Saturday, September 18, 2010

ಎಷ್ಟು ಸಮಯ ಈ ಮುನಿಸು?

ಉದಯವಾಣಿ, ಮಹಿಳಾ ಸಂಪದ, ಶುಕ್ರವಾರ ೩-೯-೨೦೧೦

ಎಷ್ಟು ಸಮಯ ಈ ಮುನಿಸು?

ಪ್ರೀತಿಯ
ನನಗೆ ನಿಜವಾಗ್ಲೂ ಆಶ್ಚರ್ಯವಾಗುತ್ತಿದೆ. ನೀನು ಯಾಕೆ ಹೀಗೆ ಬದಲಾಗಿದ್ದಿ ಎಂಬ ಒಂದು ಪ್ರಶ್ನೆಗೆ ಉತ್ತರ ಸಿಗದೆ ಮನಸ್ಸು ತಳಮಳಗೊಂಡಿದೆ. ಕೆಲವು ವರ್ಷಗಳಿಮದ ಜತೆಯಾಗಿಯೇ ಸುತ್ತಾಡುತ್ತಿದ್ದ ಅವಳಿ ಸೋದರರಂತಿದ್ದ ನಾವು ಇಂದು ಮುಖವೊಡ್ಡಿ ಮಾತಾಡದೆ ಸ್ಥಿತಿ ಬರಲು ಏನು ಕಾರಣ?

ನನ್ನ ಆತ್ಮಸಾಕ್ಷಿ ಪ್ರಕಾರ ಹೇಳುವುದಾದರೆ ನಾನೇನೂ ತಪ್ಪು ಮಾಡಿಲ್ಲ. ಆದರೆ ನೀನು ನನ್ನಲ್ಲಿ ಏನೊ ತಪ್ಪು ಕಂಡಿದ್ದಿ. ಅದೇನೆಂದು ಕೆಲವು ಸಲ ಕೇಳಿದರೂ ನೀನು ಉತ್ತರಿಸಲು ಮನಸ್ಸು ಮಾಡಿಲ್ಲ. ನನ್ನ ಗೆಳೆತನ ಸಾಕಾದರೆ ಹೇಳು, ಜತೆಯಾಗಿಯೇ ಒಂದು ಗ್ಲಾಸ್ ಜ್ಯೂಸನ್ನು ಫಿಪ್ಟಿ ಫಿಪ್ಟಿ ಮಾಡಿ ಕುಡಿದು ಮಾತು ಕಡಿಮೆ ಮಾಡೋಣ. ನಿನ್ನೆ ಸಮಾಧಾನಕ್ಕೆ ಅದು ಅನಿವಾರ್ಯವಾದರೆ ನಾನು ಅದಕ್ಕೂ ಸಿದ್ದ. ಆದರೆ ನೀನು ಏಕಾ‌ಏಕಿ ಮೌನವಾದೆಯಲ್ಲಾ, ಅದು ಯಾಕೆ?

ಒಂದು ಫಂಕ್ಷನ್‌ಗೆ ಹೋಗುವುದೋ, ಶಾಪಿಂಗ್‌ಗೆ ಹೋಗುವುದೋ, ಹೊಟೇಲ್‌ಗೆ ಹೋಗುವುದೋ.. ಹೀಗೆ ಎಲ್ಲದರಲ್ಲೂ ನಾವು ಜತೆಯಾಗಿಯೇ ಇರುತ್ತಿದ್ದೆವಲ್ಲಾ. ನಿನ್ನ ಬಗ್ಗೆ ಏನಾದರೂ ತಿಳಿಯಬೇಕಿದ್ದರೆ ಸಹೋದ್ಯೋಗಿಗಳು ಮೊದಲು ಕೇಳುವುದೇ ನನ್ನಲ್ಲಾಗಿತ್ತು. ಈಗ ಯಾರಾದರೂ ಹಾಗೆ ಕೇಳಿದರೆ ನಾನು ಏನೆಂದು ಉತ್ತರಿಸಲಿ? ನಾವಿಬ್ಬರು ಸಿಟ್ಟುಮಾಡಿಕೊಂಡು ಮಾತು ಬಿಟ್ಟಿದ್ದೇವೆ ಎನ್ನಲೇ? ಹೇಳು, ನೀನೇ ಉತ್ತರ ಹೇಳು.

