Wednesday, May 25, 2011

ಮರ ಮತ್ತು ಕಾಯಿ

ಭಾUರಥಿ ಹೆಗಡೆ
ಸರಿಯಾಗಿ ಆರು ಘಂಟೆಗೆ, ಬಿಡಾರದ ಕೋಳಿಯಲ್ಲ, ದಿನೂ ತಂದ ವಾಚಿನ ಕೋಳಿ ‘ಕೊ ಕ್ಕೊ ಕೋ ಕೋಂ’ ಕೂಗಿದಾಗ ಎಚ್ಚೆತ್ತ ಪದ್ದು ಚಿಕ್ಕಿ, ಕಣ್ಣು ಬಿಡಬೇಕೆಂದರೆ, ರೆಪ್ಪೆಗಳ ಮೇಲೆ ಯಾರೋ ಕಲ್ಲು ಹೇರಿಟ್ಟ ಭಾಸ, ಮಗ್ಗುಲಾಗತೊಡಗಿದರೆ ಮೈಕೈಯೆಲ್ಲ ಗುದ್ದಿ ಹಣ್ಣು ಮಾಡಿದ ನೋವು, ಅದೇ ಅರೆ ಭ್ರಮೆಯಲ್ಲಿ ಕಣ್ಣು ಮುಚ್ಚಿದವಳು. ‘ರಾಮ ರಾಮಾ’ ಎಂಬ ಗಂಡನ ನರಳಿಕೆಗೆ ಧಡಕ್ಕನೆ ಎದ್ದು ಕುಳಿತಳು.

ಹೌದು, ಹೊರಗೆ ಬೆಳ್ಳಂಬೆಳಗಾಗಿ ಬಿಟ್ಟದೆ. ಅಂಗಳದ ತುದಿಯ ತೆಂಗಿನ ಗಿಡದಲ್ಲಿ ಆಗಲೇ, ಕಾಗೆ ಗುಬ್ಬಿಗಳ ಕಟಿಪಿಟಿ ಶುರುವಾಗಿದೆ. ಕೊಟ್ಟಿಗೆಯ ಮಂದಿ ಕರೆಯುತ್ತಿದ್ದಾರೆ. ಒಂಬತ್ತೂ ವರೆ ಬಸ್ಸು ಬರುವುದರೊಳಗಾಗಿ ತಾನು ಮಾಡಬೇಕಿರುವ ಕೆಲಸಗಳ ರಾಶಿ ನೆನೆದೇ ಎದೆಯೊಡೆದು ಗಂಟಲಿಗೆ ಬರುತ್ತಿದೆ. ಆದರೆ ಶರೀರ ಮಾತ್ರ ಏನೇ ಆದರೂ ಈ ಜನ್ಮದಲ್ಲಿ ಮೇಲೇಳ ಲಾರೆನೆಂಬ ಹಟ ತೊಟ್ಟು ಬಿಟ್ಟ್ಟಿದೆ.... ಸಾಯ್ಲಿ, ಎಲ್ಲಾ ಹುಲಿ ತಿಂದು ಹೋಗ್ಲಿ. ಮನೆ- ಮಕ್ಳು- ಸಂಸಾರ ಎಂದು ಒಂದು ಹದಿಮೂರು ವರ್ಷದಿಂದ ಜೀವ ತೇಯ್ದಿದ್ದಕ್ಕೆ, ಆತಲ್ಲ ಸಮಾ ಮಂಗಳಾರ‍್ತಿ! ಸಾಕೋ? ಇನ್ನೂ ಬೇಕೋ? ಋಣವೇ ಋಣವೆ. ಮನೆಗೆ ಬೇಕು ಮಕ್ಳಿಗೆ ಬೇಕು ಎಂದು ಆ ಪರಿ ಉಪವಾಸ, ವನವಾಸ ಮಾಡಿ ಮಂಗನ ಮಾಡಿಟ್ಟೆ ಹೌದ? ಒಂದೊಂದು ಮೆಟ್ಟು ಜಾಗಕ್ಕಾಗಿ ದಾಯಾದಿಗಳ ಕೈಲಿ ಹೊಡೆ ದಾಡಿದೆ ಹೌದ? ಬೆಟ್ಟದಲ್ಲಿ, ಹಿತ್ತಿಲಲ್ಲಿ ಎಂದಿಲ್ಲದೆ ಗಡಿ ಒತ್ತಿ, ಹುಲ್ಲು, ಸೊಪ್ಪು ಕೊದು, ಗಂಡನನ್ನು ಮುಂದು ಮಾಡಿ ಕೊಂಡು ಜಗಳಕ್ಕೆ ನಿಂತೆ ಹೌದ?... ಹೆಂಗಾತು ಈಗ?.... ಮುಚ್ಚಿದ ಕಣ್ಣಿವೆಯೊಳಗೆ- ಮುಚ್ಚಿಹೋದ ಮನಸ್ಸಿನೆದುರು ಯಾರದೋ ಸಪೂರ ದನಿ ಹಗೂರ ಮಾತು... ಯಾರೂ? ಯಾರದೂ?.....

ಇಲ್ಲ, ಇನ್ನು ಸಾಧ್ಯವಿಲ್ಲ ಅನ್ನುತ್ತ ಚಿಕ್ಕಿ ದಡಬಡಿಸಿ ಹಾಸಿಗೆ ಸುತ್ತಿ, ಸೀದಾ ಬಚ್ಚಲಿಗೇ ಹೋಗಿ ನಿಂತಳು. ರಾತ್ರಿಯ ಇಡೀ ಅಧ್ಯಾಯದ ನೆನಪನ್ನು ಸೋಪಿನೊಂದಿಗೆ ತೊಳೆದುಬಿಟ್ಟು, ಒಲೆ ಬೂದಿ ತೆಗೆದು, ಸಗಣಿ ಸಾರಿಸಿ, ಬೆಂಕಿ ಒಟ್ಟಿ, ಚಾಕ್ಕೆ ನೀರಿಡುವ ಹೊತ್ತಿಗೆ ಮತ್ತೆ ಹಾಸಿಗೆಯಿಂದ ‘ರಾಮ ರಾಮಾ-ರಾಮಾ ರಾಮಾ’ ನರಳಿಕೆ, ದೇವ್ರೆ! ಪೆಟ್ಟು ಜೋರಾಗಿಯೇ ಬಿದ್ದಿರ ಬೇಕು. ಇಲ್ಲಾಂದ್ರೆ ಹಾಗೆಲ್ಲ ನರಳುವ ಜನವೇ ಅಲ್ಲ. ಇಡೀ ದಿನ, ಗಡಿಯಾರದ ಮುಳ್ಳಿನಂತೆ, ಮೇಲೇರಿ ಇಳಿವ ಸೂರ‍್ಯ ನಂತೆ, ತಾನಾಯಿತು ತನ್ನ ಕೆಲಸವಾಯಿತು. ತೀರಾ ಉಮೇದಿ ಬಂದಾಗ, ಭಂಗಿ ಸೊಪ್ಪಿನ ಪಾನಕವಾಯಿತು. ಹೊರ‍್ತೂ ಯಾರೇ ಬರಲಿ, ಹೋಗಲಿ, ಯಾರಿಗೆ ಆರಾಮವಿರಲಿ, ಬಿಡಲಿ, ತನ್ನ ಹ್ವಾರ‍್ಯ ಬಿಟ್ಟಿದ್ದು ಇಲ್ಲ. ಹೆಂಡತಿ ಮಕ್ಕಳ ವ್ಯಾಜ್ಯ ದಲ್ಲಿ ಉಪ್ಪು-ಉಪ್ಪಿನ ಕಲ್ಲು ಅಂದಿದ್ದೂ ಇಲ್ಲ. ಅಂಥಾದ್ರಲ್ಲಿ....

ಕುನ್ನಿಗೊಡ್ಡೆ! ನಿನಗೊಳ್ಳೆ ಕಾಲ ಬಂದಿದ್ದಲ್ಲ ಇಂಥಾ ಬುದ್ದಿ, ತಡೆ ತಡೆ ಮಾಡ್ತೇನೆ ನಿಂಗೊಂದ್ ಮದುವೇಯ.... ಅವಳು ಕರಕರ ಹಲ್ಲು ಕಡಿದು, ಗಂಡನ ಹತ್ತಿರ ಹೋಗಿ, ಬಗ್ಗಿ, “ಇಕಾ, ಇಕಳಿ ಚಾ ತಂದೆ” ಅಂದಾಗ, ಅವನು ಮತ್ತಷ್ಟು ‘ಹುಹುಹು’ ಗುಟ್ಟುತ್ತ, ಮೆಲ್ಲಗೆ ಮೇಲೆದ್ದು, ಗೋಡೆ ಹಿಡಿದುಕೊಂಡು, ಮುಖ ತೊಳೆಯಲು ಹೊಂಟಿದ್ದು ಕಂಡು ಮತ್ತಷ್ಟು ಮೈ ಉರಿಯಿತು. ಇಲ್ಲ, ಇನ್ನು ಸುಮ್ಮನಿರೋದಿಲ್ಲ. ಇಡೀ ಎಂಟಾನೆಂಟು ವರ್ಷ, ತನ್ನದೆ ಎಂಜಲು-ತನ್ನದೇ ಬಚ್ಚಲು ಹೇಳೋದ್ಯಾರಿಗೆ ಎಂದು ಸಹಿಸಿದ್ದೇ ಸಹಿಸಿದ್ದು. ಒಳಗಿನ ಹೊಗೆ ಹೊರಬೀಳದಿದ್ಹಾಂಗೆ ಮುಚ್ಚಿಕೊಂಡಿದ್ದೇ ಕೊಂಡಿದ್ದು. ಇಲ್ಲ, ಇನ್ನು ಮುಚ್ಚಿಟ್ಟುಕೊಳ್ಳ ಲಾರೆ, ಪುಂಡಂಗರ್ಧ ರಾಜ್ಯ ಉಂಬಳಿಯಂತೆ, ನೋಡ್ತೇನೆ, ನಾನೂ ನೋಡೇ ಬಿಡ್ತೇನೆ, ಹಂ, ... ಒಲೆಯ ಹಾಯ್ಗದ ಸೌದೆ ಯೊಂದಿಗೆ ತಾನೂ ಧಗಧಗಿಸುತ್ತ ಚಿಕ್ಕಿ ಕೊಟ್ಟಿಗೆಯತ್ತ ನಡೆದಳು.

ನಡೆದದ್ದೇನೋ ಹೌದು, ಆದರೆ ಎಮ್ಮೆ ಕರೆಯಲು ತುದಿಗಾಲಲ್ಲಿ ಕೂತರೆ, ಮೇಲೇಳಲಿಕ್ಕಾಗುತ್ತಿಲ್ಲ. ಶರೀರದ ಯಾವ್ಯಾವ ಭಾಗ ನೋಯುತ್ತಿದೆಯೆಂದು ತಿಳಿಯುತ್ತಲೂ ಇಲ್ಲ. ಬಿದ್ದಿದ್ದು ಮೂರೇ ಮೂರು ಲತ್ತೆ, ಕಬ್ಬಿಣದ ಸರಳಿಂದ..... ಐವತ್ನಾಲ್ಕರ ಶರೀರಕ್ಕೆ. ಅದೂ ಆರು ಬಾಣಂತನದಲ್ಲಿ ಅತ್ತ ಹೋಗಿ ಇತ್ತ ಬಂದದ್ದು. (ಅದರಲ್ಲೇ ಮೂರು ಹಾಳು ಬಾಣಂತನ ಬೇರೆ) ಸೊಂಟ ಮುರಿಯದೆ ಶಾಬೀತಾಗಿ ಉಳಿದದ್ದೇ ಹೆಚ್ಚು. ಇನ್ನೊಂದು ಚಣ ಅಲ್ಲೇ ಇದ್ದಿದ್ದರೆ, ಬಹುಶಃ ಕೈ ಕಾಲು ಮುರಿದೇ ಕುಂಡ್ರಿಸುತ್ತಿದ್ದ ಮಗ ಬಹಾದ್ದೂರ. ಆ ಕರ್ರೊ ಕತ್ತಲಲ್ಲಿ, ಪೆಟ್ಟು ತಿಂದ ಎಮ್ಮೆ ಬಿದ್ಹಾಕಿ ಓಡುವಂತೆ ಓಡಿ, ಸೌದೆ ಮನೆ ಹಿಂದೆ ಅಡಗಿ ಕೂತಿದ್ದಕ್ಕೆ ಈಗ ಮೇಲೆದ್ದು ಓಡಾ ಡುತ್ತಿರುವುದು. ಇರ‍್ಲಿ, ನೋಡಿಯೇ ಬಿಡೋಣ..... ನಾನಂದ್ರೆ ಏನಂತ ತಿಳ್ಕೊಂಡಿದಾನೆ ಕುನ್ನಿ ಹಂ.... ಕಟ್ಟಿಸಿಕೊಂಡ ಹಲ್ಲು ತುಂಡಾಗಿ ಬಿಡಬಾರದೆಂಬ ಹುಶಾರಿನಲ್ಲೇ ಮತ್ತೊಮ್ಮೆ ಹಲ್ಲು ಕರ ಕರ ಮಾಡಿ, ಪದ್ದು ಚಿಕ್ಕಿ ಉಪ್ಪಿಟ್ಟು ಕೆದಕತೊಡಗಿದಳು.
ಉಪ್ಪಿಟ್ಟಾಯಿತು. ಮತ್ತೊಂದು ಚಹಾ ಕುದಿಯಿತು. ಉಪ್ಪಿಟ್ಟು ಕಂಡಿದ್ದೇ, ದಿನೂನ ಮುಖ ಸಿಂಡರಿಸಿದರೂ, ಮಾತಿಲ್ಲದೆ ಮೂವರೂ ತಿಂದು ಮುಗಿಸಿಯಾಯಿತು. ಮೇಲೇಳುವಾಗ “ದಿನೂ” ಎಂದು ದೈನ್ಯದಿಂದ ಅವಳು ಕರೆದದ್ದಕ್ಕೆ ‘ಎನು?’ ಎಂಬಂತೆ ಅಮ್ಮನ ಮುಖ ನೋಡಿದ, ಕರುಣೆಯಿಂದಲೋ? ತಾತ್ಸಾರದಿಂದಲೋ?....

“ತಮ್ಮಾ, ನೀನೂ ನಂಜೊತೆ ಪ್ಯಾಟಿಗೆ ಬಂದ್ಬಿಡು. ಆ ಠೊಣ ಪನ ಸೊಕ್ಕು ಅದೆಷ್ಟಿದ್ಯೋ ನೋಡಿಬಿಡೋಣ. ಆ ಹವಾಲ್ದಾ ರಣ್ಣ ನಿಂಗೊತ್ತಿದೆಯಲ್ಲ...... ”, ಅಮ್ಮನ ಮಾತಿಗೆ ಮಗ ಉತ್ತರಿಸದಿದ್ದರೂ ನರಳುತ್ತಿದ್ದ ಅಪ್ಪ ತಲೆಯೆತ್ತಿ, ಪಟಕ್ಕನೆ ಬಾಯಿಬಿಟ್ಟ.
“ಹೆಡ್ಡೀ ಹೆಡ್ಡಿ, ನಿನ್ನ ತಲೆ ಏನು ಹನ್ನೆರಡಾಣೆ ಆಗ್ಹೋ ಯ್ತೇನೆ? ಹೊಟ್ಟೆ ಮಗನ ಹಿಡಿದು ಪೊಲೀಸ್ರಿಗೆ ಕೊಡ್ಲಿಕ್ಕೆ ಹೊಂಟೀಯಲ್ಲ, ಥೂ ನಿನ ಜನ್ಮಕ್ಕೆ......”. ಅದೇನೋ ಮಹಾ ಹೇಳಿಬಿಟ್ಟೆನೆಂಬಂತೆ ತಲೆ ತಗ್ಗಿಸಿ, ಬಗ್ಗಿದ ಶರೀರವನ್ನು ಇನ್ನಷ್ಟು ಮುದ್ದೆಗೊಳಿಸಿ, ಬೆವರೊರೆಸಿಕೊಳ್ಳತೊಡಗಿದ. ಎಂದೂ ಇಲ್ಲದ ಗಂಡನ ಈ ಪರಿಗೆ, ಮಿಕಿ ಮಿಕಿ ನೋಡುತ್ತ, ಚಿಕ್ಕಿ ಇನ್ನಷ್ಟು ಬೆಂಕಿಯಾದಳು.
“ಹಾಂ ಹಂ, ಹೌದು. ನಾ ಹೆಡ್ಡಿಯಾಗಿದ್ದಕ್ಕೇ ನಿಮ್ಮೆಲ್ರ ತಿಪ್ಪೆ ಬಳೀತಾ ಬಿದ್ದಿರೋದು. ನೀವು ಮಾ ಬುದವಂತ್ರು. ದಿನ ದಿನಾ ಮಗನ ಕೈಲಿ ಲತ್ತೆ ತಿಂತಾ ಕುಂತಿರಿ. ನಾನೆಲ್ಲಾದರೂ ದೇಶಾಂತ್ರ ಹೊಂಟ್ಹೋಗ್ತೇನೆ, ಈ ನಮನಿ ಜಗಳ-ರಗಳೆ-ಹೊಡೆದಾಟ ಇನ್ನು ನೋಡ್ಲಾರೆ.....” ಬುಸುಗುಟ್ಟುತ್ತ ಅವಳು ಮೇಲೆದ್ದಾಗ, ಮಗ ಅಪ್ಪನ ಕೈ ಹಿಡಿದು, “ಅಪಾ ನೀ ಸುಮ್ನಿರು. ಅವ್ನನ್ನೇನು ಯಾರೂ ಕೊಂದು ಹಾಕೋದಿಲ್ಲ. ಅಲ್ಲಿ ಪೊಲೀಸ್ರ ಬೂಟು ಗಾಲಿನ ರುಚಿ ಕಂಡ್ರೆ ಮಾತ್ರ ಅವ್ನಿಗೆ ಬುದ್ಧಿ ಬರೋದು. ಅವನ ನೆತ್ತಿಗೇರಿದ ಪಿತ್ತ ಇಳಿಸ್ಲಿಕ್ಕೆ ಅವರೇ ಸಮ. ನೀ ಅಡ್ಡ ಬರ‍್ಬೇಡ....” ಅನ್ನುತ್ತ ಅಲ್ಲಿಂದೆದ್ದ.

ಎದ್ದಿದ್ದೇನೋ ಹೌದು. ಆದರೆ ಹೋಗುವುದೆಲ್ಲಿಗೆ? ನಿಂತ ಭೂಮಿಯ ಸೀಮೆ ದಾಟಿ, ಸಾಮಾನ್ಯರು ಇನ್ಯಾವ ಗ್ರಹಕ್ಕೆ ಹೋಗಲು ಸಾಧ್ಯವಿದೆ? ಮಣ್ಣ ಮೇಲಿನ ಕಲ್ಲು ಮುಳ್ಳಿನ ದಾರಿಯ ಹೊರತಾದ ಹಾದಿ ಎಲ್ಲಿದೆ?.... ಈ ನೆಲದ ಮೇಲಿನ ಸಮಸ್ತ ಕ್ಷುದ್ರತೆಯೂ ಮನೆ ಮಾಡಿ ನಿಂತ ಮನೆ, ಅಲ್ಲಿ ಅವನ ಬುದ್ಧಿ ಬಲ್ಲಾದಂದಿನಿಂದ ಜಗಳವಿಲ್ಲದ ದಿನವೇ ಇಲ್ಲ. ಇವನು ಶಾಲೆ ಕಲಿಯುವ ಹೊತ್ತಿನಲ್ಲೇ, ಇಬ್ಬರು ಅತ್ತಿಗೆಯರು- ಅಕ್ಕಂದಿರು-ಅವರ ಒಂದೊಂದು ಮರಿಗಳು ಗಿಜಿಬಿಜಿ ತುಂಬಿ ಕೊಂಡ ಗೂಡಿನಲ್ಲಿ, ಬೆಳಗಾಗೆದ್ದು ಚಾ ಕುಡಿಯುವಾಗಲೇ, ಒಬ್ಬಳ ಮಗನಿಗೆ ಇನ್ನೊಬ್ಬಳು ತುಪ್ಪ ಹಾಕಲಿಲ್ಲವೆಂಬ ಆಕ್ರೋಶ, ಇಲ್ಲಾ ಹಲ್ಲು ಪುಡಿಗಾಗಿ, ಇಲ್ಲಾ ಸೋಪಿಗಾಗಿ, ಮತ್ತೆಲ್ಲ ಸಾಯಲಿ, ಮಗುವಿನ ಹಾಲಿಗೆ ಚಿಟಕಿ ಸಕ್ಕರೆ ಹಾಕಿ ದ್ದಕ್ಕೂ ಯಜಮಾನ ಅಣ್ಣನ ಗೌಜೇ ಗೌಜು. ಅವನಿಗೆ ‘ಸೋ’ ಅನ್ನುವ ಹೆಂಡತಿ. ಸತ್ತೂ, ಬಿದ್ದೂ ಗೇಯಲಿಕ್ಕೆ ಮನೆಜನ ಬೇಕು, ಉಂಡು-ತಿಂದು, ಉಟ್ಟು-ತೊಟ್ಟು ಮಾಡಲು ಬೇಡ ಅಂದ್ರೆ ಯಾರು ಕೇಳ್ತಾರೆ? ಎಂದು ಉಳಿದವರ ಆಕ್ರೋಶ. ತಾಯಿ ಒಮ್ಮೆ ಕೃಷ್ಣ ಪಕ್ಷ, ಒಮ್ಮೆ ಶುಕ್ಲ ಪಕ್ಷ. ಪಂಕ್ತಿಯ ಬುಡದಲ್ಲೇ ಕೂತು, ಕಂಕಿಂ ಎನ್ನದೇ ಬಂದಿದ್ದು ತಿಂದು, ಮೇಲೇಳುತ್ತಿದ್ದ ಅಪ್ಪನಂತೆ ಈ ಸಣ್ಣವನೂ ಉಪ್ಪಿಗೂ ಇಲ್ಲ, ಸೊಪ್ಪಿಗೂ ಇಲ್ಲ. ಅಂತೂ, ಹೇಗೋ ಎಳೆದುಕೊಂಂಡು ಬಂದ ಸಂಸಾರದ ತೇರು, ಇವನು ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಹರಿದು ಮೂರು ಚೂರಾ ಗಿತ್ತು.

