Saturday, September 18, 2010

ಶಕ್ತಿವರ್ಧಕ ಶುಂಠಿ

-ಡಾ. ಟಿ. ವೆಂಕಟಶಾಮಯ್ಯ

ಪ್ರಮುಖವಾದ ಸಾಂಬಾರ ಪದಾರ್ಥಗಳಲ್ಲಿ ಶುಂಟಿ ಕೂಡ ಒಂದು. ಶುಂಠಿಯಲ್ಲಿ ಉಪಯೋಗ ಮಾಡುವ ಭಾಗ, ಭೂಮಿಯ ಒಳಭಾಗದಲ್ಲಿ ಬೆಳೆಯುವ ಗುಪ್ತ ಕಾಂಡ. ಚಟ್ನಿ, ಉಪ್ಪಿನಕಾಯಿ ಮುಂತಾದ ವ್ಯಂಜನಗಳಲ್ಲಿ ಮತ್ತು ಮಾಂಸಾಹಾರದ ಅಡುಗೆಗಳಲ್ಲಿ ವಿಶೇಷವಾಗಿ ಶುಂಠಿಯನ್ನು ಉಪಯೋಗಿಸುತ್ತಾರೆ. ಇದಲ್ಲದೆ ಬೇಕರಿ ಪದಾಥಗಳು ಹಾಗೂ ವಿವಿಧ ಪಾನೀಯಗಳನ್ನು ತಯಾರಿಸಲು ಶುಂಠಿಯನ್ನು ಉಪಯೋ ಮಾಡುತ್ತಾರೆ. ಒಣಗಿದ ಹಾಗೂ ಹಸಿಶುಂಟಿಗಳೆರಡನ್ನೂ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ನಮ್ಮ ದೇಹದಲ್ಲಿ ಪಚನಶಕ್ತಿಯನ್ನು ಹೆಚ್ಚಿಸುವ ಇದನ್ನು ಆಯುರ್ವೆದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.

ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಶುಂಟಿಯನ್ನು ನಾಗರ, ವಿಶ್ವೌಷಧ ವಿಶ್ವಭೇಷಜ. ಮಹೌಷಧ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕೃತದ ಈ ಹೆಸರುಗಳೇ ಸೂಚಿಸುವಂತೆ ಇದು ಒಂದು ಅಪೂರ್ವ ಔಷಧ ದ್ಯವ್ಯ, ಕಟು(ಖಾರ) ರಸವನ್ನು ಹೊಂದಿರುವ ಇದು ಜೀರ್ಣರಸದೊಂದಿಗೆ ಸೇರಿ ಪಚನವಾದಾಗ ಮಧುರ(ಸಿಹಿ)ಭಾವವನ್ನು ಪಡೆಯುವುದರಿಂದ ಇದು ಒಂದು ಶಕ್ತಿವರ್ಧಕವಾಗಿದೆ. ಗುಣದಲ್ಲಿ ಸ್ನಿಗ್ಧ ಮತ್ತು ಉಷ್ಣ ರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ನಾಶ ಮಾಡುತ್ತದೆ.

ಶ್ವಾಸಕೋಶ, ಅರುಚಿ, ಪಾಂಡು(ರಕ್ತಹೀನತೆ), ಅತಿಸಾರ, ಜ್ವರ, ಕೆಮ್ಮು ಮುಂತಾದ ರೋಗಗಳಲ್ಲಿ ಉಪಯೋಗಿಸಲ್ಟಡುವ ಇದು ಒಂದು ಶ್ರೇಷ್ಠ ದೀಪನ ಹಾಗೂ ಪಾಚನ ಔಷಧವಾಗಿದೆ. ಇದಲ್ಲದೆ ಅಮವಾತ(ಕೀಲುನೋವು) ಗ್ರಹಣಿ, ಗುಲ್ಮ, ಹೃದ್ರೋಗ, ಅಮಾತಿಸಾರ ಮುಂತಾದ ಅನೇಕ ರೋಗಗಳಲ್ಲಿ ಶುಂಟಿ ಒಂದು ಉತ್ತಮ ಔಷಧಿ. ಹಸಿ ಶುಂಠಿಯನ್ನು ಅದ್ರಕ್ ಎಂದು ಕರೆಯುತ್ತಾರೆ. ಅಡುಗೆ ಮತ್ತು ಔಷಧಿಗಳಲ್ಲಿ ಒಣಶುಂಟಿ ಹಾಗೂ ಹಸಿ ಶುಂಠಿಗಳೆರಡೂ ಉಪಯೋಗಕ್ಕೆ ಬರುತ್ತವೆ.

