆಯಾಯಿತು. ಸ್ವಲ್ಪ ದೊಡ್ಡ ಕಲ್ಲು ಎಸೆದರೆ ಸದ್ದು ಕೇಳಿಸಬಹುದು. ಅಕ್ಕಪಕ್ಕ ನೋಡಿದ; ಇದ್ದಕ್ಕಿದ್ದಂತೆ ಜೇಬಿನೊಳಗಿನಿಂದ ‘ಗೋಡೆಯ ತುಂಡನ್ನು’ ಹೊರತೆಗೆದು ಬಾವಿಯೊಳಕ್ಕೆ ಎಸೆದು ಬಿಟ್ಟ! ‘ಗುಳುಂ’ ಎಂಬ ಸದ್ದು ಕೇಳಿಸಿದಾಗ ಮನಸ್ಸು ನಿರಾಳವಾಯಿತು. ಸಮಾಧಾನ ಗೊಂಡವನಂತೆ ಅಲ್ಲೇ ಪಕ್ಕದಲ್ಲಿ ಇದ್ದ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ಕುಳಿತು. ಶಾಲಾ ಬಯಲಿನ ಇಳಿಜಾರಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳನ್ನು ನೋಡತೊಡಗಿದ.

ಆರು

ಚಂದ್ರಣ್ಣ ಅಂಗಡಿಗೆ ಮರಳಿ ಬಂದಾಗ ಸೂರ್ಯ ಮುಳುಗಿದ್ದ.

ಅಣ್ಣ ತನ್ನ ಮಾಮೂಲು ಜಾಗದಲ್ಲಿ ಕುಳಿತು ಕೆಲಸದಲ್ಲಿ ಮುಳುಗಿದ್ದ. ಅಪ್ಪ ಕಾಣಿಸಲಿಲ್ಲ. ‘ಕಿಣಿ ಸಿಕ್ಕಿದ್ರಾ?’ ‘ಇಲ್ಲ ನಾನು ಅಲ್ಲಿಗೆ ಹೋಗಲಿಲ್ಲ’ ಎಂದು ಶುಷ್ಕವಾಗಿ ಉತ್ತರಿಸಿದ ಚಂದ್ರಣ್ಣ ಮಂಚದಲ್ಲಿ ಕುಳಿತುಕೊಳ್ಳುತ್ತಾ, ‘ತಂದೆಯವರು ಬರಲಿಲ್ವಾ?’ ಎಂದು ಪ್ರಶ್ನಿಸಿದ.

‘ತಂದೆಯವರೂ ಬಂದಿದ್ರು. ಆ ಹೆಂಗಸೂ ಬಂದಿತ್ತು. ಹಣ ತೆಗೆದುಕೊಂಡು ಹೋದಳು. ನಮ್ಮ ಲೆಖ್ಖದ ಐನೂರು ರೂಪಾಯಿ ತೆಗೆದುಕೊಳ್ಳುವಾಗ ಕಣ್ಣೀರು ಹಾಕಿಬಿಟ್ಳು ಪಾಪ’ ಎಂದ ಕೇಶವಾಚಾರ್ಯ. ಚಂದ್ರಣ್ಣ ಏನೂ ಹೇಳಲಿಲ್ಲ.