ಆಗಲಿ, ಮಹಾ ಏನಾಯ್ತು? ಕಾಯಿ ಬಂದು ಬಂದು, ಹೇರಿಕೊಂಡ ಮಾವಿನ ಟೊಂಗೆ ಮುರಿದುಬಿದ್ದಿದ್ದಕ್ಕೆ ಮರಕ್ಕೆ ಯಾಕೆ ಚಿಂತೆ? ಇನ್ನೊಂದು ಬದಿಯಿಂದ ಚಿಗುರಿಕೊಂಡರಾ ಯ್ತಪ್ಪ. ಅಂದರೆ ಅದಲ್ಲ ಪ್ರಶ್ನೆ. ಇದ್ದ ಎರಡೆಕರೆ ತೊಟದಲ್ಲಿ ನಾಲ್ಕು ಪಾಲು ಮಾಡಿದಾಗ ಯಾರಿಗೆ ಸಾಕಾಗುತ್ತದೆ?..... ಇಡೀ ವರ್ಷಕ್ಕೆ ಕ್ವಿಂಟಾಲು ಅಡಿಕೆ ಕೊಯ್ದು, ಯಾವ ಕುಟುಂಬ ಸುಖವಾಗಿರಲು ಸಾಧ್ಯ?....
ತನಗೆ ಕೊಟ್ಟ ತೋಟ ಹಾಳು, ಅಡಿಕೆಯಾಗುವುದಿಲ್ಲ. ಎಂದು ಹಿರಿಯವನು- ತನ್ನದು ಮತ್ತೂ ಖರಾಬು, ಸಣ್ಣವನ ತೋಟ ತನಗೆ ಬೇಕು ಎಂದು ನಡುವಿನವನು-ಒಮ್ಮೆ ಎಲ್ಲರೂ ಒಪ್ಪಿಕೊಂಡರು ಹಿಸೆ ಕರಾರು ಬರೆದಾದ ಮೇಲೆ ತಕರಾರು ಮಾಡಿದ್ರೆ ಯಾರು ಕೇಳ್ತಾರೆ? ಎಂದು ತಾಯಿ-ಹ್ಯಾಗೆ ಕೇಳೋದಿಲ್ಲ ನೋಡೇಬಿಡ್ತೇವೆ ಎಂದು ಅವರಿಬ್ಬರು ಅದೆಲ್ಲ ಹಾಳಾಯ್ತು, ಒಂದು ಒಗ್ಗರಣೆ ಸೌಂಟಿಗಾಗಿ, ಒಂದು ಎಣ್ಣೆ ಗಿಂಡಿಗಾಗಿ, ಒಂದು ದೀಪದ ಶಮೆ, ಒಂದು ಶ್ಯಾವಂತಿಗೆ ಹಿಳ್ಳಿಗಾಗಿಯೂ ಹತ್ತಿ ಹರಿಯದ ಜಗಳ.... ಹತ್ತಿರದ ನೆಂಟರಿಷ್ಟರು, ನೆಂಟರಲ್ಲದ ಹಿರಿಯ ಪಂಚರು-ಯಾರೇ ಬಂದು ಹೇಳಿದರೂ ಮತ್ತಷ್ಟು ಜಟಕಾಗುವ ಜಗಳ..... ಕಂಡೂ ಕಂಡೂ ತಲೆ ಕೆಟ್ಟುಹೋದ ದಿನು, ಯಾರಿಗೂ ಸುದ್ದಿ ಕೊಡದೆ ಬೊಂಬಾಯಿ ಬಸ್ಸು ಹತ್ತಿದವನು, ಹೋದ ಎಂಟೇ ದಿನಕ್ಕೆ ಕುದಿಯುವ ಜ್ವರ ಹೊತ್ತು ವಾಪಸು ಬಂದಾಗ, ತಾಯಿ ಬುದ್ಧಿ ಹೇಳಿ, ತನ್ನ ಏಕೈಕ ಆಪದ್ಧನವಾದ ವಠಣಿ ಸರ ಮಾರಿ, ಊರ ಬಸ್‌ಸ್ಟಾಪಿನಲ್ಲಿ ಗೂಡಂಗಡಿ ಹಾಕಿ ಕೊಟ್ಟಿದ್ದಳು.

......ತಾಯಿಯ ಮಾತಿನಂತೆ ಮಿಂದು, ಅಂಗಿ,ಪ್ಯಾಂಟು ತೊಟ್ಟ ದಿನು ಅಮ್ಮನನ್ನು ಕರೆದರೆ,ಅವಳಿನ್ನೂ ಪಾತ್ರೆ ತಿಕ್ಕುತ್ತಿದ್ದಾಳೆ. ಘಂಟೆ ಆಗಲೇ ಒಂಬತ್ತು. ಇನ್ನರ್ಧ ತಾಸಿನಲ್ಲಿ ಇವಳು ಮಿಂದು, ಸೀರೆಯುಟ್ಟು ಹೊರಟಂತೆಯೇ ಸೈ. ಶಾಲೆಮನೆ ಘಟ್ಟ ಹತ್ತುತ್ತಿದ್ದಾಗಲೇ ಬಸ್ಸು ‘ಬುರ್ರ್’ ಎಂದು ಹೋಗಿ ಯಾಗಿರುತ್ತದೆ. ಥತ್, ಹಾಳ್‌ಬಿದ್ಹೋಗ್ಲಿ!...... ಮನಸ್ಸಿನಲ್ಲೇ ಅಲವತ್ತು ಕೊಳ್ಳುತ್ತ, “ಅಮ್ಮಾ, ನೀ ಮೀಯ್ಲಿಕ್ಹೋಗು. ಇದಿಷ್ಟು ನಾ ತೊಳಿತೇನೆ” ಅಂದ ಮಗನ ಮಾತಿಗೆ ತಾಯಿ ತಿರುಗಿ ಮಾತಾಡಲೂ ಇಲ್ಲ, ಕೆಲಸ ಬಿಟ್ಟು ಮೇಲೇಳಲೂ ಇಲ್ಲ. ಅವನ ಮುಖವನ್ನೇ ಮಿಕಿ ಮಿಕಿ ನೋಡಿದಳು ಮಾತ್ರ.

ಇವನೊಬ್ಬನಿಗಾದರೂ ಅಮ್ಮ ಎಂಬ ಮಮಕಾರ, ಮುಳ್ಳು ವೊನೆಯಷ್ಟಾದರೂ ಇದ್ದಿದ್ದರೆ, ಒಂದು ದಿನ ಬಿಡದೆ, ಮೂರೆಮ್ಮೆ ಕರೆದ ಹಾಲನ್ನು, ತಾನೇ ಪೇಟೆಗೆ ಹೊತ್ತೊಯ್ದು ಮಾರಬೇಕಿರ ಲಿಲ್ಲ..... ಮತ್ತೆ ಮನೆಗೆ ಬಂದು ಹಸಿಬಿಸಿ ಕೂಳು ಕುಚ್ಚಬೇಕಿರ ಲಿಲ್ಲ..... ಅದೆಲ್ಲ ಸಾಯ್ಲಿ, ಹೊಂತಗಾರ ಪೋರ ಅಂಬುವನು ಕನಿಷ್ಠ, ದನಕರ ಮೈ ತೊಳೆಸಿ, ಸಗಣಿ ಬಾಚಿ, ಹುಲ್ಲು ತಂದು ಹಾಕುವಷ್ಟಾದರೂ ಸಹಾಯ ಮಾಡಿದ್ದರೆ?....
ಪದ್ದು ಚಿಕ್ಕಿ, ದೊಡ್ಡದೊಂದು ನಿಟ್ಟುಸಿರಿನೊಂದಿಗೆ ಪಾತ್ರೆ ಗಳನ್ನೆತ್ತಿ ಒಳಗೊಯ್ದಳು.

ಒಳಗೆ ಎಂಜಲು ಬಾಳೆ, ಬಾಳೆಗೆ ಮುತ್ತಿಕೊಂಡ ನೊಣದ ರಾಶಿ, ಒಲೆಮೂಲೆಯಲ್ಲಿ ಪರಮಾನಂದದಿಂದ ಕಣ್ಣು ಮುಚ್ಚಿದ ಬೆಕ್ಕು...... ಈಗಿದನ್ನೆಲ್ಲ ಚೊಕ್ಕಗೊಳಿಸುತ್ತ ಕೂತರೆ ಬಸ್ಸು ತಪ್ಪಿ, ಮತ್ತಂದು ತಾಸು ಬಿಸಿಲಲ್ಲಿ ತಾಪ ತೆಗಿಯಬೇಕು. ‘ಸತ್ತಿರ‍್ಲಿ ಎಲ್ಲವೂ ಇದ್ದ ಹಾಂಗೆ’ ಅಂದುಕೊಳ್ಳುತ್ತ ಚಿಕ್ಕಿ, ಬರಬರ ಎರಡು ಚೊಂಬುಮಿಂದು, ತಲೆಬಾಚಿ, ಅಡರಾಬಡರಾ ಸೀರೆ ಸುತ್ತಿ ಕೊಂಡು, ನಾಲ್ಕಾರು ಕ್ಯಾನುಗಳಿಗೆ ಹಾಲು ಅಳೆದು, ಎಲ್ಲದಕ್ಕೂ ಮರೆಯದೆ ಒಂದೊಂದು ಲೋಟ ನೀರು ಸೇರಿಸಿ, ಕ್ಯಾನು ಗಳನ್ನೆಲ್ಲ ಕೈ ಚೀಲಕ್ಕೆ ತುಂಬಿ, ಚಪ್ಪಲಿ ಮೆಟ್ಟಿದಾಗ ದಿನು, ಮಾತಿಲ್ಲದೆ ಅವಳನ್ನು ಹಿಂಬಾಲಿಸಿದ.

ಬ್ಯಾಡ ಬ್ಯಾಡಂದ್ರೂ ಹಿಂಬಾಲಿಸಿ ಬರುವ ನೆನಪುಗಳ ಭಾರ ಹೊತ್ತು ಮನೆ ಮುಂದಿನ ಘಟ್ಟ ಏರುತ್ತಿರುವಾಗಲೆ ದೂರ ದಲ್ಲೆಲ್ಲೊ ಬಸ್ಸಿನ ಸದ್ದು. ಹಾಲಿನ ಚೀಲವನ್ನು ಮಗನ ಕೈಗೆ ದಾಟಿಸಿದ್ದೇ, ಚಿಕ್ಕಿ ನಿಜಕ್ಕೂ ಓಡತೊಡಗಿದಳು. ಓಡಿ ಬಸ್ ಸ್ಟಾಪ್ ತಲುಪುವುದಕ್ಕೂ, ಬಸ್ಸು ಬಂದು ನಿಲ್ಲುವುದಕ್ಕೂ ಸರಿಯಾಯಿತು. ಯಾವತ್ತೂ ದಿನ ತುಂಬಿದ ಬಸುರಿಯಂತೆ ತುಂಬಿಕೊಂಡಿರುತ್ತಿದ್ದ ಬಸ್ಸು, ಇವತ್ತೇಕೊ ಖಾಲಿಯಿರುವುದು ಕಂಡು, ‘ಹಯ್ಯಪ್ಪ! ಸದ್ಯ’ ಅನ್ನಿಸಿ, ಮಗನ ಕೈಯಿಂದ ಕೈ ಚೀಲ ಗಳನ್ನಿಸಿದುಕೊಂಡು ತೊಡೆಯ ಮೇಲಿರಿಸಿ ಕುಳಿತುಕೊಂಡಾ ಗಲೂ, ಏನ್ ಮಾಡ್ಲಿ? ಈಗೇನ್ ಮಾಡ್ಲಿ? ಒಂಬ ಗೊಂದಲ ಕಾಡುತ್ತಿದೆ. ಏನಾದರೂ ಮಾಡಲೇಬೇಕೆ? ಎಂಬ ಅನುಮಾನ ಎದೆಯಲ್ಲಿ ಕೈ ಹಾಕಿ ಎಳೆದಾಡುತ್ತಿದೆ......... ಎಷ್ಟಂದ್ರೂ, ತಾನೇ ಬಸಿರಾಗಿ, ಹೆತ್ತು ಹಾಲುಣಿಸಿ ಬೆಳೆಸಿದ ಮಗ. ತಾನಿಷ್ಟೆಲ್ಲ ಕಷ್ಟ ಪಟ್ಟಿದ್ದಾದ್ರೂ ಮತ್ಯಾಕೆ? ತನ್ನ ಕಷ್ಟ ತನ್ನ ಮಕ್ಳಿಗೆ ಬರಬಾರ‍್ದು. ತನ್ನ ದುಃಖದ ಝಳ ತನ್ನ ಮಕ್ಳು ಮರಿಗೆ ತಾಗಬಾರ‍್ದು. ಅವ್ರು ಸುಖವಾಗಿರ‍್ಬೇಕು. ಅವ್ರು ಸೂಡಿದ ಹೂ ಬಾಡಬಾರ‍್ದು. ಅವ್ರು ಮಕ್ಳು ಮರಿ ಕಂಡು, ನಾಲ್ಕು ಕಾಲಗನಾತ್ನಾಗಿ ಬದುಕಿಕೊಂಡು ಹೋಗ್ಬೇಕು ಎಂದೇ ಅಲ್ಲವೆ- ಒಂದೇ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಒಂದೇ ಸೂರಿನಡಿಗೆ ಬದುಕಲು ಸಾಧ್ಯವಿಲ್ಲವೆಂದಾಗ, ಆತು ತಮ್ಮಾ, ನಿಮ್ಮ ನಿಮ್ಮ ಪಾಲು ನೀವು ತಗಂಡು ನಿಮ್ಮ ನಿಮ್ಮಷ್ಟಕ್ಕೇ ನೆರುಂಬ್ಳಾಗಿ ಇರಿ, ಎಂದು ಹಿಸೆ ಮಾಡಿ ಕೊಟ್ಟಿದ್ದು? ಅದರಲ್ಲೂ, ಕಟ್ಟಿದ ಮನೆಯನ್ನು ಅವರಿಬ್ಬರಿಗೆ ಬಿಟ್ಟುಕೊಟ್ಟು, ಮುದುಕ-ಮುದುಕಿ ಹಿತ್ತಿಲ ತುದಿಯ ಸೌದೆಕೊಟ್ಟಿಗೆಯಲ್ಲಿ ಬಿಡಾರ ಹೂಡಿದ್ದು?..... ಕಾಗೆ, ನಾಯಿ ಕಾಟ ತಾಳಲಾರದೆ, ಅವಳೇ ಒಂದೊಂದೇ ಬುಟ್ಟಿಯಾಗಿ ದರೆಯ ಮಣ್ಣು ತಂದು ಎದೆಯೆತ್ತರದ ಗೋಡೆ ಮೆತ್ತಿದ್ದು?

ಏನೇ ಆದ್ರೂ ಇವ್ರು ತನ್ನ ತಂದೆತಾಯಿ, ತಮಗಾಗಿ ಇವರು ಇಷ್ಟು ವರ್ಷ ಕಷ್ಟಪಟ್ಟಿದ್ದಾರೆ ಅನ್ನೋ ತನುಕರಣ ಸಾಯ್ಲಿ, ಹಣ್ಣಾದ ಕೂದಲಿಗೆ, ಕಳೆದ ಆಯುಷ್ಯಕ್ಕೆ ಕಿಮ್ಮತ್ತು ಕೊಡುವಷ್ಟೂ ಮನುಷ್ಯತ್ವ ಉಳಿದಿಲ್ಲವೆಂದಾದರೆ ಏನ್ ಮಾಡಿ ಏನು ಬಂದ್ಹಾಂಗಾತು? ಎಲ್ಲಾ ಹಣೆಬರಾ ಅಷ್ಟೆ.
ನಿನ್ನೆ ಆದದ್ದಿಷ್ಟು. ಒಂದು ತೆಂಗಿನ ಮರದ ಕಾಯಿ ಕೊಯ್ಸಿದ ನೆವ ತೆಗೆದು ತನ್ನ ಕಣ್ಣದುರಿಗೇ ದಿನೂಗೆ ದನಬಡಿತ ಬಡಿದುಬಿಟ್ಟ! “ಅಯ್ಯಯ್ಯೋ, ಬ್ಯಾಡ ಬಿಟ್ಬಿಡೋ, ನಿನ್ನ ದಮ್ಮಯ್ಯ ಹೊಡಿ ಬ್ಯಾಡ್ವೋ- ಏ ತಮ್ಮಾ ಬಿಟ್ಟಬಿಡೊ” ಎಂದು ತಾನು ಕೂಗಿಕೊಂಡರೂ ಕೇಳದೆ ಬಡಿಯುವುದೊಂದೇ ಮಾಡ್ತಾ ಇದ್ದಾಗ ತಾಯಿಯಾದವಳು ಸುಮ್ನೆ ನೋಡ್ತಾ ನಿಂತಿರಬೇಕಿತ್ತೆ? ಇಲ್ಲಾ, ಇನ್ನೂ ನಾಲ್ಕು ಹಾಕು ಎಂದು ಬಡಿಗೆ ತಂದು ಕೊಡಬೇಕಿತ್ತೆ? ಅದೇನೂ ಸಾಧ್ಯವಿಲ್ಲದೆ ಹೊಡೆದಾಟ ಬಿಡಿಸಲು ಹೋಗಿದ್ದಷ್ಟು ನೆನಪು. ಬೆನ್ನಿಗೆ ಏನೋ ಭಯಂಕರ ಪೆಟ್ಟು, ಬಂದು ಬಂದು ಮೂರು ಸಲ ಬಡಿದದ್ದೊಂದು ನೆನಪು. ಮುಂದೇನಾಯಿತೆಂದು ಗೊತ್ತೇ ಆಗದೆ “ಅಪ್ಪಯ್ಯೋ” ಎಂದು ಕೂಗುತ್ತ, ಜೀವದಾಸೆ ಬಿಟ್ಟು ಓಡಿ ಮುಂದಿನ ಪೆಟ್ಟಿನಿಂದ ತಪ್ಪಿಸಿ ಕೊಂಡಳು. ಆದರೆ ಅಲ್ಲೇ ನಿಂತಿದ್ದ ಗಂಡನಿಗೆ, ತಪ್ಪಿಸಿಕೊಳ್ಳಲು ಸಾಧ್ಯವಾಗದೇ, ಮಗ್ಗುಲ ಮುರಿ ಹೊಡೆತ ಬಿತ್ತು.
ಆಯಿತು. ಮೈಕೈ ನೋವಿಗೆ ಹತ್ತು ಗುಳಿಗೆ ತಿಂದರೆ ಗುಣವಾದೀತು. ಆದರೆ ಮನಸ್ಸಿಗೆ ಬಿದ್ದ ಪೆಟ್ಟು?

ಹೆತ್ತ ತಂದೆತಾಯಿಗೆ, ವಿನಾಕಾರಣ ಕಬ್ಬಿಣದ ಸರಳಿಂದ ಹೊಡೆದ ಅವನ ಕೈ ಕಾಲು ಮುರಿದು ಕುಂಡ್ರಿಸಬೇಕು ಎಂದು ಆ ಮನಸ್ಸು ಹಲ್ಲು ಕಡಿಯುತ್ತದೆ, ಬೇಡ. ಹಾಗನ್ನಬೇಡ, ಅನ್ನುತ್ತಲೇ ಅವ್ನ ಹೆಂಡ್ತಿ ರಂಡೆಯಾಗ್ಲಿ, ಅವ್ನ ಮಗನಿಗೆ ಹಾವು ಕಚ್ಚಲಿ, ಅವ್ನ ಮನೆ ಮಂಜಾಣಾಗ್ಲಿ... ಎಂದು ಶಪಿಸುತ್ತದೆ. ಇಲ್ಲ ಹಾಗಲ್ಲ, ಅವ್ನ ಪೊಲೀಸ್ರಿಗೆ ಹಿಡಿದುಕೊಟ್ಟು ನಾಲ್ಕು ಸಮಾ ಇಕ್ಕಿಸಬೇಕು ಎಂದು ಬುಸುಗುಟ್ಟುತ್ತಿದೆ..... ಥೂ ಥೂ ಸೊಡ್ಲೆ ಜನ್ಮವೆ! ಏನೇ ಮಾಡಿದ್ರೂ, ಮನೆ ಮಜ್ಜಿಗೆ ತಗೊಂಡ್ಹೋಗಿ ಬೈನೆ ಮರದಡಿಗೆ ಕುಂತು ಕುಡಿದ್ಹಾಂಗೆ ಅಲ್ವೇನೆ, ಮಳ್ಳು?...... ಎಂದು ಮರುಕ್ಷಣದಲ್ಲೇ ಅಳತೊಡಗುತ್ತದೆ...

“ಯಾರ್ರೀ ಸುಂಕದಕಟ್ಟೆ?” ಎಂಬ ಕಂಡಕ್ಟರನ ಕೂಗಿಗೆ ಎಚ್ಚೆತ್ತ ಪದ್ದು ಚಿಕ್ಕಿ, ದಡಬಡ ಕೈ ಚೀಲ ಹೊತ್ತು ಕೆಳಗಿಳಿದು, “ದಿನೂ ನೀನಿಲ್ಲೇ ನಿಂತ್ಕ. ನಾನು ಹಾಲು ಕೊಟ್ಟು ಬರ‍್ತೇನೆ” ಅಂದಾಗ ಹನ್ನೊಂದರ ಬಿಸಿಲು ಚುರುಗುಟ್ಟುತ್ತಿತ್ತು. ಎಂಟು ಮನೆಗಳ ಬಾಗಿಲು ತಟ್ಟಿ, ಲೀಟರು- ಅರ್ಧಲೀಟರು ಹಾಲು ಅಳೆದು, ಅವರಂದಿದ್ದಕ್ಕೆಲ್ಲ ‘ಹಾಹೂಂ’ ಅಂದು, ಮತ್ತೆ ಮಗನನ್ನು ಕೂಡಿಕೊಳ್ಳುವಾಗ ಇನ್ನರ್ಧ ತಾಸು ಸರಿದುಹೋಯಿತು. ಅಲ್ಲಿಂದ ಸೀದಾ ಹೋರಟು, ಎಂದೆಂದೂ ತುಳಿದಿರದ ಪೊಲೀಸಠಾಣೆಯ ಮೆಟ್ಟಿಲು ಹತ್ತುತ್ತಿರುವಾಗಲೇ, “ಥೂ ಥೂ, ಯಾಕ್ ಬಂದೆ ಇಲ್ಲಿ? ನಮ್ಮಂಥವ್ರು, ಬರೋ ಜಾಗವೇನೆ ಇದು?” ಎಂಬ ಹಿಂಜರಿಕೆ ಶುರುವಾಗಿ, ಮಗನ ಹಿಂದೆ ಹಿಂದೇ ಅಡಗುತ್ತ ಮುನ್ನಡೆದಳು.

ಪುಣ್ಯಕ್ಕೆ ಮಗನ ಪರಿಚಯದ ಪೊಲೀಸ್ ಅಲ್ಲೇ ಇದ್ದವನು, ಇವರ ಮುಖ ಕಂಡು ಏನು ಎಂಬಂತೆ ಹುಬ್ಬರಿಸಿದಾಗ, ಅವನ ಹತ್ತಿರ ನಿಂತು, ತಾಯಿ ಮಗ ಹೆದರುತ್ತಲೇ, ನಿನ್ನೆ ನಡೆದ ಪ್ರಸಂಗವನ್ನೆಲ್ಲ ವರದಿ ಒಪ್ಪಿಸಿ, ದೊಡ್ಡವನ ವಿರುದ್ಧ ದೂರು ಬರೆಸಿ, “ನೀವೇನೂ ಚಿಂತೆ ಮಾಡ್ಬೇಡಿ ಅಮ್ಮ, ನಾವೆಲ್ಲ ಬಂದೋಬಸ್ತ್ ಮಾಡ್ತೇವೆ” ಎಂಬ ಸಾಹೇಬರ ಭರವಸೆ ಯೊಂದಿಗೆ ಬಸ್‌ಸ್ಟಾಪಿಗೆ ಬಂದು ನಿಂತರೆ, ಬಸ್ಸಿನ ಸುಳಿವಿಲ್ಲ. ಹಾಗೇ ವಾರೆನೋಟದಿಂದ ಮಗನಮುಖ ನೋಡಿದರೆ, ಅಲ್ಲಿ ರಣರಣ ಬಿಸಿಲೊಂದರ ಹೊರತಾಗಿ, ಧಾರೆಗಟ್ಟಿದ ಬೆವರಿನ ಹೊರತಾಗಿ ಇನ್ನೇನ್ನೂ ಕಾಣುತ್ತಿಲ್ಲ. ನಿಜಕ್ಕೂ ಅವನ ಮನಸ್ಸಿನಲ್ಲೇನಿದೆ ಎಂಬುದೂ ಗೊತ್ತಾಗುತ್ತಿಲ್ಲ.
ಈ ಮಾಣಿ ಖರೇ ಅಂದ್ರೂ ಅಣ್ಣನ ಕಾಟದಿಂದಾಗಿ ಸೋತು ಹೋಗಿದ್ದಾನೆ. ಅಂವ, ಆ ಠೊಣಪ ಉರಿಯೋದು, ಉರಿಯೋದು ಅಂದ್ರೆ ಅದೆಷ್ಟು ಪರಿ? ಯಾವತ್ತು ಆ ಹೆಂಡ್ತಿ ಅನ್ನೋ ವೇಷ ಒಳಹೊಕ್ಕಿತೋ, ಆವತ್ತೇ ಶುರು, ತಾನು, ತನ್ನ ಹೆಂಡ್ತಿ-ನಂತ್ರ ಹುಟ್ಟಿದ ಮಗ ಮಾತ್ರ ದೇವಲೋಕ, ಉಳಿದ ವ್ರೆಲ್ಲಾ ಕಾಲಗಡಿಗಿನ ಕಸ. ಎಲ್ಲೆಲ್ಲಿಂದಲೋ ಬಂದು ಒಂದು ಗೂಡಿನೊಳ ಹೊಕ್ಕು, ಅಲ್ಲಿದ್ದಿದ್ದನ್ನೆಲ್ಲ ತನಗೆ, ತನಗೆ ಎಂದು ಕಚ್ಚಾಡಿ ಹಿಸಿದುಕೊಳ್ಳುವ ಸೊಸೆಯಂದಿರಿಗಿಂತ ಹೆಚ್ಚಾಗಿ, ಒಂದು ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಒಂದೇ ಹಾಸಿಗೆ ಯಲ್ಲಿ ಮಲಗಿ ಎದ್ದ ಗಂಡು ಮಕ್ಕಳು ಬೆಳೆಯುತ್ತಾ ಬಂದಂತೆ ಪರಸ್ಪರ ವೈರಿಗಳಾಗಿಬಿಡುತ್ತಾರೆಂದರೆ- ಹೆತ್ತವರೂ ಕೂಡ ಅವರಿಗೆ ಶತ್ರುಗಳಾಗಿ ಕಾಣುತ್ತಾರೆಂದರೆ-ಇದ್ಯಾವ ವಿಚಿತ್ರ ವಪ್ಪಾ ಶಿವನೆ!