ಅಮವಾತದಲ್ಲಿ ಉಪಯೋಗ: ವಾಯುವಿನಿಂದ ಕೈಕಾಲುಗಳ ಕೀಲುಗಳಲ್ಲಿ ಬಾವು ಮತ್ತು ನೋವುಗಳು ಇದ್ದರೆ ಅದಕ್ಕೆ ಅಮವಾತ ಅಥವಾ ವಾಯುನೋವು ಎನ್ನುತ್ತಾರೆ. ಇದು ದೇಹದಲ್ಲಿ ಜೀರ್ಣಶಕ್ತಿ ಕುಂದಿದಾಗ, ಉಂಟಾದ ಅಮದೋಷದಿಂದ ಬರುವ ರೋಗ, ಒಳ್ಳೆಯ ಪಚನಕಾರಿಯಾದ ಶುಂಟಿ ಈ ಅಮವಾತ ರೋಗಕ್ಕೆ ಒಂದು ದಿವ್ಯೌಷಧ.

ಹಸಿ ಶುಂಠಿಯನ್ನು ತೆಗೆದುಕೊಂಡು ಕುಟ್ಟಿ ರಸವನ್ನು ತೆಗೆದು ಒಂದು ಚಮಚ ರಸಕ್ಕೆ ಒಂದು ಚಮಚ ಜೇನುತುಪವಪ್ನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ತೆಗೆದುಕೊಂಡರೆ ಪಚನಶಕ್ತಿ ಹೆಚ್ಚಾಗಿ ಅಮದೋಷ ನಿವಾರಣೆಯಾಗಿ ಅಮವಾತ ಅಂದರೆ, ಕೀಲು ನೋವಿನಲ್ಲಿ ಉತ್ತಮ ಲಾಭ ಸಿಗುತ್ತದೆ. ಇದಲ್ಲದೆ ಶುಂಟಿ ರಸ ಮತ್ತು ಜೇನುತಪ್ಪಗಳನ್ನು ತೆಗೆದುಕೊಳ್ಳುವುದರಿಂದ ಶೀತ ನೆಗಡಿ ಅಜೀರ್ಣಗಳು ದೂರಾಗುತ್ತವೆ. ಸಕ್ಕರೆ ರೋಗವುಳ್ಳವರು ಜೇನುತುಪ್ಪಕ್ಕೆ ಬದಲಾಗಿ ಸೈಂಧವ ಲವಣವನ್ನು ಉಪಯೋಗಿಸಬಹುದು. ಒಣಶುಂಟಿ, ಅಮೃತಬಳ್ಳ ಮತ್ತು ಜೇಷ್ಠ ಮಧು ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ವಿಧಿವತ್ತಾಗಿ ಕಷಾಯ ಮಾಡಿ. ಅಂದರೆ ಮೇಲ ಹೇಲೀರುವ ಮೂರು ಔಷಧಿಗಳ ಹದಿನಾರರಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಅದರಲ್ಲಿ ಕಾಲುಭಾಗ ಉಳಿಯುವಂತೆ ಕಷಾಯ ಮಾಡಿಕೊಳ್ಳಬೇಕು. ಇದಕ್ಕೆ ಬೆಲ್ಲ ಅಥವಾ ಜೇನುತಪ್ಪ ಸೇರಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬರಿಯ ಹೊಟ್ಟೆಯಲ್ಲಿ ತೆಗೆದುಕೊಂಡು ಪಥ್ಯ ಮಾಡಿದರೆ ಅಮವಾತ ಗುಣವಾಗುತ್ತದೆ. ಇದು ಅಮವಾತಕ್ಕೆ ಸುಲಭ ಹಾಗೂ ಪರಿಣಾಮಕಾರಿ ಔಷಧವಾಗಿದೆ. ಇದಲ್ಲದೆ ಕೆಲವರು ಒಣಶುಂಟಿ ಚೂರ್ಣವನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಲು ಹೇಳುತ್ತಾರೆ. ಆಯುರ್ವೇದ ವೈದ್ಯರು, ನಾಗರಾಧಿಕ್ಷಾಥ, ನಾಗರಾದಿಚೂರ್ಣ ಮುಂತಾದ ಔಷಧಿಗಳನ್ನು ತಯಾರಿಸಿ ಅಮವಾತದಲ್ಲಿ ಉಪಯೋಗಿಸುತ್ತಾರೆ.