ಕೇಶವಾಚಾರ್ಯನೇ ಮಾತು ಮುಂದುವರಿಸಿದ, ‘ನಮ್ಮ ಅಹ್ಮದ್ ಬಾವಾನ ಕತೆ ಗೊತ್ತುಂಟಾ ನಿನ್ಗೇ? ರೊಟ್ಟಿ ಪಾತುಮ್ಮಳೇ ಹೇಳಿದ್ದು. ಇವಳು ಮನೆ ಕಟ್ಟಿಸುವ ಸಮಯದಲ್ಲಿ ಏನಾದರೂ ಸ್ವಲ್ಪ ಸಹಾಯ ಮಾಡ್ತೇನೆ ಅಂತ ಕಳೆದ ಸಲ ಬಂದಾಗ ಹೇಳಿದ್ದನಂತೆ. ಆದ್ರೆ ಈ ಸಲ ಊರಿಗೆ ಬಂದಿದ್ದವನು ಒಂದು ದಿನವೂ ಮನೆಯಲ್ಲಿ ನಿಲ್ಲಲಿಲ್ಲವಂತೆ. ಕಾಸರಗೋಡಿಗೆ ಕೊಟ್ಟಿದ್ದ ಅವನ ತಂಗಿ ಹೆರಿಗೆಗೆಂದು ಅಲ್ಲೇ ನರ‍್ಸಿಂಗ್ ಹೋಮ್ ಸೇರಿದವಳ ಕಂಡೀಷನ್ ಸೀರಿಯೆಸ್ ಆಯಿತಂತೆ. ಇವನು ಬಂದ ದಿನವೇ ಪೋನ್ ಬಂದಿತ್ತಂತೆ. ಹಾಗೆ ಕಾಸರಗೋಡಿಗೆ ಹೋದ ಇವನು ಇನ್ನೂ ಮರಳಿ ಬಂದಿಲ್ಲವಂತೆ. ಮಗ ಹುಟ್ಟುವಾಗಲೇ ಸತ್ತು ಹೋಗಿ ತಾಯಿ ಸ್ಥಿತಿ ಬಹಳ ಹೋಪ್ಲೆಸ್ ಆಯಿತಂತೆ. ಈಗ ಮಂಗಳೂರಿಗೆ ಶಿಫ್ಟ್ ಮಾಡಿದ್ದಾರಂತೆ.’

ಕೇಶವಾಚಾರ್ಯ ಅನಗತ್ಯವಾಗಿ ವಿವರ ನೀಡುವ ಮೂಲಕ ಅಹ್ಮದ್ ಬಾವಾನ ಗೈರುಹಾಜರಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾನೆ ಎಂದರಿತ ಚಂದ್ರಣ್ಣ, ಅಣ್ಣನಿಗೆ ಬೇಸರವಾಗಬಾರದೆಂಬ ಕಾರಣದಿಂದ, ‘ಹೌದಾ? ಛೇ, ಛೇ’ ಎಂದು ಲೊಚಗುಟ್ಟಿ, ‘ನಾನು ಸುಮ್ಮನೆ ಅವನ ಬಗ್ಗೆ ತಪ್ಪು ಯೋಚನೆ ಮಾಡಿಬಿಟ್ಟೆ.’ ಎಂಬ ಮಾತೂ ಜೋಡಿಸಿದ.

‘ನಿನಗೆ ಇನ್ನೊಂದು ಸಂಗತಿ ಗೊತ್ತುಂಟಾ?’ ಎಂದು ಪ್ರಶ್ನಿಸಿದ ಕೇಶವಾಚಾರ್ಯ ಚಂದ್ರಣ್ಣನ ಗಮನವನ್ನು ಸೆಳೆಯುವವನಂತೆ ಸ್ವಲ್ಪ ಹೊತ್ತು ಸುಮ್ಮನಿದ್ದು, ಬಳಿಕ ಹೇಳಿದ. ‘ನಿನ್ನ ಆ ಮುದುಕಿ, ನಾಳೆ ಸಂಜೆ ಮತ್ತೆ ಬರ‍್ತಾಳಂತೆ. ನೀನು ಎಲ್ಲಿಗೂ ಹೋಗದೆ ಅಂಗಡಿಯಲ್ಲೇ ಇರಬೇಕಂತೆ’

‘ಯಾಕೆ! ಮತ್ಯಾಕೆ ಬರುವುದು? ನನ್ನ ಲೆಖ್ಖಾಚಾರದಲ್ಲಿ ಹೆಚ್ಚು ಕಡಿಮೆ ಆಗಿದೆಯಂತೆಯಾ ? ಹಾಗೆ ಹೇಳುವುದಾದರೆ ಒಂದು ಹತ್ತು ಹದಿನೈದು ರೂಪಾಯಿ ಜಾಸ್ತಿಯೇ ಆಗಿದೆ ನಾನು ಕೂಡಿಸಿದ್ದು.’ ಚಂದ್ರಣ್ಣ ಅಸಹನೆಯಿಂದಲೇ ಹೇಳಿದ್ದ.