ಕುಕ್ಕರುಗಾಲಲ್ಲಿ ತುದೀ ಬಾಳೆಯೆದುರು ಕೂತು ಮಾತಿಲ್ಲದೇ ಹಾಕಿದ್ದು ತಿಂದು ಎದ್ದು ಹೋಗುವ ದಿನೂ ಎಲ್ಲಿ? ಅದು ವಾರೆ, ಇದು ಡೊಂಕು, ದೋಸೆ ಮೆತ್ತ, ಚಾ ತೆಳ್ಳ, ಎಂದೆಲ್ಲ ಗೌಜಿ ಮಾಡಿ ಹೆಂಗಸರ ಕಣ್ಣಲ್ಲಿ ನೀರಿಳಿಸುವ ಠೊಣಪ ಈ ಸದು ಎಲ್ಲಿ?..... ಹಾಗೆ ನೋಡಿದರೆ ಮೂರೂ ಮಕ್ಕಳನ್ನು ಒಂದೇ ರೀತಿ ಹೊತ್ತು ಹೆತ್ತು ಸಾಕಿದ್ದು, ಒಂದೇ ರೀತಿ ಅವರನ್ನು ಬೆನ್ನಿಗೆ ಕಟ್ಟಿಕೊಂಡು ತೊಟದ ಕಳೆ ಕಿತ್ತಿದ್ದು, ಒಂದೇ ರೀತಿ ಅನ್ನವಿದ್ದಾಗ ಅನ್ನ-ಇಲ್ಲದಿದ್ದಾಗ ಗಂಜಿ ತುತ್ತು ಮಾಡಿ ತಿನ್ನಿಸಿದ್ದು. ಒಂದೇ ರೀತಿ ಹರಿದ ಅಂದಿ, ಚಡ್ಡಿಗೆ ತೇಪೆ ಹಚ್ಚಿ ತೊಡಿಸಿದ್ದು. ಒಂದೊಂದು ಬಾಳೆಹಣ್ಣಿಗಾಗಿ ಆಸೆಗಣ್ಣು ಹೊತ್ತು ನೆರೆಮನೆಯೆದುರು ಮಾತಿಲ್ಲದೆ ನಿಂತ ಮೂರು ಮಕ್ಕಳನ್ನು ಕರೆದು, ಮೂವರಿಗೂ ಬೆನ್ನುಮುರಿ ಬಡಿದದ್ದು...... ಇಲ್ಲ, ಯಾವುದರಲ್ಲೂ ಎಳ್ಳುಕಾಳಿನಷ್ಟು ಫರಕು ಇಲ್ಲವೇ ಇಲ್ಲ. ಆದರೂ ಅಕ್ಕಾದ ಮಗ-ಆಗದ ಮಗ ಅಂದರೆ.....
ಉರಿಬಿಸಿಲ ಸೀಳುತ್ತ ಬಂದ ಬಸ್ಸಿನ ಶಬ್ದಕ್ಕೆ ಈ ಲೋಕಕ್ಕಿ ಳಿದ ಪದ್ದು ಚಿಕ್ಕಿ, ಪಕ್ಕಕ್ಕೆ ತಿರುಗಿದರೆ ಮಗ ಇಲ್ಲ. ಅವನಾಗಲೇ ಬಸ್ಸಿಗೆ ಕೈ ಮಾಡಿ ನಿಂತಿದ್ದಾನೆ. ನೋಡುತ್ತಿದ್ದಂತೆಯೇ ಬಸ್ಸು ಬಂದು ನಿಂತು, ಇವರಿಬ್ಬರೂ ರಶ್ಶಿನಲ್ಲಿ ಒಳನುಗ್ಗಿ, ಅಂತೂ ಇಂತೂ ಮನೆಯ ಹತ್ತಿರದ ತಂಗುಮನೆಯೆದುರು ಇಳಿದಾಗ ಸೂರ‍್ಯ ನೆತ್ತಿಯಿಂದ ಕೆಳಗಿಳಿಯುತ್ತಿದ್ದ. “ತಮ್ಮಾ, ಘಂಟೆ ಎಷ್ಟಾತೋ?” ಅಂದರೆ “ಒಂದು”ಅಂದ ತಣ್ಣಗೆ. ಕೇಳಿದ ಚಿಕ್ಕಿ ಮತ್ತಷ್ಟು ತಣ್ಣಗಾಗಿಬಿಟ್ಟಳು. ಇನ್ನು ಮನೆಗೆ ಹೋಗಿ ಒಲೆ ಹೊತ್ತಿಸಿ, ಅನ್ನಕ್ಕಿಟ್ಟು- ಮೇಲಿಂದ ಸುರಿದುಕೊಳ್ಳಲು ಏನೋ ಒಂದು ಸಾರು ಮಾಡಿ-ಉಣ್ಣುವ ಹೊತ್ತಿಗೆ ಹೊತ್ತು ಸೂರಿಳಿದಿರುತ್ತದೆ. ಸಾಯ್ಲಿ, ಇವತ್ತು ಒಂದಷ್ಟು ಅವಲಕ್ಕಿ ನೆನೆಸಿಕೊಂಡು ತಿಂದ್ರಾಯ್ತು ಅಂದುಕೊಳ್ಳುವಾಗ, ಖಾಲಿಯಾದ ಅವಲಕ್ಕಿ ಡಬ್ಬದ ನೆನಪಾಗಿ ಮತ್ತಷ್ಟು ಸಿಟ್ಟು ಬಂತು. ವೈಶಾಖದ ರಣ ಬಿಸಿಲು, ಕರಕರ ಕೆರೆಯುವ ಖಾಲಿಹೊಟ್ಟೆ, ಇನ್ನೊಂದು ಹೆಜ್ಜೆಯನ್ನು ಎತ್ತಿಡಲಾರನೆಂಬಷ್ಟು ಸುಸ್ತು-ಮೇಲಿಂದ ಮನೆಗೆ ಹೋಗಿ ಅನ್ನ ಬೇಯಿಸಿ ತಿನ್ನಬೇಕಾಗಿರುವ ಸಂದರ್ಭ ....... ಅವಳ ಮೈ ಮುಖವೆಲ್ಲ ಬೆವರಿ ಬೆವರಿ ಒಂದೇ ಧಾರೆಯಾಗಿ, ಜೊತೆಗೆ ಕಣ್ಣೀರೂ ಸೇರಿ ಹರಿದು, ಹರಿದು ನೆಲ ಮುಟ್ಟಿತು.
ಹಾಗೆ ನೆಲಕ್ಕಿಳಿದ ಕಸುವನ್ನೆಲ್ಲ ಒಟ್ಟು ಗೂಡಿಸಿ, ಹೇಗೊ ಮೇಲೆತ್ತಿ, ಒಲೆಹೊತ್ತಿಸಿ, ಅನ್ನ ಬೇಯಿಸಿ, ಮೇಲಿಂದ ಒಂದು ಟೊಮಟೊ ಸಾರು ಕುದಿಸಿ, ಬೆಳಗಿನ ಎಂಜಲು ಬಾಳೆಯ ಪಕ್ಕದಲ್ಲೇ ಈಗ ಊಟದ ಬಾಳೆಯನ್ನು ಹಾಕಿಕೊಂಡು ಮೂವರೂ ಉಂಡು ಮೇಲೇಳುವಾಗ ಮೂರು ಘಂಟೆ.

ಇಲ್ಲ, ಇನ್ನು ಏನೇನೂ ಸಾಧ್ಯವಿಲ್ಲ ಅಂದುಕೊಳ್ಳುತ್ತಲೇ ಬಾಳೆ ಒಗೆದು, ಎಂಜಲು ಸಾರಿಸಿ, ಪಾತ್ರೆಯನ್ನೆಲ್ಲ ಬಚ್ಚಲಲ್ಲಿ ಒಟ್ಟಿ, ಒಲೆಯ ಬಿಸಿಯಿಂದ ಸರಿದು, ಬರಿ ನೆಲದಲ್ಲೇ ಬಿದ್ದುಕೊಂಡ ಚಿಕ್ಕಿಗೆ, ಈ ಬದಿಯ ಖಬರಿಲ್ಲದ ನಿದ್ದೆ. ಈ ನೆಲದ ಜಗಳ ರಂಪಗಳೆಲ್ಲವನ್ನೂ ಸುಳ್ಳಾಗಿಸಿಬಿಟ್ಟ ನಿದ್ದೆ. ಪದ್ದು ಚಿಕ್ಕಿ ಅಂದರೆ ಕೇವಲ ಉಸಿರಾಟ ಮಾತ್ರವಾಗಿಬಿಟ್ಟ ನಿದ್ದೆ. ಎಷ್ಟು ಹೊತ್ತಾಯಿತೋ....
ಅಂಥಾ ಘನ ಘೋರ ನಿದ್ರೆಯಲ್ಲೂ, ಎಲ್ಲೋ ಯಾರೋ ಅಳುವ ಸದ್ದು. ಯಾರೋ ಯಾರಿಗೋ ಬೈದ-ಬಡಿದ ಸದ್ದು. ಯಾವುದೋ ಗಾಡಿಯ “ಭರ್ರೋ” ಆವಾಜು. ಫಕ್ಕನೆ ಕಣ್ಣುಬಿಟ್ಟ ಚಿಕ್ಕಿ. ಬಡಕ್ಕನೆ ಮೇಲೆದ್ದು ಅರೆನಿದ್ರೆಯಲ್ಲೇ ಬಾಗಿಲಲ್ಲಿಣುಕಿದಳು. ಹೌದು, ಸದಾನಂದ! ಅಂಗಳದೆದುರು ಪೋಲೀಸ್ ಜೀಪು ನಿಂತಿದೆ, ಇಬ್ಬರು ಪೇದೆಗಳು ಅವನ ಕೈ ಹಿಡಿದೆಳೆದು ಜೀಪಿಗೆ ತುಂಬುತ್ತಿದ್ದಾರೆ, ಅವನ ಹೆಂಡತಿ, ಮಗ ಇಬ್ಬರೂ, “ಅಯ್ಯಯ್ಯೋ- ಅಯ್ಯಯ್ಯೋ” ಕೂಗುತ್ತಿ ದ್ದಾರೆ,...... ಆಹ್! ಹೆಂಗಾತೋ ಭೋಸುಡಿ? ಹೆಂಗಾತೂ ಅಂದೆ, ಹೆತ್ತ ಅಪ್ಪ ಅಬ್ಬೆಗೇ ಬಡಿದವ್ರು ಯಾವತ್ತೂ ಉದ್ಧಾರಾಗೋದಿಲ್ಲ ಅಂದೆ, ನೀನೇನು ಮಹಾ ಮೇಲಿಂದ ಇಳಿದುಬಂದವನೇನೋ ಮನಸಿಗೆ ಕಂಡ್ಹಾಗೆ ಮೆರಿಲಿಕ್ಕೆ? ಕನಿಷ್ಠ ಹಿರಿಯ ಕಿರಿಯ ಅನ್ನೋದಾದ್ರೂ ಬೇಡವೇನೋ ಕುನ್ನಿ?..... ಹೋಗು, ಹೋಗು ಅವ್ರ ಕೈಲಿ ಸಮಾಲತ್ತೆ ತಿನ್ನು. ಕೊಬ್ಬೆಲ್ಲಾ ಕರಗಲಿ.... ಹಂ, ಮಾಡಿದಂವ ಉಣತಾ ಮನೆಯಂಥ ಕಡುಬ ಸರೀಯಾತು ತಗ.... ಅವಳು ಹಿಂತಿರುಗಿದರೂ, ಯಾಕೊ ಮನಸ್ಸು ತಿರುಗಲೊಲ್ಲದು. ನಾಲಿಗೆ ಎಷ್ಟೇ ಬೈದುಕೊಂಡರೂ, ಹೊಟ್ಟೆಯ ಒಳಾ ಒಳಗಿನ ಯಾವುದೋ ದನಿ, ‘ಅಯ್ಯೋ-ಅಯ್ಯೋ’ ಮಾಡುವುದನ್ನು ಬಿಡಲೊಲ್ಲದು.

ಅದನ್ನೆಲ್ಲ ಅಲ್ಲಲ್ಲಿಗೇ ಬಿಟ್ಟು ಚಿಕ್ಕಿ, ತನ್ನ ಹ್ವಾರ‍್ಯಕ್ಕೆ ಹೊರಡು ವಾಗ, ಪಕ್ಕದಲ್ಲೇ ನಿಂತು ಆ ಮನೆಯತ್ತಲೇ ನೋಡುತ್ತಿದ್ದ ದಿನೂ ಮತ್ತು ಅವನಪ್ಪನನ್ನು ಕಂಡು ಏನೋ ಕಸಿವಿಸಿ. ಏನೋ ತಳಮಳ. ಅದರಲ್ಲೂ ಅಪ್ಪನ ಕಣ್ಣಲ್ಲಿ, ‘ಆತ? ನಿಂಗೊಳ್ಳೇ ಸಂತೃಪ್ತಿ ಆತ? ಹೋಗು, ಹೊಟ್ಟೆ ತುಂಬಾ ಹಾಲು ಕುಡಿ’ ಅನ್ನುವ ಭಾವ ಜಿನುಗುತ್ತಿರುವುದನ್ನು ಕಂಡು ಅಲ್ಲಿ ನಿಲ್ಲಲಾಗದೇ ಒಳ ನಡೆದುಬಿಟ್ಟಳು.
ದಿನದಂತೆ ಸಂಜೆಯಾಯಿತು. ದನಕರುಗಳಿಗೆ ಹುಲ್ಲು, ಅಕ್ಕಚ್ಚು ಹಾಕಿ, ಹಾಲು ಕರೆದು, ಕಾಯಿಸಿ, ಹೆಪ್ಪು ಹಾಕುವು ದರೊಂದಿಗೆ -ಒಂದು ಅನ್ನ ಬೇಯಿಸಿ ಪಳದ್ಯ ಕುದಿಸುವದ ರೊಂದಿಗೆ, ಮಾತಿಲ್ಲದೆ ಮೂವರೂ ತಲೆಬಗ್ಗಿಸಿ ಉಣ್ಣುವದ ರೊಂದಿಗೆ ರಾತ್ರಿಯಾಯಿತು. ಎಂಜಲು ಮುಸುರೆ ಮಾಡಿ ಮುಗಿಸಿ, ಹಾಸಿಗೆ ಬಿಚ್ಚುವಾಗ ಅವಳು, ಯಾಕೆಂದು ಗೊತ್ತಿಲ್ಲದೆ ಅಂಗಳಕ್ಕೆ ಹೋದರೆ ಯಾರದೋ ಬೈಕಿನಲ್ಲಿ ಸದೂನ ಹೆಂಡತಿ ಮಗನನ್ನು ಮುಂದಿಟ್ಟುಕೊಂಡು ಹೊರಟಿದ್ದು ಕಂಡು, ಈ ಅಪರಾತ್ರಿಯಲ್ಲಿ ಎಲ್ಲಿಗಪ್ಪಾ ಎಂಬ ಕುತೂಹಲದೊಂದಿಗೆ, ಅವರ‍್ಯಾರೂ ಇನ್ನೂ ಉಂಡಿರಲಿಕ್ಕಿಲ್ಲವೆಂಬ ವಾಸ್ತವ ಫಕ್ಕನೆ ನೆನಪಾಗಿ ಎದೆ ಝಲ್ಲೆಂದಿತು........ ಅರೆ, ನಂದೇನು ತಪ್ಪು? ಅಂವ ಮಾಡಿದ್ದು ಅಂಥಾ ಕೆಲ್ಸ. ಮಗ ಆಗ್ಲಿ ವೊಮ್ಮಗ ಆಗ್ಲಿ ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗೋದೆ ಸೈ. ನೋಡ್ಲಿ, ಅಂವಂಗೂ ಹೊಡ್ತದ ರುಚಿ ಗೊತ್ತಾಗ್ಲಿ ಹಂ, ಎಂದು ಮತ್ತೊಮ್ಮೆ ಅವಡುಗಚ್ಚಿ, ಆ ಸೆಕೆಯಲ್ಲೂ ಚಾದರ ಎಳೆದು ಮುಖ ಮುಚ್ಚಿಕೊಂಡಳು.

ಆದರೆ ಮುಸುಕಿನೊಳಗಿನ ಎವೆಗಳು ಕ್ಷಣ ಮಾತ್ರಕ್ಕೂ ಮುಚ್ಚದೆ, ಆಚೀಚೆ ಹೊರಳುತ್ತ, ಒಮ್ಮೆ ಧಡಕ್ಕನೆ ಎದ್ದು ಕೂತು ಮತ್ತೆ ಮಲಗಿ ಹುಶ್‌ಗರೆಯುತ್ತ, ಶಿವ್ ಶಿವಾ! ಇದೇನಾಗಿ ಹೋತು? ಏನ್ಮಾಡಿ ಬಿಟ್ಟೆ? ತನ್ನಿಂದ ತಪ್ಪಾಗಿಹೋಯಿತೋ? ಅಥವಾ ಅವನ ತಪ್ಪಿಗೆ ಸರೀ ಶಿಕ್ಷೆಯಾಯಿತೋ?....... ಪೋಲೀಸರೆಂದರೆ ವೊದಲೇ ಯಮನ ಮನುಷ್ಯರು. ಸುಟ್ಟ ಪೋರನಿಗೆ ಕುಡ್ತೆ ನೀರಾದರೂ ಕೊಟ್ಟರೋ ಇಲ್ಲವೋ?........ ಅದೆಷ್ಟು ಬಡಿದರೋ..... ಹೊಡೆದರೊ.... ಕೈಕಾಲು ಮುರಿದು ಹಾಕಿದರೋ...... ಒಂದು, ಎರಡಕ್ಕೂ ಬಿಟ್ಟರೋ ಇಲ್ಲವೋ?...... ಒಳಬಾಯಲ್ಲೇ ಹಲುಬಿ ಹಲುಬಿ, ಪಕ್ಕದ ಹಾಸಿಗೆಯಲ್ಲಿ ಹೊರಳಾಡುತ್ತಿದ್ದ ಗಂಡನ ಮೌನದ ಬಗ್ಗೆ ಅಲ್ಲೇ ಸಿಟ್ಟೇರಿ, ಗೊರಕೆ ಹೊಡೆಯುತ್ತಿರುವ ದಿನೂ ಬಗ್ಗೆ ಮತ್ತಷ್ಟು ಕೆಂಡಕಾರಿ, ಯಾವಾಗ ಕಣ್ಣು ಮುಚ್ಚಿತೋ......ಬಿಟ್ಟಾಗ ಬಿಸಿಲ ಕುಡಿ ಕಣ್ಣಿರಿಯುತ್ತಿತ್ತು. ಗಡ ಬಡಿಸಿ ಎದ್ದು ವಾಚು ನೋಡಿದರೆ ಆರೂವರೆ!

ದೇವ್ರೆ ದೇವ್ರೆ, ಅನ್ನುತ್ತ, ಕಸಬರಿಗೆ ಹಿಡಿದ ಚಿಕ್ಕಿ, ಬಾಗಿಲು ಸಾರಿಸಿ, ಬಗ್ಗಿ ರಂಗೋಲಿ ಇಡುವಾಗ, ಎಡಬದಿಗೆ ನಿಂತ ಸರಳೆ ಅಂದರೆ ಸದೂನ ಹೆಂಡತಿಯನ್ನು ಕಂಡು ಬೆಚ್ಚಿ ನೆಟ್ಟಗಾದಳು. ಸರಳೆಯ ಮುಖವೆಂದರೆ ಕೆಂಪು ದಾಸವಾಳದ ಹೂವಾಗಿಬಿಟ್ಟದೆ. ಕಣ್ಣು, ಮೂಗಿಂದ ಗಂಗೆ ಯಮುನೆಯರು ಹರಿಯುತ್ತಿದ್ದಾರೆ. ಏನೋ ಹೇಳಲು ತೆರೆದ ತುಟಿ ಥರಗುಟ್ಟುತ್ತಿದೆ.
ಥರಗುಟ್ಟಲಿ ನನಗೇನಂತೆ, ಕಳ್ಳ ಮೂಳಿನ್ನ ತಂದು, ಈ ಅತ್ತೆ ಅಂದ್ರೆ ಶುದ್ಧ ಕತ್ತೆ ಅಂತ ತಿಳ್ದಿದ್ದಾಳೆ, ಬೇಕಾದ್ದು ಹಾಳ್ ಬಡ ಕೊಂಡು ಹೋಗ್ಲಿ..... ಸರ್ರನೆ ತಿರುಗಿ ಒಳಹೊರಟರೆ, ಯಕೋ ಕಾಲು ಮೇಲೇಳಲೇ ಇಲ್ಲ. ಸೊಸೆಯ ಕಣ್ಣಿಂದ ಕಣ್ಣು ಕೀಳಲು ಸಾಧ್ಯವಾಗಲೂ ಇಲ್ಲ. ಒಂದು ಕ್ಷಣ-ಒಂದೇ ಒಂದು ಕ್ಷಣದ ಪರಸ್ಪರ ಕಣ್ಣ ತಿವಿತದಲ್ಲಿ, ಅತ್ತೆ ಸೊಸೆಯರ ದೃಷ್ಟಿ ಯುದ್ಧದಲ್ಲಿ, ಯುಗಾಂತರಗಳ ಹೆಣ್ಣುಗಳ ಪಾಡು ಹಾದು ಹೋಯಿತೋ- ಮನುಷ್ಯನೊಳಗಿನ ಸ್ವರ್ಗ ಸರಕಗಳು ಪರಸ್ಪರ qs ಕೊಟ್ಟು ಉರುಳಿಬಿದ್ದವೋ...... ಯಾರಿಗೆ ಗೊತ್ತು? ಸೊಸೆ ಬಾಯಿಗೆ ಸೆರಗು ಒತ್ತಿ ಹಿಡಿದು, ಥಟ್ಟನೆ ಹಿಂತಿರುಗಿ ನಡೆದುಬಿಟ್ಟಾಗ, ಚಿಕ್ಕಿ ಕಂಗಾಲು.