ಅಜೀರ್ಣ ಮತ್ತು ಅಮಾತಿಸಾರಗಳಲ್ಲಿ: ಅಜೀರ್ಣ ಮತ್ತು ಅಜೀರ್ಣದಿಂದ ಉಂಟಾಗುವ ಅತಿಸಾರದಲ್ಲಿ ೨೫೦ರಿಂದ ೩೦೦ ಮಿ. ಗ್ರಾಂ. ಒಣ ಶುಂಟಿ ಚೂರ್ಣವನ್ನು ಸಕ್ಕರೆ ಮತ್ತು ತುಪ್ಪ ಬೆರೆಸಿ ತೆಗೆದುಕೊಂಡರೆ ಒಳ್ಳೆಯ ಲಾಭ ಸಿಗುತ್ತದೆ.

ಶುಂಠಿಯ ಕ್ಷೀರಪಾಕ: ಒಂದು ಚಮಚ ಒಣಶುಂಟಿ ಪುಡಿಗೆ ಒಂದು ಲೋಟ ನೀರು, ಒಂದು ಲೋಟ ಹಾಲು ಕೂಡಿಸಿ ಚೆನ್ನಾಗಿ ಕಾಯಿಸಬೇಕು. ನೀರನ ಭಾಗವೆಲ್ಲಾ ಅವಿಯಾತಿ ಹೋಗಿ ಹಾಲು ಮಾತ್ರ ಉಳಿದಾಗ (ಒಂದು ಲೋಟ ಹಾಲು ಮಾತ್ರ ಉಳಿಯಬೇಕು)ನದನ್ನು ಒಲೆಯ ಮೇಲಿಂದ ತೆಗೆದು ಶೋಧಿಸಿಕೊಂಡು ಅದಕ್ಕೆ ಬೆಲ್ಲ ಅಥವಾ ಜೇನುತಪ್ಪುವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ತೆಗೆದುಕೊಂಡರೆ ದೇಹದಲ್ಲಿ ಪಚನ ಶಕ್ತಿ ಹೆಚ್ಚಾಗುತ್ತದೆ. ಶೀಥ ಕೆಮ್ಮುಗಳು ಬಾಧಿಸುವುದಿಲ್ಲ. ಮಳೆಗಾಲಕ್ಕೆ ಇದು ಒಂದು ಉತ್ತಮ ಪಾನೀಯ, ಕೆಲವರಿಗೆ ಹಾಲು ಕುಡಿದರೆ ಜೀರ್ಣವಾಗುವುದಿಲ್ಲ. ಅಂತಹವರು ಮೇಲೆ ಹೇಳಿರುವ ಕ್ಷೀರ ಪಾಕ ಮಾಡಿ ತೆಗೆದುಕೊಳ್ಳಬಹುದು.

ಮಕ್ಕಳ ಶೀತಕ್ಕೆ: ಮಕ್ಕಳಿಗೆ ನೆಗಡಿ ಶೀತವಾಗಿ ಜ್ವರ ಬಂದು, ಮೂಗು ಕಟ್ಟಿ, ಉಸಿರಾಡಲು ತೊಂದರೆಯಾದಾಗ ೩-೬ ಹನಿ ಹಸಿ ಶುಂಠಿ ರಸ ಒಂದು ಚಮಚ ಜೇನುತಪ್ಪ ಮತ್ತು ೨-೩ ಹನಿ ತುಳಸಿ ರಸ ಸೇರಿಸಿಕೊಟ್ಟರೆ ಬಹು ಬೇಗ ಶೀತ ನೆಗಡಿಗಳನ್ನು ಕಡಿಮೆಯಾಗಿ ಮಗುವಿಗೆ ಆರಾಮವೆನಿಸುತ್ತದೆ.

ದೇಹದ ತೂಕ ಕಡಿಮೆ ಮಾಡಲು: ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ. ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ. ಶುಂಠಿಯನ್ನು ಪ್ರತಿ ದಿನ ಊಟದಲ್ಲಿ ಸಾಕಷ್ಟು ಬಳಸಿದರೆ, ಅದು ಊಟಕ್ಕೆ ರುಚಿಯನ್ನು ಕೊಡುವುದೇ ಅಲ್ಲದೆ, ಪಚನ ಕ್ರಿಯೆಯನ್ನು ವೃದ್ಧಿಗೊಳಿಸಿ, ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ದೇಹಕ್ಕೆ ಪೋಷಣೆ ಕೊಟ್ಟು ಆರೋಗ್ಯವನ್ನು ಕಾಪಾಡುತ್ತದೆ.

No comments:

Post a Comment