ಕೇಶವಾಚಾರ್ಯ ವಿಷಾದದಿಂದೆಂಬಂತೆ ಉತ್ತರಿಸಿದ

‘ನಿನ್ನ ಲೆಖ್ಖಾಚಾರ ಹೆಚ್ಚು ಕಮ್ಮಿಯಾಗಿರುತ್ತಿದ್ದರೇ ಚೆನ್ನಾಗಿತ್ತು ಚಂದ್ರು, ಆದರೆ ಅವಳು ನಿನ್ನನ್ನು ಕಾಣಲು ಬರುವುದು ಬೇರೆಯೇ ಕಾರಣಕ್ಕೆ. ಹೇಳಿದ್ರೆ ನೀನು ನಂಬಲಿಕ್ಕಿಲ್ಲ’ ಎಂದವನು ಸ್ವಲ್ಪ ತಡೆದು ಒಂದೇ ಉಸಿರಿನಲ್ಲಿ ಹೇಳಿದ, ‘ನಾಳದು ಶುಕ್ರವಾರ ಬೆಳಗ್ಗೆ ಅವಳು ಗೋಡೆ ಕೆಲಸ ಆರಂಭಿಸುತ್ತಾಳಂತೆ. ನಿನ್ನ ಹತ್ರ ಇರುವ ಆ ‘ಗೋಡೆಯ ತುಂಡಿ’ನ ಒಂದು ಸಣ್ಣ ಚೂರಾದರೂ ನೀನು ಅವಳಿಗೆ ಕೊಡಬೇಕಂತೆ. ಅದನ್ನು ಸೇರಿಸಿಯೇ ಮನೆ ಗೋಡೆ ಕಟ್ಟಿಸಬೇಕೆಂದು ಅವಳಿಗೆ ಕಳೆದ ಒಂದು ವರ್ಷದಿಂದಲೂ ಆಸೆಯಿತ್ತಂತೆ.’

ಸರಕಾರಿ ಬಾವಿಯೊಳಗಿದ್ದ ಅದ್ರಾಮಬ್ಯಾರಿ ಗಹಗಹಿಸಿ ನಕ್ಕ.

ಬೊಳುವಾರು ಮಹಮದ್ ಕುಂಞಿ

ಸಗಣಿ ಮತ್ತು ಮೇಲು ಗೊಬ್ಬರ

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ತಿರುಗಿದರು ಎಂಬಂತಿದೆ ನಮ್ಮ ರೈತರ ಪರಿಸ್ಥಿತಿ. ತಮ್ಮ ಪರಿಸರದಲ್ಲಿಯೇ ಲಭ್ಯವಿರುವ ಅತ್ಯುತ್ತಮ ಸ್ಯ ಪೋಶಕಾಂಶಗಳನ್ನು ಸಮರ್ಪಕವಾಗಿ ಬಳಸುವ ರೀತಿಯೇ ಬಹುತೇಕ ರೈತರಿಗೆ ಅಪರಿಚಿತವಾಗಿಯೇ ಉಳಿದಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

ಕೃಷಿಭೂಮಿ ಇದ್ದ ಮೇಲೆ ಜಾನುವಾರುಗಳು ಇರಲೇಬೇಕು ಎನ್ನುವ ಸತ್ಯವನ್ನು ನಮ್ಮ ಬಹುತೇಕ ರೈತರು ಮರೆತಿದ್ದಾರೆ. ಇದರ ಫಲವಾಗಿಯೇ ರಸಗೊಬ್ಬರಗಳ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ರಸಗೊಬ್ಬರಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗಿದರೂ ಅವಲಂಬನೆ ಬಿಟ್ಟಿಲ್ಲದಿರುವುದು ಆಶ್ಚರ್ಯಕರ ಸಂಗತಿ. ಜಾನುವಾರುಗಳು ಇದ್ದ ಸಂದರ್ಭದಲ್ಲಿ ಗೊಬ್ಬರಗಳಿಗಾಗಿ ಮಾರುಕಟ್ಟೆ ನೋಡಬೇಕಾದ ಸಂದರ್ಭಗಳು ಅತಿ ಕಡಿಮೆ. ಕನಿಷ್ಠ ಒಂದು ಎಕರೆ ಜಮೀನಿದ್ದರೂ ಒಂದು ಜೊತೆ ಎತ್ತು, ಹಸು ಒಂದೆರಡಾದರೂ ಕುರಿ, ಮೇಕೆ ಅವಶ್ಯಕ. ಈ ಜಾನುವಾರುಗಳ ಸಾಕಣಿಕೆ ರೈತರಿಗೆ ಆರ್ಥಿಕವಾಗಿಯೂ ಲಾಭದಾಯಕ. ಜೊತೆಗೆ ಗೊಬ್ಬರಗಳಿಗಾಗಿ ಮಾಡುವ ಖರ್ಚನ್ನು ಇವು ಸಾಕಷ್ಟು ತಗ್ಗಿಸುತ್ತದೆ. ಆದ್ದರಿಂದ ಇವುಗಳ ಸಗಣಿಯನ್ನೇ ಬಳಸಿಕೊಂಡು ಸತ್ವಯುತ ಗೊಬ್ಬರ ತಯಾರಿಕೆ ಸಾಧ್ಯ.