‘ಕತೆ ಏನಾಗಿದೆ ಹಾಗಿದ್ರೆ? ಅವಳು ಯಾಕೆ ಇಲ್ಲಿ ಬಂದು, ಚಣದ ಮಟ್ಟಿಗೆ ಕಂಬದ್ಹಾಂಗೆ ನಿಂತುಕೊಂಡಿದ್ದು? ಯಾಕೆ ಏನೂ ಹೇಳದೆ ಹಾಗೆ ನಡೆದುಬಿಟ್ಟಿದ್ದು?..... ವೊದಲೇ ಅತ್ತೆ ಸೊಸೆ ಸಂಬಂಧ, ಈಗಂತೂ ಬ್ರಹ್ಮಾಂಡದಂಥ ಸಿಟ್ಟೂ ತುಂಬಿ ಟ್ಟುಕೊಂಡು ತನ್ನ ಮೇಲೆ ಕಾರಲಿಕ್ಕಾಗಿಯೇ ಕಾಯುತ್ತಿರ ಬಹುದು..... ಅವನನ್ನು ಬಿಟ್ಟ ಲಕ್ಷಣವಂತೂ ಇಲ್ಲ. ಅದೆಷ್ಟು ಹಿಂಸೆಕೊಟ್ಟರೋ, ಯಾವ್ಯಾವ ಪರಿ ನೋಯಿಸಿದರೋ, ಕೋದಂಡ ಹಾಕಿ ನೇತಾಡಿಸಿದರೋ...... ಶಿವನೇ! ಎಂಥಾ ಸಗಣಿ ತನ್ನೋ ಕೆಲ್ಸ ಮಾಡಿಬಿಟ್ಟೆ. ಈಗೇನ್ ಮಾಡ್ಲಪ್ಪಾ ದೇವ್ರೆ?.....’ ಅಲವತ್ತುಕೊಂಡು ಚಿಕ್ಕಿ ಗಡಿಬಿಡಿಯಿಂದ ಕೈಕಾಲು ಓಡಿಸತೊಡಗಿದಳು.
ಗಂಡಸರಿಬ್ಬರಿಗೂ ಏನೂ ಹೇಳದೆ, ದಿನದಂತೆ ಹಾಲಿನ ಕ್ಯಾನುಗಳನ್ನು ಚೀಲಕ್ಕೆ ತುಂಬಿಕೊಂಡು ಬಸ್ಸೇರಿದವಳು, ಪೇಟೆಯಲ್ಲಿಳಿದು ಎಲ್ಲಾ ಮನೆಗೂ ಹಾಲು ಅಳೆದು, ಸೀದಾ ನಿನ್ನೆ ಹೋದ ಪೋಲೀಸ್‌ಠಾಣೆಯ ಅಂಗಳ ತುಳಿಯುತ್ತಿದ್ದಾಗ, ಹೆಜ್ಜೆ ಹಿಂದೆ ಹಿಂದೇ ಬೀಳತ್ತಿದೆ. ಆದರೂ ಹೇಗೋ ಮೆಟ್ಟಿಲೇ ರಿದಾಗ, ನಿನ್ನೆ ಕಂಡ ಸಾಹೇಬರೇ, “ಬನ್ನಿ ಅಮ್ಮಾ” ಅಂದರು. ಅವರ ಖುರ್ಚಿಯ ಹತ್ತಿರ ಮಾತಿಲ್ಲದೆ ಒಂದು ಕ್ಷಣ ನಿಂತಂತೆ, ಅವರೇ, “ಸರೀ ಬುದ್ಧಿ ಕಲ್ಸಿದೇವೆ, ಇನ್ಯಾವತ್ತೂ ಆತ ನಿಮ್ಮ ಸುದ್ದಿಗೆ ಬರೋದಿಲ್ಲ ಬಿಡಿ” ಅಂದಾಗ ಮೆಲ್ಲಗೆ “ನಾನವನ ನೋಡಬಹುದಾ?” ಅಂದು, ತಟ್ಟನೆ ನಾಲಿಗೆ ಕಚ್ಚಿಕೊಂಡಳು.
“ಓಯಸ್, ಏ ಗುರಪಣ್ಣ ಇವ್ರನ್ನು ಒಳಗೆ ಕರ‍್ಕೊಂಡ್ಹೋಗು” ಅನ್ನುತ್ತಿದ್ದಂತೆ ಬಂದ ಗುರುತಿನ ಪೋಲೀಸು, ಒಂಥರಾ ಮುಖ ಮಾಡಿ, “ಬನ್ನಿ” ಅಂದ.

ಹೋಗಿ ನೋಡಿದರೆ, ಕೊಟ್ಟಿಗೆಯಂಥ ಕೋಣೆಯಲ್ಲಿ ಅವನೇ-ತನ್ನ ಚೊಚ್ಚಿಲು ಕಂದನೇ - ‘ಹತ್ತು ಸಾವಿರವಾಗು, ಕಿತ್ತಳೆ ವನವಾಗು, ಬಪ್ಪವರಿಗೆ ತವರು ಮನೆಯಾಗು’ ಎಂದು ದಿನಂಪ್ರತಿ ಹರಸಿ ಬೆಳೆಸಿದವಳಿಗೆ ಕೈಯೆತ್ತಿ ಬಡಿದ ಆ ಬಹದ್ದೂರನೇ, ದೊಣಕಲಿಗೆ ಕಟ್ಟಿದ ಎಮ್ಮೆಯಂತೆ ಕುಳಿತು ಕೊಂಡಿದ್ದಾನೆ..... ಹೆಜ್ಜೆ ಸದ್ದಿಗೆ ತಿರುಗಿದವನು, “ಬಂದ್ಯ? ಇಲ್ಲಿಗೂ ಬಂದುಬಿಟ್ಯ ಚಂದ ನೋಡ್ಲಿಕ್ಕೆ? ನೋಡು, ನೋಡಿ ಹೊಟ್ಟೆ ತುಂಬಾ ಹಾಲು ಹುಯ್ಕೋ ಹೋಗು. ಆದ್ರೆ ನಾ ನಿನ್ನ ಸುಮ್ನೆ ಬಿಡೋದಿಲ್ಲ. ವೊದ್ಲು ನಾ ಹೊರಬಂದುಕೊಳ್ತೇನೆ. ನಂತ್ರ ಏನ್ಮಾಡ್ತೇನೆ ಅಂತ ನಂಗೇ ಗೊತ್ತಿಲ್ಲ. ನೆನಪಿಡ್ಕ.......” ಕೂಗಿ ಕಣ್ಣು ಕೆಕ್ಕರಿಸಿದ ಅಬ್ಬರಕ್ಕೆ ಅವಳು ತಣ್ಣಗಾದಳು.
.........ಅವನ ಬಸಿರಿನಲ್ಲಿ, ಮಿಂದ ಒಂದೂವರೆ ತಿಂಗಳಿಗೇ ಅದೇನೋ ಆನಂದ, ಸಂಭ್ರಮ, ವಾಂತಿ ತಲೆ ತಿರುಗುವಿಕೆಯ ಸಂಕಟದಲ್ಲೂ ಅದೇನೊ ಸಂತೋಷ. ಆಮೇಲೆ, ವೊದಲ ಬಾರಿಗೆ ಹೊಟ್ಟೆಯೊಳಗೊಂದು ಜೀವ ಮಿಸುಕಾಡಿ, ಒದ್ದಾಗ ಅದೇನೋ ವಿಚಿತ್ರ ಖುಶಿ. ಓಡಿಯಾಡೋ ಹುಡುಗನ ಹಾವಳಿಗೆ ಬೇಸತ್ತು ಇವಳು ಒಂದು ಹೊಡೆದರೆ, ಅವನು ಹತ್ತು ಹೊಡೆಯುವವನು, ಇವಳು ಒಂದು ಬೈದರೆ ಅವನು ನೂರು ಬೈಯುವವನು. ಆಗಲೂ ಒಂಥರಾ ಆನಂದವೇ. ಶಾಲೆ ಯಲ್ಲೂ ಅಷ್ಟೇ. ಕ್ಲಾಸಿನ ಹುಡುಗರೊಂದಿಗೆ ಗುದ್ದಾಡಿ ವೊಣಕಾಲೆಲ್ಲ ಗಾಯ ಮಾಡಿಕೊಂಡು ಬಂದಾಗ, ಬೈಯುತ್ತಲೇ ಔಷಧ ಹಚ್ಚಿದರೂ ಒಳಗೊಳಗೆ ಮಗನ ಸಾಹಸಕ್ಕಾಗಿ ಹೆಮ್ಮೆಯಿರುತ್ತಿತ್ತು. ಕಲ್ಲರೆಯ ಮೇಲೆ ಬಿಟ್ಟರೂ ಮಗ ಜೈಸಿಕೊಂಡು ಹೋದಾನು ಎಂಬ ಗರ್ವವಿತ್ತು. ಆದರೀಗ?......
ತಣ್ಣಗೆ ಮಗನೆದುರಿಂದ ಹೊರಡುವಾಗ, ಕರುಳ ಬುಡದಿಂದ ಸಣ್ಣದಾಗಿ ಏನೋ ಒಂದು ಮೇಲೆದ್ದು, ಇಡೀ ಜೀವವನ್ನೇ ಕಟ್ಟಿ ಎಳೆಯುತ್ತಿರುವ ಭಾಸ, ಇಲ್ಲ ನಾನಿಲ್ಲಿಂದ ಹೋಗೋದಿಲ್ಲ, ಹೋಗಲಾರೆ ಎಂದು ಯಾವುದೋ ದನಿ ಪಿಸುಗುಟ್ಟಿದ ಭಾಸ.
ಮತ್ತೆ ಸಾಹೇಬರ ಮುಂದೆ ಬಂದು ನಿಂತಾಗ, ಈ ಮುದುಕೀದು ಮತ್ತೇನು ರಿಪಿರಿಪಿಯಪ್ಪಾ! ಎಂದು ಅವರಿಗೆ ಸಣ್ಣದಾಗಿ ಸಿಟ್ಟೇರಿ, ಕಣ್ಣೆತ್ತಿ ನೋಡಿದಾಗ ಅವಳು ಹೆದರುತ್ತಲೇ, “ಸಾಹೇಬ್ರೆ” ಅಂದಳು.
“ಏನಮ್ಮಾ? ಮಗನ ನೋಡ್ಕೊಂಡು ಬಂದ್ಯಲ್ಲ, ಮತ್ತೇನು?” ಅಂದರು ಅಸಹನೆಯಿಂದ.
“ಉಹುಂ, ಮತ್ತೇನಿಲ್ಲ. ನಮ್ಮ ಸದೂನ ಇಲ್ಲಿಂದ ಬಿಟ್ಟುಬಿಡ್ಲಿಕ್ಕಾದೀತ ಅಂತ.....”
“ಛೆಛೆ, ಇದೊಳ್ಳೇ ಕತೆಯಾಯ್ತಲ್ಲ. ನಿನ್ನೆಯಷ್ಟೇ ಬಂದು, ಮಗ ಹಾಂಗ್ ಹೊಡೆದ-ಹೀಂಗ್ ಬಡಿದ ಅಂತೆಲ್ಲ ಕಂಪ್ಲೇಟು ಬರೆಸಿದವ್ರೂ ನೀವೇ, ಈಗ ಸುಮ್ಮನೆ ಬಿಟ್ಬಿಡಿ ಅನ್ನೋರೂ ನೀವೆ. ನಿಮಗೇನು ತಲೆ ಸರಿ ಇದ್ಯೋ ಇಲ್ವೋ.....? ಇಲ್ಲಿ ನಾವೇನು ಬಿಟ್ಟಿ ಕುಂತಿದೇವೇನು, ನೀವು ಕುಣಿಲಿದ್ಹಾಂಗೆ ಕುಣೀಲಿಕ್ಕೆ?..... ಅದೆಲ್ಲ ಆಗೋದಿಲ್ಲ. ನೀವು ಬರಕೊಟ್ಟ ದೂರಿನ ಮೇಲಿಂದ ಲಾಕಪ್ಪಿಗೆ ಹಾಕಿದೇವೆ. ಈಗ ಕಾಸು ಕೋರ್ಟಿಗೆ ಹೋಗಿದೆ. ಬೇಕಿದ್ರೆ ಅಲ್ಲೇ ಜಾಮೀನು ಕಟ್ಟಿ ಬಿಡಿಸ್ಕೊಳ್ಳಿ. ಈಗ ನಾವೇನೂ ಮಾಡೋಕಾಗೋದಿಲ್ಲ.”
“ಸ್ವಾಮಿ, ದಯವಿಟ್ಟು ಇವ್ನ ಬಿಟ್ಟುಬಿಡ್ರಿ, ನನ್ನ ಹೊಟ್ಯಲ್ಲಿ ಹುಟ್ಟಿದ ಮಗ ಹೀಂಗೆ ಪಂಜರದಲ್ಲಿ ಕೂತಿರೋದ ನೋಡ್ಲಾರೆ.... ದಯ ಮಾಡಿ ಬಿಟ್ಟುಬಿಡ್ರಿ......”
“ಹಾಗಾದ್ರೆ ಬನ್ನಿ, ಅಂವ ನಿಮ್ಮ ಕಾಲು ಹಿಡಿದು ತಪ್ಪಾಯ್ತು, ಇನ್ನಿಂಥಾ ಕೆಲ್ಸ ಮಾಡೋದಿಲ್ಲ ಅನ್ನಲಿ, ನೀವು ನಿಮ್ಮ ಕಂಪ್ಲೇಂಟ್ ವಾಪಸ್ ತಗೊಂಡ್ಬಿಡಿ, ಅಂದ್ರೆ ಇವ್ನ ಬಿಟ್ಟುಬಿಡ್ತೇವೆ,” ಎಂದು ಹೇಳುತ್ತಲೇ ಪಿ.ಸಿ.ಯಿಂದ ಮತ್ತೆ ಕೋಣೆ ಬಾಗಿಲು ತೆಗೆಸಿ.
“ಏಳೊ ಲೌಡಿಮಗನೆ, ಅಮ್ಮನ ಕಾಲು ಹಿಡಿದು ತಪ್ಪಾಯ್ತು ಅಂತ ಒಪ್ಪಿಕೊ,ಅಂದ್ರೆ ಸೀದಾ ಮನೆಗ್ಹೋಗಬಹುದು.....”ಅನ್ನುತ್ತ ಅವನ ಕೈ ಹಿಡಿದೆಳೆದು ತಾಯಿಯ ಕಾಲಿಗೆ ದೂಡಿದರು.
ಆತ ಬಿದ್ದಷ್ಟೇ ವೇಗವಾಗಿ ಜಿಗಿದೆದ್ದು ನಿಂತು, “ಇಲ್ಲ, ನಾ ಯಾರ ಕಾಲಿಗೂ ಬೀಳೋದಿಲ್ಲ. ಇವ್ಳು, ಇವ್ಳು ನನ್ನ ತಾಯಿಯಲ್ಲ, ಹೆಮ್ಮಾರಿ, ನಮ್ಮ ಮನೆಗೆ ಗಂಟುಬಿದ್ದ ಬ್ರಹ್ಮ ರಾಕ್ಷಸಿ, ನೀವು ನನ್ನ ಜನ್ಮ ಕೊದ್ರೂ ಸೈತ ನಾನಿವ್ಳ ಕಾಲಿಗೆ ಬೀಳೋದಿಲ್ಲ. ಇಲ್ಲ..... ಇಲ್ಲ....... ”ಕೂಗುತ್ತಲೇ ಆತ ಹೊರಗೋಡಲು ಪ್ರಯತ್ನಿಸಿದಾಗ, ಪಿ.ಸಿ.ಗಳಿಬ್ಬರೂ ಸೇರಿ ಅವನನ್ನು ಹಿಡಿದು ನಿಲ್ಲಿಸಿದರು.
“ಓಡಿ ಹೋಗ್ತೀಯೇನಲೇ ಭೋಸುಡಿಕೇ, ಹೋಗು ನೋಡೋಣ, ಮಾಡಿದ್ದು ಅಂಥಾ ಕೆಲಸ, ಮೇಲಿಂದ ಕೊಬ್ಬು ನೋಡು. ನಿನ್ನ ಕೊಬ್ಬಿಳಿಸೋದು ಹ್ಯಾಂಗೆ ಅಂತ ನಂಗೊತ್ತಿದೆ,...... ನಿನ್ನ ಸುಮ್ನೆ ಬಿಡೋದಿಲ್ಲ. ಹರಾಮ್ ಖೋರ್‌ನ್ನ ತಂದು.....”, ಸಾಹೇಬರು ಬೈಯುತ್ತಲೇ ಅವನ ಮುಸುಡಿಗೆ ಬೂಟುಗಾಲಿಂದ ಒದ್ದಾಗ, ಅವನು ‘ಅಯ್ಯೋ’ ಅನ್ನುತ್ತ ನೆಲಕ್ಕೆ ಬಿದ್ದ. ಪೆಟ್ಟು ಕಣ್ಣಿಗೆ ಬಿತ್ತೋ? ಮೂಗಿಗೋ? ತಲೆಬುಡ ಗೊತ್ತಾಗಲಿಲ್ಲ.
ಈಗ ಪದ್ದು ಚಿಕ್ಕಿ, ಮಾಳಬೆಕ್ಕಿನ ಹೆಜ್ಜೆ ಸದ್ದಿಗೆ ಹೆದರಿ, ಒಲೆ ಮೂಲೆಯಲ್ಲಿ, ಒದ್ದರೂ ಮ್ಯಾಂವ್ ಗುಟ್ಟದೆ ರಾಬಿ ಕೂತ ಬೆಕ್ಕಿನ ಮರಿ!....... ಸಾಹೇಬರ ಬೂಟುಗಾಲು ಒದ್ದಿದ್ದು ಮಗನನ್ನಲ್ಲ, ತನ್ನನ್ನು, ಅವರು ಅವಮಾನಿಸಿದ್ದೂ ಸದೂ ಎಂಬ ಧಾಂಡಿಗ ಗಂಡಸನ್ನಲ್ಲ- ತನ್ನ ಬಸಿರನ್ನು. ಆ ತಾಯ್ತನದ ಸಹನೆಯನ್ನು. ನಲವತ್ತು ವರ್ಷಗಳ ತನ್ನ ಸಂಸಾರವೆಂಬ ಒಂಟಿಗಾಲಿನ ತಪಸ್ಸನ್ನು...... ವೊದಲೇ ಬೆವರಿದ ಮೈ, ಈಗ ಧಾರೆಯಿಟ್ಟು, ಈವರೆಗೂ ಕಟ್ಟಿಕೊಂಡ ಗಂಗಾ ಪ್ರವಾಹ ಕಣ್ಣಿಂದಲೂ ಧುಮುಕಿಬಿಟ್ಟಿತು.

ಹಾಗೆ ಅಳುತ್ತಲೇ, “ನಿಮ್ಮ ದಮ್ಮಯ್ಯ ಸಾಹೆಬ್ರೆ, ಇವ್ನ ಬಿಟ್ಬಿಡಿ, ನಿಮಗೆ ಕೈ ಮುಗಿತೇನೆ, ದಯವಿಟ್ಟು ಬಿಟ್ಟುಬಿಡ್ರೀ.......” ಅನ್ನುತ್ತ ಅವರ ಎರಡೂ ಕಾಲು ಹಿಡಿದುಕೊಂಡು ಗೋಳಾಡಿದಾಗ, “ಹುಂ, ಆಯ್ತು ಬನ್ನಿ ಇಲ್ಲಿ” ಅಂದರು.
ತಮ್ಮ ಕ್ಯಾಬಿನ್ನಿಗೆ ಬಂದು, ಸರಸರ ನಾಲ್ಕು ವಾಕ್ಯ Uಚಿ, ಅವಳ ಸಹಿ ತೆಗೆದುಕೊಂಡು, “ಸರಿ ನಿಮ್ಮ ಮಗನ ಕರ‍್ಕೊಂಡು ಹೋಗಿ. ಆದ್ರೆ ಮತ್ತೆ ನಾಳೇನೇ, ಹಂಗಾಯ್ತು-ಹಿಂಗಾಯ್ತು ಅಂತ ಬರ‍್ಬೇಡಿ.” ಅಂದು ಪಿ.ಸಿ.ಗೆ ಸನ್ನೆ ಮಾಡಿದಾಗ, ಆತ ಲಾಕಪ್ಪಿನ ಕೀಲಿ ತೆಗೆದು, “ನಡಿಯೋ ಬೇವಾರ್ಸಿ, ಇನ್ನೆಂದಾದ್ರೂ ಇಂಥಾ ಕೆಲ್ಸ ಮಾಡಿದ್ರೆ ನಿನ್ನ ಗತಿ ಮುಗಿತ್ತೂಂತ ತಿಳಕೊ.” ಸಿಕ್ಕಿದ ಒಂದು ಅವಕಾಶ ಕೈ ಜಾರದಂತೆ ಸದೂನ ಮುಖಕ್ಕೆ ಉಗಿದು ಹೊರಕಳಿಸಿದ.
ನೆತ್ತಿ ಮೇಲಿನ ಸೂರ‍್ಯ ಸುರಿಸುತ್ತಿರುವ ಸುಡು ಸುಡು ಬಿಸಿಲಲ್ಲಿ, ನೆರಳಿನಂತೆ ತಾಯಿಯನ್ನು ಹಿಂಬಾಲಿಸಿದ ಮಗ ಬಸ್‌ಸ್ಟಾಪ್‌ನಲ್ಲಿ ನಿಂತಾಗಲೂ ಮಾತಾಡಲಿಲ್ಲ. ಮತ್ತೊಂದು ಗಳಿಗೆಗೆ ಬಂದ ಬಸ್ಸು ಏರಿ, ಇಳಿದು, ಮನೆಯ ಹಾದಿ ಹಿಡಿದಾಗಲೂ ಮಾತಾಡಲಿಲ್ಲ. ಆದರೆ ದಾರಿಯಲ್ಲಿದ್ದ ಹಲಸಿನ ಮರ ಮತ್ತು ಕಳ್ಳಿಗಿಡಗಳು ಪರಸ್ಪರ ಮಾತಾಡಿಕೊಂಡವು.
ಏನೆಂದು?
“ಇದೇಯ ಕಂಡ್ಯ. ಹೊತ್ತ- ಹೆತ್ತ ಸೌಭಾಗ್ಯ ಸಂಭ್ರಮ. ಹೆಣ್ತನದ ವಿಧಿ”, ಅಂದಿತು ಮರ.
“ಆದರೆ ಯಾಕೆ? ಯಾಕೆ ಹೊರೋದು ಹೆರೋದು-ನಂತ್ರ ಕೊರಗೋದು? ನೀನೂ ಸೈತ ಯಾಕಾಗಿ ಇಷ್ಟೆಲ್ಲಾ ಕಾಯಿ ಬಿಡಬೇಕು? ಯಾಕೆ ಮೈ ತುಂಬ ಮುಳ್ಳು ಹೊರಬೇಕು?”
“ಯಾಕಂದ್ರೆ ನನ್ನೊಳಾ ಒಳಗಿನ ಏನೋ ಒಂದು- ಇಡೀ ನನ್ನ ಸಾರ ಸರ‍್ವಸ್ವ ಅನ್ನು, ಅಥವಾ ಹೊಟ್ಟೆಯೊಳಗೆ ಕಟ್ಟಿಕೊಂಡ ನಂಜಿನ ವೊಟ್ಟೆ ಅಂತನ್ನು ಬೇಕಾದ್ರೆ, ಅದನ್ನು ಹೊರಹಾಕಿ ನಾನು ಹಗುರಾಗಬೇಕು. ಒಳಗೊಳಗೇ ಹಣ್ಣು ಮಾಡುವ ಗುದುಮುರಿಗೆಯಿಂದ ನನ್ನನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಈ ಸುಡುಗಾಡಿನ ತಾಯ್ತನ. ಅದಕ್ಕಾಗಿ ಈ ಪರ ಸಂಕಟ. ಅದಕ್ಕಾಗಿ ಜನ್ಮಕ್ಕಂಟಿದ ನೋವು.... ಅದೆಲ್ಲ ನಿಂಗೊತ್ತಾಗೋದಿಲ್ಲ ಬಿಡು”, ಅಂದಿತು ಬುಡದಿಂದ ತಲೆಯವರೆಗೂ ಸಣ್ಣ, ದೊಡ್ಡ ಕಾಯಿಗಳ ಸರಮಾಲೆಯನ್ನೆ ಹೊತ್ತು ನಿಂತ ಹಲಸು.
“ಇದ್ದೀತಪ್ಪಾ, ಅದು ನಂಗೊತ್ತಿಲ್ಲ.” ವ್ಯಂಗ್ಯವಾಗಿ ಹೇಳಿ ಸುಮ್ಮನಾಯಿತು, ಒಂದು ಹೂವನ್ನೂ ಅರಳಿಸದ ಕಳ್ಳಿ.
ಕಲ್ಲು ಮುಖದ ಮಗನೊಂದಿಗೆ-ಹಾಲಿನ ಕ್ಯಾನುಗಳೊಂದಿಗೆ, ಚಿಕ್ಕಿ ಮನೆಯ ಹಾದಿ ತುಳಿದಳು.
ಸರಿಯಾಗಿ ಆರು ಘಂಟೆಗೆ, ಬಿಡಾರದ ಕೋಳಿಯಲ್ಲ, ದಿನೂ ತಂದ ವಾಚಿನ ಕೋಳಿ ‘ಕೊ ಕ್ಕೊ ಕೋ ಕೋಂ’ ಕೂಗಿದಾಗ ಎಚ್ಚೆತ್ತ ಪದ್ದು ಚಿಕ್ಕಿ, ಕಣ್ಣು ಬಿಡಬೇಕೆಂದರೆ, ರೆಪ್ಪೆಗಳ ಮೇಲೆ ಯಾರೋ ಕಲ್ಲು ಹೇರಿಟ್ಟ ಭಾಸ, ಮಗ್ಗುಲಾಗತೊಡಗಿದರೆ ಮೈಕೈಯೆಲ್ಲ ಗುದ್ದಿ ಹಣ್ಣು ಮಾಡಿದ ನೋವು, ಅದೇ ಅರೆ ಭ್ರಮೆಯಲ್ಲಿ ಕಣ್ಣು ಮುಚ್ಚಿದವಳು. ‘ರಾಮ ರಾಮಾ’ ಎಂಬ ಗಂಡನ ನರಳಿಕೆಗೆ ಧಡಕ್ಕನೆ ಎದ್ದು ಕುಳಿತಳು.