ನೀನು ಏಕಾ‌ಏಕಿ ಮೌನಿಯಾಗುವುದು ಇದೇನು ಹೊಸತಲ್ಲ. ಆದರೆ ನನ್ನಲ್ಲಿ ಮಾತು ಬಿಟ್ಟದ್ದು ಇದೇ ಮೊದಲು. ಮಾತು ಬಿಡುವುದು, ಕೋಪಿಸುವುದು.. ಇತ್ಯಾದಿ ನಮ್ಮಂಥವರಿಗೆ ಹೇಳಿದ್ದೇ? ಅದು ಅನಾಗರಿಕತೆ ಎಂದು ಭಾವಿಸಿದವ ನಾನು. ಅಪ್ತ ಸಂಬಂಧ ಬೇಡವಾದರೂ ಮುಖಮುಖ ನೋಡುವಾಗ ಒಂದುನಗು ಸೂಸಲು ಏನಾಗಬೇಕು ಹೇಳು. ಅದರಲ್ಲಿ ನೀನು ಕಳಕೊಳ್ಳುವುದಾದರೂ ಏನು?

ಕೋಪ ಮಾಡಿಕೊಳ್ಳುವುದು ಹೆಂಗಸರ ಕೆಲಸ, ಅವಿದ್ಯಾವಂತರ ಲಕ್ಷಣ ಎಂದೆಲ್ಲಾ ಭಾವಿಸಿದ್ದ ನಾನು, ಈಗ ಅದರ ಬಗ್ಗೆ ಮರಚುಚಿಂತನೆ ಮಾಡಬೇಕಾದ ಕಾಲ ಸನ್ನಿಹಿತವಾದಂತಿದೆ. ಅದಕ್ಕೆ ವೇದಿಕೆ ಒದಗಿಸಿಕೊಟ್ಟವನು ನೀನೇ. ಮೌನದಿಂದ ನೆಮ್ಮದಿ ಸಿಕ್ಕೋಲ್ಲ, ಸಮಸ್ಯೆ ಬಗೆಹರಿಯೋಲ್ಲ, ಆಫ್ತ ವಲಯ ಎಲ್ಲರಿಗೂ ಅಗತ್ಯ. ಆ ವಲಯದೊಂದಿಗೆ ನಗುತ್ತಾ ನಾಲ್ಕು ಮಾತಾಡಿದಾಗ ಮನಸ್ಸಿನ ಭಾರ ಇಳಿಯುತ್ತದೆ.

ಗೆಳೆಯಾ, ನೀನು ನನ್ನಲ್ಲಿ ಹೇಗೂ ಕೋಪಿಸಿಕೊಂಡಿದ್ದೀ. ಆದರೂ ನಾನು ನಿನ್ನಲ್ಲಿ ಕೋಪಿಸಿಕೊಂಡಿಲ್ಲ. ಯಾಕೆಂದರೆ ನಿನ್ನ ಬಗ್ಗೆ ನಾನು ಇದುವರೆಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ನಿನ್ನ ಮನಸ್ಸನ್ನು ಓದುವುದೂ ನನಗೆ ಸಾಧ್ಯವಾಗಿದೆ. ಈ ಓದಿನಲ್ಲಿ ಸಿಕ್ಕಿರುವ ಒಂದು ವಿಷಯವನ್ನು ನಿನಗೆ ಈ ಹೊತ್ತಿನಲ್ಲಿ ನಾನು ಹೇಳಬಹುಸತ್ತೆನೆ. ಸಂಕುಚಿತ ಮನಸ್ಸು ಸಂಶಯ ಪ್ರವೃತ್ತಿ ಯಾವತ್ತೂ ಒಳ್ಳೆಯದಲ್ಲ.

ಇದು ನಮಗೆ ಹಾನಿ ಮಾಡುವುದೇ ಹೆಚ್ಚು. ಒಂದು ವಿಷಯದ ಬಗ್ಗೆ ನಿರ್ದಾರ ಕೈಗೊಳ್ಳುವ ಮೊದಲು, ಇತರರ ಬಗ್ಗೆ ಸಂಶಯಿಸಲು ಆರಂಭಿಸುವ ಮೊದಲು ತುಂಬ ಚಿಂತಿಸಬೇಕು. ಒಂದು ಗಟ್ಟಿ ಸಾಕ್ಷ ಸಿಗದ ಹೊರತು ಹತ್ತಿರವಿದ್ದವರನ್ನು, ಆತ್ಮೀಯರನ್ನು ದೂರು ಮಾಡುವುದು ಒಳ್ಳೆಯದಲ್ಲ. ಆದರಲ್ಲೂ ಸಣ್ಣಪುಟ್ಟ ಕಾರಣಗಳಿಗಾಗಿ ದೀರ್ಘ ಕಾಲದ ಗೆಳೆತನವನ್ನು ಮುರಿಯುವುದು ಸರ್ವಥಾ ಸರಿಯಲ್ಲ. ಪರಸ್ಪರ ಹೊಂದಾನಿಕೆಯೂ ಬೇಕು. ಕ್ಷಮಿಸುವ ಗುಣವೂ ಬೇಕು. ವಿಶ್ವಾಸವಿಲ್ಲದಿದ್ದರೆ ಸ್ನೇಹ ಉಳಿಯುವುದಾದರೂ ಹೇಗೆ?