ತಯಾರಿಸುವ ವಿಧಾನ

ಹಸು, ಕುರಿ, ಮೇಕೆ ಇತ್ಯಾದಿ ಜಾನುವಾರುಗಳ ಹಸಿ ಸಗಣಿ ಸಂಗ್ರಹಿಸಿಕೊಳ್ಳಬೇಕು. ಇದರ ಒಟ್ಟು ಪ್ರಮಾಣ ೨೫ರಿಂದ ೩೦ ಕೆಜಿ ಇರಲಿ. ಸಗಣಿಯಲ್ಲಿರುವ ಕಸ ಕಡ್ಡಿಯನ್ನು ತೆಗೆಯಬೇಕು. ಒಂದು ಗೋಣಿಚೀಲದಲ್ಲಿ ಈ ಸಗಣಿಯನ್ನು ತುಂಬಿ ಅದರ ಬಾಯಿಯನ್ನು ಬಿಗಿಯಾಗಿ ಕಟ್ಟಬೇಕು. ಇದನ್ನು ೨೦೦ ಲೀಟರ್ ನೀರು ತುಂಬಿದ ಡ್ರಮ್ಮಿನ ಮೇಲ್ಬಾಗದಲ್ಲಿ ಇಟ್ಟ ದೊಣ್ಣೆಗೆ ಅಡ್ಡವಾಗಿ ಕಟ್ಟಿ ಇಳಿಬಿಡಬೇಕು. ಮರು ದಿನಕ್ಕೊಮ್ಮೆ ಚೀಲವನ್ನು ನೀರಿನಿಂದ ಎತ್ತಿ ಇಳಿಸಬೇಕು. ಎರಡು ವಾರಗಳಲ್ಲಿ ಚೀಲದಲ್ಲಿರುವ ಪೋಷಕಾಂಶವು ತನ್ನ ಗುಣವನ್ನು ಬಿಟ್ಟುಕೊಡುತ್ತದೆ. ಮೊದಲ ಕೆಲವು ದಿನಗಳಲ್ಲಿ ಅಮೋನಿಯಾದ ಕಟ್ಟು ವಾಸನೆಯಿರುತ್ತದೆ. ಎರಡು ವಾರದೊಳಗೆ ಇದರ ಕಟ್ಟುವಾಸನೆ ಕಡಿವೆಯಾಗುತ್ತದೆ. ಡ್ರಮ್ಮ್‌ನಲ್ಲಿನ ದ್ರಾವಣವು ಕಂದು ಬಣ್ಣಕ್ಕೆ ತಿರುಗಿದಾಗ ಸಿಂಪಡಣೆಗೆ ಬಳಸಬಹುದು.