ಹೌದು, ಹೊರಗೆ ಬೆಳ್ಳಂಬೆಳಗಾಗಿ ಬಿಟ್ಟದೆ. ಅಂಗಳದ ತುದಿಯ ತೆಂಗಿನ ಗಿಡದಲ್ಲಿ ಆಗಲೇ, ಕಾಗೆ ಗುಬ್ಬಿಗಳ ಕಟಿಪಿಟಿ ಶುರುವಾಗಿದೆ. ಕೊಟ್ಟಿಗೆಯ ಮಂದಿ ಕರೆಯುತ್ತಿದ್ದಾರೆ. ಒಂಬತ್ತೂ ವರೆ ಬಸ್ಸು ಬರುವುದರೊಳಗಾಗಿ ತಾನು ಮಾಡಬೇಕಿರುವ ಕೆಲಸಗಳ ರಾಶಿ ನೆನೆದೇ ಎದೆಯೊಡೆದು ಗಂಟಲಿಗೆ ಬರುತ್ತಿದೆ. ಆದರೆ ಶರೀರ ಮಾತ್ರ ಏನೇ ಆದರೂ ಈ ಜನ್ಮದಲ್ಲಿ ಮೇಲೇಳ ಲಾರೆನೆಂಬ ಹಟ ತೊಟ್ಟು ಬಿಟ್ಟ್ಟಿದೆ.... ಸಾಯ್ಲಿ, ಎಲ್ಲಾ ಹುಲಿ ತಿಂದು ಹೋಗ್ಲಿ. ಮನೆ- ಮಕ್ಳು- ಸಂಸಾರ ಎಂದು ಒಂದು ಹದಿಮೂರು ವರ್ಷದಿಂದ ಜೀವ ತೇಯ್ದಿದ್ದಕ್ಕೆ, ಆತಲ್ಲ ಸಮಾ ಮಂಗಳಾರ‍್ತಿ! ಸಾಕೋ? ಇನ್ನೂ ಬೇಕೋ? ಋಣವೇ ಋಣವೆ. ಮನೆಗೆ ಬೇಕು ಮಕ್ಳಿಗೆ ಬೇಕು ಎಂದು ಆ ಪರಿ ಉಪವಾಸ, ವನವಾಸ ಮಾಡಿ ಮಂಗನ ಮಾಡಿಟ್ಟೆ ಹೌದ? ಒಂದೊಂದು ಮೆಟ್ಟು ಜಾಗಕ್ಕಾಗಿ ದಾಯಾದಿಗಳ ಕೈಲಿ ಹೊಡೆ ದಾಡಿದೆ ಹೌದ? ಬೆಟ್ಟದಲ್ಲಿ, ಹಿತ್ತಿಲಲ್ಲಿ ಎಂದಿಲ್ಲದೆ ಗಡಿ ಒತ್ತಿ, ಹುಲ್ಲು, ಸೊಪ್ಪು ಕೊದು, ಗಂಡನನ್ನು ಮುಂದು ಮಾಡಿ ಕೊಂಡು ಜಗಳಕ್ಕೆ ನಿಂತೆ ಹೌದ?... ಹೆಂಗಾತು ಈಗ?.... ಮುಚ್ಚಿದ ಕಣ್ಣಿವೆಯೊಳಗೆ- ಮುಚ್ಚಿಹೋದ ಮನಸ್ಸಿನೆದುರು ಯಾರದೋ ಸಪೂರ ದನಿ ಹಗೂರ ಮಾತು... ಯಾರೂ? ಯಾರದೂ?.....
ಇಲ್ಲ, ಇನ್ನು ಸಾಧ್ಯವಿಲ್ಲ ಅನ್ನುತ್ತ ಚಿಕ್ಕಿ ದಡಬಡಿಸಿ ಹಾಸಿಗೆ ಸುತ್ತಿ, ಸೀದಾ ಬಚ್ಚಲಿಗೇ ಹೋಗಿ ನಿಂತಳು. ರಾತ್ರಿಯ ಇಡೀ ಅಧ್ಯಾಯದ ನೆನಪನ್ನು ಸೋಪಿನೊಂದಿಗೆ ತೊಳೆದುಬಿಟ್ಟು, ಒಲೆ ಬೂದಿ ತೆಗೆದು, ಸಗಣಿ ಸಾರಿಸಿ, ಬೆಂಕಿ ಒಟ್ಟಿ, ಚಾಕ್ಕೆ ನೀರಿಡುವ ಹೊತ್ತಿಗೆ ಮತ್ತೆ ಹಾಸಿಗೆಯಿಂದ ‘ರಾಮ ರಾಮಾ-ರಾಮಾ ರಾಮಾ’ ನರಳಿಕೆ, ದೇವ್ರೆ! ಪೆಟ್ಟು ಜೋರಾಗಿಯೇ ಬಿದ್ದಿರ ಬೇಕು. ಇಲ್ಲಾಂದ್ರೆ ಹಾಗೆಲ್ಲ ನರಳುವ ಜನವೇ ಅಲ್ಲ. ಇಡೀ ದಿನ, ಗಡಿಯಾರದ ಮುಳ್ಳಿನಂತೆ, ಮೇಲೇರಿ ಇಳಿವ ಸೂರ‍್ಯ ನಂತೆ, ತಾನಾಯಿತು ತನ್ನ ಕೆಲಸವಾಯಿತು. ತೀರಾ ಉಮೇದಿ ಬಂದಾಗ, ಭಂಗಿ ಸೊಪ್ಪಿನ ಪಾನಕವಾಯಿತು. ಹೊರ‍್ತೂ ಯಾರೇ ಬರಲಿ, ಹೋಗಲಿ, ಯಾರಿಗೆ ಆರಾಮವಿರಲಿ, ಬಿಡಲಿ, ತನ್ನ ಹ್ವಾರ‍್ಯ ಬಿಟ್ಟಿದ್ದು ಇಲ್ಲ. ಹೆಂಡತಿ ಮಕ್ಕಳ ವ್ಯಾಜ್ಯ ದಲ್ಲಿ ಉಪ್ಪು-ಉಪ್ಪಿನ ಕಲ್ಲು ಅಂದಿದ್ದೂ ಇಲ್ಲ. ಅಂಥಾದ್ರಲ್ಲಿ....
ಕುನ್ನಿಗೊಡ್ಡೆ! ನಿನಗೊಳ್ಳೆ ಕಾಲ ಬಂದಿದ್ದಲ್ಲ ಇಂಥಾ ಬುದ್ದಿ, ತಡೆ ತಡೆ ಮಾಡ್ತೇನೆ ನಿಂಗೊಂದ್ ಮದುವೇಯ.... ಅವಳು ಕರಕರ ಹಲ್ಲು ಕಡಿದು, ಗಂಡನ ಹತ್ತಿರ ಹೋಗಿ, ಬಗ್ಗಿ, “ಇಕಾ, ಇಕಳಿ ಚಾ ತಂದೆ” ಅಂದಾಗ, ಅವನು ಮತ್ತಷ್ಟು ‘ಹುಹುಹು’ ಗುಟ್ಟುತ್ತ, ಮೆಲ್ಲಗೆ ಮೇಲೆದ್ದು, ಗೋಡೆ ಹಿಡಿದುಕೊಂಡು, ಮುಖ ತೊಳೆಯಲು ಹೊಂಟಿದ್ದು ಕಂಡು ಮತ್ತಷ್ಟು ಮೈ ಉರಿಯಿತು. ಇಲ್ಲ, ಇನ್ನು ಸುಮ್ಮನಿರೋದಿಲ್ಲ. ಇಡೀ ಎಂಟಾನೆಂಟು ವರ್ಷ, ತನ್ನದೆ ಎಂಜಲು-ತನ್ನದೇ ಬಚ್ಚಲು ಹೇಳೋದ್ಯಾರಿಗೆ ಎಂದು ಸಹಿಸಿದ್ದೇ ಸಹಿಸಿದ್ದು. ಒಳಗಿನ ಹೊಗೆ ಹೊರಬೀಳದಿದ್ಹಾಂಗೆ ಮುಚ್ಚಿಕೊಂಡಿದ್ದೇ ಕೊಂಡಿದ್ದು. ಇಲ್ಲ, ಇನ್ನು ಮುಚ್ಚಿಟ್ಟುಕೊಳ್ಳ ಲಾರೆ, ಪುಂಡಂಗರ್ಧ ರಾಜ್ಯ ಉಂಬಳಿಯಂತೆ, ನೋಡ್ತೇನೆ, ನಾನೂ ನೋಡೇ ಬಿಡ್ತೇನೆ, ಹಂ, ... ಒಲೆಯ ಹಾಯ್ಗದ ಸೌದೆ ಯೊಂದಿಗೆ ತಾನೂ ಧಗಧಗಿಸುತ್ತ ಚಿಕ್ಕಿ ಕೊಟ್ಟಿಗೆಯತ್ತ ನಡೆದಳು.
ನಡೆದದ್ದೇನೋ ಹೌದು, ಆದರೆ ಎಮ್ಮೆ ಕರೆಯಲು ತುದಿಗಾಲಲ್ಲಿ ಕೂತರೆ, ಮೇಲೇಳಲಿಕ್ಕಾಗುತ್ತಿಲ್ಲ. ಶರೀರದ ಯಾವ್ಯಾವ ಭಾಗ ನೋಯುತ್ತಿದೆಯೆಂದು ತಿಳಿಯುತ್ತಲೂ ಇಲ್ಲ. ಬಿದ್ದಿದ್ದು ಮೂರೇ ಮೂರು ಲತ್ತೆ, ಕಬ್ಬಿಣದ ಸರಳಿಂದ..... ಐವತ್ನಾಲ್ಕರ ಶರೀರಕ್ಕೆ. ಅದೂ ಆರು ಬಾಣಂತನದಲ್ಲಿ ಅತ್ತ ಹೋಗಿ ಇತ್ತ ಬಂದದ್ದು. (ಅದರಲ್ಲೇ ಮೂರು ಹಾಳು ಬಾಣಂತನ ಬೇರೆ) ಸೊಂಟ ಮುರಿಯದೆ ಶಾಬೀತಾಗಿ ಉಳಿದದ್ದೇ ಹೆಚ್ಚು. ಇನ್ನೊಂದು ಚಣ ಅಲ್ಲೇ ಇದ್ದಿದ್ದರೆ, ಬಹುಶಃ ಕೈ ಕಾಲು ಮುರಿದೇ ಕುಂಡ್ರಿಸುತ್ತಿದ್ದ ಮಗ ಬಹಾದ್ದೂರ. ಆ ಕರ್ರೊ ಕತ್ತಲಲ್ಲಿ, ಪೆಟ್ಟು ತಿಂದ ಎಮ್ಮೆ ಬಿದ್ಹಾಕಿ ಓಡುವಂತೆ ಓಡಿ, ಸೌದೆ ಮನೆ ಹಿಂದೆ ಅಡಗಿ ಕೂತಿದ್ದಕ್ಕೆ ಈಗ ಮೇಲೆದ್ದು ಓಡಾ ಡುತ್ತಿರುವುದು. ಇರ‍್ಲಿ, ನೋಡಿಯೇ ಬಿಡೋಣ..... ನಾನಂದ್ರೆ ಏನಂತ ತಿಳ್ಕೊಂಡಿದಾನೆ ಕುನ್ನಿ ಹಂ.... ಕಟ್ಟಿಸಿಕೊಂಡ ಹಲ್ಲು ತುಂಡಾಗಿ ಬಿಡಬಾರದೆಂಬ ಹುಶಾರಿನಲ್ಲೇ ಮತ್ತೊಮ್ಮೆ ಹಲ್ಲು ಕರ ಕರ ಮಾಡಿ, ಪದ್ದು ಚಿಕ್ಕಿ ಉಪ್ಪಿಟ್ಟು ಕೆದಕತೊಡಗಿದಳು.
ಉಪ್ಪಿಟ್ಟಾಯಿತು. ಮತ್ತೊಂದು ಚಹಾ ಕುದಿಯಿತು. ಉಪ್ಪಿಟ್ಟು ಕಂಡಿದ್ದೇ, ದಿನೂನ ಮುಖ ಸಿಂಡರಿಸಿದರೂ, ಮಾತಿಲ್ಲದೆ ಮೂವರೂ ತಿಂದು ಮುಗಿಸಿಯಾಯಿತು. ಮೇಲೇಳುವಾಗ “ದಿನೂ” ಎಂದು ದೈನ್ಯದಿಂದ ಅವಳು ಕರೆದದ್ದಕ್ಕೆ ‘ಎನು?’ ಎಂಬಂತೆ ಅಮ್ಮನ ಮುಖ ನೋಡಿದ, ಕರುಣೆಯಿಂದಲೋ? ತಾತ್ಸಾರದಿಂದಲೋ?....
“ತಮ್ಮಾ, ನೀನೂ ನಂಜೊತೆ ಪ್ಯಾಟಿಗೆ ಬಂದ್ಬಿಡು. ಆ ಠೊಣ ಪನ ಸೊಕ್ಕು ಅದೆಷ್ಟಿದ್ಯೋ ನೋಡಿಬಿಡೋಣ. ಆ ಹವಾಲ್ದಾ ರಣ್ಣ ನಿಂಗೊತ್ತಿದೆಯಲ್ಲ...... ”, ಅಮ್ಮನ ಮಾತಿಗೆ ಮಗ ಉತ್ತರಿಸದಿದ್ದರೂ ನರಳುತ್ತಿದ್ದ ಅಪ್ಪ ತಲೆಯೆತ್ತಿ, ಪಟಕ್ಕನೆ ಬಾಯಿಬಿಟ್ಟ.
“ಹೆಡ್ಡೀ ಹೆಡ್ಡಿ, ನಿನ್ನ ತಲೆ ಏನು ಹನ್ನೆರಡಾಣೆ ಆಗ್ಹೋ ಯ್ತೇನೆ? ಹೊಟ್ಟೆ ಮಗನ ಹಿಡಿದು ಪೊಲೀಸ್ರಿಗೆ ಕೊಡ್ಲಿಕ್ಕೆ ಹೊಂಟೀಯಲ್ಲ, ಥೂ ನಿನ ಜನ್ಮಕ್ಕೆ......”. ಅದೇನೋ ಮಹಾ ಹೇಳಿಬಿಟ್ಟೆನೆಂಬಂತೆ ತಲೆ ತಗ್ಗಿಸಿ, ಬಗ್ಗಿದ ಶರೀರವನ್ನು ಇನ್ನಷ್ಟು ಮುದ್ದೆಗೊಳಿಸಿ, ಬೆವರೊರೆಸಿಕೊಳ್ಳತೊಡಗಿದ. ಎಂದೂ ಇಲ್ಲದ ಗಂಡನ ಈ ಪರಿಗೆ, ಮಿಕಿ ಮಿಕಿ ನೋಡುತ್ತ, ಚಿಕ್ಕಿ ಇನ್ನಷ್ಟು ಬೆಂಕಿಯಾದಳು.
“ಹಾಂ ಹಂ, ಹೌದು. ನಾ ಹೆಡ್ಡಿಯಾಗಿದ್ದಕ್ಕೇ ನಿಮ್ಮೆಲ್ರ ತಿಪ್ಪೆ ಬಳೀತಾ ಬಿದ್ದಿರೋದು. ನೀವು ಮಾ ಬುದವಂತ್ರು. ದಿನ ದಿನಾ ಮಗನ ಕೈಲಿ ಲತ್ತೆ ತಿಂತಾ ಕುಂತಿರಿ. ನಾನೆಲ್ಲಾದರೂ ದೇಶಾಂತ್ರ ಹೊಂಟ್ಹೋಗ್ತೇನೆ, ಈ ನಮನಿ ಜಗಳ-ರಗಳೆ-ಹೊಡೆದಾಟ ಇನ್ನು ನೋಡ್ಲಾರೆ.....” ಬುಸುಗುಟ್ಟುತ್ತ ಅವಳು ಮೇಲೆದ್ದಾಗ, ಮಗ ಅಪ್ಪನ ಕೈ ಹಿಡಿದು, “ಅಪಾ ನೀ ಸುಮ್ನಿರು. ಅವ್ನನ್ನೇನು ಯಾರೂ ಕೊಂದು ಹಾಕೋದಿಲ್ಲ. ಅಲ್ಲಿ ಪೊಲೀಸ್ರ ಬೂಟು ಗಾಲಿನ ರುಚಿ ಕಂಡ್ರೆ ಮಾತ್ರ ಅವ್ನಿಗೆ ಬುದ್ಧಿ ಬರೋದು. ಅವನ ನೆತ್ತಿಗೇರಿದ ಪಿತ್ತ ಇಳಿಸ್ಲಿಕ್ಕೆ ಅವರೇ ಸಮ. ನೀ ಅಡ್ಡ ಬರ‍್ಬೇಡ....” ಅನ್ನುತ್ತ ಅಲ್ಲಿಂದೆದ್ದ.

ಎದ್ದಿದ್ದೇನೋ ಹೌದು. ಆದರೆ ಹೋಗುವುದೆಲ್ಲಿಗೆ? ನಿಂತ ಭೂಮಿಯ ಸೀಮೆ ದಾಟಿ, ಸಾಮಾನ್ಯರು ಇನ್ಯಾವ ಗ್ರಹಕ್ಕೆ ಹೋಗಲು ಸಾಧ್ಯವಿದೆ? ಮಣ್ಣ ಮೇಲಿನ ಕಲ್ಲು ಮುಳ್ಳಿನ ದಾರಿಯ ಹೊರತಾದ ಹಾದಿ ಎಲ್ಲಿದೆ?.... ಈ ನೆಲದ ಮೇಲಿನ ಸಮಸ್ತ ಕ್ಷುದ್ರತೆಯೂ ಮನೆ ಮಾಡಿ ನಿಂತ ಮನೆ, ಅಲ್ಲಿ ಅವನ ಬುದ್ಧಿ ಬಲ್ಲಾದಂದಿನಿಂದ ಜಗಳವಿಲ್ಲದ ದಿನವೇ ಇಲ್ಲ. ಇವನು ಶಾಲೆ ಕಲಿಯುವ ಹೊತ್ತಿನಲ್ಲೇ, ಇಬ್ಬರು ಅತ್ತಿಗೆಯರು- ಅಕ್ಕಂದಿರು-ಅವರ ಒಂದೊಂದು ಮರಿಗಳು ಗಿಜಿಬಿಜಿ ತುಂಬಿ ಕೊಂಡ ಗೂಡಿನಲ್ಲಿ, ಬೆಳಗಾಗೆದ್ದು ಚಾ ಕುಡಿಯುವಾಗಲೇ, ಒಬ್ಬಳ ಮಗನಿಗೆ ಇನ್ನೊಬ್ಬಳು ತುಪ್ಪ ಹಾಕಲಿಲ್ಲವೆಂಬ ಆಕ್ರೋಶ, ಇಲ್ಲಾ ಹಲ್ಲು ಪುಡಿಗಾಗಿ, ಇಲ್ಲಾ ಸೋಪಿಗಾಗಿ, ಮತ್ತೆಲ್ಲ ಸಾಯಲಿ, ಮಗುವಿನ ಹಾಲಿಗೆ ಚಿಟಕಿ ಸಕ್ಕರೆ ಹಾಕಿ ದ್ದಕ್ಕೂ ಯಜಮಾನ ಅಣ್ಣನ ಗೌಜೇ ಗೌಜು. ಅವನಿಗೆ ‘ಸೋ’ ಅನ್ನುವ ಹೆಂಡತಿ. ಸತ್ತೂ, ಬಿದ್ದೂ ಗೇಯಲಿಕ್ಕೆ ಮನೆಜನ ಬೇಕು, ಉಂಡು-ತಿಂದು, ಉಟ್ಟು-ತೊಟ್ಟು ಮಾಡಲು ಬೇಡ ಅಂದ್ರೆ ಯಾರು ಕೇಳ್ತಾರೆ? ಎಂದು ಉಳಿದವರ ಆಕ್ರೋಶ. ತಾಯಿ ಒಮ್ಮೆ ಕೃಷ್ಣ ಪಕ್ಷ, ಒಮ್ಮೆ ಶುಕ್ಲ ಪಕ್ಷ. ಪಂಕ್ತಿಯ ಬುಡದಲ್ಲೇ ಕೂತು, ಕಂಕಿಂ ಎನ್ನದೇ ಬಂದಿದ್ದು ತಿಂದು, ಮೇಲೇಳುತ್ತಿದ್ದ ಅಪ್ಪನಂತೆ ಈ ಸಣ್ಣವನೂ ಉಪ್ಪಿಗೂ ಇಲ್ಲ, ಸೊಪ್ಪಿಗೂ ಇಲ್ಲ. ಅಂತೂ, ಹೇಗೋ ಎಳೆದುಕೊಂಂಡು ಬಂದ ಸಂಸಾರದ ತೇರು, ಇವನು ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಹರಿದು ಮೂರು ಚೂರಾ ಗಿತ್ತು.
ಆಗಲಿ, ಮಹಾ ಏನಾಯ್ತು? ಕಾಯಿ ಬಂದು ಬಂದು, ಹೇರಿಕೊಂಡ ಮಾವಿನ ಟೊಂಗೆ ಮುರಿದುಬಿದ್ದಿದ್ದಕ್ಕೆ ಮರಕ್ಕೆ ಯಾಕೆ ಚಿಂತೆ? ಇನ್ನೊಂದು ಬದಿಯಿಂದ ಚಿಗುರಿಕೊಂಡರಾ ಯ್ತಪ್ಪ. ಅಂದರೆ ಅದಲ್ಲ ಪ್ರಶ್ನೆ. ಇದ್ದ ಎರಡೆಕರೆ ತೊಟದಲ್ಲಿ ನಾಲ್ಕು ಪಾಲು ಮಾಡಿದಾಗ ಯಾರಿಗೆ ಸಾಕಾಗುತ್ತದೆ?..... ಇಡೀ ವರ್ಷಕ್ಕೆ ಕ್ವಿಂಟಾಲು ಅಡಿಕೆ ಕೊಯ್ದು, ಯಾವ ಕುಟುಂಬ ಸುಖವಾಗಿರಲು ಸಾಧ್ಯ?....
ತನಗೆ ಕೊಟ್ಟ ತೋಟ ಹಾಳು, ಅಡಿಕೆಯಾಗುವುದಿಲ್ಲ. ಎಂದು ಹಿರಿಯವನು- ತನ್ನದು ಮತ್ತೂ ಖರಾಬು, ಸಣ್ಣವನ ತೋಟ ತನಗೆ ಬೇಕು ಎಂದು ನಡುವಿನವನು-ಒಮ್ಮೆ ಎಲ್ಲರೂ ಒಪ್ಪಿಕೊಂಡರು ಹಿಸೆ ಕರಾರು ಬರೆದಾದ ಮೇಲೆ ತಕರಾರು ಮಾಡಿದ್ರೆ ಯಾರು ಕೇಳ್ತಾರೆ? ಎಂದು ತಾಯಿ-ಹ್ಯಾಗೆ ಕೇಳೋದಿಲ್ಲ ನೋಡೇಬಿಡ್ತೇವೆ ಎಂದು ಅವರಿಬ್ಬರು ಅದೆಲ್ಲ ಹಾಳಾಯ್ತು, ಒಂದು ಒಗ್ಗರಣೆ ಸೌಂಟಿಗಾಗಿ, ಒಂದು ಎಣ್ಣೆ ಗಿಂಡಿಗಾಗಿ, ಒಂದು ದೀಪದ ಶಮೆ, ಒಂದು ಶ್ಯಾವಂತಿಗೆ ಹಿಳ್ಳಿಗಾಗಿಯೂ ಹತ್ತಿ ಹರಿಯದ ಜಗಳ.... ಹತ್ತಿರದ ನೆಂಟರಿಷ್ಟರು, ನೆಂಟರಲ್ಲದ ಹಿರಿಯ ಪಂಚರು-ಯಾರೇ ಬಂದು ಹೇಳಿದರೂ ಮತ್ತಷ್ಟು ಜಟಕಾಗುವ ಜಗಳ..... ಕಂಡೂ ಕಂಡೂ ತಲೆ ಕೆಟ್ಟುಹೋದ ದಿನು, ಯಾರಿಗೂ ಸುದ್ದಿ ಕೊಡದೆ ಬೊಂಬಾಯಿ ಬಸ್ಸು ಹತ್ತಿದವನು, ಹೋದ ಎಂಟೇ ದಿನಕ್ಕೆ ಕುದಿಯುವ ಜ್ವರ ಹೊತ್ತು ವಾಪಸು ಬಂದಾಗ, ತಾಯಿ ಬುದ್ಧಿ ಹೇಳಿ, ತನ್ನ ಏಕೈಕ ಆಪದ್ಧನವಾದ ವಠಣಿ ಸರ ಮಾರಿ, ಊರ ಬಸ್‌ಸ್ಟಾಪಿನಲ್ಲಿ ಗೂಡಂಗಡಿ ಹಾಕಿ ಕೊಟ್ಟಿದ್ದಳು.
......ತಾಯಿಯ ಮಾತಿನಂತೆ ಮಿಂದು, ಅಂಗಿ,ಪ್ಯಾಂಟು ತೊಟ್ಟ ದಿನು ಅಮ್ಮನನ್ನು ಕರೆದರೆ,ಅವಳಿನ್ನೂ ಪಾತ್ರೆ ತಿಕ್ಕುತ್ತಿದ್ದಾಳೆ. ಘಂಟೆ ಆಗಲೇ ಒಂಬತ್ತು. ಇನ್ನರ್ಧ ತಾಸಿನಲ್ಲಿ ಇವಳು ಮಿಂದು, ಸೀರೆಯುಟ್ಟು ಹೊರಟಂತೆಯೇ ಸೈ. ಶಾಲೆಮನೆ ಘಟ್ಟ ಹತ್ತುತ್ತಿದ್ದಾಗಲೇ ಬಸ್ಸು ‘ಬುರ್ರ್’ ಎಂದು ಹೋಗಿ ಯಾಗಿರುತ್ತದೆ. ಥತ್, ಹಾಳ್‌ಬಿದ್ಹೋಗ್ಲಿ!...... ಮನಸ್ಸಿನಲ್ಲೇ ಅಲವತ್ತು ಕೊಳ್ಳುತ್ತ, “ಅಮ್ಮಾ, ನೀ ಮೀಯ್ಲಿಕ್ಹೋಗು. ಇದಿಷ್ಟು ನಾ ತೊಳಿತೇನೆ” ಅಂದ ಮಗನ ಮಾತಿಗೆ ತಾಯಿ ತಿರುಗಿ ಮಾತಾಡಲೂ ಇಲ್ಲ, ಕೆಲಸ ಬಿಟ್ಟು ಮೇಲೇಳಲೂ ಇಲ್ಲ. ಅವನ ಮುಖವನ್ನೇ ಮಿಕಿ ಮಿಕಿ ನೋಡಿದಳು ಮಾತ್ರ.