ಸಂಶಯ ಪ್ರವೃತ್ತಿಯೇ ನಿನಗೆ ಕೇಡು ಬಗೆಯುತ್ತಿದ.ಎ ನಿನ್ನ ವ್ಯಕ್ತಿತ್ವವನ್ನು ವಿರೂಪಗೊಳಿಸುತ್ತಿದೆ. ಜೊತೆಗೆ ಅತಿಯಾದ ಸಿಡುಕುತನವೂ ನಿನಗೆ ಹಾನಿ ಮಾಡುತ್ತಿದೆ. ಆಫ್ತನಾಗಿ, ಹಿತೈಷಿಯಾಗಿರುವ ಯಾರಾದರೂ ಹೇಳುವ ಮಾತನ್ನೂ ಸಂಶಯದಿಂದ ನೋಡುವುದನ್ನು ಬಿಟ್ಟು ಬಿಡು ಗೆಳೆಯಾ. ನಿನಗೆ ಯಾರಾದರೂ ಒಬ್ಬ ಹೊಸ ಗೆಳೆಯ ಸಿಕ್ಕಿದರೆ ನಿನ್ನಲ್ಲಿ ಈಗ ಇರುವ ಕೆಲವು ಹುಳುಕುಗಳನ್ನು ಬಿಟ್ಟು ಅವನೊಂದಿಗೆ ಸ್ನೇಹ ಬೆಳೆಸು, ಬೆಳೆಸಿದ ಸ್ನೇಹವನ್ನು ದೀರ್ಘಕಾಲ ಉಳಿಸು ಎಂದು ನಿನ್ನ ಓರ್ವ ಆಫ್ತನಾಗಿ ಹೇಳುತ್ತಿದ್ದೆನೆ. ನಾನು ನಿನಗೆ ಆಫ್ತನಲ್ಲದಿದ್ದರೂ, ನನ್ನ ಮನಸ್ಸಲ್ಲಿ ಈಗಲೂ ನಿನಗೆ ಆಫ್ತನ ಸ್ಥಾನಮಾನ ಇದ್ದೇ ಇದೆ. ಆದ್ದರಿಂದಲೇ ಈ ಮಾತು.

ಒಂದೇ ಕಚೇರಿಯಲ್ಲಿ ದುಡಿಯುವ ನಾವೂ ಈ ರೀತಿ ಮುಖ ಗಂಟಿಕ್ಕಿಕೊಳ್ಲುವ ಅಗತ್ಯವಾದರೂ ಏನಿದೆ ಹೇಳು? ಸಾಮಾನ್ಯವಾಗಿ ಅವಿದ್ಯಾವಂತರಲ್ಲಿ, ಯುವತಿಯರಲ್ಲಿ ಕಾಣ ಸಿಗುವ ಇಂಥ ವರ್ತನೆ ನಿನ್ನಲ್ಲಿ ಯಾಕೆ ಬೆಳೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ನಾವು ಪರಸ್ಪರ ಆಫ್ತರಾಗಿದ್ದುದರಿಂದ ಕಳಕೊಂಡುದಾದರೂ ಏನು? ಈಗ ಕೋಪಿಸಿ ಮಾತು ಬಿಟ್ಟ ಬಳಿಕ ನಿನಗೆ ಸಿಕ್ಕಿರುವ ಲಾಭವಾದರೂ ಏನು? ನೀನು ಕೋಪಿಸಿಕೊಂಡಿರುವ ಕಾರಣವಾದರೂ ಯಾವುದು? ಆ ಕಾರಣದಲ್ಲಿರುವ ನಿಜಾಂಶದ ಪ್ರಮಾಣವಾದರೂ ಎಷ್ಟಿದೆ.. ಇತ್ಯಾದಿಗಳ ಬಗ್ಗೆ ನೀನು ಒಮ್ಮೆ ಚಿಂತಿಸಿ ನೋಡು.

ಆಡ್ವಾಣಿ ಮತ್ತು ವಾಜಪೇಯಿ ಅವರ ಸ್ನೇಹ ಸುಮಾರು ಆರೇಳು ದಶಕದ್ದು ಎಂದು ಹೇಳಲಾಗುತ್ತಿದ.ಎ ಅವರು ರಾಜಕೀಯದಲ್ಲಿ ಆ ಗೆಳೆತವನ್ನು ಅದೂ ಕೂಡ ಒಂದೇ ಪಕ್ಷದಲ್ಲಿಕೊಂಡು ಉಳಿಸಿಕೊಂಡು ಬರುವುದು ಸಾಧ್ಯವಾಗಿದ್ದರೆ, ಯಾವುದೇ ಅಧಿಕರ ಲಾಭವಿಲ್ಲದೆ, ಅಂಥ ನಿರೀಕ್ಷೆಯೂ ಇರದ ನಮಗೆ ಕೇವಲ ಒಂದು ಶುದ್ಧಸ್ನೇಹವನ್ನು ಯಾಕೆ ಉಳಿಸಿಕೊಂಡು ಹೋಗಲಾತುತ್ತಿಲ್ಲ ಎಂಬ ಪ್ರಶ್ನೆಗೆ ತ್ಠ್ತುರ ಸಿಕ್ಕೀತೇ ಗೆಳೆಯಾ?