ಬಳಸವ ವಿಧಾನ

ಯಾವುದೇ ಬೆಳೆಗೆ ಈ ದ್ರಾವಣವನ್ನು ಮೇಲು ಗೊಬ್ಬರವಾಗಿ ಬಳಸಬಹುದು. ಇದು ಭಾರಿ ಪರಿಣಾಮಕಾರಿ. ಒಂದು ಲೀಟರ್ ನೀರು ಸೇರಿಸಿ ಬಳಸಬೇಕು. ಒಂದು ಡ್ರಮ್ ದ್ರಾವಣಕ್ಕೆ ಸ್ಪಲ್ಪ ಅರಿಶಿನ ಪುಡಿ ಮತ್ತು ಅರ್ಧ ಲೀಟರ್‌ನಷ್ಟು ಜೇನು ತುಪ್ಪ ಸೇರಿಸಿ ಚೆನ್ನಾಗಿ ತಿರುಗಿಸಿ ಒಂದು ದಿನ ಕಳಿಸಿ ಸಿಂಪಡಿಸಿದರೆ ಹೆಚ್ಚಿನ ಪರಿಣಾಮವುಂಟಾಗುತ್ತದೆ. ಗೋಣಿ ಚೀಲದಲ್ಲಿ ಉಳಿದಿರುವ ಸಗಣಿಯನ್ನು ತೋಟದ ಬೆಳೆಗಳ ಬುಡಕ್ಕೆ ಹಾಕಬಹುದು ಅಥವಾ ಕಾಂಪೋಸ್ಟ್ ಗುಂಡಿಗೆ ಹಾಕಬೇಕು.

ಲಾಭ: ಕೀನ್ಯಾ ದೇಶದ ಅನೇಕ ರೈತರು ಈ ವಿಧಾನ ಅನುಸರಿಸಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಶ್‌ಗಳಲ್ಲದೇ ಇತರೆ ಲಘು ಪೋಷಕಾಂಶಗಳು,ಬೆಳೆವರ್ಧಕಗಳು ಸಸ್ಯಗಳಿಗೆ ದೊರೆಯುತ್ತವೆ. ಇದು ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ದ್ರವಗೊಬ್ಬರವನ್ನು ತಯಾರಿಸುವ ಖರ್ಚು ಕಡಿಮೆ. ಬಳಸುವ ಪದ್ದತಿಯೂ ಸರಳ. ಇದರಿಂದ ರಾಸಾಯನಿಕ ಗೊಬ್ಬರದ ಮೇಲಿನ ಅವಶ್ಯಕತೆಯಿರುವುದಿಲ್ಲ.

ಗೋಣಿಚೀಲದಲ್ಲಿ ಹಳೆಯ ಸಗಣಿ ಹಾಕಿದರೆ ಎರಡು ವಾರಗಳಲ್ಲಿ ಅದು ತೂತಾಗಬಹುದು. ಗೋಣಿಚೀಲವನ್ನು ಬಳಸುವ ಉದ್ದೇಶವೇನೆಂದರೆ ಎರಡು ವಾರದ ಬಳಿಕ ದ್ರಾವಣವನ್ನು ಸೋಸುವ ಅಗತ್ಯವಿರುವುದಿಲ್ಲ. ನೀರು ತುಂಬಿದ ಡ್ರಮ್ಮಿಗೆ ನೇರವಾಗಿ ಸಗಣಿ ಹಾಕಿ ಎರಡು ವಾರವದವರೆಗೆ ಆಗಾಗ ಕಲಕುತ್ತಿದ್ದು ಬಳಿಕ ಸೋಸಿ ಬಳಸಬಹುದು. ಕಾಫಿ ಗಿಡಗಳಿಗೂ ಇದನ್ನು ಬಳಸಬಹುದು. ಈ ದ್ರವಗೊಬ್ಬರ ಬಳಸುವುದರಿಂದ ಕ್ರಿಮಿ ಕೀಟಗಳ ಬಾಧೆ ಕಡಿಮೆಯಾಗುತ್ತದೆ.