ಇವನೊಬ್ಬನಿಗಾದರೂ ಅಮ್ಮ ಎಂಬ ಮಮಕಾರ, ಮುಳ್ಳು ವೊನೆಯಷ್ಟಾದರೂ ಇದ್ದಿದ್ದರೆ, ಒಂದು ದಿನ ಬಿಡದೆ, ಮೂರೆಮ್ಮೆ ಕರೆದ ಹಾಲನ್ನು, ತಾನೇ ಪೇಟೆಗೆ ಹೊತ್ತೊಯ್ದು ಮಾರಬೇಕಿರ ಲಿಲ್ಲ..... ಮತ್ತೆ ಮನೆಗೆ ಬಂದು ಹಸಿಬಿಸಿ ಕೂಳು ಕುಚ್ಚಬೇಕಿರ ಲಿಲ್ಲ..... ಅದೆಲ್ಲ ಸಾಯ್ಲಿ, ಹೊಂತಗಾರ ಪೋರ ಅಂಬುವನು ಕನಿಷ್ಠ, ದನಕರ ಮೈ ತೊಳೆಸಿ, ಸಗಣಿ ಬಾಚಿ, ಹುಲ್ಲು ತಂದು ಹಾಕುವಷ್ಟಾದರೂ ಸಹಾಯ ಮಾಡಿದ್ದರೆ?....
ಪದ್ದು ಚಿಕ್ಕಿ, ದೊಡ್ಡದೊಂದು ನಿಟ್ಟುಸಿರಿನೊಂದಿಗೆ ಪಾತ್ರೆ ಗಳನ್ನೆತ್ತಿ ಒಳಗೊಯ್ದಳು.
ಒಳಗೆ ಎಂಜಲು ಬಾಳೆ, ಬಾಳೆಗೆ ಮುತ್ತಿಕೊಂಡ ನೊಣದ ರಾಶಿ, ಒಲೆಮೂಲೆಯಲ್ಲಿ ಪರಮಾನಂದದಿಂದ ಕಣ್ಣು ಮುಚ್ಚಿದ ಬೆಕ್ಕು...... ಈಗಿದನ್ನೆಲ್ಲ ಚೊಕ್ಕಗೊಳಿಸುತ್ತ ಕೂತರೆ ಬಸ್ಸು ತಪ್ಪಿ, ಮತ್ತಂದು ತಾಸು ಬಿಸಿಲಲ್ಲಿ ತಾಪ ತೆಗಿಯಬೇಕು. ‘ಸತ್ತಿರ‍್ಲಿ ಎಲ್ಲವೂ ಇದ್ದ ಹಾಂಗೆ’ ಅಂದುಕೊಳ್ಳುತ್ತ ಚಿಕ್ಕಿ, ಬರಬರ ಎರಡು ಚೊಂಬುಮಿಂದು, ತಲೆಬಾಚಿ, ಅಡರಾಬಡರಾ ಸೀರೆ ಸುತ್ತಿ ಕೊಂಡು, ನಾಲ್ಕಾರು ಕ್ಯಾನುಗಳಿಗೆ ಹಾಲು ಅಳೆದು, ಎಲ್ಲದಕ್ಕೂ ಮರೆಯದೆ ಒಂದೊಂದು ಲೋಟ ನೀರು ಸೇರಿಸಿ, ಕ್ಯಾನು ಗಳನ್ನೆಲ್ಲ ಕೈ ಚೀಲಕ್ಕೆ ತುಂಬಿ, ಚಪ್ಪಲಿ ಮೆಟ್ಟಿದಾಗ ದಿನು, ಮಾತಿಲ್ಲದೆ ಅವಳನ್ನು ಹಿಂಬಾಲಿಸಿದ.
ಬ್ಯಾಡ ಬ್ಯಾಡಂದ್ರೂ ಹಿಂಬಾಲಿಸಿ ಬರುವ ನೆನಪುಗಳ ಭಾರ ಹೊತ್ತು ಮನೆ ಮುಂದಿನ ಘಟ್ಟ ಏರುತ್ತಿರುವಾಗಲೆ ದೂರ ದಲ್ಲೆಲ್ಲೊ ಬಸ್ಸಿನ ಸದ್ದು. ಹಾಲಿನ ಚೀಲವನ್ನು ಮಗನ ಕೈಗೆ ದಾಟಿಸಿದ್ದೇ, ಚಿಕ್ಕಿ ನಿಜಕ್ಕೂ ಓಡತೊಡಗಿದಳು. ಓಡಿ ಬಸ್ ಸ್ಟಾಪ್ ತಲುಪುವುದಕ್ಕೂ, ಬಸ್ಸು ಬಂದು ನಿಲ್ಲುವುದಕ್ಕೂ ಸರಿಯಾಯಿತು. ಯಾವತ್ತೂ ದಿನ ತುಂಬಿದ ಬಸುರಿಯಂತೆ ತುಂಬಿಕೊಂಡಿರುತ್ತಿದ್ದ ಬಸ್ಸು, ಇವತ್ತೇಕೊ ಖಾಲಿಯಿರುವುದು ಕಂಡು, ‘ಹಯ್ಯಪ್ಪ! ಸದ್ಯ’ ಅನ್ನಿಸಿ, ಮಗನ ಕೈಯಿಂದ ಕೈ ಚೀಲ ಗಳನ್ನಿಸಿದುಕೊಂಡು ತೊಡೆಯ ಮೇಲಿರಿಸಿ ಕುಳಿತುಕೊಂಡಾ ಗಲೂ, ಏನ್ ಮಾಡ್ಲಿ? ಈಗೇನ್ ಮಾಡ್ಲಿ? ಒಂಬ ಗೊಂದಲ ಕಾಡುತ್ತಿದೆ. ಏನಾದರೂ ಮಾಡಲೇಬೇಕೆ? ಎಂಬ ಅನುಮಾನ ಎದೆಯಲ್ಲಿ ಕೈ ಹಾಕಿ ಎಳೆದಾಡುತ್ತಿದೆ......... ಎಷ್ಟಂದ್ರೂ, ತಾನೇ ಬಸಿರಾಗಿ, ಹೆತ್ತು ಹಾಲುಣಿಸಿ ಬೆಳೆಸಿದ ಮಗ. ತಾನಿಷ್ಟೆಲ್ಲ ಕಷ್ಟ ಪಟ್ಟಿದ್ದಾದ್ರೂ ಮತ್ಯಾಕೆ? ತನ್ನ ಕಷ್ಟ ತನ್ನ ಮಕ್ಳಿಗೆ ಬರಬಾರ‍್ದು. ತನ್ನ ದುಃಖದ ಝಳ ತನ್ನ ಮಕ್ಳು ಮರಿಗೆ ತಾಗಬಾರ‍್ದು. ಅವ್ರು ಸುಖವಾಗಿರ‍್ಬೇಕು. ಅವ್ರು ಸೂಡಿದ ಹೂ ಬಾಡಬಾರ‍್ದು. ಅವ್ರು ಮಕ್ಳು ಮರಿ ಕಂಡು, ನಾಲ್ಕು ಕಾಲಗನಾತ್ನಾಗಿ ಬದುಕಿಕೊಂಡು ಹೋಗ್ಬೇಕು ಎಂದೇ ಅಲ್ಲವೆ- ಒಂದೇ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಒಂದೇ ಸೂರಿನಡಿಗೆ ಬದುಕಲು ಸಾಧ್ಯವಿಲ್ಲವೆಂದಾಗ, ಆತು ತಮ್ಮಾ, ನಿಮ್ಮ ನಿಮ್ಮ ಪಾಲು ನೀವು ತಗಂಡು ನಿಮ್ಮ ನಿಮ್ಮಷ್ಟಕ್ಕೇ ನೆರುಂಬ್ಳಾಗಿ ಇರಿ, ಎಂದು ಹಿಸೆ ಮಾಡಿ ಕೊಟ್ಟಿದ್ದು? ಅದರಲ್ಲೂ, ಕಟ್ಟಿದ ಮನೆಯನ್ನು ಅವರಿಬ್ಬರಿಗೆ ಬಿಟ್ಟುಕೊಟ್ಟು, ಮುದುಕ-ಮುದುಕಿ ಹಿತ್ತಿಲ ತುದಿಯ ಸೌದೆಕೊಟ್ಟಿಗೆಯಲ್ಲಿ ಬಿಡಾರ ಹೂಡಿದ್ದು?..... ಕಾಗೆ, ನಾಯಿ ಕಾಟ ತಾಳಲಾರದೆ, ಅವಳೇ ಒಂದೊಂದೇ ಬುಟ್ಟಿಯಾಗಿ ದರೆಯ ಮಣ್ಣು ತಂದು ಎದೆಯೆತ್ತರದ ಗೋಡೆ ಮೆತ್ತಿದ್ದು?

ಏನೇ ಆದ್ರೂ ಇವ್ರು ತನ್ನ ತಂದೆತಾಯಿ, ತಮಗಾಗಿ ಇವರು ಇಷ್ಟು ವರ್ಷ ಕಷ್ಟಪಟ್ಟಿದ್ದಾರೆ ಅನ್ನೋ ತನುಕರಣ ಸಾಯ್ಲಿ, ಹಣ್ಣಾದ ಕೂದಲಿಗೆ, ಕಳೆದ ಆಯುಷ್ಯಕ್ಕೆ ಕಿಮ್ಮತ್ತು ಕೊಡುವಷ್ಟೂ ಮನುಷ್ಯತ್ವ ಉಳಿದಿಲ್ಲವೆಂದಾದರೆ ಏನ್ ಮಾಡಿ ಏನು ಬಂದ್ಹಾಂಗಾತು? ಎಲ್ಲಾ ಹಣೆಬರಾ ಅಷ್ಟೆ.
ನಿನ್ನೆ ಆದದ್ದಿಷ್ಟು. ಒಂದು ತೆಂಗಿನ ಮರದ ಕಾಯಿ ಕೊಯ್ಸಿದ ನೆವ ತೆಗೆದು ತನ್ನ ಕಣ್ಣದುರಿಗೇ ದಿನೂಗೆ ದನಬಡಿತ ಬಡಿದುಬಿಟ್ಟ! “ಅಯ್ಯಯ್ಯೋ, ಬ್ಯಾಡ ಬಿಟ್ಬಿಡೋ, ನಿನ್ನ ದಮ್ಮಯ್ಯ ಹೊಡಿ ಬ್ಯಾಡ್ವೋ- ಏ ತಮ್ಮಾ ಬಿಟ್ಟಬಿಡೊ” ಎಂದು ತಾನು ಕೂಗಿಕೊಂಡರೂ ಕೇಳದೆ ಬಡಿಯುವುದೊಂದೇ ಮಾಡ್ತಾ ಇದ್ದಾಗ ತಾಯಿಯಾದವಳು ಸುಮ್ನೆ ನೋಡ್ತಾ ನಿಂತಿರಬೇಕಿತ್ತೆ? ಇಲ್ಲಾ, ಇನ್ನೂ ನಾಲ್ಕು ಹಾಕು ಎಂದು ಬಡಿಗೆ ತಂದು ಕೊಡಬೇಕಿತ್ತೆ? ಅದೇನೂ ಸಾಧ್ಯವಿಲ್ಲದೆ ಹೊಡೆದಾಟ ಬಿಡಿಸಲು ಹೋಗಿದ್ದಷ್ಟು ನೆನಪು. ಬೆನ್ನಿಗೆ ಏನೋ ಭಯಂಕರ ಪೆಟ್ಟು, ಬಂದು ಬಂದು ಮೂರು ಸಲ ಬಡಿದದ್ದೊಂದು ನೆನಪು. ಮುಂದೇನಾಯಿತೆಂದು ಗೊತ್ತೇ ಆಗದೆ “ಅಪ್ಪಯ್ಯೋ” ಎಂದು ಕೂಗುತ್ತ, ಜೀವದಾಸೆ ಬಿಟ್ಟು ಓಡಿ ಮುಂದಿನ ಪೆಟ್ಟಿನಿಂದ ತಪ್ಪಿಸಿ ಕೊಂಡಳು. ಆದರೆ ಅಲ್ಲೇ ನಿಂತಿದ್ದ ಗಂಡನಿಗೆ, ತಪ್ಪಿಸಿಕೊಳ್ಳಲು ಸಾಧ್ಯವಾಗದೇ, ಮಗ್ಗುಲ ಮುರಿ ಹೊಡೆತ ಬಿತ್ತು.
ಆಯಿತು. ಮೈಕೈ ನೋವಿಗೆ ಹತ್ತು ಗುಳಿಗೆ ತಿಂದರೆ ಗುಣವಾದೀತು. ಆದರೆ ಮನಸ್ಸಿಗೆ ಬಿದ್ದ ಪೆಟ್ಟು?
ಹೆತ್ತ ತಂದೆತಾಯಿಗೆ, ವಿನಾಕಾರಣ ಕಬ್ಬಿಣದ ಸರಳಿಂದ ಹೊಡೆದ ಅವನ ಕೈ ಕಾಲು ಮುರಿದು ಕುಂಡ್ರಿಸಬೇಕು ಎಂದು ಆ ಮನಸ್ಸು ಹಲ್ಲು ಕಡಿಯುತ್ತದೆ, ಬೇಡ. ಹಾಗನ್ನಬೇಡ, ಅನ್ನುತ್ತಲೇ ಅವ್ನ ಹೆಂಡ್ತಿ ರಂಡೆಯಾಗ್ಲಿ, ಅವ್ನ ಮಗನಿಗೆ ಹಾವು ಕಚ್ಚಲಿ, ಅವ್ನ ಮನೆ ಮಂಜಾಣಾಗ್ಲಿ... ಎಂದು ಶಪಿಸುತ್ತದೆ. ಇಲ್ಲ ಹಾಗಲ್ಲ, ಅವ್ನ ಪೊಲೀಸ್ರಿಗೆ ಹಿಡಿದುಕೊಟ್ಟು ನಾಲ್ಕು ಸಮಾ ಇಕ್ಕಿಸಬೇಕು ಎಂದು ಬುಸುಗುಟ್ಟುತ್ತಿದೆ..... ಥೂ ಥೂ ಸೊಡ್ಲೆ ಜನ್ಮವೆ! ಏನೇ ಮಾಡಿದ್ರೂ, ಮನೆ ಮಜ್ಜಿಗೆ ತಗೊಂಡ್ಹೋಗಿ ಬೈನೆ ಮರದಡಿಗೆ ಕುಂತು ಕುಡಿದ್ಹಾಂಗೆ ಅಲ್ವೇನೆ, ಮಳ್ಳು?...... ಎಂದು ಮರುಕ್ಷಣದಲ್ಲೇ ಅಳತೊಡಗುತ್ತದೆ...

“ಯಾರ್ರೀ ಸುಂಕದಕಟ್ಟೆ?” ಎಂಬ ಕಂಡಕ್ಟರನ ಕೂಗಿಗೆ ಎಚ್ಚೆತ್ತ ಪದ್ದು ಚಿಕ್ಕಿ, ದಡಬಡ ಕೈ ಚೀಲ ಹೊತ್ತು ಕೆಳಗಿಳಿದು, “ದಿನೂ ನೀನಿಲ್ಲೇ ನಿಂತ್ಕ. ನಾನು ಹಾಲು ಕೊಟ್ಟು ಬರ‍್ತೇನೆ” ಅಂದಾಗ ಹನ್ನೊಂದರ ಬಿಸಿಲು ಚುರುಗುಟ್ಟುತ್ತಿತ್ತು. ಎಂಟು ಮನೆಗಳ ಬಾಗಿಲು ತಟ್ಟಿ, ಲೀಟರು- ಅರ್ಧಲೀಟರು ಹಾಲು ಅಳೆದು, ಅವರಂದಿದ್ದಕ್ಕೆಲ್ಲ ‘ಹಾಹೂಂ’ ಅಂದು, ಮತ್ತೆ ಮಗನನ್ನು ಕೂಡಿಕೊಳ್ಳುವಾಗ ಇನ್ನರ್ಧ ತಾಸು ಸರಿದುಹೋಯಿತು. ಅಲ್ಲಿಂದ ಸೀದಾ ಹೋರಟು, ಎಂದೆಂದೂ ತುಳಿದಿರದ ಪೊಲೀಸಠಾಣೆಯ ಮೆಟ್ಟಿಲು ಹತ್ತುತ್ತಿರುವಾಗಲೇ, “ಥೂ ಥೂ, ಯಾಕ್ ಬಂದೆ ಇಲ್ಲಿ? ನಮ್ಮಂಥವ್ರು, ಬರೋ ಜಾಗವೇನೆ ಇದು?” ಎಂಬ ಹಿಂಜರಿಕೆ ಶುರುವಾಗಿ, ಮಗನ ಹಿಂದೆ ಹಿಂದೇ ಅಡಗುತ್ತ ಮುನ್ನಡೆದಳು.
ಪುಣ್ಯಕ್ಕೆ ಮಗನ ಪರಿಚಯದ ಪೊಲೀಸ್ ಅಲ್ಲೇ ಇದ್ದವನು, ಇವರ ಮುಖ ಕಂಡು ಏನು ಎಂಬಂತೆ ಹುಬ್ಬರಿಸಿದಾಗ, ಅವನ ಹತ್ತಿರ ನಿಂತು, ತಾಯಿ ಮಗ ಹೆದರುತ್ತಲೇ, ನಿನ್ನೆ ನಡೆದ ಪ್ರಸಂಗವನ್ನೆಲ್ಲ ವರದಿ ಒಪ್ಪಿಸಿ, ದೊಡ್ಡವನ ವಿರುದ್ಧ ದೂರು ಬರೆಸಿ, “ನೀವೇನೂ ಚಿಂತೆ ಮಾಡ್ಬೇಡಿ ಅಮ್ಮ, ನಾವೆಲ್ಲ ಬಂದೋಬಸ್ತ್ ಮಾಡ್ತೇವೆ” ಎಂಬ ಸಾಹೇಬರ ಭರವಸೆ ಯೊಂದಿಗೆ ಬಸ್‌ಸ್ಟಾಪಿಗೆ ಬಂದು ನಿಂತರೆ, ಬಸ್ಸಿನ ಸುಳಿವಿಲ್ಲ. ಹಾಗೇ ವಾರೆನೋಟದಿಂದ ಮಗನಮುಖ ನೋಡಿದರೆ, ಅಲ್ಲಿ ರಣರಣ ಬಿಸಿಲೊಂದರ ಹೊರತಾಗಿ, ಧಾರೆಗಟ್ಟಿದ ಬೆವರಿನ ಹೊರತಾಗಿ ಇನ್ನೇನ್ನೂ ಕಾಣುತ್ತಿಲ್ಲ. ನಿಜಕ್ಕೂ ಅವನ ಮನಸ್ಸಿನಲ್ಲೇನಿದೆ ಎಂಬುದೂ ಗೊತ್ತಾಗುತ್ತಿಲ್ಲ.
ಈ ಮಾಣಿ ಖರೇ ಅಂದ್ರೂ ಅಣ್ಣನ ಕಾಟದಿಂದಾಗಿ ಸೋತು ಹೋಗಿದ್ದಾನೆ. ಅಂವ, ಆ ಠೊಣಪ ಉರಿಯೋದು, ಉರಿಯೋದು ಅಂದ್ರೆ ಅದೆಷ್ಟು ಪರಿ? ಯಾವತ್ತು ಆ ಹೆಂಡ್ತಿ ಅನ್ನೋ ವೇಷ ಒಳಹೊಕ್ಕಿತೋ, ಆವತ್ತೇ ಶುರು, ತಾನು, ತನ್ನ ಹೆಂಡ್ತಿ-ನಂತ್ರ ಹುಟ್ಟಿದ ಮಗ ಮಾತ್ರ ದೇವಲೋಕ, ಉಳಿದ ವ್ರೆಲ್ಲಾ ಕಾಲಗಡಿಗಿನ ಕಸ. ಎಲ್ಲೆಲ್ಲಿಂದಲೋ ಬಂದು ಒಂದು ಗೂಡಿನೊಳ ಹೊಕ್ಕು, ಅಲ್ಲಿದ್ದಿದ್ದನ್ನೆಲ್ಲ ತನಗೆ, ತನಗೆ ಎಂದು ಕಚ್ಚಾಡಿ ಹಿಸಿದುಕೊಳ್ಳುವ ಸೊಸೆಯಂದಿರಿಗಿಂತ ಹೆಚ್ಚಾಗಿ, ಒಂದು ತಾಯಿಯ ಹೊಟ್ಟೆಯಲ್ಲಿ ಹುಟ್ಟಿ, ಒಂದೇ ಹಾಸಿಗೆ ಯಲ್ಲಿ ಮಲಗಿ ಎದ್ದ ಗಂಡು ಮಕ್ಕಳು ಬೆಳೆಯುತ್ತಾ ಬಂದಂತೆ ಪರಸ್ಪರ ವೈರಿಗಳಾಗಿಬಿಡುತ್ತಾರೆಂದರೆ- ಹೆತ್ತವರೂ ಕೂಡ ಅವರಿಗೆ ಶತ್ರುಗಳಾಗಿ ಕಾಣುತ್ತಾರೆಂದರೆ-ಇದ್ಯಾವ ವಿಚಿತ್ರ ವಪ್ಪಾ ಶಿವನೆ!