ಮನೆಯ ಸಮಸ್ಯೆಯಿರಬಹುದು, ಕೆಲಸದ ಒತ್ತಡರವಿರಬಹುದು. ಹಾಗೆಂದು ಮಾತು ಬಿಟ್ಟು ಏಕಾಂಗಿಯಾಗಿ ಮೌನಿಯಾದ ಮಾತ್ರಕ್ಕೆ ನಿನಗೆ ಆಯೆಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಕ್ಕೀತೆ? ಒಂದೊಮ್ಮೆ ಸಿಕ್ಕಿದ್ದರೆ ನಾನು ಪ್ರೀತಿಯಿಂದ ನಿನ್ನ ಈ ವರ್ತನೆಯನ್ನು ಸ್ವಾಗತಿಸುತ್ತೆನೆ.

ಹಿರಿಯ ಒಂದು ಮಾತಿದೆ ಗೆಳೆಯಾ. ಚೆಲ್ಲುವುದನ್ನೂ ಅಳೆದು ಚೆಲ್ಲಬೇಕು ಎಂದು. ಹಾಗೆ ನೀನು ಕೋಪಿಸುವ ಮೊದಲು ಅದಕ್ಕೆ ಕಾರಣವಾದ ಘಟನೆಯ ಬಗ್ಗೆ ಒಂದು ಮಾತು ಹೇಳಿದ್ದರೆ ಚೆನ್ನಿತ್ತು. ಅಂಥ ಒಂದು ಕೊನೆ ಮಾತು ಹೇಳಿದ್ದರೆ ನೀನು ಕೋಪಿಸುವ ಅಗತ್ಯವೇ ಇರುತ್ತಿರಲಿಲ್ಲ. ಆದ್ದರಿಂದಲೆ ಹೇಳುತ್ತೇನೆ-ಸಂಶಯ ಸ್ವಭಾವ ಬಿಡು, ಮುಕ್ತವಾಗಿ ಮಾತಾಡು. ದೇವರು ನಮಗೆ ಮಾತಿನ ಶಕ್ತಿ ಕೊಟ್ಟದ್ದೇ ಅಭಿಪ್ರಾಯ ಹಂಚಿಕೊಳ್ಳುವುದಕ್ಕಲ್ಲಾ? ಅದನ್ನು ಬಳಸದಿದ್ದರೆ ಅದಿದ್ದು ಏನು ಪ್ರಯೋಜನ ಹೇಳು?

ಮಾತಿಗೆ ಸಿಕ್ಕದ ನಿನಗೆ ಇದೊಂದು ಪತ್ರದ ರೂಪದಲ್ಲಿ ನಾಲ್ಕು ಮಾತು ಹೇಳಿದ್ದೇನೆ. ಓದಿ ನಿನ್ನಲ್ಲಿ ಏನಾದರೂ ಬದಲಾವಣೆಯಾದರೆ ನನಗೆ ಖುಷಿಯಾದೀತು. ಅದಿಲ್ಲ, ನಿನ್ನದೇ ಸರಿ ಎಂದು ವಾದಿಸುವುದಾದರೆ ನಾನು ಏನೂ ಮಾಡಲಾಗದ ಅಸಹಾಯಕ.

ನನ್ನೊಂದಿಗೆ ಮಾತು ಬಿಟ್ಟುದಕ್ಕೆ ನನಗೆ ಬೇಸರವಾಗಿಲ್ಲ. ಅದರಿಂದ ನಿನಗೆ ನೆಮ್ಮದಿ ಸಿಗುವುದಾದರೆ ನನಗೆ ಅದರಲ್ಲಿ ಖುಷಿಯೇ. ಆದರೆ ನನ್ನಲ್ಲಿ ತೋರಿಸಿದ ಇಂಥ ವರ್ತನೆಯನ್ನು ಬೇರೊಬ್ಬ ಗೆಳೆಯನಲ್ಲಿ ತೋರಿಸಬೇಡ ಎಂದು ಹೇಳುತ್ತಾ ಈ ಪುಟ್ಟ ಪತ್ರಬರಹಕ್ಕೆ ಪೂರ್ಣವಿರಾಮ ಹಾಕುತ್ತೇನೆ.
-ಪದ್ಮಾ

No comments:

Post a Comment