Saturday, September 18, 2010

ಶಕ್ತಿವರ್ಧಕ ಶುಂಠಿ

-ಡಾ. ಟಿ. ವೆಂಕಟಶಾಮಯ್ಯ

ಪ್ರಮುಖವಾದ ಸಾಂಬಾರ ಪದಾರ್ಥಗಳಲ್ಲಿ ಶುಂಟಿ ಕೂಡ ಒಂದು. ಶುಂಠಿಯಲ್ಲಿ ಉಪಯೋಗ ಮಾಡುವ ಭಾಗ, ಭೂಮಿಯ ಒಳಭಾಗದಲ್ಲಿ ಬೆಳೆಯುವ ಗುಪ್ತ ಕಾಂಡ. ಚಟ್ನಿ, ಉಪ್ಪಿನಕಾಯಿ ಮುಂತಾದ ವ್ಯಂಜನಗಳಲ್ಲಿ ಮತ್ತು ಮಾಂಸಾಹಾರದ ಅಡುಗೆಗಳಲ್ಲಿ ವಿಶೇಷವಾಗಿ ಶುಂಠಿಯನ್ನು ಉಪಯೋಗಿಸುತ್ತಾರೆ. ಇದಲ್ಲದೆ ಬೇಕರಿ ಪದಾಥಗಳು ಹಾಗೂ ವಿವಿಧ ಪಾನೀಯಗಳನ್ನು ತಯಾರಿಸಲು ಶುಂಠಿಯನ್ನು ಉಪಯೋ ಮಾಡುತ್ತಾರೆ. ಒಣಗಿದ ಹಾಗೂ ಹಸಿಶುಂಟಿಗಳೆರಡನ್ನೂ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ನಮ್ಮ ದೇಹದಲ್ಲಿ ಪಚನಶಕ್ತಿಯನ್ನು ಹೆಚ್ಚಿಸುವ ಇದನ್ನು ಆಯುರ್ವೆದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.

ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಶುಂಟಿಯನ್ನು ನಾಗರ, ವಿಶ್ವೌಷಧ ವಿಶ್ವಭೇಷಜ. ಮಹೌಷಧ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕೃತದ ಈ ಹೆಸರುಗಳೇ ಸೂಚಿಸುವಂತೆ ಇದು ಒಂದು ಅಪೂರ್ವ ಔಷಧ ದ್ಯವ್ಯ, ಕಟು(ಖಾರ) ರಸವನ್ನು ಹೊಂದಿರುವ ಇದು ಜೀರ್ಣರಸದೊಂದಿಗೆ ಸೇರಿ ಪಚನವಾದಾಗ ಮಧುರ(ಸಿಹಿ)ಭಾವವನ್ನು ಪಡೆಯುವುದರಿಂದ ಇದು ಒಂದು ಶಕ್ತಿವರ್ಧಕವಾಗಿದೆ. ಗುಣದಲ್ಲಿ ಸ್ನಿಗ್ಧ ಮತ್ತು ಉಷ್ಣ ರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ನಾಶ ಮಾಡುತ್ತದೆ.

ಶ್ವಾಸಕೋಶ, ಅರುಚಿ, ಪಾಂಡು(ರಕ್ತಹೀನತೆ), ಅತಿಸಾರ, ಜ್ವರ, ಕೆಮ್ಮು ಮುಂತಾದ ರೋಗಗಳಲ್ಲಿ ಉಪಯೋಗಿಸಲ್ಟಡುವ ಇದು ಒಂದು ಶ್ರೇಷ್ಠ ದೀಪನ ಹಾಗೂ ಪಾಚನ ಔಷಧವಾಗಿದೆ. ಇದಲ್ಲದೆ ಅಮವಾತ(ಕೀಲುನೋವು) ಗ್ರಹಣಿ, ಗುಲ್ಮ, ಹೃದ್ರೋಗ, ಅಮಾತಿಸಾರ ಮುಂತಾದ ಅನೇಕ ರೋಗಗಳಲ್ಲಿ ಶುಂಟಿ ಒಂದು ಉತ್ತಮ ಔಷಧಿ. ಹಸಿ ಶುಂಠಿಯನ್ನು ಅದ್ರಕ್ ಎಂದು ಕರೆಯುತ್ತಾರೆ. ಅಡುಗೆ ಮತ್ತು ಔಷಧಿಗಳಲ್ಲಿ ಒಣಶುಂಟಿ ಹಾಗೂ ಹಸಿ ಶುಂಠಿಗಳೆರಡೂ ಉಪಯೋಗಕ್ಕೆ ಬರುತ್ತವೆ.