ಕುಕ್ಕರುಗಾಲಲ್ಲಿ ತುದೀ ಬಾಳೆಯೆದುರು ಕೂತು ಮಾತಿಲ್ಲದೇ ಹಾಕಿದ್ದು ತಿಂದು ಎದ್ದು ಹೋಗುವ ದಿನೂ ಎಲ್ಲಿ? ಅದು ವಾರೆ, ಇದು ಡೊಂಕು, ದೋಸೆ ಮೆತ್ತ, ಚಾ ತೆಳ್ಳ, ಎಂದೆಲ್ಲ ಗೌಜಿ ಮಾಡಿ ಹೆಂಗಸರ ಕಣ್ಣಲ್ಲಿ ನೀರಿಳಿಸುವ ಠೊಣಪ ಈ ಸದು ಎಲ್ಲಿ?..... ಹಾಗೆ ನೋಡಿದರೆ ಮೂರೂ ಮಕ್ಕಳನ್ನು ಒಂದೇ ರೀತಿ ಹೊತ್ತು ಹೆತ್ತು ಸಾಕಿದ್ದು, ಒಂದೇ ರೀತಿ ಅವರನ್ನು ಬೆನ್ನಿಗೆ ಕಟ್ಟಿಕೊಂಡು ತೊಟದ ಕಳೆ ಕಿತ್ತಿದ್ದು, ಒಂದೇ ರೀತಿ ಅನ್ನವಿದ್ದಾಗ ಅನ್ನ-ಇಲ್ಲದಿದ್ದಾಗ ಗಂಜಿ ತುತ್ತು ಮಾಡಿ ತಿನ್ನಿಸಿದ್ದು. ಒಂದೇ ರೀತಿ ಹರಿದ ಅಂದಿ, ಚಡ್ಡಿಗೆ ತೇಪೆ ಹಚ್ಚಿ ತೊಡಿಸಿದ್ದು. ಒಂದೊಂದು ಬಾಳೆಹಣ್ಣಿಗಾಗಿ ಆಸೆಗಣ್ಣು ಹೊತ್ತು ನೆರೆಮನೆಯೆದುರು ಮಾತಿಲ್ಲದೆ ನಿಂತ ಮೂರು ಮಕ್ಕಳನ್ನು ಕರೆದು, ಮೂವರಿಗೂ ಬೆನ್ನುಮುರಿ ಬಡಿದದ್ದು...... ಇಲ್ಲ, ಯಾವುದರಲ್ಲೂ ಎಳ್ಳುಕಾಳಿನಷ್ಟು ಫರಕು ಇಲ್ಲವೇ ಇಲ್ಲ. ಆದರೂ ಅಕ್ಕಾದ ಮಗ-ಆಗದ ಮಗ ಅಂದರೆ.....
ಉರಿಬಿಸಿಲ ಸೀಳುತ್ತ ಬಂದ ಬಸ್ಸಿನ ಶಬ್ದಕ್ಕೆ ಈ ಲೋಕಕ್ಕಿ ಳಿದ ಪದ್ದು ಚಿಕ್ಕಿ, ಪಕ್ಕಕ್ಕೆ ತಿರುಗಿದರೆ ಮಗ ಇಲ್ಲ. ಅವನಾಗಲೇ ಬಸ್ಸಿಗೆ ಕೈ ಮಾಡಿ ನಿಂತಿದ್ದಾನೆ. ನೋಡುತ್ತಿದ್ದಂತೆಯೇ ಬಸ್ಸು ಬಂದು ನಿಂತು, ಇವರಿಬ್ಬರೂ ರಶ್ಶಿನಲ್ಲಿ ಒಳನುಗ್ಗಿ, ಅಂತೂ ಇಂತೂ ಮನೆಯ ಹತ್ತಿರದ ತಂಗುಮನೆಯೆದುರು ಇಳಿದಾಗ ಸೂರ‍್ಯ ನೆತ್ತಿಯಿಂದ ಕೆಳಗಿಳಿಯುತ್ತಿದ್ದ. “ತಮ್ಮಾ, ಘಂಟೆ ಎಷ್ಟಾತೋ?” ಅಂದರೆ “ಒಂದು”ಅಂದ ತಣ್ಣಗೆ. ಕೇಳಿದ ಚಿಕ್ಕಿ ಮತ್ತಷ್ಟು ತಣ್ಣಗಾಗಿಬಿಟ್ಟಳು. ಇನ್ನು ಮನೆಗೆ ಹೋಗಿ ಒಲೆ ಹೊತ್ತಿಸಿ, ಅನ್ನಕ್ಕಿಟ್ಟು- ಮೇಲಿಂದ ಸುರಿದುಕೊಳ್ಳಲು ಏನೋ ಒಂದು ಸಾರು ಮಾಡಿ-ಉಣ್ಣುವ ಹೊತ್ತಿಗೆ ಹೊತ್ತು ಸೂರಿಳಿದಿರುತ್ತದೆ. ಸಾಯ್ಲಿ, ಇವತ್ತು ಒಂದಷ್ಟು ಅವಲಕ್ಕಿ ನೆನೆಸಿಕೊಂಡು ತಿಂದ್ರಾಯ್ತು ಅಂದುಕೊಳ್ಳುವಾಗ, ಖಾಲಿಯಾದ ಅವಲಕ್ಕಿ ಡಬ್ಬದ ನೆನಪಾಗಿ ಮತ್ತಷ್ಟು ಸಿಟ್ಟು ಬಂತು. ವೈಶಾಖದ ರಣ ಬಿಸಿಲು, ಕರಕರ ಕೆರೆಯುವ ಖಾಲಿಹೊಟ್ಟೆ, ಇನ್ನೊಂದು ಹೆಜ್ಜೆಯನ್ನು ಎತ್ತಿಡಲಾರನೆಂಬಷ್ಟು ಸುಸ್ತು-ಮೇಲಿಂದ ಮನೆಗೆ ಹೋಗಿ ಅನ್ನ ಬೇಯಿಸಿ ತಿನ್ನಬೇಕಾಗಿರುವ ಸಂದರ್ಭ ....... ಅವಳ ಮೈ ಮುಖವೆಲ್ಲ ಬೆವರಿ ಬೆವರಿ ಒಂದೇ ಧಾರೆಯಾಗಿ, ಜೊತೆಗೆ ಕಣ್ಣೀರೂ ಸೇರಿ ಹರಿದು, ಹರಿದು ನೆಲ ಮುಟ್ಟಿತು.

ಹಾಗೆ ನೆಲಕ್ಕಿಳಿದ ಕಸುವನ್ನೆಲ್ಲ ಒಟ್ಟು ಗೂಡಿಸಿ, ಹೇಗೊ ಮೇಲೆತ್ತಿ, ಒಲೆಹೊತ್ತಿಸಿ, ಅನ್ನ ಬೇಯಿಸಿ, ಮೇಲಿಂದ ಒಂದು ಟೊಮಟೊ ಸಾರು ಕುದಿಸಿ, ಬೆಳಗಿನ ಎಂಜಲು ಬಾಳೆಯ ಪಕ್ಕದಲ್ಲೇ ಈಗ ಊಟದ ಬಾಳೆಯನ್ನು ಹಾಕಿಕೊಂಡು ಮೂವರೂ ಉಂಡು ಮೇಲೇಳುವಾಗ ಮೂರು ಘಂಟೆ.
ಇಲ್ಲ, ಇನ್ನು ಏನೇನೂ ಸಾಧ್ಯವಿಲ್ಲ ಅಂದುಕೊಳ್ಳುತ್ತಲೇ ಬಾಳೆ ಒಗೆದು, ಎಂಜಲು ಸಾರಿಸಿ, ಪಾತ್ರೆಯನ್ನೆಲ್ಲ ಬಚ್ಚಲಲ್ಲಿ ಒಟ್ಟಿ, ಒಲೆಯ ಬಿಸಿಯಿಂದ ಸರಿದು, ಬರಿ ನೆಲದಲ್ಲೇ ಬಿದ್ದುಕೊಂಡ ಚಿಕ್ಕಿಗೆ, ಈ ಬದಿಯ ಖಬರಿಲ್ಲದ ನಿದ್ದೆ. ಈ ನೆಲದ ಜಗಳ ರಂಪಗಳೆಲ್ಲವನ್ನೂ ಸುಳ್ಳಾಗಿಸಿಬಿಟ್ಟ ನಿದ್ದೆ. ಪದ್ದು ಚಿಕ್ಕಿ ಅಂದರೆ ಕೇವಲ ಉಸಿರಾಟ ಮಾತ್ರವಾಗಿಬಿಟ್ಟ ನಿದ್ದೆ. ಎಷ್ಟು ಹೊತ್ತಾಯಿತೋ....
ಅಂಥಾ ಘನ ಘೋರ ನಿದ್ರೆಯಲ್ಲೂ, ಎಲ್ಲೋ ಯಾರೋ ಅಳುವ ಸದ್ದು. ಯಾರೋ ಯಾರಿಗೋ ಬೈದ-ಬಡಿದ ಸದ್ದು. ಯಾವುದೋ ಗಾಡಿಯ “ಭರ್ರೋ” ಆವಾಜು. ಫಕ್ಕನೆ ಕಣ್ಣುಬಿಟ್ಟ ಚಿಕ್ಕಿ. ಬಡಕ್ಕನೆ ಮೇಲೆದ್ದು ಅರೆನಿದ್ರೆಯಲ್ಲೇ ಬಾಗಿಲಲ್ಲಿಣುಕಿದಳು. ಹೌದು, ಸದಾನಂದ! ಅಂಗಳದೆದುರು ಪೋಲೀಸ್ ಜೀಪು ನಿಂತಿದೆ, ಇಬ್ಬರು ಪೇದೆಗಳು ಅವನ ಕೈ ಹಿಡಿದೆಳೆದು ಜೀಪಿಗೆ ತುಂಬುತ್ತಿದ್ದಾರೆ, ಅವನ ಹೆಂಡತಿ, ಮಗ ಇಬ್ಬರೂ, “ಅಯ್ಯಯ್ಯೋ- ಅಯ್ಯಯ್ಯೋ” ಕೂಗುತ್ತಿ ದ್ದಾರೆ,...... ಆಹ್! ಹೆಂಗಾತೋ ಭೋಸುಡಿ? ಹೆಂಗಾತೂ ಅಂದೆ, ಹೆತ್ತ ಅಪ್ಪ ಅಬ್ಬೆಗೇ ಬಡಿದವ್ರು ಯಾವತ್ತೂ ಉದ್ಧಾರಾಗೋದಿಲ್ಲ ಅಂದೆ, ನೀನೇನು ಮಹಾ ಮೇಲಿಂದ ಇಳಿದುಬಂದವನೇನೋ ಮನಸಿಗೆ ಕಂಡ್ಹಾಗೆ ಮೆರಿಲಿಕ್ಕೆ? ಕನಿಷ್ಠ ಹಿರಿಯ ಕಿರಿಯ ಅನ್ನೋದಾದ್ರೂ ಬೇಡವೇನೋ ಕುನ್ನಿ?..... ಹೋಗು, ಹೋಗು ಅವ್ರ ಕೈಲಿ ಸಮಾಲತ್ತೆ ತಿನ್ನು. ಕೊಬ್ಬೆಲ್ಲಾ ಕರಗಲಿ.... ಹಂ, ಮಾಡಿದಂವ ಉಣತಾ ಮನೆಯಂಥ ಕಡುಬ ಸರೀಯಾತು ತಗ.... ಅವಳು ಹಿಂತಿರುಗಿದರೂ, ಯಾಕೊ ಮನಸ್ಸು ತಿರುಗಲೊಲ್ಲದು. ನಾಲಿಗೆ ಎಷ್ಟೇ ಬೈದುಕೊಂಡರೂ, ಹೊಟ್ಟೆಯ ಒಳಾ ಒಳಗಿನ ಯಾವುದೋ ದನಿ, ‘ಅಯ್ಯೋ-ಅಯ್ಯೋ’ ಮಾಡುವುದನ್ನು ಬಿಡಲೊಲ್ಲದು.

ಅದನ್ನೆಲ್ಲ ಅಲ್ಲಲ್ಲಿಗೇ ಬಿಟ್ಟು ಚಿಕ್ಕಿ, ತನ್ನ ಹ್ವಾರ‍್ಯಕ್ಕೆ ಹೊರಡು ವಾಗ, ಪಕ್ಕದಲ್ಲೇ ನಿಂತು ಆ ಮನೆಯತ್ತಲೇ ನೋಡುತ್ತಿದ್ದ ದಿನೂ ಮತ್ತು ಅವನಪ್ಪನನ್ನು ಕಂಡು ಏನೋ ಕಸಿವಿಸಿ. ಏನೋ ತಳಮಳ. ಅದರಲ್ಲೂ ಅಪ್ಪನ ಕಣ್ಣಲ್ಲಿ, ‘ಆತ? ನಿಂಗೊಳ್ಳೇ ಸಂತೃಪ್ತಿ ಆತ? ಹೋಗು, ಹೊಟ್ಟೆ ತುಂಬಾ ಹಾಲು ಕುಡಿ’ ಅನ್ನುವ ಭಾವ ಜಿನುಗುತ್ತಿರುವುದನ್ನು ಕಂಡು ಅಲ್ಲಿ ನಿಲ್ಲಲಾಗದೇ ಒಳ ನಡೆದುಬಿಟ್ಟಳು.
ದಿನದಂತೆ ಸಂಜೆಯಾಯಿತು. ದನಕರುಗಳಿಗೆ ಹುಲ್ಲು, ಅಕ್ಕಚ್ಚು ಹಾಕಿ, ಹಾಲು ಕರೆದು, ಕಾಯಿಸಿ, ಹೆಪ್ಪು ಹಾಕುವು ದರೊಂದಿಗೆ -ಒಂದು ಅನ್ನ ಬೇಯಿಸಿ ಪಳದ್ಯ ಕುದಿಸುವದ ರೊಂದಿಗೆ, ಮಾತಿಲ್ಲದೆ ಮೂವರೂ ತಲೆಬಗ್ಗಿಸಿ ಉಣ್ಣುವದ ರೊಂದಿಗೆ ರಾತ್ರಿಯಾಯಿತು. ಎಂಜಲು ಮುಸುರೆ ಮಾಡಿ ಮುಗಿಸಿ, ಹಾಸಿಗೆ ಬಿಚ್ಚುವಾಗ ಅವಳು, ಯಾಕೆಂದು ಗೊತ್ತಿಲ್ಲದೆ ಅಂಗಳಕ್ಕೆ ಹೋದರೆ ಯಾರದೋ ಬೈಕಿನಲ್ಲಿ ಸದೂನ ಹೆಂಡತಿ ಮಗನನ್ನು ಮುಂದಿಟ್ಟುಕೊಂಡು ಹೊರಟಿದ್ದು ಕಂಡು, ಈ ಅಪರಾತ್ರಿಯಲ್ಲಿ ಎಲ್ಲಿಗಪ್ಪಾ ಎಂಬ ಕುತೂಹಲದೊಂದಿಗೆ, ಅವರ‍್ಯಾರೂ ಇನ್ನೂ ಉಂಡಿರಲಿಕ್ಕಿಲ್ಲವೆಂಬ ವಾಸ್ತವ ಫಕ್ಕನೆ ನೆನಪಾಗಿ ಎದೆ ಝಲ್ಲೆಂದಿತು........ ಅರೆ, ನಂದೇನು ತಪ್ಪು? ಅಂವ ಮಾಡಿದ್ದು ಅಂಥಾ ಕೆಲ್ಸ. ಮಗ ಆಗ್ಲಿ ವೊಮ್ಮಗ ಆಗ್ಲಿ ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗೋದೆ ಸೈ. ನೋಡ್ಲಿ, ಅಂವಂಗೂ ಹೊಡ್ತದ ರುಚಿ ಗೊತ್ತಾಗ್ಲಿ ಹಂ, ಎಂದು ಮತ್ತೊಮ್ಮೆ ಅವಡುಗಚ್ಚಿ, ಆ ಸೆಕೆಯಲ್ಲೂ ಚಾದರ ಎಳೆದು ಮುಖ ಮುಚ್ಚಿಕೊಂಡಳು.
ಆದರೆ ಮುಸುಕಿನೊಳಗಿನ ಎವೆಗಳು ಕ್ಷಣ ಮಾತ್ರಕ್ಕೂ ಮುಚ್ಚದೆ, ಆಚೀಚೆ ಹೊರಳುತ್ತ, ಒಮ್ಮೆ ಧಡಕ್ಕನೆ ಎದ್ದು ಕೂತು ಮತ್ತೆ ಮಲಗಿ ಹುಶ್‌ಗರೆಯುತ್ತ, ಶಿವ್ ಶಿವಾ! ಇದೇನಾಗಿ ಹೋತು? ಏನ್ಮಾಡಿ ಬಿಟ್ಟೆ? ತನ್ನಿಂದ ತಪ್ಪಾಗಿಹೋಯಿತೋ? ಅಥವಾ ಅವನ ತಪ್ಪಿಗೆ ಸರೀ ಶಿಕ್ಷೆಯಾಯಿತೋ?....... ಪೋಲೀಸರೆಂದರೆ ವೊದಲೇ ಯಮನ ಮನುಷ್ಯರು. ಸುಟ್ಟ ಪೋರನಿಗೆ ಕುಡ್ತೆ ನೀರಾದರೂ ಕೊಟ್ಟರೋ ಇಲ್ಲವೋ?........ ಅದೆಷ್ಟು ಬಡಿದರೋ..... ಹೊಡೆದರೊ.... ಕೈಕಾಲು ಮುರಿದು ಹಾಕಿದರೋ...... ಒಂದು, ಎರಡಕ್ಕೂ ಬಿಟ್ಟರೋ ಇಲ್ಲವೋ?...... ಒಳಬಾಯಲ್ಲೇ ಹಲುಬಿ ಹಲುಬಿ, ಪಕ್ಕದ ಹಾಸಿಗೆಯಲ್ಲಿ ಹೊರಳಾಡುತ್ತಿದ್ದ ಗಂಡನ ಮೌನದ ಬಗ್ಗೆ ಅಲ್ಲೇ ಸಿಟ್ಟೇರಿ, ಗೊರಕೆ ಹೊಡೆಯುತ್ತಿರುವ ದಿನೂ ಬಗ್ಗೆ ಮತ್ತಷ್ಟು ಕೆಂಡಕಾರಿ, ಯಾವಾಗ ಕಣ್ಣು ಮುಚ್ಚಿತೋ......ಬಿಟ್ಟಾಗ ಬಿಸಿಲ ಕುಡಿ ಕಣ್ಣಿರಿಯುತ್ತಿತ್ತು. ಗಡ ಬಡಿಸಿ ಎದ್ದು ವಾಚು ನೋಡಿದರೆ ಆರೂವರೆ!

ದೇವ್ರೆ ದೇವ್ರೆ, ಅನ್ನುತ್ತ, ಕಸಬರಿಗೆ ಹಿಡಿದ ಚಿಕ್ಕಿ, ಬಾಗಿಲು ಸಾರಿಸಿ, ಬಗ್ಗಿ ರಂಗೋಲಿ ಇಡುವಾಗ, ಎಡಬದಿಗೆ ನಿಂತ ಸರಳೆ ಅಂದರೆ ಸದೂನ ಹೆಂಡತಿಯನ್ನು ಕಂಡು ಬೆಚ್ಚಿ ನೆಟ್ಟಗಾದಳು. ಸರಳೆಯ ಮುಖವೆಂದರೆ ಕೆಂಪು ದಾಸವಾಳದ ಹೂವಾಗಿಬಿಟ್ಟದೆ. ಕಣ್ಣು, ಮೂಗಿಂದ ಗಂಗೆ ಯಮುನೆಯರು ಹರಿಯುತ್ತಿದ್ದಾರೆ. ಏನೋ ಹೇಳಲು ತೆರೆದ ತುಟಿ ಥರಗುಟ್ಟುತ್ತಿದೆ.
ಥರಗುಟ್ಟಲಿ ನನಗೇನಂತೆ, ಕಳ್ಳ ಮೂಳಿನ್ನ ತಂದು, ಈ ಅತ್ತೆ ಅಂದ್ರೆ ಶುದ್ಧ ಕತ್ತೆ ಅಂತ ತಿಳ್ದಿದ್ದಾಳೆ, ಬೇಕಾದ್ದು ಹಾಳ್ ಬಡ ಕೊಂಡು ಹೋಗ್ಲಿ..... ಸರ್ರನೆ ತಿರುಗಿ ಒಳಹೊರಟರೆ, ಯಕೋ ಕಾಲು ಮೇಲೇಳಲೇ ಇಲ್ಲ. ಸೊಸೆಯ ಕಣ್ಣಿಂದ ಕಣ್ಣು ಕೀಳಲು ಸಾಧ್ಯವಾಗಲೂ ಇಲ್ಲ. ಒಂದು ಕ್ಷಣ-ಒಂದೇ ಒಂದು ಕ್ಷಣದ ಪರಸ್ಪರ ಕಣ್ಣ ತಿವಿತದಲ್ಲಿ, ಅತ್ತೆ ಸೊಸೆಯರ ದೃಷ್ಟಿ ಯುದ್ಧದಲ್ಲಿ, ಯುಗಾಂತರಗಳ ಹೆಣ್ಣುಗಳ ಪಾಡು ಹಾದು ಹೋಯಿತೋ- ಮನುಷ್ಯನೊಳಗಿನ ಸ್ವರ್ಗ ಸರಕಗಳು ಪರಸ್ಪರ qs ಕೊಟ್ಟು ಉರುಳಿಬಿದ್ದವೋ...... ಯಾರಿಗೆ ಗೊತ್ತು? ಸೊಸೆ ಬಾಯಿಗೆ ಸೆರಗು ಒತ್ತಿ ಹಿಡಿದು, ಥಟ್ಟನೆ ಹಿಂತಿರುಗಿ ನಡೆದುಬಿಟ್ಟಾಗ, ಚಿಕ್ಕಿ ಕಂಗಾಲು.
‘ಕತೆ ಏನಾಗಿದೆ ಹಾಗಿದ್ರೆ? ಅವಳು ಯಾಕೆ ಇಲ್ಲಿ ಬಂದು, ಚಣದ ಮಟ್ಟಿಗೆ ಕಂಬದ್ಹಾಂಗೆ ನಿಂತುಕೊಂಡಿದ್ದು? ಯಾಕೆ ಏನೂ ಹೇಳದೆ ಹಾಗೆ ನಡೆದುಬಿಟ್ಟಿದ್ದು?..... ವೊದಲೇ ಅತ್ತೆ ಸೊಸೆ ಸಂಬಂಧ, ಈಗಂತೂ ಬ್ರಹ್ಮಾಂಡದಂಥ ಸಿಟ್ಟೂ ತುಂಬಿ ಟ್ಟುಕೊಂಡು ತನ್ನ ಮೇಲೆ ಕಾರಲಿಕ್ಕಾಗಿಯೇ ಕಾಯುತ್ತಿರ ಬಹುದು..... ಅವನನ್ನು ಬಿಟ್ಟ ಲಕ್ಷಣವಂತೂ ಇಲ್ಲ. ಅದೆಷ್ಟು ಹಿಂಸೆಕೊಟ್ಟರೋ, ಯಾವ್ಯಾವ ಪರಿ ನೋಯಿಸಿದರೋ, ಕೋದಂಡ ಹಾಕಿ ನೇತಾಡಿಸಿದರೋ...... ಶಿವನೇ! ಎಂಥಾ ಸಗಣಿ ತನ್ನೋ ಕೆಲ್ಸ ಮಾಡಿಬಿಟ್ಟೆ. ಈಗೇನ್ ಮಾಡ್ಲಪ್ಪಾ ದೇವ್ರೆ?.....’ ಅಲವತ್ತುಕೊಂಡು ಚಿಕ್ಕಿ ಗಡಿಬಿಡಿಯಿಂದ ಕೈಕಾಲು ಓಡಿಸತೊಡಗಿದಳು.