ಅಮವಾತದಲ್ಲಿ ಉಪಯೋಗ: ವಾಯುವಿನಿಂದ ಕೈಕಾಲುಗಳ ಕೀಲುಗಳಲ್ಲಿ ಬಾವು ಮತ್ತು ನೋವುಗಳು ಇದ್ದರೆ ಅದಕ್ಕೆ ಅಮವಾತ ಅಥವಾ ವಾಯುನೋವು ಎನ್ನುತ್ತಾರೆ. ಇದು ದೇಹದಲ್ಲಿ ಜೀರ್ಣಶಕ್ತಿ ಕುಂದಿದಾಗ, ಉಂಟಾದ ಅಮದೋಷದಿಂದ ಬರುವ ರೋಗ, ಒಳ್ಳೆಯ ಪಚನಕಾರಿಯಾದ ಶುಂಟಿ ಈ ಅಮವಾತ ರೋಗಕ್ಕೆ ಒಂದು ದಿವ್ಯೌಷಧ.

ಹಸಿ ಶುಂಠಿಯನ್ನು ತೆಗೆದುಕೊಂಡು ಕುಟ್ಟಿ ರಸವನ್ನು ತೆಗೆದು ಒಂದು ಚಮಚ ರಸಕ್ಕೆ ಒಂದು ಚಮಚ ಜೇನುತುಪವಪ್ನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ತೆಗೆದುಕೊಂಡರೆ ಪಚನಶಕ್ತಿ ಹೆಚ್ಚಾಗಿ ಅಮದೋಷ ನಿವಾರಣೆಯಾಗಿ ಅಮವಾತ ಅಂದರೆ, ಕೀಲು ನೋವಿನಲ್ಲಿ ಉತ್ತಮ ಲಾಭ ಸಿಗುತ್ತದೆ. ಇದಲ್ಲದೆ ಶುಂಟಿ ರಸ ಮತ್ತು ಜೇನುತಪ್ಪಗಳನ್ನು ತೆಗೆದುಕೊಳ್ಳುವುದರಿಂದ ಶೀತ ನೆಗಡಿ ಅಜೀರ್ಣಗಳು ದೂರಾಗುತ್ತವೆ. ಸಕ್ಕರೆ ರೋಗವುಳ್ಳವರು ಜೇನುತುಪ್ಪಕ್ಕೆ ಬದಲಾಗಿ ಸೈಂಧವ ಲವಣವನ್ನು ಉಪಯೋಗಿಸಬಹುದು. ಒಣಶುಂಟಿ, ಅಮೃತಬಳ್ಳ ಮತ್ತು ಜೇಷ್ಠ ಮಧು ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ವಿಧಿವತ್ತಾಗಿ ಕಷಾಯ ಮಾಡಿ. ಅಂದರೆ ಮೇಲ ಹೇಲೀರುವ ಮೂರು ಔಷಧಿಗಳ ಹದಿನಾರರಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಅದರಲ್ಲಿ ಕಾಲುಭಾಗ ಉಳಿಯುವಂತೆ ಕಷಾಯ ಮಾಡಿಕೊಳ್ಳಬೇಕು. ಇದಕ್ಕೆ ಬೆಲ್ಲ ಅಥವಾ ಜೇನುತಪ್ಪ ಸೇರಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬರಿಯ ಹೊಟ್ಟೆಯಲ್ಲಿ ತೆಗೆದುಕೊಂಡು ಪಥ್ಯ ಮಾಡಿದರೆ ಅಮವಾತ ಗುಣವಾಗುತ್ತದೆ. ಇದು ಅಮವಾತಕ್ಕೆ ಸುಲಭ ಹಾಗೂ ಪರಿಣಾಮಕಾರಿ ಔಷಧವಾಗಿದೆ. ಇದಲ್ಲದೆ ಕೆಲವರು ಒಣಶುಂಟಿ ಚೂರ್ಣವನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಲು ಹೇಳುತ್ತಾರೆ. ಆಯುರ್ವೇದ ವೈದ್ಯರು, ನಾಗರಾಧಿಕ್ಷಾಥ, ನಾಗರಾದಿಚೂರ್ಣ ಮುಂತಾದ ಔಷಧಿಗಳನ್ನು ತಯಾರಿಸಿ ಅಮವಾತದಲ್ಲಿ ಉಪಯೋಗಿಸುತ್ತಾರೆ.

ಅಜೀರ್ಣ ಮತ್ತು ಅಮಾತಿಸಾರಗಳಲ್ಲಿ: ಅಜೀರ್ಣ ಮತ್ತು ಅಜೀರ್ಣದಿಂದ ಉಂಟಾಗುವ ಅತಿಸಾರದಲ್ಲಿ ೨೫೦ರಿಂದ ೩೦೦ ಮಿ. ಗ್ರಾಂ. ಒಣ ಶುಂಟಿ ಚೂರ್ಣವನ್ನು ಸಕ್ಕರೆ ಮತ್ತು ತುಪ್ಪ ಬೆರೆಸಿ ತೆಗೆದುಕೊಂಡರೆ ಒಳ್ಳೆಯ ಲಾಭ ಸಿಗುತ್ತದೆ.

ಶುಂಠಿಯ ಕ್ಷೀರಪಾಕ: ಒಂದು ಚಮಚ ಒಣಶುಂಟಿ ಪುಡಿಗೆ ಒಂದು ಲೋಟ ನೀರು, ಒಂದು ಲೋಟ ಹಾಲು ಕೂಡಿಸಿ ಚೆನ್ನಾಗಿ ಕಾಯಿಸಬೇಕು. ನೀರನ ಭಾಗವೆಲ್ಲಾ ಅವಿಯಾತಿ ಹೋಗಿ ಹಾಲು ಮಾತ್ರ ಉಳಿದಾಗ (ಒಂದು ಲೋಟ ಹಾಲು ಮಾತ್ರ ಉಳಿಯಬೇಕು)ನದನ್ನು ಒಲೆಯ ಮೇಲಿಂದ ತೆಗೆದು ಶೋಧಿಸಿಕೊಂಡು ಅದಕ್ಕೆ ಬೆಲ್ಲ ಅಥವಾ ಜೇನುತಪ್ಪುವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ತೆಗೆದುಕೊಂಡರೆ ದೇಹದಲ್ಲಿ ಪಚನ ಶಕ್ತಿ ಹೆಚ್ಚಾಗುತ್ತದೆ. ಶೀಥ ಕೆಮ್ಮುಗಳು ಬಾಧಿಸುವುದಿಲ್ಲ. ಮಳೆಗಾಲಕ್ಕೆ ಇದು ಒಂದು ಉತ್ತಮ ಪಾನೀಯ, ಕೆಲವರಿಗೆ ಹಾಲು ಕುಡಿದರೆ ಜೀರ್ಣವಾಗುವುದಿಲ್ಲ. ಅಂತಹವರು ಮೇಲೆ ಹೇಳಿರುವ ಕ್ಷೀರ ಪಾಕ ಮಾಡಿ ತೆಗೆದುಕೊಳ್ಳಬಹುದು.

ಮಕ್ಕಳ ಶೀತಕ್ಕೆ: ಮಕ್ಕಳಿಗೆ ನೆಗಡಿ ಶೀತವಾಗಿ ಜ್ವರ ಬಂದು, ಮೂಗು ಕಟ್ಟಿ, ಉಸಿರಾಡಲು ತೊಂದರೆಯಾದಾಗ ೩-೬ ಹನಿ ಹಸಿ ಶುಂಠಿ ರಸ ಒಂದು ಚಮಚ ಜೇನುತಪ್ಪ ಮತ್ತು ೨-೩ ಹನಿ ತುಳಸಿ ರಸ ಸೇರಿಸಿಕೊಟ್ಟರೆ ಬಹು ಬೇಗ ಶೀತ ನೆಗಡಿಗಳನ್ನು ಕಡಿಮೆಯಾಗಿ ಮಗುವಿಗೆ ಆರಾಮವೆನಿಸುತ್ತದೆ.

ದೇಹದ ತೂಕ ಕಡಿಮೆ ಮಾಡಲು: ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ. ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ. ಶುಂಠಿಯನ್ನು ಪ್ರತಿ ದಿನ ಊಟದಲ್ಲಿ ಸಾಕಷ್ಟು ಬಳಸಿದರೆ, ಅದು ಊಟಕ್ಕೆ ರುಚಿಯನ್ನು ಕೊಡುವುದೇ ಅಲ್ಲದೆ, ಪಚನ ಕ್ರಿಯೆಯನ್ನು ವೃದ್ಧಿಗೊಳಿಸಿ, ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ದೇಹಕ್ಕೆ ಪೋಷಣೆ ಕೊಟ್ಟು ಆರೋಗ್ಯವನ್ನು ಕಾಪಾಡುತ್ತದೆ.