ಗಂಡಸರಿಬ್ಬರಿಗೂ ಏನೂ ಹೇಳದೆ, ದಿನದಂತೆ ಹಾಲಿನ ಕ್ಯಾನುಗಳನ್ನು ಚೀಲಕ್ಕೆ ತುಂಬಿಕೊಂಡು ಬಸ್ಸೇರಿದವಳು, ಪೇಟೆಯಲ್ಲಿಳಿದು ಎಲ್ಲಾ ಮನೆಗೂ ಹಾಲು ಅಳೆದು, ಸೀದಾ ನಿನ್ನೆ ಹೋದ ಪೋಲೀಸ್‌ಠಾಣೆಯ ಅಂಗಳ ತುಳಿಯುತ್ತಿದ್ದಾಗ, ಹೆಜ್ಜೆ ಹಿಂದೆ ಹಿಂದೇ ಬೀಳತ್ತಿದೆ. ಆದರೂ ಹೇಗೋ ಮೆಟ್ಟಿಲೇ ರಿದಾಗ, ನಿನ್ನೆ ಕಂಡ ಸಾಹೇಬರೇ, “ಬನ್ನಿ ಅಮ್ಮಾ” ಅಂದರು. ಅವರ ಖುರ್ಚಿಯ ಹತ್ತಿರ ಮಾತಿಲ್ಲದೆ ಒಂದು ಕ್ಷಣ ನಿಂತಂತೆ, ಅವರೇ, “ಸರೀ ಬುದ್ಧಿ ಕಲ್ಸಿದೇವೆ, ಇನ್ಯಾವತ್ತೂ ಆತ ನಿಮ್ಮ ಸುದ್ದಿಗೆ ಬರೋದಿಲ್ಲ ಬಿಡಿ” ಅಂದಾಗ ಮೆಲ್ಲಗೆ “ನಾನವನ ನೋಡಬಹುದಾ?” ಅಂದು, ತಟ್ಟನೆ ನಾಲಿಗೆ ಕಚ್ಚಿಕೊಂಡಳು.
“ಓಯಸ್, ಏ ಗುರಪಣ್ಣ ಇವ್ರನ್ನು ಒಳಗೆ ಕರ‍್ಕೊಂಡ್ಹೋಗು” ಅನ್ನುತ್ತಿದ್ದಂತೆ ಬಂದ ಗುರುತಿನ ಪೋಲೀಸು, ಒಂಥರಾ ಮುಖ ಮಾಡಿ, “ಬನ್ನಿ” ಅಂದ.
ಹೋಗಿ ನೋಡಿದರೆ, ಕೊಟ್ಟಿಗೆಯಂಥ ಕೋಣೆಯಲ್ಲಿ ಅವನೇ-ತನ್ನ ಚೊಚ್ಚಿಲು ಕಂದನೇ - ‘ಹತ್ತು ಸಾವಿರವಾಗು, ಕಿತ್ತಳೆ ವನವಾಗು, ಬಪ್ಪವರಿಗೆ ತವರು ಮನೆಯಾಗು’ ಎಂದು ದಿನಂಪ್ರತಿ ಹರಸಿ ಬೆಳೆಸಿದವಳಿಗೆ ಕೈಯೆತ್ತಿ ಬಡಿದ ಆ ಬಹದ್ದೂರನೇ, ದೊಣಕಲಿಗೆ ಕಟ್ಟಿದ ಎಮ್ಮೆಯಂತೆ ಕುಳಿತು ಕೊಂಡಿದ್ದಾನೆ..... ಹೆಜ್ಜೆ ಸದ್ದಿಗೆ ತಿರುಗಿದವನು, “ಬಂದ್ಯ? ಇಲ್ಲಿಗೂ ಬಂದುಬಿಟ್ಯ ಚಂದ ನೋಡ್ಲಿಕ್ಕೆ? ನೋಡು, ನೋಡಿ ಹೊಟ್ಟೆ ತುಂಬಾ ಹಾಲು ಹುಯ್ಕೋ ಹೋಗು. ಆದ್ರೆ ನಾ ನಿನ್ನ ಸುಮ್ನೆ ಬಿಡೋದಿಲ್ಲ. ವೊದ್ಲು ನಾ ಹೊರಬಂದುಕೊಳ್ತೇನೆ. ನಂತ್ರ ಏನ್ಮಾಡ್ತೇನೆ ಅಂತ ನಂಗೇ ಗೊತ್ತಿಲ್ಲ. ನೆನಪಿಡ್ಕ.......” ಕೂಗಿ ಕಣ್ಣು ಕೆಕ್ಕರಿಸಿದ ಅಬ್ಬರಕ್ಕೆ ಅವಳು ತಣ್ಣಗಾದಳು.

.........ಅವನ ಬಸಿರಿನಲ್ಲಿ, ಮಿಂದ ಒಂದೂವರೆ ತಿಂಗಳಿಗೇ ಅದೇನೋ ಆನಂದ, ಸಂಭ್ರಮ, ವಾಂತಿ ತಲೆ ತಿರುಗುವಿಕೆಯ ಸಂಕಟದಲ್ಲೂ ಅದೇನೊ ಸಂತೋಷ. ಆಮೇಲೆ, ವೊದಲ ಬಾರಿಗೆ ಹೊಟ್ಟೆಯೊಳಗೊಂದು ಜೀವ ಮಿಸುಕಾಡಿ, ಒದ್ದಾಗ ಅದೇನೋ ವಿಚಿತ್ರ ಖುಶಿ. ಓಡಿಯಾಡೋ ಹುಡುಗನ ಹಾವಳಿಗೆ ಬೇಸತ್ತು ಇವಳು ಒಂದು ಹೊಡೆದರೆ, ಅವನು ಹತ್ತು ಹೊಡೆಯುವವನು, ಇವಳು ಒಂದು ಬೈದರೆ ಅವನು ನೂರು ಬೈಯುವವನು. ಆಗಲೂ ಒಂಥರಾ ಆನಂದವೇ. ಶಾಲೆ ಯಲ್ಲೂ ಅಷ್ಟೇ. ಕ್ಲಾಸಿನ ಹುಡುಗರೊಂದಿಗೆ ಗುದ್ದಾಡಿ ವೊಣಕಾಲೆಲ್ಲ ಗಾಯ ಮಾಡಿಕೊಂಡು ಬಂದಾಗ, ಬೈಯುತ್ತಲೇ ಔಷಧ ಹಚ್ಚಿದರೂ ಒಳಗೊಳಗೆ ಮಗನ ಸಾಹಸಕ್ಕಾಗಿ ಹೆಮ್ಮೆಯಿರುತ್ತಿತ್ತು. ಕಲ್ಲರೆಯ ಮೇಲೆ ಬಿಟ್ಟರೂ ಮಗ ಜೈಸಿಕೊಂಡು ಹೋದಾನು ಎಂಬ ಗರ್ವವಿತ್ತು. ಆದರೀಗ?......
ತಣ್ಣಗೆ ಮಗನೆದುರಿಂದ ಹೊರಡುವಾಗ, ಕರುಳ ಬುಡದಿಂದ ಸಣ್ಣದಾಗಿ ಏನೋ ಒಂದು ಮೇಲೆದ್ದು, ಇಡೀ ಜೀವವನ್ನೇ ಕಟ್ಟಿ ಎಳೆಯುತ್ತಿರುವ ಭಾಸ, ಇಲ್ಲ ನಾನಿಲ್ಲಿಂದ ಹೋಗೋದಿಲ್ಲ, ಹೋಗಲಾರೆ ಎಂದು ಯಾವುದೋ ದನಿ ಪಿಸುಗುಟ್ಟಿದ ಭಾಸ.
ಮತ್ತೆ ಸಾಹೇಬರ ಮುಂದೆ ಬಂದು ನಿಂತಾಗ, ಈ ಮುದುಕೀದು ಮತ್ತೇನು ರಿಪಿರಿಪಿಯಪ್ಪಾ! ಎಂದು ಅವರಿಗೆ ಸಣ್ಣದಾಗಿ ಸಿಟ್ಟೇರಿ, ಕಣ್ಣೆತ್ತಿ ನೋಡಿದಾಗ ಅವಳು ಹೆದರುತ್ತಲೇ, “ಸಾಹೇಬ್ರೆ” ಅಂದಳು.
“ಏನಮ್ಮಾ? ಮಗನ ನೋಡ್ಕೊಂಡು ಬಂದ್ಯಲ್ಲ, ಮತ್ತೇನು?” ಅಂದರು ಅಸಹನೆಯಿಂದ.
“ಉಹುಂ, ಮತ್ತೇನಿಲ್ಲ. ನಮ್ಮ ಸದೂನ ಇಲ್ಲಿಂದ ಬಿಟ್ಟುಬಿಡ್ಲಿಕ್ಕಾದೀತ ಅಂತ.....”
“ಛೆಛೆ, ಇದೊಳ್ಳೇ ಕತೆಯಾಯ್ತಲ್ಲ. ನಿನ್ನೆಯಷ್ಟೇ ಬಂದು, ಮಗ ಹಾಂಗ್ ಹೊಡೆದ-ಹೀಂಗ್ ಬಡಿದ ಅಂತೆಲ್ಲ ಕಂಪ್ಲೇಟು ಬರೆಸಿದವ್ರೂ ನೀವೇ, ಈಗ ಸುಮ್ಮನೆ ಬಿಟ್ಬಿಡಿ ಅನ್ನೋರೂ ನೀವೆ. ನಿಮಗೇನು ತಲೆ ಸರಿ ಇದ್ಯೋ ಇಲ್ವೋ.....? ಇಲ್ಲಿ ನಾವೇನು ಬಿಟ್ಟಿ ಕುಂತಿದೇವೇನು, ನೀವು ಕುಣಿಲಿದ್ಹಾಂಗೆ ಕುಣೀಲಿಕ್ಕೆ?..... ಅದೆಲ್ಲ ಆಗೋದಿಲ್ಲ. ನೀವು ಬರಕೊಟ್ಟ ದೂರಿನ ಮೇಲಿಂದ ಲಾಕಪ್ಪಿಗೆ ಹಾಕಿದೇವೆ. ಈಗ ಕಾಸು ಕೋರ್ಟಿಗೆ ಹೋಗಿದೆ. ಬೇಕಿದ್ರೆ ಅಲ್ಲೇ ಜಾಮೀನು ಕಟ್ಟಿ ಬಿಡಿಸ್ಕೊಳ್ಳಿ. ಈಗ ನಾವೇನೂ ಮಾಡೋಕಾಗೋದಿಲ್ಲ.”

“ಸ್ವಾಮಿ, ದಯವಿಟ್ಟು ಇವ್ನ ಬಿಟ್ಟುಬಿಡ್ರಿ, ನನ್ನ ಹೊಟ್ಯಲ್ಲಿ ಹುಟ್ಟಿದ ಮಗ ಹೀಂಗೆ ಪಂಜರದಲ್ಲಿ ಕೂತಿರೋದ ನೋಡ್ಲಾರೆ.... ದಯ ಮಾಡಿ ಬಿಟ್ಟುಬಿಡ್ರಿ......”
“ಹಾಗಾದ್ರೆ ಬನ್ನಿ, ಅಂವ ನಿಮ್ಮ ಕಾಲು ಹಿಡಿದು ತಪ್ಪಾಯ್ತು, ಇನ್ನಿಂಥಾ ಕೆಲ್ಸ ಮಾಡೋದಿಲ್ಲ ಅನ್ನಲಿ, ನೀವು ನಿಮ್ಮ ಕಂಪ್ಲೇಂಟ್ ವಾಪಸ್ ತಗೊಂಡ್ಬಿಡಿ, ಅಂದ್ರೆ ಇವ್ನ ಬಿಟ್ಟುಬಿಡ್ತೇವೆ,” ಎಂದು ಹೇಳುತ್ತಲೇ ಪಿ.ಸಿ.ಯಿಂದ ಮತ್ತೆ ಕೋಣೆ ಬಾಗಿಲು ತೆಗೆಸಿ.
“ಏಳೊ ಲೌಡಿಮಗನೆ, ಅಮ್ಮನ ಕಾಲು ಹಿಡಿದು ತಪ್ಪಾಯ್ತು ಅಂತ ಒಪ್ಪಿಕೊ,ಅಂದ್ರೆ ಸೀದಾ ಮನೆಗ್ಹೋಗಬಹುದು.....”ಅನ್ನುತ್ತ ಅವನ ಕೈ ಹಿಡಿದೆಳೆದು ತಾಯಿಯ ಕಾಲಿಗೆ ದೂಡಿದರು.

ಆತ ಬಿದ್ದಷ್ಟೇ ವೇಗವಾಗಿ ಜಿಗಿದೆದ್ದು ನಿಂತು, “ಇಲ್ಲ, ನಾ ಯಾರ ಕಾಲಿಗೂ ಬೀಳೋದಿಲ್ಲ. ಇವ್ಳು, ಇವ್ಳು ನನ್ನ ತಾಯಿಯಲ್ಲ, ಹೆಮ್ಮಾರಿ, ನಮ್ಮ ಮನೆಗೆ ಗಂಟುಬಿದ್ದ ಬ್ರಹ್ಮ ರಾಕ್ಷಸಿ, ನೀವು ನನ್ನ ಜನ್ಮ ಕೊದ್ರೂ ಸೈತ ನಾನಿವ್ಳ ಕಾಲಿಗೆ ಬೀಳೋದಿಲ್ಲ. ಇಲ್ಲ..... ಇಲ್ಲ....... ”ಕೂಗುತ್ತಲೇ ಆತ ಹೊರಗೋಡಲು ಪ್ರಯತ್ನಿಸಿದಾಗ, ಪಿ.ಸಿ.ಗಳಿಬ್ಬರೂ ಸೇರಿ ಅವನನ್ನು ಹಿಡಿದು ನಿಲ್ಲಿಸಿದರು.
“ಓಡಿ ಹೋಗ್ತೀಯೇನಲೇ ಭೋಸುಡಿಕೇ, ಹೋಗು ನೋಡೋಣ, ಮಾಡಿದ್ದು ಅಂಥಾ ಕೆಲಸ, ಮೇಲಿಂದ ಕೊಬ್ಬು ನೋಡು. ನಿನ್ನ ಕೊಬ್ಬಿಳಿಸೋದು ಹ್ಯಾಂಗೆ ಅಂತ ನಂಗೊತ್ತಿದೆ,...... ನಿನ್ನ ಸುಮ್ನೆ ಬಿಡೋದಿಲ್ಲ. ಹರಾಮ್ ಖೋರ್‌ನ್ನ ತಂದು.....”, ಸಾಹೇಬರು ಬೈಯುತ್ತಲೇ ಅವನ ಮುಸುಡಿಗೆ ಬೂಟುಗಾಲಿಂದ ಒದ್ದಾಗ, ಅವನು ‘ಅಯ್ಯೋ’ ಅನ್ನುತ್ತ ನೆಲಕ್ಕೆ ಬಿದ್ದ. ಪೆಟ್ಟು ಕಣ್ಣಿಗೆ ಬಿತ್ತೋ? ಮೂಗಿಗೋ? ತಲೆಬುಡ ಗೊತ್ತಾಗಲಿಲ್ಲ.

ಈಗ ಪದ್ದು ಚಿಕ್ಕಿ, ಮಾಳಬೆಕ್ಕಿನ ಹೆಜ್ಜೆ ಸದ್ದಿಗೆ ಹೆದರಿ, ಒಲೆ ಮೂಲೆಯಲ್ಲಿ, ಒದ್ದರೂ ಮ್ಯಾಂವ್ ಗುಟ್ಟದೆ ರಾಬಿ ಕೂತ ಬೆಕ್ಕಿನ ಮರಿ!....... ಸಾಹೇಬರ ಬೂಟುಗಾಲು ಒದ್ದಿದ್ದು ಮಗನನ್ನಲ್ಲ, ತನ್ನನ್ನು, ಅವರು ಅವಮಾನಿಸಿದ್ದೂ ಸದೂ ಎಂಬ ಧಾಂಡಿಗ ಗಂಡಸನ್ನಲ್ಲ- ತನ್ನ ಬಸಿರನ್ನು. ಆ ತಾಯ್ತನದ ಸಹನೆಯನ್ನು. ನಲವತ್ತು ವರ್ಷಗಳ ತನ್ನ ಸಂಸಾರವೆಂಬ ಒಂಟಿಗಾಲಿನ ತಪಸ್ಸನ್ನು...... ವೊದಲೇ ಬೆವರಿದ ಮೈ, ಈಗ ಧಾರೆಯಿಟ್ಟು, ಈವರೆಗೂ ಕಟ್ಟಿಕೊಂಡ ಗಂಗಾ ಪ್ರವಾಹ ಕಣ್ಣಿಂದಲೂ ಧುಮುಕಿಬಿಟ್ಟಿತು.
ಹಾಗೆ ಅಳುತ್ತಲೇ, “ನಿಮ್ಮ ದಮ್ಮಯ್ಯ ಸಾಹೆಬ್ರೆ, ಇವ್ನ ಬಿಟ್ಬಿಡಿ, ನಿಮಗೆ ಕೈ ಮುಗಿತೇನೆ, ದಯವಿಟ್ಟು ಬಿಟ್ಟುಬಿಡ್ರೀ.......” ಅನ್ನುತ್ತ ಅವರ ಎರಡೂ ಕಾಲು ಹಿಡಿದುಕೊಂಡು ಗೋಳಾಡಿದಾಗ, “ಹುಂ, ಆಯ್ತು ಬನ್ನಿ ಇಲ್ಲಿ” ಅಂದರು.
ತಮ್ಮ ಕ್ಯಾಬಿನ್ನಿಗೆ ಬಂದು, ಸರಸರ ನಾಲ್ಕು ವಾಕ್ಯ Uಚಿ, ಅವಳ ಸಹಿ ತೆಗೆದುಕೊಂಡು, “ಸರಿ ನಿಮ್ಮ ಮಗನ ಕರ‍್ಕೊಂಡು ಹೋಗಿ. ಆದ್ರೆ ಮತ್ತೆ ನಾಳೇನೇ, ಹಂಗಾಯ್ತು-ಹಿಂಗಾಯ್ತು ಅಂತ ಬರ‍್ಬೇಡಿ.” ಅಂದು ಪಿ.ಸಿ.ಗೆ ಸನ್ನೆ ಮಾಡಿದಾಗ, ಆತ ಲಾಕಪ್ಪಿನ ಕೀಲಿ ತೆಗೆದು, “ನಡಿಯೋ ಬೇವಾರ್ಸಿ, ಇನ್ನೆಂದಾದ್ರೂ ಇಂಥಾ ಕೆಲ್ಸ ಮಾಡಿದ್ರೆ ನಿನ್ನ ಗತಿ ಮುಗಿತ್ತೂಂತ ತಿಳಕೊ.” ಸಿಕ್ಕಿದ ಒಂದು ಅವಕಾಶ ಕೈ ಜಾರದಂತೆ ಸದೂನ ಮುಖಕ್ಕೆ ಉಗಿದು ಹೊರಕಳಿಸಿದ.

ನೆತ್ತಿ ಮೇಲಿನ ಸೂರ‍್ಯ ಸುರಿಸುತ್ತಿರುವ ಸುಡು ಸುಡು ಬಿಸಿಲಲ್ಲಿ, ನೆರಳಿನಂತೆ ತಾಯಿಯನ್ನು ಹಿಂಬಾಲಿಸಿದ ಮಗ ಬಸ್‌ಸ್ಟಾಪ್‌ನಲ್ಲಿ ನಿಂತಾಗಲೂ ಮಾತಾಡಲಿಲ್ಲ. ಮತ್ತೊಂದು ಗಳಿಗೆಗೆ ಬಂದ ಬಸ್ಸು ಏರಿ, ಇಳಿದು, ಮನೆಯ ಹಾದಿ ಹಿಡಿದಾಗಲೂ ಮಾತಾಡಲಿಲ್ಲ. ಆದರೆ ದಾರಿಯಲ್ಲಿದ್ದ ಹಲಸಿನ ಮರ ಮತ್ತು ಕಳ್ಳಿಗಿಡಗಳು ಪರಸ್ಪರ ಮಾತಾಡಿಕೊಂಡವು.
ಏನೆಂದು?
“ಇದೇಯ ಕಂಡ್ಯ. ಹೊತ್ತ- ಹೆತ್ತ ಸೌಭಾಗ್ಯ ಸಂಭ್ರಮ. ಹೆಣ್ತನದ ವಿಧಿ”, ಅಂದಿತು ಮರ.
“ಆದರೆ ಯಾಕೆ? ಯಾಕೆ ಹೊರೋದು ಹೆರೋದು-ನಂತ್ರ ಕೊರಗೋದು? ನೀನೂ ಸೈತ ಯಾಕಾಗಿ ಇಷ್ಟೆಲ್ಲಾ ಕಾಯಿ ಬಿಡಬೇಕು? ಯಾಕೆ ಮೈ ತುಂಬ ಮುಳ್ಳು ಹೊರಬೇಕು?”
“ಯಾಕಂದ್ರೆ ನನ್ನೊಳಾ ಒಳಗಿನ ಏನೋ ಒಂದು- ಇಡೀ ನನ್ನ ಸಾರ ಸರ‍್ವಸ್ವ ಅನ್ನು, ಅಥವಾ ಹೊಟ್ಟೆಯೊಳಗೆ ಕಟ್ಟಿಕೊಂಡ ನಂಜಿನ ವೊಟ್ಟೆ ಅಂತನ್ನು ಬೇಕಾದ್ರೆ, ಅದನ್ನು ಹೊರಹಾಕಿ ನಾನು ಹಗುರಾಗಬೇಕು. ಒಳಗೊಳಗೇ ಹಣ್ಣು ಮಾಡುವ ಗುದುಮುರಿಗೆಯಿಂದ ನನ್ನನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಈ ಸುಡುಗಾಡಿನ ತಾಯ್ತನ. ಅದಕ್ಕಾಗಿ ಈ ಪರ ಸಂಕಟ. ಅದಕ್ಕಾಗಿ ಜನ್ಮಕ್ಕಂಟಿದ ನೋವು.... ಅದೆಲ್ಲ ನಿಂಗೊತ್ತಾಗೋದಿಲ್ಲ ಬಿಡು”, ಅಂದಿತು ಬುಡದಿಂದ ತಲೆಯವರೆಗೂ ಸಣ್ಣ, ದೊಡ್ಡ ಕಾಯಿಗಳ ಸರಮಾಲೆಯನ್ನೆ ಹೊತ್ತು ನಿಂತ ಹಲಸು.
“ಇದ್ದೀತಪ್ಪಾ, ಅದು ನಂಗೊತ್ತಿಲ್ಲ.” ವ್ಯಂಗ್ಯವಾಗಿ ಹೇಳಿ ಸುಮ್ಮನಾಯಿತು, ಒಂದು ಹೂವನ್ನೂ ಅರಳಿಸದ ಕಳ್ಳಿ.
ಕಲ್ಲು ಮುಖದ ಮಗನೊಂದಿಗೆ-ಹಾಲಿನ ಕ್ಯಾನುಗಳೊಂದಿಗೆ, ಚಿಕ್ಕಿ ಮನೆಯ ಹಾದಿ ತುಳಿದಳು.

No comments:

Post a Comment